ಕಾನ್ ಅಂದ್ರೆ ಫ್ಯಾಷನ್ ಶೋ ಅಲ್ಲ, ಇದೊಂದು ಚಿತ್ರೋತ್ಸವ: ಕಿಡಿಕಾರಿದ ವಿವೇಕ್ ಅಗ್ನಿಹೋತ್ರಿ
ಕಾನ್ ಅಂದ್ರೆ ಫ್ಯಾಷನ್ ಶೋ ಅಲ್ಲ, ಇದೊಂದು ಚಿತ್ರೋತ್ಸವ ಎಂದು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕಿಡಿಕಾರಿದ್ದಾರೆ.
ಪ್ರತಿಷ್ಠಿತ ಕಾನ್ ಫಿಲ್ಮ್ ಫೆಸ್ಟಿವಲ್ ನಡೆಯುತ್ತಿದೆ. ಚಿತ್ರೋತ್ಸವದಲ್ಲಿ ಜಗತ್ತಿನ ಅನೇಕ ನಟಿಮಣಿಯರು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿ ಗಮನ ಸೆಳೆಯುತ್ತಿದ್ದಾರೆ. ಭಾರತದ ಅನೇಕ ಸೆಲೆಬ್ರಿಟಿಗಳು ಕಾನ್ ಫಿಲ್ಮ್ ಫೆಲ್ಟಿವಲ್ನಲ್ಲಿ ಮಿಂಚಿದ್ದಾರೆ. ಅನೇಕರು ವಿಭಿನ್ನ ರೀತಿಯ ಡ್ರೆಸ್ ಧರಿಸಿ ಹೆಜ್ಜೆ ಹಾಕಿ ವಿಶ್ವದ ಗಮನ ಸೆಳೆಯುತ್ತಿದ್ದಾರೆ. ಇದು ಬಾಲಿವುಡ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ಕೆಂಗಣ್ಣಿಗೆ ಗುರಿಯಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿವೇಕ್ ಅಗ್ನಿಹೋತ್ರಿ ಕಾನ್ ಫೆಸ್ಟಿವಲ್ ಎಂದರೆ ಚಿತ್ರೋತ್ಸವವೇ ಹೊರತು ಫ್ಯಾಷನ್ ಶೋ ಅಲ್ಲ' ಎಂದು ಕಿಡಿ ಕಾರಿದ್ದಾರೆ. ಇದನ್ನು ಮೊದಲು ವಿವೇಕ್ ಅಗ್ನಿಹೋತ್ರಿ ಐಶ್ವರ್ಯಾ ರೈ ಅವರ ಕಾಸ್ಟ್ಯೂಮ್ ಸಹಾಯಕರ ಬಗ್ಗೆ ಪ್ರತಿಕ್ರಿಯೆ ನೀಡಿ ಗುಲಾಮರು ಎಂದು ಅಣಕಿಸಿದ್ದರು.
ಈ ಬಾರಿಯ ಕಾನ್ ಫೆಸ್ಟಿವಲ್ನಲ್ಲಿ ಬಾಲಿವುಡ್ನ ಅನೇಕ ಮಂದಿ ಹೆಜ್ಜೆ ಹಾಕಿದ್ದರು. ಸಾರಾ ಅಲಿ ಖಾನ್, ಮೃಣಾಲ್ ಠಾಕೂರ್, ಐಶ್ವರ್ಯಾ ರೈ, ಊರ್ವಶಿ ಸೇರಿದಂತೆ ಅನೇಕರು ಕಾನ್ನಲ್ಲಿ ಮಿಂಚಿದ್ದಾರೆ. ಇದರ ಬೆನ್ನಲ್ಲೇ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಟ್ವೀಟ್ ಮಾಡಿದ್ದು ಇದೇನು ಫ್ಯಾಷನ್ ಶೋನಾ ಎಂದು ತರಾಟೆ ತೆಗೆದುಕೊಂಡಿದ್ದಾರೆ. 'ನಿಮಗೆ ಗೊತ್ತಾ ಕಾನ್ ಚಲನಚಿತ್ರೋತ್ಸವದ ಬಗ್ಗೆ? ಇದು ಫ್ಯಾಷನ್ ಶೋ ಎಂದು ಭಾವಿಸಿದವರಿಗೆ ನಾನು ನಿಮಗೆ ನೆನಪಿಸುತ್ತಿದ್ದೀನಿ' ಎಂದು ಹೇಳಿದ್ದಾರೆ. ವಿವೇಕ್ ಅಗ್ನಿಹೋತ್ರಿ ಮಾತಿಗೆ ಅನೇಕರು ಪರ ವಿರೋಧ ಚರ್ಚೆ ನಡೆಸುತ್ತಿದ್ದಾರೆ. ಮೀರಾ ಚೋಪ್ರಾ ಪ್ರತಿಕ್ರಿಯೆ ನೀಡಿ, 'ಇದು ತುಂಬಾ ಬೇಸರದ ಸಂಗತಿ. ಕಳೆದ ವರ್ಷ ನಾನು ಕೂಡ ಇದೇ ಮಾತನ್ನು ಹೇಳಿದ್ದೆ. ಇದು ಫ್ಯಾಷನ್ ಪರೇಡ್ ಆಗಿದೆ. ನೀವು ಏನು ಧರಿಸಿದ್ದೀರಿ, ಎಲ್ಲಿ ಕಾಣಿಸಿಕೊಂಡಿದ್ದೀರಿ ಎನ್ನುವುದು ಮಾತ್ರ ಬಾಲಿವುಡ್ ಮಾತನಾಡುತ್ತಿದೆ. ಇದು ಎಲ್ಲಾ ದೇಶದಲ್ಲೂ ಒಂದೇ ರೀತಿಯಾಗಿಲ್ಲ. ಅವರು ನಮ್ಮಂತೆ ಫ್ಯಾಷನ್ ಹುಚ್ಚರಲ್ಲ' ಎಂದು ಹೇಳಿದ್ದಾರೆ.
ಐಶ್ವರ್ಯಾ ಕಾಸ್ಟ್ಯೂಮ್ ಸಹಾಯಕರಿಗೆ 'ಗುಲಾಮರು' ಎಂದು ಅಗ್ನಿಹೋತ್ರಿ ಕಿಡಿ; ನಿರ್ದೇಶಕರ ವಿರುದ್ಧ ಫ್ಯಾನ್ಸ್ ಗರಂ
ಅನೇಕರು ಅಗ್ನಿಹೋತ್ರಿ ಮಾತನ್ನು ಬೆಂಬಲಿಸಿದ್ರೆ ಇನ್ನು ಕೆಲವರು ಕಿಡಿ ಕಾರುತ್ತಿದ್ದಾರೆ. ಹೊಚ್ಚೆಕಿಚ್ಚು ಎಂದು ಕಾಮೆಂಟ ಮಾಡುತ್ತಿದ್ದಾರೆ. ನಮ್ಮ ದೇಶದ ನಟಿಯರು ಜಾಗತ್ತಿಕ ಈವೆಂಟ್ನಲ್ಲಿ ಮಿಂಚಿದರೆ ಖುಷಿ ಪಡಬೇಕು ಅದು ಬಿಟ್ಟು ಅಸೂಯೇ ಪಡಬಾರದು ಎಂದು ಹೇಳುತ್ತಿದ್ದಾರೆ. ಉರ್ಪಿ ಜಾವೇದ್ ಕೂಡ ನಿರ್ದೇಶಕ ಅಗ್ನಿಹೋತ್ರಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಊಹಿಸಲಾಗದ ದ್ವೇಷ ಅನುಭವಿಸ್ತೀರಿ: 'ದಿ ಕೇರಳ ಸ್ಟೋರಿ' ತಂಡಕ್ಕೆ 'ಕಾಶ್ಮೀರ್ ಫೈಲ್ಸ್' ನಿರ್ದೇಶಕ ಎಚ್ಚರಿಕೆ
ಐಶ್ವರ್ಯಾ ರೈ ವಿರುದ್ಧ ಅಗ್ನಿಹೋತ್ರಿ ಕಿಡಿ
ಐಶ್ವರ್ಯಾ ಅವರ ರೆಡ್ ಕಾರ್ಪೆಟ್ ವಾಕ್ ಅನ್ನು ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ ಅಗ್ನಿಹೋತ್ರಿ ಅಣಕಿಸಿದ್ದರು. ಉದ್ದವಾದ ಗೌನ್ ಹಾಕಿದ್ರೆ ವಾಕ್ ಮಾಡಲು ಕಷ್ಟವಾಗುತ್ತದೆ ಹಾಗಾಗಿ ಕಾಸ್ಟ್ಯೂಮ್ ಡಿಸೈನರ್ ಪಕ್ಕದಲ್ಲೇ ಇದ್ದು ಸಹಾಯ ಮಾಡುತ್ತಾರೆ. ಇದನ್ನು ನೋಡಿ ವಿವೇಕ್ ಅಗ್ನಿಹೋತ್ರಿ ಗುಲಾಮರು ಎಂದು ಹೇಳಿದ್ದರು. ಐಶ್ವರ್ಯಾ ರೈ ಅವರ ಫೋಟೋ ಶೇರ್ ಮಾಡಿ ಅಗ್ನಿಹೋತ್ರಿ, 'ನೀವು ಕಾಸ್ಟ್ಯೂಮ್ ಗುಲಾಮರು ಎನ್ನುವ ಪದ ಕೇಳಿದ್ದೀರಾ? ಅದರಲ್ಲೂ ಹೆಚ್ಚಾಗಿ ಹುಡುಗಿಯರು. ನೀವು ಈಗ ಅವರನ್ನು ಭಾರತದಲ್ಲಿಯೂ ಸಹ ಪ್ರತಿಯೊಬ್ಬ ಮಹಿಳಾ ಸೆಲೆಬ್ರಿಟಿಗಳೊಂದಿಗೆ ನೋಡಬಹುದು. ಇಂತಹ ಅಹಿತಕರ ಫ್ಯಾಷನ್ಗಾಗಿ ನಾವು ಏಕೆ ಮೂರ್ಖರಾಗುತ್ತಿದ್ದೇವೆ ಮತ್ತು ದಬ್ಬಾಳಿಕೆ ಮಾಡುತ್ತಿದ್ದೇವೆ?' ಎಂದು ಅಗ್ನಿಹೋತ್ರಿ ಪ್ರಶ್ನೆ ಮಾಡಿದ್ದಾರೆ.