Asianet Suvarna News Asianet Suvarna News

ಹಿಂದು ಮುಸ್ಲಿಂ ಮದ್ವೆ ಆಗ್ಬಾರ್ದಾ? ತಲಾಖ್ ಹೇಳ್ತೀನಿ ಎಂದು ಪತಿ ಆದಿಲ್ ಬೆದರಿಕೆ ಹಾಕುತ್ತಿದ್ದಾರೆ: ರಾಖಿ ಸಾವಂತ್

ನನ್ನ ಧರ್ಮ ಬಿಟ್ಟು ಇಸ್ಲಾಂಗೆ ಮತಾಂತರ ಮಾಡಿಕೊಂಡಿರುವೆ. ಆದಿಲ್ ನನ್ನ ಗಂಡ ನ್ಯಾಯಬೇಕು ಎಂದು ಮೈಸೂರಿನ ಕೂಗಾಡಿದ ರಾಖಿ... 

Sold my jewellery for adil khan says Rakhi sawant in mysore vcs
Author
First Published Feb 23, 2023, 11:14 AM IST

ಬಾಲಿವುಡ್ ಕಾಂಟ್ರವರ್ಸಿ ಕ್ವೀನ್ ರಾಖಿ ಸಾವಂತ್ ಈಗ ಮೈಸೂರಿನ ಸೊಸೆ. ಕೆಲವು ದಿನಗಳಿಂದ ರಾಖಿ ಸಾವಂತ್ ಮತ್ತು ಆದಿಲ್ ಖಾನ್ ದಾಂಪತ್ಯ ಕಲಹ ಬೀದಿಗೆ ಬಂದು ನಿಂತಿದೆ. ಆದಿಲ್ ನನ್ನನ್ನು ಬಿಟ್ಟು ಹೋಗಿದ್ದಾನೆ, ಮೋಸ ಮಾಡಿದ್ದಾನೆ ಹಣ ಪಡೆದುಕೊಂಡಿದ್ದಾ ಅಲ್ಲದೆ ಮತ್ತೊಬ್ಬ ಯುವತಿ ಜೊತೆ ಅನೈತಿಕ ಸಂಬಂಧ ಹೊಂದಿದ್ದಾರೆ ಎನ್ನುವ ಆರೋಪ ಮಾಡಿ ಕಂಬಿ ಹಿಂದೆ ನಿಲ್ಲುವಂತೆ ರಾಖಿ ಮಾಡಿದ್ದಾರೆ. ಈಗ ಪತಿಯನ್ನು ಬಿಡುವುದಿಲ್ಲ ಎನ್ನು ಹೈ-ಡ್ರಾಮಾ ಶುರು ಮಾಡಿದ್ದಾರೆ. 

ಆದಿಲ್ ಮೂಲತಃ ಮೈಸೂರಿನವರು ಹೀಗಾಗಿ ಎರಡು ಮೂರು ದಿನಗಳಿಂದ ಮೈಸೂರು ಕೋರ್ಟ್‌ಗೆ ಹಾಜರಾಗಿ ನ್ಯಾಯ ಕೊಡಿಸಿ ಎಂದು ಅಂಗಾಲಾಚಿದ್ದಾರೆ. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಬಿಗ್ ಬಾಸ್ ಸ್ಪರ್ಧಿ ' ಆದಿಲ್ ನನ್ನನ್ನು ಮದುವೆಯಾಗಿದ್ದಾರೆ. ನನಗೆ ನ್ಯಾಯ ಬೇಕು. ಇಂದು ಬೆಳಗ್ಗೆ ಆದಿಲ್ ತಂದೆ ಜೊತೆ ಮಾತನಾಡಿರುವೆ. ನಾನು ಹಿಂದೂ ಆಗಿರುವ ಕಾರಣ ನನ್ನನ್ನು ಒಪ್ಪಿಕೊಳ್ಳುವುದಿಲ್ಲ ಎನ್ನುತ್ತಿದ್ದಾರೆ.  ಆದರೆ ಆದಿಲ್‌ಗಾಗಿ ಇಸ್ಲಾಂಗೆ ಮತಾಂತರ ಮಾಡಿಕೊಂಡಿರುವೆ. ನಾನು ಇಸ್ಲಾಂ ಧರ್ಮವನ್ನು ಒಪ್ಪಿಕೊಂಡು ಆದಿಲ್‌ನ ಮದುವೆ ಆಗಿರುವೆ ಎನ್ನುವ ವಿಚಾರವನ್ನು ಅವರಿಗೆ ತಿಳಿಸುತ್ತಿದ್ದಂತೆ ನನ್ನ ಕರೆ ಸ್ವೀಕರಿಸುತ್ತಿಲ್ಲ. ತಲಾಖ್‌ ಕೊಡುವುದಾಗಿ ಪತಿ ಆದಿಲ್ ಹೆದರಿಸುತ್ತಿದ್ದಾರೆ' ಎಂದು ರಾಖಿ ಸಾವಂತ್ ಮಾತನಾಡಿದ್ದಾರೆ.

Rakhi Sawant; ನಮಾಜ್ ಮಾಡಿದ ರಾಖಿ ಸಾವಂತ್, ಸಖತ್ ಟ್ರೋಲ್

'ಯಾವ ಕಾರಣಕ್ಕೂ ಅದಿಲ್‌ಗೆ ವಿಚ್ಛೇದನ ಕೊಡುವುದಿಲ್ಲ. ಅದಿಲ್ ಪತ್ನಿ ನಾನು. ಅವರ ತಂದೆ ನನ್ನ ಜೊತೆ ಅಸಭ್ಯವಾಗಿ ಮಾತನಾಡುತ್ತಿದ್ದಾರೆ. ಮೈಸೂರಿನಲ್ಲಿ ನನಗೆ ಯಾರೂ ಗೊತ್ತಿಲ್ಲ ಹೀಗಾಗಿ ನ್ಯಾಯ ಕೊಡಿಸಿ.  ಇಸ್ಲಾಂನ ಸಂಪೂರ್ಣವಾಗಿ ಒಪ್ಪಿಕೊಂಡಿರುವೆ. ನನ್ನ ಮದುವೆಗೆ ಸಂಬಂಧ ಪಟ್ಟ ಎಲ್ಲಾ ಪತ್ರಗಳು ನನ್ನ ಬಳಿ ಇದೆ. ಈಗ ನಾನು ಎಲ್ಲಿ ಹೋಗಬೇಕು? ಏನು ಮಾಡಬೇಕು?' ಎಂದು ರಾಖಿ ಹೇಳಿದ್ದಾರೆ. 

'ಒಂದು ವರ್ಷ 8 ತಿಂಗಳ ಹಿಂದೆ ಇದೇ ಮೈಸೂರಿನಲ್ಲಿ ಆದಿಲ್‌ನ ನಾನು ಭೇಟಿ ಮಾಡಿದ್ದು. ಈಗ ಮದುವೆಯಾಗಿ ಈ ಊರಿಗೆ ಬಂದಿರುವೆ. ನಾನು ಇಸ್ಲಾಂನ ಒಪ್ಪಿಕೊಂಡು Nikah ಮಾಡಿಕೊಂಡೆ. ಮುಂಬೈನಲ್ಲಿ ನಮ್ಮ ಮದುವೆ ರಿಜಿಸ್ಟರ್ ಆಗಿತ್ತು. ನಾನು ಮದುವೆ ಮಾಡಿಕೊಂಡು ಮಕ್ಕಳು ಮಾಡಿಕೊಂಡು ನೆಮ್ಮದಿಯಾಗಿ ಜೀವನ ನಡೆಸೋಣ ಎಂದು ಆದಿಲ್ ಮಾತು ಕೊಟ್ಟಿದ್ದರು. ನಮ್ಮದೇ ಫ್ಯಾಮಿಲಿ ಆದ ಮೇಲೆ ವಿಶ್ವಾದ್ಯಂತ ಸುತ್ತಾಡಿಕೊಂಡು ಕಪಲ್ ಗೋಲ್ ಸೆಟ್ ಮಾಡೋಣ ಎಂದು ಹೇಳಿ ಬೇರೆ ಹುಡುಗಿ ಜೊತೆ ಜೀವನ ನಡೆಸುತ್ತಿದ್ದಾನೆ' ಎಂದಿದ್ದಾರೆ ರಾಖಿ. 

'ನಾನೂ ಕೂಡ ಫ್ರಿಡ್ಜ್‌ನಲ್ಲಿ ಹೋಗ್ತಿದ್ದೆ.. ದೇವರು ದೊಡ್ಡವನು ಬಚಾವ್‌ ಆದೆ..!' ಎಂದ ರಾಖಿ ಸಾವಂತ್‌!

'ಆದಿಲ್ ಸಿರಿವಂತ ಎನ್ನುತ್ತಾರೆ ಜನರು ಆದರೆ ಅದೆಲ್ಲಾ ದೊಡ್ಡ ಸುಳ್ಳು. ನನ್ನ ಚಿನ್ನವನ್ನು ಮಾರಾಟ ಮಾಡಿ ಅವನಿಗೆ ಹಣ ಕೊಟ್ಟಿರುವೆ ಅಷ್ಟರ ಮಟ್ಟಕ್ಕೆ ನನಗೆ ತೊಂದರೆ ಕೊಟ್ಟಿದ್ದಾನೆ. ಐದು ವರ್ಷಗಳಿಂದ ಮೈಸೂರಿನಲ್ಲಿರುವ ಇರಾನಿ ಹುಡುಗಿ ಜೊತೆ ಸಂಬಂಧ ಹೊಂದಿದ್ದಾನೆ. ಕೆಲವು ದಿನಗಳ ಹಿಂದೆ ಆತ ರೇಪ್ ಮಾಡಿದ್ದಾನೆ ಎಂದು ಆಕೆ ಆರೋಪ ಮಾಡಿದ್ದಳು. ಆ ಹುಡುಗಿ ಕಳುಹಿಸಿರುವ ವಿಡಿಯೋ ಪ್ರಕಾರ ಆದಿಲ್ ನನ್ನನ್ನು ಹಣ ಮತ್ತು ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾನಂತೆ. ಇರಾನಿ ಹುಡುಗಿಗೆ ದುಬೈನಲ್ಲಿ ಮನೆ ಕೊಡಿಸುವೆ ಎಂದು ಸುಳ್ಳು ಹೇಳಿದ್ದಾನೆ. ನಾನು ರಾಖಿಗೆ ಮೋಸ ಮಾಡುವೆ ನೋಡಿ ಎಂದು ಹೇಳಿದರಂತೆ' ಎಂದು ರಾಖಿ ಹೇಳಿದ್ದಾರೆ. 

ಮೈಸೂರಿನ ಇರಾನಿ ಹುಡುಗಿ ನೀಡಿರುವ ಅತ್ಯಾಚಾರ ದೂರಿಗೆ ಸಂಬಂಧಿಸಿದಂತೆ ಕರ್ನಾಟಕ ಪೊಲೀಸರು ಆದಿಲ್‌ನನ್ನು ಮುಂಬೈ ಪೊಲೀಸರಿಂದ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಬುಧವಾರ ನ್ಯಾಯಧೀಶರ  ಮುಂದೆ ಹಾಜಾರ್ ಆಗಿ ಈಗ 7 ದಿನಗಳ ಕಾಲ ಪೊಲೀಸ್‌ ಕಸ್ಟಡಿಯಲ್ಲಿರುತ್ತಾರೆ. 
 

Follow Us:
Download App:
  • android
  • ios