Published : Aug 01, 2026, 07:23 AM ISTUpdated : Aug 01, 2026, 11:44 PM IST

State News Live: ಖಾಲಿ ಹೊಟ್ಟೆಯಲ್ಲಿ ತುಪ್ಪ ತಿಂತಿರಾ? ವೈರಲ್ 'ಸ್ನೇಹಪಾನ' ಟ್ರೆಂಡ್ ಬಗ್ಗೆ ವೈದ್ಯರು ಹೇಳೋದೇನು?

ಸಾರಾಂಶ

ಬೆಂಗಳೂರು (ಆ.1): ಜೆನ್‌ಝೀ ಹೋರಾಟ ಬೆನ್ನಲ್ಲೇ ಕೆಪಿಎಸ್ಸಿ ಹಾಗೂ ಕೆಇಎ ನಡೆಸುವ ನೇಮಕಾತಿ ಪರೀಕ್ಷೆ ಸಮರ್ಪಕತೆ ಪರಿಶೀಲನೆಗಾಗಿ ಸರ್ಕಾರ ನಿವೃತ್ತ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್ ಅಧ್ಯಕ್ಷತೆಯ ಸಮಿತಿ ರಚಿಸಿದೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ದ ನಡೆದ ಜೆನ್‌ಝೀ ಪ್ರತಿಭಟನೆ ಗಮನದಲ್ಲಿರಿಸಿ ರಾಜ್ಯದಲ್ಲಿ ನಡೆಯಲಿರುವ 70 ಸಾವಿರಕ್ಕೂ ಹೆಚ್ಚಿನ ಹುದ್ದೆಗಳನೇಮಕಾತಿ ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮ ನಡೆಯದಂತೆ ತಡೆಯಲು ಸರ್ಕಾರ ಹೆಜ್ಜೆ ಇಟ್ಟಿದೆ. ಅದರೊಂದಿಗೆ ಇಂದಿನ ರಾಜ್ಯ ಸುದ್ದಿಗಳ ಅಪ್‌ಡೇಟ್‌ ಇಲ್ಲಿದೆ.

 

11:44 PM (IST) Aug 01

ಖಾಲಿ ಹೊಟ್ಟೆಯಲ್ಲಿ ತುಪ್ಪ ತಿಂತಿರಾ? ವೈರಲ್ 'ಸ್ನೇಹಪಾನ' ಟ್ರೆಂಡ್ ಬಗ್ಗೆ ವೈದ್ಯರು ಹೇಳೋದೇನು?

ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಇನ್ಫ್ಲುಯೆನ್ಸರ್‌ಗಳು ಮತ್ತು ಸೆಲೆಬ್ರಿಟಿಗಳು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ದೊಡ್ಡ ಪ್ರಮಾಣದಲ್ಲಿ (100 ಮಿ.ಲೀ. ನಿಂದ 150 ಮಿ.ಲೀ. ವರೆಗೆ) ತುಪ್ಪ ಕುಡಿಯುವ ವಿಡಿಯೋಗಳು ಟ್ರೆಂಡ್ ಆಗುತ್ತಿವೆ.

Read Full Story

11:00 PM (IST) Aug 01

ದೇಗುಲಗಳ ಹೆಸರಿಗೇ ಭೂಮಿ ಖರೀದಿಸಲು ನಿರ್ಧಾರ -ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

ರಾಜ್ಯದ 'ಎ' ಮತ್ತು 'ಬಿ' ವರ್ಗದ ದೇವಸ್ಥಾನಗಳ ಹೆಸರಿನಲ್ಲೇ ಹೊಸ ಭೂಮಿ ಖರೀದಿಸಲು, ಹುಂಡಿ ಹಣ ದುರುಪಯೋಗ ತಡೆಯಲು ಸಿಸಿಟಿವಿ ಅಳವಡಿಸಲು ಮತ್ತು ಒತ್ತುವರಿ ತೆರವಿಗೆ ಡಿಸಿಎಂ ಡಾ. ಜಿ. ಪರಮೇಶ್ವರ್ ಸೂಚಿಸಿದ್ದಾರೆ. 'ಸಿ' ವರ್ಗದ ದೇಗುಲಗಳ ಅಭಿವೃದ್ಧಿಗೆ 'ಎ' ವರ್ಗದ ದೇವಸ್ಥಾನಗಳ ಅನುದಾನ ಬಳಸಿಕೊಳ್ಳುವಂತೆ ಹಾಗೂ ಅರ್ಚಕರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡುವಂತೆಯೂ ಆದೇಶಿಸಿದ್ದಾರೆ.
Read Full Story

10:00 PM (IST) Aug 01

ಇರುವೆಗಳ 'ಗೂಗಲ್ ಮ್ಯಾಪ್ಸ್' ರಹಸ್ಯ ಗೊತ್ತಾ? ಸಕ್ಕರೆ ಹುಡುಕುವ ಟ್ರಿಕ್ ವೈರಲ್!

ಸಕ್ಕರೆ ಎಲ್ಲಿದೆ ಅಂತ ಕೆಲವೇ ನಿಮಿಷಗಳಲ್ಲಿ ಪತ್ತೆಹಚ್ಚಿ, ಇರುವೆಗಳು ಗುಂಪಾಗಿ ಬರೋದನ್ನು ನೋಡಿ ಅಚ್ಚರಿಯಾಗುತ್ತೆ. ಮನುಷ್ಯರ ಗೂಗಲ್ ಮ್ಯಾಪ್ಸ್‌ನಂತೆ, ಇರುವೆಗಳು ಆಹಾರ ಹುಡುಕಲು ಬಳಸುವ 'ಫೆರೋಮೋನ್' ಗೈಡ್‌ನ ಸೀಕ್ರೆಟ್ ಇಲ್ಲಿದೆ!

Read Full Story

09:27 PM (IST) Aug 01

Friendship Dayಗೆ ಬೆಸ್ಟಿಗೆ ಸರ್ಪ್ರೈಸ್ ಕೊಡಬೇಕಾ? ಈ ಡಿಜಿಟಲ್ ಐಡಿಯಾಗಳನ್ನು ಟ್ರೈ ಮಾಡಿ!

ಫ್ರೆಂಡ್‌ಶಿಪ್ ಡೇ 2026ಕ್ಕೆ ನಿಮ್ಮ ಗೆಳೆಯ/ಗೆಳತಿಯನ್ನು ಭೇಟಿ ಮಾಡಲು ಸಾಧ್ಯವಾಗದಿದ್ದರೆ, ಚಿಂತೆ ಬೇಡ. Teleparty, Plato, Snapchat, Locket, ಮತ್ತು Canva ನಂತಹ ಆ್ಯಪ್‌ಗಳನ್ನು ಬಳಸಿ.

Read Full Story

08:55 PM (IST) Aug 01

ಜಮೀರ್ ಅಹ್ಮದ್ ಖಾನ್ ಜನ್ಮದಿನ ಸಂಭ್ರಮ - ನಾಯಕರು, ಅಭಿಮಾನಿಗಳಿಂದ ಶುಭಾಶಯಗಳ ಸುರಿಮಳೆ

Zameer Ahmed Khan Birthday: ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಅಭಿಮಾನಿಗಳು, ಪಕ್ಷದ ಮುಖಂಡರು ಹಾಗೂ ಗಣ್ಯರ ಸಮ್ಮುಖದಲ್ಲಿ ತಮ್ಮ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡರು.

Read Full Story

08:33 PM (IST) Aug 01

ದೇಗುಲ ಪ್ರವೇಶಿಸಿದ್ದಕ್ಕೆ ದಲಿತ ಯುವಕರಿಗೆ ಹಿಗ್ಗಾಮುಗ್ಗಾ ಹಲ್ಲೆ ಆರೋಪ -ದಾವಣಗೆರೆಯಲ್ಲಿ ಇವತ್ತು ಏನಾಯ್ತು?

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬೆಳಲಗೆರೆ ಗ್ರಾಮದಲ್ಲಿ 'ಅಜ್ಜಿ ಹಬ್ಬ'ದ ವೇಳೆ ದೇವಸ್ಥಾನ ಪ್ರವೇಶಿಸಿದ ದಲಿತ ಯುವಕರ ಮೇಲೆ ಹಲ್ಲೆ ನಡೆದಿದೆ. ಘಟನೆಯ ನಂತರ ಜಿಲ್ಲಾಡಳಿತ ಮಧ್ಯಪ್ರವೇಶಿಸಿ, ದಲಿತರಿಗೆ ದೇವಸ್ಥಾನ ಪ್ರವೇಶ ಕಲ್ಪಿಸಿದ್ದು, 42 ಜನರ ವಿರುದ್ಧ ಪ್ರಕರಣ ದಾಖಲಿಸಿದೆ.
Read Full Story

08:20 PM (IST) Aug 01

'ನಟ ದರ್ಶನ್ ರಾಜಕೀಯಕ್ಕೆ ಬಂದರೆ ಬೆಸ್ಟ್' - ಬಿಗ್‌ಬಾಸ್ ಖ್ಯಾತಿಯ ಅಶ್ವಿನಿ ಗೌಡ ಹೇಳೋದೇನು?

Ashwini Gowda Interview: ಬಿಗ್‌ಬಾಸ್ ಕನ್ನಡ ಸೀಸನ್‌ 12 ಸ್ಪರ್ಧಿ ಹಾಗೂ ನಟಿ ಅಶ್ವಿನಿ ಗೌಡ ನೀಡಿರುವ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ತಮಿಳು ನಟ..

Read Full Story

07:36 PM (IST) Aug 01

SIIMA Awards 2026 - ಸೈಮಾ ಅವಾರ್ಡ್ 14ನೇ ಸೀಸನ್ ಕಾರ್ಯಕ್ರಮ, ಯಾರೆಲ್ಲಾ ಭಾಗಿಯಾಗಿದ್ರು, ಏನ್ ಹೇಳಿದ್ರು ನೋಡಿ!

ಈ ಸುದ್ದಿಗೋಷ್ಠಿಯಲ್ಲಿ ಮಾತನ್ನಾಡಿದ ನಟಿ ಸಾನ್ವಿ ಶ್ರೀವಾಸ್ತವ್ 'ಸೈಮಾ ಜೊತೆ ನನ್ನ ಜರ್ನಿ ಮೊದಲ ವರ್ಷದಿಂದಲೇ ಆರಂಭ ಆಗಿದೆ. ಸೆಪ್ಟೆಂಬರ್ 11 ಮತ್ತು 12 ನೇ ದಿನಾಂಕಗಳಂದು ಸೈಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ' ಎಂದಿದ್ದಾರೆ.

Read Full Story

06:32 PM (IST) Aug 01

ನಿಮ್ಮನ್ನು ನೀವು ಪ್ರೀತಿಸಲು ಇಂದೇ ಬೆಸ್ಟ್ ದಿನ - ಹೀಗೆ ಆಚರಿಸಿ National Girlfriend Day!

ಆಗಸ್ಟ್ 1, 2026, ಶನಿವಾರದಂದು 'ನ್ಯಾಷನಲ್ ಗರ್ಲ್‌ಫ್ರೆಂಡ್ ಡೇ' ಇದೆ. ನಮ್ಮ ಜೀವನದಲ್ಲಿರುವ ಪ್ರಮುಖ ಮಹಿಳೆಯರನ್ನು, ಅಂದರೆ ಸ್ನೇಹಿತೆಯರು ಅಥವಾ ಪ್ರೇಯಸಿಯನ್ನು ಸಂಭ್ರಮಿಸಲು ಇದೊಂದು ದಿನ.

Read Full Story

06:18 PM (IST) Aug 01

ರಾಜ್ಯದಲ್ಲಿ ಹೆಚ್‌ಐವಿ ನಿಯಂತ್ರಣದಲ್ಲಿದೆ, ಕಾಲೇಜು ವಿದ್ಯಾರ್ಥಿಗಳ ಸೋಂಕಿನ ಸುದ್ದಿ ಸುಳ್ಳು - ಸಚಿವ ಯು.ಟಿ. ಖಾದರ್

ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಹೆಚ್‌ಐವಿ ಕುರಿತ ಸುಳ್ಳು ಸುದ್ದಿಗಳನ್ನು ನಿರಾಕರಿಸಿದ್ದು, ರಾಜ್ಯದಲ್ಲಿ ರೋಗ ನಿಯಂತ್ರಣದಲ್ಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಹೆಚ್‌ಐವಿ ಜಾಗೃತಿಗಾಗಿ ಬೃಹತ್ ಆಂದೋಲನ ಮತ್ತು ರಕ್ತದಾನ ಉತ್ತೇಜಿಸಲು ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ರಕ್ತದ ದರ ನಿಗದಿಯಂತಹ ಹೊಸ ಯೋಜನೆಗಳನ್ನು ಘೋಷಿಸಿದ್ದಾರೆ.
Read Full Story

06:09 PM (IST) Aug 01

ರಕ್ಷಿತ್ ಶೆಟ್ಟಿ ಎಲ್ಲಿದ್ದಾರೆ? ಕೊನೆಗೂ ಆತ್ಮೀಯ ಗೆಳೆಯ ಹೇಮಂತ್ ರಾವ್ ಬಿಚ್ಚಿಟ್ರು ಆ ರಹಸ್ಯ!

"ರಕ್ಷಿತ್ ಶೆಟ್ಟಿ ಎಲ್ಲಿದ್ದಾರೆ? 'ರಿಚರ್ಡ್ ಆಂಟನಿ' ಯಾವ ಹಂತದಲ್ಲಿದೆ?" ಎಂಬ ಪ್ರಶ್ನೆಗಳು ಅಭಿಮಾನಿಗಳಲ್ಲಿ ಹೆಚ್ಚಾಗಿವೆ. ಈ ಕುತೂಹಲಕ್ಕೆ ಈಗ ನಿರ್ದೇಶಕ ಹೇಮಂತ್ ರಾವ್ ಪರೋಕ್ಷವಾಗಿ ಉತ್ತರ ನೀಡಿದ್ದಾರೆ.

Read Full Story

06:00 PM (IST) Aug 01

ಭಾರತದ ಭವ್ಯ ಪರಂಪರೆ ಮೈಸೂರಿನ ಕಣಕಣದಲ್ಲಿದೆ, ವಿವೇಕ ಸ್ಮಾರಕ ಉದ್ಘಾಟಿಸಿ ಮೋದಿ ಭಾಷಣ

ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ ವಿವೇಕ ಸ್ಮಾರಕ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕರನ್ನುದ್ದೇಶಿ ಮಾತನಾಡಿದ್ದಾರೆ. ಈ ವೇಳೆ ಮೈಸೂರು ಭಾರತದ ಸಾಂಸ್ಕೃತಿಕ ಕೇಂದ್ರವಾಗಿದೆ ಎಂದಿದ್ದಾರೆ. ಮೋದಿ ಭಾಷಣದ ವಿವರ ಇಲ್ಲಿದೆ.

Read Full Story

05:48 PM (IST) Aug 01

ಭಾರತದ ಪರ ಅತಿ ಹೆಚ್ಚು ODI ವಿಶ್ವಕಪ್ ಆಡಿದ ಟಾಪ್-7 ಕ್ರಿಕೆಟಿಗರು ಯಾರು? ಒಬ್ಬರು ಕನ್ನಡಗರು, ದ್ರಾವಿಡ್‌ ಅಲ್ಲ

ಭಾರತವು ಎರಡು ಬಾರಿ ಏಕದಿನ ವಿಶ್ವಕಪ್ ಗೆದ್ದಿದ್ದು, ಈ ಲೇಖನವು ಭಾರತದ ಪರ ಅತಿ ಹೆಚ್ಚು ಏಕದಿನ ವಿಶ್ವಕಪ್ ಟೂರ್ನಿಗಳಲ್ಲಿ ಭಾಗವಹಿಸಿದ ಟಾಪ್-7 ಆಟಗಾರರ ಪಟ್ಟಿಯನ್ನು ನೀಡುತ್ತದೆ. ಸಚಿನ್ ತೆಂಡೂಲ್ಕರ್ 6 ವಿಶ್ವಕಪ್‌ಗಳೊಂದಿಗೆ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

Read Full Story

05:42 PM (IST) Aug 01

ಯಶ್ 'ಟಾಕ್ಸಿಕ್'ಗಾಗಿ 100 ಜನರ ಆರ್ಕೆಸ್ಟ್ರಾ ಯಾಕೆ? ರವಿ ಬಸ್ರೂರು ಪೋಸ್ಟ್‌ನಲ್ಲಿ ಅಡಗಿದೆ ಸುಳಿವು!

'ಟಾಕ್ಸಿಕ್' ಸಿನಿಮಾದಲ್ಲಿ ಒಟ್ಟು ಆರು ಹಾಡುಗಳಿವೆ. ಅವುಗಳಲ್ಲಿ ಒಂದು ವಿಶೇಷ ಹಾಡಿಗೆ ರವಿ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ. ಜೊತೆಗೆ ಚಿತ್ರದ ಹಿನ್ನೆಲೆ ಸಂಗೀತದ ಸಂಪೂರ್ಣ ಜವಾಬ್ದಾರಿಯನ್ನೂ ಅವರು ಹೊತ್ತಿದ್ದಾರೆ.

Read Full Story

05:25 PM (IST) Aug 01

ಅಪ್ಪ-ಅಮ್ಮನ ಜೊತೆ ಹೇಮಕುಂಡ್ ಚಾರಣ - ಸಂಗೀತಾ ಶೃಂಗೇರಿ ಹಂಚಿಕೊಂಡ್ರು ಹಿಮಾಲಯದ ಸುಂದರ ನೆನಪುಗಳು

Sangeetha Sringeri Trek: ಕನ್ನಡ ಚಿತ್ರರಂಗದ ನಟಿ ಹಾಗೂ 'ಬಿಗ್‌ ಬಾಸ್ ಕನ್ನಡ ಸೀಸನ್‌ 10' ಮಾಜಿ ಸ್ಪರ್ಧಿ ಸಂಗೀತಾ ಶೃಂಗೇರಿ ಸದ್ಯ ಉತ್ತರಾಖಂಡದ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಿದ್ದಾರೆ. ಆದರೆ ಈ ಪ್ರವಾಸದ ವಿಶೇಷತೆ ಬೇರೆ.

Read Full Story

05:24 PM (IST) Aug 01

ಮೊಸರಲ್ಲಿ ಕಲ್ಲು.. 'ಸೀತೆ' ಸಾಯಿ ಪಲ್ಲವಿ ಬಗ್ಗೆ ಬ್ಯಾಡ್ ಕಾಮೆಂಟ್ಸ್ ಮಧ್ಯೆ 'ನಯನತಾರಾ' ಬಂದಿದ್ದು ಏಕೆ?

2026ರ ಈ ಹೊಸ ರಾಮಾಯಣ ಸಿನಿಮಾದಲ್ಲಿ 'ಸೀತೆ' ಪಾತ್ರಕ್ಕೆ ನಟಿ ಸಾಯಿ ಪಲ್ಲವಿ ಆಯ್ಕೆಯನ್ನು ಹಲವರು ಶುರುವಿನಿಂದಲೂ ಪ್ರಶ್ನಿಸುತ್ತಲೇ ಬಂದಿದ್ದಾರೆ.  ಟ್ರೇಲರ್ ಬಿಡುಗಡೆ ಬಳಿಕ ನಟಿ ಸಾಯಿ ಪಲ್ಲವಿ ಲುಕ್ ಹಾಗೂ ನಟನೆಗೆ ಬಹಳಷ್ಟು ಜನರು ಫಿದಾ ಆಗಿದ್ದಾರೆ. ಆದರೂ ಈಗ ಏನ್ ಆಗ್ತಿದೆ ನೋಡಿ..

Read Full Story

05:12 PM (IST) Aug 01

ಕೋಲಾರ ಮಹಿಳಾ ಉದ್ಯಮಿಯ ಸಾಧನೆ - ಮಾಲ್ಡೀವ್ಸ್‌ಗೆ ಮೊದಲ ಬಾರಿಗೆ ಕರ್ನಾಟಕದಿಂದ ಮಾವು ರಫ್ತು, ರೈತರಿಗೆ ಅಶ್ವಿನಿ ಸಾಥ್!

APEDA ಸಹಯೋಗದೊಂದಿಗೆ, ಕರ್ನಾಟಕದಿಂದ ಮೊದಲ ಬಾರಿಗೆ 'ನೀಲಂ' ಮತ್ತು 'ತೋತಾಪುರಿ' ಮಾವಿನಹಣ್ಣುಗಳನ್ನು ವಿಮಾನದ ಮೂಲಕ ಮಾಲ್ಡೀವ್ಸ್‌ಗೆ ಯಶಸ್ವಿಯಾಗಿ ರಫ್ತು ಮಾಡಲಾಗಿದೆ. ಕೋಲಾರದ ರೈತ ಉತ್ಪಾದಕ ಕಂಪನಿ ಮತ್ತು ಮಹಿಳಾ ಉದ್ಯಮಿಯೊಬ್ಬರ ನೇತೃತ್ವದಲ್ಲಿ ನಡೆದ ಈ ಐತಿಹಾಸಿಕ ರಫ್ತು, ರೈತರ ಆದಾಯವನ್ನು ಹೆಚ್ಚಿಸಿ, ತಡವಾದ ಋತುವಿನ ತಳಿಗಳಿಗೆ ಜಾಗತಿಕ ಮಾರುಕಟ್ಟೆಯನ್ನು ವಿಸ್ತರಿಸಿದೆ.
Read Full Story

04:51 PM (IST) Aug 01

ಜಾಲಿ ಸಿನಿಮಾ ವಿಮರ್ಶೆ - ಹುಡುಗಿಯಲ್ಲಿ ಅಮ್ಮನನ್ನು, ಹುಡುಗನಲ್ಲಿ ತಂದೆಯನ್ನು ಕಂಡ ಪ್ರೀತಿಯ ಕಥೆ!

Jolly Movie Review: ತಾರುಷ್ ನಟನೆಯ, ನಿರ್ದೇಶನದ ಮೇಲಿನ ಪ್ರೇಮದಲ್ಲಿ ಈ ಸಿನಿಮಾ ಮಾಡಿದ್ದಾರೆ. ಅದಕ್ಕೆ ತಕ್ಕಂತೆ ಸ್ಟೈಲಿಷ್ ಫೈಟುಗಳು, ವೇಗದ ಡಾನ್ಸುಗಳು, ಪ್ರೇಮ ಸಾರುವ ಹಾಡುಗಳನ್ನು ಇಟ್ಟಿದ್ದಾರೆ.

Read Full Story

04:43 PM (IST) Aug 01

ಕಾವೇರಿ ಕೊಳ್ಳದಲ್ಲಿ ವರುಣನ ಆರ್ಭಟ - ಕಬಿನಿ ಭರ್ತಿ, ಹಾರಂಗಿ ಜಲಾಶಯದಿಂದ ಭಾರಿ ನೀರು ತಮಿಳುನಾಡಿಗೆ ಬಿಡುಗಡೆ!

ಕಾವೇರಿ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕಬಿನಿ, ಕೆಆರ್‌ಎಸ್ ಮತ್ತು ಹಾರಂಗಿ ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿದೆ. ಈಗಾಗಲೇ ಭರ್ತಿಯಾಗಿರುವ ಕಬಿನಿ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸಲಾಗುತ್ತಿದ್ದು, ಇದು ಕಾವೇರಿ ವಿವಾದದ ತೀವ್ರತೆಯನ್ನು ಕಡಿಮೆ ಮಾಡುವ ನಿರೀಕ್ಷೆ ಮೂಡಿಸಿದೆ.
Read Full Story

04:39 PM (IST) Aug 01

ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ ಪ್ರಧಾನಿ ಮೋದಿಯಿಂದ ವಿವೇಕ ಸ್ಮಾರಕ ಉದ್ಘಾಟನೆ

ಪ್ರಧಾನಿ ನರೇಂದ್ರ ಮೋದಿ ಇಂದು ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ ವಿವೇಕ ಸ್ಮಾರಕ ಉದ್ಘಾಟನೆ ಮಾಡಿದ್ದಾರೆ. ಹೆಲಿಕಾಪ್ಟರ್ ಮೂಲಕ ಮೈಸೂರಿಗೆ ಆಗಮಿಸಿದ ಮೋದಿ ವಿವೇಕ ಸಾಂಸ್ಕೃತಿ ಕೇಂದ್ರ ಉದ್ಘಾಟನೆ ಮಾಡಿದ್ದಾರೆ.

Read Full Story

04:38 PM (IST) Aug 01

ಶ್ರೀಮತಿ ಸಿಂಧೂರ ಸಿನಿಮಾ ವಿಮರ್ಶೆ - ಕುಟುಂಬ, ನಂಬಿಕೆ ಮತ್ತು ಹನುಮನ ಶಕ್ತಿಯ ಕಥೆ ಹೇಗಿದೆ?

Shrimathi Sindhoora Movie Review: ಇಂದು (ಪ್ರಿಯಾ ಹೆಗ್ಡೆ) ಹಳ್ಳಿಯ ಮುಗ್ಧ ಹುಡುಗಿ. ದೈವೇಚ್ಛೆಯಂತೆ ದಿವಾನ್‌ ಎಂಬ ಪ್ರತಿಷ್ಠಿತ ಕುಟುಂಬದ ಏಕೈಕ ಕುಡಿ ಭರತ್‌ (ವಿಜಯ ರಾಘವೇಂದ್ರ) ಜೊತೆ ಅವಳ ಮದುವೆ ಆಗುತ್ತದೆ.

Read Full Story

04:27 PM (IST) Aug 01

ಹೇಗಿದೆ ತದ್ವಿರುದ್ಧ ಸಿನಿಮಾ - ಒಂದು ಕಾಡು... ಒಂದು ರಹಸ್ಯ... ಒಂದು ಬೆಚ್ಚಿಬೀಳಿಸುವ ಸತ್ಯ!

Tadviruddha Movie Review: ಈ ಸಿನಿಮಾದ ಮೊದಲ ಫ್ರೇಮ್‌ನಿಂದ ಕಟ್ಟಕಡೆಯ ಫ್ರೇಮ್‌ವರೆಗೂ ಅಚ್ಚುಕಟ್ಟುತನ, ಕಸುಬುದಾರಿಕೆ ಕಾಣಿಸುತ್ತದೆ. ಕತೆ ಮತ್ತು ಚಿತ್ರಕತೆ ಎರಡನ್ನೂ ಬಹಳ ಜತನದಿಂದ ಕಟ್ಟಿಕೊಡಲಾಗಿದೆ.

Read Full Story

04:12 PM (IST) Aug 01

ರಾಗಿಣಿ ದ್ವಿವೇದಿ ಅಭಿನಯದ Sarkari Nyaya Bele Angadi ಹೇಗಿದೆ? ಇಲ್ಲಿದೆ ಸಂಪೂರ್ಣ ವಿಮರ್ಶೆ

Sarkari Nyaya Bele Angadi Review: ಮಹಿಳೆಯೊಬ್ಬಳು ಸರ್ಕಾರಿ ನ್ಯಾಯ ಬೆಲೆ ಅಂಗಡಿ ನಡಿಸೋದು ಎಷ್ಟು ಕಷ್ಟ ಎಂದು ಹೇಳುವ ಮೂಲಕ ಮಹಿಳಾ ಸಬಲೀಕರಣದ ಬಗ್ಗೆಯೂ ಈ ಸಿನಿಮಾ ಮಾತನಾಡುತ್ತದೆ.

Read Full Story

04:04 PM (IST) Aug 01

Job - ಕೆಲಸ ಬಿಟ್ಟ ಮೇಲೂ ಡೆಲಿವರಿ ಮಾಡ್ಬೇಕಂತೆ! ಕೊನೆಯ ದಿನದ ವಿಚಿತ್ರ ಅನುಭವ ಬಿಚ್ಚಿಟ್ಟ ಉದ್ಯೋಗಿ!

ರಾಜೀನಾಮೆ ನೀಡಿ, ಕಂಪನಿಯಲ್ಲಿ ಕೊನೆಯ ದಿನದಂದು ಕೆಲಸ ಮುಗಿಸಿದ ಉದ್ಯೋಗಿಯೊಬ್ಬರಿಗೆ, ಅವರ ಬಾಸ್ ಮತ್ತೆ ಕೆಲಸ ನೀಡಿದ ವಿಚಿತ್ರ ಘಟನೆ ನಡೆದಿದೆ. ಅಧಿಕೃತವಾಗಿ ಉದ್ಯೋಗ ಮುಗಿದ ನಂತರವೂ ಮುಂದಿನ 10 ದಿನಗಳ ಕಾಲ ಕೆಲಸ ಮಾಡುವಂತೆ ಮ್ಯಾನೇಜರ್ ಕೇಳಿಕೊಂಡಿದ್ದಾರೆ. ಆದರೆ ಮುಂದೆ ಆಗಿದ್ದೆ ಬೇರೆ.

Read Full Story

03:53 PM (IST) Aug 01

ಬುರುಡೆ ಪ್ರಕರಣ - ಕೋಟಿಗೆ ಎಷ್ಟು ಸೊನ್ನೆ ಇದೆ ಎಂದೇ ಗೊತ್ತಿಲ್ಲ, ನನ್ನ ವಿರುದ್ಧದ ಷಡ್ಯಂತ್ರ ಬಯಲಾಗಿದೆ - ರಮಾ ನಾಗರಾಜ್!

ಸೌಜನ್ಯ ಪ್ರಕರಣದಲ್ಲಿ ವಿದೇಶಿ ಫಂಡಿಂಗ್ ಪಡೆದ ಸುಳ್ಳು ಆರೋಪ ಎದುರಿಸುತ್ತಿದ್ದ ಸಾಮಾಜಿಕ ಹೋರಾಟಗಾರ್ತಿ ರಮಾ ನಾಗರಾಜ್‌ ಅವರಿಗೆ ನ್ಯಾಯಾಲಯದಲ್ಲಿ ಜಯ ಸಿಕ್ಕಿದೆ. ಗ್ರಾಮಾಭಿವೃದ್ಧಿ ಸಂಘಗಳ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಈ ಆರೋಪ ಮಾಡಲಾಗಿತ್ತು ಎಂದ ಅವರು, ಸತ್ಯಕ್ಕಾಗಿ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ವಿರೋಧಿಗಳಿಗೆ ಎಚ್ಚರಿಸಿದ್ದಾರೆ.
Read Full Story

03:49 PM (IST) Aug 01

ಆಗಸ್ಟ್ ಮೊದಲ ದಿನವೇ ಭರ್ತಿಯಾದ ತುಂಗಾ ಜಲಾಶಯ, 65 ಸಾವಿರ ಕ್ಯೂಸೆಕ್ ನೀರು ಬಿಡುಗಡೆ

ನೀರಿನ ಆತಂಕ ಹೆಚ್ಚಾಗುತ್ತಿದ್ದಂತೆ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಪರಿಣಾಮ ಕೆಲ ಜಲಾಶಗಳು ಭರ್ತಿಯಾಗುತ್ತಿದೆ. ಆಗಸ್ಟ್ 1 ರಂದೇ ತುಂಗಾ ಜಲಾಶಯ ಭರ್ತಿಯಾಗಿದ್ದು ನೀರು ಬಿಡುಗಡೆ ಮಾಡಲಾಗಿದೆ.

Read Full Story

03:35 PM (IST) Aug 01

DySP Extortion Case - ಶಾಕಿಂಗ್! ಗಗನಸಖಿ ಹುದ್ದೆ ಬಿಟ್ಟು ಡಿವೈಎಸ್ಪಿ ಆದ ಮಹಿಳಾಧಿಕಾರಿ ವಿರುದ್ಧವೇ ವಂಚನೆ-ಸುಲಿಗೆ ಕೇಸ್

ಹಿಂದೆ ಗಗನಸಖಿಯಾಗಿದ್ದ ಮಹಿಳಾ ಡಿವೈಎಸ್ಪಿ ನೇಹಾ ಎಂಬುವವರ ವಿರುದ್ಧ ಚಾಲಕನೊಬ್ಬನಿಂದ ಹಣ ಸುಲಿಗೆ ಮಾಡಿದ ಗಂಭೀರ ಆರೋಪ ಕೇಳಿಬಂದಿದೆ. ವಾಹನ ಜಪ್ತಿ ಮಾಡುವುದಾಗಿ ಬೆದರಿಸಿ 30,000 ರೂಪಾಯಿ ವಸೂಲಿ ಮಾಡಿದ್ದಾರೆ ಎನ್ನಲಾಗಿದ್ದು, ಇಲಾಖಾ ತನಿಖೆಗೆ ಆದೇಶಿಸಲಾಗಿದೆ.
Read Full Story

03:30 PM (IST) Aug 01

ರಸ್ತೆ ಕಾಮಗಾರಿ ವೇಳೆ ಸಿಕ್ಕಿತು ರಾಷ್ಟ್ರಕೂಟರ ಕಾಲದ ಅಪರೂಪದ ನಿಧಿ!

ಕಲಬುರಗಿ ಜಿಲ್ಲೆಯ ಹೊಳಕುಂದಾ ಗ್ರಾಮದಲ್ಲಿ ರಸ್ತೆ ಕಾಮಗಾರಿ ನಡೆಸುವಾಗ, ರಾಷ್ಟ್ರಕೂಟರ ಕಾಲದ್ದೆಂದು ನಂಬಲಾದ ಅಪರೂಪದ ಸೂರ್ಯನಾರಾಯಣ ದೇವರ ಶಿಲಾ ಮೂರ್ತಿಯೊಂದು ಪತ್ತೆಯಾಗಿದೆ.

Read Full Story

03:15 PM (IST) Aug 01

ಉಡುಪಿಯಲ್ಲಿ ಭೀಕರ ಅಪಘಾತ - ಖಾಸಗಿ ಬಸ್‌ ಡಿಕ್ಕಿಯಾಗಿ ನಗರಸಭೆ ಮಾಜಿ ಉಪಾಧ್ಯಕ್ಷೆ ಸ್ಥಳದಲ್ಲೇ ಸಾವು!

ಉಡುಪಿ ನಗರಸಭೆಯ ಮಾಜಿ ಉಪಾಧ್ಯಕ್ಷೆ ಹಾಗೂ ಹಿಂದೂ ಮುಖಂಡ ಮಂಜುನಾಥ್ ಕೊಳ ಅವರ ಪತ್ನಿ ಲಕ್ಷ್ಮೀ ಮಂಜುನಾಥ್ ಕೊಳ ಅವರು ನಗರದ ಲಯನ್ಸ್ ಸರ್ಕಲ್ ಬಳಿ ನಡೆದ ರಸ್ತೆ ಅಪಘಾತದಲ್ಲಿ ದುರಂತವಾಗಿ ಮೃತಪಟ್ಟಿದ್ದಾರೆ.

Read Full Story

03:05 PM (IST) Aug 01

ಚಿತ್ರದುರ್ಗದಲ್ಲಿ ಗಿರೀಶ್ ಮಟ್ಟಣ್ಣವರ್ ಸ್ಫೋಟಕ ಹೇಳಿಕೆ - ನಿಗೂಢ ಸಾವುಗಳ ಹಿಂದೆ ಅಡಗಿದೆಯಾ ದೊಡ್ಡ ಷಡ್ಯಂತ್ರ?

ಗಿರೀಶ್ ಮಟ್ಟಣ್ಣವರ್ ಅವರು, ನಿಗೂಢ ಸಾವುಗಳಂತಹ ಗಂಭೀರ ವಿಷಯಗಳನ್ನು ಮುಚ್ಚಿಹಾಕಲು ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಸರ್ಕಾರವು SIT ವರದಿಯನ್ನು ಮುಚ್ಚಿಡುತ್ತಿದ್ದು, ಅದನ್ನು ಬಹಿರಂಗಪಡಿಸಬೇಕು ಮತ್ತು ಸೌಜನ್ಯ ಕೊಲೆ ಪ್ರಕರಣದ ಮರುತನಿಖೆಗೆ ಹೊಸ SIT ರಚಿಸಬೇಕೆಂದು ಅವರು ಒತ್ತಾಯಿಸಿದ್ದಾರೆ. 'ರಾಷ್ಟ್ರ ರಕ್ಷಣಾ ಪಡೆ' ಹೆಸರಿನಲ್ಲಿ ನಡೆಯುತ್ತಿರುವ ಅಕ್ರಮಗಳ ವಿರುದ್ಧವೂ ಅವರು ಧ್ವನಿ ಎತ್ತಿದ್ದಾರೆ.
Read Full Story

03:00 PM (IST) Aug 01

ಚಿಕ್ಕಮಗಳೂರು - ಕಾಫಿನಾಡಿಲ್ಲಿ ಜೋರಾದ ಮಳೆ ಆರ್ಭಟ, ಶೃಂಗೇರಿ ದೇಗುಲ ರಸ್ತೆ ಜಲಾವೃತ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ತುಂಗಾ ಮತ್ತು ಭದ್ರಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಇದರಿಂದಾಗಿ ಕಳಸ-ಕಾರ್ಕಳ ಹೆದ್ದಾರಿ ಬಂದ್ ಆಗಿದ್ದು, ಶೃಂಗೇರಿಯ ದೇಗುಲದ ರಸ್ತೆ ಜಲಾವೃತಗೊಂಡಿದೆ.

Read Full Story

02:45 PM (IST) Aug 01

ಜೆನ್‌ ಜಿ 'ಜಿರಳೆ' ಪೋಸ್ಟ್‌ಗೆ ಸಮರ್ಥನೆ; ಟ್ರೋಲಿಗರಿಗೆ ಮುಟ್ಟಿ ನೋಡಿಕೊಳ್ಳುವಂತೆ ಪೆಟ್ಟು ಕೊಟ್ಟ ಕಂಗನಾ!

ಯಾವುದಾದರೊಂದು ವಿಷಯದ ಬಗ್ಗೆ ನೇರವಾಗಿ ಮಾತನಾಡಿ ಸುದ್ದಿಯಲ್ಲಿರುವ ಕಂಗನಾ, ಇತ್ತೀಚೆಗೆ  ‘ಜೆನ್ ಜಿ’ ಪ್ರತಿಭಟನಾಕಾರರ ವಿರುದ್ಧ ಯುದ್ಧ ಸಾರಿದ್ದಾರೆ. ಟ್ರೋಲರ್‌ಗಳು ಕಂಗನಾರ ಹಳೆಯ ಸಿನಿಮಾಗಳ ದೃಶ್ಯಗಳನ್ನು ಬಳಸಿ ಕಾಲೆಳೆದಿದ್ದಕ್ಕೆ ಇದೀಗ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ, ನೋಡಿ..

Read Full Story

01:33 PM (IST) Aug 01

ಓದಿದ್ದಕ್ಕೂ ಬರೆದಿದ್ದಕ್ಕೂ ಸಂಬಂಧವೇ ಇಲ್ಲ; ರಾಹುಲ್ ಗಾಂಧಿಗೆ ಟಾಂಗ್ ಕೊಡಲು ಹೋಗಿ ಮುಖಭಂಗ! ವಿಡಿಯೋ ವೈರಲ್‌!

ಪಶ್ಚಿಮ ಬಂಗಾಳದ ಸಹಾಯಕ ಪ್ರಾಧ್ಯಾಪಕಿಯೊಬ್ಬರು ರಾಹುಲ್ ಗಾಂಧಿಯವರನ್ನು ಟೀಕಿಸಿ 'X' ನಲ್ಲಿ ಪೋಸ್ಟ್ ಮಾಡಿದ್ದರು. ಆದರೆ, ಅವರ ಇಂಗ್ಲಿಷ್ ಬರಹದಲ್ಲಿದ್ದ ವ್ಯಾಕರಣ ದೋಷಗಳಿಂದಾಗಿ, ರಾಜಕೀಯ ಚರ್ಚೆಯ ಬದಲು ಅವರ ಭಾಷಾ ಜ್ಞಾನವೇ ನೆಟ್ಟಿಗರಿಂದ ತೀವ್ರ ಟ್ರೋಲ್‌ಗೆ ಒಳಗಾಗಿ ಮುಜುಗರಕ್ಕೊಳಗಾದರು.
Read Full Story

12:14 PM (IST) Aug 01

ಕಾವೇರಿ ಕಿಚ್ಚು ಏರಿದ ನಡುವೆ, ನಳನಳಿಸಿದ ಕಬಿನಿ, ಹಾರಂಗಿ ಜಲಾಶಯ!

ಕೇರಳದ ವೈನಾಡು ಮತ್ತು ಕೊಡಗಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕಬಿನಿ ಮತ್ತು ಹಾರಂಗಿ ಜಲಾಶಯಗಳು ಭರ್ತಿಯಾಗುವ ಹಂತ ತಲುಪಿವೆ. ಇದರಿಂದ ಕಾವೇರಿ ಜಲಾನಯನ ಪ್ರದೇಶದ ರೈತರಲ್ಲಿ ಸಂತಸ ಮೂಡಿದೆ.

Read Full Story

11:54 AM (IST) Aug 01

ಭೀಮಾನದಿಗೆ ಹರಿದು ಬಂತು 1.43 ಲಕ್ಷ ಕ್ಯೂಸೆಕ್ ನೀರು - ವಿಜಯಪುರ ಜಿಲ್ಲಾಡಳಿತದಿಂದ ಭಾರೀ ಅಲರ್ಟ್‌!

ಮಹಾರಾಷ್ಟ್ರದ ಜಲಾನಯನ ಪ್ರದೇಶಗಳಲ್ಲಿನ ವ್ಯಾಪಕ ಮಳೆಯಿಂದಾಗಿ, ಉಜನಿ ಮತ್ತು ವೀರ್ ಜಲಾಶಯಗಳಿಂದ ಭೀಮಾ ನದಿಗೆ 1,43,000 ಕ್ಯೂಸೆಕ್ ನೀರನ್ನು ಹರಿಬಿಡಲಾಗಿದೆ. ಇದರಿಂದ ವಿಜಯಪುರದ ನದಿ ಪಾತ್ರದಲ್ಲಿ ಪ್ರವಾಹದ ಭೀತಿ ಉಂಟಾಗಿದ್ದು, ಜಿಲ್ಲಾಡಳಿತವು ನದಿ ತೀರದ ಜನರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.

Read Full Story

11:53 AM (IST) Aug 01

ಇರಾನ್ ಮಿಸೈಲ್ ದಾಳಿಗೆ ಭಾರತದ ಮಗಳು ಬಲಿ; ಅಮೆರಿಕದಲ್ಲಿ ಅದ್ದೂರಿ ಕಣ್ಣೀರಿನ ವಿದಾಯ!

ಇರಾನ್ ಯುದ್ಧದಲ್ಲಿ ಹುತಾತ್ಮರಾದ ಭಾರತೀಯ ಮೂಲದ ಅಮೆರಿಕನ್ ಸೈನಿಕೆ ಏಂಜಲ್ ಸಾರಾ ರಾಮಪ್ರಸಾದ್ ಅವರಿಗೆ ನ್ಯೂಯಾರ್ಕ್‌ನಲ್ಲಿ ಸಕಲ ಮಿಲಿಟರಿ ಗೌರವಗಳೊಂದಿಗೆ ಅಂತಿಮ ವಿದಾಯ ನೀಡಲಾಯಿತು. ಜೋರ್ಡಾನ್‌ನಲ್ಲಿ ನಡೆದ ಕ್ಷಿಪಣಿ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಈ ವೀರ ಯೋಧೆಯ ತ್ಯಾಗವನ್ನು ಇಡೀ ದೇಶ ಸ್ಮರಿಸಿತು.
Read Full Story

11:37 AM (IST) Aug 01

ಪೂಜೆ ನೆಪದಲ್ಲಿ 2.5 ಕೋಟಿ ವಂಚಿಸಿದ ನಕಲಿ ಬಾಬಾ ಅಪ್ಸರ್‌ ಪಾಷಾ!

ಬೆಂಗಳೂರಿನಲ್ಲಿ, ಮನೆಯಲ್ಲಿನ ದುಷ್ಟ ಶಕ್ತಿ ನಿವಾರಣೆಗೆ ವಿಶೇಷ ಪೂಜೆ ಮಾಡುವುದಾಗಿ ನಂಬಿಸಿದ ನಕಲಿ ಬಾಬಾ ಮತ್ತು ಆತನ ಸಹಚರರು ಮಹಿಳೆಯೊಬ್ಬರಿಂದ ₹2.5 ಕೋಟಿ ಪಡೆದು ವಂಚಿಸಿದ್ದಾರೆ. ಹಣ ಪಡೆದ ನಂತರ ಆರೋಪಿಗಳು ತಲೆಮರೆಸಿಕೊಂಡಿದ್ದು, ಸಂತ್ರಸ್ತೆ ದೂರಿನ ಮೇರೆಗೆ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Read Full Story

11:18 AM (IST) Aug 01

ಪರೀಕ್ಷೆ ವೇಳೆ ಹಿಜಾಬ್ ಹಾಕುವಂತಿಲ್ಲ, ಧಾರ್ಮಿಕ ಉಡುಪುಗಳ ಗೊಂದಲ ಬಗ್ಗೆ ಪ್ರಿಯಾಂಕ ಖರ್ಗೆ ಸ್ಪಷ್ಟನೆ

ರಾಜ್ಯದಲ್ಲಿ ಆಗಸ್ಟ್ 2ರಂದು ಪೊಲೀಸ್ ಕಾನ್ಸ್‌ಸ್ಟೇಬಲ್ ಪರೀಕ್ಷೆ ನಡೆಯಲಿದೆ. ಪರೀಕ್ಷೆ ಕುರಿತ ಗೊಂದಲಗಳಿಗೆ ಗೃಹ ಸಚಿವ ಪ್ರಿಯಾಂಕ ಖರ್ಗೆ ಸ್ಪಷ್ಟನೆ ನೀಡಿದ್ದಾರೆ. ಪ್ರಮುಖವಾಗಿ ಹಿಜಾಬ್ ಹಾಕಿ ಪರೀಕ್ಷೆ ಬರೆಯಲು ಅವಕಾಶವಿಲ್ಲ ಎಂದಿದ್ದಾರೆ.

Read Full Story

11:05 AM (IST) Aug 01

Ananya Birla - ಬದುಕು ಕಳೆದುಕೊಂಡವರ ಬಾಳಿಗೆ ಬೆಳಕಾದ ಆರ್‌ಸಿಬಿ ಒಡತಿ ಅನನ್ಯ ಬಿರ್ಲಾ!

ಉದ್ಯಮಿ ಮತ್ತು ಆರ್‌ಸಿಬಿ ಒಡತಿ ಅನನ್ಯ ಬಿರ್ಲಾ ಅವರು ಅಸ್ಸಾಂ ಪ್ರವಾಹ ಪೀಡಿತ ಪ್ರದೇಶಗಳಿಗೆ ಸ್ವತಃ ಭೇಟಿ ನೀಡಿ, ಸಂತ್ರಸ್ತರ ಕಷ್ಟಗಳನ್ನು ಆಲಿಸಿದ್ದಾರೆ. ಅವರು ಆಹಾರ ಮತ್ತು ಅಗತ್ಯ ವಸ್ತುಗಳನ್ನು ವಿತರಿಸಿ, ತಮ್ಮ ಮಾನವೀಯ ನಡೆಯ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದು, ಈ ಅನುಭವವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

Read Full Story

11:01 AM (IST) Aug 01

ಕದ್ದುಮುಚ್ಚಿ ತಮಿಳುನಾಡಿಗೆ ಕಾವೇರಿ ನೀರು? ಪತ್ತೆ ಹಚ್ಚಲು ಮಂಡ್ಯ ಹುಡುಗನ ಖತರ್ನಾಕ್‌ ಪ್ಲ್ಯಾನ್‌

ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ರಾತ್ರಿ ವೇಳೆ ಕದ್ದುಮುಚ್ಚಿ ನೀರು ಹರಿಸಲಾಗುತ್ತಿದೆ ಎಂಬ ಶಂಕೆಯ ಮೇರೆಗೆ, ಶ್ರೀರಂಗಪಟ್ಟಣದ ಯುವಕನೊಬ್ಬ ಸತ್ಯಾಸತ್ಯತೆ ಪರೀಕ್ಷಿಸಲು ಮುಂದಾಗಿದ್ದಾನೆ.

Read Full Story

More Trending News