10:41 PM (IST) Apr 18

ತವರಿನಲ್ಲೇನೋ ಸಮಸ್ಯೆ ಇದೆ, ಮಳೆಯ ಜೊತೆ ಆರ್‌ಸಿಬಿಗೆ ಕೈಕೊಟ್ಟ ಬ್ಯಾಟಿಂಗ್

ಆರ್‌ಸಿಬಿಗೆ ತವರಿನ ಪಂದ್ಯಗಳು ನಿದ್ದೆ ಬಾರದ ರಾತ್ರಿಗಳಾಗುತ್ತಿದೆ. ತವರಿನ ಕಳೆದೆರಡು ಪಂದ್ಯ ಸೋತಿರುವ ಆರ್‌ಸಿಬಿ ಈ ಬಾರಿ ಅತೀವ ಹುಮ್ಮಸ್ಸಿನೊಂದಿಗೆ ಕಣಕ್ಕಿಳಿದಿದೆ. ಆದರೆ 6 ವಿಕೆಟ್ ಕಳೆದುಕೊಂಡು ಅಭಿಮಾನಿಗಳ ಎದೆಬಡಿತ ಹೆಚ್ಚಿಸಿದೆ.

ಪೂರ್ತಿ ಓದಿ
10:40 PM (IST) Apr 18

ರೈತರಿಗೆ ಇಸ್ರೇಲ್ ಮಾದರಿ ಕೃಷಿಗೆ ಪೂರಕ ಸೌಲಭ್ಯ ಒದಗಿಸಿ: ಶಾಸಕ ಶರತ್‌ ಬಚ್ಚೇಗೌಡ

ರೈತರ ಅಭ್ಯುದಯದ ದೃಷ್ಟಿಯಿಂದ ಹಲವಾರು ಆಯಾಮಗಳಲ್ಲಿ ಕೆಲಸ ಮಾಡುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರೈತರಿಗೆ ಇಸ್ರೇಲ್ ಮಾದರಿ ಕೃಷಿಗೆ ಪೂರಕ ಸೌಲಭ್ಯಗಳನ್ನು ಒದಗಿಸುವುದು ಉತ್ತಮ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ಪೂರ್ತಿ ಓದಿ
10:40 PM (IST) Apr 18

ಕೇರಳದಲ್ಲಿ ವಿವಾದ ಎಬ್ಬಿಸಿದ ಪೊಲೀಸರ ಆನೆ ಮೆರವಣಿಗೆ; ನಡೆದಿದ್ದೇನು?

ಪೊಲೀಸ್ ಠಾಣೆಯೊಳಗೆ ಆನೆ ಪ್ರವೇಶಿಸಿದ ಘಟನೆ ವಿವಾದಕ್ಕೆ ಕಾರಣವಾಗಿದೆ. ಈ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ.

ಪೂರ್ತಿ ಓದಿ
10:31 PM (IST) Apr 18

ಮೈಸೂರಂತೆ ಬೀದರ್‌ ಅಭಿವೃದ್ಧಿಗೆ ಸಿಎಂ ಸಿದ್ದರಾಮಯ್ಯ ಸಂಕಲ್ಪ: ಸಚಿವ ಈಶ್ವರ ಖಂಡ್ರೆ

ಮೈಸೂರು ಜಿಲ್ಲೆ ಅಭಿವೃದ್ಧಿಯಾದಂತೆ ಬೀದರ್‌ ಜಿಲ್ಲೆಯನ್ನೂ ಅಭಿವೃದ್ಧಿಪಡಿಸುವ ಸಂಕಲ್ಪವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಂದಿದ್ದಾರೆ ಅದಕ್ಕಾಗಿ ಸಾವಿರಾರು ಕೋಟಿ ರು.ಗಳನ್ನು ರಾಜ್ಯದ ಕಾಂಗ್ರೆಸ್‌ ಸರ್ಕಾರ ಬೀದರ್‌ ಜಿಲ್ಲೆಗೆ ನೀಡಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು. 

ಪೂರ್ತಿ ಓದಿ
10:18 PM (IST) Apr 18

GIPKL 2025 ತಮಿಳು ಲಯನ್ಸ್ ಹಿಮ್ನೆಟ್ಟಿಸಿ ಮುನ್ನಡೆ ಪಡೆದ ಪಂಜಾಬಿ ಟೈಗರ್ಸ್

ತಮಿಳು ಲಯನ್ಸ್ vs ಪಂಜಾಬಿ ಟೈಗರ್ಸ್; GIPKL 2025 : ಗ್ಲೋಬಲ್ ಇಂಡಿಯನ್ ಪ್ರವಾಸಿ ಕಬಡ್ಡಿ ಲೀಗ್‌ನ ಮೊದಲ ಪಂದ್ಯ ಆರಂಭಗೊಂಡಿದೆ.

ಪೂರ್ತಿ ಓದಿ
10:11 PM (IST) Apr 18

ಗ್ಲೋಬಲ್ ಇಂಡಿಯನ್ ಪ್ರವಾಸಿ ಕಬಡ್ಡಿ ಲೀಗ್, ಎಲ್ಲಾ ತಂಡಗಳ ಕ್ರೀಡಾಪಟುಗಳು, ವೇಳಾಪಟ್ಟಿ ಇಲ್ಲಿದೆ

ಜಾಗತಿಕ ಭಾರತೀಯ ಪ್ರವಾಸಿ ಕಬಡ್ಡಿ ಲೀಗ್ ಟೂರ್ನಿಯ ಸಂಪೂರ್ಣ ತಂಡ ಹಾಗೂ ಕ್ರೀಡಾಪಟುಗಳ ಪಟ್ಟಿ ಇಲ್ಲಿದೆ. 

ಪೂರ್ತಿ ಓದಿ
09:51 PM (IST) Apr 18

ಮಳೆಯಿಂದ 14 ಓವರ್ ಪಂದ್ಯ, ತವರಿನಲ್ಲಿ ಟಾಸ್ ಸೋತ ಆರ್‌ಸಿಬಿ


ಬೆಂಗಳೂರಿನಲ್ಲಿ ಸುರಿದ ಮಳೆಯಿಂದ ಪಂದ್ಯ 20 ಓವರ್ ಬದಲು 14 ಓವರ್‌ಗೆ ಸೀಮಿತಗೊಳಿಸಲಾಗಿದೆ. ಆದರೆ ಆತಂಕ ಎಂದರೆ ತವರಿನಲ್ಲಿ ಮತ್ತೆ ಆರ್‌ಸಿಬಿ ಟಾಸ್ ಸೋತಿದೆ.

ಪೂರ್ತಿ ಓದಿ
09:48 PM (IST) Apr 18

ಮಮತಾ ಸಾಗರ ವಾಚಿಸಿದ ಪದ್ಯ: ದಂಗೆ ಎದ್ದ ಆರು ಸಾಲು

ಮಮತಾ ಸಾಗರ ಅವರ ಕವಿತೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕವಿತೆಯಲ್ಲಿನ ನಿರ್ಭಿಡೆಯಾದ ಹೆಣ್ಣಿನ ದನಿ ಮತ್ತು ಸಾಮಾಜಿಕ ನಿರೀಕ್ಷೆಗಳನ್ನು ಮುರಿದಿರುವುದು ಓದುಗರನ್ನು ತಲ್ಲಣಗೊಳಿಸಿದೆ. ಕವಿತೆಯ ಸತ್ಯ ಹೇಳುವ ಸ್ವಭಾವ ಮತ್ತು ಸ್ಟೀರಿಯೊಟೈಪ್‌ಗಳನ್ನು ಮುರಿಯುವ ಪ್ರವೃತ್ತಿಯೇ ಇದಕ್ಕೆ ಕಾರಣ.

ಪೂರ್ತಿ ಓದಿ
09:14 PM (IST) Apr 18

ಜಾತಿ ಗಣತಿ ವರದಿ ತರಾತುರಿಯಲ್ಲಿ ಅಂಗೀಕರಿಸಲ್ಲ: ಸಚಿವ ಸತೀಶ್‌ ಜಾರಕಿಹೊಳಿ

ಜಾತಿ ಗಣತಿ ವರದಿ ತರಾತುರಿಯಲ್ಲಿ ಅಂಗೀಕಾರ ಮಾಡುವುದಿಲ್ಲ. ವರದಿಯ ಸಾಧಕ- ಬಾಧಕಗಳ ಬಗ್ಗೆ ಚರ್ಚೆ ಮಾಡಿಯೇ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು. 

ಪೂರ್ತಿ ಓದಿ
09:05 PM (IST) Apr 18

ಯಾರು ಈ ಲೇಡಿ ಡಾನ್ ಝಿಖ್ರಾ? 17ರ ಹರೆಯದ ಬಾಲಕನ ಹತ್ಯೆಗೈದ ಶಂಕಿತ ಆರೋಪಿ

ಲೇಡಿ ಡಾನ್ ಝಿಖ್ರಾ ಹೆಸರು ಇದೀಗ ಎಲ್ಲೆಡೆ ಹರಿದಾಡುತ್ತಿದೆ. ಇತ್ತ ಪೊಲೀಸರು ಈಕೆಯ ಹುಡುಕಾಟ ಚುರುಕುಗೊಳಿಸಿದ್ದಾರೆ. ದೆಹಲಿಯ 17ರ ಹರೆಯದ ಬಾಲಕನ ಹತ್ಯೆಯ ಶಂಕಿತ ಆರೋಪಿಯಾಗಿರುವ ಈ ಲೇಡಿ ಡಾನ್‌ಗಿದೆ ಗ್ಯಾಂಗ್‌ಸ್ಟರ್ ಕನೆಕ್ಷನ್.

ಪೂರ್ತಿ ಓದಿ
09:04 PM (IST) Apr 18

ಮದುವೇಲಿ ಈ ಫ್ರೆಂಡ್ಸ್‌ಗಳು ಕೊಟ್ಟ ಕ್ವಾಟ್ಲೆ ಒಂದೊಂದಲ್ಲ ಕಣಣ್ಣ!

ಮದುವೆ ವೇದಿಕೆಯಲ್ಲಿ ಮದುಮಗನಿಗೆ ಸ್ನೇಹಿತರು ಕ್ಯೂಆರ್ ಕೋಡ್ ಸ್ಕ್ಯಾನರ್ ಮೂಲಕ ಕ್ವಾಟ್ಲೆ ಕೊಟ್ಟ ಘಟನೆ. ಒಬ್ಬೊಬ್ಬರೇ ಬಂದು ಹಣ ಹಾಕಿ ಹೋಗುವ ಮೂಲಕ ವಿನೂತನವಾಗಿ ಕ್ವಾಟ್ಲೆ ಕೊಟ್ಟಿದ್ದಾರೆ. ಮದುಮಗ ಹಾಗೂ ಮದುಮಗಳ ಪ್ರತಿಕ್ರಿಯೆಗಳು ವಿಡಿಯೋದಲ್ಲಿ ಸೆರೆಯಾಗಿದೆ.

ಪೂರ್ತಿ ಓದಿ
08:47 PM (IST) Apr 18

RCB-ಪಂಜಾಬ್ ಮ್ಯಾಚ್ ನಡೆಸಲು ಎಲ್ಲಿವರೆಗೂ ಚಾನ್ಸ್ ಇದೆ? ಕೊನೆ ಘಳಿಗೆ ಎಷ್ಟು?

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್‌ಸಿಬಿ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ಪಂದ್ಯ ಆರಂಭವಾಗುವುದು ತಡವಾಗಿದ್ದು, ಪೂರ್ಣ 20 ಓವರ್‌ಗಳ ಪಂದ್ಯ ನಡೆಯುವುದು ಅನುಮಾನ. ಕನಿಷ್ಠ 5 ಓವರ್‌ಗಳ ಪಂದ್ಯವಾಡಲು ರಾತ್ರಿ 10.54ರವರೆಗೆ ಕಾಲಾವಕಾಶವಿದೆ.

ಪೂರ್ತಿ ಓದಿ
08:44 PM (IST) Apr 18

WhatsApp ಮೇಲೆ ಕಣ್ಣಿಟ್ಟ ಕಿಡಿಗೇಡಿಗಳು; ಈ ರೀತಿ ಮಾಡಿದ್ರೆ ಮಾತ್ರ ಬಚಾವ್‌ ಆಗ್ತೀರಾ!

ವಾಟ್ಸಾಪ್ ಆಪ್‌ನಲ್ಲಿ ಏನಾಗುತ್ತಿದೆ? ನಿಮ್ಮ ವಾಟ್ಸಾಪ್, ಇತರ ಸೋಶಿಯಲ್‌ ಮೀಡಿಯಾ ಆಪ್‌ಗಳನ್ನು ಹೇಗೆ ರಕ್ಷಿಸಿಕೊಳ್ಳಬಹುದು?

ಪೂರ್ತಿ ಓದಿ
08:26 PM (IST) Apr 18

ಆನ್‌ಲೈನ್ ಪ್ರೀತಿ, ಕೊರಿಯಾ ಯುವಕನ ಮದ್ವೆಯಾಗಲು ಹೋದ ಹುಡುಗಿ ಅದೇ ಸ್ಪೀಡ್‌ಲ್ಲಿ ವಾಪಸ್

ಆನ್‌ಲೈನ್ ಮೂಲಕ ಚಾಟಿಂಗ್, ಬಳಿಕ ವಿಡಿಯೋ ಕಾಲ್, ಹೀಗೆ ಪ್ರೀತಿ ಶುರುವಾಗಿದೆ, ಗಾಢವಾಗಿದೆ. ಕೊನೆಗೆ 17ರ ವಯಸ್ಸಿನ ಭಾರತದ ಬಾಲಕಿ ತನ್ನ ಆನ್‌ಲೈನ್ ಪ್ರೀತಿಯ ಕೊರಿಯಾ ಹುಡುಗನ ಮದುವೆಯಾಗಲು ತೆರಳಿದ್ದಾಳೆ. ಆದರೆ ಆತನ ಭೇಟಿಯಾಗುತ್ತಿದ್ದಂತೆ ಭ್ರಮನಿರಸನಗೊಂಡ ಅದೇ ಸ್ಪೀಡ್‌ಲ್ಲಿ ವಾಪಾಸ್ ಆಗಿದ್ದಾಳೆ.

ಪೂರ್ತಿ ಓದಿ
08:00 PM (IST) Apr 18

ಪ್ರವಾಸಿಗರ ಹೋಟೆಲ್‌ನಲ್ಲಿ ವೇಶ್ಯಾವಾಟಿಕೆ; ಐವರು ಯುವತಿಯರ ರಕ್ಷಣೆ!

ಪ್ರವಾಸಿ ತಾಣದ ಹೋಟೆಲ್‌ವೊಂದರಲ್ಲಿ ಅಕ್ರಮ ವೇಶ್ಯಾವಾಟಿಕೆ ನಡೆಸುತ್ತಿದ್ದ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. 5 ಮಂದಿ ಯುವತಿಯರನ್ನು ರಕ್ಷಿಸಲಾಗಿದ್ದು, ಅವರು ನೇಪಾಳ ಮತ್ತು ಜಾರ್ಖಂಡ್ ಮೂಲದವರು ಎಂದು ತಿಳಿದುಬಂದಿದೆ.

ಪೂರ್ತಿ ಓದಿ
07:40 PM (IST) Apr 18

ಐಫೋನ್‌ ಬಳಕೆದಾರರಿಗೆ ಬಿಗ್‌ ಶಾಕ್‌ ಕೊಟ್ಟ Meta; ಛೇ ಹೀಗಾಗಬಾರದಿತ್ತು..!

Bad News for Iphone Users: ಐಫೋನ್‌ ಬಳಕೆದಾರರಿಗೆ ಮೆಟಾ ಒಂದು ಕಹಿ ಸುದ್ದಿ ನೀಡಿದೆ. ಏನದು?

ಪೂರ್ತಿ ಓದಿ
07:39 PM (IST) Apr 18

ಇನ್ನೂ ಹತ್ತೇ ವರ್ಷ: ವೈದ್ಯರೂ ಇರಲ್ಲ, ಶಿಕ್ಷಕರೂ ಬೇಕಿಲ್ಲ- ಬಿಲ್​ ಗೇಟ್ಸ್​ ಶಾಕಿಂಗ್​ ವಿಷ್ಯ ರಿವೀಲ್​!

ಕೃತಕ ಬುದ್ಧಿಮತ್ತೆಯ ವ್ಯಾಪ್ತಿ ಹರಡುತ್ತಲೇ ಇದ್ದು, ಇನ್ನು ಹತ್ತೇ ವರ್ಷದಲ್ಲಿ ವೈದ್ಯಕೀಯ ಮತ್ತು ಶಿಕ್ಷಣ ಲೋಕಕ್ಕೂ ಕಾಲಿಡಲಿದೆ. ಅಂದು ಏನಾಗುತ್ತದೆ ಎನ್ನುವುದನ್ನು ಹೇಳಿದ್ದಾರೆ ಬಿಲ್​ ಗೇಟ್ಸ್​!

ಪೂರ್ತಿ ಓದಿ
07:38 PM (IST) Apr 18

ನಿರ್ವಹಣೆ ಇಲ್ಲದೆ ಪಾಳುಬಿದ್ದಿದೆ ಮಡಿಕೇರಿಯ ಕೂರ್ಗ್ ವಿಲೇಜ್: ವಿಫಲಗೊಂಡ ಪ್ರವಾಸಿ ತಾಣ

ಪ್ರವಾಸೋದ್ಯಮದ ಪಾಲಿಗೆ ಕೊಡಗು ಜಿಲ್ಲೆ ಚಿನ್ನದ ಮೊಟ್ಟೆ ಇಡೋ ಕೋಳಿ. ಹಾಗಾಗಿಯೇ ರಾಜ್ಯ ಸರ್ಕಾರ ಇತ್ತೀಚೆಗೆ ಕೊಡಗಿನ ಪದ್ಧತಿ, ಆಚಾರ ವಿಚಾರ ಇಲ್ಲಿನ ಬೆಳೆಗಳಿಗೂ ಉತ್ತೇಜನ ನೀಡಿ ಸಂಸ್ಕೃತಿ ಸಾರಲು ಕೂರ್ಗ್ ವಿಲೇಜ್ ಎಂಬ ಕಲ್ಪನೆಯನ್ನ ಹುಟ್ಟುಹಾಕಿ ಅದಕ್ಕೆ ಕೋಟ್ಯಂತರ ರೂಪಾಯಿ ಹೂಡಿಕೆ ಕೂಡ ಮಾಡಿತ್ತು.

ಪೂರ್ತಿ ಓದಿ
07:27 PM (IST) Apr 18

ವಂದೇ ಭಾರತ್ ಸ್ಲೀಪರ್ ರೈಲು: ಈ ವರ್ಷಾಂತ್ಯದಲ್ಲಿ ಮಂಗಳೂರಿಗೆ

ತಿರುವನಂತಪುರಂ-ಮಂಗಳೂರು ಮಾರ್ಗದಲ್ಲಿ ವಂದೇ ಭಾರತ್ ಸ್ಲೀಪರ್ ರೈಲು ಈ ವರ್ಷಾಂತ್ಯದಲ್ಲಿ ಸಂಚರಿಸುವ ನಿರೀಕ್ಷೆ ಇದೆ. 16 ಬೋಗಿಗಳ ಹೈಸ್ಪೀಡ್ ರೈಲು ಇದಾಗಿದ್ದು, ಹಲವು ಆಧುನಿಕ ಸೌಲಭ್ಯಗಳನ್ನು ಹೊಂದಿರುತ್ತದೆ. ಯಶವಂತಪುರ-ಮಂಗಳೂರು ರೈಲು ಸಂಚಾರವನ್ನು ಸೆಂಟ್ರಲ್‌ಗೆ ವಿಸ್ತರಿಸಲು ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಲಾಗಿದೆ.

ಪೂರ್ತಿ ಓದಿ
07:26 PM (IST) Apr 18

ನಾರಾಯಣ ಮೂರ್ತಿಯ 17 ತಿಂಗಳ ಮೊಮ್ಮಗನ ಈ ವರ್ಷದ ಆದಾಯ 3.3 ಕೋಟಿ ರೂ

ನಾರಾಯಣ ಮೂರ್ತಿ ಮೊಮ್ಮಗನ ವಯಸ್ಸು ಕೇವಲ 1 ವರ್ಷ ನಾಲ್ಕು ತಿಂಗಳು. ಆದರೆ ಆದಾಯ ಯಾವ ಸಿಇಒಗಿಂತ ಕಡಿಮೆ ಇಲ್ಲ. ಈ ವರ್ಷ ಈ ಪುಟ್ಟ ಕಂದ 3.3 ಕೋಟಿ ರೂಪಾಯಿ ಆದಾಯಗಳಿಸಿದ್ದಾನೆ. ಈ ಮಗು ಪುಟ್ಟ ಪುಟ್ಟ ಹೆಜ್ಜೆ ಇಡುವಾಗಲೇ ಜೇಬು ಗಟ್ಟಿ ಮಾಡಿದ್ದು ಹೇಗೆ? 

ಪೂರ್ತಿ ಓದಿ