Published : Sep 04, 2025, 07:09 AM ISTUpdated : Sep 04, 2025, 11:53 PM IST

Karnataka News Live: ಬೆಳಗಾವಿ - ಭೀಕರ ರಸ್ತೆ ಅಪಘಾತ, ಇಬ್ಬರು ಯುವಕರು ಸ್ಥಳದಲ್ಲೇ ಸಾವು!

ಸಾರಾಂಶ

ಮೈಸೂರು: ತಾನೇ ಸೇದಿ ಬಿಸಾಡಿದ ಬೀಡಿಯ ಬೆಂಕಿ ತಗಲಿ ಇಡೀ ಮನೆಯೇ ಸುಟ್ಟು ಗುಜರಿ ವ್ಯಾಪಾರಿ ಸಜೀವ ದಹನಗೊಂಡಿರುವ ದುರ್ಘಟನೆ ಮೈಸೂರಿನ ಮಂಡಿ ಮೊಹಲ್ಲಾದ ಸರ್ ಖಾಜಿ ರಸ್ತೆಯಲ್ಲಿ ಬುಧವಾರ ಬೆಳಗ್ಗೆ ನಡೆದಿದೆ. ಸಿದ್ದನಾಯ್ಕ (60) ಮೃತ ವೃದ್ಧ. ಬುಧವಾರ ಸಿದ್ದನಾಯ್ಕ ಅವರ ಪತ್ನಿ ಸಿದ್ದಮ್ಮ ಕೂಲಿ ಕೆಲಸಕ್ಕೆ ತೆರಳಿದ್ದು, ಮೊಮ್ಮಗಳು ಕಾಲೇಜಿಗೆ ಹೋಗಿದ್ದಳು. ಈ ವೇಳೆ ಮನೆಯಲ್ಲಿದ್ದ ಸಿದ್ದನಾಯ್ಕ ಬೀಡಿ ಸೇದಿದ ಬಳಿಕ ಮನೆಯಲ್ಲಿಯೇ ಎಸೆದಿದ್ದು, ಮನೆಯಲ್ಲಿ ಸಂಗ್ರಹಿಸಿದ್ದ ಹಳೆಯ ವಸ್ತುಗಳಿಗೆ ಬೆಂಕಿ ತಗುಲಿ, ದಟ್ಟ ಹೊಗೆ ಆವರಿಸಿಕೊಂಡಿದೆ. ಈ ವೇಳೆ ಸಿದ್ದನಾಯ್ಕ ಅವರು ಮನೆಯಿಂದ ಹೊರ ಬರಲು ಯತ್ನಿಸಿದರೂ ಸಾಧ್ಯವಾಗದೇ ಸಜೀವವಾಗಿ ದಹನವಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಮೃತರ ಪತ್ನಿ ನೀಡಿದ ದೂರಿನ ಮೇರೆಗೆ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Belagavi breaking

11:53 PM (IST) Sep 04

ಬೆಳಗಾವಿ - ಭೀಕರ ರಸ್ತೆ ಅಪಘಾತ, ಇಬ್ಬರು ಯುವಕರು ಸ್ಥಳದಲ್ಲೇ ಸಾವು!

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
Read Full Story

11:29 PM (IST) Sep 04

ಬೆಂಗಳೂರಿನ ಬೌರಿಂಗ್ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯ? ಎದೆಯೆತ್ತರಕ್ಕೆ ಬೆಳೆದ ಮಗ ಸಾವು, ಇಬ್ಬರ ಮಕ್ಕಳನ್ನು ಕಳ್ಕೊಂಡ ಹೆತ್ತ ತಾಯಿಗೆ ಇದೆಂಥ ಸ್ಥಿತಿ!

ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ 30 ವರ್ಷದ ಶಿವಕುಮಾರ್ ಮೃತಪಟ್ಟಿದ್ದಾರೆ. ತಾಯಿ ಶಾರದಾ ತಮ್ಮ ಇಬ್ಬರು ಗಂಡು ಮಕ್ಕಳನ್ನು ಕಳೆದುಕೊಂಡು ಆಘಾತಕ್ಕೊಳಗಾಗಿದ್ದಾರೆ. ಐಸಿಯುಗೆ ದಾಖಲಿಸದೆ ನಿರ್ಲಕ್ಷ್ಯ ವಹಿಸಿದ್ದೇ ಮಗನ ಸಾವಿಗೆ ಕಾರಣ ಎಂದು ಆರೋಪ.
Read Full Story

10:29 PM (IST) Sep 04

GST ಸರಳೀಕರಣ ಬಡವರಿಗೆ, ಮಧ್ಯಮ ವರ್ಗದವರಿಗೆ ಪ್ರಯೋಜನ - ಸಂಸದ ಕಾಗೇರಿ

ಜಿಎಸ್ಟಿ ದರ ಪರಿಷ್ಕರಣೆಯಿಂದ ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ಹೆಚ್ಚಿನ ಲಾಭವಾಗಲಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ. 

Read Full Story

10:25 PM (IST) Sep 04

ಸೌಜನ್ಯ ಕೇಸ್​ನಲ್ಲಿ ನನ್ನನ್ನೇ ರೇ*ಪ್​ ಮಾಡೋ ಕಮೆಂಟ್​ ಹಾಕಿದ್ರು! ಆಮೇಲೆ ಗೊತ್ತಾಯ್ತು ಅವ್ರು... ಶಾಕಿಂಗ್​ ವಿಷ್ಯ ಹೇಳಿದ ಮಹಿಳಾ ಆಯೋಗದ ಅಧ್ಯಕ್ಷೆ

ಸೌಜನ್ಯ ಕೇಸ್​ಗೆ ಸಂಬಂಧಿಸಿದಂತೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಅವರು ತಮ್ಮ ವಿಡಿಯೋ ಮಿಸ್​ಯೂಸ್​ ಮಾಡಿ ರೇ*ಪ್​ ಬೆದರಿಕೆ ಹಾಕಿದ್ದರ ವಿಚಿತ್ರ ಘಟನೆ ಸುವರ್ಣ ಪಾಡ್​ಕಾಸ್ಟ್​ನಲ್ಲಿ ವಿವರಿಸಿದ್ದಾರೆ.

 

Read Full Story

10:15 PM (IST) Sep 04

ಗುರುಗ್ರಾಮದಲ್ಲಿ 1BHK ಮನೆ ಬಾಡಿಗೆ 1 ಲಕ್ಷ, ಭಾರತದಲ್ಲಿ ದುಬಾರಿ ಜೀವನ, ರಷ್ಯನ್ ಮಹಿಳೆ ವಿಡಿಯೋ ವೈರಲ್!

ಭಾರತದಲ್ಲಿ ಜೀವನ ಅಗ್ಗವಾಗಿದೆ ಎಂದು ಕೆಲವರು ಹೇಳುತ್ತಾರೆ, ಆದರೆ ಗುರುಗ್ರಾಮದಲ್ಲಿ  ಒಂದು ತಿಂಗಳಲ್ಲಿ ಒಂದು ಲಕ್ಷ ಖರ್ಚು ಮಾಡುವ ಹಣ ಇಷ್ಟೇ ಎಂದು ರಷ್ಯನ್ ಮೂಲದ ಮಹಿಳೆಯ ವಿಡಿಯೋ ವೈರಲ್ ಆಗಿದೆ.

Read Full Story

09:23 PM (IST) Sep 04

ಮಹಿಳಾ ನಾಯಕತ್ವಕ್ಕೆ ಎಚ್ಎಎಲ್ ಉತ್ತೇಜನ - 'ತೇಜಸ್ವಿ' ರಾಷ್ಟ್ರೀಯ ಮಹಿಳಾ ಸಮಾವೇಶ

ಬೆಂಗಳೂರಿನಲ್ಲಿ 'ತೇಜಸ್ವಿ' ಎಂಬ ಮೊದಲ ರಾಷ್ಟ್ರೀಯ ಮಹಿಳಾ ಸಮಾವೇಶವನ್ನು ಎಚ್ಎಎಲ್ ಮತ್ತು ಫೋರಮ್ ಆಫ್ ವಿಮೆನ್ ಇನ್ ಪಬ್ಲಿಕ್ ಸೆಕ್ಟರ್ ಆಯೋಜಿಸಿದ್ದವು. ಮನೆ ಮತ್ತು ಕೆಲಸದಲ್ಲಿ ಮಹಿಳೆಯರ ಸಾಧನೆಗಳನ್ನು ಗುರುತಿಸಲಾಯಿತು. ಕಾರ್ಯಕ್ರಮದ ಪೂರ್ಣ ವರದಿ ಇಲ್ಲಿದೆ

Read Full Story

09:00 PM (IST) Sep 04

ಕೋಟ್ಯಂತರ ಜೀವ ವಿಮಾ ಪಾಲಿಸಿದಾರರಿಗೆ ಸಿಹಿ ಸುದ್ದಿ! GST ಕಡಿತದ ನಂತರ LIC ಕಂತು ಅಗ್ಗ? ಪ್ರೀಮಿಯಂ ಮೇಲೆ ಎಷ್ಟು ಉಳಿತಾಯ? ತಿಳಿಯಿರಿ

ಸೆಪ್ಟೆಂಬರ್ 22, 2025 ರಿಂದ ಜೀವ ವಿಮಾ ಪ್ರೀಮಿಯಂ ಮೇಲಿನ 18% ಜಿಎಸ್‌ಟಿಯನ್ನು ಸಂಪೂರ್ಣವಾಗಿ ತೆಗೆದುಹಾಕಲಾಗುವುದು. ಇದರಿಂದ ಎಲ್‌ಐಸಿ ಸೇರಿದಂತೆ ಎಲ್ಲಾ ಜೀವ ವಿಮಾ ಕಂತುಗಳು ಅಗ್ಗವಾಗಲಿವೆ, ಗ್ರಾಹಕರಿಗೆ ಗಣನೀಯ ಉಳಿತಾಯ.
Read Full Story

08:44 PM (IST) Sep 04

ಧರ್ಮಸ್ಥಳ ಕೇಸ್ ಯೂಟ್ಯೂಬರ್ ಸಮೀರ್ ಮನೆ ಮಹಜರು; ಇದೆಲ್ಲಾ ಸುಳ್ಳು ಕೇಸ್ ಎಂದ ಮಟ್ಟಣ್ಣನವರ್

ಯೂಟ್ಯೂಬರ್ ಸಮೀರ್ ಮೇಲಿನ ಆರೋಪ ಸುಳ್ಳು ಎಂದು ಹೋರಾಟಗಾರ ಗಿರೀಶ್ ಮಟ್ಟಣ್ಣನವರ್ ಹೇಳಿದ್ದಾರೆ. 'ಧಣಿಗಳ ಚಾಟುಗಳು' ಎಂಬ ಪದ ಬಳಕೆಗೆ ಸಂಬಂಧಿಸಿದಂತೆ ಪೊಲೀಸರು ಸಮೀರ್ ಮನೆಯಲ್ಲಿ ಮಹಜರು ನಡೆಸಿದ್ದಾರೆ. ಆರು ಗಂಟೆಗಳ ಕಾಲ ನಡೆದ ಪರಿಶೀಲನೆಯಲ್ಲಿ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
Read Full Story

08:05 PM (IST) Sep 04

ಬಳ್ಳಾರಿಯಲ್ಲಿ ರಾಜ್ಯದ 2ನೇ ಬಯೋ ಇನೋವೇಶನ್‌ ಕೇಂದ್ರ ನಿರ್ಮಿಸಲು ಸರ್ಕಾರ ಸಿದ್ದತೆ!

ಗಣಿಗಾರಿಕೆ ಪಟ್ಟಣ ಬಳ್ಳಾರಿಯಲ್ಲಿ ಜೈವಿಕ ನಾವೀನ್ಯತೆ ಕೇಂದ್ರ ಸ್ಥಾಪನೆಗೆ ಕರ್ನಾಟಕ ಸರ್ಕಾರ ಚಿಂತನೆ ನಡೆಸಿದೆ. ಪರಿಸರ ಪುನರುಜ್ಜೀವನ, ಕೃಷಿ, ಆರೋಗ್ಯ ಮತ್ತು ಹವಾಮಾನ ಸುಸ್ಥಿರತೆಯ ಕ್ಷೇತ್ರಗಳಲ್ಲಿ ನವೋದ್ಯಮಗಳನ್ನು ಉತ್ತೇಜಿಸುವುದು ಈ ಕೇಂದ್ರದ ಉದ್ದೇಶ.
Read Full Story

07:51 PM (IST) Sep 04

ಶಿಕ್ಷಕರ ದಿನಾಚರಣೆಗೆ ನಿಮ್ಮ ಗುರುಗಳಿಗೆ ನೀಡಬಹುದಾದ ಟಾಪ್ 10 ಉಡುಗೊರೆಗಳಿವು

ಶಿಕ್ಷಕರ ದಿನಕ್ಕೆ ಉಡುಗೊರೆ ಆಯ್ಕೆ ಮಾಡುವುದು ಕಷ್ಟವೇ? ವೈಯಕ್ತಿಕ ಉಡುಗೊರೆಗಳಿಂದ ಹಿಡಿದು ಡಿಜಿಟಲ್ ಸಾಧನಗಳವರೆಗೆ, ನಿಮ್ಮ ಗುರುಗಳಿಗೆ ಸೂಕ್ತವಾದ ೧೦ ಉಡುಗೊರೆ ಆಲೋಚನೆಗಳನ್ನು ಇಲ್ಲಿ ನೀಡಲಾಗಿದೆ. ಹೃದಯಸ್ಪರ್ಶಿ ಉಡುಗೊರೆಯ ಮೂಲಕ ನಿಮ್ಮ ಗುರುಗಳಿಗೆ ಕೃತಜ್ಞತೆ ಸಲ್ಲಿಸಿ.
Read Full Story

07:40 PM (IST) Sep 04

ರಾಷ್ಟ್ರಮಟ್ಟದ ಶಿಕ್ಷಕ ಪ್ರಶಸ್ತಿಗೆ ಮೈಸೂರು ಮಧುಸೂಧನ್ ಭಾಜನ; ಈ ಕಾರ್ಯಕ್ಕೆ ಮೆಚ್ಚಲೇಬೇಕು!

ಮೈಸೂರಿನ ಹಿನಕಲ್ ಸರ್ಕಾರಿ ಶಾಲೆಯ ವಿಜ್ಞಾನ ಶಿಕ್ಷಕ ಕೆ.ಎಸ್.ಮಧುಸೂದನ್‌ ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನವೀನ ಬೋಧನಾ ವಿಧಾನ ಮತ್ತು ತಂತ್ರಜ್ಞಾನದ ಸದ್ಬಳಕೆಗಾಗಿ ಅವರಿಗೆ ಈ ಪ್ರಶಸ್ತಿ ಲಭಿಸಿದೆ. ಕರ್ನಾಟಕದಿಂದ ಆಯ್ಕೆಯಾದ ಏಕೈಕ ಶಿಕ್ಷಕರೆಂಬ ಹೆಗ್ಗಳಿಕೆ ಅವರದು.

Read Full Story

07:27 PM (IST) Sep 04

ಆನ್‌ಲೈನ್‌ನಲ್ಲಿ ಮಾರಾಟಕ್ಕೆ ಬಂದ ಕನ್ನಡ ಅಂಕಿಯ ಎಚ್‌ಎಂಟಿ ಗಂಡಭೇರುಂಡ ವಾಚ್‌, ಸೋಲ್ಡ್‌ಔಟ್‌ ಆಗೋ ಮುನ್ನ ಖರೀದಿಸಿ!

ಎಚ್‌ಎಂಟಿ ತನ್ನ ಗಂಡಭೇರುಂಡ ಶೈಲಿಯ ಕನ್ನಡ ಅಂಕಿಗಳ ವಾಚನ್ನು ಮತ್ತೆ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವ ಈ ವಾಚ್, ಕ್ಯಾಶುಯಲ್ ಮತ್ತು ಔಪಚಾರಿಕ ಸಂದರ್ಭಗಳಿಗೆ ಸೂಕ್ತವಾಗಿದೆ. ಒಂದು ವರ್ಷದ ವಾರಂಟಿಯೊಂದಿಗೆ ಬರುತ್ತದೆ.
Read Full Story

07:23 PM (IST) Sep 04

ಬಂಗಾರದ ಬೆಲೆ ಕುಸಿತದ ಬೆನ್ನಲ್ಲಿಯೇ GST ಹೊರೆಯಾಗದೇ ಚಿನ್ನಾಭರಣ ಖರೀದಿ ಮಾಡಿ; ಇಲ್ಲಿವೆ 5 ಸೂಪರ್ ಟಿಪ್ಸ್!

ಚಿನ್ನಾಭರಣ ಖರೀದಿ ಸಲಹೆಗಳು: GST ಕೌನ್ಸಿಲ್ ಹಲವು ವಸ್ತುಗಳ ಮೇಲಿನ GST ಕಡಿಮೆ ಮಾಡಿದೆ, ಆದರೆ ಚಿನ್ನ ಮತ್ತು ಬೆಳ್ಳಿ GSTಯಲ್ಲಿ ಯಾವುದೇ ಬದಲಾವಣೆ ಇಲ್ಲ. ಚಿನ್ನದ ಮೇಲೆ 3% ಮತ್ತು ಆಭರಣ ತಯಾರಿಕಾ ಶುಲ್ಕದ ಮೇಲೆ 5% GST ಈಗಲೂ ಅನ್ವಯವಾಗುತ್ತದೆ. ಹಣ ಉಳಿಸಲು ಈ 5 ಸಲಹೆಗಳನ್ನು ತಿಳಿದುಕೊಳ್ಳಿ.

 

Read Full Story

07:01 PM (IST) Sep 04

ಧರ್ಮಸ್ಥಳ ಅಸಹಜ ಸಾವು ಕೇಸ್‌, ಸೋನಿಯಾ ಗಾಂಧಿಗೆ ಪತ್ರ ಬರೆದ ಮಹಿಳಾ ಸಂಘಟನೆಗಳು!

ಧರ್ಮಸ್ಥಳದಲ್ಲಿ ನಡೆದಿರುವ ಅಸಹಜ ಸಾವುಗಳ ಬಗ್ಗೆ ಮಹಿಳಾ ಸಂಘಟನೆಗಳು ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದು, SIT ತನಿಖೆಗೆ ಆಗ್ರಹಿಸಿವೆ. ಸೌಜನ್ಯ ಪ್ರಕರಣದಿಂದ ಹಿಡಿದು ಇತ್ತೀಚಿನ ಘಟನೆಗಳವರೆಗೆ ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿವೆ. ಕಾಂಗ್ರೆಸ್ ನಾಯಕರ ಹೇಳಿಕೆಗಳ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿವೆ.
Read Full Story

06:55 PM (IST) Sep 04

'ನೀವು ಧಿಕ್ಕಾರ ಕೂಗೋದು ಬಿಟ್ಟು ಬೇರೇನೂ ಮಾಡೋಕ್ಕಾಗಲ್ಲ..' ಭೂಮಿ ನೀಡಲ್ಲ ಎಂದ ರೈತರ ಮೇಲೆ ಡಿಕೆಶಿ ಗರಂ!

ರಾಮನಗರದಲ್ಲಿ 9600 ಎಕರೆ ಭೂಸ್ವಾಧೀನ ವಿಚಾರದಲ್ಲಿ ರೈತರ ಪ್ರತಿಭಟನೆ ವೇಳೆ ಡಿಕೆ ಶಿವಕುಮಾರ್ ರೈತರ ಮೇಲೆ ಗರಂ ಆದ ಘಟನೆ ನಡೆದಿದೆ. 70% ಜನ ಯೋಜನೆಗೆ ಒಪ್ಪಿಗೆ ನೀಡಿದ್ದಾರೆ ಎಂದು ಡಿಕೆಶಿ ಹೇಳಿದ್ದಾರೆ.
Read Full Story

06:27 PM (IST) Sep 04

ಒಂದೇ ವೇದಿಕೆಗೆ ಬಂದ ಡಿಕೆಶಿ-ಸದ್ಗುರು ಆದ್ರೆ ಪರಸ್ಪರ ಭೇಟಿ ಆಗದೇ ತೆರಳಿದ ಡಿಸಿಎಂ!

ನ್ಯಾಷನಲ್ ಹಿಲ್ ವೀವ್ ಪಬ್ಲಿಕ್ ಸ್ಕೂಲ್‌ನ 25ನೇ ವಾರ್ಷಿಕೋತ್ಸವದಲ್ಲಿ ಡಿಕೆ ಶಿವಕುಮಾರ್ ಮತ್ತು ಸದ್ಗುರು ಉಪಸ್ಥಿತರಿದ್ದರೂ ಭೇಟಿಯಾಗಲಿಲ್ಲ. ಡಿಕೆಶಿ ಕಾರ್ಯಕ್ರಮದಿಂದ ನಿರ್ಗಮಿಸಿದ ನಂತರ ಸದ್ಗುರು ಆಗಮಿಸಿದರು. ಇದು ರಾಜಕೀಯ ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ.
Read Full Story

06:12 PM (IST) Sep 04

ಮಳೆಗಾಲದಲ್ಲಿ ಹಣ್ಣು-ತರಕಾರಿಗಳ ಮೇಲೆ ಸುಳಿದಾಡುವ ಕಪ್ಪು ಕೀಟಗಳನ್ನು ತೊಡೆದುಹಾಕಲು ಹೀಗೆ ಮಾಡಿ

ಮಳೆಗಾಲದಲ್ಲಿ ಹಣ್ಣು ತರಕಾರಿಗಳ ಮೇಲೆ ಕೀಟಗಳು ಮುತ್ತುವುದು ಸಾಮಾನ್ಯ. ಇದರಿಂದ ಮನೆಯಲ್ಲಿಯೂ ಕೊಳಕಾಗುತ್ತದೆ. ಹಣ್ಣು ತರಕಾರಿಗಳನ್ನು ಹೇಗೆ ಕೀಟ ಮುಕ್ತವಾಗಿಡುವುದು ಎಂಬುದನ್ನು ತಿಳಿಯಿರಿ.

Read Full Story

06:09 PM (IST) Sep 04

ಇಂದು ಅನಂತ್‌ನಾಗ್‌ ಜನ್ಮದಿನ, ಎಂದಿಗೂ ಬೋರ್‌ ಆಗದ ಅವರ 10 ಸಿನಿಮಾಗಳು!

ಹಿರಿಯ ನಟ ಅನಂತ್‌ನಾಗ್‌ ಅವರು ಇಂದು ತಮ್ಮ 77ನೇ ವರ್ಷದ ಜನ್ಮದಿನ ಆಚರಿಸಿಕೊಂಡಿದ್ದಾರೆ.  250ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಅನಂತ್‌ ನಾಗ್‌ಗೆ ಇತ್ತೀಚಿಗಷ್ಟೇ ಕೇಂದ್ರ ಸರ್ಕಾರ ಪದ್ಮಭೂಷಣ ನೀಡಿ ಗೌರವ ಸಲ್ಲಿಸಿತ್ತು.

Read Full Story

05:53 PM (IST) Sep 04

ನಂಗೆ ಕನ್ನಡ ಬರುತ್ತೆ ಎಂದ ಮುಂಬೈಕರ್‌ಗೆ ಬಾರ್‌ನಲ್ಲಿ ರಾಜಾತಿಥ್ಯ ನೀಡಿದ ಕನ್ನಡಿಗರು

ಬೆಂಗಳೂರಿನಲ್ಲಿ ಮುಂಬೈ ಮೂಲದ ವ್ಯಕ್ತಿ ತನಗೆ ಕನ್ನಡ ಬರುತ್ತೆ ನಾನು ಕನ್ನಡ ಕಲಿತಿದ್ದೀನಿ ಎಂದಾಗ ಅಲ್ಲಿ ಸೇರಿದ ಕನ್ನಡಿಗರು ಏನು ಮಾಡಿದರು ಎಂಬುದನ್ನು ಆ ವ್ಯಕ್ತಿಯ ಕನ್ನಡ ಸ್ನೇಹಿತನೋರ್ವ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಭಾರಿ ವೈರಲ್ ಆಗಿದೆ

Read Full Story

05:50 PM (IST) Sep 04

Trump Deepfake Video - ಆಪರೇಷನ್ ಸಿಂದೂರ್ ವೇಳೆ ಭಾರತದ 7 ವಿಮಾನಗಳು ಪತನ? ಟ್ರಂಪ್ ಸುಳ್ಳು ಹೇಳಿಕೆ ಬಯಲು!

ಆಪರೇಷನ್ ಸಿಂದೂರ್ ಸಮಯದಲ್ಲಿ ಪಾಕಿಸ್ತಾನಕ್ಕೆ ಭಾರೀ ನಷ್ಟವಾಯಿತು. ಆದರೆ, ಸಾಮಾಜಿಕ ಮಾಧ್ಯಮದಲ್ಲಿ ಡೊನಾಲ್ಡ್ ಟ್ರಂಪ್ ಅವರ ವೀಡಿಯೊವನ್ನು ಹಂಚಿಕೊಳ್ಳಲಾಗಿದ್ದು, ಭಾರತದ 7 ವಿಮಾನಗಳು ಪತನಗೊಂಡಿವೆ ಎಂದು ಹೇಳಲಾಗಿದೆ. ಈ ವೀಡಿಯೊ ನಕಲಿ ಎಂದು ತಿಳಿದುಬಂದಿದೆ. ಇದನ್ನು AI ತಂತ್ರಜ್ಞಾನದಿಂದ ರಚಿಸಲಾಗಿದೆ.
Read Full Story

05:38 PM (IST) Sep 04

ನಾಳೆ ಬೆಂಗಳೂರಿನಾದ್ಯಂತ ಈದ್-ಎ-ಮಿಲಾದ್ ಸಂಭ್ರಮ; ಸಂಚಾರ ಮಾರ್ಗ ಬದಲಾವಣೆ

ಈದ್-ಎ-ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸೆಪ್ಟೆಂಬರ್ 5 ರಂದು ಸಂಚಾರ ಬದಲಾವಣೆಗಳನ್ನು ಜಾರಿಗೊಳಿಸಲಾಗಿದೆ. ಕೆ.ಜಿ.ಹಳ್ಳಿ, ಪುಲಿಕೇಶಿನಗರ, ಶಿವಾಜಿನಗರ ಭಾಗಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದ್ದು, ಪರ್ಯಾಯ ಮಾರ್ಗ ಸೂಚಿಸಲಾಗಿದೆ. ನಿಗದಿತ ಸ್ಥಳಗಳಲ್ಲಿ ಪಾರ್ಕಿಂಗ್ ನಿಷೇಧಿಸಲಾಗಿದೆ.

Read Full Story

04:29 PM (IST) Sep 04

ರಾಜ್ಯ ಸರ್ಕಾರದ ಬಳಿ ಮೆಟ್ರೋ ಫೇರ್‌ ಫಿಕ್ಸೇಷನ್‌ ರಿಪೋರ್ಟ್‌ ಇರೋದೇ ಅನುಮಾನ ಎಂದ ತೇಜಸ್ವಿ ಸೂರ್ಯ

ಬೆಂಗಳೂರು ಮೆಟ್ರೋ ದರ ಇಳಿಕೆಗೆ ಪಟ್ಟು ಹಿಡಿದಿರುವ ಸಂಸದ ತೇಜಸ್ವಿ ಸೂರ್ಯ, ರಾಜ್ಯ ಸರ್ಕಾರದ ಬಳಿ ದರ ನಿಗದಿ ವರದಿ ಇರುವುದೇ ಅನುಮಾನ ಎಂದು ಹೇಳಿದ್ದಾರೆ. ಬಿಎಂಆರ್‌ಸಿಎಲ್‌ ಹಾರಿಕೆ ಉತ್ತರ ನೀಡುತ್ತಿದೆ, ಸರ್ಕಾರ ಕೋರ್ಟ್‌ನಲ್ಲಿ ಛೀಮಾರಿ ಹಾಕಿಸಿಕೊಳ್ಳಲಿದೆ ಎಂದು ಅವರು ಆರೋಪಿಸಿದ್ದಾರೆ.
Read Full Story

04:18 PM (IST) Sep 04

ಮನೆಯಲ್ಲೇ ಇದ್ದರೂ ಪೊಲೀಸರನ್ನೇ ಅಲೆದಾಡಿಸಿದ ಎಐ ಸಮೀರನ ಮನೆಗೆ ಕೋರ್ಟ್ ವಾರೆಂಟ್‌ನೊಂದಿಗೆ ಎಂಟ್ರಿ!

ಕೃತಕ ಬುದ್ಧಿಮತ್ತೆ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂಟ್ಯೂಬರ್ ಸಮೀರ್ ಮನೆಗೆ ಬೆಳ್ತಂಗಡಿ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಕೋರ್ಟ್ ಸರ್ಚ್ ವಾರಂಟ್‌ನೊಂದಿಗೆ ಪೊಲೀಸರು ಕಂಪ್ಯೂಟರ್, ಮೊಬೈಲ್‌ಗಳನ್ನು ಪರಿಶೀಲಿಸಿದ್ದಾರೆ. ಸಮೀರ್ ತನಿಖೆಗೆ ಸಹಕರಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

Read Full Story

04:12 PM (IST) Sep 04

ಜಿಎಸ್‌ಟಿ 2.0 ಬಳಿಕ ರಾಜ್ಯದ ಆದಾಯದಲ್ಲಿ ಕುಸಿತ, ವಾರ್ಷಿಕ 48 ಸಾವಿರ ಕೋಟಿ ರೂ ಕಡಿಮೆ - ಅಶ್ವಥ್ ನಾರಾಯಣ

ಜಿಎಸ್ಟಿ 2.0 ಕುರಿತು ಮಾಜಿ ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ ಅವರ ವಿಶ್ಲೇಷಣೆ. ಈ ಸರಳೀಕರಣ ಕ್ರಮವು 'ಒಂದು ದೇಶ - ಒಂದು ಮಾರುಕಟ್ಟೆ' ದೃಷ್ಟಿಕೋನಕ್ಕೆ ಪೂರಕವಾಗಿದ್ದು, ರಾಜ್ಯದ ಆರ್ಥಿಕತೆಗೆ ದೀರ್ಘಾವಧಿಯ ಲಾಭ ತರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

Read Full Story

03:22 PM (IST) Sep 04

ಸರ್ಕಾರಿ ನೌಕರರಿಗೆ 3% ಡಿಎ ಏರಿಕೆ - ಹಬ್ಬಕ್ಕೆ ಡಬಲ್ ಖುಷಿ

ಹೊಸ AICPI ಇಂಡೆಕ್ಸ್ ಪ್ರಕಾರ, ಕೇಂದ್ರ ಸರ್ಕಾರಿ ನೌಕರರ ಡಿಎ 55% ಇಂದ 58% ಕ್ಕೆ ಏರಿಕೆಯಾಗಿದೆ. ಪ್ರತಿ ಹಬ್ಬದ ಸೀಸನ್‌ನಲ್ಲಿ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಹಬ್ಬದ ಉಡುಗೊರೆಯಾಗಿದೆ.

Read Full Story

03:11 PM (IST) Sep 04

ಬೆಂಗಳೂರು - ಮಧ್ಯರಾತ್ರಿ ಪಿಜಿಗೆ ನುಗ್ಗಿ ನಿದ್ದೆಯಲ್ಲಿದ್ದ ಯುವತಿಯ ಕಾಲು ಸವರಿದ ಸ್ವಿಗ್ಗಿ ಯುವಕ ಕೊನೆಗೂ ಅರೆಸ್ಟ್

ಬೆಂಗಳೂರಿನ ಸುದ್ದಗುಂಟೆಪಾಳ್ಯದಲ್ಲಿ ಲೇಡಿಸ್ ಪಿಜಿಗೆ ನುಗ್ಗಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ಕೆ. ನರೇಶ್ ಪಟ್ಯಂ ಎಂದು ಗುರುತಿಸಲಾಗಿದ್ದು, ಈತ ಆಂಧ್ರ ಮೂಲದವನಾಗಿದ್ದಾನೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಯನ್ನು ಪತ್ತೆ ಹಚ್ಚಲಾಗಿದೆ.
Read Full Story

02:43 PM (IST) Sep 04

ಸರ್ಕಾರಿ ಶಾಲೆಯ ಗಾಳಿಪಟ ಆಸಕ್ತ ಹುಡುಗರ ಕತೆ 'ಕೈಟ್‌ ಬ್ರದರ್ಸ್‌' - ಸೆಪ್ಟೆಂಬರ್‌ನಲ್ಲಿ ಬಿಡುಗಡೆಗೆ ಸಜ್ಜು

ಸಿನಿಮಾ ರಂಗದಲ್ಲಿ ಡೈರೆಕ್ಷನ್‌ ಡಿಪಾರ್ಟ್‌ಮೆಂಟ್‌ನಲ್ಲಿದ್ದುಕೊಂಡು ವಿಷ್ಣುವರ್ಧನ್‌, ಅಂಬರೀಶ್‌ ಅವರೊಂದಿಗೆಲ್ಲ ಕೆಲಸ ಮಾಡಿದೆ. ಸಿನಿಮಾರಂಗಕ್ಕೆ ಬಂದು ಇಷ್ಟು ಕಾಲವಾದರೂ ಸ್ವತಂತ್ರ ಸಿನಿಮಾ ಮಾಡಲು ಇದೀಗ ಸಾಧ್ಯವಾಗಿದೆ ಎನ್ನುತ್ತಾರೆ ನಿರ್ದೇಶಕ ವಿರೇನ್‌.

Read Full Story

02:33 PM (IST) Sep 04

ಚಿನ್ನದ ಬೆಲೆ ಲಕ್ಷ ದಾಟುತ್ತಿದ್ದಂತೆ ಜ್ಯೂವೆಲ್ಲರಿ ಶಾಪ್ ರಾಬರಿ; ಬಂದೂಕು ಸಮೇತ ದರೋಡೆಕೋರರ ಬಂಧನ!

ಅಥಣಿಯ ತ್ರೀಮೂರ್ತಿ ಜ್ಯುವೆಲರ್ಸ್‌ನಲ್ಲಿ ನಡೆದ ದರೋಡೆ ಯತ್ನ ಪ್ರಕರಣದಲ್ಲಿ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಪೊಲೀಸರು ಎರಡು ದೇಶೀ ನಿರ್ಮಿತ ಪಿಸ್ತೂಲ್‌ಗಳು ಮತ್ತು ಏಳು ಜೀವಂತ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. CCTV ದೃಶ್ಯಾವಳಿಗಳ ಆಧಾರದ ಮೇಲೆ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ.

Read Full Story

01:56 PM (IST) Sep 04

ಅಮೆರಿಕಾ ಸುಂಕ ಸಮರದ ನಡುವೆ ಮೋದಿ ಪರ್ಯಾಯ ಮಾರ್ಗೋಪಾಯ ಶ್ಲಾಘನೀಯ - ಎಚ್.ಡಿ.ದೇವೇಗೌಡ

ಭಾರತ ಜಾಗತಿಕ ಮಟ್ಟದಲ್ಲಿ ಬಹುಪಕ್ಷೀಯ ಪಾಲುದಾರಿಕೆ ಹೊಂದುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರ ಜಪಾನ್‌ ಮತ್ತು ಚೀನಾ ದೇಶಗಳ ಪ್ರವಾಸದ ಬಗ್ಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

Read Full Story

01:32 PM (IST) Sep 04

ಜಿಎಸ್‌ಟಿ ಕಡಿತದ ಬೆನ್ನಲ್ಲಿಯೇ ಚಿನ್ನದ ಬೆಲೆಯೂ ಕುಸಿತ! ಬಂಗಾರ ಖರೀದಿಗೆ ಇದು ಸುಸಮಯ!

ದೇಶದಲ್ಲಿ ನಿನ್ನೆ ಸಂಜೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜಿಎಸ್‌ಟಿ ಸ್ಲ್ಯಾಬ್ ಅನ್ನು ಕಡಿತ ಮಾಡಿದ ಬೆನ್ನಲ್ಲಿಯೇ ಚಿನ್ನದ ಬೆಲೆಯಲ್ಲಿಯೂ ಭಾರೀ ಕುಸಿತವಾಗಿದೆ. ಇಂದು 22ಕ್ಯಾರೆಟ್ ಚಿನ್ನದ ಬೆಲೆ ರೂ.9,795ಗೆ ಮಾರಾಟವಾಗುತ್ತಿದೆ.

Read Full Story

01:31 PM (IST) Sep 04

ಉಚಿತ ವಿದ್ಯುತ್‌ ಹೊರೆ ಕೈಗಾರಿಕೆ ಮೇಲೆ ಹೇರಿಕೆ ಬೇಡ - ಎಂ.ಜಿ.ಬಾಲಕೃಷ್ಣ ಮುಖಾಮುಖಿ ಸಂದರ್ಶನ

ರಾಜ್ಯದ ಕೈಗಾರಿಕಾ ಕ್ಷೇತ್ರ ಎದುರಿಸುತ್ತಿರುವ ಸವಾಲು, ಸರ್ಕಾರ ಕೈಗೊಳ್ಳಬೇಕಾದ ಪರಿಹಾರ ಕ್ರಮಗಳು, ಜಿಎಸ್‌ಟಿ ಸರಳೀಕರಣದಿಂದ ಕೈಗಾರಿಕೆಗಳಿಗಾಗುವ ಲಾಭ ಹೀಗೆ ಹಲವು ವಿಚಾರಗಳ ಕುರಿತು ಮಾತನಾಡಲು ಎಫ್‌ಕೆಸಿಸಿಐ ಅಧ್ಯಕ್ಷ ಎಂ.ಜಿ. ಬಾಲಕೃಷ್ಣ ಅವರು ‘ಕನ್ನಡಪ್ರಭ’ದೊಂದಿಗೆ ಮುಖಾಮುಖಿಯಾಗಿದ್ದಾರೆ.

Read Full Story

01:07 PM (IST) Sep 04

ಟ್ಯೂಷನ್‌ ಬದಲು ಗೋಬಿ ತಿನ್ನಲು ಹೋದ ಬಾಲಕ; ಪೊಲೀಸರ ಮುಂದೆ ಕಿಡ್ನಾಪ್ ಕಥೆ ಕಟ್ಟಿ ನಾಟಕ!

ಚಾಮರಾಜನಗರದಲ್ಲಿ 10 ವರ್ಷದ ಬಾಲಕನೊಬ್ಬ ಟ್ಯೂಷನ್‌ಗೆ ಹೋಗುವ ಬದಲು ಗೋಬಿ ತಿನ್ನಲು ಹೋಗಿ, ಮನೆಯವರಿಗೆ ಮತ್ತು ಪೊಲೀಸರಿಗೆ ಸುಳ್ಳು ಕಿಡ್ನಾಪ್‌ ಕಥೆ ಹೇಳಿದ್ದಾನೆ. ಪೊಲೀಸರ ತನಿಖೆಯಿಂದ ಸತ್ಯ ಬಯಲಾಗಿದೆ.

Read Full Story

01:02 PM (IST) Sep 04

ಚಾಮುಂಡೇಶ್ವರಿ ಶಾಪ ತಗುಲಬಾರದು ಅಂದ್ರೆ ಬಾನು ದಸರಾ ಉದ್ಘಾಟನೆ ಬಿಡಬೇಕು - ಶಾಸಕ ಯತ್ನಾಳ್

ಆ ಹೆಣ್ಣುಮಗಳಿಗೂ ಏನಾದರೂ ಮಾನ, ಮರ್ಯಾದೆ ಇರಬೇಕು. ಮೈಸೂರಿನಲ್ಲಿ ನಡೆಯುವುದು ಎಲ್ಲಾ ಸನಾತನ‌ ಧರ್ಮದ ಸಂಸ್ಕಾರ. ಅಲ್ಲಿ ಬಾನು ಮುಷ್ತಾಕ್ ಅವರಿಗೆ ಏನು ಕೆಲಸ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

Read Full Story

12:38 PM (IST) Sep 04

Mandya - ತಂದೆಗೇ ಖೆಡ್ಡಾ ತೋಡಿದ ಕುಲಪುತ್ರ - ಖಾಸಗಿ ಫೋಟೋ ಎಡಿಟ್ ಮಾಡಿ 5 ಕೋಟಿಗೆ ಡಿಮ್ಯಾಂಡ್

ಮದ್ದೂರಿನ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಮಗನೇ ತಂದೆಗೆ ಖೆಡ್ಡಾ ತೋಡಿದ್ದಾನೆ. ದುಶ್ಚಟಗಳಿಗೆ ಬಲಿಯಾದ ಮಗ, ತಂದೆಯ ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಬ್ಲ್ಯಾಕ್‌ಮೇಲ್ ಮಾಡಿದ್ದಾನೆ. ಈ ಹಿನ್ನೆಲೆಯಲ್ಲಿ ಮಗ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
Read Full Story

12:28 PM (IST) Sep 04

8500 ಶಾಲೆ ಅಡುಗೆ ಕೊಠಡಿ ಉಪಯೋಗಿಸದಷ್ಟು ಹಾಳು - ಮಧ್ಯಾಹ್ನದ ಬಿಸಿಯೂಟಕ್ಕೆ ತೊಂದರೆ!

ಕೆಲ ನಗರ ಪ್ರದೇಶದ ಶಾಲೆಗಳಲ್ಲಿ ಇಸ್ಕಾನ್‌, ಅದಮ್ಯ ಚೇತನ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಮಕ್ಕಳಿಗೆ ಬಿಸಿಯೂಟ ಪೂರೈಸಲಾಗುತ್ತಿರುವುದು ಬಿಟ್ಟರೆ ಬಹುತೇಕ ಗ್ರಾಮೀಣ ಭಾಗದ ಎಲ್ಲಾ ಶಾಲೆಗಳಲ್ಲೂ ಆಯಾ ಶಾಲೆಗಳಲ್ಲೇ ಬಿಸಿಯೂಟ ತಯಾರಿಸಲಾಗುತ್ತದೆ.

Read Full Story

11:54 AM (IST) Sep 04

1 ಲೀಟರ್ ಮೂತ್ರದಿಂದ 6 ಗಂಟೆಗೆ ಬೇಕಾಗುವ ಕರೆಂಟ್ ಉತ್ಪಾದನೆ - ಆಫ್ರಿಕನ್ ಮಕ್ಕಳ ಅದ್ಭುತ ಅವಿಷ್ಕಾರ

ಆಫ್ರಿಕಾದ ನಾಲ್ವರು ವಿದ್ಯಾರ್ಥಿನಿಯರು ಮಾನವ ಮೂತ್ರದಿಂದ ವಿದ್ಯುತ್ ಉತ್ಪಾದಿಸುವ ಜನರೇಟರ್ ಅನ್ನು ಕಂಡುಹಿಡಿದಿದ್ದಾರೆ. ವಿದ್ಯುತ್ ಸಂಪರ್ಕ ಕಷ್ಟಕರ ಎನಿಸುವ ಹಳ್ಳಿಗಳಲ್ಲಿ ಇದು ಅತ್ಯಂತ ಉಪಕಾರಿ ಆಗಬಲ್ಲುದು

Read Full Story

11:33 AM (IST) Sep 04

ದರ್ಶನ್‌ ಜೈಲಿನಿಂದ ಬಂದಮೇಲೆ.. ಕೆಲ ಸ್ಯಾಡಿಸ್ಟ್‌ಗಳು ಇರುತ್ತಾರೆ ಎಂದಿದ್ಯಾಕೆ ಜೋಗಿ ಪ್ರೇಮ್‌!

ದರ್ಶನ್‌ ಜೈಲಿಗೆ ಹೋಗುವ ಎರಡು ದಿನಗಳ ಹಿಂದೆಯೇ ಅವರನ್ನು ಭೇಟಿ ಮಾಡಿದ್ದೆ. ಸಾಕಷ್ಟು ಮಾತುಕತೆ ಮಾಡಿದ್ದೇವೆ. ದರ್ಶನ್‌ ಕಷ್ಟ ಮತ್ತು ನೋವುಗಳೇನು ಅಂತ ಅವರಿಗೇ ಗೊತ್ತು. ಆದರೆ ಕೆಲ ಸ್ಯಾಡಿಸ್ಟ್‌ಗಳು ಇರುತ್ತಾರೆ.

Read Full Story

11:22 AM (IST) Sep 04

ಹೊರ ಜಗತ್ತಿನಲ್ಲಿ ಕರ್ನಾಟಕದ ಹೆಮ್ಮೆ ನಂದಿನಿಗೆ ಎಲ್ಲಿಲ್ಲದ ಬೇಡಿಕೆ, ಗಲ್ಫ್ ಮಾತ್ರವಲ್ಲ ಅಮೆರಿಕಾಕ್ಕೂ ರಫ್ತು!

ಕರ್ನಾಟಕದ ಹೆಮ್ಮೆಯ ನಂದಿನಿ ಹಾಲು ಈಗ ದೇಶ ವಿದೇಶಗಳಲ್ಲಿ ತನ್ನ ಛಾಪು ಮೂಡಿಸುತ್ತಿದೆ. ನೆರೆ ರಾಜ್ಯಗಳ ಜೊತೆಗೆ ಆಸ್ಟ್ರೇಲಿಯಾ, ಫ್ರಾನ್ಸ್, ಯುಕೆ ಸೇರಿದಂತೆ ಹಲವು ದೇಶಗಳಿಗೆ ನಂದಿನಿ ಉತ್ಪನ್ನಗಳ ರಫ್ತು ಆರಂಭವಾಗಲಿದೆ. ಸಿಹಿತಿಂಡಿಗಳ ಮೂಲಕವೂ ಜಾಗತಿಕ ಮಾರುಕಟ್ಟೆಯಲ್ಲಿ ನಂದಿನಿ ಹೆಸರು ಮಾಡುತ್ತಿದೆ.
Read Full Story

11:06 AM (IST) Sep 04

ಯಶ್‌ ಜನಪ್ರಿಯತೆಗೆ ಹೊಟ್ಟೆಕಿಚ್ಚು.. 'ಟಾಕ್ಸಿಕ್‌' ನಿರ್ದೇಶಕಿಯನ್ನು ಮೂಲೆಗುಂಪು ಮಾಡಿಲ್ಲ - ನಟ ಸುದೇವ್‌

ಯಶ್‌ ನಿರ್ದೇಶಕಿಯ ಮಾತು ಕೇಳುತ್ತಿಲ್ಲ, ಯಶ್‌ ನಡವಳಿಕೆಯಿಂದ ಗೀತು ರೋಗಿಹೋಗಿದ್ದಾರೆ, ಪದೇ ಪದೇ ರೀಶೂಟ್‌ ಆಗಿ ಬಜೆಟ್‌ 600 ಕೋಟಿ ಮೀರಿದೆ ಎಂಬಿತ್ಯಾದಿ ವಾದಗಳು ಇತ್ತೀಚೆಗೆ ಕೇಳಿಬಂದಿದ್ದವು.

Read Full Story

10:53 AM (IST) Sep 04

ವಿಷ್ಣುವರ್ಧನ್‌ ಸ್ಮಾರಕಕ್ಕೆ 10 ಗುಂಟೆ ಜಾಗವನ್ನು ಕೊಡಿ - ಸಿಎಂ ಸಿದ್ದರಾಮಯ್ಯಗೆ ಭಾರತಿ ಮನವಿ

ವಿಷ್ಣುವರ್ಧನ್‌ ಅವರ ಸಮಾಧಿ ಸ್ಥಳದಲ್ಲಿ 10 ಗುಂಟೆ ಜಾಗವನ್ನು ವಿಷ್ಣು ಸ್ಮಾರಕ ನಿರ್ಮಾಣಕ್ಕಾಗಿ ಮೀಸಲಿಡುವಂತೆ ಅವರ ಪತ್ನಿ ನಟಿ ಭಾರತಿ ವಿಷ್ಣುವರ್ಧನ್ ಮತ್ತು ಅಳಿಯ ಅನಿರುದ್ಧ್‌ ವಿಷ್ಣುವರ್ಧನ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.

Read Full Story

More Trending News