ಶೂಟಿಂಗ್ ಶುರು ಮಾಡಿಲ್ಲ ಆಗಲೇ ರಶ್ಮಿಕಾ ಮಂದಣ್ಣ ಹಣ ಕೇಳ್ತಾರೆ: ತಿರುಗೇಟು ಕೊಟ್ಟ ಸಿದ್ಧಾರ್ಥ್ ಮಲ್ಹೋತ್ರಾ
ವೈರಲ್ ಆಗುತ್ತಿದೆ ಸಿದ್ಧಾರ್ಥ್ ಮಲ್ಹೋತ್ರಾ ವಿಡಿಯೋ. ರಶ್ಮಿಕಾ ಮಂದಣ್ಣಗೆ ಒಳ್ಳೆ ರೀತಿಯಲ್ಲಿ ಕ್ಲಾಸ್ ತೆಗೆದುಕೊಂಡ ಬಾಲಿವುಡ್ ಮಂದಿ ಎಂದು ನೆಟ್ಟಿಗರು....
ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಕನ್ನಡ, ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಹಿಟ್ ಕಾಣುತ್ತಿದ್ದಂತೆ ಎರಡು ಬಾಲಿವುಡ್ ಸಿನಿಮಾಗಳಿಗೆ ಸಹಿ ಮಾಡಿದ್ದರು. ಅಮಿತಾಭ್ ಬಚ್ಚನ್ ಪುತ್ರಿಯಾಗಿ ಗುಡ್ ಬೈ ಸಿನಿಮಾದಲ್ಲಿ ಕಾಣಿಸಿಕೊಂಡು ಅದಾದ ನಂತರ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಮಿಷನ್ ಮಜನು ಸಿನಿಮಾದಲ್ಲಿ ನಟಿಸಿದ್ದರು. ಒಳ್ಳೆ ಕಥೆಯ ಚಿತ್ರವಿದು ದೊಡ್ಡ ಮಟ್ಟದಲ್ಲಿ ಜನರಿಗೆ ತಲುಪಬೇಕು ಎಂದು ನಿರ್ದೇಶಕರು ಓಟಿಟಿಯಲ್ಲಿ ರಿಲೀಸ್ ಮಾಡಿದರು ಆದರೆ ಫ್ಲಾಪ್ ಶೋ ಆಯ್ತು ಎನ್ನಬಹುದು. ಮಿಷನ್ ಮಜುನು ಸಿನಿಮಾ ಪ್ರಚಾರದ ವೇಳೆ ಸಿದ್ಧಾರ್ಥ್ ನೀಡಿದ ಸಂದರ್ಶನದಲ್ಲಿ ರಶ್ಮಿಕಾ ಪ್ಯಾಪರಾಜಿಗಳ ಮುಂದೆ ಮಾಡುವ ತುಂಟಾಟಗಳ ಬಗ್ಗೆ ಮಾತನಾಡಿದ್ದಾರೆ.
'ರಶ್ಮಿಕಾ ಮಂದಣ್ಣಯಿಂದ ತುಂಬಾ ವಿಚಾರಗಳನ್ನು ಕಲಿತಿರುವೆ. (ಎರಡು ಬೆರಳುಗಳಿಂದ ಹಾರ್ಟ್ ರೀತಿ ಸನ್ನೆ ಮಾಡಿ ರಶ್ಮಿಕಾ ಪ್ಯಾಪರಾಜಿಗಳ ಮುಂದೆ ಮಾಡುವ ಗಿಮಿಕ್ಗಳನ್ನು ತೋರಿಸಿದ್ದಾರೆ) ಆರಂಭದಲ್ಲಿ ಆ ಹಾರ್ಟ್ ಸಿಂಬಲ್ನ ನಾನು ಹಣ ಎಂದು ತಿಳಿದುಕೊಂಡೆ. ಅದಿಕ್ಕೆ ಸಿನಿಮಾ ಚಿತ್ರೀಕರಣ ಶುರುವಾಗಿಲ್ಲ ಆಗಲೇ ಹಣ ಕೇಳುತ್ತಿರುವೆ. ಮೊದಲು ಚಿತ್ರೀಕರಣ ಶುರು ಮಾಡು ಎಂದು ಕಾಲೆಳೆದೆ. ಆಗ ಆಕೆ ಇಲ್ಲ ಇಲ್ಲ ನಾನು ಹೀಗೆ ತೋರಿಸುವ ಅರ್ಥ ಪ್ರೀತಿ ಎಂದು. ಆನಂತರ ತಿಳಿಯಿತ್ತು ನಾನು ಕನ್ಫ್ಯೂಸ್ ಮಾಡಿಕೊಂಡೆ ಎಂದು. ಬೆರಳುಗಳಿಂದ ಕ್ರಿಯೇಟ್ ಮಾಡುವ ಹಾರ್ಟ್ನ ಕೊರಿಯನ್ ಹಾರ್ಟ್ ಎನ್ನುತ್ತಾರೆ' ಎಂದು ಸಿದ್ಧಾರ್ಥ್ ಹೇಳಿದ್ದಾರೆ.
ವಿಮಾನ ನಿಲ್ದಾಣಗಳಲ್ಲಿ ಜಿಮ್ ಇಲ್ಲ ಎಂದು ರಶ್ಮಿಕಾ ಮಂದಣ್ಣ ಬೇಸರ; ಡವ್ ಮಾಡ್ಬೇಡ ಎಂದ ನೆಟ್ಟಿಗರು
'ಒಂದು ದಿನ ಒಬ್ಬ ಕನ್ನಡದ ಸ್ಟಾರ್ ನಿಮ್ಮ ಬಗ್ಗೆ ನೆಗೆಟಿವ್ ಅಥವಾ ಕಾಲೆಳೆಯುವ ರೀತಿಯಲ್ಲಿ ಕಾಮೆಂಟ್ ಮಾಡಿಲ್ಲ. ಬಾಲಿವುಡ್ ಮಂದಿ ರೀತಿ ಕ್ಯಾಮೆರಾ ಮುಂದೆ ನಗು ನಗುತ್ತಲೇ ಉತ್ತರ ಕೊಟ್ಟರೆ ಅವರೇ ನಿಮ್ಮ ಪಾಲಿಗೆ ಒಳ್ಳೆಯವರು. ಹಿಂದಿ ಹಿಂದಿ ಅಂತ ಓಡಿದಕ್ಕೆ ಒಳ್ಳೆ ಬುದ್ದಿ ಕಲಿಸುತ್ತಿದ್ದಾರೆ. ಮುರ್ನಾಲ್ಕು ಸಿನಿಮಾ ಆದ್ಮೇಲೆ ನೀನೇ ಓಡಿ ಕನ್ನಡ ಬೇಕು ಎಂದು ಬಂದರೂ ಇಲ್ಲಿ ಜನರು ಕೇರ್ ಮಾಡುವುದಿಲ್ಲ' ಎಂದು ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಬೆಂಗಳೂರು, ಹೈದರಾಬಾದ್ ಮತ್ತು ಮುಂಬೈನಲ್ಲಿ ಮನೆ ಮಾಡಿಕೊಂಡಿರುವ ರಶ್ಮಿಕಾ ಮಂದಣ್ಣ ತುಂಬಾ ಪ್ರಯಾಣ ಮಾಡುತ್ತಿರುತ್ತಾರೆ ಹೀಗಾಗಿ ಪ್ಯಾಪರಾಜಿಗಳ ಕಣ್ಣಿಗೆ ಹೆಚ್ಚಿಗೆ ಕಾಣಿಸಿಕೊಳ್ಳುತ್ತಾರೆ. ಕ್ಯಾಮೆರಾ ಎದುರು ಬರುತ್ತಿದ್ದಂತೆ ಮಾಸ್ಕ್ ಧರಿಸುತ್ತಾರೆ ಹಾಗು ಕೈ ಬೆರಳುಗಳಿಂದ ಹಾರ್ಟ್ ಸಿಂಬಲ್ ತೋರಿಸುತ್ತಾರೆ. ಹೇಗೆ ಸೈಲ್ ಅಲಿ ಖಾನ್ ಪುತ್ರಿ ಸಾರಾ ಕ್ಯಾಮೆರಾ ಕಂಡರ ನಮಸ್ಕಾರ ಎನ್ನುತ್ತಾರೆ ಹಾಗೂ ರಶ್ಮಿಕಾ ಹಾರ್ಟ್ ತೋರಿಸುತ್ತಾರೆ.
2 ಲಕ್ಷದ ಟಾಪ್ ಧರಿಸಿ ಏರ್ಪೋರ್ಟ್ಗೆ ಆಗಮಿಸಿದ ರಶ್ಮಿಕಾ ಮಂದಣ್ಣ; ನೆಲ ಒರೆಸುವ ಬಟ್ಟೆ ಎಂದು ಕಾಲೆಳೆದ ನೆಟ್ಟಿಗರು
ಐಷಾರಾಮಿ ಜೀವನ:
ಹೈದರಾಬಾದ್, ಗೋವಾ, ಕೂರ್ಗ್, ಮುಂಬೈ ಮತ್ತು ಬೆಂಗಳೂರಿನಲ್ಲಿ ನಟಿ ಐದು ಸುಂದರವಾದ ಅಪಾರ್ಟ್ಮೆಂಟ್ಗಳನ್ನು ಹೊಂದಿದ್ದಾರೆ ಎಂಬ ಸಾಮಾಜಿಕ ಮಾಧ್ಯಮ ಪೋಸ್ಟ್ಗೆ ಇತ್ತೀಚೆಗೆ ರಶ್ಮಿಕಾ ಪ್ರತಿಕ್ರಿಯಿಸಿದ್ದಾರೆ.'ಅದು ನಿಜವಾಗಬೇಕೆಂದು ನಾನು ಬಯಸುತ್ತೇನೆ' ಎಂದು ಹೇಳಿಕೆ ನೀಡುವುದರ ಮೂಲಕ ರಶ್ಮಿಕಾ ಎಲ್ಲಾ ವರದಿಗಳನ್ನು ಸುಳ್ಳು ಎಂದು ತಳ್ಳಿಹಾಕಿದರು.
ರಿಜೆಕ್ಷನ್:
ಕಿರಿಕ್ ಪಾರ್ಟಿ ಸಿನಿಮಾಗೆ ಆಯ್ಕೆ ಆಗುವ ಮೊದಲು ಸುಮಾರು 25 ಸಿನಿಮಾಗಳಿಂದ ರಿಜೆಕ್ಟ್ ಆಗಿದ್ದೆ ಎಂದು ಬಹಿರಂಗ ಪಡಿಸಿದರು. ಸಿನಿಮಾ, ಸೀರಿಸ್ ಅಂತ ಅನೇಕ ಕಡೆ ಆಡಿಷನ್ ನೀಡಿದ್ದೆ. ಆದರೆ ರಿಜೆಕ್ಟ್ ಆಗುತ್ತಿದ್ದೆ. ಅನೇಕರು ಹೇಳಿದ್ದು ನಿನ್ನ ಫೇಸ್ ಚೆನ್ನಾಗಿ ಇಲ್ಲ ಅಂತ ಎಂದು ರಶ್ಮಿಕಾ ಹೇಳಿದ್ದಾರೆ. ನಾನು ಮನೆಗೆ ಹೋಗಿ ತುಂಬಾ ಅಳುತ್ತಿದ್ದೆ. ಬಳಿಕ 'ಗೆಳೆಯರೇ ಗೆಳತಿಯರೇ' ಎನ್ನುವ ಸಿನಿಮಾಗೆ ಆಯ್ಕೆಯಾದೆ ಟ್ರೇನಿಂಗ್ ಕೂಡ ಹೋದೆ. ಆದರೆ ಆ ಸಿನಿಮಾ ಆರಂಭನೇ ಆಗಿಲ್ಲ. ಬಳಿಕ ಓದಿನ ಕಡೆ ಗಮನ ಕೊಡುತ್ತಿದ್ದೆ.ನಂತರ ಕಿರಿಕ್ ಪಾರ್ಟಿ ಬಂತು. ಕಿರಿಕ್ ಪಾರ್ಟಿ ಸಿಕ್ಕಿದ್ದು ತುಂಬಾ ಖುಷಿ ಆಯ್ತು. ಕಿರಿಕ್ ಪಾರ್ಟಿ ರಿಲೀಸ್ ಆದ ದಿನ ಚಿತ್ರಮಂದಿರದ ಹೊರಗೆ ಎಷ್ಟು ದೊಡ್ಡ ಜನ ಸಮೂಹವಿತ್ತು. ಎಲ್ಲರೂ ಸಾನ್ವಿ ಎಂದು ಕೂಗುತ್ತಿದ್ದರು. ನನ್ನ ಪಾತ್ರದ ಹೆಸರು ಕೇಳಿ ಕೂಗುತ್ತಿದ್ದಿದ್ದು ತುಂಬಾ ಖುಷಿ ಆಯಿತು. ಅದು ಜಗತ್ತಿನ ಅತೀ ದೊಡ್ಡ ಫೀಲಿಂಗ್ ಆಗಿತ್ತು. ಕಿರಿಕ್ ಪಾರ್ಟಿ ಬಳಿಕ ಯಾವುದೇ ಸಿನಿಮಾ ಇಲ್ಲ ಎಂದರೆ ಮನೆಗೆ ಹೊಗಲು ನಿರ್ಧರಿಸಿದ್ದೆ. ಆದರೆ ಆ ಸಿನಿಮಾ ಬಳಿಕ ಅಂಜನಿ ಪುತ್ರ, ಚಮಕ್, ತೆಲುಗಿನಲ್ಲಿ ಚಲೋ ಮಾಡಿದೆ ಹಾಗೆ ಸಿನಿಮಾ ಜರ್ನಿ ಪ್ರಾರಂಭ ಆಯಿತು' ಎಂದು ಹೇಳಿದರು.