Asianet Suvarna News Asianet Suvarna News

ಬಿರಿಯಾನಿ ಹಣಕ್ಕಾಗಿ ಯುವಕನ ಕತ್ತು ಹಿಸುಕಿ ಇರಿದು ಕೊಂದ; ನಂತರ ಶವದ ಮೇಲೆ ಡ್ಯಾನ್ಸ್‌ ಮಾಡಿದ ಬಾಲಕ!

ಬಿರಿಯಾನಿಗೆ 350 ರೂ. ಹಣ ಕದಿಯೋ ವಿಚಾರಕ್ಕೆ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹದಿಹರೆಯದ ಹುಡುಗ ಯುವಕನಿಗೆ ಇರಿದಿದ್ದು ಮತ್ತು ಶವದ ಮೇಲೆ ನಿಂತು ನೃತ್ಯ ಮಾಡುವುದನ್ನು ಸಹ ಸಿಸಿಟಿವಿ ದೃಶ್ಯಾವಳಿಗಳು ತೋರಿಸಿದೆ.

boy strangles man then stabs him 60 times dances over body caught on camera ash
Author
First Published Nov 23, 2023, 3:14 PM IST

ನವದೆಹಲಿ (ನವೆಂಬರ್ 23, 2023): 18 ವರ್ಷದ ಯುವಕನೊಬ್ಬನಿಗೆ ಹದಿಹರೆಯದ ಬಾಲಕ ಕತ್ತು ಹಿಸುಕಿ, ನಂತರ ಸುಮಾರು 60ಕ್ಕೂ ಹೆಚ್ಚು ಬಾರಿ ಇರಿದು ಕೊಂದ ಘಟನೆ ಮಂಗಳವಾರ ರಾತ್ರಿ ದೆಹಲಿಯಲ್ಲಿ ನಡೆದಿದೆ. ಅಲ್ಲದೆ, ಕೊಲೆ ಮಾಡಿದ ಬಳಿಕ ಯುವಕ ಶವದ ಪಕ್ಕದಲ್ಲಿ ಹಾಗೂ ಮೇಲೆ ಡ್ಯಾನ್ಸ್ ಮಾಡುತ್ತಿರುವುದು ಸಹ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬಿರಿಯಾನಿ ತಿನ್ನಲು ಹಣ ಕದಿಯುವುದೇ ಕೊಲೆಗೆ ಪ್ರೇರಣೆಯಾಗಿದೆ ಎನ್ನಲಾಗಿದೆ.

ಈಶಾನ್ಯ ದೆಹಲಿಯಲ್ಲಿ 350 ರೂ. ಹಣ ಕದಿಯೋ ವಿಚಾರಕ್ಕೆ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹದಿಹರೆಯದ ಹುಡುಗ ಬಲಿಪಶು ಯುವಕನಿಗೆ ಇರಿದಿದ್ದು ಮತ್ತು ಒಂದು ಹಂತದಲ್ಲಿ ಶವದ ಮೇಲೆ ನಿಂತು ನೃತ್ಯ ಮಾಡುವುದನ್ನು ಸಹ  ಸಿಸಿಟಿವಿ ದೃಶ್ಯಾವಳಿಗಳು ತೋರಿಸಿದೆ. ಆತ ಸಂತ್ರಸ್ತನಿಗೆ 60ಕ್ಕೂ ಹೆಚ್ಚು ಬಾರಿ ಇರಿದಿದ್ದಾನೆ ಎಂದು ವರದಿಗಳು ತಿಳಿಸಿವೆ.

ಇದನ್ನು ಓದಿ: ಕಾಮುಕ ಪ್ರಿನ್ಸಿಪಾಲ್‌ ಕಿರುಕುಳ: ಸರ್ಕಾರಿ ಶಾಲೆಯ 142 ಅಪ್ರಾಪ್ತೆಯರಿಗೆ ಲೈಂಗಿಕ ದೌರ್ಜನ್ಯ!

ಆರೋಪಿಯು ಮೊದಲು ಯುವಕನನ್ನು ಕತ್ತು ಹಿಸುಕಿ, ಪ್ರಜ್ಞೆ ತಪ್ಪಿಸಿ, ಅನೇಕ ಬಾರಿ ಇರಿದಿದ್ದಾನೆ. ಕೊಲೆಯ ಹಿಂದಿನ ಉದ್ದೇಶ ದರೋಡೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಿರಿಯಾನಿ ತಿನ್ನಲು ಸುಮಾರು 350 ರೂ. ಹಣ ಕದಿಯೋ ಪ್ರಯತ್ನವಾಗಿ ಈ ಕೊಲೆ ನಡೆದಿದೆ ಎಂದು ಹೇಳಲಾಗಿದೆ. 

16 ವರ್ಷ ವಯಸ್ಸಿನ ಅಪ್ರಾಪ್ತ ಆರೋಪಿ ಯುವಕನನ್ನು ದರೋಡೆ ಮಾಡಿದ್ದಾನೆ. ಅದನ್ನು ವಿರೋಧಿಸಿದ್ದಕ್ಕೆ ಬಳಿಕ ದಾಳಿ ಮಾಡಿ ಇರಿದು ಕೊಂದಿದ್ದಾನೆ. ಇಬ್ಬರಿಗೂ ಪರಿಚಯವಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಅಪ್ರಾಪ್ತ ಆರೋಪಿ ಯುವಕನ ಶವವನ್ನು ಕಿರಿದಾದ ರಸ್ತೆಯಲ್ಲಿ ಎಳೆದುಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. 

ಇದನ್ನು ಓದಿ: ಮದುವೆಯಲ್ಲಿ ರಸಗುಲ್ಲಾಕ್ಕಾಗಿ ಹೊಡೆದಾಟ: 6 ಜನ ಆಸ್ಪತ್ರೆ ಪಾಲು; ಎಫ್‌ಐಆರ್‌ ದಾಖಲು

ಅಲ್ಲದೆ, ಅವನು ಸತ್ತಿದ್ದಾನೆ ಎಂದು ಖಚಿತಪಡಿಸಿಕೊಳ್ಳಲು ಬಲಿಪಶುವಿನ ಕುತ್ತಿಗೆಗೆ ಪದೇ ಪದೇ ಇರಿದಿದ್ದಾನೆ. ಅಲ್ಲದೆ, ಆತನ ತಲೆಗೂ ಕೆಲವು ಬಾರಿ ಒಡೆದಿದ್ದಾನೆ. ನಂತರ ನಿರ್ಜೀವ ದೇಹದ ಮೇಲೆ ನಿಂತು ಹಾಗೂ ಶವದ ಪಕ್ಕದಲ್ಲಿ ನಿಂತು ನೃತ್ಯ ಮಾಡಲು ಪ್ರಾರಂಭಿಸುತ್ತಾನೆ ಎಂಬುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮಂಗಳವಾರ ರಾತ್ರಿ 11.15 ರ ಸುಮಾರಿಗೆ ಪಿಸಿಆರ್ ಕರೆ ಬಂದಿದ್ದು, ಸ್ವಾಗತ ಪ್ರದೇಶದ ಜಂತಾ ಮಜ್ದೂರ್ ಕಾಲೋನಿಯಲ್ಲಿ ದರೋಡೆ ಮಾಡುವ ಉದ್ದೇಶದಿಂದ ಸುಮಾರು 18 ವರ್ಷ ವಯಸ್ಸಿನ ಯುವಕನನ್ನು ಅಪ್ರಾಪ್ತ ವಯಸ್ಕನು ಚಾಕುವಿನಿಂದ ಇರಿದು ಕೊಂದಿದ್ದಾನೆ ಎಂದು ಪೊಲೀಸ್ ಉಪ ಆಯುಕ್ತ (ಈಶಾನ್ಯ) ಜಾಯ್ ಟಿರ್ಕಿ ಹೇಳಿದ್ದಾರೆ. ಸಂತ್ರಸ್ತನನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅವನು ಸತ್ತಿದ್ದಾನೆ ಎಂದು ಘೋಷಿಸಲಾಯಿತು ಎಂದೂ ಅವರು ಹೇಳಿದ್ದಾರೆ. 

ಇದನ್ನೂ ಓದಿ: ಹುಲ್ಲಿನ ಬಣವೆಯಲ್ಲಿ ಪ್ರಿಯಕರನ ಜತೆ ಪತ್ನಿ ರಾಸಲೀಲೆ: ಬಣವೆಗೆ ಬೆಂಕಿ ಹಚ್ಚಿ ಪತ್ನಿ ಜೀವಂತವಾಗಿ ಸುಟ್ಟು ಹಾಕಿದ ಪತಿ

.ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ನಂತರ ಆತ 350 ರೂ. ಕಳ್ಳತನ ಮಾಡಿದ್ದು, ಸತ್ತ ಯುವಕನ ಗುರುತು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಫೋರೆನ್ಸಿಕ್ ತಂಡವೂ ಸ್ಥಳಕ್ಕೆ ಭೇಟಿ ನೀಡಿದೆ.

ಪ್ರಸ್ತುತ ಕೊಲೆ ಆರೋಪ ಎದುರಿಸುತ್ತಿರುವ ಅಪ್ರಾಪ್ತ ಬಾಲಕ ಈ ಹಿಂದೆ 2022ರಲ್ಲಿ ನಡೆದ ಮತ್ತೊಂದು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ. ಆ ಅಪರಾಧವೂ ದರೋಡೆಯಿಂದ ಪ್ರೇರೇಪಿಸಲ್ಪಟ್ಟಿದೆ ಎನ್ನಲಾಗಿದೆ.

ಇದನ್ನೂ ಓದಿ: ಉದ್ಯಮಿ ಮನೆ ದರೋಡೆಗೆ ಬಂದೋರು ಕಳ್ಳತನದ ಜತೆಗೆ ಮನೆಯೊಡತಿಯ ಸಾಮೂಹಿಕ ಅತ್ಯಾಚಾರ ಮಾಡಿದ್ರು!

ಆರೋಪಿಯು ಅಪ್ರಾಪ್ತ ವಯಸ್ಕರ ಗುಂಪಿನ ಭಾಗವಾಗಿದ್ದು, ಹಿಂಸಾತ್ಮಕ ಅಪರಾಧಗಳ ಸರಮಾಲೆಗೆ ಕಾರಣರಾಗಿದ್ದಾರೆ ಎಂದು ತಿಳಿದುಬಂದಿದೆ. ಇತ್ತೀಚೆಗಷ್ಟೇ ಕೊಲೆಯಾದ ಸಂದರ್ಭದಲ್ಲಿ ತಾನು ಕುಡಿದ ಅಮಲಿನಲ್ಲಿದ್ದೆ ಎಂದು ಆರೋಪಿ ವಿಚಾರಣೆ ವೇಳೆ ಹೇಳಿಕೊಂಡಿದ್ದಾನೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ.

Follow Us:
Download App:
  • android
  • ios