LIVE NOW
Published : Dec 31, 2025, 07:02 AM ISTUpdated : Dec 31, 2025, 09:08 AM IST

Karnataka News Live: BBK 12 - ಬಿಗ್‌ಬಾಸ್ ಕೊಟ್ಟ ಚೆಕ್‌ಮೆಟ್‌ಗೆ ಮಕ್ಕರ್ ಆದ ಗಿಲ್ಲಿ; ಚಮಕ್ ಕೊಟ್ಟ ರಕ್ಷಿತಾ, ಇತ್ತ ಕಾವ್ಯಾಗೆ ತಳಮಳ

ಸಾರಾಂಶ

ಕೊಪ್ಪಳ: ಮದುವೆಗೂ ಮುನ್ನವೇ ಜನಿಸಿದ ನವಜಾತ ಹೆಣ್ಣು ಶಿಶುವನ್ನು ಮಧ್ಯರಾತ್ರಿ ಕೊರೆಯುವ ಚಳಿಯಲ್ಲಿ ತಾಲೂಕಿನ ಹುಲಿಗಿ ಗ್ರಾಮದ ಹುಲಿಗೆಮ್ಮ ದೇವಸ್ಥಾನದ ಬಳಿ ಮುಳ್ಳು ಬೇಲಿಯಲ್ಲಿ ಬಿಸಾಡಲಾಗಿದ್ದು, ಭದ್ರತಾ ಸಿಬ್ಬಂದಿ ಆ ಮಗುವನ್ನು ರಕ್ಷಿಸಿದ್ದಾರೆ. ಮಗುವನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಮಗು ಆರೋಗ್ಯವಾಗಿದೆ.

ಸೋಮವಾರ ಮಧ್ಯರಾತ್ರಿ 1.10ರ ಸಮಯದಲ್ಲಿ ಹುಲಿಗೆಮ್ಮ ದೇವಸ್ಥಾನದ ಹಿಂಭಾಗದಲ್ಲಿ ಭದ್ರತಾ ಸಿಬ್ಬಂದಿ ಶಿವರಾಜ ಹಿಟ್ನಾಳ ಹಾಗೂ ಮಂಜುನಾಥ ಅಗಳಿಕೇರಿ ಅವರಿಗೆ ಮಗು ಅಳುತ್ತಿರುವ ಧ್ವನಿ ಕೇಳಿಸಿತು. ತಕ್ಷಣ ಮಕ್ಕಳ ಸಹಾಯವಾಣಿ ಮತ್ತು ವೈದ್ಯರು ಹಾಗೂ ದೇವಸ್ಥಾನ ಆಡಳಿತ ಮಂಡಳಿಯನ್ನು ಸಂಪರ್ಕಿಸಿ, ಮಾಹಿತಿ ನೀಡಿದರು. ತಕ್ಷಣ ಮಗುವಿಗೆ ಪಕ್ಕದ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಆಗ ತಾನೆ ಜನಿಸಿದ್ದ ಮಗುವನ್ನು ಬೇಲಿಯಲ್ಲಿ ಎಸೆದಿದ್ದರಿಂದ ತರಚಿದ ಗಾಯಗಳಾಗಿವೆ. ಅಲ್ಲದೆ ಮಗುವಿನ ಮೈಗೆ ಮಣ್ಣು, ಹುಲ್ಲು, ಕಡ್ಡಿ ಮೆತ್ತಿಕೊಂಡಿದೆ. ಅದೆಲ್ಲವನ್ನು ಸ್ವಚ್ಛಗೊಳಿಸಲಾಗಿದೆ. ಮಗುವಿಗೆ ಅಗತ್ಯ ಚಿಕಿತ್ಸೆ ನೀಡಲಾಗಿದ್ದು, ಜಿಲ್ಲಾಸ್ಪತ್ರೆಯ ಸಿಬ್ಬಂದಿಯ ಆರೈಕೆಯಲ್ಲಿ ಮಗು ಆರೋಗ್ಯವಾಗಿದೆ.

09:08 AM (IST) Dec 31

BBK 12 - ಬಿಗ್‌ಬಾಸ್ ಕೊಟ್ಟ ಚೆಕ್‌ಮೆಟ್‌ಗೆ ಮಕ್ಕರ್ ಆದ ಗಿಲ್ಲಿ; ಚಮಕ್ ಕೊಟ್ಟ ರಕ್ಷಿತಾ, ಇತ್ತ ಕಾವ್ಯಾಗೆ ತಳಮಳ

ಕ್ಯಾಪ್ಟನ್ ಗಿಲ್ಲಿ ನಟ, ಅಶ್ವಿನಿ ಗೌಡ ಅವರನ್ನು ಅಸಮರ್ಥರು ಎಂದಿದ್ದೇ ಮುಳುವಾಗಿದೆ. ಈ ಅನಿರೀಕ್ಷಿತ ತಿರುವಿನಿಂದ ಗಿಲ್ಲಿ ನಟ ಶಾಕ್ ಆಗಿದ್ದು, ಇತರೆ ಸ್ಪರ್ಧಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ.

Read Full Story

08:24 AM (IST) Dec 31

ಎಚ್‌ಎಎಲ್ ನಿರ್ಮಿತ ನಾಗರಿಕ ಬಳಕೆಯ ಧ್ರುವ ಹೆಲಿಕಾಪ್ಟರ್ ಹಾರಾಟ ಯಶಸ್ವಿ; ಏನಿದರ ವಿಶೇಷತೆ?

ಎಚ್‌ಎಎಲ್ ನಿರ್ಮಿತ ನಾಗರಿಕ ಬಳಕೆಯ ಧ್ರುವ ಎನ್‌ಜಿ ಹೆಲಿಕಾಪ್ಟರ್ ಯಶಸ್ವಿ ಉದ್ಘಾಟನಾ ಹಾರಾಟ ಪೂರ್ಣಗೊಳಿಸಿದೆ. ಇದೇ ವೇಳೆ, ದೇಶೀಯವಾಗಿ ತಯಾರಾದ 'ಶಕ್ತಿ ಸಿವಿಲ್ ಎಂಜಿನ್‌'ಗೆ ಡಿಜಿಸಿಎ ಪ್ರಮಾಣಪತ್ರ ದೊರೆತಿದ್ದು, ಇದು ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಎಚ್‌ಎಎಲ್‌ನ ಮಹತ್ವದ ಹೆಜ್ಜೆಯಾಗಿದೆ.
Read Full Story

08:13 AM (IST) Dec 31

ಜ.4ಕ್ಕೆ ಪ್ರಕೃತಿ ಪ್ರತಿಬಂಬಿಸುವ 23ನೇ ಚಿತ್ರಸಂತೆ

ಬೆಂಗಳೂರು ನಗರ ಪರಿಸರದ ಹಿಂದಿನ ಮತ್ತು ವರ್ತಮಾನ ಪ್ರತಿಬಿಂಬಿಸುವ ‘ಪ್ರಕೃತಿ’ ವಿಷಯಾಧಾರಿತ ಕಲಾ ಪ್ರದರ್ಶನ ಈ ಬಾರಿಯ 23ನೇ ಚಿತ್ರಸಂತೆಯ ವಿಶೇಷ. ಜ.4ರಂದು ಕುಮಾರಕೃಪ ರಸ್ತೆ, ಕ್ರೆಸೆಂಟ್‌ ರಸ್ತೆ, ಚಿತ್ರಕಲಾ ಪರಿಷತ್ತು, ಸೇವಾ ದಳದ ಆವರಣದಲ್ಲಿ ನಡೆಯಲಿರುವ ಚಿತ್ರಸಂತೆ

Read Full Story

08:06 AM (IST) Dec 31

2026ರಲ್ಲೇ ಮಾತನಾಡುತ್ತೇನೆ - ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆಯ ಹಿಂದಿನ ರಹಸ್ಯವೇನು?

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮ್ಮ ನಾಯಕತ್ವದ ಬಗ್ಗೆ 2026ರಲ್ಲಿ ಮಾತನಾಡುವುದಾಗಿ ಹೇಳಿ ಕುತೂಹಲ ಮೂಡಿಸಿದ್ದಾರೆ. ಶಾಸಕ ಇಕ್ಬಾಲ್ ಹುಸೇನ್ ಅವರ ಸಿಎಂ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ .

Read Full Story

07:56 AM (IST) Dec 31

ಚಲಿಸುತ್ತಿದ್ದ ಬೈಕ್‌ನಲ್ಲಿಯೇ ಸುಟ್ಟು ಕರಕಲಾದ ಯುವಕ; ಹುಟ್ಟುವಾಗಲೇ ಕರುಳು ಹೊರಗಿದ್ದ ಶಿಶು ಸಾವು

ಬೈಕ್ ಸಮೇತ ಯುವಕನೋರ್ವ ಸಜೀವ ದಹನವಾಗಿದ್ದು, ಸಾವಿನ ಬಗ್ಗೆ ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ, ಹಾಸನದಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆ, ಹುಬ್ಬಳ್ಳಿಯಲ್ಲಿ ನವಜಾತ ಶಿಶುವಿನ ಸಾವು ಹಾಗೂ ಮಂಡ್ಯ ವಿವಿ ಆವರಣದಲ್ಲಿ ಡ್ರಗ್ಸ್ ಸಿರಿಂಜ್‌ಗಳು ಪತ್ತೆಯಾದ ಘಟನೆಗಳು ವರದಿಯಾಗಿವೆ.

Read Full Story

07:53 AM (IST) Dec 31

ಹೊಸ ವರ್ಷಾಚರಣೆಗೆ ಸಿಲಿಕಾನ್‌ ಸಿಟಿ ಸಜ್ಜು- ಸಂಚಾರಕ್ಕೆ ಪರ್ಯಾಯ ಮಾರ್ಗ

ಹೊಸ ವರ್ಷಾಚರಣೆಯ ಪ್ರಮುಖ ಜನಾಕರ್ಷಣೆ ಕೇಂದ್ರ ಬಿಂದುವಾದ ಎಂ.ಜಿ. ರಸ್ತೆ ಹಾಗೂ ಬ್ರಿಗೇಡ್ ರಸ್ತೆ ವ್ಯಾಪ್ತಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದಾರೆ.

Read Full Story

07:46 AM (IST) Dec 31

ಹಸಿರು ಮಾರ್ಗಕ್ಕೆ ಬರಲಿವೆ 21 ಹೊಸ ರೈಲುಗಳು

ನಮ್ಮ ಮೆಟ್ರೋದ ಹಸಿರು ಮಾರ್ಗದಲ್ಲಿ ಆರಂಭಿಕ ಹಂತದಲ್ಲಿ (ಪೇಸ್‌-1) ಕಾರ್ಯಾಚರಣೆಯಲ್ಲಿದ್ದ 17 ರೈಲುಗಳು ನೇರಳೆ ಮಾರ್ಗಕ್ಕೆ ಸ್ಥಳಾಂತರ ಆಗಲಿವೆ. ಹಾಗೂ ಹಸಿರು ಮಾರ್ಗಕ್ಕೆ ಹೊಸದಾಗಿ 21 ರೈಲುಗಳು ನಿಯೋಜನೆ ಆಗಲಿದ್ದು, ರೈಲುಗಳ ಓಡಾಟ ವೇಗಗೊಂಡು ಪ್ರಯಾಣಿಕರಿಗೆ ಅನುಕೂಲ ಆಗಲಿದೆ.

Read Full Story

07:37 AM (IST) Dec 31

BBK 12 - ಏಯ್, ಬೆನ್ನುಮೂಳೆ ಇಲ್ಲದವನೇ ಅಖಾಡಕ್ಕೆ ಬಾರೋ - ತೊಡೆ ತಟ್ಟಿ ಸವಾಲೆಸೆದ ಅಶ್ವಿನಿ ಗೌಡ

ಬಿಗ್‌ಬಾಸ್ 14ನೇ ವಾರದ ಕ್ಯಾಪ್ಟನ್ ಗಿಲ್ಲಿ ನಟರ ಪಕ್ಷಪಾತ ಧೋರಣೆ ಮನೆಯಲ್ಲಿ ಸಂಘರ್ಷಕ್ಕೆ ಕಾರಣವಾಗಿದೆ. ತಮ್ಮನ್ನು ವ್ಯಂಗ್ಯವಾಡಿದ ಗಿಲ್ಲಿ ನಟನಿಗೆ ಧ್ರುವಂತ್ ಮತ್ತು ಅಶ್ವಿನಿ ಗೌಡ ತೀವ್ರವಾಗಿ ಎದುರೇಟು ನೀಡಿದ್ದು, ಅಶ್ವಿನಿ ಅಖಾಡಕ್ಕೆ ಬರುವಂತೆ ತೊಡೆ ತಟ್ಟಿ ಸವಾಲು ಹಾಕಿದ್ದಾರೆ.
Read Full Story

More Trending News