ಬೆಂಗಳೂರು (ಆ.14):ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಹಗರಣದ ಆರೋಪಿಯಾಗಿರುವ ನೂತನ ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ -ಪ್ರಮುಖ ಪ್ರತಿಪಕ್ಷ ಬಿಜೆಪಿ ಕಲ್ಯಾಣ ಕರ್ನಾಟಕದಲ್ಲಿ -ಪಾದಯಾತ್ರೆ ನಡೆಸಲು ಮುಂದಾಗಿದೆ. ಪಕ್ಷದ ವರಿಷ್ಠರು ಒಪ್ಪಿಗೆ ನೀಡಿದಲ್ಲಿ ವಿಧಾನಮಂಡಲದ ಅಧಿವೇಶನದೊಳಗಾಗಿಯೇ ಅಂದರೆ, ಮುಂದಿನ ವಾರದ ವೇಳೆಗೆ ಮಾಜಿ ಸಚಿವ ಬಿ.ಶ್ರೀರಾಮುಲು ನೇತೃತ್ವದಲ್ಲಿ ಪಾದಯಾತ್ರೆ ಆರಂಭವಾಗಲಿದೆ. ಅದರೊಂದಿಗೆ ಇಂದಿನ ರಾಜ್ಯ ಸುದ್ದಿಗಳ ಅಪ್ಡೇಟ್ ಇಲ್ಲಿದೆ.
11:23 PM (IST) Aug 14
ಇಡೀ ದೇಶ ನಾಳೆ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಕ್ಕೆ ಸಿದ್ಧವಾಗುತ್ತಿದೆ. ವಿಧ್ವಂಸಕ ಕೃತ್ಯ ಎಸಗಲು ಹೊಂಚು ಹಾಕಿದ್ದ ಶಂಕಿತ ವ್ಯಕ್ತಿಯನ್ನ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಸೆರೆಹಿಡಿದಿದ್ದಾರೆ.
11:04 PM (IST) Aug 14
10:23 PM (IST) Aug 14
09:38 PM (IST) Aug 14
ಕರ್ನಾಟಕದಲ್ಲಿ ಆಹಾರ ಸುರಕ್ಷತಾ ಇಲಾಖೆಯು ಸರ್ಕಾರಿ ಕ್ಯಾಂಟೀನ್ಗಳಿಂದ ಹಿಡಿದು 5-ಸ್ಟಾರ್ ಹೋಟೆಲ್ಗಳವರೆಗೆ ಸರಣಿ ದಾಳಿಗಳನ್ನು ನಡೆಸುತ್ತಿದೆ. ಮಹಾರಾಷ್ಟ್ರವನ್ನು ಅನುಸರಿಸುತ್ತಿಲ್ಲ, ಬದಲಾಗಿ ಕಬಾಬ್ ಬಣ್ಣ ನಿಷೇಧದಂತಹ ಕ್ರಮಗಳಿಂದ ದೇಶಕ್ಕೇ ನಾವೇ ಟ್ರೆಂಡ್ಸೆಟರ್ ಎಂದು ಎಫ್ಡಿಎ ಜಂಟಿ ಆಯುಕ್ತ ಶ್ರೀನಿವಾಸ್ ಕೆ ಹೇಳಿದ್ದಾರೆ.
09:09 PM (IST) Aug 14
ನಟಿಯಾಗಿ ಒಳ್ಳೆಯ ಹೆಸರು, ಮೂರು ಭಾಷೆಗಳಲ್ಲಿ ಗಮನಾರ್ಹ ಸಿನಿಮಾಗಳು, ಟಾಪ್ ಹೀರೋಗಳ ಜೊತೆ ತೆರೆ ಹಂಚಿಕೊಂಡ ಅನುಭವ... ಇಷ್ಟೆಲ್ಲ ಇದ್ದರೂ ಶ್ರದ್ಧಾ ಶ್ರೀನಾಥ್ ಅವರ ಕರಿಯರ್ ಮಾತ್ರ ನಿರೀಕ್ಷಿಸಿದ ವೇಗದಲ್ಲಿ ಸಾಗುತ್ತಿಲ್ಲ.
08:38 PM (IST) Aug 14
ಆತ ಪ್ರೀತಿಸಿ ಅವಳೇ ನನಗೆ ಬೇಕು ಎಂದು ಮದುವೆ ಆಗಿದ್ದ. ಮದುವೆ ಬಳಿಕ ಕೌಟುಂಬಿಕ ಕಲಹ. ಸಿಟ್ಟಿಗೆದ್ದ ಪತಿ ಆಕೆಯನ್ನ ಮುಗಿಸಿ ತಾನೂ ಕೂಡ ಬದುಕಿನ ಪಯಣ ಮುಗಿಸಿದ್ದಾನೆ. ಇಡೀ ಬೆಂಗಳೂರನ್ನೇ ಬೆಚ್ಚಿಬೀಳಿಸಿದ ಸ್ಟೋರಿ ಇಲ್ಲಿದೆ.
08:21 PM (IST) Aug 14
ಅವಕಾಶಗಳು ಸಿಗದ ಜಾಗದಲ್ಲಿ ಸುಮ್ಮನೆ ಸಮಯ ಕಳೆಯುವುದಕ್ಕಿಂತ, ಆಫರ್ಗಳಿರುವ ಕಡೆ ಹೆಜ್ಜೆ ಇಡುವುದೇ ಬೆಸ್ಟ್ ಅಲ್ಲವೇ? ಸದ್ಯ ನಟಿ ಶ್ರೀಲೀಲಾ ಅವರ ಸಿನಿ ಜರ್ನಿ ನೋಡಿದರೆ ಇದೇ ರೀತಿ ಅನಿಸುತ್ತಿದೆ.
08:16 PM (IST) Aug 14
1973ರಲ್ಲಿ 'ಪದ್ಮಶ್ರೀ' ಪ್ರಶಸ್ತಿಗೆ ಆಯ್ಕೆಯಾದ ಭಾರತದ ಮಾಜಿ ಕ್ರಿಕೆಟಿಗ 53 ವರ್ಷಗಳಾದರೂ ಆ ಗೌರವ ಇನ್ನೂ ಕೈಸೇರಿಲ್ಲ. ಇಂಗ್ಲೆಂಡ್ನಲ್ಲಿದ್ದಾಗ ಅಧಿಕೃತ ಪತ್ರ ತಲುಪದ ಕಾರಣದಿಂದ ವಂಚಿತರಾದ ಅವರು, ತಮ್ಮ 88ನೇ ವಯಸ್ಸಿನಲ್ಲಿಯಾದರೂ ಪ್ರಶಸ್ತಿ ಸ್ವೀಕರಿಸುವ ಆಸೆ ವ್ಯಕ್ತಪಡಿಸಿದ್ದಾರೆ. ಇದೀಗ ಬಿಸಿಸಿಐ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಸರ್ಕಾರಕ್ಕೆ ಶಿಫಾರಸು ಮಾಡಲು ಮುಂದಾಗಿದೆ.
07:50 PM (IST) Aug 14
ಭಾರತದ ಸ್ವಾತಂತ್ರ್ಯ ದಿನವು ದೇಶದ ಸ್ವಾತಂತ್ರ್ಯ ಹೋರಾಟ, ತ್ಯಾಗ ಮತ್ತು ಏಕತೆಯನ್ನು ಸ್ಮರಿಸುವ ವಿಶೇಷ ದಿನ. ಕುಟುಂಬ, ಸ್ನೇಹಿತರು ಹಾಗೂ ಆತ್ಮೀಯರಿಗೆ ಕಳುಹಿಸಲು ಹೃದಯಸ್ಪರ್ಶಿ ಶುಭಾಶಯಗಳು, ಪ್ರೇರಣಾದಾಯಕ ಸಂದೇಶಗಳು, ದೇಶಭಕ್ತಿ ಉಲ್ಲೇಖಗಳು ಮತ್ತು ವಾಟ್ಸ್ಆ್ಯಪ್ ಸ್ಟೇಟಸ್ಗಳನ್ನು ಆಯ್ಕೆ ಮಾಡಬಹುದು. ತ್ರಿವರ್ಣ ಧ್ವಜದ ಹೆಮ್ಮೆ ಹಾಗೂ ಸ್ವಾತಂತ್ರ್ಯದ ಮೌಲ್ಯವನ್ನು ನೆನಪಿಸುವ ಸಂದೇಶಗಳು ದಿನವನ್ನು ಅರ್ಥಪೂರ್ಣವಾಗಿಸುತ್ತವೆ.
07:06 PM (IST) Aug 14
ಬಸ್ ಚಾಲಕನ ಮಗನಾಗಿ ಬೆಳೆದು ಇಂದು 'ರಾಕಿ ಭಾಯ್' ಆದ ನಟ ಯಶ್ ಮತ್ತು ಪ್ರಧಾನಿಯಾದ ನರೇಂದ್ರ ಮೋದಿಯವರ ಜೀವನದಲ್ಲಿ ಒಂದು ರೋಚಕ ಸಾಮ್ಯತೆಯಿದೆ. ಅದೇನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
06:50 PM (IST) Aug 14
ರಾಕಿ ಭಾಯ್ ಅಂದ್ರೆ ಸ್ಟೈಲ್, ಆ್ಯಕ್ಷನ್ ಮತ್ತು ಧಮ್! ಆದರೆ ಯಶ್ ಅವರ ಮತ್ತೊಂದು ದೊಡ್ಡ ಗುರುತು ಅಂದರೆ ಅವರ ಫಿಟ್ ಬಾಡಿ. ‘ಕೆಜಿಎಫ್’ನಿಂದ ‘ಟಾಕ್ಸಿಕ್’ವರೆಗೆ ಯಶ್ ಅವರ ದೇಹದ ಫಿಟ್ನೆಸ್ ನೋಡಿ ಅಭಿಮಾನಿಗಳು..
06:21 PM (IST) Aug 14
ಮತದಾರರ ಪಟ್ಟಿ ಪರಿಷ್ಕರಣೆ (SIR) ಹೆಸರಿನಲ್ಲಿ ಅರ್ಹರ ಹೆಸರುಗಳನ್ನು ಕೈಬಿಡುತ್ತಿರುವ ಚುನಾವಣಾ ಆಯೋಗದ ವಿರುದ್ಧ ನಟ ಪ್ರಕಾಶ್ ರಾಜ್ ವಾಗ್ದಾಳಿ ನಡೆಸಿ, ಇದನ್ನು 'ಜನರನ್ನು ಹೊರಗಿಡುವ ಷಡ್ಯಂತ್ರ' ಎಂದು ಕರೆದರು. ಮತದಾನದ ಹಕ್ಕಿಗಾಗಿ ಜನರನ್ನು ಭಿಕ್ಷೆ ಬೇಡುವ ಸ್ಥಿತಿಗೆ ತಳ್ಳಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಈ ಪ್ರಕ್ರಿಯೆಗೆ ಕನಿಷ್ಠ ಆರು ತಿಂಗಳ ಕಾಲಾವಕಾಶ ನೀಡಬೇಕೆಂದು ಒತ್ತಾಯಿಸಿದರು.
06:21 PM (IST) Aug 14
ಪ್ರಪಂಚದ ಜ್ಞಾನವನ್ನೇ ಅರಿಯದ ನಾಲ್ಕು ವರ್ಷದ ಕಂದ ಅದು. ತನ್ನ ತಾಯಿಯೊಂದಿಗೆ ಆಟವಾಡಿಕೊಂಡು ಕಾಲ ಕಳೆದುಕೊಂಡಿತ್ತು. ಆದರೆ ಅದೇ ತಾಯಿಯ ಅನೈತಿಕ ಸಂಬಂಧವೇ ಈ ಮಗುವಿನ ಜೀವಕ್ಕೆ ಎರವಾಗುತ್ತದೆ.
06:17 PM (IST) Aug 14
ಆಸ್ಟ್ರೇಲಿಯಾ-ಬಾಂಗ್ಲಾದೇಶ ಟೆಸ್ಟ್ ಪಂದ್ಯದಲ್ಲಿ, ತಾಂಜಿದ್ ಹಸನ್ ಚೊಚ್ಚಲ ಶತಕ ಸಿಡಿಸಿ ಮಿಂಚಿದರು. ಆದರೆ, ಪಿಚ್ ಮೇಲೆ ಓಡಿದ ಮೆಹಿದಿ ಹಸನ್ ಮಿರಾಜ್ಗೆ ಮಿಚೆಲ್ ಸ್ಟಾರ್ಕ್ ತೀವ್ರ ಎಚ್ಚರಿಕೆ ನೀಡಿದ್ದು, ಮೈದಾನದಲ್ಲಿ ವಾಗ್ವಾದಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಅವರು ಹೇಳಿದ್ದೇನು? ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.
05:42 PM (IST) Aug 14
Hemalatha Jayanna Bigg Boss: ಸೋಷಿಯಲ್ ಮೀಡಿಯಾದಲ್ಲಿ ಸಿಂಗರ್ ಆಗಿ ಗುರುತಿಸಿಕೊಂಡಿರುವ ಹೇಮಲತಾ ಜಯಣ್ಣ ಕೂಡ ಅಗ್ನಿಪರೀಕ್ಷೆಗೆ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಸದ್ದು ಮಾಡುತ್ತಿದೆ.
05:28 PM (IST) Aug 14
ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಬಿಪಿಎಲ್ (BPL) ಕಾರ್ಡ್ಗಳು ರದ್ದಾಗುತ್ತವೆ ಎಂಬ ಭೀತಿಯಲ್ಲಿದ್ದ ಲಕ್ಷಾಂತರ ಕುಟುಂಬಗಳಿಗೆ ರಾಜ್ಯ ಸರ್ಕಾರ ಕೊಂಚ ನಿರಾಳತೆ ನೀಡಿದೆ. ಬಿಪಿಎಲ್ ಕಾರ್ಡ್ಗಳ ಪರಿಷ್ಕರಣಾ ಪ್ರಕ್ರಿಯೆಯನ್ನು ಸದ್ಯಕ್ಕೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ.
05:17 PM (IST) Aug 14
80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಗಂಗಾವತಿಯಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ಭವ್ಯ "ಬೃಹತ್ ತಿರಂಗ ಯಾತ್ರೆ"ಗೆ ಶಾಸಕ ಜನಾರ್ದನ ರೆಡ್ಡಿ ಚಾಲನೆ ನೀಡಿದರು.
05:02 PM (IST) Aug 14
ಅರಣ್ಯವನ್ನೇ ನಂಬಿ ಬದುಕು ಕಟ್ಟಿಕೊಂಡ ಉತ್ತರ ಕನ್ನಡ ಜಿಲ್ಲೆಯ ನಿವಾಸಿಗಳಿಗೆ ಅರಣ್ಯ ಇಲಾಖೆಯ ತೊಂದರೆ ನಿನ್ನೆ ಮೊನ್ನೆಯದಲ್ಲ. ಇದೀಗ ಹೊನ್ನಾವರ ತಾಲೂಕಿನ 26 ಮನೆಗಳನ್ನ ನೆಲಸಮಗೊಳಿಸವಂತೆ ಆದೇಶ ನೀಡಲಾಗಿದೆ. ಅರಣ್ಯಾ ಇಲಾಖೆಯ ಏಕಾಏಕಿ ಈ ಕ್ರಮವು ಅಲ್ಲಿನ ನಿವಾಸಿಗಳನ್ನ ಕಂಗಾಲಾಗುವಂತೆ ಮಾಡಿದೆ..
04:53 PM (IST) Aug 14
04:47 PM (IST) Aug 14
ಅದು ಪುಣ್ಯ ಸ್ಮರಣೆಯ ಶೋಕ ಮತ್ತು ಸಿನಿಮಾವೊಂದರ ಟ್ರೇಲರ್ ಬಿಡುಗಡೆ ಸಂಭ್ರಮ. ಈ ಎರಡಕ್ಕೂ ಒಂದೇ ವೇದಿಕೆ ಸಾಕ್ಷಿಯಾಗಿತ್ತು. ‘ನನ್ನ ಗೆಳೆಯನ ಪಾತ್ರಕ್ಕೆ ನನ್ನ ಧ್ವನಿ ಕೊಡುವ ಸಂದರ್ಭ ಬರುತ್ತದೆ ಅಂತ ನಾನು ಕನಸಿನಲ್ಲೂ ಅಂದುಕೊಂಡಿರಲಿಲ್ಲ.
04:35 PM (IST) Aug 14
ಸುಂದರ್ ರಾಜ್ ಮುಖ್ಯ ಪಾತ್ರದಲ್ಲಿ ನಟಿಸಿರುವ, ವೆಂಕಟ್ ಭಾರದ್ವಾಜ್ ನಿರ್ದೇಶನದ, ಹಿರಿಯ ಪೊಲೀಸ್ ಅಧಿಕಾರಿ ಎಸ್.ಕೆ. ಉಮೇಶ್ ಕಥೆ ಆಧರಿಸಿದ ‘ಚಾರ್ಜ್ಶೀಟ್’ ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ. ಇದು ಸುಂದರ್ ರಾಜ್ ನಟನೆಯ 250ನೇ ಸಿನಿಮಾ.
04:27 PM (IST) Aug 14
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ. 8 ವರ್ಷದ ಬಾಲಕನೊಬ್ಬ ಕಡಜ ಹುಳು ಕಚ್ಚಿ ಮೃತಪಟ್ಟಿದ್ದಾನೆ. ಇನ್ನೂ ಅವರ ತಂದೆಗೆ ಗಂಭೀರ ಗಾಯವಾಗಿದೆ. ಈ ಕುರಿತ ಸ್ಟೋರಿ ಇಲ್ಲಿದೆ..
04:00 PM (IST) Aug 14
ಬಿಸಿಸಿಐನಲ್ಲಿ ಬದಲಾವಣೆಯ ಗಾಳಿ ಬೀಸುವ ಮುನ್ಸೂಚನೆ ಸಿಕ್ಕಿದೆ. ಮುಂಬರುವ ದಿನಗಳಲ್ಲಿ ಬಿಸಿಸಿಐ ‘ಡೈರೆಕ್ಟರ್ ಆಫ್ ಕ್ರಿಕೆಟ್’ ಎಂಬ ಹೊಸ ಹುದ್ದೆಯನ್ನ ಸೃಷ್ಟಿಸಲು ಮುಂದಾಗಿದೆ. ಮೊದಲ ಬಾರಿಗೆ ವಿವಿಎಸ್ ಲಕ್ಷ್ಮಣ್ ಅವರು ಆ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಅವರ ಕಾರ್ಯವೈಖರಿಗಳು ಈ ಸ್ಟೋರಿಯಲ್ಲಿವೆ..
03:36 PM (IST) Aug 14
03:02 PM (IST) Aug 14
01:43 PM (IST) Aug 14
ಸಂಸ್ಕೃತಿ, ಪರಂಪರೆ ಮತ್ತು ನಮ್ಮ ಮಣ್ಣಿನ ಕಥೆಗಳನ್ನು ಜಗತ್ತಿಗೆ ಪರಿಚಯಿಸುತ್ತಾ, ರಿಷಬ್ ಶೆಟ್ಟಿ ಅವರು ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ. ಈ ಎರಡೂ ಪ್ರಶಸ್ತಿಗಳು ಅವರ ಚಿತ್ರಯಾನದಲ್ಲಿ ಮತ್ತೊಂದು ಹೆಮ್ಮೆಯ ಮೈಲಿಗಲ್ಲಾಗಿದೆ.
01:09 PM (IST) Aug 14
ತಂದೆಯನ್ನು ಕಳೆದುಕೊಂಡ ಉದ್ಯೋಗಿಗೆ ಕೊಯಮತ್ತೂರಿನ ಖಾಸಗಿ ಸಂಸ್ಥೆಯೊಂದು ಚಿಕಿತ್ಸಾ ವೆಚ್ಚ ಭರಿಸಿ, 4 ವಾರಗಳ ಸುದೀರ್ಘ ರಜೆ ನೀಡಿದೆ. ಸಂಸ್ಥೆಯ ಅಧ್ಯಕ್ಷರು ವೈಯಕ್ತಿಕವಾಗಿ ಸಾಂತ್ವನ ಹೇಳಿದ್ದು, ಈ ಮಾನವೀಯ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
12:54 PM (IST) Aug 14
12:47 PM (IST) Aug 14
12:25 PM (IST) Aug 14
12:19 PM (IST) Aug 14
12:12 PM (IST) Aug 14
ಸಿಎಜಿ ವರದಿಯ ಪ್ರಕಾರ, ನಾಗಸಂದ್ರ ಬಳಿಯ ಭೂಮಿಯನ್ನು ಐಕಿಯಾಗೆ ಲೀಸ್ ನೀಡಿದ ಒಪ್ಪಂದದಲ್ಲಿ ಬಿಎಂಆರ್ಸಿಎಲ್ಗೆ ಸುಮಾರು 104 ಕೋಟಿ ರೂ. ನಷ್ಟವಾಗಿದೆ. ಅಲ್ಲದೆ, ಮೆಟ್ರೋ ನಿಲ್ದಾಣಗಳಲ್ಲಿನ ವಾಣಿಜ್ಯ ಸ್ಥಳಗಳನ್ನು ಬಾಡಿಗೆಗೆ ನೀಡದ ಕಾರಣದಿಂದಲೂ ಭಾರೀ ನಷ್ಟವಾಗಿದೆ ಎಂದಿದೆ.
11:27 AM (IST) Aug 14
ಆಗಸ್ಟ್ 15 ನಾಳೆ ಸ್ವಾತಂತ್ರ್ಯ ದಿನಾಚರಣೆ. ವಿಧಾನಸೌಧ ಎದುರು ನಡೆಯಲಿರುವ ವರ್ಣರಂಜಿತ ಫ್ರೀಡಂ ಹಬ್ಬ ನಡೆಯಲಿದೆ. ಕಾರ್ಯಕ್ರಮದ ಸಮಯ, ಮಾರ್ಗ, ರಿಜಿಸ್ಟ್ರೇಷನ್ ಕುರಿತು ಮಾಹಿತಿ ಇಲ್ಲಿದೆ.
10:30 AM (IST) Aug 14
ರಾಜ್ಯ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸ್ಥಾನ ನೀಡದಿರುವುದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ರಾಜ್ಯದ ಮಹಿಳೆಯರಿಗೆ ಮಾಡಿದ ಅವಮಾನ. ಆರೆಸ್ಸೆಸ್ ಬ್ಯಾನ್ ಮಾಡುವ ತಾಕತ್ತಿದ್ದರೆ ಮಾಡಿ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಸವಾಲು ಹಾಕಿದ್ದಾರೆ.
10:24 AM (IST) Aug 14
ಬೆಂಗಳೂರಿನ ಮಹಿಳೆಯೊಬ್ಬರು ಪತಿಯ ಅನುಮತಿಯಿಲ್ಲದೆ ಆತನ ಫ್ರೋಜನ್ ಸ್ಪರ್ಮ್ ಬಳಸಿ ಗರ್ಭಧರಿಸಲು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ, ಪತಿಯ ಲಿಖಿತ ಸಮ್ಮತಿಯಿಲ್ಲದೆ ಐವಿಎಫ್ ಪ್ರಕ್ರಿಯೆ ನಡೆಸುವಂತಿಲ್ಲ ಎಂದು ಕೇಂದ್ರ ಸರ್ಕಾರ ಮತ್ತು ART ಕಾಯ್ದೆ ಸ್ಪಷ್ಟಪಡಿಸಿದೆ.
10:00 AM (IST) Aug 14
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿ ಒಂದು ವರ್ಷವಾದ ಹಿನ್ನೆಲೆಯಲ್ಲಿ, ಅವರ ಪತ್ನಿ ವಿಜಯಲಕ್ಷ್ಮಿ ಇನ್ಸ್ಟಾಗ್ರಾಮ್ನಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ಒಂದು ವರ್ಷವಾದರೂ ಗಾಯ ಮಾಸಿಲ್ಲ, ನೋವು ಅಸಹನೀಯವಾಗಿದೆ ಎಂದು ಬರೆದುಕೊಂಡಿದ್ದಾರೆ.
07:56 AM (IST) Aug 14
07:35 AM (IST) Aug 14
ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್ನಿಂದ ಸಲೀಂ ಅಹ್ಮದ್ ನಾಮಪತ್ರ ಸಲ್ಲಿಸಿದ್ದು, ಸಂಖ್ಯಾಬಲ ಇಲ್ಲದಿದ್ದರೂ ಬಿಜೆಪಿ-ಜೆಡಿಎಸ್ ಮೈತ್ರಿಕೂಟವು ಪಿ.ಎಚ್. ಪೂಜಾರ್ ಅವರನ್ನು ಕಣಕ್ಕಿಳಿಸಿ ಕುತೂಹಲ ಮೂಡಿಸಿದೆ.
07:34 AM (IST) Aug 14
ಬಂಟ್ವಾಳದ ನರಿಕೊಂಬು ಶಾಲೆಯ 5ನೇ ತರಗತಿ ವಿದ್ಯಾರ್ಥಿ ಮನ್ವಿತ್, ಅಕ್ಷರ ದಾಸೋಹ ಸಿಬ್ಬಂದಿಯ ಕೈಬೆರಳು ಕಾಯಿ ತುರಿಯುವ ಯಂತ್ರಕ್ಕೆ ಸಿಲುಕಿದಾಗ ತಕ್ಷಣ ಸ್ವಿಚ್ ಆಫ್ ಮಾಡಿ ದೊಡ್ಡ ಅನಾಹುತ ತಪ್ಪಿಸಿದ್ದಾನೆ. ಈ ಬಾಲಕನ ಸಮಯಪ್ರಜ್ಞೆ ಮತ್ತು ಧೈರ್ಯಕ್ಕೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮೆಚ್ಚುಗೆ.
07:34 AM (IST) Aug 14
ಮೊದಲ ಬಾರಿಗೆ ಸಚಿವ ಸ್ಥಾನದ ಜೊತೆಗೆ ಸಭಾನಾಯಕ ಜವಾಬ್ದಾರಿ ನಿಭಾಯಿಸುವ ಸಂದರ್ಭದಲ್ಲಿ ತಪ್ಪುಗಳಾದರೆ ಪ್ರತಿಪಕ್ಷದ ಸದಸ್ಯರು ಸೇರಿದಂತೆ ಎಲ್ಲರೂ ಸಹಕರಿಸುವಂತೆ ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ(Yathindra Siddaramaiah) ಮನವಿ ಮಾಡಿದರು.