MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • State
  • ಮಾಸ್ಕ್ ಮ್ಯಾನ್ ಚಿನ್ನಯ್ಯ ಹಗ್ಗ ಕೊಟ್ಟು ಕೈ ಕಟ್ಟಿಸಿಕೊಂಡಿದ್ದು ಹೇಗೆ?

ಮಾಸ್ಕ್ ಮ್ಯಾನ್ ಚಿನ್ನಯ್ಯ ಹಗ್ಗ ಕೊಟ್ಟು ಕೈ ಕಟ್ಟಿಸಿಕೊಂಡಿದ್ದು ಹೇಗೆ?

ಮಾಸ್ಕ್ ಮ್ಯಾನ್ ಚಿನ್ನಯ್ಯನ ಹೆಸರು, ಊರು ಸೇರಿದಂತೆ ಎಲ್ಲ ಮಾಹಿತಿ ಬಹಿರಂಗ. ಧರ್ಮಸ್ಥಳದಲ್ಲಿ ಸ್ವಚ್ಛತಾ ಕಾರ್ಮಿಕನಾಗಿದ್ದ ಚಿನ್ನಯ್ಯನನ್ನು ಮಹೇಶ್ ಶೆಟ್ಟಿ ತಿಮರೋಡಿ ಗ್ಯಾಂಗ್ ಬಳಸಿಕೊಂಡು ಬೆದರಿಸಿತ್ತು.

2 Min read
Author : Mahmad Rafik
Published : Aug 23 2025, 10:04 PM IST
Share this Photo Gallery
  • FB
  • TW
  • Linkdin
  • Whatsapp
16
Image Credit : Asianet News

ಮಾಸ್ಕ್‌ ಮ್ಯಾನ್ ಚಿನ್ನಯ್ಯನ ಹೆಸರು, ಊರು ಸೇರಿದಂತೆ ಎಲ್ಲ ಮಾಹಿತಿಯೂ ಬಹಿರಂಗಗೊಂಡಿದೆ. ಚಿನ್ನಯ್ಯ ಮಂಡ್ಯ ಜಿಲ್ಲೆಯವನು. ಈತನ ತಂದೆ ತಮಿಳುನಾಡಿನವರಾಗಿದ್ದು, ಕೆಲಸ ಅರಸಿ ರಾಜ್ಯಕ್ಕೆ ಬಂದು ಇಲ್ಲೇ ಸೆಟಲ್ ಆಗಿದ್ದಾರೆ. ಚಿನ್ನಯ್ಯ ಧರ್ಮಸ್ಥಳದಲ್ಲಿ ಸ್ವಚ್ಛತಾ ಕಾರ್ಮಿಕನಾಗಿ ಕೆಲಸ ಮಾಡಿಕೊಂಡಿದ್ದನು. ನಂತರ ಆತ ಧರ್ಮಸ್ಥಳದಿಂದ ತಮಿಳುನಾಡಿ ಇರೋಡ್‌ಗೆ ಹೋಗುತ್ತಾನೆ.

26
Image Credit : Asianet News

ಒಮ್ಮೆ ಇರೋಡ್‌ನಲ್ಲಿದ್ದ ಚಿನ್ನಯ್ಯನಿಗೆ ಈತನ ಸೋದರಿ ರತ್ನ ಕರೆ ಮಾಡಿ ಉಜಿರೆಗೆ ಬರುವಂತೆ ಹೇಳುತ್ತಾಳೆ. ಇಲ್ಲಿ ಕೆಲಸವೂ ಇದೆ ಹಾಗೆ ಒಳ್ಳೆಯ ಸಂಬಳ ನೀಡುವ ವಿಷಯ ತಿಳಿಸುತ್ತಾಳೆ. ಇದನ್ನರಿತ ಚಿನ್ನಯ್ಯ ಮತ್ತೆ ಉಜಿರೆಗೆ ಬಂದು ಸ್ವಚ್ಛತಾ ಕಾರ್ಮಿಕನಾಗಿ ಕೆಲಸ ಮಾಡಲು ಆರಂಭಿಸುತ್ತಾನೆ. ಈ ಸಂದರ್ಭದಲ್ಲಿ ಚಿನ್ನಯ್ಯನನ್ನು ಸೌಜನ್ಯ ಸೋದರಮಾವ ವಿಠಲ್ ಗೌಡ ಗುರುತಿಸುತ್ತಾನೆ. ನದಿ ತೀರದಲ್ಲಿ ಬಂದ ಅನಾಥ ಶವಗಳನ್ನು ಚಿನ್ನಯ್ಯನ ಹೂಳುತ್ತಿರುವ ವಿಷಯ ವಿಠಲ್‌ ಗೌಡನಿಗೆ ಗೊತ್ತಿರುತ್ತದೆ.

Related Articles

Related image1
ನಜ್ಮಾ ನಜೀರ್-ಸಸಿಕಾಂತ್ ಸೆಂಥಿಲ್-ಸಮೀರ್: ಮೂವರಿಗೂ ಲಿಂಕ್ ಇದೆ ಎಂದ ವಸಂತ್ ಗಿಳಿಯಾರ್
Related image2
ತಿಮರೋಡಿ ಮನೆಯಲ್ಲಿ ಚಿನ್ನಯ್ಯನ ಮೇಲೆ ಹಲ್ಲೆ? ಅನಾಮಿಕನ ವೀಕ್‌ನೆಸ್ ಬಳಸಿಕೊಂಡಿತ್ತು ಗ್ಯಾಂಗ್!
36
Image Credit : Asianet news Suvarna

470 ಲೆಕ್ಕ ಹಾಕೊಂಡಿದ್ರು

ಈ ಚಿನ್ನಯ್ಯನನ್ನು ಕರೆದುಕೊಂಡು ವಿಠಲ್ ಗೌಡ ನೇರವಾಗಿ ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ಕರೆದುಕೊಂಡು ಹೋಗುತ್ತಾನೆ. ಅಲ್ಲಿ ಕಾನೂನುಬದ್ಧವಾಗಿ, ಗ್ರಾಮ ಪಂಚಾಯ್ತಿ ಸಮ್ಮುಖದಲ್ಲಿಯೇ ಅನಾಥ ಶವಗಳನ್ನು ಹೂತಿರುವ ವಿಷಯವನ್ನು ಚಿನ್ನಯ್ಯ ಹೇಳುತ್ತಾನೆ. ಎಷ್ಟು ಹೆಣ ಎಂದಾಗ ಚಿನ್ನಯ್ಯ ಹೇಳುತ್ತಾ ಹೋಗುತ್ತಾನೆ. ಆಗ ಮಹೇಶ್‌ ಶೆಟ್ಟಿ ತಿಮರೋಡಿ ಆಂಡ್ ಗ್ಯಾಂಗ್ ಲೆಕ್ಕ ಹಾಕಲು ಆರಂಭಿಸುತ್ತದೆ. ಈ ಲೆಕ್ಕದ ಪ್ರಕಾರ 476 ಶವ ಎಂದು ಆಗುತ್ತದೆ.

46
Image Credit : Asianet News

ಈ ಲೆಕ್ಕದ ಬಳಿಕ ಮಹೇಶ್ ಶೆಟ್ಟಿ ತಿಮರೋಡಿ ಗ್ಯಾಂಗ್ ತಮ್ಮ ಪ್ಲಾನ್‌ನ್ನು ಚಿನ್ನಯ್ಯನ ಮುಂದೆ ಹೇಳುತ್ತದೆ. ಚಿನ್ನಯ್ಯ ಮೊದಲು ಈ ಕೆಲಸ ಮಾಡಲು ಒಪ್ಪಲ್ವಂತೆ. ಆಗ ತಿಮರೋಡಿ ಗ್ಯಾಂಗ್, ಹಣದ ಆಮಿಷವನ್ನು ಒಡ್ಡುತ್ತದೆ. ನಂತರ ನಮ್ಮ ಮಾತು ಕೇಳದಿದ್ರೆ ನೀನೇ ರೇ*ಪ್ ಮಾಡಿ ಕೊಂದು ಹೆಣ ಹೂತಿರೋದಾಗಿ ಹೇಳಿ ನಿನ್ನನ್ನು ಸಿಲುಕಿಸುತ್ತೇವೆ ಎಂದು ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸುತ್ತಾರೆ.

56
Image Credit : Asianet News

ಚಿನ್ನಯ್ಯ ಹೇಳಿದ ಮಾಹಿತಿಯನ್ನೇ ಪಡೆದುಕೊಂಡು ಆತನನ್ನೇ ಸಿಲುಕಿಸುವ ಖತರ್ನಾಕ್ ಪ್ರಯತ್ನವನ್ನು ತಿಮರೋಡಿ ಗ್ಯಾಂಗ್ ಮಾಡುತ್ತದೆ. ಇಲ್ಲಿಗೆ ತಿಮರೋಡಿ ಆಂಡ್ ಗ್ಯಾಂಗ್‌ಗೆ ಹಗ್ಗ ನೀಡಿ ಕೈ ಕಟ್ಟಿಸಿಕೊಳ್ಳುತ್ತಾನೆ ಮಾಸ್ಕ್ ಮ್ಯಾನ್ ಖ್ಯಾತಿಯ ಚಿನ್ನಯ್ಯ. ಇದೀಗ ನ್ಯಾಯಾಧೀಶರ ಮುಂದೆ ಚಿನ್ನಯ್ಯ ತಪ್ಪೊಪ್ಪಿಗೆ ಹೇಳಿಕೆ ದಾಖಲಿಸಿ, ಸರ್ಕಾರಿ ವಕೀಲರನ್ನು ನೀಡುವಂತೆ ಮನವಿ ಮಾಡಿಕೊಂಡಿದ್ದಾನೆ.

66
Image Credit : Asianet News

ತಿಮರೋಡಿಯಿಂದ ಬೆದರಿಕೆ!

ಸಾಮಾಜಿಕ ಹೋರಾಟಗಾರ ವಸಂತ್ ಗಿಳಿಯಾರ್ ಅವರ ಪ್ರಕಾರ, ಚಿನ್ನಯ್ಯನಿಗೆ ಪ್ರಾಣ ಬೆದರಿಕೆ ಇತ್ತು. ಏಷ್ಯಾನೆಟ್ ಸುವರ್ಣ ನ್ಯೂಸ್‌ ಡಿಬೇಟ್‌ನಲ್ಲಿ ಭಾಗಿಯಾದ ವೇಳೆ ವಸಂತ್ ಗಿಳಿಯಾರ್ ಹೇಳಿದ್ದಾರೆ. ಬಾಹುಬಲಿ ಬೆಟ್ಟದ ಬಳಿಕ ಕನ್ಯಾಡಿ ಪ್ರದೇಶದಲ್ಲಿ ಶೋಧ ಕಾರ್ಯ ನಡೆಸುವ ಸಂದರ್ಭದಲ್ಲಿ ಅಲ್ಲಿದ್ದ ವ್ಯಕ್ತಿಯೊಬ್ಬರಿಗೆ ಚಿನ್ನಯ್ಯ ತನ್ನನ್ನು ಕಾಪಾಡುವಂತೆ ಮನವಿ ಮಾಡಿಕೊಂಡಿದ್ದನು ಎಂದು ವಸಂತ್ ಗಿಳಿಯಾರ್ ಹೇಳಿಕೊಂಡಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಧರ್ಮಸ್ಥಳ
ಸೌಜನ್ಯ ಪ್ರಕರಣ
ಎಸ್.ಐ.ಟಿ.
ಮಹೇಶ್ ಶೆಟ್ಟಿ ತಿಮರೋಡಿ
ಸುಜಾತಾ ಭಟ್

Latest Videos
Recommended Stories
Recommended image1
ಕನಿಷ್ಠ ಐವರಿಗೆ ಮಂತ್ರಿ ಸ್ಥಾನ ನೀಡಲು ಹೈಕಮಾಂಡ್‌ಗೆ ಮನವಿ
Recommended image2
ರಾಯರ ಸನ್ನಿಧಿಯಲ್ಲಿ ಕಾಂಗ್ರೆಸ್ ವಿರುದ್ಧ ಅಶ್ವತ್ಥ್ ನಾರಾಯಣ ಕಿಡಿ: ದೇಶದಲ್ಲೇ ನಂಬರ್ 1 ಭ್ರಷ್ಟ ಸರ್ಕಾರ ಎಂದು ವಾಗ್ದಾಳಿ!
Recommended image3
Karnataka Rains: ಬಂಗಾಳಕೊಲ್ಲಿ ವಾಯುಭಾರ ಕುಸಿತ; ಉತ್ತರಕನ್ನಡದಲ್ಲಿ ಗುಡುಗು ಸಹಿತ ಮಳೆ, ಕಾಫಿನಾಡಲ್ಲೂ ವರ್ಷಧಾರೆ!
Related Stories
Recommended image1
ನಜ್ಮಾ ನಜೀರ್-ಸಸಿಕಾಂತ್ ಸೆಂಥಿಲ್-ಸಮೀರ್: ಮೂವರಿಗೂ ಲಿಂಕ್ ಇದೆ ಎಂದ ವಸಂತ್ ಗಿಳಿಯಾರ್
Recommended image2
ತಿಮರೋಡಿ ಮನೆಯಲ್ಲಿ ಚಿನ್ನಯ್ಯನ ಮೇಲೆ ಹಲ್ಲೆ? ಅನಾಮಿಕನ ವೀಕ್‌ನೆಸ್ ಬಳಸಿಕೊಂಡಿತ್ತು ಗ್ಯಾಂಗ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved