Published : Aug 23, 2025, 07:32 AM ISTUpdated : Aug 23, 2025, 10:32 PM IST

Karnatata Latest News Live: Tumakuru - ಜಿಲ್ಲಾಸ್ಪತ್ರೆಯಲ್ಲೇ ಹೃದಯಾಘಾತದಿಂದ ಸಾವನಪ್ಪಿದ ಡ್ಯುಟಿಯಲ್ಲಿದ್ದ ನರ್ಸ್

ಸಾರಾಂಶ

ಬೆಂಗಳೂರು (ಆ.23): 2028ರ ಮುಂದಿನ ಚುನಾವಣೆಯಲ್ಲೂ ನಮ್ಮ ಪಕ್ಷವೇ ಗೆಲುವು ಸಾಧಿಸುತ್ತದೆ. ಇದರಲ್ಲಿ ಅನುಮಾನವೇ ಇಲ್ಲ. ಆದರೆ, ಆಗ ನಾನು ಸಿಎಂ ಆಗೋದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಜೆಡಿಎಸ್‌ಗೆ ಮುಂದಿನ ಚುನಾವಣೆಯಲ್ಲಿ 2-3 ಸ್ಥಾನ ಬಂದರೆ ಹೆಚ್ಚು, ಹಾಗಾಗಿ ಜೆಡಿಎಸ್‌ ಪಕ್ಷವನ್ನು ಬಿಜೆಪಿ ಜೊತೆ ವಿಲೀನ ಮಾಡಲಿ ಎಂದು ಶುಕ್ರವಾರ ಹೇಳಿದ್ದಾರೆ. ಅದರೊಂದಿಗೆ ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್‌ಲೈವ್‌ ಬ್ಲಾಗ್‌

 

10:32 PM (IST) Aug 23

Tumakuru - ಜಿಲ್ಲಾಸ್ಪತ್ರೆಯಲ್ಲೇ ಹೃದಯಾಘಾತದಿಂದ ಸಾವನಪ್ಪಿದ ಡ್ಯುಟಿಯಲ್ಲಿದ್ದ ನರ್ಸ್

ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದಾಗಲೇ 32 ವರ್ಷದ ನರ್ಸ್ ಲತಾ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ರಾತ್ರಿ ಊಟದ ನಂತರ ವಾಶ್ ರೂಮ್ ಬಳಿ ತೆರಳಿದಾಗ ವಾಂತಿ, ಸುಸ್ತು ಮತ್ತು ಎದೆನೋವಿನಿಂದ ಕುಸಿದು ಬಿದ್ದ ಅವರಿಗೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
Read Full Story

10:04 PM (IST) Aug 23

ಮಾಸ್ಕ್ ಮ್ಯಾನ್ ಚಿನ್ನಯ್ಯ ಹಗ್ಗ ಕೊಟ್ಟು ಕೈ ಕಟ್ಟಿಸಿಕೊಂಡಿದ್ದು ಹೇಗೆ?

ಮಾಸ್ಕ್ ಮ್ಯಾನ್ ಚಿನ್ನಯ್ಯನ ಹೆಸರು, ಊರು ಸೇರಿದಂತೆ ಎಲ್ಲ ಮಾಹಿತಿ ಬಹಿರಂಗ. ಧರ್ಮಸ್ಥಳದಲ್ಲಿ ಸ್ವಚ್ಛತಾ ಕಾರ್ಮಿಕನಾಗಿದ್ದ ಚಿನ್ನಯ್ಯನನ್ನು ಮಹೇಶ್ ಶೆಟ್ಟಿ ತಿಮರೋಡಿ ಗ್ಯಾಂಗ್ ಬಳಸಿಕೊಂಡು ಬೆದರಿಸಿತ್ತು.
Read Full Story

09:22 PM (IST) Aug 23

ದೇವರು ಹೇಳಿದ್ರೂ ನಾನು ಕೇಳುವನಲ್ಲ - ವಿ.ಸೋಮಣ್ಣ ಅಚ್ಚರಿಯ ಮಾತು

ತುಮಕೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದ ಅವರು, ದೇವರೇ ಬಂದು ಹೇಳಿದರೂ ಚುನಾವಣೆಗೆ ನಿಲ್ಲುವುದಿಲ್ಲ ಎಂದಿದ್ದಾರೆ. ಅಭಿವೃದ್ಧಿ ಕಾರ್ಯಗಳನ್ನು ತಮ್ಮ ರಾಜಕೀಯ ಜೀವನದ ಹೆಜ್ಜೆಗುರುತು ಎಂದು ಬಣ್ಣಿಸಿದ್ದಾರೆ.

Read Full Story

08:46 PM (IST) Aug 23

ನಜ್ಮಾ ನಜೀರ್-ಸಸಿಕಾಂತ್ ಸೆಂಥಿಲ್-ಸಮೀರ್ - ಮೂವರಿಗೂ ಲಿಂಕ್ ಇದೆ ಎಂದ ವಸಂತ್ ಗಿಳಿಯಾರ್

ಧರ್ಮಸ್ಥಳ ಪ್ರಕರಣದಲ್ಲಿ ಷಡ್ಯಂತ್ರದ ಶಂಕೆ ವ್ಯಕ್ತಪಡಿಸಿರುವ ವಸಂತ್ ಗಿಳಿಯಾರ್, ಸಂಸದ ಸಸಿಕಾಂತ್ ಸೆಂಥಿಲ್ ಮತ್ತು ನಜ್ಮಾ ನಜೀರ್ ಚಿಕ್ಕನೇರಳೆ ಕೈವಾಡದ ಬಗ್ಗೆ ತನಿಖೆಗೆ ಆಗ್ರಹಿಸಿದ್ದಾರೆ. 

Read Full Story

07:57 PM (IST) Aug 23

ತಿಮರೋಡಿ ಮನೆಯಲ್ಲಿ ಚಿನ್ನಯ್ಯನ ಮೇಲೆ ಹಲ್ಲೆ? ಅನಾಮಿಕನ ವೀಕ್‌ನೆಸ್ ಬಳಸಿಕೊಂಡಿತ್ತು ಗ್ಯಾಂಗ್!

ಚಿನ್ನಯ್ಯನ ತಪ್ಪೊಪ್ಪಿಗೆಯಲ್ಲಿ ತಿಮರೋಡಿ ಗ್ಯಾಂಗ್‌ನ ಷಡ್ಯಂತ್ರ ಬಯಲು. ಸೌಜನ್ಯ ಪ್ರಕರಣದಲ್ಲಿ ಹೊಸ ತಿರುವು. ನ್ಯಾಯಾಲಯದ ಮುಂದೆ ಸ್ಫೋಟಕ ಮಾಹಿತಿ ಬಹಿರಂಗ.
Read Full Story

07:43 PM (IST) Aug 23

ತಿಮರೋಡಿ ಗ್ಯಾಂಗ್ ಚಿನ್ನಯ್ಯನನ್ನು ಷಡ್ಯಂತ್ರಕ್ಕೆ ಸಿಲುಕಿಸಿದ್ದು ಹೇಗೆ? ಸೌಜನ್ಯಾ ಮಾವನ ಪಾತ್ರವೇನು?

ಧರ್ಮಸ್ಥಳ ಪ್ರಕರಣದಲ್ಲಿ ಸಿ.ಎನ್‌. ಚಿನ್ನಯ್ಯನ ಬಂಧನದ ಹಿಂದಿನ ಸತ್ಯ ಬಯಲು. ಹಣದ ಆಮಿಷ ಮತ್ತು ಬೆದರಿಕೆಗೆ ಮಣಿದು ಸುಳ್ಳು ದೂರು ನೀಡಿದ್ದಾಗಿ ಚಿನ್ನಯ್ಯ ತಪ್ಪೊಪ್ಪಿಕೊಂಡಿದ್ದಾನೆ. 'ತಿಮರೋಡಿ ಗ್ಯಾಂಗ್'ನ ಷಡ್ಯಂತ್ರದ ಬಲೆಗೆ ಬಿದ್ದ ಚಿನ್ನಯ್ಯನ ಕಥೆ.
Read Full Story

07:24 PM (IST) Aug 23

ಕೋರ್ಟ್‌ನಲ್ಲಿ ಬುರುಡೆ ಗ್ಯಾಂಗ್ ತಿಮರೋಡಿ & ಕಂಪನಿಯ ಷಡ್ಯಂತ್ರ ಬಿಚ್ಚಿಟ್ಟ ದೂರುದಾರ ಚಿನ್ನಯ್ಯ!

ಧರ್ಮಸ್ಥಳದ ವಿರುದ್ಧ ಸುಳ್ಳು ದೂರು ನೀಡಿದ ಪ್ರಕರಣದಲ್ಲಿ ಸಾಕ್ಷಿಯಾಗಿದ್ದ ಚಿನ್ನಯ್ಯನನ್ನು ಬಂಧಿಸಲಾಗಿದೆ. ನ್ಯಾಯಾಧೀಶರ ಮುಂದೆ ಚಿನ್ನಯ್ಯ ಸಂಪೂರ್ಣ ಷಡ್ಯಂತ್ರವನ್ನು ಬಾಯ್ಬಿಟ್ಟಿದ್ದು, ಹಲವರ ಹೆಸರು ಬಹಿರಂಗವಾಗಿದೆ. ದುಡ್ಡು ಮತ್ತು ಕೊಲೆ ಬೆದರಿಕೆಯೊಡ್ಡಿದ ಬಗ್ಗೆ ಚಿನ್ನಯ್ಯ ಹೇಳಿಕೆ ನೀಡಿದ್ದಾನೆ.

Read Full Story

06:57 PM (IST) Aug 23

ಉತ್ತಮ ಆರೋಗ್ಯಕ್ಕೆ ಎಳನೀರು ಅಥವಾ ನಿಂಬೆ ಹಣ್ಣಿನ ನೀರು ಯಾವುದು ಒಳ್ಳೆಯದು?

ಕೆಲವರು ನಿಂಬೆ ನೀರು ಕುಡಿಯೋದನ್ನ ಇಷ್ಟಪಟ್ಟರೆ, ಇನ್ನು ಕೆಲವರು ತೆಂಗಿನಕಾಯಿ ಎಳನೀರು ಕುಡಿಯೋದನ್ನ ಇಷ್ಟಪಡ್ತಾರೆ. ಹಾಗಾದ್ರೆ ಆರೋಗ್ಯಕ್ಕೆ ಯಾವುದು ಒಳ್ಳೇದು ಅಂತ ಈಗ ನೋಡೋಣ.

Read Full Story

06:39 PM (IST) Aug 23

ವಸಂತಿ ಸಾವಿನ ಹಿಂದೆ ಸುಜಾತ ಭಟ್ ಕೈವಾಡ?; ಸಂಬಂಧ ಇಟ್ಟುಕೊಂಡವರ ಕುಟುಂಬಕ್ಕೆಲ್ಲಾ ಕೊಳ್ಳಿ ಇಟ್ಟಳಾ?

ವಸಂತಿಯ ಸಹೋದರ ವಿಜಯ್, ಸುಜಾತ ಭಟ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ವಸಂತಿಯ ಡೆತ್ ಸರ್ಟಿಫಿಕೇಟ್ ಅನ್ನು ಸುಜಾತ ಭಟ್ ಪಡೆದಿರುವುದು ಮತ್ತು ಅವರ ಸಾವಿನಲ್ಲಿ ಸುಜಾತ ಭಟ್ ಕೈವಾಡವ ಶಂಕೆ ವ್ಯಕ್ತಪಡಿಸಿದ್ದಾರೆ. ಸುಜಾತ ಭಟ್ ಅವರ ವರ್ತನೆಯಿಂದ ತಮ್ಮ ಕುಟುಂಬದ ಮರ್ಯಾದೆಗೆ ಧಕ್ಕೆಯಾಗಿದೆ ಎಂದಿದ್ದಾರೆ.

Read Full Story

05:44 PM (IST) Aug 23

ಮಹೇಶ್ ಶೆಟ್ಟಿ ತಿಮರೋಡಿಗೆ ಷರತ್ತುಬದ್ಧ ಜಾಮೀನು ಮಂಜೂರು!

ಬಿಜೆಪಿ ಮುಖಂಡ ಬಿ.ಎಲ್. ಸಂತೋಷ್‌ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಬಂಧಿತರಾಗಿದ್ದ ಮಹೇಶ್ ಶೆಟ್ಟಿ ತಿಮ್ಮರೋಡಿಗೆ ಉಡುಪಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಬಂಧನ ಪ್ರಕ್ರಿಯೆ ಕ್ರಮಬದ್ಧವಾಗಿಲ್ಲ ಎಂದು ವಕೀಲರು ವಾದ ಮಂಡಿಸಿದರು.
Read Full Story

05:03 PM (IST) Aug 23

ಒಂದೇ ಮ್ಯೂಸಿಕ್ ಇಬ್ಬರು ಸ್ಟಾರ್‌ಗಳಿಗೆ ನೀಡಿದ ಇಳಯರಾಜ್; ಒಂದು ಕೆಲಸಕ್ಕೆ ಡಬಲ್ ಪೇಮೆಂಟ್ ಎಂದ ನೆಟ್ಟಿಗರು

ಇಳಯರಾಜಾ ಅವರು ಒಂದೇ ಸಂಗೀತವನ್ನು ಬಳಸಿ ರಜನಿಕಾಂತ್ ಮತ್ತು ಕಮಲ್ ಹಾಸನ್ ಚಿತ್ರಗಳಿಗೆ ಎರಡು ಸೂಪರ್ ಹಿಟ್ ಹಾಡುಗಳನ್ನು ನೀಡಿದ್ದಾರೆ. ಈ ವಿಷಯ ತಿಳಿದ ನೆಟ್ಟಿಗರು ಒಂದು  ಮ್ಯೂಸಿಕ್‌ಗೆ ಡಬಲ್ ಪೇಮೆಂಟ್ ಎಂದು ಕಮೆಂಟ್ ಮಾಡಿದ್ದಾರೆ.

Read Full Story

04:49 PM (IST) Aug 23

Karnataka Pulse - ಧರ್ಮಸ್ಥಳ To ಬಾಹ್ಯಾಕಾಶ- ಈ ವಾರ ಸಂಚಲನ ಸೃಷ್ಟಿಸಿದ Top 10 ಸುದ್ದಿಗಳು

ಆಗಸ್ಟ್‌ ತಿಂಗ್ಳ ಮೂರನೇ ವಾರ ಕೂಡಾ ತುಂಬಾ ಹ್ಯಾಪನಿಂಗ್‌ ವಾರವಾಗಿತ್ತು. ಸಮಾಜ, ರಾಜಕಾರಣ, ದೇಶ- ವಿದೇಶಗಳಲ್ಲಿ ಪ್ರಮುಖ ಬೆಳವಣಿಗೆಗಳಿಗೆ ಸಾಕ್ಷಿಯಾಯ್ತು. ರಾಜ್ಯದಲ್ಲಂತೂ ಈ ವಾರ ಅತೀ ಹೆಚ್ಚು ಸಂಚಲನ ಸೃಷ್ಟಿಸಿದ್ದ ವಾರವಾಗಿತ್ತು. ಬನ್ನಿ ಏನೇನಾಯ್ತು ನೋಡ್ಕೊಂಡು ಬರೋಣ... ಕರ್ನಾಟಕ ಪಲ್ಸ್‌ನಲ್ಲಿ.

Read Full Story

04:48 PM (IST) Aug 23

ಡಿಸಿಎಂ ಡಿ.ಕೆ. ಶಿವಕುಮಾರ್ ಜೊತೆ ಬಿಹಾರಕ್ಕೆ ಹಾರಿದ 10 ಕಾಂಗ್ರೆಸ್ ಶಾಸಕರು

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಕರ್ನಾಟಕದ ಹತ್ತು ಶಾಸಕರ ತಂಡ ರಾಹುಲ್ ಗಾಂಧಿಯವರ 'ಮತಾಧಿಕಾರ ಯಾತ್ರೆ'ಯಲ್ಲಿ ಭಾಗವಹಿಸಲು ಬಿಹಾರಕ್ಕೆ ತೆರಳಿದೆ. ಈ ಯಾತ್ರೆ ಕಾಂಗ್ರೆಸ್ ಪಕ್ಷಕ್ಕೆ ಹೊಸ ಹುರುಪು ನೀಡುವ ನಿರೀಕ್ಷೆಯಿದೆ.
Read Full Story

04:18 PM (IST) Aug 23

'ಧರ್ಮಸ್ಥಳ ದೇವಸ್ಥಾನದ ಮೇಲೆ ಪದೇ ಪದೇ ಅಪವಾದ ಬರೋಕೆ ಆ ಗುರುಶಾಪವೇ ಕಾರಣ' - ಜ್ಯೋತಿಷಿ ಪ್ರಕಾಶ್‌ ಅಮ್ಮಣ್ಣಾಯ

Astrologer prakash ammannaya On Dharmasthala Temple: ಧರ್ಮಸ್ಥಳದ ಮೇಲೆ ಪದೇ ಪದೇ ಒಂದಿಲ್ಲೊಂದು ಅಪವಾದ ಬರುತ್ತಿದೆ. ಇದಕ್ಕೆ ಕಾರಣ ಏನು? ಇದಕ್ಕೆ ಪರಿಹಾರ ಏನು ಎಂದು ಜ್ಯೋತಿಷಿ ಪ್ರಕಾಶ್‌ ಅಮ್ಮಣ್ಣಾಯ ಅವರು ಹೇಳಿದ್ದಾರೆ. 

Read Full Story

03:54 PM (IST) Aug 23

ಮನೆಯಲ್ಲೇ ಇದ್ದು ತಿಂಗಳಿಗೆ ₹50 ಸಾವಿರ ಗಳಿಸಿ; ಎಂದೂ ನಷ್ಟ ಅನುಭವಿಸದ ಚಾಕೋಲೇಟ್ ಬಿಸಿನೆಸ್ ಆರಂಭಿಸಿ!

ಇತ್ತೀಚಿನ ದಿನಗಳಲ್ಲಿ ಮನೆಯಲ್ಲಿಯೇ ಕಡಿಮೆ ಹಣ ಹೂಡಿಕೆಯಲ್ಲಿ ಉತ್ತಮ ಆದಾಯ ಗಳಿಸುವ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಅನೇಕ ಉದ್ಯೋಗಿಗಳು ಸೈಡ್ ಬಿಸಿನೆಸ್ ಮಾಡಬೇಕೆಂಬ ಆಸಕ್ತಿ ತೋರಿಸುತ್ತಿದ್ದಾರೆ. ಅಂತಹ ಒಂದು ಬಿಸಿನೆಸ್ ಐಡಿಯಾ ಬಗ್ಗೆ ಈಗ ತಿಳಿದುಕೊಳ್ಳೋಣ.

Read Full Story

03:21 PM (IST) Aug 23

ಶಾಸಕ ವೀರೇಂದ್ರ ಪಪ್ಪಿ ಬಂಧನ; ಇಡಿ ದಾಳಿಯಲ್ಲಿ ಅಗೆದಷ್ಟೂ ಹಣ, ಬಗೆದಷ್ಟೂ ಚಿನ್ನ! ಗ್ಯಾಂಬ್ಲಿಂಗ್ ಜಾಲ ಬಯಲು

ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರನ್ನು ಅಕ್ರಮ ಆನ್‌ಲೈನ್ ಮತ್ತು ಆಫ್‌ಲೈನ್ ಬೆಟ್ಟಿಂಗ್ ಆರೋಪದ ಮೇಲೆ ಇ.ಡಿ. ಬಂಧಿಸಿದೆ. ದಾಳಿಯಲ್ಲಿ ಕೋಟ್ಯಂತರ ರೂಪಾಯಿ ನಗದು, ಚಿನ್ನಾಭರಣ, ವಿದೇಶಿ ಕರೆನ್ಸಿ ವಶಪಡಿಸಿಕೊಳ್ಳಲಾಗಿದೆ. ದುಬೈ ಮೂಲಕ ಹಣ ವರ್ಗಾವಣೆ ನಡೆದಿರುವುದು ಬೆಳಕಿಗೆ ಬಂದಿದೆ.
Read Full Story

03:08 PM (IST) Aug 23

ಮಾಸ್ಕ್‌ಮ್ಯಾನ್ ಬಂಧನ - ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮೊದಲ ಪ್ರತಿಕ್ರಿಯೆ

ಮಾಸ್ಕ್‌ ಮ್ಯಾನ್‌ ಚಿನ್ನಯ್ಯನ ಬಂಧನದ ನಂತರ ಬುರುಡೆಗ್ಯಾಂಗ್‌ನ ಒಂದೊಂದೇ ಬಣ್ಣ ಬಯಲಾಗ್ತಿದ್ದು, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

Read Full Story

02:20 PM (IST) Aug 23

ಬುರುಡೆ ಗ್ಯಾಂಗ್‌ನ ಮಾಸ್ಕ್‌ ಮ್ಯಾನ್‌ ಚಿನ್ನಯ್ಯನ ಅಣ್ಣನೂ ಎಸ್‌ಐಟಿ ವಶಕ್ಕೆ

ಬುರುಡೆ ಪ್ರಕರಣದಲ್ಲಿ ಮಾಸ್ಕ್‌ಮ್ಯಾನ್ ಚಿನ್ನಯ್ಯ ತನ್ನ ಅಣ್ಣ ತಾನಾಸಿ ಹೆಸರು ಪ್ರಸ್ತಾಪಿಸಿದ್ದರಿಂದ ಪೊಲೀಸರು ತಾನಾಸಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

Read Full Story

02:01 PM (IST) Aug 23

ಮಾಸ್ಕ್ ಮ್ಯಾನ್ ಫ್ರಾಡ್ ಎಂದು ನಾನು ಮುಂಚೆಯೇ ಹೇಳಿದ್ದೆ - ಕೇಂದ್ರ ಸಚಿವ ಸೋಮಣ್ಣ ಸಿಡಿಮಿಡಿ

ಸತ್ಯ ಎಷ್ಟೇ ಕಹಿಯಾಗಿದ್ದರು ಕೊನೆಗೆ ಅದು ಗೆಲ್ಲುತ್ತದೆ ಎಂದು ಎಸ್‌ಐಟಿಯಿಂದ ಮಾಸ್ಕ್ ಮ್ಯಾನ್ ಬಂಧನ ವಿಚಾರವಾಗಿ ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

Read Full Story

01:30 PM (IST) Aug 23

ಬುರುಡೆ ಗ್ಯಾಂಗ್‌ನ ಮಾಸ್ಕ್‌ಮ್ಯಾನ್‌ ಚಿನ್ನಯ್ಯ ಎಸ್‌ಐಟಿ ಕಸ್ಟಡಿಗೆ - ಬೆಳ್ತಂಗಡಿ ಕೋರ್ಟ್ ಆದೇಶ

ಬುರುಡೆ ಗ್ಯಾಂಗ್‌ನ ಮಾಸ್ಕ್‌ಮ್ಯಾನ್ ಚಿನ್ನಯ್ಯನನ್ನು ಎಸ್‌ಐಟಿ ಪೊಲೀಸರು ಬಂಧಿಸಿದ್ದಾರೆ. ಆತನನ್ನು ಬೆಳ್ತಂಗಡಿ ನ್ಯಾಯಾಲಯ 10 ದಿನಗಳ ಕಾಲ ಎಸ್‌ಐಟಿ ಕಸ್ಟಡಿಗೆ ನೀಡಿದೆ.

Read Full Story

01:16 PM (IST) Aug 23

ಧರ್ಮಸ್ಥಳ ಕೇಸಿಗೆ 'ಅನಾಟಮಿ ಬುರುಡೆ' ಬಳಕೆ - ದೂರುದಾರ ಚಿನ್ನಯ್ಯನಿಗೆ ಗುನ್ನಾ ಇಟ್ಟ 'ಬುರುಡೆ ಗ್ಯಾಂಗ್'

ಧರ್ಮಸ್ಥಳ ಪ್ರಕರಣದಲ್ಲಿ ಬಂಧಿತ ಚಿನ್ನಯ್ಯನಿಗೆ ‘ಬುರುಡೆ ಗ್ಯಾಂಗ್’ ವೈದ್ಯಕೀಯ ಕಾಲೇಜುಗಳ ಪಾಠಕ್ಕೆ ಬಳಸುವ ‘ಅನಾಟಮಿ ಬುರುಡೆ’ಯನ್ನು ನೀಡಿ ಹಣ ಪಡೆದಿರುವ ಅನುಮಾನ ವ್ಯಕ್ತವಾಗಿದೆ. ಚಿನ್ನಯ್ಯನಿಗೆ ಹಣದ ಆಮಿಷವೊಡ್ಡಿ ಸುಳ್ಳು ಹೇಳಲು ಪ್ರೇರೇಪಿಸಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.
Read Full Story

01:02 PM (IST) Aug 23

ಹಚ್ಚೆ ಸಿನಿಮಾ ವಿಮರ್ಶೆ - ಡಾರ್ಕ್‌ ಥ್ರಿಲ್ಲರ್‌ನಲ್ಲಿ ಪುನರ್‌ಜನ್ಮದ ಕುತೂಹಲ

ಚಿತ್ರದಲ್ಲಿ ಬರುವ ವಿಲನ್‌ ಪಾತ್ರವೂ ಸೇರಿದಂತೆ ಗಡ್ಡ ಬಿಟ್ಟ ಎಲ್ಲಾ ರೌಡಿಗಳ ಪಾತ್ರಗಳು ‘ಕೆಜಿಎಫ್‌’, ಉಗ್ರಂ ಚಿತ್ರಗಳ ಡಾರ್ಕ್‌ ಮೋಡ್‌ ನೆನಪಿಸುತ್ತಾರೆ. ಮೇಕಿಂಗ್‌ ಕೂಡ ಅದೇ ರೀತಿ ಮಾಡುವುದಕ್ಕೆ ಪ್ರಯತ್ನಿಸಿರುವುದು ‘ಹಚ್ಚೆ’ ಚಿತ್ರದ ಮತ್ತೊಂದು ಹೈಲೈಟ್‌.

Read Full Story

12:40 PM (IST) Aug 23

ಮುಸ್ಲಿಂ ಲೇಖಕಿ ಕೈಯಲ್ಲಿ ದಸರಾ ಉದ್ಘಾಟನೆಗೆ ವಿರೋಧ - ರಾಜ್ಯಪಾಲರಿಗೆ ದೂರು ಸಲ್ಲಿಸಲು ಸಿದ್ಧತೆ

ಬೂಕರ್ ಪ್ರಶಸ್ತಿ ವಿಜೇತೆ ಭಾನು ಮುಸ್ತಾಪ್ ಅವರಿಂದ ಮೈಸೂರು ದಸರಾ ಉದ್ಘಾಟನೆಗೆ ಸರ್ಕಾರ ನಿರ್ಧರಿಸಿದೆ. ಕೆಲವು ಸಂಘಟನೆಗಳು ಮುಸ್ಲಿಂ ಮಹಿಳೆಯಿಂದ ಉದ್ಘಾಟನೆ ಬೇಡ ಎಂದು ವಿರೋಧಿಸಿ, ರಾಜ್ಯಪಾಲರಿಗೆ ದೂರು ನೀಡಲಿವೆ. ಗೋಮಾಂಸ ಸೇವನೆ, ಧಾರ್ಮಿಕ ಆಚರಣೆಗಳ ಬಗ್ಗೆ ಭಾನು ಅವರಿಗೆ ತಿಳಿವಳಿಕೆ ಇಲ್ಲ ಎಂದಿದ್ದಾರೆ.

Read Full Story

12:37 PM (IST) Aug 23

ದರ್ಶನ್ ಗ್ಯಾಂಗ್ ಜೈಲು ವರ್ಗಾವಣೆ ಅರ್ಜಿ ಮುಂದೂಡಿಕೆ, ಜಾಮೀನು ಅರ್ಜಿ ವಿಚಾರಣೆ ಸೆಪ್ಟೆಂಬರ್‌ಗೆ

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಸೇರಿದಂತೆ ಆರೋಪಿಗಳ ಜೈಲು ವರ್ಗಾವಣೆ ಅರ್ಜಿ ವಿಚಾರಣೆ ಮುಂದೂಡಿಕೆಯಾಗಿದೆ. ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್ 9ಕ್ಕೆ ಮುಂದೂಡಲಾಗಿದೆ. ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್ 9 ರವರೆಗೆ ವಿಸ್ತರಿಸಲಾಗಿದೆ.
Read Full Story

12:21 PM (IST) Aug 23

ಜಸ್ಟ್ ಮ್ಯಾರೀಡ್ ಸಿನಿಮಾ ವಿಮರ್ಶೆ - ಪ್ರೇಮದ ಅವಸ್ಥಾಂತರ, ಕುಟುಂಬದ ಸಮರಸ

ನಿರ್ದೇಶಕಿ ಈ ಸಿನಿಮಾವನ್ನು ಬದುಕಿನಂತೆ ಚಿತ್ರಿಸುತ್ತ ಹೋಗಿದ್ದಾರೆ, ಬದುಕಿನಲ್ಲಿ ಅನಿರೀಕ್ಷಿತಗಳಿಗೆ, ಕೆಲವು ಸಂಗತಿಗಳಿಗೆ ಹೇಗೆ ಲಾಜಿಕ್‌ ಇರುವುದಿಲ್ಲವೋ ಹಾಗೆ ಇಲ್ಲಿ ಲಿಂಕ್‌ ಸಿಗದ ಕೆಲವು ವಿಚಾರಗಳಿವೆ.

Read Full Story

12:05 PM (IST) Aug 23

ಧರ್ಮಸ್ಥಳ ಕೇಸ್‌ - ಸತ್ಯದ ಹುಡುಕಾಟದಲ್ಲಿ ಸುಳ್ಳಿನ ಬಲೆ

ಧರ್ಮಸ್ಥಳ ಪ್ರಕರಣದಲ್ಲಿ ಎಂಡಿ ಸಮೀರ್ ಮತ್ತು ಆತನ ಬೆಂಬಲಿಗ ಯೂಟ್ಯೂಬರ್‌ಗಳ ಸುಳ್ಳುಗಳನ್ನು ಬಯಲು ಮಾಡಲಾಗಿದೆ. ಸತ್ಯಾನ್ವೇಷಣೆಯ ಅಗತ್ಯತೆ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿನ ತಪ್ಪು ಮಾಹಿತಿಯ ಅಪಾಯಗಳ ಬಗ್ಗೆ ಚರ್ಚಿಸಲಾಗಿದೆ.
Read Full Story

12:03 PM (IST) Aug 23

ಧರ್ಮಸ್ಥಳದ ಮಾಸ್ಕ್‌ ಮ್ಯಾನ್ ಚಿನ್ನಯ್ಯನ ಈಗಿನ ನಿಜಮುಖ ರಿವೀಲ್! ಮುಸುಕು ತೆಗೆದ ಮಂಡ್ಯದ ಚೆನ್ನ!

ಧರ್ಮಸ್ಥಳದಲ್ಲಿ ನೂರಾರು ಮಹಿಳಾ ಶವಗಳನ್ನು ಹೂತಿದ್ದಾಗಿ ಹೇಳಿದ್ದ ಮುಸುಕುಧಾರಿ ಚಿನ್ನಯ್ಯನ ಈಗಿನ ಫೋಟೋ ಬಹಿರಂಗವಾಗಿದೆ. ವಿಶೇಷ ತನಿಖಾ ತಂಡ (ಎಸ್‌ಐಟಿ) ಚಿನ್ನಯ್ಯನನ್ನು ಬಂಧಿಸಿ, ಬೆಳ್ತಂಗಡಿ ಕೋರ್ಟ್‌ಗೆ ಹಾಜರುಪಡಿಸಿದೆ.
Read Full Story

11:51 AM (IST) Aug 23

ಧರ್ಮಸ್ಥಳ ಗ್ರಾಮ ಪ್ರಕರಣ - ಬುರುಡೆ ಕೇಸ್‌ನಲ್ಲಿ ಉತ್ತರ ಸಿಗದ ಪ್ರಶ್ನೆಗಳು, ಸರ್ಕಾರಕ್ಕೊಂದು ಬಹಿರಂಗ ಪತ್ರ

ಜುಲೈ 11ರಂದು ನ್ಯಾಯಾಲಯದ ಮುಂದೆ ಪ್ರತ್ಯಕ್ಷನಾದ ಆಗಂತುಕ ವ್ಯಕ್ತಿಯೊರ್ವ ತಾನು ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂಳಿರುವ ಹೇಳಿಕೆಯನ್ನು ದಾಖಲಿಸುತ್ತಾನೆ.

Read Full Story

11:03 AM (IST) Aug 23

ಜಗದೀಶ್‌ಗೆ ಚಾಕು ಇರಿದು ಎಸ್ಕೇಪ್‌ ಆದ ದರ್ಶನ್‌!

ತುಮಕೂರು ಜಿಲ್ಲೆಯಲ್ಲಿ ಅತಿವೇಗದ ಚಾಲನೆ ಪ್ರಶ್ನಿಸಿದ ಯುವಕನ ಮೇಲೆ ಹಲ್ಲೆ ನಡೆದಿದ್ದು, ನಂತರ ಆತನ ಸಹೋದರನಿಗೆ ಚಾಕುವಿನಿಂದ ಇರಿಯಲಾಗಿದೆ. ಮಿಡಿಗೇಶಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. 

Read Full Story

11:01 AM (IST) Aug 23

ಅನಾಮಿಕ ಮುಸುಕುಧಾರಿ ಚಿನ್ನಯ್ಯನ ಫೋಟೋ ರಿವೀಲ್ - ಇಲ್ಲಿದ್ದಾನೆ ನೋಡಿ ಇವೇ ಸುಳ್ಳುಗಾರ?

ಧರ್ಮಸ್ಥಳದಲ್ಲಿ ಶವಗಳನ್ನು ಹೂತಿದ್ದೇನೆ ಎಂದು ಸುಳ್ಳು ದೂರು ನೀಡಿದ್ದ ಅನಾಮಿಕ ವ್ಯಕ್ತಿಯನ್ನು ಬಂಧಿಸಲಾಗಿದೆ. ಸಾಕ್ಷಿ ಸಂರಕ್ಷಣಾ ಕಾಯ್ದೆ ರದ್ದಾದ ಬಳಿಕ ಬಂಧನಕ್ಕೊಳಗಾದ ಈತನ ಫೋಟೋ ಇದೀಗ ಬಹಿರಂಗವಾಗಿದೆ. ಚಿನ್ನಯ್ಯ ಎಂಬಾತನೇ ಮುಸುಕುಧಾರಿ ಎಂದು ತಿಳಿದುಬಂದಿದೆ.
Read Full Story

10:49 AM (IST) Aug 23

ಭಾರತದ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ - ಇಸ್ರೋದ ಸಾಧನೆಗಳು ಮತ್ತು ಭಾರತದ ಭವಿಷ್ಯ

ಈ ವರ್ಷದ ಬಾಹ್ಯಾಕಾಶ ದಿನವನ್ನು 'ಭೂತ ಮತ್ತು ಭವಿಷ್ಯದ ಸೇತುವೆ: ಸಾಂಪ್ರದಾಯಿಕ ಖಗೋಳಶಾಸ್ತ್ರವನ್ನು ಗೌರವಿಸುತ್ತಾ, ಆಧುನಿಕ ಬಾಹ್ಯಾಕಾಶ ಸಾಧನೆಗಳ ಪ್ರದರ್ಶನ' ಎಂಬ ಥೀಮ್ ಅಡಿಯಲ್ಲಿ ಆಚರಿಸಲಾಗುತ್ತದೆ.

Read Full Story

10:45 AM (IST) Aug 23

ತುಮಕೂರು ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ನಿಗೂಢ ಸಾವು; ತಂದೆ-ತಾಯಿ ಹೇಳಿಕೆಯಿಂದ ಪೊಲೀಸರಿಗೆ ಅನುಮಾನ!

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸಿದ್ದನಕಟ್ಟೆಯಲ್ಲಿ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಅಶ್ವಿನಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ. ಹೊಟ್ಟೆನೋವೆಂದು ಪೋಷಕರ ಹೇಳಿಕೆ, ಪೊಲೀಸರಿಗೆ ಅನುಮಾನ.
Read Full Story

10:37 AM (IST) Aug 23

ಬಾಯ್‌ಫ್ರೆಂಡ್‌ಗಾಗಿ ಮುದ್ದೆಯಲ್ಲಿ ಅತ್ತೆಗೆ ಹತ್ತಾರು ನಿದ್ರೆ ಮಾತ್ರೆ ಹಾಕಿ ಸಾಯಿಸಿದ ಸೊಸೆ, ಚಿನ್ನದಿಂದ ಬಯಲಾಯ್ತು ರಹಸ್ಯ!

ಚಿಕ್ಕಮಗಳೂರಿನಲ್ಲಿ ಬಾಯ್‌ಫ್ರೆಂಡ್‌ನ ಆಸೆಗಾಗಿ ಸೊಸೆಯೊಬ್ಬಳು ಅತ್ತೆಯನ್ನು ಕೊಲೆಗೈದು ಚಿನ್ನಾಭರಣ ಕದ್ದ ಘಟನೆ ಬೆಳಕಿಗೆ ಬಂದಿದೆ. ನಿದ್ರೆ ಮಾತ್ರೆ ನೀಡಿ ಕೊಲೆಗೈದ ಆರೋಪದ ಮೇಲೆ ಸೊಸೆ ಬಂಧಿತಳಾಗಿದ್ದು, ಬಾಯ್‌ಫ್ರೆಂಡ್‌ ಕೂಡ ಪೊಲೀಸರ ವಶದಲ್ಲಿದ್ದಾನೆ.
Read Full Story

10:28 AM (IST) Aug 23

ಬಿಜೆಪಿ ಅವಧಿಯಲ್ಲಾಗದ ಅಭಿವೃದ್ಧಿ ನಾವು ಮಾಡಿದ್ದೇವೆ - ಡಿ.ಕೆ.ಶಿವಕುಮಾರ್‌

ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಡಲಾಗದ ಅಭಿವೃದ್ಧಿ ಕೆಲಸಗಳನ್ನು ನಮ್ಮ ಸರ್ಕಾರದಲ್ಲಿ ಮಾಡುತ್ತಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

Read Full Story

10:17 AM (IST) Aug 23

ತಾನು ತಂದ ಬುರುಡೆ ಬಗ್ಗೆ ಮಾಹಿತಿ ನೀಡದ ಚೆನ್ನ, ಆಮಿಷಗಳಿಗೆ ಒಳಗಾಗಿ ಮುಸುಕು ಧರಿಸಿ ಸುಳ್ಳು ಹೇಳಿದ!

ಧರ್ಮಸ್ಥಳದ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಿದ್ದ ಗ್ಯಾಂಗ್‌ನ ಕುತಂತ್ರ ಬಯಲಾಗುತ್ತಿದೆ. ಅನಾಮಿಕ ಸಾಕ್ಷಿ ನೀಡಿದ್ದ ವ್ಯಕ್ತಿಯ ಹಿಂದಿನ ಸೂತ್ರಧಾರಿಗಳು ಯಾರು ಎಂಬುದು ಬಹಿರಂಗವಾಗಿದ್ದು, ತನಿಖೆ ಮುಂದುವರೆದಿದೆ.
Read Full Story

10:09 AM (IST) Aug 23

ಸಾಕ್ಷ್ಯ ಸಂರಕ್ಷಣಾ ಕಾಯ್ದೆ ರದ್ದು ಬೆನ್ನಲ್ಲಿಯೇ ಅನಾಮಿಕನ ಹೆಸರು ಚಿನ್ನಯ್ಯ ಎಂದು ರಿವೀಲ್‌ ಮಾಡಿದ ಎಸ್‌ಐಟಿ!

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದು ಹೇಳಿಕೆ ನೀಡಿದ್ದ ಸಾಕ್ಷಿ ಚಿನ್ನಯ್ಯನನ್ನು ಬಂಧಿಸಲಾಗಿದೆ. ಸಾಕ್ಷಿ ಸಂರಕ್ಷಣಾ ಕಾಯ್ದೆ ರದ್ದುಗೊಂಡ ಬಳಿಕ ಚಿನ್ನಯ್ಯನ ಹೇಳಿಕೆ ಸುಳ್ಳು ಎಂದು ಎಸ್‌ಐಟಿ ಸಾಬೀತುಪಡಿಸಿದೆ. ಮಟ್ಟಣ್ಣನವರ್ ವಿರುದ್ಧ ಕರ್ತವ್ಯಕ್ಕೆ ಅಡ್ಡಿ ಪ್ರಕರಣ ದಾಖಲು.
Read Full Story

09:55 AM (IST) Aug 23

ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ - ಬಿಜೆಪಿ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ತಿರುಗೇಟು

ಬಿಜೆಪಿ ಅಧಿಕಾರದಲ್ಲಿರುವ ಬಹುತೇಕ ರಾಜ್ಯಗಳಲ್ಲಿ ಕಾಲ್ತುಳಿತ ಸಂಭವಿಸಿ ನೂರಾರು ಜನರು ಸಾವನ್ನಪ್ಪಿದ್ದಾರೆ. ಹಾಗೆಂದ ಮಾತ್ರಕ್ಕೆ ಅಲ್ಲಿನ ಮುಖ್ಯಮಂತ್ರಿ ಅವರು ಹೊಣೆ ಹೊತ್ತು ರಾಜೀನಾಮೆ ನೀಡಲಿಲ್ಲ.

Read Full Story

09:54 AM (IST) Aug 23

ಧರ್ಮಸ್ಥಳದಲ್ಲಿ ನೂರಾರು ಶವ ಹೂತಿದ್ದಾಗಿ ಹೇಳಿದ್ದ, ಅನಾಮಿಕ ದೂರುದಾರನ ಬಂಧಿಸಿದ ಎಸ್‌ಐಟಿ!

ಸಾಕ್ಷಿ ಸಂರಕ್ಷಣಾ ಯೋಜನೆಯಡಿ ರಕ್ಷಣೆ ಪಡೆದಿದ್ದ ಅನಾಮಿಕ ದೂರುದಾರನನ್ನು ಎಸ್‌ಐಟಿ ಬಂಧಿಸಿದೆ. ದೂರಿನಲ್ಲಿ ಸುಳ್ಳು ಮಾಹಿತಿ ಮತ್ತು ತನಿಖೆಗೆ ಅಡ್ಡಿಪಡಿಸಿದ ಆರೋಪದ ಮೇಲೆ ಹೊಸ ಎಫ್‌ಐಆರ್ ದಾಖಲಾಗಿದೆ. ಸಮಾಧಿ ಸ್ಥಳಗಳಲ್ಲಿ ಅಸ್ತಿಪಂಜರಗಳು ಪತ್ತೆಯಾಗಿಲ್ಲ. ಬಂಧಿತನ ವಿಚಾರಣೆ ಮುಂದುವರೆದಿದೆ.

Read Full Story

09:49 AM (IST) Aug 23

ಅನನ್ಯಾ ಭಟ್ ನಾಪತ್ತೆ ಪ್ರಕರಣ - ಸುಜಾತ ಭಟ್ ನಿವಾಸಕ್ಕೆ ಎಸ್ಐಟಿ ಭೇಟಿ, ವಿಡಿಯೋ ಹೇಳಿಕೆ ದಾಖಲು ಸಾಧ್ಯತೆ

ಅನನ್ಯಾ ಭಟ್ ನಾಪತ್ತೆ ಪ್ರಕರಣದಲ್ಲಿ ಸುಜಾತ ಭಟ್ ಅವರ ಹೇಳಿಕೆಯನ್ನು ದಾಖಲಿಸಲು ಎಸ್‌ಐಟಿ ಅವರ ನಿವಾಸಕ್ಕೆ ಭೇಟಿ ನೀಡಲಿದೆ. ಆರೋಗ್ಯ ಮತ್ತು ವಯಸ್ಸಿನ ಕಾರಣದಿಂದಾಗಿ ಸುಜಾತ ಭಟ್ ವಿಚಾರಣೆಗೆ ಹಾಜರಾಗಲು ಸಾಧ್ಯವಾಗಿಲ್ಲ. ಕಾನೂನು ಪ್ರಕಾರ, ಎಸ್‌ಐಟಿ ಅವರ ಮನೆಯಲ್ಲಿಯೇ ಹೇಳಿಕೆ ದಾಖಲಿಸಲಿದೆ.
Read Full Story

08:46 AM (IST) Aug 23

'ಮಾಧ್ಯಮದವರ ಕಾಟ ತಡಿಯೋಕೆ ಆಗ್ತಾ ಇಲ್ಲ, ಆತ್ಮಹ*ತ್ಯೆ ಮಾಡಿಕೊಳ್ತೇನೆ..' ಡೆತ್‌ನೋಟ್‌ ಬರೆದ ಸುಜಾತಾ ಭಟ್‌?

ಮಾಧ್ಯಮಗಳ ಕಿರುಕುಳದಿಂದ ನೊಂದಿದ್ದೇನೆ ಎಂದು ಹೇಳಿಕೊಂಡು ಸುಜಾತ ಭಟ್ ಡೆತ್ ನೋಟ್ ಬರೆದಿದ್ದಾರೆ ಎನ್ನಲಾದ ಪತ್ರ ವೈರಲ್ ಆಗಿದೆ. ಪೊಲೀಸರಿಂದ ಭದ್ರತೆ ಕೋರಿದ ಸುಜಾತ ಭಟ್, ತಮ್ಮ ಆರೋಗ್ಯ ಸರಿಯಿಲ್ಲ ಮತ್ತು ಬೆದರಿಕೆಗಳು ಬರುತ್ತಿವೆ ಎಂದು ಹೇಳಿದ್ದಾರೆ. ಇದರ ಬೆನ್ನಲ್ಲೇ ಪೊಲೀಸರು ಭದ್ರತೆ ಒದಗಿಸಿದ್ದಾರೆ.
Read Full Story

More Trending News