ಜೀ ಕನ್ನಡದಲ್ಲಿ ಶೀಘ್ರದಲ್ಲಿ ರಾಘವೇಂದ್ರ ಮಹಿಮೆ ಸೀರಿಯಲ್​ ಶುರುವಾಗಲಿದೆ. ಅದರ ಜೊತೆಗೆ ಅತಿ ದೊಡ್ಡ ರಿಯಾಲಿಟಿ ಷೋ ಒಂದು ಬರಲಿದೆ. ಇವೆರಡರ ಆಡಿಷನ್​ನಲ್ಲಿ ಭಾಗವಹಿಸಲು ವಾಹಿನಿ ತಿಳಿಸಿದೆ. ಡಿಟೇಲ್ಸ್​ ಇಲ್ಲಿದೆ ನೋಡಿ.. 

ಇದಾಗಲೇ ಜೀ ಕನ್ನಡ ವಾಹಿನಿ ವಿವಿಧ ರೀತಿಯ ರಿಯಾಲಿಟಿ ಷೋಗಳ ಮೂಲಕ ಮನರಂಜನೆ ನೀಡುತ್ತಿದೆ. ವಿಭಿನ್ನ ರೀತಿಯ ಪ್ರಯೋಗಗಳನ್ನು ಮಾಡುತ್ತಲೇ ಬಂದಿದೆ. ಈ ರಿಯಾಲಿಟಿ ಷೋಗಳಿಂದ ಇದಾಗಲೇ ಹಲವಾರು ಕಲಾವಿದರು ಬೆಳಕಿಗೆ ಬಂದಿದ್ದಾರೆ. ಗ್ರಾಮೀಣ ಪ್ರತಿಭೆಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಸಿಕ್ಕಿದೆ. ಇದೀಗ, ಜೀ ಕನ್ನಡ ವಾಹಿನಿಯಲ್ಲಿ ಸುಖಧರೆ ಸಂಸ್ಥೆಯಿಂದ ಶ್ರೀರಾಘವೇಂದ್ರ ಮಹಾತ್ಮೆ ಸೀರಿಯಲ್​ ನಿರ್ಮಾಣವಾಗುತ್ತಿದೆ. ಇದರಲ್ಲಿ ಶ್ರೀ ರಾಘವೇಂದ್ರ ಯತಿಗಳ ಪಾತ್ರಕ್ಕೆ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತಿದೆ. ಆಸಕ್ತ ಕಲಾವಿದರು ಆಡಿಷನ್​ನಲ್ಲಿ ಭಾಗವಹಿಸುವಂತೆ ಜೀ ವಾಹಿನಿ ತಿಳಿಸಿದೆ. ಅದಕ್ಕೆಕೆಲವೊಂದು ಅರ್ಹತೆಗಳನ್ನು ನೀಡಲಾಗಿದೆ.

ಅಭ್ಯರ್ಥಿಗಳು 18ರಿಂದ 40 ವರ್ಷ ವಯಸ್ಸಿನ ಒಳಗೆ ಇರಬೇಕು. ಆಸಕ್ತರು ಸ್ವ ವಿವರಗಳೊಂದಿಗೆ ಇತ್ತೀಚಿನ ಸಾಂಪ್ರದಾಯಿಕ ಉಡುಗೆಯ ಎರಡು ಫೋಟೋ ಮಾತ್ರ ವಾಟ್ಸ್​​ಆ್ಯಪ್​ ಇಲ್ಲವೇ ಇ-ಮೇಲ್​ ವಿಳಾಸಕ್ಕೆ ಕಳುಹಿಸಬೇಕು. ರೀಲ್ಸ್​ಗಳಿಗೆ ಅವಕಾಶವಿಲ್ಲ ಎಂದು ವಾಹಿನಿ ಹೇಳಿದೆ. ಇದರ ಜೊತೆಗೆ ನಟನೆ ಬಲ್ಲವರಾಗಿರಬೇಕು, ಸ್ಪಷ್ಟವಾಗಿ ಕನ್ನಡ ಮಾತನಾಡಲು ತಿಳಿದಿರಬೇಕು. ರಂಗಭೂಮಿ, ಸಂಗೀತದ ಜ್ಞಾನ ಉಳ್ಳವರಿಗೆ ಮೊದಲ ಆದ್ಯತೆ ಆಗಿದೆ ಂದು ವಾಹಿನಿ ತಿಳಿಸಿದೆ.

ವಾಟ್ಸ್​ಆ್ಯಪ್​ ಸಂಖ್ಯೆ +91- 9513888050 ಹಾಗೂ ಇ-ಮೇಲ್​ ಐಡಿ srigururaghavendra70@gmail.com

ರಿಯಾಲಿಟಿ ಷೋಗೆ ಆಹ್ವಾನ:

ಅದೇ ರೀತಿ, ಹಳ್ಳಿ ಬದುಕಿನ ಬವಣೆಗಳನ್ನು ತೆರೆ ಮೇಲೆ ತರೋ ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಷೋ ಆರಂಭವಾಗಲಿದ್ದು, ಅದರ ಆಡಿಷನ್​ಗೆ ವಾಹಿನಿ ಕರೆದಿದೆ. ಆಡಿಷನ್ ಇದೇ 19ರಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆಯಲಿದೆ. 18ರಿಂದ 28 ವರ್ಷ ವಯಸ್ಸಿನ City Modern ಯುವತಿಯರು ಭಾಗವಹಿಸಬಹುದು! ಇದು ಹೆಣ್ಣುಮಕ್ಕಳಿಗಷ್ಟೇ ಇರುವ ಷೋ ಆಗಿದೆ.

View post on Instagram

View post on Instagram