- Home
- Entertainment
- Cine World
- ಶಾರುಖ್ ಖಾನ್ ನಟನ ವೇಷದಲ್ಲಿರುವ ದೇಶದ್ರೋಹಿ- ಸಾಕ್ಷಿ ಸಹಿತ ತೆರೆದಿಟ್ಟ ಜಗದ್ಗುರು ರಾಮಭದ್ರಾಚಾರ್ಯ
ಶಾರುಖ್ ಖಾನ್ ನಟನ ವೇಷದಲ್ಲಿರುವ ದೇಶದ್ರೋಹಿ- ಸಾಕ್ಷಿ ಸಹಿತ ತೆರೆದಿಟ್ಟ ಜಗದ್ಗುರು ರಾಮಭದ್ರಾಚಾರ್ಯ
ಐಪಿಎಲ್ನಲ್ಲಿ ಬಾಂಗ್ಲಾದೇಶದ ಆಟಗಾರರನ್ನು ಖರೀದಿಸಿದ್ದಕ್ಕಾಗಿ ಕೆಕೆಆರ್ ಮಾಲೀಕ ಶಾರುಖ್ ಖಾನ್ ತೀವ್ರ ವಿವಾದಕ್ಕೆ ಸಿಲುಕಿದ್ದಾರೆ. ಜಗದ್ಗುರು ರಾಮಭದ್ರಾಚಾರ್ಯ ಸೇರಿದಂತೆ ಹಲವರು ಅವರನ್ನು ದೇಶದ್ರೋಹಿ ಎಂದು ಕರೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಖಾನ್ ತ್ರಯರು
ಯಾವುದಾದರೂ ಘಟನೆಗಳು ಸಂಭವಿಸಿದಾಗ ಸ್ಟಾರ್ ನಟರು ಮೊದಲು ಅದಕ್ಕೆ ರಿಯಾಕ್ಟ್ ಮಾಡುವುದು ಸಹಜ. ಆದರೆ, ಪಾಕಿಸ್ತಾನ, ಬಾಂಗ್ಲಾದೇಶದಂಥ ಮುಸ್ಲಿಂ ರಾಷ್ಟ್ರಗಳು ಭಯೋತ್ಪಾದನೆಯಲ್ಲಿ ತೊಡಗಿದರೂ, ಎಲ್ಲಿ ಅಲ್ಲಿಯ ಅಭಿಮಾನಿಗಳಿಗೆ ನೋವಾಗುತ್ತದೆಯೋ ಎನ್ನುವ ಕಾರಣಕ್ಕೆ ಬಾಲಿವುಡ್ನ ಖಾನ್ತ್ರಯ ಸೂಪರ್ಸ್ಟಾರ್ಗಳು ಬಾಯಿಮುಚ್ಚಿಕೊಂಡಿರುವ ಬಗ್ಗೆ ಇದಾಗಲೇ ಹಲವಾರು ಬಾರಿ ಜಾಲತಾಣಗಳಲ್ಲಿ ಚರ್ಚೆಯಾಗುತ್ತಲೇ ಇರುತ್ತದೆ.
ಬಾಲಿವುಡ್ ಬಾದ್ಶಾಹ್
ಇದೀಗ ಒಂದು ಹಂತ ಮುಂದಕ್ಕೆ ಹೋಗಿರುವ ಬಾಲಿವುಡ್ ಬಾದ್ಶಾಹ್ ಹಿಂದೂಗಳ ಮಾರಣ ಹೋಮ ಮಾಡ್ತಿರೋ ಬಾಂಗ್ಲಾದೇಶ ಆಟಗಾರರನ್ನು ಖರೀದಿಸಿರುವುದು ಭಾರಿ ವಿವಾದಕ್ಕೆ ಈಡು ಮಾಡಿಕೊಟ್ಟಿದೆ. ತಮ್ಮ ದೇಶದ ಮೇಲೆ ಪ್ರೀತಿ ಇರುವ ಭಾರತೀಯನೊಬ್ಬ ಯಾವನೂ ಇಂಥ ಕೆಲಸ ಮಾಡುವುದಿಲ್ಲ ಎಂದು ಜಾಲತಾಣದಲ್ಲಿ ಇದಾಗಲೇ ಶಾರುಖ್ (Shah Rukh Khan ) ವಿರುದ್ಧ ಅಸಮಾಧಾನದ ಹೊಗೆಯಾಡುತ್ತಿದೆ.
ಕೆಕೆಆರ್ ತಂಡ
ಬಾಂಗ್ಲಾ ಆಟಗಾರರನ್ನು ತಮ್ಮ ತಂಡಕ್ಕೆ ಖರೀದಿ ಮಾಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ನ ಕೋಲ್ಕತ ನೈಟ್ ರೈಡರ್ಸ್ (ಕೆಕೆಆರ್) ತಂಡದ ಮಾಲೀಕ ಆಗಿರುವ ಶಾರುಖ್ ಬಗ್ಗೆ ಇದಾಗಲೇ ಹಲವು ದಿಗ್ಗಜರು, ದೇಶಭಕ್ತರು ಉಗಿಯುತ್ತಿದ್ದಾರೆ, ಛೀಮಾರಿ ಹಾಕುತ್ತಿದ್ದಾರೆ.
ಜಗದ್ಗುರು ರಾಮಭದ್ರಾಚಾರ್ಯ ಹೇಳಿದ್ದೇನು?
ಜಗದ್ಗುರು ರಾಮಭದ್ರಾಚಾರ್ಯ (Jagadguru Rambhadracharya )ಅವರು ಈ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಶಾರುಖ್ ಖಾನ್ ಚರಿತ್ರೆ ಏನಿದೆ? ಅವರಿಗೆ ಚರಿತ್ರೆನೇ ಇಲ್ಲ. ಅವರೊಬ್ಬ ದೇಶದ್ರೋಹಿ, ಇದನ್ನು ಪದೇ ಪದೇ ಸಾಬೀತು ಮಾಡುತ್ತಿದ್ದಾರೆ. ಆತ ಸೂಪರ್ ಸ್ಟಾರ್ ಅಲ್ಲ ಎಂದಿದ್ದಾರೆ . ಕಥಾವಾಚಕ್ ದೇವಕಿನಂದನ್ ಠಾಕೂರ್ ಕೂಡ ಶಾರುಖ್ ಖಾನ್ ವಿರುದ್ಧ ಹರಿಹಾಯ್ದಿದ್ದಾರೆ.
ಅತೀವ ಪ್ರೇಮ
ಇಷ್ಟೇ ಅಲ್ಲದೇ, ವಿವಿಧ ಕ್ಷೇತ್ರಗಳ ಗಣ್ಯಾತಿಗಣ್ಯರು, ರಾಜಕೀಯ, ಸಾಮಾಜಿಕ, ಧಾರ್ಮಿಕ ಮುಖಂಡರು ಶಾರುಖ್ಗೆ ಛೀಮಾರಿ ಹಾಕುತ್ತಿದ್ದಾರೆ. ಭಾರತದ ಮೇಲೆ ಭಯೋತ್ಪಾದನಾ ಕೃತ್ಯ ಸಾರುವ, ಹಿಂದೂಗಳ ಮಾರಣ ಹೋಮ ಮಾಡುವ ಮುಸ್ಲಿಂ ರಾಷ್ಟ್ರಗಳ ಮೇಲೆ ಇಂಥವರ ಪ್ರೀತಿ ಸದಾ ಇರುತ್ತದೆ, ಅದರಲ್ಲಿ ಹೊಸ ವಿಷಯವೇನೂ ಇಲ್ಲ ಎನ್ನುತ್ತಿದ್ದಾರೆ.
ದೇಶಭಕ್ತಿ ನಟನೆಯಲ್ಲಿ ಮಾತ್ರ!
ದೇಶಪ್ರೇಮ ಎನ್ನುವುದು ಸಿನಿಮಾಗಳಲ್ಲಿ ದುಡ್ಡು ಮಾಡುವ ದಂಧೆ ಮಾಡಿಕೊಂಡಿರುವ ಕೆಲವು ನಟರು ಇದ್ದಾರೆ. ಅವರು ದೇಶಪ್ರೇಮ ಮೆರೆದು ನಟಿಸಿದರೆ ಅದನ್ನು ಹಾಡಿ ಹೊಗಳಿ ಅವರನ್ನೇ ತಮ್ಮ ದೇವರು ಎಂದುಕೊಳ್ಳುವ ದೊಡ್ಡ ಅಭಿಮಾನಿ ವರ್ಗಕ್ಕೆ ಸಮಯ ಬಂದಾಗ ಇಂಥ ನಟರ ಬಂಡವಾಳ ತಿಳಿಯುತ್ತದೆ. ಆದರೆ ಅದನ್ನು ಅರ್ಥ ಮಾಡಿಕೊಳ್ಳುವ ಮನಸ್ಥಿತಿ ಅಭಿಮಾನದ ಗುಂಗಿನಲ್ಲಿ ಇರುವ ಭಾರತೀಯರಿಗೆ ಅರ್ಥವಾಗುವುದಿಲ್ಲ ಎಂದು ಕೆಲವರು ಜಾಲತಾಣದಲ್ಲಿ ತೀಕ್ಷ್ಮವಾದ ಕಮೆಂಟ್ ಹಾಕುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

