MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind vs SL 2nd Test
Today's Horoscope in Kannada
Mandya Jaggery Price
Bengaluru Garden City
Bengaluru Fake Medicine Racket
Karnataka-Tamil Nadu Border
Karnataka IAS Officer Missing
Pakistan-based Gang Doddaballapur
NICE Road Toll
Bhadra Irrigation Project
Minister B Nagendra
Valmiki Corporation Scam
BJP vs Minister B Nagendra
Bengaluru Airport Metro
Mysuru Chamundeshwari Temple Priest
Kabini Dam Water Level
  • Home
  • Karnataka Districts
  • Bengaluru Urban
  • ಬೆಂಗಳೂರು ಸುರಂಗ ರಸ್ತೆ: ₹22,000 ಕೋಟಿ ಟೆಂಡರ್ ಗೊಂದಲದ ನಡುವೆ ಅದಾನಿ-ಡಿಕೆಶಿ ಮೀಟಿಂಗ್!

ಬೆಂಗಳೂರು ಸುರಂಗ ರಸ್ತೆ: ₹22,000 ಕೋಟಿ ಟೆಂಡರ್ ಗೊಂದಲದ ನಡುವೆ ಅದಾನಿ-ಡಿಕೆಶಿ ಮೀಟಿಂಗ್!

ಬೆಂಗಳೂರು ಸುರಂಗ ರಸ್ತೆ ಯೋಜನೆಗೆ ಅದಾನಿ ಎಂಟರ್‌ಪ್ರೈಸಸ್ ಅತಿ ಕಡಿಮೆ ಮೊತ್ತದ ₹22,000 ಕೋಟಿ ಬಿಡ್ ಸಲ್ಲಿಸಿದೆ. ಸರ್ಕಾರದ ಅಂದಾಜು ವೆಚ್ಚಕ್ಕಿಂತ ಬಿಡ್ ಮೊತ್ತವು ₹4,569 ಕೋಟಿ ಅಧಿಕವಾಗಿರುವುದರಿಂದ ಟೆಂಡರ್ ಅಂತಿಮಗೊಂಡಿಲ್ಲ. ಈ ನಡುವೆಯೇ ಗೌತಮ್ ಅದಾನಿ ಸಿಎಂ ಡಿ.ಕೆ. ಶಿವಕುಮಾರ್ ಭೇಟಿಯಾಗಿದ್ದಾರೆ.

2 Min read
Author : Sathish Kumar KH
Published : Aug 23 2026, 12:28 PM IST
Share this Photo Gallery
  • FB
  • TW
  • Linkdin
  • Whatsapp
16
ಡಿ.ಕೆ.ಶಿವಕುಮಾರ್ ಭೇಟಿಯಾದ ಅದಾನಿ
Image Credit : Asianet News

ಡಿ.ಕೆ.ಶಿವಕುಮಾರ್ ಭೇಟಿಯಾದ ಅದಾನಿ

ಸಿಲಿಕಾನ್ ಸಿಟಿ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಮುಕ್ತಿ ನೀಡಲು ರಾಜ್ಯ ಸರ್ಕಾರ ರೂಪಿಸಿರುವ ಮಹತ್ವಾಕಾಂಕ್ಷೆಯ 'ಬೆಂಗಳೂರು ಸುರಂಗ ರಸ್ತೆ' (Bengaluru Tunnel Road Project) ಯೋಜನೆ ಈಗ ಹೊಸ ತಿರುವು ಪಡೆದುಕೊಂಡಿದೆ. ಈ ಬೃಹತ್ ಯೋಜನೆಗೆ ಖ್ಯಾತ ಉದ್ಯಮಿ ಗೌತಮ್ ಅದಾನಿ ನೇತೃತ್ವದ 'ಅದಾನಿ ಎಂಟರ್‌ಪ್ರೈಸಸ್' (Adani Enterprises) ಅತ್ಯಂತ ಕಡಿಮೆ ಮೊತ್ತದ ಬಿಡ್ ಸಲ್ಲಿಸಿ ಮುಂಚೂಣಿಯಲ್ಲಿದೆ.

ಆದರೆ, ಸರ್ಕಾರದ ಅಂದಾಜು ವೆಚ್ಚಕ್ಕಿಂತ ಬಿಡ್ ಮೊತ್ತ ಹೆಚ್ಚಿರುವ ಕಾರಣ ಟೆಂಡರ್ ಅಂತಿಮಗೊಳಿಸುವುದು ತಡವಾಗುತ್ತಿದ್ದು, ಈ ನಡುವೆ ಗೌತಮ್ ಅದಾನಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿರುವುದು ತೀವ್ರ ರಾಜಕೀಯ ಹಾಗೂ ವಾಣಿಜ್ಯ ಕುತೂಹಲಕ್ಕೆ ಕಾರಣವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಏನಿದು ₹22 ಸಾವಿರ ಕೋಟಿ ಟೆಂಡರ್ ಗೊಂದಲ?
Image Credit : Asianet News

ಏನಿದು ₹22 ಸಾವಿರ ಕೋಟಿ ಟೆಂಡರ್ ಗೊಂದಲ?

ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (PPP Model) ಅಡಿಯಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿರುವ ಈ ಯೋಜನೆಗೆ ಅದಾನಿ ಗ್ರೂಪ್ ಸುಮಾರು ₹22,267 ಕೋಟಿ ರೂಪಾಯಿಗಳ ಬಿಡ್ ಸಲ್ಲಿಸಿದೆ. ತಾಂತ್ರಿಕವಾಗಿ ಅದಾನಿ ಸಂಸ್ಥೆ ಅತ್ಯಂತ ಕಡಿಮೆ ಮೊತ್ತ ನಮೂದಿಸಿದ (L1) ಗುತ್ತಿಗೆದಾರ ಸಂಸ್ಥೆಯಾಗಿ ಹೊರಹೊಮ್ಮಿದೆ.

ಆದರೆ, ರಾಜ್ಯ ಸರ್ಕಾರ ಮತ್ತು ಯೋಜನೆಯ ಉಸ್ತುವಾರಿ ಹೊತ್ತಿರುವ 'ಬಿ-ಸ್ಮೈಲ್' (B-SMILE) ಸಂಸ್ಥೆಯ ಮೂಲ ಅಂದಾಜು ವೆಚ್ಚ ಸುಮಾರು ₹17,698 ಕೋಟಿ ರೂಪಾಯಿಗಳಷ್ಟಿತ್ತು. ಸರ್ಕಾರದ ನಿರೀಕ್ಷೆಗಿಂತ ಅದಾನಿ ಗ್ರೂಪ್ ಕೋಟ್ ಮಾಡಿರುವ ಮೊತ್ತವು ಸುಮಾರು ₹4,569 ಕೋಟಿ ಅಧಿಕವಾಗಿದೆ. ಹೀಗಾಗಿ ಅಧಿಕೃತವಾಗಿ ಗುತ್ತಿಗೆಯನ್ನು ಇನ್ನೂ ಅದಾನಿ ಸಂಸ್ಥೆಗೆ ಹಸ್ತಾಂತರಿಸಲಾಗಿಲ್ಲ.

Related Articles

Related image1
ಬೆಂಗಳೂರು ಸುರಂಗ ಮಾರ್ಗ ಯೋಜನೆಗೆ ಅದಾನಿ ಕಂಪನಿಯಿಂದ ‘ಮಹಾ’ ಬಿಡ್!; ಮೂಲ ಅಂದಾಜು ದರಕ್ಕಿಂತ ಶೇ. 96 ರಷ್ಟು ದುಬಾರಿ!
Related image2
ಬೆಂಗಳೂರು ಸುರಂಗ ರಸ್ತೆಗೆ ನಾಗರೀಕರು, ತಜ್ಞರ ವ್ಯಾಪಕ ವಿರೋಧ, 42 ಸಾವಿರ ಕೋಟಿ ಪ್ರಾಜೆಕ್ಟ್‌ ದುರಂತ ಎಂದ ಜನರು!
36
ಅಂತಿಮ ನಿರ್ಧಾರಕ್ಕಾಗಿ ಸಚಿವ ಸಂಪುಟಕ್ಕೆ ಕಡತ ರವಾನೆ
Image Credit : Asianet News

ಅಂತಿಮ ನಿರ್ಧಾರಕ್ಕಾಗಿ ಸಚಿವ ಸಂಪುಟಕ್ಕೆ ಕಡತ ರವಾನೆ

ಟೆಂಡರ್ ವೆಚ್ಚದಲ್ಲಿ ಭಾರಿ ಪ್ರಮಾಣದ ಏರಿಕೆಯಾಗಿರುವುದರಿಂದ, ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಬಿ-ಸ್ಮೈಲ್ ಸಂಸ್ಥೆಯು ಫೈಲ್ ಅನ್ನು ರಾಜ್ಯ ಸಚಿವ ಸಂಪುಟದ (Karnataka Cabinet) ಅಂಗಳಕ್ಕೆ ತಳ್ಳಿದೆ.

ಪ್ರಸ್ತುತ ಸರ್ಕಾರದ ಮುಂದಿರುವ 3 ಪ್ರಮುಖ ಆಯ್ಕೆಗಳು:

ದರ ಇಳಿಕೆಗೆ ಮಾತುಕತೆ: ಬಿಡ್ ಮೊತ್ತವನ್ನು ಮತ್ತಷ್ಟು ಕಡಿಮೆ ಮಾಡುವಂತೆ ಅದಾನಿ ಗ್ರೂಪ್ ಜೊತೆ ಸಂಧಾನ/ಮಾತುಕತೆ ನಡೆಸುವುದು.

ವೆಚ್ಚ ಪರಿಷ್ಕರಣೆ: ಪ್ರಸ್ತುತ ಮಾರುಕಟ್ಟೆ ದರಗಳು ಮತ್ತು ತಾಂತ್ರಿಕ ಸವಾಲುಗಳನ್ನು ಪರಿಗಣಿಸಿ, ಸರ್ಕಾರದ ಮೂಲ ಅಂದಾಜು ವೆಚ್ಚವನ್ನೇ ಹೆಚ್ಚಿಸಿ ಅನುಮೋದನೆ ನೀಡುವುದು.

ರೀ-ಟೆಂಡರ್: ಪ್ರಸ್ತುತ ಟೆಂಡರ್ ರದ್ದುಗೊಳಿಸಿ, ಹೊಸ ಷರತ್ತುಗಳೊಂದಿಗೆ ಮರು-ಟೆಂಡರ್ (Re-tender) ಕರೆಯುವುದು.

46
ಟೆಂಡರ್ ಮುನ್ನವೇ ಮಣ್ಣು ಪರೀಕ್ಷೆ, ಸರ್ವೆ ಆರಂಭಿಸಿದ ಅದಾನಿ!
Image Credit : Asianet News

ಟೆಂಡರ್ ಮುನ್ನವೇ ಮಣ್ಣು ಪರೀಕ್ಷೆ, ಸರ್ವೆ ಆರಂಭಿಸಿದ ಅದಾನಿ!

ಒಂದೆಡೆ ಸರ್ಕಾರದ ಹಂತದಲ್ಲಿ ಟೆಂಡರ್ ಪ್ರಕ್ರಿಯೆಗಳು ನಡೆಯುತ್ತಿದ್ದರೂ, ಅದಾನಿ ಎಂಟರ್‌ಪ್ರೈಸಸ್ ಸಂಸ್ಥೆಯು ಪ್ರಸ್ತಾವಿತ ಸುರಂಗ ರಸ್ತೆ ಮಾರ್ಗದಲ್ಲಿ ಈಗಾಗಲೇ ಪ್ರಾಥಮಿಕ ಕಾಮಗಾರಿಗಳನ್ನು ಆರಂಭಿಸಿದೆ. ಯೋಜನೆಯ ತಾಂತ್ರಿಕ ಸಾಧ್ಯತೆಗಳನ್ನು ಪರಿಶೀಲಿಸಲು ಸಂಸ್ಥೆಯು ಮಣ್ಣಿನ ಪರೀಕ್ಷೆ (Soil Test) ಮತ್ತು ಜಿಯೋಟೆಕ್ನಿಕಲ್ ಸರ್ವೆಗಳನ್ನು (Geotechnical Survey) ಚುರುಕುಗೊಳಿಸಿದೆ ಎಂದು ವರದಿಯಾಗಿದೆ.

56
ಸಿಎಂ ಡಿ.ಕೆ. ಶಿವಕುಮಾರ್ - ಗೌತಮ್ ಅದಾನಿ ಭೇಟಿ: ಭಾರೀ ಕುತೂಹಲ
Image Credit : Asianet News

ಸಿಎಂ ಡಿ.ಕೆ. ಶಿವಕುಮಾರ್ - ಗೌತಮ್ ಅದಾನಿ ಭೇಟಿ: ಭಾರೀ ಕುತೂಹಲ

ಬೆಂಗಳೂರು ಅಭಿವೃದ್ಧಿಯ ಕನಸಿನ ಯೋಜನೆಯಾಗಿರುವ ಸುರಂಗ ರಸ್ತೆಯ ಟೆಂಡರ್ ವೆಚ್ಚದ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಖುದ್ದು ಗೌತಮ್ ಅದಾನಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಯೋಜನೆಯ ವೆಚ್ಚ ಕಡಿತ, ಜಾರಿ ವಿಧಾನ ಅಥವಾ ನಿಯಮಾವಳಿಗಳ ಸಡಿಲಿಕೆ ಕುರಿತು ಈ ಸಭೆಯಲ್ಲಿ ಚರ್ಚೆ ನಡೆದಿರುವ ಸಾಧ್ಯತೆ ಇದೆ ಎನ್ನಲಾಗಿದೆ.

66
ವಿರೋಧದ ನಡುವೆಯೂ ಹಿಂದೇಟು ಹಾಕದ ಸರ್ಕಾರ
Image Credit : @solidview/ X @Tejasvi_Surya/X

ವಿರೋಧದ ನಡುವೆಯೂ ಹಿಂದೇಟು ಹಾಕದ ಸರ್ಕಾರ

ಈ ಸುರಂಗ ಮಾರ್ಗ ಯೋಜನೆಗೆ ಬೆಂಗಳೂರಿನ ಐತಿಹಾಸಿಕ ಲಾಲ್‌ಬಾಗ್ ಉದ್ಯಾನದ ಒಂದು ಭಾಗವನ್ನು ಬಳಕೆ ಮಾಡಿಕೊಳ್ಳುತ್ತಿರುವುದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ವಿಪಕ್ಷಗಳಿಂದ ಈ ಯೋಜನೆಗೆ ವಿರೋಧ ವ್ಯಕ್ತವಾಗಿದೆ. ಸಂಸದ ತೇಜಸ್ವಿ ಸೂರ್ಯ ಅವರು ಈ ಯೋಜನೆಯನ್ನು ವಿರೋಧ ಮಾಡಿ, ಹಲವು ಬಾರಿ ಸರ್ಕಾರಕ್ಕೆ ಮನವಿಯನ್ನೂ ಮಾಡಿದ್ದಾರೆ.

ಇದೆಲ್ಲದರ ನಡುವೆಯೂ, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಸರ್ಕಾರ ಈ ಟೆಂಡರ್‌ಗೆ ಅನುಮೋದನೆ ನೀಡಲಿದೆಯೇ ಅಥವಾ ಮರು-ಟೆಂಡರ್ ಕರೆಯಲಿದೆಯೇ ಎಂಬುದರ ಮೇಲೆ ಈ ಯೋಜನೆಯ ಭವಿಷ್ಯ ನಿಂತಿದೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಡಿ.ಕೆ. ಶಿವಕುಮಾರ್
ಅದಾನಿ ಗ್ರೂಪ್
ಬೆಂಗಳೂರು ಸಂಚಾರ
ಸುರಂಗ ಮಾರ್ಗ

Latest Videos
Recommended Stories
Recommended image1
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ, ಮತ್ತೆ ಜೋರು ಮಳೆ ಸುರಿಯುವ ನಿರೀಕ್ಷೆ!
Recommended image2
'ಬೆಂಗಳೂರಿಗೆ 'ಗಾರ್ಡನ್ ಸಿಟಿ' ಹೆಸರು ಸುಮ್ನೆ ಬಂದಿಲ್ಲ..' ಪಾರ್ಕ್‌ನ 5% ಜಾಗ ಇತರೆ ಉದ್ದೇಶಗಳಿಗೆ ಬಳಕೆಗೆ ಸಂಸದ ಗರಂ
Recommended image3
ಖ್ಯಾತಿ, ಚಪ್ಪಾಳೆಗೆ ಕಲಾವಿದ ಬದುಕಬಾರದು ಟಿ.ಎನ್.ಸೀತಾರಾಮ ಮಾತು
Related Stories
Recommended image1
ಬೆಂಗಳೂರು ಸುರಂಗ ಮಾರ್ಗ ಯೋಜನೆಗೆ ಅದಾನಿ ಕಂಪನಿಯಿಂದ ‘ಮಹಾ’ ಬಿಡ್!; ಮೂಲ ಅಂದಾಜು ದರಕ್ಕಿಂತ ಶೇ. 96 ರಷ್ಟು ದುಬಾರಿ!
Recommended image2
ಬೆಂಗಳೂರು ಸುರಂಗ ರಸ್ತೆಗೆ ನಾಗರೀಕರು, ತಜ್ಞರ ವ್ಯಾಪಕ ವಿರೋಧ, 42 ಸಾವಿರ ಕೋಟಿ ಪ್ರಾಜೆಕ್ಟ್‌ ದುರಂತ ಎಂದ ಜನರು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved