MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Aadi Lakshmi Purana: ತಾಳಿ ಕಟ್ಟುವಾಗ ಅಪ್ಪಿತಪ್ಪಿ 3 ಗಂಟು ಹಾಕಿಬಿಟ್ರೆ ಎನ್ನೋ ಭಯ ಇತ್ತು: ಆ ಘಟನೆ ನೆನೆದ ನಟಿ

Aadi Lakshmi Purana: ತಾಳಿ ಕಟ್ಟುವಾಗ ಅಪ್ಪಿತಪ್ಪಿ 3 ಗಂಟು ಹಾಕಿಬಿಟ್ರೆ ಎನ್ನೋ ಭಯ ಇತ್ತು: ಆ ಘಟನೆ ನೆನೆದ ನಟಿ

ಜೀ ಕನ್ನಡದ 'ಆದಿ ಲಕ್ಷ್ಮಿ ಪುರಾಣ' ಧಾರಾವಾಹಿಯಲ್ಲಿ ಆದಿ ಮತ್ತು ಲಕ್ಷ್ಮಿಯ ಅನಿವಾರ್ಯ ಮದುವೆಯ ಕಥೆ ಸಾಗುತ್ತಿದೆ. ಈ ಮದುವೆಯ ಚಿತ್ರೀಕರಣದ ವೇಳೆ, ನಾಯಕಿ ಆಶಾ ಅಯ್ಯನರ್‌ಗೆ ನಾಯಕ ರಜನೀಶ್ ನಿಜವಾಗಿಯೂ ಮೂರು ಗಂಟು ಹಾಕಿಬಿಡುತ್ತಾರೇನೋ ಎಂಬ ಭಯ ಕಾಡಿತ್ತಂತೆ. ಈ ಬಗ್ಗೆ ನಟಿ ಹೇಳಿದ್ದೇನು?

1 Min read
Author : Suchethana D
Published : Feb 08 2026, 03:02 PM IST
Share this Photo Gallery
  • FB
  • TW
  • Linkdin
  • Whatsapp
17
ಆದಿ ಲಕ್ಷ್ಮಿ ಸ್ಟೋರಿ
Image Credit : Social Media

ಆದಿ-ಲಕ್ಷ್ಮಿ ಸ್ಟೋರಿ

ಜೀ ಕನ್ನಡದಲ್ಲಿ ಆರಂಭವಾಗಿರೋ ಆದಿ ಲಕ್ಷ್ಮಿ ಪುರಾಣ ವೀಕ್ಷಕರನ್ನು ಹೊಸ ಲೋಕಕ್ಕೆ ಕೊಂಡೊಯ್ಯುತ್ತಿದೆ. ಹಳ್ಳಿ ಹುಡುಗಿ ಲಕ್ಷ್ಮೀ, ಸಿಟಿ ಹುಡುಗ ಆದಿ ನಡುವಿನ ಕಥೆ ಇದಾಗಿದೆ. ಮೊದಲ ಭೇಟಿಯಲ್ಲೇ ಆದಿಯಿಂದ ತಿರಸ್ಕರಿಸಲ್ಪಟ್ಟ ಲಕ್ಷ್ಮಿ ಪುನಃ ಆತನ ಜಗತ್ತಿಗೆ ಮರಳಿ ಬರುತ್ತಾಳೆ. ಮುಂದೇನು ಕಥೆ ಎನ್ನುವುದೇ ರೋಚಕವಾಗಿದೆ.

27
ಲಕ್ಷ್ಮಿಗೆ ಆದಿ ಜೊತೆ ಮದುವೆ
Image Credit : Asianet News

ಲಕ್ಷ್ಮಿಗೆ ಆದಿ ಜೊತೆ ಮದುವೆ

ಲಕ್ಷ್ಮಿಯ ಮದುವೆಯ ಸಂದರ್ಭದಲ್ಲಿ, ಹುಡುಗನ ಜೊತೆ ಮನೆಯವರ ಕಿರಿಕ್​ ಆದಾಗ, ಆದಿ ಆಕೆಯನ್ನು ಮದುವೆಯಾಗುವ ಅನಿವಾರ್ಯತೆ ಎದುರಾಗುತ್ತದೆ. ಇದಾಗಲೇ ಬ್ರಹ್ಮಗಂಟು ಸೇರಿದಂತೆ ಕೆಲವು ಸೀರಿಯಲ್​ಗಳಲ್ಲಿ ಆದಂತೆಯೇ ಇಲ್ಲಿಯೂ ಆಗಿದೆ.

Related Articles

Related image1
ಕಾಲ ಬದಲಾದ್ರೂ ಈ ಸೌಂಡ್​ ಮಾತ್ರ ಬದಲಾಗಲ್ಲ ನೋಡಿ! Radhika Pandit ಕುತೂಹಲದ ಪೋಸ್ಟ್​
Related image2
ಏಕಾಏಕಿ ಬಂದು ಕೈಕೊಟ್ಟ ಕಿಪ್ಪಿ ಕೀರ್ತಿ ಎಕ್ಸ್​: Bigg Boss ರಕ್ಷಿತಾ ಶೆಟ್ಟಿ ಫುಲ್​ ಶಾಕ್​- ಆಮೇಲೇನಾಯ್ತು ನೋಡಿ
37
ಮುಂದೇನು ಅನಾಹುತ?
Image Credit : Instagram

ಮುಂದೇನು ಅನಾಹುತ?

ಆದಿ ಇದಾಗಲೇ ಬೇರೆ ಹುಡುಗಿಯನ್ನು ಲವ್​ ಮಾಡುತ್ತಿದ್ದಾನೆ. ಆದರೆ ಈ ಮದುವೆಯಿಂದ ಇಬ್ಬರ ಜೀವನದಲ್ಲಿ ಆಗುವ ಅನಾಹುಗಳು ಏನು ಎನ್ನುವ ಬಗ್ಗೆ ಇದೀಗ ಸ್ಟೋರಿ ಶುರುವಾಗಿದೆ.

47
ಸೀರಿಯಲ್​ ಮದುವೆಗಳು
Image Credit : Asianet News

ಸೀರಿಯಲ್​ ಮದುವೆಗಳು

ಹಿಂದೂ ಸಂಪ್ರದಾಯದಲ್ಲಿ ಮೂರು ಗಂಟು ಹಾಕಿಬಿಟ್ಟರೆ ಮದುವೆ ಆಗುತ್ತದೆ. ಆದರೆ ಸೀರಿಯಲ್​, ಸಿನಿಮಾಗಳಲ್ಲಿ ನಟ-ನಟಿಯರು ಅದೆಷ್ಟೋ ಬಾರಿ ಮದುವೆಯಾಗುವುದು ಇದೆ. ಆದರೂ ಮೂರು ಗಂಟು ಹಾಕುವುದನ್ನು ಎಲ್ಲಿಯೂ ತೋರಿಸುವುದಿಲ್ಲ. ತೋರಿಸಿದರೂ ಅದು ಅಸಲಿಯಾಗಿರುವುದಿಲ್ಲ. ಶೂಟಿಂಗ್​ನಲ್ಲಿ ಬೇರೆಯದ್ದೇ ನಡೆದಿರುತ್ತದೆ.

57
ಅಸಲಿ ಮದುವೆಯ ಭಯ!
Image Credit : Asianet News

ಅಸಲಿ ಮದುವೆಯ ಭಯ!

ಆದರೆ, ಇದೇ ಮೊದಲ ಬಾರಿಗೆ ನಾಯಕಿಯಾಗಿ ಕಾಣಿಸಿಕೊಂಡಿರೋ ನಟಿ ಆಶಾ ಅಯ್ಯನರ್‌ ಅವರಿಗೆ ಎಲ್ಲಿ ನಟ ಆದಿ ಅರ್ಥಾತ್​ ರಜನೀಶ್​ ಮದುವೆಯ ವೇಳೆ ಮೂರು ಗಂಟು ಹಾಕಿಬಿಡುತ್ತಾರೋ ಎನ್ನುವ ಭಯ ಇತ್ತಂತೆ.

67
ಮೂರು ಗಂಟು
Image Credit : Asianet News

ಮೂರು ಗಂಟು

ಏಷ್ಯಾನೆಟ್​ ಸುವರ್ಣ ಟಿವಿಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಈ ಬಗ್ಗೆ ನಟಿ ಆಶಾ ಮತ್ತು ರಜನೀಶ್​ ರಿವೀಲ್​ ಮಾಡಿದ್ದಾರೆ. ಇವರು ಮೊದಲೇ ನನಗೆ ವಾರ್ನ್​ ಮಾಡಿದ್ದರು, ಮೂರು ಗಂಟು ಹಾಕಬಾರದು ಎಂದು. ನಾನ್ಯಾಕೆ ಇವರಿಗೆ ಮೂರು ಗಂಟು ಹಾಕಲಿ ಹೇಳಿ ಎಂದು ತಮಾಷೆ ಮಾಡಿದ್ದಾರೆ.

77
ನಡುಗಿದ ಕೈ
Image Credit : instagram

ನಡುಗಿದ ಕೈ

ಇದೇ ವೇಳೆ ತಾಳಿ ಕಟ್ಟುವಾಗ ಕೈ ನಡುಗುತ್ತಿತ್ತು ಎಂದೂ ಹೇಳಿದ್ದಾರೆ. ಆಶಾ ಕೂಡ ಇದೇ ಮೊದಲ ಬಾರಿಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಸೀರಿಯಲ್​ಗೆ ಎಲ್ಲರ ಆಶೀರ್ವಾದ ನೀಡುವಂತೆ ಕೋರಿಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಕನ್ನಡ ಧಾರಾವಾಹಿ
ಜೀ ಕನ್ನಡ
ಮನರಂಜನಾ ಸುದ್ದಿ
ಟಿವಿ ಶೋ
ಸಂಬಂಧಗಳು

Latest Videos
Recommended Stories
Recommended image1
Karna Serial: ಕುತಂತ್ರಿಗಳ ಅಟ್ಟಹಾಸಕ್ಕೆ ಜಯ; ನಿಧಿ ಬಾಳಿಗೆ ಕೊನೆಗೂ ಕೊಳ್ಳಿ ಇಟ್ಟ ಸಂಜಯ್!‌ ಛೇ...!
Recommended image2
ಒಂದೇ ತಿಂಗಳಲ್ಲಿ ಎರಡು ಜ್ಯೋತಿರ್ಲಿಂಗ ದರ್ಶನ ಪಡೆದ ನಟಿ Vaishnavi Gowda
Recommended image3
ಏಕಾಏಕಿ ಬಂದು ಕೈಕೊಟ್ಟ ಕಿಪ್ಪಿ ಕೀರ್ತಿ ಎಕ್ಸ್​: Bigg Boss ರಕ್ಷಿತಾ ಶೆಟ್ಟಿ ಫುಲ್​ ಶಾಕ್​- ಆಮೇಲೇನಾಯ್ತು ನೋಡಿ
Related Stories
Recommended image1
ಕಾಲ ಬದಲಾದ್ರೂ ಈ ಸೌಂಡ್​ ಮಾತ್ರ ಬದಲಾಗಲ್ಲ ನೋಡಿ! Radhika Pandit ಕುತೂಹಲದ ಪೋಸ್ಟ್​
Recommended image2
ಏಕಾಏಕಿ ಬಂದು ಕೈಕೊಟ್ಟ ಕಿಪ್ಪಿ ಕೀರ್ತಿ ಎಕ್ಸ್​: Bigg Boss ರಕ್ಷಿತಾ ಶೆಟ್ಟಿ ಫುಲ್​ ಶಾಕ್​- ಆಮೇಲೇನಾಯ್ತು ನೋಡಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved