ಕುಡಿತದಿಂದ ಚಾಕಲೆಟ್ ಬಾಯ್ ಮಾಧವನ್ ಜೀವನ ಹಾಳಾಯ್ತಾ? ವೈದ್ಯೆ ಆರೋಪಕ್ಕೆ ನಟನ ತಿರುಗೇಟು
ನಟ ಆರ್.ಮಾಧವನ್ ಅವರು ಮದ್ಯ ಮತ್ತು ಡ್ರಗ್ಸ್ ವ್ಯಸನಿಯಾಗಿದ್ದರು ಎಂಬುದಾಗಿ ವೈದ್ಯೆಯೊಬ್ಬರು ಮಾಡಿರುವ ಟ್ವೀಟ್ಗೆ ನಟ ತಿರುಗೇಟು ನೀಡಿದ್ದಾರೆ.
ಆರ್. ಮಾಧವನ್ (Madhavan) ತಮಿಳು ಇಂಡಸ್ಟ್ರಿಯಲ್ಲಿ ಪ್ರಸಿದ್ಧ ನಟ. ಇವದು 'ಚಾಕೊಲೇಟ್ ಬಾಯ್' ಎಂದೇ ಫೇಮಸ್. ಅಭಿಮಾನಿಗಳು ಹಾಗೂ ಚಿತ್ರರಂಗದ ಆಪ್ತರು ಇವರನ್ನು 'ಮ್ಯಾಡಿ' ಎಂದೂ ಕರೆಯುತ್ತಾರೆ. ಕಿರುತೆರೆ ಕಾರ್ಯಕ್ರಮಗಳೊಂದಿಗೆ ತಮ್ಮ ನಟನಾ ವೃತ್ತಿಜೀವನವನ್ನು ಪ್ರಾರಂಭಿಸಿದ ಮಾಧವನ್, 'ಸೀ ಹಾಕ್ಸ್' ಸರಣಿಯ ಮೂಲಕ ಜನಪ್ರಿಯತೆ ಗಳಿಸಿದವರು. ಖ್ಯಾತ ನಿರ್ದೇಶಕ ಮಣಿರತ್ನಂ ಅವರು 2000 ರಲ್ಲಿ ನಿರ್ದೇಶಿಸಿದ ತಮಿಳು ಚಲನಚಿತ್ರ 'ಅಲೈಪಾಯುತೆ' ಮೂಲಕ ಸಿನಿ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದರು ಮಾಧವನ್. ಈ ಚಿತ್ರ ಸಕತ್ ಹಿಟ್ ಆಗಿ, ಮಾಧವನ್ ಅವರಿಗೆ ವಿಶೇಷ ಗೌರವವನ್ನೂ ತಂದುಕೊಟ್ಟಿತು. ಅಂದಿನಿಂದ, ಅವರು ಹಲವಾರು ಭಾಷೆಗಳ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಹಲವು ಹಿಟ್, ಬ್ಲಾಕ್ಬಸ್ಟರ್ ಚಿತ್ರಗಳನ್ನೂ ನೀಡಿದ್ದಾರೆ. ತಮಿಳು ಚಿತ್ರಗಳಲ್ಲಿ ದೊಡ್ಡ ಪ್ರಭಾವವನ್ನು ಸೃಷ್ಟಿಸುವುದರ ಜೊತೆಗೆ, ಅವರು ಬಾಲಿವುಡ್ನಲ್ಲೂ ಕೆಲವು ಉತ್ತಮ ಚಲನಚಿತ್ರಗಳನ್ನು ಮಾಡಿದ್ದಾರೆ. ಅವರ '3 ಈಡಿಯಟ್ಸ್' ಚಿತ್ರ ಬಾಕ್ಸ್ ಆಫೀಸ್ನಲ್ಲಿ ಸೆನ್ಸೇಷನಲ್ ಹಿಟ್ ಆಗಿರುವುದು ಗೊತ್ತಿರುವ ವಿಷಯವೇ.
ಇದೀಗ ನಟ ಮಾಧವನ್ ಅವರು ಸುದ್ದಿಯಾಗುತ್ತಿರುವುದು ಅವರ ವಿರುದ್ಧ ವೃತ್ತಿಯಲ್ಲಿ ವೈದ್ಯೆಯಾಗಿರುವ ಅನೂಷಾ ಭಂಡಾರ್ಕರ್ (Anoosha Bandarkar) ಎಂಬ ಟ್ವಿಟ್ಟರ್ ಬಳಕೆದಾರರು ಟ್ವೀಟ್ ಮಾಡಿರುವ ಕಾರಣದಿಂದ. ಕೆಲ ದಿನಗಳ ಹಿಂದೆ ಅನೂಷಾ ಅವರು, ಮಾಧವನ್ ವಿರುದ್ಧ ಟ್ವೀಟ್ ಮಾಡಿದ್ದರು. ಅದರಲ್ಲಿ ಅವರು, ಮಾಧವನ್ ಅವರು ಮದ್ಯ ಸೇವನೆಯಿಂದಾಗಿ ವೃತ್ತಿಜೀವನವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದರು. ಮಾಧವನ್ ಪರವಾಗಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದ ಅನೂಷಾ ಅವರು, ಮಾಧವನ್ ತಮ್ಮ ನೆಚ್ಚಿನ ನಟರಾಗಿದ್ದರು. ಆದರೆ ಈಗ ಅವರು ತಮ್ಮ ವೃತ್ತಿಜೀವನವನ್ನು ಮದ್ಯ ಮತ್ತು ಡ್ರಗ್ಸ್ನಿಂದ ಹಾಳುಮಾಡುತ್ತಿದ್ದಾರೆ ಎಂದು ಹೇಳಿಕೊಂಡಿದ್ದರು. ಇದಕ್ಕೆ ತಕ್ಕ ಉತ್ತರವನ್ನು ನೀಡಿರುವ ಮಾಧವನ್ ಅವರು, ಒಹೊ ನೀವು ರೋಗವನ್ನು ನಿರ್ಣಯ ಮಾಡಿಬಿಟ್ಟಿದ್ದೀರಾ? ನಿಮ್ಮ ಈ ಮಾತನ್ನು ಕೇಳಿ ನಿಮ್ಮ ರೋಗಿಗಳ ಬಗ್ಗೆ ನನಗೆ ಚಿಂತೆ ಶುರುವಾಗಿದೆ. ಬಹುಶಃ ನಿಮಗೂ ಸೂಕ್ತ ವೈದ್ಯರ ಅವಶ್ಯಕತೆ ಇದೆ ಎನ್ನುವುದು ತೋರುತ್ತಿದೆ ಎಂದಿದ್ದಾರೆ. ಈ ಮೂಲಕ ತಮ್ಮ ವಿರುದ್ಧ ಮಾತನಾಡಿರುವ ವೈದ್ಯೆಯ ವಿರುದ್ಧ ಮಾಧವನ್ ಗರಂ ಆಗಿದ್ದಾರೆ.
ಫ್ರಾನ್ಸ್ ಅಧ್ಯಕ್ಷರ ಸೆಲ್ಫಿಗೆ ಮೋದಿ ಜೊತೆ ಪೋಸ್ ನೀಡಿದ ಆರ್ ಮಾಧವನ್: 'ಮ್ಯಾಡಿ ವಿತ್ ಮೋದಿ' ಎಂದ ಫ್ಯಾನ್ಸ್
ಅಂದಹಾಗೆ, ಮಾಧವನ್ ಅವರು ಸದ್ಯ ಭಾರತೀಯ ಚಿತ್ರರಂಗದಲ್ಲಿ ರೊಮ್ಯಾಂಟಿಕ್ ಲುಕ್ ಇಮೇಜ್ನಿಂದ ದೊಡ್ಡ ಸಂಖ್ಯೆಯಲ್ಲಿ ಮಹಿಳಾ ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದಾರೆ. ಅದೇ ರೀತಿ ತಾವೂ ಮಾಧವನ್ ಅವರ ಈ ಇಮೇಜ್ಗೆ ಫ್ಯಾನ್ ಆಗಿದ್ದುದಾಗಿ ಡಾ.ಅನೂಷಾ ಹೇಳಿಕೊಂಡಿದ್ದರು. ತಾವು ಮಾಧವನ್ ಅವರ ರೆಹನಾ ಹೈ ತೇರ್ರೆ ದಿಲ್ ಮೇ ಚಿತ್ರವನ್ನು ನೋಡಿ ಫ್ಯಾನ್ ಆಗಿದ್ದೆ. ಆದರೆ ಅವರು ಮದ್ಯವ್ಯಸನಿ ಮತ್ತು ಡ್ರಗ್ಸ್ನಿಂದ ಜೀವನ ಹಾಳು ಮಾಡಿಕೊಂಡುಬಿಟ್ಟಿದ್ದಾರೆ ಎಂದಿದ್ದರು. ಇದು ನಟನನ್ನು ಮಾತ್ರವಲ್ಲದೇ ಅವರ ಅಭಿಮಾನಿಗಳನ್ನೂ ಕೆರಳಿಸಿದೆ.
ಅಂದಹಾಗೆ ಮಾಧವನ್ ಅವರು, 2000ರಲ್ಲಿ ಮಣಿರತ್ನಂ ಅವರ 'Alaipayuthey' ಸಿನಿಮಾ ಮೂಲಕ ರೊಮ್ಯಾಂಟಿಕ್ ಇಮೇಜ್ ಗಳಿಸಿಕೊಂಡರು. 'ಕಣ್ಣತಿಲ್ ಮುತಮಿತ್ತಲ್', 'ರನ್', 'ಅನ್ಬೆ ಶಿವಂ', 'ಆಯುತ ಎಜುತು', 'ರೆಹನಾ ಹೇ ತೆರೆ ದಿಲ್ ಮೇ', 'ವಿಕ್ರಮ್', 'ತನು ವೆಡ್ಸ್ ಮನು' ಸಿನಿಮಾಗಳ ಮೂಲಕ ಆರ್ ಮಾಧವನ್ ಅವರು ದೊಡ್ಡ ಯಶಸ್ಸು ಗಳಿಸಿದರು. ರೊಮ್ಯಾಂಟಿಕ್ ಲುಕ್ನಿಂದ ಆಚೆ ಕೂಡ ಮಾಧವನ್ ಅವರು ಭಿನ್ನ ಪಾತ್ರಗಳಿಗೆ ಬಣ್ಣ ತುಂಬಿದ್ದಾರೆ. ಕೊಲ್ಲಾಪುರದಲ್ಲಿ ಪಬ್ಲಿಕ್ ಸ್ಪೀಕಿಂಗ್ ಕಮ್ಯುನಿಕೇಶನಲ್ ವರ್ಕ್ಶಾಪ್ ತಮ್ಮ ವಿದ್ಯಾರ್ಥಿನಿಯಾಗಿದ್ದ ಸರಿತಾ ಎನ್ನುವವರನ್ನು ಪ್ರೀತಿಸಿ 2005ರಲ್ಲಿ ಮದುವೆಯಾಗಿದ್ದಾರೆ. ಮದುವೆಯಾಗಿ 6 ವರ್ಷಗಳ ಬಳಿಕ ಈ ದಂಪತಿಗೆ ವೇದಾಂತ್ ಎಂಬ ಮಗ ಜನಿಸಿದ್ದು, ಈತ ಈಜುಸ್ಪರ್ಧೆಯಲ್ಲಿ ಹೆಸರು ಮಾಡುತ್ತಿದ್ದಾನೆ.
ನಯಾಗರ ಫಾಲ್ಸಲ್ಲಿ ನಿವೇದಿತಾ- ಚಂದನ್ ಭರ್ಜರಿ ಡಾನ್ಸ್: ಸಕ್ರೆ ಗೊಂಬೆ ಕರಗೋಗ್ತಿಯಾ ಎಂದ ಫ್ಯಾನ್ಸ್