LIVE NOW
Published : Feb 08, 2026, 06:01 AM ISTUpdated : Feb 08, 2026, 08:40 AM IST

Karnataka News Live: ಮನೆಗೆ ಗಂಡ ತಡವಾಗಿ ಬರ್ತಿದ್ದಕ್ಕೆ ನೇಣು ಬಿಗಿದುಕೊಂಡ 22 ವರ್ಷದ ಗೃಹಿಣಿ; ತಬ್ಬಲಿಯಾದ 10 ತಿಂಗಳ ಕಂದಮ್ಮ

ಸಾರಾಂಶ

ವಿಜಯಪುರ: ಡಿಸಿಎಂ ಡಿ.ಕೆ.ಶಿವಕುಮಾರ್‌ ಜತೆ ಸೇರಿ ಬಿಜೆಪಿ ಸರ್ಕಾರ ರಚನೆ ಮಾಡಿದರೆ ಆತ್ಮಹತ್ಯೆ ಮಾಡಿಕೊಂಡಂತೆ, ರಾತ್ರಿ ಕಂಡ ಬಾವಿಗೆ ಹಗಲು ಬಿದ್ದಂತೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೂ ಕೂಡ ಒಪ್ಪಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ಡಿಕೆಶಿಯೊಂದಿಗೆ ಸೇರಿ ಬಿಜೆಪಿ ಸರ್ಕಾರ ಮಾಡುತ್ತೆ ಅನ್ನೋ ವಿಚಾರವಾಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, ಸದನದಲ್ಲಿ ಅಬಕಾರಿ ಸಚಿವರ ವಿರುದ್ಧ ಹೋರಾಟ ಮಾಡುತ್ತಿದ್ದರೆ ಬಿಜೆಪಿ ರಾಜ್ಯಾಧ್ಯಕ್ಷರು ಎಲ್ಲಿಯೂ ಕೂಡ ಕಾಣಿಸಿಕೊಳ್ಳಲಿಲ್ಲ. ಡಿ.ಕೆ.ಶಿವಕುಮಾರ್‌ ವಿರುದ್ಧ ಆರೋಪ ಕೇಳಿ ಬಂದಾಗ ಇವರ್ಯಾರು ಹೋರಾಟ ಮಾಡಲಿಲ್ಲ. ಲಕ್ಷ್ಮಿ ಹೆಬ್ಬಾಳ್ಕರ್‌ ವಿರುದ್ಧ ಆರೋಪ ಕೇಳಿ ಬಂದಾಗ ಗಂಭೀರ ಹೋರಾಟ ಮಾಡಲಿಲ್ಲ. ಈಗ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಎಂದು ದೂರಿದರು.

Woman Suicide

08:40 AM (IST) Feb 08

ಮನೆಗೆ ಗಂಡ ತಡವಾಗಿ ಬರ್ತಿದ್ದಕ್ಕೆ ನೇಣು ಬಿಗಿದುಕೊಂಡ 22 ವರ್ಷದ ಗೃಹಿಣಿ; ತಬ್ಬಲಿಯಾದ 10 ತಿಂಗಳ ಕಂದಮ್ಮ

ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಗಂಡ ತಡವಾಗಿ ಮನೆಗೆ ಬರುತ್ತಿದ್ದ ಕಾರಣಕ್ಕೆ ನೊಂದ 22 ವರ್ಷದ ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಮೃತರ ಪೋಷಕರು, ಪತಿ ಹಾಗೂ ಅತ್ತೆ-ಮಾವನ ವಿರುದ್ಧ ಮಾನಸಿಕ ಕಿರುಕುಳದ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Read Full Story

08:40 AM (IST) Feb 08

ರಾಜ್ಯದಲ್ಲಿರೋದು ಕಾಂಗ್ರೆಸ್ ಅಲ್ಲ, ಎಡಪಂಥೀಯ ಸರ್ಕಾರ - ಬಿಎಲ್ ಸಂತೋಷ್ ವಾಗ್ದಾಳಿ

ಬಿಜೆಪಿ ಮುಖಂಡ ಬಿ.ಎಲ್. ಸಂತೋಷ್ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರವು ಸ್ವತಂತ್ರವಾಗಿಲ್ಲ, ಬದಲಿಗೆ ಎಡಪಂಥೀಯರ ಕಪಿಮುಷ್ಠಿಯಲ್ಲಿದೆ ಎಂದು ಆರೋಪಿಸಿದ್ದಾರೆ. ಇತಿಹಾಸವನ್ನು ತಿರುಚಿ, ಹಿಂದೂ ವಿರೋಧಿ ಟಿಪ್ಪು ಸುಲ್ತಾನ್‌ನನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ಬಿಂಬಿಸಲಾಗುತ್ತಿದೆ ಎಂದು ಅವರು ಟೀಕಿಸಿದ್ದಾರೆ.
Read Full Story

08:09 AM (IST) Feb 08

ಜೈಲಲ್ಲಿದ್ದ ಶಂಕಿತ ಉಗ್ರ ಸಾದಿಕ್‌ ಬಾಷಾ ಸಾವು; ಭಾರತದ ಮೇಲೆ ಇವನು ನಡೆಸಿದ್ದ ಸ್ಕೆಚ್ ಎಂತಹದ್ದು ಗೊತ್ತಾ?

ಐಸಿಸ್ ಚಟುವಟಿಕೆಗಳನ್ನು ವಿಸ್ತರಿಸುತ್ತಿದ್ದ ಆರೋಪದ ಮೇಲೆ ಎನ್‌ಐಎಯಿಂದ ಬಂಧಿತನಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಶಂಕಿತ ಉಗ್ರ ಸಾದಿಕ್ ಬಾಷಾ, ತೀವ್ರ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಈ ಉಗ್ರ ಯಾರು ಗೊತ್ತಾ?

Read Full Story

07:48 AM (IST) Feb 08

ರೈಲ್ವೆ ಯೋಜನೆಗೆ ಭೂಮಿ ನೀಡಲು ರಾಜ್ಯ ಹಿಂದೇಟು - ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಕಿಡಿ

ಕೇಂದ್ರ ಸರ್ಕಾರವು ರಾಜ್ಯಕ್ಕೆ ಹಲವು ರೈಲ್ವೆ ಯೋಜನೆಗಳನ್ನು ನೀಡಿದ್ದರೂ, ಭೂಸ್ವಾಧೀನ ಪ್ರಕ್ರಿಯೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಆರೋಪಿಸಿದ್ದಾರೆ. ಹಲವು ಯೋಜನೆಗಳು ಕುಂಠಿತಗೊಂಡಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

Read Full Story

07:38 AM (IST) Feb 08

ಇಂದಿನ ದಿನಭವಿಷ್ಯ - ಇಂದು ದೀರ್ಘಕಾಲದ ಸಮಸ್ಯೆಗಳಿಂದ ಮುಕ್ತಿ, ಹೊಸ ಬಟ್ಟೆ, ಚಿನ್ನ ಖರೀದಿ ಅವಕಾಶ

ಪಂಚಾಂಗಕರ್ತ ಫಣಿಕುಮಾರ್ ಅವರು ನೀಡಿದ ಇಂದಿನ ರಾಶಿಫಲ ಇಲ್ಲಿದೆ. ಮೇಷದಿಂದ ಮೀನ ರಾಶಿಯವರೆಗೆ, ಎಲ್ಲಾ 12 ರಾಶಿಗಳ ವೃತ್ತಿ, ಹಣಕಾಸು, ಮತ್ತು ಕುಟುಂಬದ ಕುರಿತಾದ ವಿವರವಾದ ಭವಿಷ್ಯವನ್ನು ಇಲ್ಲಿ ತಿಳಿಯಿರಿ.
Read Full Story

07:28 AM (IST) Feb 08

ಒಪ್ಪಂದ, ಅವಕಾಶದ ಬಾಗಿಲು ತೆರೆಯಲಿದೆ - ಮೋದಿ

ಅಮೆರಿಕ ಜತೆಗಿನ ಮಧ್ಯಂತರ ವ್ಯಾಪಾರ ಒಪ್ಪಂದವು ರೈತರು ಮತ್ತು ವಾಣಿಜ್ಯೋದ್ಯಮಗಳಿಗೆ ಹೊಸ ಅವಕಾಶಗಳ ಬಾಗಿಲು ತೆರೆಯುವ ಮತ್ತು ಮಹಿಳೆಯರು ಹಾಗೂ ಯುವಜನರಿಗೆ ಉದ್ಯೋಗಾವಕಾಶ ಸೃಷ್ಟಿಸುವ ಮೂಲಕ ಮೇಕ್ ಇನ್‌ ಇಂಡಿಯಾ ಉಪಕ್ರಮವನ್ನು ಬಲಪಡಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Read Full Story

07:24 AM (IST) Feb 08

ಉಕ್ರೇನ್‌ ಯುದ್ಧ ಅಂತ್ಯಕ್ಕೆ ಟ್ರಂಪ್‌ ಜೂನ್ ಗಡುವು

ಕಳೆದ 4 ವರ್ಷಗಳಿಂದ ನಡೆಯುತ್ತಿರುವ ರಷ್ಯಾ- ಉಕ್ರೇನ್‌ ಸಂಘರ್ಷಕ್ಕೆ ಅಂತ್ಯ ಹಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಎರಡೂ ದೇಶಗಳಿಗೆ ಜೂನ್‌ ತನಕ ಗಡುವು ನೀಡಿದ್ದಾರೆ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಹೇಳಿದ್ದಾರೆ.

Read Full Story

07:19 AM (IST) Feb 08

ವಿಶ್ವಾಸವೇ ಇಂದು ಭಾರತದ ಶಕ್ತಿಶಾಲಿ ಕರೆನ್ಸಿ - ಪಿಎಂ ಮೋದಿ

ಭಾರತವನ್ನು ಬೆಳವಣಿಗೆಗಾಗಿ ನಂಬಿಕಸ್ಥ ಪಾಲುದಾರನಂತೆ ಜಗತ್ತು ನೋಡುತ್ತಿದೆ. ವಿಶ್ವಾಸವೇ ಭಾರತದ ಶಕ್ತಿಶಾಲಿ ಕರೆನ್ಸಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. 2 ದಿನಗಳ ಮಲೇಷ್ಯಾ ಪ್ರವಾಸದಲ್ಲಿರುವ ಅವರು ಭಾರತೀಯ ಸಂಜಾತರೊಂದಿಗಿನ ಸಂವಾದದ ವೇಳೆ ಹೀಗೆ ನುಡಿದಿದ್ದಾರೆ.

Read Full Story

07:15 AM (IST) Feb 08

ಗಜೇಂದ್ರಗಡದಲ್ಲಿ ಯುರೋಪ್, ಮಧ್ಯ ಏಷ್ಯಾದ ವಲಸೆ ಹಕ್ಕಿ 'ಸಣ್ಣ ಕೊಂಬಿನ ಗೂಬೆ' ಗೋಚರ!

ಯುರೋಪ್ ಮತ್ತು ಮಧ್ಯ ಏಷ್ಯಾದ ವಲಸೆ ಹಕ್ಕಿಯಾದ ಸಣ್ಣ ಕೊಂಬಿನ ಗೂಬೆಯನ್ನು ಗಜೇಂದ್ರಗಡದಲ್ಲಿ ಮೊದಲ ಬಾರಿಗೆ ಗುರುತಿಸಲಾಗಿದೆ. ಜೀವ ವೈವಿಧ್ಯ ಸಂಶೋಧಕರು ಕ್ಯಾಮೆರಾದಲ್ಲಿ ಸೆರೆಹಿಡಿದಿರುವ ಈ ಗೂಬೆ, ಕೀಟಗಳನ್ನು ನಿಯಂತ್ರಿಸುವ ಮೂಲಕ ರೈತ ಮಿತ್ರನಾಗಿದ್ದು ಪರಿಸರ ಸಮತೋಲನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
Read Full Story

07:14 AM (IST) Feb 08

ಎಪ್‌ಸ್ಟೀನ್‌ನ ಸ್ವೀಡಿಷ್‌ ಯುವತಿ ಆಫರ್‌ಗೆ ಅನಿಲ್‌ ಅಂಬಾನಿ ಓಕೆ

ಅಮೆರಿಕದ ಲೈಂಗಿಕ ಹಗರಣಗಳ ಆರೋಪಿ ಜೆಫ್ರಿ ಎಪ್‌ಸ್ಟೀನ್‌ ಕೇಸಲ್ಲಿ ಇದೀಗ ಉದ್ಯಮಿ ಅನಿಲ್‌ ಅಂಬಾನಿ ಹೆಸರು ದೊಡ್ಡಮಟ್ಟದಲ್ಲಿ ಕೇಳಿಬಂದಿದೆ. 2017ರ ಮಾರ್ಚ್‌ 9ರಂದು ಅನಿಲ್‌ ಅಂಬಾನಿ, ಎಪ್‌ಸ್ಟೀನ್‌ಗೆ ‘ಯಾರನ್ನು ಶಿಫಾರಸು ಮಾಡುವೆ?’ ಎಂದು ಸಂದೇಶ

Read Full Story

07:09 AM (IST) Feb 08

ಆರ್‌ಎಸ್‌ಎಸ್‌ ಕಾರ್‍ಯಕ್ರಮಕ್ಕೆ ಸಲ್ಲು - ಭಾಗ್ವತ್‌ ಭಾಷಣ ಕಿವಿಗೊಟ್ಟು ಆಲಿಕೆ

ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ 100 ವರ್ಷ ಪೂರ್ಣವಾದ ಹಿನ್ನೆಲೆ ಇಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ನಟ ಸಲ್ಮಾನ್‌ ಖಾನ್‌ ಭಾಗಿಯಾಗಿದ್ದರು. ಈ ವೇಳೆ ಸಂಘದ ಮುಖ್ಯಸ್ಥ ಡಾ. ಮೋಹನ್‌ ಭಾಗ್ವತ್‌ ಅವರ ಭಾಷಣವನ್ನು ನಟ ಸಲ್ಮಾನ್‌ ಖಾನ್‌ ತೀವ್ರ ಗಮನವಿಟ್ಟು ಕೇಳಿಸಿಕೊಂಡಿದ್ದು ಗಮನ ಸೆಳೆಯಿತು.

Read Full Story

07:08 AM (IST) Feb 08

ಕನ್ನಡದಲ್ಲಿ ಪರೀಕ್ಷೆ ಇಲ್ಲದಿದ್ದರೆ ರೈಲ್ವೆಗೆ ಬಹಿಷ್ಕಾರ - ಹೊರಟ್ಟಿ ಎಚ್ಚರಿಕೆ

ರೈಲ್ವೆ ಇಲಾಖೆಯ ಪರೀಕ್ಷೆಗಳಲ್ಲಿ ಕನ್ನಡ ಭಾಷೆಯನ್ನು ಕಡೆಗಣಿಸುತ್ತಿರುವುದಕ್ಕೆ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾತೃಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡದಿದ್ದರೆ ರೈಲ್ವೆಯನ್ನು ಬಹಿಷ್ಕರಿಸುವುದಾಗಿ ಎಚ್ಚರಿಸಿದರು.

Read Full Story

07:05 AM (IST) Feb 08

ಗಲ್ವಾನ್‌ ಸಂಘರ್ಷ ಬಳಿಕ ಚೀನಾ ರಹಸ್ಯ ಅಣು ಪರೀಕ್ಷೆ - ಅಮೆರಿಕ!

2020ರಲ್ಲಿ ಭಾರತ ಮತ್ತು ಚೀನಾ ಸೈನಿಕರು ಲಡಾಖ್‌ನ ಗಲ್ವಾನ್‌ ಕಣಿವೆಯಲ್ಲಿ ಮುಖಾಮುಖಿಯಾಗಿ ಬಡಿದಾಡಿದ ವಾರದ ಬಳಿಕ ಚೀನಾ ರಹಸ್ಯವಾಗಿ ಅಣು ಪರೀಕ್ಷೆ ನಡೆಸಿತ್ತು ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ.

Read Full Story

06:58 AM (IST) Feb 08

ಆಪರೇಷನ್‌ ಸಿಂದೂರ ‘ಜಿಹಾದ್‌’ ಎಂದಿದ್ದ ಮುನೀರ್‌ - ಜೈಷ್‌ ಉಗ್ರ

ಆಪರೇಷನ್ ಸಿಂದೂರವನ್ನು ಪಾಕ್‌ ಸಶಸ್ತ್ರ ಪಡೆಗಳ ಮುಖ್ಯಸ್ಥ ಆಸೀಂ ಮುನೀರ್‌, ಘಜ್ವಾ-ಎ-ಹಿಂದ್ ಎಂದು ಕರೆದಿದ್ದರು. ಷರಿಯಾ ಕಾನೂನಿನ ಅನ್ವಯ ಇದರ ಅರ್ಥ ಇಸ್ಲಾಮಿಕ್‌ ಕಾನೂನನ್ನು ಜಾರಿಗೊಳಿಸಲು ನಡೆಸುವ ಸಶಸ್ತ್ರ ಹೋರಾಟ ಅಥವಾ ಜಿಹಾದ್ ಎಂದು

Read Full Story

06:56 AM (IST) Feb 08

ವಿಜಯನಗರ 3ನೇ ಹಂತದಲ್ಲಿ ಒತ್ತುವರಿಯಾಗಿದ್ದ 140 ಕೋಟಿ ಮೌಲ್ಯದ 7 ಎಕರೆ ಜಾಗ ಎಂಡಿಎ ವಶಕ್ಕೆ

ಮೈಸೂರಿನ ವಿಜಯನಗರ 3ನೇ ಹಂತದಲ್ಲಿ, ಮುಡಾ ಅಂದಾಜು 140 ಕೋಟಿ ರು. ಮೌಲ್ಯದ 7 ಎಕರೆ ಒತ್ತುವರಿ ಜಾಗವನ್ನು ತೆರವುಗೊಳಿಸಿದೆ. ಪೊಲೀಸ್ ಭದ್ರತೆಯಲ್ಲಿ ನಡೆದ ಈ ಕಾರ್ಯಾಚರಣೆಯ ವೇಳೆ ಕೆಲವರು ಆತ್ಮಹತ್ಯೆ ಬೆದರಿಕೆ ಒಡ್ಡಿದರೂ, ಅಧಿಕಾರಿಗಳು ಜಾಗವನ್ನು ಯಶಸ್ವಿಯಾಗಿ ವಶಕ್ಕೆ ಪಡೆದಿದ್ದಾರೆ.
Read Full Story

06:52 AM (IST) Feb 08

ಬಾಂಗ್ಲಾ ಜೈಲಲ್ಲಿ ಹಿಂದೂ ಸಂಸದ ಸೇನ್‌ ನಿಗೂಢ ಸಾವು - ಅನುಮಾನ

ಬಾಂಗ್ಲಾದಲ್ಲಿ ಹಿಂದೂ ಸಂಸದ ರಮೇಶ್‌ ಚಂದ್ರ ಸೇನ್‌ ಜೈಲಿನಲ್ಲೇ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಅಧಿಕಾರಿ ಇದು ಅನಾರೋಗ್ಯದಿಂದ ಸಂಭವಿಸಿದ ಸಾವು ಎಂದರೆ, ಇದು ಉದ್ದೇಶಪೂರ್ವಕ ಕೊಲೆ. ಹತ್ಯಾಕಾಂಡದ ಭಾಗ ಎಂದು ಮಾಜಿ ಪ್ರಧಾನಿ ಶೇಖ್‌ ಹಸೀನಾ ಅವರ ಅವಾಮಿ ಲೀಗ್‌ ಪಕ್ಷ ಆರೋಪಿಸಿದೆ.

Read Full Story

06:49 AM (IST) Feb 08

ಪೊಲೀಸರು ಕೇಸ್ ಹಾಕದಿದ್ರೆ ನಮಗೆ ಅರ್ಜಿ ಸಲ್ಲಿಸಿ - ಹೈಕೋರ್ಟ್ | ಏನಿದು ಪ್ರಕರಣ?

Police Not Registering Your FIR? ಪೊಲೀಸರು ಪ್ರಕರಣ ದಾಖಲಿಸಲು ನಿರಾಕರಿಸಿದರೆ, ದೂರುದಾರರು ಬಿಎನ್‌ಎಸ್‌ ಕಾಯಿದೆಯಡಿ ನೇರವಾಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಬಹುದು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. 

Read Full Story

06:45 AM (IST) Feb 08

ಬಿಜೆಪಿಯ ರಿತು ಮುಂಬೈಗೆ ಮೊದಲ ಬಿಜೆಪಿ ಮೇಯರ್‌

ದೇಶದ ಶ್ರೀಮಂತ ನಗರಪಾಲಿಕೆ ಖ್ಯಾತಿಯ ಬೃಹನ್ಮುಂಬೈ ಪಾಲಿಕೆ ಮೇಯರ್‌ ಆಗಿ ಬಿಜೆಪಿಯ ರಿತು ತಾವ್ಡೆ ಮತ್ತು ಉಪಮಯೇರ್‌ ಆಗಿ ಶಿವಸೇನೆ (ಶಿಂಧೆ ಬಣ)ಯ ಸಂಜಯ್‌ ಶಂಕರ್‌ ಘಡಿ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಮೊದಲ ಬಾರಿಗೆ ಬಿಜೆಪಿಗೆ ಮೇಯರ್‌ ಸ್ಥಾನ ಸಿಕ್ಕಿದ ದಾಖಲೆ

Read Full Story

06:37 AM (IST) Feb 08

ಮಂಗನ ಕಾಯಿಲೆಗೆ ಲಸಿಕೆ ರೆಡಿ - ಮಾನವ ಪ್ರಯೋಗ ಆರಂಭ

ಕರ್ನಾಟಕದ ಪಶ್ಚಿಮಘಟ್ಟ ಪ್ರದೇಶದ ಜನರಲ್ಲಿ ತೀವ್ರ ಆತಂಕ ಮೂಡಿಸಿರುವ ಮಂಗನ ಕಾಯಿಲೆಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ವಿಜ್ಞಾನಿಗಳು ಲಸಿಕೆ ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

Read Full Story

06:32 AM (IST) Feb 08

ಸಿಎಂ ಗಾದಿ ಸಂಚಲನ - ನಾನು ಸಿಎಂ ಆಗಲಿ ಎಂಬುದು ಜನರ ಬಯಕೆ ಎಂದರು ಡಿಕೆಶಿ

‘5 ವರ್ಷವೂ ಸಿದ್ದರಾಮಯ್ಯ ಅವರೇ ಸಿಎಂ. ಬದಲಾವಣೆ ಬೇಡಿಕೆಗೆ ಹೈಕಮಾಂಡ್‌ ಸೊಪ್ಪು ಹಾಕಲ್ಲ’ ಎಂದು ಸಿಎಂ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ನೀಡಿದ ಹೇಳಿಕೆ ಸತತ 2ನೇ ದಿನವೂ ಬಿರುಸಿನ ಪ್ರತಿಕ್ರಿಯೆಗೆ ಕಾರಣವಾಗಿದೆ

Read Full Story

06:26 AM (IST) Feb 08

india US Deal - ಭಾರತ-ಅಮೆರಿಕ ಒಪ್ಪಂದಯಾರಿಗೂ ಲಾಭವಲ್ಲ - ಸಂತೋಷ್ ಲಾಡ್

india us deal dಭಾರತ ಹಾಗೂ ಅಮೆರಿಕ ಒಪ್ಪಂದದಿಂದ ಯಾರಿಗೂ ಲಾಭವಿಲ್ಲ. ಈ ಮಧ್ಯೆಯೂ ಅಮೆರಿಕ ಒಪ್ಪಂದಕ್ಕೆ ಪ್ರಧಾನಿ ನರೇಂದ್ರ ಮೋದಿ ಒಪ್ಪುತ್ತಿದ್ದಾರೆ. ಆ ಮೂಲಕ ಅಮೆರಿಕ ಹೇಳಿದಂತೆ ನಾವು ಕೇಳುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಕಿಡಿಕಾರಿದರು.

Read Full Story

More Trending News