ವಿಜಯಪುರ: ಡಿಸಿಎಂ ಡಿ.ಕೆ.ಶಿವಕುಮಾರ್ ಜತೆ ಸೇರಿ ಬಿಜೆಪಿ ಸರ್ಕಾರ ರಚನೆ ಮಾಡಿದರೆ ಆತ್ಮಹತ್ಯೆ ಮಾಡಿಕೊಂಡಂತೆ, ರಾತ್ರಿ ಕಂಡ ಬಾವಿಗೆ ಹಗಲು ಬಿದ್ದಂತೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೂ ಕೂಡ ಒಪ್ಪಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ಡಿಕೆಶಿಯೊಂದಿಗೆ ಸೇರಿ ಬಿಜೆಪಿ ಸರ್ಕಾರ ಮಾಡುತ್ತೆ ಅನ್ನೋ ವಿಚಾರವಾಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, ಸದನದಲ್ಲಿ ಅಬಕಾರಿ ಸಚಿವರ ವಿರುದ್ಧ ಹೋರಾಟ ಮಾಡುತ್ತಿದ್ದರೆ ಬಿಜೆಪಿ ರಾಜ್ಯಾಧ್ಯಕ್ಷರು ಎಲ್ಲಿಯೂ ಕೂಡ ಕಾಣಿಸಿಕೊಳ್ಳಲಿಲ್ಲ. ಡಿ.ಕೆ.ಶಿವಕುಮಾರ್ ವಿರುದ್ಧ ಆರೋಪ ಕೇಳಿ ಬಂದಾಗ ಇವರ್ಯಾರು ಹೋರಾಟ ಮಾಡಲಿಲ್ಲ. ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಆರೋಪ ಕೇಳಿ ಬಂದಾಗ ಗಂಭೀರ ಹೋರಾಟ ಮಾಡಲಿಲ್ಲ. ಈಗ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಎಂದು ದೂರಿದರು.

11:27 PM (IST) Feb 08
ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ವೃತ್ತದ ಸಿಪಿಐ ಹೆಚ್.ಆರ್. ಪಾಟೀಲ್ ಅವರನ್ನು ಕರ್ತವ್ಯಲೋಪದ ಆರೋಪದ ಮೇಲೆ ಬೆಳಗಾವಿ ಉತ್ತರ ವಲಯದ ಐಜಿಪಿ ಡಾ. ಚೇತನ್ ಸಿಂಗ್ ರಾಠೋರ್ ಅಮಾನತುಗೊಳಿಸಿದ್ದಾರೆ. ಆದರೆ, ಪೊಲೀಸ್ ಇಲಾಖೆಯಿಂದ ಅಮಾನತಿಗೆ ನಿಖರ ಕಾರಣವನ್ನೇ ಬಹಿರಂಗಪಡಿಸಿಲ್ಲ.
10:28 PM (IST) Feb 08
ಬೀದರ್ ಜಿಲ್ಲೆ ಹುಮನಾಬಾದ್ ಬಳಿ ಬೈಕ್ ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ, ನೆಂಟರ ಮನೆಯಿಂದ ವಾಪಸಾಗುತ್ತಿದ್ದ ಒಂದೇ ಕುಟುಂಬದ ಪತಿ, ಪತ್ನಿ ಹಾಗೂ ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದೇ ವೇಳೆ ಮತ್ತೊಬ್ಬ ಬಾಲಕ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
08:20 PM (IST) Feb 08
ಪ್ರೇಮಿಗಳ ದಿನದ ವಿಶೇಷವಾಗಿ, ಕಿರುತೆರೆಯ ಜನಪ್ರಿಯ ನಟ-ನಟಿಯರ ಮೊದಲ ಕ್ರಷ್ ಯಾರೆಂದು ಕೇಳಲಾಗಿದೆ. ಶಿವು, ಪಾರು, ಕಿರಣ್ ರಾಜ್, ದುರ್ಗಾ ಸೇರಿದಂತೆ ಹಲವು ತಾರೆಯರು ತಮ್ಮ ಶಾಲಾ-ಕಾಲೇಜು ದಿನಗಳ ಪ್ರೀತಿಯ ಗುಟ್ಟನ್ನು ಹಂಚಿಕೊಂಡಿದ್ದಾರೆ.
07:09 PM (IST) Feb 08
ಬಳ್ಳಾರಿ ಜಿಲ್ಲೆಯ ತೆಕ್ಕಲಕೋಟೆಯಲ್ಲಿ,ನಡೆದ ಉತ್ಖನನದಲ್ಲಿ 5 ಸಾವಿರ ವರ್ಷಗಳಷ್ಟು ಹಳೆಯದಾದ ಮಾನವ ಅಸ್ಥಿಪಂಜರ ಪತ್ತೆಯಾಗಿದೆ. ಇದರೊಂದಿಗೆ ನವಶಿಲಾಯುಗದ ಜನರ ಆಯುಧಗಳು ಮತ್ತು ವಿಶಿಷ್ಟ ಶವಸಂಸ್ಕಾರ ಪದ್ಧತಿಯ ಕುರುಹುಗಳು ದೊರೆತಿದ್ದು, ಇದು ಕರ್ನಾಟಕದ ಇತಿಹಾಸದ ಮೇಲೆ ಹೊಸ ಬೆಳಕು ಚೆಲ್ಲಿದೆ.
06:31 PM (IST) Feb 08
ಬಿಗ್ಬಾಸ್ ಖ್ಯಾತಿಯ ರಕ್ಷಿತಾ ಶೆಟ್ಟಿ, ಸ್ನೇಹಿತನಿಗೆ ಕೇಕ್ ತಿನ್ನಿಸುತ್ತಿರುವ ವಿಡಿಯೋ ಪ್ರೇಮಿಗಳ ದಿನದ ಸಂದರ್ಭದಲ್ಲಿ ವೈರಲ್ ಆಗಿದೆ. ಇದು ಹಲವು ಊಹಾಪೋಹಗಳಿಗೆ ಕಾರಣವಾಗಿದ್ದು, ಈ ಬಗ್ಗೆ ಸ್ವತಃ ರಕ್ಷಿತಾ ಅವರೇ ಮಾಹಿತಿ ನೀಡಿದ್ದಾರೆ. ಅವರು ಹೇಳಿದ್ದೇನು?
06:23 PM (IST) Feb 08
Astrologer Kamalakar Bhat News: ಜ್ಯೋತಿಷಿ ಕಮಲಾಕರ್ ಭಟ್ ಹಾಗೂ ಸುಚಿತ್ರಾ ಸಂಬಂಧವು ಈಗ ವಸಂತ್ ನಾಯ್ಕ್ ಎನ್ನುವವರ ಕೊಲೆಯಲ್ಲಿ ಅಂತ್ಯವಾಗಿದೆ. ಈಗ ಇವರಿಬ್ಬರು ಜೈಲಿನಲ್ಲಿದ್ದಾರೆ. ಈಗ ಸುಚಿತ್ರಾ ಅವರ ಇನ್ನೊಂದು ಸಂಬಂಧ ಬಯಲಾಗಿದೆ.
05:48 PM (IST) Feb 08
ಶಿವಮೊಗ್ಗ: ಕಿಲಾಡಿ ಲೇಡಿ ಸುಚಿತ್ರಾ ಹಾಗೂ ಜ್ಯೋತಿಷಿ ಕಮಲಾಕರ್ ಭಟ್ ಗ್ಯಾಂಗ್ ಸೇರಿ ಅಮಾಯಕ ವಸಂತ ನಾಯ್ಕ ಅವರನ್ನು ಹ*ತ್ಯೆ ಮಾಡಿರುವ ವಿಚಾರ ಇಡೀ ರಾಜ್ಯವೇ ಬೆಚ್ಚಿಬೀಳುವಂತೆ ಮಾಡಿದೆ. ಇದರ ನಡುವೆ ಈ ಸುಚಿತ್ರಾ ನವರಂಗಿ ಆಟದ ಮತ್ತೊಂದು ವಿಚಾರ ಬಯಲಾಗಿದೆ.
05:43 PM (IST) Feb 08
Social Media Influencer: ಇಂದು ಸೋಶಿಯಲ್ ಮೀಡಿಯಾವನ್ನು ಅನೇಕರು ಒಳ್ಳೆಯ ರೀತಿಯಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಮಹಾರಾಷ್ಟ್ರ ಹಾಗೂ ಕರ್ನಾಟಕದ ಜೋಡಿಯೊಂದು ತಮ್ಮ ಪ್ರೀತಿಯನ್ನು ಹೇಳಿಕೊಳ್ಳುತ್ತ, ಹೊಸ ಆದಾಯದ ಮೂಲವನ್ನು ಕಂಡುಕೊಂಡಿದೆ.
04:56 PM (IST) Feb 08
04:23 PM (IST) Feb 08
Women Spa Assault: ಕೇರಳದಲ್ಲಿ ನಡೆದ ಅತ್ಯಾ*ಚಾರವೊಂದು ನಿಜಕ್ಕೂ ಎಲ್ಲರಿಗೂ ಭಯ ಹುಟ್ಟಿಸಿದೆ. ದ್ವೇಷದ ಕಾರಣಕ್ಕೆ ಸುಪಾರಿ ಕೊಟ್ಟು ಸಾಮೂಹಿಕ ಅತ್ಯಾ*ಚಾರ ಮಾಡಿಸಿದರಾ ಎಂಬ ಪ್ರಶ್ನೆ ಮೂಡಿಸಿದೆ. ಹಾಗಾದರೆ ನಿಜಕ್ಕೂ ಏನಾಯ್ತು?
03:52 PM (IST) Feb 08
ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಮಂಗಳೂರು ಗ್ರಾಮದಲ್ಲಿ ಖಾಸಗಿ ಲಘು ವಿಮಾನವೊಂದು ಪತನಗೊಂಡಿದೆ. ಕಲಬುರ್ಗಿಯಿಂದ ಬೆಳಗಾವಿಗೆ ತೆರಳುತ್ತಿದ್ದ ಈ ವಿಮಾನ ಇಂಧನ ಖಾಲಿಯಾದ ಕಾರಣ ಅಪಘಾತಕ್ಕೀಡಾಗಿದೆ.
03:44 PM (IST) Feb 08
Bhagyalakshmi Kannada Serial Episode: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ತಾಂಡವ್ ಈಗ ಭಾಗ್ಯ ಮನೆಗೆ ಬಂದು ಕ್ಷಮಿಸು ಎಂದು ಭಿಕ್ಷೆ ಬೇಡುತ್ತಿದ್ದಾನೆ. ಎರಡನೇ ಮದುವೆ ಯೋಚನೆಯಲ್ಲಿದ್ದ ಭಾಗ್ಯಗೆ ಈಗ ತಾಂಡವ್ನನ್ನು ಕ್ಷಮಿಸಬೇಕಾ? ಆದಿಯನ್ನು ಮದುವೆ ಆಗಬೇಕಾ ಎಂಬ ಪ್ರಶ್ನೆ ಬಂದಿದೆ.
03:38 PM (IST) Feb 08
'ಭೂಮಿ ಸ್ವಯಂ ಪರಿವರ್ತನೆ' ತಂತ್ರಾಂಶವನ್ನು ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಮಾಸ್ಟರ್ ಪ್ಲಾನ್ ವ್ಯಾಪ್ತಿಯಲ್ಲಿನ ಲಕ್ಷಾಂತರ 'ಬಿ' ಖಾತಾ ನಿವೇಶನಗಳನ್ನು 'ಎ' ಖಾತಾಗೆ ಸುಲಭವಾಗಿ ಪರಿವರ್ತಿಸಲು ಅವಕಾಶ ಕಲ್ಪಿಸಲಾಗಿದ್ದು, ಇದು ಸಮಯ, ವೆಚ್ಚ ಮತ್ತು ಭ್ರಷ್ಟಾಚಾರವನ್ನು ಕಡಿಮೆ ಮಾಡಲಿದೆ.
03:18 PM (IST) Feb 08
Bhagyalakshmi kannada Serial Episode Update: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ತಾಂಡವ್ ಈಗ ಸಂಪೂರ್ಣ ಬದಲಾಗಿದ್ದಾನೆ. ಭಾಗ್ಯಳ ಬಳಿ ಬಂದು ಕ್ಷಮಿಸಿ ಎಂದು ಬೇಡಿಕೊಳ್ಳುತ್ತಿದ್ದಾನೆ. ಎರಡನೇ ಮದುವೆ ಆಗೋ ಆಲೋಚನೆಯಲ್ಲಿದ್ದ ಭಾಗ್ಯ ಈಗ ತಾಂಡವ್ನನ್ನು ದೂರ ಮಾಡಿದ್ದಾಳೆ.
03:14 PM (IST) Feb 08
ಕಳೆದ ಒಂದು ವರ್ಷದಲ್ಲಿ ಕರ್ನಾಟಕದಲ್ಲಿ 42,000 ನಕಲಿ ಬ್ಯಾಂಕ್ ಖಾತೆಗಳನ್ನು ಬಳಸಿ ₹100 ಕೋಟಿಗೂ ಅಧಿಕ ಮೊತ್ತದ ಸೈಬರ್ ವಂಚನೆ ನಡೆದಿದೆ. ಈ ಸಂಬಂಧ 14 ಮಂದಿಯನ್ನು ಬಂಧಿಸಲಾಗಿದ್ದು, ಹಣದ ಆಮಿಷವೊಡ್ಡಿ ತೆರೆಯಲಾದ ಖಾತೆಗಳನ್ನು ಆನ್ಲೈನ್ ವಂಚನೆ ಮತ್ತು ಬೆಟ್ಟಿಂಗ್ಗೆ ಬಳಸಿಕೊಳ್ಳಲಾಗಿದೆ.
03:02 PM (IST) Feb 08
ಜೀ ಕನ್ನಡದ 'ಆದಿ ಲಕ್ಷ್ಮಿ ಪುರಾಣ' ಧಾರಾವಾಹಿಯಲ್ಲಿ ಆದಿ ಮತ್ತು ಲಕ್ಷ್ಮಿಯ ಅನಿವಾರ್ಯ ಮದುವೆಯ ಕಥೆ ಸಾಗುತ್ತಿದೆ. ಈ ಮದುವೆಯ ಚಿತ್ರೀಕರಣದ ವೇಳೆ, ನಾಯಕಿ ಆಶಾ ಅಯ್ಯನರ್ಗೆ ನಾಯಕ ರಜನೀಶ್ ನಿಜವಾಗಿಯೂ ಮೂರು ಗಂಟು ಹಾಕಿಬಿಡುತ್ತಾರೇನೋ ಎಂಬ ಭಯ ಕಾಡಿತ್ತಂತೆ. ಈ ಬಗ್ಗೆ ನಟಿ ಹೇಳಿದ್ದೇನು?
02:58 PM (IST) Feb 08
ಕೊಪ್ಪಳ ತಾಲೂಕಿನ ಕೂಕನಪಳ್ಳಿ ಗ್ರಾಮದಲ್ಲಿ, ಸಾರಾಯಿ ಎಂದು ಭಾವಿಸಿ ಕುಡಿಯಲು ಯೋಗ್ಯವಲ್ಲದ ಸ್ಪಿರಿಟ್ ಸೇವಿಸಿದ ಪರಿಣಾಮ ರಮೇಶ್ ಹೊಸಳ್ಳಿ (25) ಎಂಬ ಯುವಕ ಮೃತಪಟ್ಟಿದ್ದಾನೆ. ಈ ಘಟನೆಯಲ್ಲಿ ಇತರ ಇಬ್ಬರು ಅಸ್ವಸ್ಥರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
02:38 PM (IST) Feb 08
02:10 PM (IST) Feb 08
ಕರ್ಣ ಧಾರಾವಾಹಿಯಲ್ಲಿ ಕರ್ಣ, ನಿಧಿ ಬಾಳು ಬಗೆಹರಿಯೋ ಹಾಗೆ ಕಾಣ್ತಿಲ್ಲ. ಇನ್ನೊಂದು ಕಡೆ ನಿಧಿಗೂ ಕಷ್ಟ ತಪ್ಪುತ್ತಿಲ್ಲ. ಹೌದು, ಒಂದಾದ ಮೇಲೆ ಒಂದರಂತೆ ಸಮಸ್ಯೆಗಳು ಬರುತ್ತವೇ ಇವೆ. ಈಗ ನಿಧಿ ಬಾಳಿಗೆ ಕೊಳ್ಳಿ ಇಡೋಕೆ ಸಂಜಯ್ ರೆಡಿಯಾಗಿದ್ದಾನೆ.
02:09 PM (IST) Feb 08
01:38 PM (IST) Feb 08
ಆಶ್ರಯ ಕಾಲನಿಯ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ತೀವ್ರ ಕೊರತೆಯಿಂದಾಗಿ, ಇಬ್ಬರು ಶಿಕ್ಷಕರೂ ಗೈರಾದಾಗ ಶಾಲೆಯ ಅಡುಗೆಯವರೇ ಮಕ್ಕಳಿಗೆ ಪ್ರಾರ್ಥನೆ ಮಾಡಿಸಿದ ಘಟನೆ ನಡೆದಿದೆ. ಶಿಕ್ಷಕರ ಈ ನಿರಂತರ ಗೈರುಹಾಜರಿ ಮತ್ತು ನಿರ್ಲಕ್ಷ್ಯದಿಂದಾಗಿ ಪಾಲಕರು ಶಾಲೆಯ ಮೇಲಿನ ಭರವಸೆಯನ್ನು ಕಳೆದುಕೊಳ್ಳುತ್ತಿದ್ದಾರೆ.
01:34 PM (IST) Feb 08
ನಟಿ ರಾಧಿಕಾ ಪಂಡಿತ್ ತಮ್ಮ ಮಗ ಯಥರ್ವ್ ಜೊತೆಗಿನ ಬಾಲ್ಯದ ಸಿಹಿ ನೆನಪೊಂದನ್ನು ಹಂಚಿಕೊಂಡಿದ್ದಾರೆ. ಮಗ ಯಥರ್ವ್ ಮೊದಲ ಬಾರಿಗೆ ಖುಷಿಪಟ್ಟ ಕ್ಷಣವನ್ನು ಸೆರೆಹಿಡಿದು, ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಈ ಸಿಹಿ ತಿಂಡಿಯ ಕ್ರೇಜ್ ಕಾಲ ಬದಲಾದರೂ ಕಡಿಮೆಯಾಗಿಲ್ಲ ಎಂದು ಬರೆದುಕೊಂಡಿದ್ದಾರೆ.
01:33 PM (IST) Feb 08
ಸಿಎಂ ಬದಲಾವಣೆ ಚರ್ಚೆಯ ನಡುವೆ ಸಚಿವ ಎಂ.ಬಿ. ಪಾಟೀಲ್ ಪ್ರತಿಕ್ರಿಯಿಸಿದ್ದು, ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಸ್ಪಷ್ಟಪಡಿಸಿದ್ದಾರೆ. ಯತೀಂದ್ರ ಸಿದ್ದರಾಮಯ್ಯ ಹೇಳಿಕೆ, ಡಿಕೆಶಿ ವ್ಯಂಗ್ಯ ಹಾಗೂ ಬಿಜೆಪಿ ಟೀಕೆಗಳಿಗೆ ತಿರುಗೇಟು ನೀಡಿದ ಅವರು, ನಾಯಕತ್ವ ಬದಲಾವಣೆ ವದಂತಿಗಳನ್ನು ಮಾಧ್ಯಮ ಸೃಷ್ಟಿ ಎಂದರು.
01:10 PM (IST) Feb 08
ಭಾರತೀಯ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಅವರ ಗೆಳತಿ ಮಹಿಕಾ ಶರ್ಮಾ ಸದ್ಯ ಸುದ್ದಿಯಲ್ಲಿದ್ದಾರೆ. ಅವರು ಆಗಾಗ ಹಾರ್ದಿಕ್ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ಹಾರ್ದಿಕ್ ಅವರ ಹೊಸ ಗೆಳತಿ ಆದಾಯದ ವಿಷಯದಲ್ಲೂ ಮುಂದಿದ್ದಾರೆ. ಅವರ ಆಸ್ತಿ ಮತ್ತು ಮಾಸಿಕ ಆದಾಯ ಎಷ್ಟು ಗೊತ್ತಾ?
12:58 PM (IST) Feb 08
ಬಿಗ್ ಬಾಸ್ ಖ್ಯಾತಿಯ ರಕ್ಷಿತಾ ಶೆಟ್ಟಿಗೆ, ಸೋಷಿಯಲ್ ಮೀಡಿಯಾ ಇನ್ಫ್ಲುಯರೆನ್ಸರ್ ಕಿಪ್ಪಿ ಕೀರ್ತಿಯ ಮಾಜಿ ಪ್ರಿಯಕರ ಮುತ್ತು ಏಕಾಏಕಿ ಎದುರಾಗಿ ಶಾಕ್ ನೀಡಿದ್ದಾರೆ. ಈ ಅನಿರೀಕ್ಷಿತ ಘಟನೆಯಿಂದ ಕಂಗಾಲಾದ ರಕ್ಷಿತಾ ಅವರ ವಿಡಿಯೋ ವೈರಲ್ ಆಗಿದೆ.
12:50 PM (IST) Feb 08
ಪೋಷಕರ ಮದ್ಯವ್ಯಸನದಿಂದ ನೂರಾರು ಮಕ್ಕಳು ನಲುಗುತ್ತಿದ್ದಾರೆ. ಅಂಥಾ ಮಕ್ಕಳನ್ನು ನೋಯದಿರುವಂತೆ ನೋಡಿಕೊಳ್ಳುವ ಜವಾಬ್ದಾರಿ ಪೋಷಕರದ್ದೂ ಇದೆ, ಸಮಾಜದ್ದೂ ಇದೆ. ಇದು ಪೋಷಕರ ಮದ್ಯವ್ಯಸನದಿಂದ ನೊಂದು, ಆಮೇಲೆ ಕಷ್ಟಪಟ್ಟು ಓದಿ ಗೆಲುವು ಪಡೆದು ಹೆಣ್ಣು ಮಗಳ ಅನುಭವ ಕಥನ.
12:48 PM (IST) Feb 08
12:07 PM (IST) Feb 08
Leela And Manju Video: ಮಾಧ್ಯಮಕ್ಕೆ ಬಂದು ಸಂಸಾರದ ವಿಷಯವನ್ನು ಹೇಳಿಕೊಂಡು ಅತ್ತಿದ್ದ ಲೀಲಾ, ಮಂಜು ಈಗ ಹೊಸ ಬದುಕು ಕಟ್ಟಿಕೊಂಡಿದ್ದಾರೆ. ವಿಡಿಯೋ ಮಾಡಿ ಬಂದ್ಬಿಡು ಲೀಲಾ, ನನ್ನ ಬಂಗಾರಿ, ಚಿನ್ನಿ ಬಂದ್ಬಿಡೇ, ನೀನು ನನ್ನ ಫ್ಲೇವರ್ ಕಣೇ ಎಂದು ಹೇಳಿದ್ದ ಮಂಜು ದುಡಿಮೆಗೆ ಹೊಸ ದಾರಿ ಕಂಡುಕೊಂಡಿದ್ದರು.
11:53 AM (IST) Feb 08
11:26 AM (IST) Feb 08
11:01 AM (IST) Feb 08
Leela Manju: ಲೀಲಾ, ಬಂದ್ಬಿಡು ಲೀಲಾ, ಬಂಗಾರಿ, ಚಿನ್ನಿ ಬಂದ್ಬಿಡೇ. ಲೀಲಾ ನೀನು ನನ್ನ ಫ್ಲೇವರ್ ಕಣೇ ಎಂದು ಹೇಳಿದ್ದ ಮಂಜು ಡೈಲಾಗ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೇನು ಸಿನಿಮಾ ಡೈಲಾಗ್ ಅಲ್ಲ, ಬದಲಾಗಿ ಲೀಲಾ-ಮಂಜು ಮದುವೆ ಕಥೆ ವ್ಯಥೆ ಆಗಿತ್ತು.ಲೀಲಾ ಮನೆ ಬಿಟ್ಟು ಹೋಗಲು ರೆಡಿ ಆಗಿದ್ದಾರಂತೆ.
10:38 AM (IST) Feb 08
ವಿಧಾನಸಭೆಯ ಗಲಾಟೆಗೆ ಬಿಜೆಪಿ ಶಾಸಕರ ಪ್ರಚೋದನೆಯೇ ಕಾರಣ ಎಂದು ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಆರೋಪಿಸಿದ್ದಾರೆ. ಮಾಧ್ಯಮಗಳು ಘಟನೆಯನ್ನು ತಿರುಚಿವೆ ಎಂದು ಹೇಳಿದ ಅವರು, ತಮ್ಮ ಬಳಿಯಿದ್ದ ವಿಡಿಯೋ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿ ಸ್ಪಷ್ಟನೆ ನೀಡಿದರು.
10:21 AM (IST) Feb 08
Amulya And Niranjan Bs: ಕಮಲಿ ಧಾರಾವಾಹಿ ನಟ ನಿರಂಜನ್ ಬಿಎಸ್, ನಟಿ ಅಮೂಲ್ಯ ಗೌಡ ಅವರು ಲವ್ ಮಾಡುತ್ತಿದ್ದಾರೆ, ಮದುವೆ ಆಗುತ್ತಾರೆ ಎಂಬ ಮಾತು ಅನೇಕ ವರ್ಷಗಳಿಂದ ಕೇಳಿ ಬರುತ್ತಿದೆ. ಈಗ ನಿನ್ನ ಜೊತೆ ನನ್ನ ಕಥೆ ಧಾರಾವಾಹಿಯಲ್ಲಿ ನಟಿಸುತ್ತಿರುವ ನಿರಂಜನ್ ಬಿಎಸ್ ಅವರು ಈ ಬಗ್ಗೆ ಮಾತನಾಡಿದ್ದಾರೆ.
10:18 AM (IST) Feb 08
ಕೇಂದ್ರ ಸರ್ಕಾರದ ವರದಿಯಂತೆ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಘೋಷಿಸಿದ್ದಾರೆ. ಹೊನ್ನಾಳಿ ತಾಲೂಕಿನ ನೂತನ ಗ್ರಾಮ ಪಂಚಾಯಿತಿ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಯಶಸ್ಸನ್ನು ವಿವರಿಸಿದರು.
10:17 AM (IST) Feb 08
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮುತ್ತು ಚಂದ್ರನ ಸಂಕೇತ. ಇದು ಮನಸ್ಸನ್ನು ಶಾಂತವಾಗಿಡಲು ಮತ್ತು ಭಾವನೆಗಳನ್ನು ನಿಯಂತ್ರಿಸಲು ಅದ್ಭುತವಾಗಿ ಕೆಲಸ ಮಾಡುತ್ತದೆ. ಹೀಗಾಗಿ ಮುತ್ತಿನ ಉಂಗುರ ಧರಿಸುವುದರಿಂದ ಯಾವ ರಾಶಿಯವರಿಗೆ ಶುಭ ಫಲ ಇದೆ ನೋಡೋಣ ಬನ್ನಿ
10:06 AM (IST) Feb 08
09:55 AM (IST) Feb 08
ಹೂವಿನಹಡಗಲಿಯಲ್ಲಿ ನಡೆದ ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಭೆಯಲ್ಲಿ, ಪಡಿತರ ಅಕ್ಕಿ ಮತ್ತು ರಾಗಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ಬಗ್ಗೆ ಚರ್ಚಿಸಲಾಯಿತು. ಇದರೊಂದಿಗೆ, ಅಕ್ರಮ ವಿದ್ಯುತ್ ಸಂಪರ್ಕ, ಗೃಹಲಕ್ಷ್ಮೀ ಮತ್ತು ಶಕ್ತಿ ಯೋಜನೆಗಳ ನ್ಯೂನತೆಗಳ ಬಗ್ಗೆಯೂ ಅಧಿಕಾರಿಗಳ ಗಮನ ಸೆಳೆಯಲಾಯಿತು.
09:47 AM (IST) Feb 08
Actress Amulya: ನಟಿ ಅಮೂಲ್ಯ ಹಾಗೂ ಆರ ಜಗದೀಶ್ ಆರ್ ಚಂದ್ರ ಅವರು ಎಷಿಯಾನೆಟ್ ಸುವರ್ಣ ನ್ಯೂಸ್ಗೆ ಸಂದರ್ಶನ ನೀಡಿದ್ದಾರೆ. ಆ ವೇಳೆ ಅಮೂಲ್ಯ ಅವರಿಗೆ ಯಾವ ವಿಷಯದಲ್ಲಿ ಕೈ ಮಗಿದು ಕೇಳ್ತೀನಿ ಎಂದು ಹೇಳಿದ್ದಾರೆ. ಹಾಗಾದರೆ ಏನದು?
09:41 AM (IST) Feb 08
ಮಧ್ಯರಾತ್ರಿ ಬೆಂಗಳೂರಿನಲ್ಲಿ ಯುವತಿಯರು ಕುಡಿದ ಮತ್ತಿನಲ್ಲಿ ತಮ್ಮ ಸ್ಕೂಟಿಯಿಂದ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಪ್ರಶ್ನಿಸಿದ ಕಾರ್ ಚಾಲಕನ ಮೇಲೆ ಚೈನ್ನಿಂದ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಸ್ಥಳೀಯರ ದೂರಿನ ಮೇರೆಗೆ ಹುಳಿಮಾವು ಪೊಲೀಸರು ಯುವತಿಯರನ್ನು ವಶಕ್ಕೆ ಪಡೆದಿದ್ದಾರೆ.
09:40 AM (IST) Feb 08
ಬೆಂಗಳೂರಿನಲ್ಲಿ ಜಿಮ್ ಟ್ರೈನರ್ ಆಗಿದ್ದ 26 ವರ್ಷದ ಕಿರಣ್, ಪ್ರೇಮ ವೈಫಲ್ಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾನು ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ ಯುವತಿಗೆ ಬೇರೆ ಯುವಕನೊಂದಿಗೆ ಮದುವೆ ನಿಶ್ಚಯವಾದ ಹಿನ್ನೆಲೆಯಲ್ಲಿ ಮನನೊಂದು ನೇಣಿಗೆ ಶರಣಾಗಿದ್ದಾರೆ.