Asianet Suvarna News Asianet Suvarna News

ಗಣಪತಿ ಪೆಂಡಾಲ್‌ನಲ್ಲಿ ಹಾಡು ಹಾಕುವ ವಿಚಾರಕ್ಕೆ ಜಗಳ; ಬಿಹಾರ ಮೂಲದ ಯುವಕನ ಕೊಲೆ!

ಗಣಪತಿ ಪೆಂಡಾಲಿನಲ್ಲಿ ಹಾಡು ಹಾಕುವ ವಿಚಾರಕ್ಕೆ ಗಲಾಟೆಯಾಗಿ ಬಿಹಾರ ಮೂಲದ ಯುವಕನ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ತುಮಕೂರು ನಗರದ ಅಂತಸರನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.

young man from bihar murdered by his friends during ganesh festival songs change antasaranahalli tumakuru rav
Author
First Published Sep 10, 2024, 11:17 PM IST | Last Updated Sep 10, 2024, 11:17 PM IST

ತುಮಕೂರು (ಸೆ.10): ಗಣಪತಿ ಪೆಂಡಾಲಿನಲ್ಲಿ ಹಾಡು ಹಾಕುವ ವಿಚಾರಕ್ಕೆ ಗಲಾಟೆಯಾಗಿ ಬಿಹಾರ ಮೂಲದ ಯುವಕನ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ತುಮಕೂರು ನಗರದ ಅಂತಸರನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.

ಚೋಟನ್ ಕುಮಾರ್(19) ಕೊಲೆಯಾದ ಯುವಕ, ಬಿಹಾರದ ರಾಂಬಾಬು, ಮೌಂಟು ಕುಮಾರ್, ಸಂಜೀವ್ ಕುಮಾರ್, ಕೊಲೆ ಮಾಡಿದ ಆರೋಪಿಗಳು. 

ಗಣೇಶ ವಿಸರ್ಜನೆ ವೇಳೆ ಡಿಜೆ ಬಳಕೆ ಮಾಡದೆ ಅದೇ ಹಣದಿಂದ ರಸ್ತೆ ರಿಪೇರಿ ಕಿನ್ನಾಳ ಗ್ರಾಮಸ್ಥರು!

ಸೆ.7ರಂದು ಗಣಪತಿ ಪ್ರತಿಷ್ಠಾಪನೆ ನಂತರ ಹಾಡು ಹಾಕಲಾಗಿತ್ತು. ಹಾಡು ಬದಲಾಯಿಸುವ ವಿಚಾರಕ್ಕೆ ಯುವಕ ಹಾಗೂ ಆರೋಪಿಗಳ ನಡುವೆ ಜಗಳ ನಡೆದಿತ್ತು. ಈವೇಳೆ ಚೋಟನ್ ಕುಮಾರ ಕುತ್ತಿಗೆ, ಬೆನ್ನುಗೆ ಚಾಕು ಇರಿದಿದ್ದ ಆರೋಪಿಗಳು ಇದರಿಂದ ಗಂಭೀರ ಗಾಯಗೊಂಡಿದ್ದ ಮೃತ ಯುವಕ. ಕೂಡಲೇ ಶ್ರೀದೇವಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಯುವಕ. ಹತ್ಯೆ ಘಟನೆ ಸಂಬಂಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Videos
Follow Us:
Download App:
  • android
  • ios