Asianet Suvarna News Asianet Suvarna News

ಸಂಜೆ ಈ ಕೆಲಸಗಳನ್ನು ಮಾಡಿದ್ರೆ ತೊಂದರೆ ತಪ್ಪಿದಲ್ಲ, ಅಪ್ಪಿತಪ್ಪಿಯೂ ದೈಹಿಕ ಸಂಪರ್ಕ ಮಾಡಬೇಡಿ

ಸಂಜೆ ಸೂರ್ಯಾಸ್ತದ ನಂತರ ಕೆಲವು ಕೆಲಸಗಳನ್ನು ಮಾಡುವುದರಿಂದ ನಿಮ್ಮ ಜೀವನದಲ್ಲಿ ಕಷ್ಟ, ಬಡತನ ಮತ್ತು ದುಃಖಕ್ಕೆ ಕಾರಣವಾಗುತ್ತದೆ.
 

vastu tips do not do these things after sunset to avoid these things suh
Author
First Published Aug 17, 2024, 12:08 PM IST | Last Updated Aug 17, 2024, 12:08 PM IST

ಪ್ರತಿಯೊಬ್ಬ ವ್ಯಕ್ತಿಗೂ ತನಗೆ ಮತ್ತು ತನ್ನ ಕುಟುಂಬಕ್ಕೆ ಒಳ್ಳೆಯದಾಗಲಿ.ಆರ್ಥಿಕವಾಗಿ ಉತ್ತಮವಾಗಲಿ ಎಂಬ ಆಶಯವಿರುತ್ತದೆ. ಅವರು ಆರೋಗ್ಯವಾಗಿ ಮತ್ತು ಸಂತೋಷವಾಗಿರಲು ಬಯಸುತ್ತಾರೆ. ಆ ವ್ಯಕ್ತಿ ಅದಕ್ಕಾಗಿ ಶ್ರಮಿಸುತ್ತಾನೆ.ಆದರೆ ಕೆಲವೊಮ್ಮೆ ನಾವು ಎಷ್ಟೇ ಪ್ರಯತ್ನಿಸಿದರೂ ನಮಗೆ ಬೇಕಾದ ರೀತಿಯಲ್ಲಿ ಬದುಕಲು ಸಾಧ್ಯವಿಲ್ಲ. ಅವರ ಜೀವನದಲ್ಲಿ ಯಾವಾಗಲೂ ಕಷ್ಟಗಳು ಇದ್ದೇ ಇರುತ್ತವೆ. ಅವರು ಆರ್ಥಿಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ನಾವು ಮಾಡುವ ಸಣ್ಣಪುಟ್ಟ ತಪ್ಪುಗಳೇ ನಮ್ಮ ತೊಂದರೆಗೆ ಕಾರಣ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಕೆಲವು ಕೆಲಸಗಳನ್ನು ಮಾಡಬಾರದು, ವಿಶೇಷವಾಗಿ ಸಂಜೆ ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯು ಕೋಪಗೊಳ್ಳುತ್ತಾಳೆ. 

ಸೂರ್ಯಾಸ್ತದ ಸಮಯದಲ್ಲಿ ಮಲಗಬೇಡಿ. ಈ ಸಮಯದಲ್ಲಿ ದೇವತೆಗಳನ್ನು ಪೂಜಿಸಬೇಕು. ಲಕ್ಷ್ಮಿ ದೇವಿಗೆ ಈ ಸಮಯದಲ್ಲಿ ಮಲುಗಿದೆ ಇಷ್ಟವಾಗುವುದಿಲ್ಲ. ಹೀಗೆ ಮಾಡಿದರೆ ಮನೆಯಲ್ಲಿ ಬಡತನ ಬರುತ್ತದೆ. 

ಸೂರ್ಯಾಸ್ತದ ಸಮಯದಲ್ಲಿ ಬಟ್ಟೆ ಒಗೆಯುವುದು ತುಂಬಾ ಅಶುಭ. ಬದಲಾಗಿ, ಸಂಜೆಯ ಮೊದಲು ಕೆಲವು ಗಂಟೆಗಳ ಮೊದಲು ಬಟ್ಟೆ ಒಗೆಯುವ ಕೆಲಸವನ್ನು ಮಾಡಬೇಕು. ಸಂಜೆ ಅಥವಾ ರಾತ್ರಿ ಬಟ್ಟೆ ಒಗೆಯುವುದು ನಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ.

ಸಂಜೆಯಾದರೆ ಯಾವುದೇ ಸಂದರ್ಭದಲ್ಲೂ ಮನೆ ಗುಡಿಸಿ ಒರೆಸುವ ಕೆಲಸ ಮಾಡಬಾರದು. ಏಕೆಂದರೆ ಲಕ್ಷ್ಮಿ ದೇವಿಯು ಶುದ್ಧ ಸ್ಥಳಗಳಲ್ಲಿ ಮಾತ್ರ ಇರುತ್ತಾಳೆ. ಆದ್ದರಿಂದ, ದಿನದಲ್ಲಿ ಶುಚಿಗೊಳಿಸುವಿಕೆಯನ್ನು ಮಾಡಿ. ಸಂಜೆ ಮನೆಯನ್ನು ಶುಚಿಗೊಳಿಸಿದರೆ ಸಂಪತ್ತು ಸಿಗುವುದಿಲ್ಲ. ಗೌರವ ಇರುವುದಿಲ್ಲ ಬದಲಾಗಿ ಮನೆಯಲ್ಲಿ ಜಗಳ ಇರುತ್ತದೆ.

ಪುರುಷರು ಮತ್ತು ಮಹಿಳೆಯರು ಸಂಜೆ ದೈಹಿಕ ಸಂಪರ್ಕವನ್ನು ಹೊಂದಬಾರದು. ಇದರಿಂದ ದೇವರಿಗೆ ಕೋಪ ಬರುವುದಲ್ಲದೆ ಈ ಸಮಯದಲ್ಲಿ ಹುಟ್ಟಿದ ಮಗುವಿನ ಜೀವನವೂ ನೋವಿನಿಂದ ಕೂಡಿರುತ್ತದೆ. ಸಂಜೆ ಹಣದ ವ್ಯವಹಾರ ಮಾಡಬೇಡಿ. ಇದರಿಂದ ಲಕ್ಷ್ಮಿ ದೇವಿಯು ಕೋಪಗೊಂಡು ಅಲ್ಲಿಂದ ಹೊರಟು ಹೋಗುತ್ತಾಳೆ. 
 

Latest Videos
Follow Us:
Download App:
  • android
  • ios