ಬೆಂಗಳೂರು (ಜ.16): ಅಸ್ಸಾಂ ಚುನಾವಣೆ ಸಂಬಂಧ ಶುಕ್ರವಾರ ದೆಹಲಿಗೆ ತೆರಳುತ್ತಿದ್ದು, ಅಲ್ಲಿಎಲ್ಲನಾಯಕರನ್ನು ಭೇಟಿ ಮಾಡುತ್ತೇನೆ ಎಂದು ಉಪಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಸದಾಶಿವನಗರದ ತಮ್ಮ ನಿವಾಸದ ಬಳಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವ ಕುಮಾರ್, ರಾಹುಲ್ గాంಧಿ ಅವರು ನಮ್ಮ ನಾಯಕರು. ಅವರ ಭೇಟಿಯಲ್ಲಿ ಹೊಸತೇನಿಲ್ಲ. ಅವರ ಭೇಟಿಯಾಗಿ ಕೆಲ ವಿಚಾರ ಚರ್ಚೆಮಾಡಿದ್ದೇನೆ.ಅದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ಸಾಧ್ಯವಿಲ್ಲ. ಇನ್ನು ಅಸ್ಸಾಂ ಚುನಾವಣೆ ಸಂಬಂಧ ಸಭೆಯಿದ್ದು, ಅದಕ್ಕಾಗಿ ಶುಕ್ರವಾರ ದೆಹಲಿಗೆ ತೆರಳುತ್ತಿದ್ದೇನೆ. ಅಲ್ಲಿಗೆ ಹೋದಾಗ ನಮ್ಮ ನಾಯಕರನ್ನು ಭೇಟಿ ಮಾಡುತ್ತೇನೆ ಎಂದು ತಿಳಿಸಿದರು. ಅದರೊಂದಿಗೆ ಇಂದಿನ ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್ಲೈವ್ ಬ್ಲಾಗ್

10:36 PM (IST) Jan 16
2026ರ ಆರಂಭದಲ್ಲೇ ಖ್ಯಾತ ನಟಿ ಬದುಕಲ್ಲಿ ಬಿರುಗಾಳಿ, ಮದುವೆಯಾದ ಎರಡೇ ವರ್ಷಕ್ಕೆ ನಟಿ ಡಿವೋರ್ಸ್ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಮೂಲಕ ಹೊಸ ವರ್ಷ ಆರಂಭದಲ್ಲೇ ಸೆಲೆಬ್ರೆಟಿಗಳ ವೈವಾಹಿಕ ಜೀವನ ಭಾರಿ ಚರ್ಚೆಗೆ ಗ್ರಾಸವಾಗಿದೆ.
08:31 PM (IST) Jan 16
ಹಗರಿಬೊಮ್ಮನಹಳ್ಳಿ ತಾಲೂಕಿನ ಬಂಜಾರ ಸಮುದಾಯದ ಒಂದೇ ಕುಟುಂಬದ ಐವರು ಬಾಗಲಕೋಟೆ ಬಳಿ ನಡೆದ ಟ್ರ್ಯಾಕ್ಟರ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ದುರಂತದಿಂದ ಆಘಾತಕ್ಕೊಳಗಾದ ಕುಟುಂಬಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಸಿಗಬೇಕಿದ್ದ ಪರಿಹಾರ ರದ್ದಾಗಿದ್ದು, ಸಂತ್ರಸ್ತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.
08:12 PM (IST) Jan 16
ಹುಬ್ಬಳ್ಳಿ-ಅಂಕೋಲಾ ರಾಷ್ಟ್ರೀಯ ಹೆದ್ದಾರಿಯನ್ನು ಗ್ಯಾರೇಜ್ಗಳು ಮತ್ತು ಟೈರ್ ಅಂಗಡಿಗಳು ಅತಿಕ್ರಮಿಸಿವೆ. ಇದರಿಂದ ಚತುಷ್ಪಥ ರಸ್ತೆಯು ದ್ವಿಪಥವಾಗಿ ಮಾರ್ಪಟ್ಟಿದ್ದು, ಸವಾರರಿಗೆ ಮೃತ್ಯುಕೂಪವಾಗಿ ಪರಿಣಮಿಸಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಅಪಘಾತಗಳು ಹೆಚ್ಚಾಗುತ್ತಿದೆ.
07:50 PM (IST) Jan 16
ಬೇಲೂರಿನ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ಸಂಕ್ರಾಂತಿಯಂದು ವಿಶಿಷ್ಟ ಸಂಪ್ರದಾಯವನ್ನು ಆಚರಿಸಲಾಗುತ್ತದೆ. ಈ ದಿನ ಕಾಡು ಮೊಲಕ್ಕೆ ಚಿನ್ನದ ಓಲೆ ಹಾಕಿ ಪೂಜಿಸಿ, ಕಾಡಿಗೆ ಬಿಡಲಾಗುತ್ತದೆ. ಈ ಆಚರಣೆಯು ವಿಜಯನಗರ ಕಾಲದಿಂದಲೂ ನಡೆದುಕೊಂಡು ಬಂದಿದೆ.
07:33 PM (IST) Jan 16
ಕನ್ನಡದ ಎಂಟು ಜ್ಞಾನಪೀಠ ಪ್ರಶಸ್ತಿ ವಿಜೇತರನ್ನು ಒಂದೇ ಚೌಕಟ್ಟಿನಲ್ಲಿ ತೋರಿಸುವ ಕೃತಕ ಬುದ್ಧಿಮತ್ತೆ (AI) ರಚಿತ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಲೇಖನವು ಆ ಮಹಾನ್ ಸಾಹಿತಿಗಳ ಕೊಡುಗೆಯನ್ನು ಸ್ಮರಿಸುವುದರ ಜೊತೆಗೆ, ನೆಟ್ಟಿಗರ ವ್ಯಾಪಕ ಪ್ರಶಂಸೆಗೆ ವ್ಯಕ್ತವಾಗಿದೆ.
07:22 PM (IST) Jan 16
'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ವಿಶ್ವನ ತಾಯಿ ಲಲಿತಾ ಪಾತ್ರವನ್ನು ಹಠಾತ್ತನೆ ಅಂತ್ಯಗೊಳಿಸಲಾಗಿದೆ. ಜಯಂತ್ನಿಂದ ತಳ್ಳಲ್ಪಟ್ಟು ಸಾವನ್ನಪ್ಪುವ ದೃಶ್ಯದ ಮೂಲಕ ನಟಿ ವಿಜಯಲಕ್ಷ್ಮಿ ಸುಬ್ರಮಣಿ ಅವರ ಪಾತ್ರಕ್ಕೆ ಮುಕ್ತಾಯ ಹಾಡಲಾಗಿದೆ. ಇದೀಗ ಸನ್ಮಾನ ಮಾಡಿರುವ ಬಗ್ಗೆ ನಟಿ ಹೇಳಿದ್ದೇನು?
07:08 PM (IST) Jan 16
06:48 PM (IST) Jan 16
ಬಿಗ್ ಬಾಸ್ ಕನ್ನಡ ಸೀಸನ್ 12ರ ಫಿನಾಲೆಗೂ ಮುನ್ನವೇ ಎಲಿಮಿನೇಟ್ ಆದ ಧ್ರುವಂತ್ ತಮ್ಮ ಜುಟ್ಟು ಕತ್ತರಿಸಿ ಹೊಸ ಲುಕ್ನಲ್ಲಿ ಮಿಂಚುತ್ತಿದ್ದಾರೆ. ಈ ಬದಲಾವಣೆಯು ನೆಟ್ಟಿಗರಲ್ಲಿ ಚರ್ಚೆ ಹುಟ್ಟುಹಾಕಿದ್ದು, ಅವರ ವಿವಾದಾತ್ಮಕ ಬಿಗ್ ಬಾಸ್ ಜರ್ನಿ ಮತ್ತು ಮುಂದಿನ ಹಾದಿಯ ಬಗ್ಗೆ ಕುತೂಹಲ ಮೂಡಿಸಿದೆ.
06:11 PM (IST) Jan 16
ಮೆಟ್ರೋದಲ್ಲಿ ಪ್ರಯಾಣಿಸುವಾಗ ಆದ ಒಂದು ನಂಬಲಾಗದ ಅನುಭವವನ್ನು ಯುವತಿಯೊಬ್ಬಳು ಹಂಚಿಕೊಂಡಿದ್ದಾಳೆ. ಪಕ್ಕದಲ್ಲಿ ಕುಳಿತಿದ್ದ ಹುಡುಗಿಯ ಚಿನ್ನದ ಬಳೆ ನೋಡಿ ಇಷ್ಟವಾಯಿತು. ಫೋಟೋ ತೆಗೆದುಕೊಳ್ಳಬಹುದೇ ಎಂದು ಕೇಳಿದಾಗ, ಆ ಹುಡುಗಿ ಕೊಟ್ಟ ಉತ್ತರಕ್ಕೆ ಯುವತಿ ದಂಗಾಗಿದ್ದಾಳೆ.
05:54 PM (IST) Jan 16
ಮುಂಬೈ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆಗೆ ರಜೆ ಘೋಷಿಸಲಾಗಿತ್ತು. ಈ ನಿರ್ಧಾರವನ್ನು ಜೆರೋಧಾ ಸಿಇಒ ನಿತಿನ್ ಕಾಮತ್ ತೀವ್ರವಾಗಿ ಟೀಕಿಸಿದ್ದು, ಜಾಗತಿಕವಾಗಿ ಸಂಪರ್ಕ ಹೊಂದಿರುವ ಮಾರುಕಟ್ಟೆಯನ್ನು ಸ್ಥಳೀಯ ಚುನಾವಣೆಗಾಗಿ ಮುಚ್ಚುವುದು ಕಳಪೆ ಯೋಜನೆ ಎಂದು ಹೇಳಿದ್ದಾರೆ.
04:45 PM (IST) Jan 16
ಬೆಂಗಳೂರಿನಲ್ಲಿ ಅಪಘಾತದಂತೆ ಬಿಂಬಿಸಿ ವ್ಯಕ್ತಿಯೊಬ್ಬರ ಕೊಲೆಗೆ ಯತ್ನಿಸಲಾಗಿದೆ. ಬೈಕ್ಗೆ ಟೆಂಪೋ ಡಿಕ್ಕಿ ಹೊಡೆಸಿದ ನಂತರ, ಆರೋಪಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದು, ವೈದ್ಯಕೀಯ ವರದಿಯಿಂದ ಸತ್ಯ ಬಯಲಾಗಿದೆ. ಐವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
04:38 PM (IST) Jan 16
BBK 12 Episode Update: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ರಕ್ಷಿತಾ ಅವರಿಗೆ ಸಂಬಂಧಪಟ್ಟ ಆ ದೃಶ್ಯವನ್ನು ಬಿಗ್ ಬಾಸ್ ತೋರಿಸಿಲ್ಲ ಎಂದು ವೀಕ್ಷಕರು ಆರೋಪ ಮಾಡುತ್ತಿದ್ದಾರೆ.
04:15 PM (IST) Jan 16
Bigg Boss Kannada Season 12 Episode: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಗ್ರ್ಯಾಂಡ್ ಫಿನಾಲೆ ವೀಕ್ ಶುರುವಾಗಿದೆ. ಇನ್ನೆರಡು ದಿನಗಳಲ್ಲಿ ಈ ಶೋಗೆ ತೆರೆ ಬೀಳುವುದು. ಹೀಗಿರುವಾಗ ಸ್ಪರ್ಧಿಗಳು ಕಷ್ಟದ ಬಗ್ಗೆ ಮಾತನಾಡಿದ್ದಾರೆ.
04:11 PM (IST) Jan 16
ಕೆಂಭಾವಿ ಪಿಎಸ್ಐ ಅಮೋಜಿ ಕಾಂಬಳೆ, ಅಪಘಾತ ಪ್ರಕರಣವನ್ನು ಕೊಲೆ ಎಂದು ಒಪ್ಪಿಕೊಳ್ಳುವಂತೆ ಒತ್ತಾಯಿಸಿ ವಿಚಾರಣೆ ವೇಳೆ ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಹಲ್ಲೆಗೊಳಗಾದ ಕ್ಯಾನ್ಸರ್ ಪೀಡಿತ ವ್ಯಕ್ತಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
04:06 PM (IST) Jan 16
03:17 PM (IST) Jan 16
ರಿಲಯನ್ಸ್ ಜಿಯೋ ಭರ್ಜರಿ ಪ್ಲಾನ್, ಸದ್ಯ ಲಭ್ಯವಿರುವ ಉತ್ತಮ ರೀಚಾರ್ಜ್ ಪಾನ್ ಹಾಗೂ ಆಫರ್ಗಳಲ್ಲಿ ಜಿಯೋ ಹೊರತಂದ 899 ರೂಪಾಯಿ ಪ್ಲಾನ್ ಮುಂಚೂಣಿಯಲ್ಲಿದೆ. 90 ದಿನ ವ್ಯಾಲಿಟಿಡಿ ಜೊತೆಗೆ 200 ಜಿಬಿ ಉಚಿತ.
03:02 PM (IST) Jan 16
ಮಂಡ್ಯ ತಾಲೂಕಿನ ಮಾಯಪ್ಪನಹಳ್ಳಿಯಲ್ಲಿ, ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಮದುವೆಗೆ ಐದು ದಿನ ಬಾಕಿ ಇರುವಾಗ ಯೋಗೇಶ್ ಎಂಬ ಯುವಕನನ್ನು ಸ್ವಂತ ಅಣ್ಣನೇ ತನ್ನ ಮಕ್ಕಳೊಂದಿಗೆ ಸೇರಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
02:44 PM (IST) Jan 16
02:32 PM (IST) Jan 16
ಲಕ್ಕುಂಡಿ ಗ್ರಾಮದಲ್ಲಿ ಚಿನ್ನದ ನಿಧಿ ಪತ್ತೆಯಾದ ನಂತರ, ಪುರಾತತ್ವ ಇಲಾಖೆಯು ಉತ್ಖನನ ಕಾರ್ಯವನ್ನು ಆರಂಭಿಸಿದೆ. ರಾಮಾಯಣ ಕಾಲದ ನಂಟು ಹಾಗೂ 101 ದೇವಾಲಯಗಳ ಇತಿಹಾಸ ಹೊಂದಿರುವ ಈ ಗ್ರಾಮದಲ್ಲಿ, ಐತಿಹಾಸಿಕ ಸತ್ಯಗಳನ್ನು ಹೊರತರಲಿದೆ ಎಂದು ನಿರೀಕ್ಷಿಸಲಾಗಿದೆ.
02:01 PM (IST) Jan 16
ಬಿಗ್ಬಾಸ್ 12ರ ಫಿನಾಲೆಗೆ ಎರಡೇ ದಿನಗಳು ಬಾಕಿಯಿದ್ದು, ಗಿಲ್ಲಿ ನಟನ ಹವಾ ಜೋರಾಗಿದೆ. ಇದೀಗ ನಟ ಶಿವರಾಜ್ ಕುಮಾರ್ ಅವರು ಗಿಲ್ಲಿ ನಟನ ಸಹಜ ಗುಣವನ್ನು ಮೆಚ್ಚಿಕೊಂಡಿದ್ದು, ಈ ಬಾರಿ ಯಾರು ಗೆಲ್ಲುತ್ತಾರೆ ಎನ್ನುವ ಬಗ್ಗೆ ಪರೋಕ್ಷವಾಗಿ ಹಿಂಟ್ ಕೊಟ್ಟರು.
01:43 PM (IST) Jan 16
ಬಿಗ್ಬಾಸ್ 12ರ ಗ್ರ್ಯಾಂಡ್ ಫಿನಾಲೆ ಇದೇ 18ರಂದು ನಡೆಯಲಿದ್ದು, ಗಿಲ್ಲಿ ನಟ, ಅಶ್ವಿನಿ ಗೌಡ ಸೇರಿದಂತೆ ಆರು ಮಂದಿ ಸ್ಪರ್ಧಿಗಳಿದ್ದಾರೆ. ವೀಕ್ಷಕರ ಮತಗಳ ಆಧಾರದ ಮೇಲೆ ವಿನ್ನರ್ ನಿರ್ಧಾರವಾಗಲಿದ್ದು, ಜಿಯೋ ಹಾಟ್ಸ್ಟಾರ್ ಮೂಲಕ ಹೇಗೆ, ಯಾವಾಗ ವೋಟ್ ಹಾಕ್ಬೇಕು? ಇಲ್ಲಿದೆ ಡಿಟೇಲ್ಸ್
01:32 PM (IST) Jan 16
Kannada Celebrity Lovers: 2025ರಲ್ಲಿ ಅನೇಕ ತಾರೆಯರು ವೈವಾಹಿಕ ಜೀವನಕ್ಕೆ ಕಾಲಿಟ್ಟರು, ಪಾಲಕರಾಗಿ ಬಡ್ತಿ ಪಡೆದರು. ಈಗ ಕನ್ನಡ ಕಿರುತೆರೆಯಲ್ಲಿ ಕೆಲ ಜೋಡಿಗಳು ಮದುವೆ ಆಗಲಿದೆಯಾ ಎಂದು ಕಾದು ನೋಡಬೇಕಿದೆ. ಹಾಗಾದರೆ ಯಾರದು?
01:28 PM (IST) Jan 16
01:09 PM (IST) Jan 16
'ಬಿಗ್ ಬಾಸ್ ಕನ್ನಡ ಸೀಸನ್ 12' ಕಾರ್ಯಕ್ರಮದಲ್ಲಿ ಅಳಿವಿನಂಚಿನಲ್ಲಿರುವ ರಣಹದ್ದುಗಳ ಬಗ್ಗೆ ತಪ್ಪು ಮಾಹಿತಿ ನೀಡಿದ್ದಕ್ಕಾಗಿ ಅರಣ್ಯ ಇಲಾಖೆ ನೋಟಿಸ್ ಜಾರಿ ಮಾಡಿದೆ. ನಿರೂಪಕ ಕಿಚ್ಚ ಸುದೀಪ್ ಅವರ ಹೇಳಿಕೆಯನ್ನು ವಿರೋಧಿಸಿ, ರಣಹದ್ದುಗಳ ನೈಜ ಸ್ವಭಾವದ ಬಗ್ಗೆ ವಾಹಿನಿಯಲ್ಲಿ ಸ್ಪಷ್ಟೀಕರಣ ನೀಡುವಂತೆ ಸೂಚಿಸಿದೆ.
12:55 PM (IST) Jan 16
ಮಾಜಿ ಭಾರತೀಯ ಆಟಗಾರ ಮನೋಜ್ ತಿವಾರಿ, ರೋಹಿತ್ ಶರ್ಮಾ ಅವರನ್ನು ಏಕದಿನ ನಾಯಕತ್ವದಿಂದ ಕೆಳಗಿಳಿಸಿದ್ದರ ಹಿಂದೆ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಕೈವಾಡವಿದೆ ಎಂದು ಆರೋಪಿಸಿದ್ದಾರೆ. ಗಂಭೀರ್ ಅವರ ಒತ್ತಡದಿಂದಲೇ ಅಜಿತ್ ಅಗರ್ಕರ್ ಈ ನಿರ್ಧಾರ ತೆಗೆದುಕೊಂಡಿದ್ದರ ಬಗ್ಗೆ ತಿವಾರಿ ಆಕ್ಷೇಪ ಹೊರಹಾಕಿದ್ದಾರೆ.
12:42 PM (IST) Jan 16
12:40 PM (IST) Jan 16
12:18 PM (IST) Jan 16
12:16 PM (IST) Jan 16
ಮೊದಲು ದರ್ಶನ್ ನಟನೆಯ ‘ಡೆವಿಲ್’ ಚಿತ್ರಕ್ಕೆ ರೇಟಿಂಗ್ ಕೊಡುವುದನ್ನು ನಿರ್ಬಂಧಿಸಲಾಯಿತು. ಅದರ ಬೆನ್ನಲ್ಲೇ ಸುದೀಪ್ ನಟನೆಯ ‘ಮಾರ್ಕ್’, ಶಿವಣ್ಣ, ಉಪೇಂದ್ರ ಹಾಗೂ ರಾಜ್ ಬಿ.ಶೆಟ್ಟಿ ನಟನೆಯ ‘45’ ಚಿತ್ರ ವಿಮರ್ಶೆ ಮಾಡದಂತೆ ನಿರ್ಬಂಧ ಹೇರಲಾಯಿತು
12:01 PM (IST) Jan 16
ಅಂಚೆ ಇಲಾಖೆಯು ONDC ಪ್ಲಾಟ್ಫಾರ್ಮ್ನಲ್ಲಿ ಲಾಜಿಸ್ಟಿಕ್ಸ್ ಸೇವಾ ಪೂರೈಕೆದಾರರಾಗಿ ಅಧಿಕೃತವಾಗಿ ಸೇವೆ ಆರಂಭಿಸಿದೆ. ತನ್ನ ಮೊದಲ ONDC ಪಾರ್ಸೆಲ್ ಅನ್ನು ಯಶಸ್ವಿಯಾಗಿ ವಿತರಿಸುವ ಮೂಲಕ, ಮಾರಾಟಗಾರರಿಗೆ 'ಕ್ಲಿಕ್ ಅಂಡ್ ಬುಕ್' ಮಾದರಿಯಲ್ಲಿ ಇಂಡಿಯಾ ಪೋಸ್ಟ್ ಅನ್ನು ಆಯ್ಕೆ ಮಾಡಲು ಈಗ ಅವಕಾಶ ನೀಡಿದೆ.
11:55 AM (IST) Jan 16
Actor Dileep Shetty And Ramika Shivu: ಈಗಾಗಲೇ ಕನ್ನಡದ ಕಿರುತೆರೆ, ಹಿರಿತೆರೆ ಕಲಾವಿದರು ನಟನೆ ಜೊತೆಗೆ ಬೇರೆ ಬ್ಯುಸಿನೆಸ್ನಲ್ಲಿಯೂ ಬ್ಯುಸಿ ಆಗಿದ್ದಾರೆ. ಈಗ ‘ನೀನಾದೆ ನಾ’ ಧಾರಾವಾಹಿ ಖ್ಯಾತಿಯ ಜೋಡಿ ಹೊಸ ಜರ್ನಿ ಆರಂಭಿಸಿದೆ.
11:34 AM (IST) Jan 16
11:29 AM (IST) Jan 16
ನಟ ಧನುಷ್ ಅವರು ಒಂದಾದ ಮೇಲೆ ಒಂದರಂತೆ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಇದರ ಮಧ್ಯೆ ಅವರ ಮದುವೆ ಸುದ್ದಿ ಕೂಡ ಓಡಾಡುತ್ತಿರುತ್ತದೆ. ನಟ ಧನುಷ್ ಅವರಿಗೆ 20, 15 ವರ್ಷದ ಮಗ ಕೂಡ ಇದ್ದಾನೆ. ಈಗ ಅವರು ಮದುವೆ ಆಗಲಿದ್ದಾರೆ ಎನ್ನಲಾಗ್ತಿದೆ.
11:14 AM (IST) Jan 16
-ಕಾರಾಗೃಹ ಸುಧಾರಣೆಗೆ ಎಡಿಜಿಪಿ ಸಮಿತಿ ಶಿಫಾರಸು । ಜೈಲು ಸುಧಾರಣೆಗೆ ಸಮಿತಿಯಿಂದ 30 ಅಂಶದ ಸಲಹೆ-ಪರಂಗೆ ಹಿತೇಂದ್ರ ನೇತೃತ್ವ ಸಮಿತಿ ವರದಿ । ಉಗ್ರ, ವಿಕೃತಕಾಮಿ ಕೈಲಿ ಮೊಬೈಲ್ ಬಳಿಕ ರಚಿತವಾಗಿದ್ದ ಕಮಿಟಿ
11:09 AM (IST) Jan 16
10:48 AM (IST) Jan 16
Bigg Boss Kannada Season 12: ಬಿಗ್ ಬಾಸ್ ಮನೆಯಲ್ಲಿರುವ ಅಶ್ವಿನಿ ಗೌಡ ಅವರ ಈ ಆಸೆ ಈಡೇರೋದಿಲ್ಲ ಎಂದು ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ್ರು ಹೇಳಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
10:35 AM (IST) Jan 16
BBK 12: Kavya Shaiva's Sweet Warning to Gilli Natraj Goes Viral ಬಿಗ್ಬಾಸ್ ಕನ್ನಡ ಸೀಸನ್ 12ರ ಫಿನಾಲೆ ಸನಿಹದಲ್ಲಿರುವಾಗ, ದೊಡ್ಮನೆಯಲ್ಲಿ ಭಾವುಕ ಕ್ಷಣಗಳು ಮರುಕಳಿಸಿವೆ. ಕಾವ್ಯಾ ಶೈವ ಮತ್ತು ಗಿಲ್ಲಿ ನಟರಾಜ್ ನಡುವಿನ ಕಿತ್ತಾಟ, ಮುನಿಸು ಈಗ 'ಕ್ಷಮೆ'ಯ ರೂಪ ಪಡೆದಿದೆ.
10:08 AM (IST) Jan 16
Bigg Boss Kannada Season 12: ಗಿಲ್ಲಿ ನಟ ಅವರು ಬಿಗ್ ಬಾಸ್ ಶೋ ಗೆಲ್ಲಲಿ ಎಂದು ಅನೇಕರು ಹೇಳುತ್ತಿದ್ದಾರೆ. ಇಷ್ಟೆಲ್ಲ ಅಭಿಮಾನ, ಪ್ರೀತಿ ಸಿಕ್ಕಿರುವುದು ಯಾಕೆ? ಕಾರಣ ರಿವೀಲ್ ಮಾಡಿದ HR. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
09:26 AM (IST) Jan 16
Bigg Boss Kannada Season 12 Episode Update: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಫಿನಾಲೆಗೆ ದಿನಗಣನೆ ಶುರುವಾಗಿದೆ. ಹೀಗಿರುವಾಗ ಗಿಲ್ಲಿ ನಟ ಅವರು ಗುಡ್ನ್ಯೂಸ್ ನೀಡಿದ್ದಾರೆ.
09:07 AM (IST) Jan 16
ಗದಗದ ಲಕ್ಕುಂಡಿಯಲ್ಲಿ ಇತ್ತೀಚೆಗೆ ಪತ್ತೆಯಾದ ಚಿನ್ನದ ನಿಧಿಯ ಹಿನ್ನೆಲೆಯಲ್ಲಿ, ಪುರಾತತ್ವ ಇಲಾಖೆಯು ಕೋಟೆ ವೀರಭದ್ರೇಶ್ವರ ದೇವಸ್ಥಾನದ ಬಳಿ ಉತ್ಖನನ ಕಾರ್ಯವನ್ನು ಆರಂಭಿಸಿದೆ. ಸರ್ಕಾರವು ಇಡೀ ಗ್ರಾಮವನ್ನೇ ಸ್ಥಳಾಂತರಿಸುವ ಗಂಭೀರ ಚಿಂತನೆ ನಡೆಸುತ್ತಿದೆ.