MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind-W vs Pak-W Asia Cup 2026
Teacher's Day Wishes 2026
Teacher's Day Special
Karnataka Farmers Loan Waiver
Sharavathi Pumped Storage Project
Bengaluru FSSAI Inspection
KPSC Ex-chairman Shivashankarappa
India Forex Reserves
Karnataka Police Constable Recruitment
Karnataka Rakshana Vedike
ISRO GSLV F17 Launch
Bengaluru Suburban Rail
  • Home
  • Karnataka Districts
  • Bengaluru Urban
  • Bengaluru: ಕಸದ ಗಾಡಿ ಬರೋದು ಲೇಟ್ ಆದ್ರೆ ಏನು ಮಾಡಬೇಕು? ಕೃಷ್ಣ ಬೈರೇಗೌಡರ ಉತ್ತರ

Bengaluru: ಕಸದ ಗಾಡಿ ಬರೋದು ಲೇಟ್ ಆದ್ರೆ ಏನು ಮಾಡಬೇಕು? ಕೃಷ್ಣ ಬೈರೇಗೌಡರ ಉತ್ತರ

ಸಚಿವ ಕೃಷ್ಣಬೈರೇಗೌಡರು ಬೆಂಗಳೂರಿನ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿ, ಕಸ ಸಂಗ್ರಹಣೆಗೆ ಜಿಪಿಎಸ್ ಅಳವಡಿಕೆ ಮತ್ತು ಹೊಸ ವಾಹನಗಳ ಖರೀದಿ, ಪಾರ್ಕಿಂಗ್ ಸಮಸ್ಯೆ ನಿವಾರಣೆ ಹಾಗೂ ಪಿಒಪಿ ಗಣಪತಿ ನಿಷೇಧದಂತಹ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಿದರು.

1 Min read
Author : Mahmad Rafik
Published : Sep 05 2026, 07:20 PM IST
Share this Photo Gallery
  • FB
  • TW
  • Linkdin
  • Whatsapp
15
ಸಚಿವ ಕೃಷ್ಣಬೈರೇಗೌಡ ಸಭೆ
Image Credit : Krishna Byre Gowda FB

ಸಚಿವ ಕೃಷ್ಣಬೈರೇಗೌಡ ಸಭೆ

ಬೆಂಗಳೂರು ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಬಳಿಕ ಸಚಿವ ಕೃಷ್ಣಬೈರೇಗೌಡರು ಮಾಧ್ಯಮಗಳ ಜೊತೆ ಮಾತನಾಡಿದರು. ಶಾಸಕರು ಮತ್ತು ಸಂಸದರ ಸಭೆ ಮಾಡಿದ್ದೇವೆ. ಔಟರ್ ಏರಿಯಾದಲ್ಲಿ ಸಮಸ್ಯೆ ಇದೆ. ಕಾವೇರಿ ನೀರು ಹೊರಗೆ ಕೊಡಲು ಆಗಲಿಲ್ಲ. ರಸ್ತೆ ಆಗಾಗ ಅಗೆದು ಕಾಮಗಾರಿ ಮಾಡುತ್ತಿದ್ದು, ಅದನ್ನು ತಕ್ಷಣವೇ ಸರಿ ಮಾಡಲಾಗುವುದು. ಮುಂದಿನ ಎರಡು ತಿಂಗಳಲ್ಲಿ ಟೆಂಡರ್ ನೀಡಿ ಹೈಯರ್ ಕೆಪಾಸಿಟಿ (ಮೂರು ಟನ್) ಹೊಸ ಗಾಡಿ ತೆಗೆದುಕೊಳ್ಳುತ್ತೇವೆ ಎಂದು ಮಾಹಿತಿ ನೀಡಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಎಲ್ಲೆಂದರಲ್ಲಿ ಕಸ ಹಾಕಬೇಡಿ
Image Credit : Krishna Byre Gowda FB

ಎಲ್ಲೆಂದರಲ್ಲಿ ಕಸ ಹಾಕಬೇಡಿ

ಪ್ರತಿಯೊಂದು ಕಸದ ಗಾಡಿಗೂ GPS ಅಳವಡಿಕೆ ಮಾಡಲಾಗುತ್ತದೆ. ಕಸದ ಗಾಡಿಗಳು ಎಲ್ಲಾ ರಸ್ತೆಗಳಿಗೂ ಹೋಗಬೇಕೆಂಬ ಉದ್ದೇಶದಿಂದ ಜಿಪಿಎಸ್ ಅಳವಡಿಕೆ ಮಾಡಲಾಗುತ್ತದೆ. ಮನೆ ಹತ್ತಿರವೇ ಗಾಡಿ ಬಂದಾಗ ಕಸ ಹಾಕಿ. ಎಲ್ಲೆಂದರಲ್ಲಿ ಕಸ ಹಾಕಬೇಡಿ. ಒಂದು ವೇಳೆ ಕಸದ ಗಾಡಿ ಬರೋದು ಲೇಟ್ ಆದರೆ ಕಂಪೌಡ್ ಮೇಲೆ ಕಸದ ಬಕೆಟ್ ಇಡಿ. ನಮ್ಮ ಸಿಬ್ಬಂದಿ ಬಂದು ಕಸ ಸಂಗ್ರಹಿಸುತ್ತಾರೆ ಎಂದು ಸಚಿವರು ಹೇಳಿದರು.

Related Articles

Related image1
ಬೆಂಗಳೂರು ರಾಜಕಾಲುವೆ ಕಾಮಗಾರಿ ನೋಡಿ ಚಪ್ಪಾಳೆ ತಟ್ಟಿದ ವಿಶ್ವ ಬ್ಯಾಂಕ್! ವಾಕಿಂಗ್ ಟ್ರ್ಯಾಕ್, ಗ್ರೀನ್ ಕಾರಿಡಾರ್..
Related image2
ದಕ್ಷಿಣ ಭಾರತದಲ್ಲೇ ಮೊದಲು: ಬೆಂಗಳೂರು ಉದ್ಯಮಿಗಳಿಗೆ ಸೋಮಣ್ಣ ಕೊಟ್ಟ ಭರ್ಜರಿ ಕೊಡುಗೆ!
35
ರಸ್ತೆಯ ಎರಡೂ ಬದಿಯಲ್ಲಿ ಪಾರ್ಕಿಂಗ್ ಸಮಸ್ಯೆ
Image Credit : Krishna Byre Gowda FB

ರಸ್ತೆಯ ಎರಡೂ ಬದಿಯಲ್ಲಿ ಪಾರ್ಕಿಂಗ್ ಸಮಸ್ಯೆ

ನಗರದ ಹಲವು ಕಡೆ ರಸ್ತೆಯ ಎರಡು ಬದಿಯಲ್ಲಿಯೂ ಕಾರ್ ಪಾರ್ಕ್ ಮಾಡುತ್ತಿದ್ದು, ಅದರನ್ನು ಗಮನಿಸುತ್ತಿದ್ದೇವೆ. ಶಾಸಕರು ಈ ಸಮಸ್ಯೆ ಬಗ್ಗೆ ಪ್ರತ್ಯೇಕ ಸಭೆ ಕರೆಯಲು ಹೇಳಿದ್ದಾರೆ. ಕಾರ್ ಪಾರ್ಕ್ ಇಂದ ರಸ್ತೆ ಕ್ಲೀನ್ ಮಾಡಲು ಆಗೋದಿಲ್ಲ. ಅಷ್ಟು ಟ್ರಾಫಿಕ್ ಆಗುತ್ತಿದೆ. ಬೆಂಗಳೂರು ಬಹುತೇಕ ಕಡೆ ಈ ಸಮಸ್ಯೆ ಇದೆ ಎಂದರು.

45
ಶಿಸ್ತು ಕ್ರಮ ಗ್ಯಾರಂಟಿ
Image Credit : Krishna Byre Gowda FB

ಶಿಸ್ತು ಕ್ರಮ ಗ್ಯಾರಂಟಿ

ಪೌರಕಾರ್ಮಿಕರು ಕೆಲಸಕ್ಕೆ ಬರದೇ ಇದ್ರೆ ಶಿಸ್ತು ಕ್ರಮ ಗ್ಯಾರಂಟಿ. ಎಲ್ಲಾ ಶಾಸಕರು ಇದಕ್ಕೆ ಬೆಂಬಲ ನೀಡಿದ್ದಾರೆ. ಪೌರ ಕಾರ್ಮಿಕರು ಶ್ರದ್ಧೆಯಿಂದ ಕೆಲಸ ಮಾಡಿ. ನಮಗೆ ಬೆಂಗಳೂರು ಜೀವನ ನೀಡಿದೆ. ನಿಮಗೆ ಸಂಬಳ ನೀಡುತ್ತೇವೆ. ನೀವು ಕೆಲಸ ಮಾಡಿ ಎಂದು ಆಗ್ರಹಿಸಿದರು.

55
ಪಿಒಪಿ ಗಣಪತಿ ಬೇಡ
Image Credit : Krishna Byre Gowda FB

ಪಿಒಪಿ ಗಣಪತಿ ಬೇಡ

ಪಿಒಪಿ ಗಣಪತಿ ಬೇಡ, ಇದು ಗಣೇಶನಿಗೆ ಮಾಡುವ ಅಪಮಾನ. ಬೆಂಗಳೂರು ಜಲಮೂಲ ಹಾಳು ಮಾಡಬೇಡಿ. ಯುವಕರಿಗೆ ಖುಷಿ ಕೊಡಲಿದೆ ಹಬ್ಬ, ಜೀವನ ಎಂಜಾಯ್ ಮಾಡೋದಕ್ಕೆ ಇರೋದು.ಆದರೆ ಪಿಒಪಿ ಗಣಪತಿ ಇಟ್ಟು ಪೂಜೆ ಮಾಡಬೇಡಿ.ನಾವು ಚಿಕ್ಕವರಿದ್ದಾಗ ಸಗಣಿಯಲ್ಲಿ ಗಣಪತಿ ಮಾಡಿ ಗರಕೆ ಹುಲ್ಲು ಇಟ್ಟು ಪೂಜೆ ಮಾಡ್ತಾ ಇದ್ದೇವು. ಹೀಗಾಗಿ ಯುವಕರು ಸಹಕಾರ ನೀಡಿ ಎಂದು ಸಚಿವರು ಮನವಿ ಮಾಡಿಕೊಂಡರು.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಬೆಂಗಳೂರು ನಗರ
ಬೆಂಗಳೂರು
ಗ್ರೇಟರ್ ಬೆಂಗಳೂರು ಪ್ರಾಧಿಕಾರ
ಬೆಂಗಳೂರು ಮಹಾನಗರ
ಕೃಷ್ಣ ಬೈರೇಗೌಡ

Latest Videos
Recommended Stories
Recommended image1
ಆರ್‌ಸಿಬಿ ಫ್ಯಾನ್ಸ್‌ಗೆ ಬಿಗ್‌ ಅಪ್ಡೇಟ್‌; ಹೊಸತನ ಬಂದರೂ, ಹಳೆಯ ಗುರುತು ಬಿಟ್ಟುಕೊಡದ ಬಿರ್ಲಾ!
Recommended image2
ಬೆಂಗಳೂರಿನ ರಸ್ತೆ ಗುಂಡಿ ಮುಚ್ಚಲು 3 ವರ್ಷದಲ್ಲಿ 5500 ಕೋಟಿ ಖರ್ಚು - ತೇಜಸ್ವಿ ಸೂರ್ಯ ಬಿಚ್ಚಿಟ್ರು ಸತ್ಯ
Recommended image3
ಫಿಲ್ಮ್‌ಫೇರ್ ಪ್ರಶಸ್ತಿ ವಿಜೇತ ಗೌರಿಶಂಕರ್ ಈಗ 'ಕಾಮನ್ ಮ್ಯಾನ್ ನಾನೇ ಸಿಎಂ' ಸಿನಿಮಾದಲ್ಲಿ ಬ್ಯುಸಿ
Related Stories
Recommended image1
ಬೆಂಗಳೂರು ರಾಜಕಾಲುವೆ ಕಾಮಗಾರಿ ನೋಡಿ ಚಪ್ಪಾಳೆ ತಟ್ಟಿದ ವಿಶ್ವ ಬ್ಯಾಂಕ್! ವಾಕಿಂಗ್ ಟ್ರ್ಯಾಕ್, ಗ್ರೀನ್ ಕಾರಿಡಾರ್..
Recommended image2
ದಕ್ಷಿಣ ಭಾರತದಲ್ಲೇ ಮೊದಲು: ಬೆಂಗಳೂರು ಉದ್ಯಮಿಗಳಿಗೆ ಸೋಮಣ್ಣ ಕೊಟ್ಟ ಭರ್ಜರಿ ಕೊಡುಗೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved