LIVE NOW
Published : Jan 16, 2026, 07:37 AM ISTUpdated : Jan 16, 2026, 10:36 PM IST

State News Live: 2026ರ ಆರಂಭದಲ್ಲೇ ಖ್ಯಾತ ನಟಿ ಬದುಕಲ್ಲಿ ಬಿರುಗಾಳಿ, ಮದ್ವೆಯಾದ ಎರಡೇ ವರ್ಷಕ್ಕೆ ಡಿವೋರ್ಸ್

ಸಾರಾಂಶ

ಬೆಂಗಳೂರು (ಜ.16): ಅಸ್ಸಾಂ ಚುನಾವಣೆ ಸಂಬಂಧ ಶುಕ್ರವಾರ ದೆಹಲಿಗೆ ತೆರಳುತ್ತಿದ್ದು, ಅಲ್ಲಿಎಲ್ಲನಾಯಕರನ್ನು ಭೇಟಿ ಮಾಡುತ್ತೇನೆ ಎಂದು ಉಪಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಸದಾಶಿವನಗರದ ತಮ್ಮ ನಿವಾಸದ ಬಳಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವ ಕುಮಾರ್, ರಾಹುಲ್ గాంಧಿ ಅವರು ನಮ್ಮ ನಾಯಕರು. ಅವರ ಭೇಟಿಯಲ್ಲಿ ಹೊಸತೇನಿಲ್ಲ. ಅವರ ಭೇಟಿಯಾಗಿ ಕೆಲ ವಿಚಾರ ಚರ್ಚೆಮಾಡಿದ್ದೇನೆ.ಅದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ಸಾಧ್ಯವಿಲ್ಲ. ಇನ್ನು ಅಸ್ಸಾಂ ಚುನಾವಣೆ ಸಂಬಂಧ ಸಭೆಯಿದ್ದು, ಅದಕ್ಕಾಗಿ ಶುಕ್ರವಾರ ದೆಹಲಿಗೆ ತೆರಳುತ್ತಿದ್ದೇನೆ. ಅಲ್ಲಿಗೆ ಹೋದಾಗ ನಮ್ಮ ನಾಯಕರನ್ನು ಭೇಟಿ ಮಾಡುತ್ತೇನೆ ಎಂದು ತಿಳಿಸಿದರು. ಅದರೊಂದಿಗೆ ಇಂದಿನ ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್‌ಲೈವ್‌ ಬ್ಲಾಗ್‌

mandy takhar

10:36 PM (IST) Jan 16

2026ರ ಆರಂಭದಲ್ಲೇ ಖ್ಯಾತ ನಟಿ ಬದುಕಲ್ಲಿ ಬಿರುಗಾಳಿ, ಮದ್ವೆಯಾದ ಎರಡೇ ವರ್ಷಕ್ಕೆ ಡಿವೋರ್ಸ್

2026ರ ಆರಂಭದಲ್ಲೇ ಖ್ಯಾತ ನಟಿ ಬದುಕಲ್ಲಿ ಬಿರುಗಾಳಿ, ಮದುವೆಯಾದ ಎರಡೇ ವರ್ಷಕ್ಕೆ ನಟಿ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಮೂಲಕ ಹೊಸ ವರ್ಷ ಆರಂಭದಲ್ಲೇ ಸೆಲೆಬ್ರೆಟಿಗಳ ವೈವಾಹಿಕ ಜೀವನ ಭಾರಿ ಚರ್ಚೆಗೆ ಗ್ರಾಸವಾಗಿದೆ.

 

Read Full Story

08:31 PM (IST) Jan 16

ಅಪಘಾತಕ್ಕೀಡಾದ ಕುಟುಂಬಕ್ಕೆ ಪರಿಹಾರ ನೀಡುವಲ್ಲೂ ಪೊಲಿಟಿಕ್ಸ್! ಸಚಿವ ಜಮೀರ್ ಭೇಟಿ ರದ್ದಾಗಲು ರಾಜಕೀಯ ಕಾರಣವೇ?

ಹಗರಿಬೊಮ್ಮನಹಳ್ಳಿ ತಾಲೂಕಿನ ಬಂಜಾರ ಸಮುದಾಯದ ಒಂದೇ ಕುಟುಂಬದ ಐವರು ಬಾಗಲಕೋಟೆ ಬಳಿ ನಡೆದ ಟ್ರ್ಯಾಕ್ಟರ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ದುರಂತದಿಂದ ಆಘಾತಕ್ಕೊಳಗಾದ ಕುಟುಂಬಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಸಿಗಬೇಕಿದ್ದ ಪರಿಹಾರ  ರದ್ದಾಗಿದ್ದು, ಸಂತ್ರಸ್ತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.

Read Full Story

08:12 PM (IST) Jan 16

Hubballi-Ankola National Highway ಅತಿಕ್ರಮಣದ ಪರಿಣಾಮ, ಮೃತ್ಯಕೂಪವಾದ ಹುಬ್ಬಳ್ಳಿ ಅಂಕೋಲಾ ಹೆದ್ದಾರಿ!

ಹುಬ್ಬಳ್ಳಿ-ಅಂಕೋಲಾ ರಾಷ್ಟ್ರೀಯ ಹೆದ್ದಾರಿಯನ್ನು ಗ್ಯಾರೇಜ್‌ಗಳು ಮತ್ತು ಟೈರ್‌ ಅಂಗಡಿಗಳು ಅತಿಕ್ರಮಿಸಿವೆ. ಇದರಿಂದ ಚತುಷ್ಪಥ ರಸ್ತೆಯು ದ್ವಿಪಥವಾಗಿ ಮಾರ್ಪಟ್ಟಿದ್ದು, ಸವಾರರಿಗೆ ಮೃತ್ಯುಕೂಪವಾಗಿ ಪರಿಣಮಿಸಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಅಪಘಾತಗಳು ಹೆಚ್ಚಾಗುತ್ತಿದೆ.

Read Full Story

07:50 PM (IST) Jan 16

ಸಂಕ್ರಾಂತಿ ಹಬ್ಬದ ಸಂಭ್ರಮ, ಕಾಡು ಮೊಲಕ್ಕೆ ಕಿವಿ ಚುಚ್ಚಿ ಚಿನ್ನದ ಓಲೆ ಹಾಕಿ, ಪೂಜಿಸಿ ಮತ್ತೆ ಕಾಡಿಗೆ ಬಿಟ್ಟ ಜನ!

ಬೇಲೂರಿನ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ಸಂಕ್ರಾಂತಿಯಂದು ವಿಶಿಷ್ಟ ಸಂಪ್ರದಾಯವನ್ನು ಆಚರಿಸಲಾಗುತ್ತದೆ. ಈ ದಿನ ಕಾಡು ಮೊಲಕ್ಕೆ ಚಿನ್ನದ ಓಲೆ ಹಾಕಿ ಪೂಜಿಸಿ, ಕಾಡಿಗೆ ಬಿಡಲಾಗುತ್ತದೆ. ಈ ಆಚರಣೆಯು ವಿಜಯನಗರ ಕಾಲದಿಂದಲೂ ನಡೆದುಕೊಂಡು ಬಂದಿದೆ.

Read Full Story

07:33 PM (IST) Jan 16

ಕನ್ನಡ ಸಾಹಿತ್ಯದ 8 ಜ್ಞಾನಪೀಠ ವಿಜೇತರ ಸಮಾಗಮದ ಫೋಟೋ ವೈರಲ್; ಏನಿದರ ಅಸಲಿಯತ್ತು?

ಕನ್ನಡದ ಎಂಟು ಜ್ಞಾನಪೀಠ ಪ್ರಶಸ್ತಿ ವಿಜೇತರನ್ನು ಒಂದೇ ಚೌಕಟ್ಟಿನಲ್ಲಿ ತೋರಿಸುವ ಕೃತಕ ಬುದ್ಧಿಮತ್ತೆ (AI) ರಚಿತ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಲೇಖನವು ಆ ಮಹಾನ್ ಸಾಹಿತಿಗಳ ಕೊಡುಗೆಯನ್ನು ಸ್ಮರಿಸುವುದರ ಜೊತೆಗೆ, ನೆಟ್ಟಿಗರ ವ್ಯಾಪಕ ಪ್ರಶಂಸೆಗೆ ವ್ಯಕ್ತವಾಗಿದೆ.

Read Full Story

07:22 PM (IST) Jan 16

Lakshmi Nivasa - ​ ನನ್ನನ್ನು ಸಾಯಿಸಿದವನಿಂದಲೇ ಕೇಕ್​ ಕಟ್​ ಮಾಡಿಸಿ ಸನ್ಮಾನಿಸಿದರು; ನಟಿ ವಿಜಯಲಕ್ಷ್ಮಿ ಭಾವುಕ

'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ವಿಶ್ವನ ತಾಯಿ ಲಲಿತಾ ಪಾತ್ರವನ್ನು ಹಠಾತ್ತನೆ ಅಂತ್ಯಗೊಳಿಸಲಾಗಿದೆ. ಜಯಂತ್‌ನಿಂದ ತಳ್ಳಲ್ಪಟ್ಟು ಸಾವನ್ನಪ್ಪುವ ದೃಶ್ಯದ ಮೂಲಕ ನಟಿ ವಿಜಯಲಕ್ಷ್ಮಿ ಸುಬ್ರಮಣಿ ಅವರ ಪಾತ್ರಕ್ಕೆ ಮುಕ್ತಾಯ ಹಾಡಲಾಗಿದೆ.  ಇದೀಗ ಸನ್ಮಾನ ಮಾಡಿರುವ ಬಗ್ಗೆ ನಟಿ ಹೇಳಿದ್ದೇನು?

Read Full Story

07:08 PM (IST) Jan 16

ತುಮಕೂರು - ಮನೆ ದರೋಡೆಗಾಗಿ 5 ವರ್ಷದ ಮಗಳ ಮುಂದೆ ಫ್ಲವರ್ ಅಂಗಡಿ ಮಾಲೀಕನನ್ನು ಕೊಂದ ತಮಿಳುನಾಡು ಹಂತಕರು ಅರೆಸ್ಟ್

ತುಮಕೂರಿನಲ್ಲಿ ಶಾಮಿಯಾನ ಹಾಗೂ ಫ್ಲವರ್ ಡೆಕೋರೇಷನ್ ಅಂಗಡಿ ಮಾಲೀಕ ಮಂಜುನಾಥ್ ಅವರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದ್ದ ಪ್ರಕರಣವನ್ನು ಪೊಲೀಸರು 48 ಗಂಟೆಯೊಳಗೆ ಭೇದಿಸಿದ್ದಾರೆ. ಈ ಸಂಬಂಧ ತಮಿಳುನಾಡು ಮೂಲದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Read Full Story

06:48 PM (IST) Jan 16

ಬಿಗ್ ಬಾಸ್ ಟ್ರೋಫಿನೂ ಇಲ್ಲ, ಜುಟ್ಟೂ ಇಲ್ಲ; 24 ಸ್ಪರ್ಧಿಗಳನ್ನು ಹೊರಹಾಕ್ತೀನೆಂದ ಧ್ರುವಂತ್ ಗೆಟಪ್ ಚೇಂಜ್!

ಬಿಗ್ ಬಾಸ್ ಕನ್ನಡ ಸೀಸನ್ 12ರ ಫಿನಾಲೆಗೂ ಮುನ್ನವೇ ಎಲಿಮಿನೇಟ್ ಆದ ಧ್ರುವಂತ್ ತಮ್ಮ ಜುಟ್ಟು ಕತ್ತರಿಸಿ ಹೊಸ ಲುಕ್‌ನಲ್ಲಿ ಮಿಂಚುತ್ತಿದ್ದಾರೆ. ಈ ಬದಲಾವಣೆಯು ನೆಟ್ಟಿಗರಲ್ಲಿ ಚರ್ಚೆ ಹುಟ್ಟುಹಾಕಿದ್ದು, ಅವರ ವಿವಾದಾತ್ಮಕ ಬಿಗ್ ಬಾಸ್ ಜರ್ನಿ ಮತ್ತು ಮುಂದಿನ ಹಾದಿಯ ಬಗ್ಗೆ ಕುತೂಹಲ ಮೂಡಿಸಿದೆ.

Read Full Story

06:11 PM (IST) Jan 16

ಬೆಂಗಳೂರು ನಮ್ಮ ಮೆಟ್ರೋದಲ್ಲೊಂದು ಬಂಗಾರದ ಬಳೆ ಕಥೆ; ಒಂದು ಫೊಟೋ ಕೇಳಿದರೆ, ಕೈಬಳೆ ಬಿಚ್ಚಿಕೊಟ್ಟ ಅಪರಿಚಿತೆ!

ಮೆಟ್ರೋದಲ್ಲಿ ಪ್ರಯಾಣಿಸುವಾಗ ಆದ ಒಂದು ನಂಬಲಾಗದ ಅನುಭವವನ್ನು ಯುವತಿಯೊಬ್ಬಳು ಹಂಚಿಕೊಂಡಿದ್ದಾಳೆ. ಪಕ್ಕದಲ್ಲಿ ಕುಳಿತಿದ್ದ ಹುಡುಗಿಯ ಚಿನ್ನದ ಬಳೆ ನೋಡಿ ಇಷ್ಟವಾಯಿತು. ಫೋಟೋ ತೆಗೆದುಕೊಳ್ಳಬಹುದೇ ಎಂದು ಕೇಳಿದಾಗ, ಆ ಹುಡುಗಿ ಕೊಟ್ಟ ಉತ್ತರಕ್ಕೆ ಯುವತಿ ದಂಗಾಗಿದ್ದಾಳೆ.

Read Full Story

05:54 PM (IST) Jan 16

ಮುಂಬೈ ಪಾಲಿಕೆ ಚುನಾವಣೆಗಾಗಿ ಷೇರು ಮಾರುಕಟ್ಟೆ ಕ್ಲೋಸ್! ಜೆರೋಧಾ ಸಿಇಒ ನಿತಿನ್ ಕಾಮತ್ ಕೆಂಡಾಮಂಡಲ

ಮುಂಬೈ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆಗೆ ರಜೆ ಘೋಷಿಸಲಾಗಿತ್ತು. ಈ ನಿರ್ಧಾರವನ್ನು ಜೆರೋಧಾ ಸಿಇಒ ನಿತಿನ್ ಕಾಮತ್ ತೀವ್ರವಾಗಿ ಟೀಕಿಸಿದ್ದು, ಜಾಗತಿಕವಾಗಿ ಸಂಪರ್ಕ ಹೊಂದಿರುವ ಮಾರುಕಟ್ಟೆಯನ್ನು ಸ್ಥಳೀಯ ಚುನಾವಣೆಗಾಗಿ ಮುಚ್ಚುವುದು ಕಳಪೆ ಯೋಜನೆ ಎಂದು ಹೇಳಿದ್ದಾರೆ. 

Read Full Story

04:45 PM (IST) Jan 16

ಸಿನಿಮಾನೇ ಜೀವನ ಅನ್ಕೊಂಡು ಆಕ್ಸಿಡೆಂಟ್ ಮಾಡಿದ ಆರೋಪಿಗಳು; ದೃಶ್ಯಂ ಶೈಲಿಯಲ್ಲಿ ತಪ್ಪಿಸಿಕೊಂಡವರು ಲಾಕ್!

ಬೆಂಗಳೂರಿನಲ್ಲಿ ಅಪಘಾತದಂತೆ ಬಿಂಬಿಸಿ ವ್ಯಕ್ತಿಯೊಬ್ಬರ ಕೊಲೆಗೆ ಯತ್ನಿಸಲಾಗಿದೆ. ಬೈಕ್‌ಗೆ ಟೆಂಪೋ ಡಿಕ್ಕಿ ಹೊಡೆಸಿದ ನಂತರ, ಆರೋಪಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದು, ವೈದ್ಯಕೀಯ ವರದಿಯಿಂದ ಸತ್ಯ ಬಯಲಾಗಿದೆ. ಐವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Read Full Story

04:38 PM (IST) Jan 16

ಹೆಲೋ, Bigg Boss.. ರಕ್ಷಿತಾ ಟ್ರೋಫಿ ಗೆಲ್ತಾಳೆ ಅಂತ ಆ ವಿಷಯ ತೋರಿಸಿಲ್ಲ, Live ನೋಡಿದ್ವಿ - ವೀಕ್ಷಕರ ಆಗ್ರಹ

BBK 12 Episode Update: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ರಕ್ಷಿತಾ ಅವರಿಗೆ ಸಂಬಂಧಪಟ್ಟ ಆ ದೃಶ್ಯವನ್ನು ಬಿಗ್‌ ಬಾಸ್‌ ತೋರಿಸಿಲ್ಲ ಎಂದು ವೀಕ್ಷಕರು ಆರೋಪ ಮಾಡುತ್ತಿದ್ದಾರೆ. 

Read Full Story

04:15 PM (IST) Jan 16

BBK 12 - ಕತ್ತಲೆ ರೂಮ್‌ನಲ್ಲಿ ಕೊನೆಗೂ ಆ ಘಟನೆ ನೆನಪಿಸಿಕೊಂಡು ಕಣ್ಣೀರಿಟ್ಟ ಗಿಲ್ಲಿ ನಟ! ನಗಿಸುವರಿಗೂ ನೋವಿರುತ್ತೆ!

Bigg Boss Kannada Season 12 Episode: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಗ್ರ್ಯಾಂಡ್‌ ಫಿನಾಲೆ ವೀಕ್‌ ಶುರುವಾಗಿದೆ. ಇನ್ನೆರಡು ದಿನಗಳಲ್ಲಿ ಈ ಶೋಗೆ ತೆರೆ ಬೀಳುವುದು. ಹೀಗಿರುವಾಗ ಸ್ಪರ್ಧಿಗಳು ಕಷ್ಟದ ಬಗ್ಗೆ ಮಾತನಾಡಿದ್ದಾರೆ.

 

Read Full Story

04:11 PM (IST) Jan 16

ಯಾದಗಿರಿ - ಅಪಘಾತವನ್ನು ಕೊಲೆಯೆಂದು ಒಪ್ಪಿಕೊಳ್ಳುವಂತೆ ಕ್ಯಾನ್ಸರ್ ರೋಗಿಯ ಆ ಜಾಗಕ್ಕೆ ರಕ್ತ ಬರುವಂತೆ ಹೊಡೆದ ಖಾಕಿ!

ಕೆಂಭಾವಿ ಪಿಎಸ್ಐ ಅಮೋಜಿ ಕಾಂಬಳೆ, ಅಪಘಾತ ಪ್ರಕರಣವನ್ನು ಕೊಲೆ ಎಂದು ಒಪ್ಪಿಕೊಳ್ಳುವಂತೆ ಒತ್ತಾಯಿಸಿ ವಿಚಾರಣೆ ವೇಳೆ ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಹಲ್ಲೆಗೊಳಗಾದ ಕ್ಯಾನ್ಸರ್ ಪೀಡಿತ ವ್ಯಕ್ತಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Read Full Story

04:06 PM (IST) Jan 16

ಇಲ್ಲಿ ಜಾತ್ರೆ ನಡೆಯುತ್ತಿಲ್ಲ, ಸೆಲೆಬ್ರಿಟಿ ಬರುತ್ತಿಲ್ಲ - ಆದ್ರೆ ಓಂ-112 ಹೋರಿ ಅಂತಿಮ ದರ್ಶನಕ್ಕೆ ಹರಿದುಬಂದ ಜನಸಾಗರ

ಹಾವೇರಿ ಜಿಲ್ಲೆಯ ಕರ್ಜಗಿ ಗ್ರಾಮದ ಪ್ರಸಿದ್ಧ 'ಓಂ-112' ಹೋರಿ ಅನಾರೋಗ್ಯದಿಂದ ನಿಧನವಾಗಿದೆ. ಹೋರಿ ಬೆದರಿಸುವ ಸ್ಪರ್ಧೆಗಳ ಅಪ್ರತಿಮ ವೀರನಾಗಿದ್ದ ಈ ಹೋರಿಯ ಅಂತಿಮ ದರ್ಶನಕ್ಕಾಗಿ ಸಾವಿರಾರು ಅಭಿಮಾನಿಗಳು ಸೇರಿ, ಹೂವಿನಿಂದ ಅಲಂಕರಿಸಿದ ವಾಹನದಲ್ಲಿ ಭವ್ಯ ಮೆರವಣಿಗೆ ನಡೆಸಿದರು.
Read Full Story

03:17 PM (IST) Jan 16

ರಿಲಯನ್ಸ್ ಜಿಯೋ ಭರ್ಜರಿ ಪ್ಲಾನ್, 90 ದಿನ ವ್ಯಾಲಿಟಿ ಜೊತೆ 200 ಜಿಬಿ ಡೇಟಾ, ಐಪಿಎಲ್ ಉಚಿತ

ರಿಲಯನ್ಸ್ ಜಿಯೋ ಭರ್ಜರಿ ಪ್ಲಾನ್, ಸದ್ಯ ಲಭ್ಯವಿರುವ ಉತ್ತಮ ರೀಚಾರ್ಜ್ ಪಾನ್ ಹಾಗೂ ಆಫರ್‌ಗಳಲ್ಲಿ ಜಿಯೋ ಹೊರತಂದ 899 ರೂಪಾಯಿ ಪ್ಲಾನ್ ಮುಂಚೂಣಿಯಲ್ಲಿದೆ. 90 ದಿನ ವ್ಯಾಲಿಟಿಡಿ ಜೊತೆಗೆ 200 ಜಿಬಿ ಉಚಿತ.

 

Read Full Story

03:02 PM (IST) Jan 16

ಆಸ್ತಿ ದಾಹಕ್ಕೆ ತಮ್ಮನ ನೆತ್ತರು ಹರಿಸಿದ ಅಣ್ಣ - ಹಸೆಮಣೆ ಏರಬೇಕಿದ್ದ ತಮ್ಮನಿಗೆ ಚಟ್ಟ ಕಟ್ಟಿದ ಕಟುಕ ಸಹೋದರ!

ಮಂಡ್ಯ ತಾಲೂಕಿನ ಮಾಯಪ್ಪನಹಳ್ಳಿಯಲ್ಲಿ, ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಮದುವೆಗೆ ಐದು ದಿನ ಬಾಕಿ ಇರುವಾಗ ಯೋಗೇಶ್ ಎಂಬ ಯುವಕನನ್ನು ಸ್ವಂತ ಅಣ್ಣನೇ ತನ್ನ ಮಕ್ಕಳೊಂದಿಗೆ ಸೇರಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

Read Full Story

02:44 PM (IST) Jan 16

ಬಿಗ್ ಬಾಸ್ ಫಿನಾಲೆಗೂ ಮುನ್ನ ಬಿಗ್ ಟ್ವಿಸ್ಟ್‌; ಗಿಲ್ಲಿಯನ್ನ ಬಿಗಿದಪ್ಪಿಕೊಂಡ ಅಶ್ವಿನಿ ಗೌಡ!

ಬಿಗ್ ಬಾಸ್ ಮನೆಯಲ್ಲಿ ಹಾವು-ಮುಂಗುಸಿಯಂತೆ ಸದಾ ಜಗಳವಾಡುತ್ತಿದ್ದ ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ, ಫಿನಾಲೆಗೂ ಮುನ್ನ ತಮ್ಮೆಲ್ಲಾ ದ್ವೇಷ ಮರೆತಿದ್ದಾರೆ. ಗಿಲ್ಲಿ ಕ್ಷಮೆ ಕೇಳಿದರೆ, ಅಶ್ವಿನಿ ಅಪ್ಪಿಕೊಂಡು ಪಾಠ ಕಲಿತಿದ್ದಾಗಿ ಹೇಳುವ ಮೂಲಕ ತಮ್ಮ ವೈರತ್ವಕ್ಕೆ ಅಂತ್ಯ ಹಾಡಿದ್ದಾರೆ.
Read Full Story

02:32 PM (IST) Jan 16

ಲಕ್ಕುಂಡಿ ರಹಸ್ಯ, ಶ್ರೀರಾಮನ ಕಾಲದ ಇತಿಹಾಸ ಲಕ್ಕುಂಡಿಯಲ್ಲಿ ಅಡಗಿದೆ - ಇತಿಹಾಸ ತಜ್ಞ

ಲಕ್ಕುಂಡಿ ಗ್ರಾಮದಲ್ಲಿ ಚಿನ್ನದ ನಿಧಿ ಪತ್ತೆಯಾದ ನಂತರ, ಪುರಾತತ್ವ ಇಲಾಖೆಯು ಉತ್ಖನನ ಕಾರ್ಯವನ್ನು ಆರಂಭಿಸಿದೆ. ರಾಮಾಯಣ ಕಾಲದ ನಂಟು ಹಾಗೂ 101 ದೇವಾಲಯಗಳ ಇತಿಹಾಸ ಹೊಂದಿರುವ ಈ ಗ್ರಾಮದಲ್ಲಿ,  ಐತಿಹಾಸಿಕ ಸತ್ಯಗಳನ್ನು ಹೊರತರಲಿದೆ ಎಂದು ನಿರೀಕ್ಷಿಸಲಾಗಿದೆ.

Read Full Story

02:01 PM (IST) Jan 16

BBK 12 ಗಿಲ್ಲಿ ನಟನ ಗುಣ ಹೇಳುತ್ತಲೇ ಬಿಗ್​ಬಾಸ್​ ವಿನ್ನರ್ ಯಾರೆಂದು​ ಹಿಂಟ್​ ಕೊಟ್ಟೇ ಬಿಟ್ರು ಶಿವರಾಜ್​ ಕುಮಾರ್!

ಬಿಗ್​ಬಾಸ್​ 12ರ ಫಿನಾಲೆಗೆ ಎರಡೇ ದಿನಗಳು ಬಾಕಿಯಿದ್ದು, ಗಿಲ್ಲಿ ನಟನ ಹವಾ ಜೋರಾಗಿದೆ. ಇದೀಗ ನಟ ಶಿವರಾಜ್​ ಕುಮಾರ್​ ಅವರು ಗಿಲ್ಲಿ ನಟನ ಸಹಜ ಗುಣವನ್ನು ಮೆಚ್ಚಿಕೊಂಡಿದ್ದು, ಈ ಬಾರಿ ಯಾರು ಗೆಲ್ಲುತ್ತಾರೆ ಎನ್ನುವ ಬಗ್ಗೆ ಪರೋಕ್ಷವಾಗಿ ಹಿಂಟ್​ ಕೊಟ್ಟರು. 

Read Full Story

01:43 PM (IST) Jan 16

Bigg Boss ನೆಚ್ಚಿನ ಸ್ಪರ್ಧಿಗೆ ವೋಟ್​ ಹಾಕಲು ಕೊನೆ ಅವಕಾಶ - ಯಾವಾಗ, ಹೇಗೆ? ಇಲ್ಲಿದೆ ಫುಲ್​ ಡಿಟೇಲ್ಸ್​

ಬಿಗ್​ಬಾಸ್​ 12ರ ಗ್ರ್ಯಾಂಡ್ ಫಿನಾಲೆ ಇದೇ 18ರಂದು ನಡೆಯಲಿದ್ದು, ಗಿಲ್ಲಿ ನಟ, ಅಶ್ವಿನಿ ಗೌಡ ಸೇರಿದಂತೆ ಆರು ಮಂದಿ ಸ್ಪರ್ಧಿಗಳಿದ್ದಾರೆ. ವೀಕ್ಷಕರ ಮತಗಳ ಆಧಾರದ ಮೇಲೆ ವಿನ್ನರ್​ ನಿರ್ಧಾರವಾಗಲಿದ್ದು, ಜಿಯೋ ಹಾಟ್​ಸ್ಟಾರ್​ ಮೂಲಕ  ಹೇಗೆ, ಯಾವಾಗ ವೋಟ್​ ಹಾಕ್ಬೇಕು? ಇಲ್ಲಿದೆ ಡಿಟೇಲ್ಸ್​

Read Full Story

01:32 PM (IST) Jan 16

Kannada Celebrity Lovers - ಪ್ರೀತಿಯಲ್ಲಿ ಬಿದ್ದಿರುವ ಕನ್ನಡ ಕಿರುತೆರೆಯ ಜೋಡಿಗಳೂ 2026ರಲ್ಲಿ ಮದುವೆ ಆಗ್ತಾರಾ?

Kannada Celebrity Lovers: 2025ರಲ್ಲಿ ಅನೇಕ ತಾರೆಯರು ವೈವಾಹಿಕ ಜೀವನಕ್ಕೆ ಕಾಲಿಟ್ಟರು, ಪಾಲಕರಾಗಿ ಬಡ್ತಿ ಪಡೆದರು. ಈಗ ಕನ್ನಡ ಕಿರುತೆರೆಯಲ್ಲಿ ಕೆಲ ಜೋಡಿಗಳು ಮದುವೆ ಆಗಲಿದೆಯಾ ಎಂದು ಕಾದು ನೋಡಬೇಕಿದೆ. ಹಾಗಾದರೆ ಯಾರದು?

 

Read Full Story

01:28 PM (IST) Jan 16

ಗಲ್ಲಿ ಗಲ್ಲಿಲೂ ಗಿಲ್ಲಿಯದ್ದೇ ಹವಾ - ಇಲ್ಲಿ ಸಿಗುತ್ತೆ ರಜನಿಕಾಂತ್ ಫೇವರೇಟ್‌ ಬಿಸಿ ಬಿಸಿ 'ಗಿಲ್ಲಿ ಬಿರಿಯಾನಿ'!

ಬಿಗ್ ಬಾಸ್ ಕನ್ನಡ ಸೀಸನ್ 12 ಫಿನಾಲೆ ಹತ್ತಿರವಾಗಿದ್ದು, ಸ್ಪರ್ಧಿ ಗಿಲ್ಲಿ ಗೆಲ್ಲುವ ನೆಚ್ಚಿನ ಸ್ಪರ್ಧಿಯಾಗಿದ್ದಾರೆ. ಗಿಲ್ಲಿಯ ಜನಪ್ರಿಯತೆಯಿಂದಾಗಿ, ಚೆನ್ನೈನ 'ಗಿಲ್ಲಿ ಬಿರಿಯಾನಿ' ಕೂಡ ಪ್ರಸಿದ್ಧವಾಗಿದ್ದು, ಈ ಬಿರಿಯಾನಿಗೂ ಸೂಪರ್‌ಸ್ಟಾರ್ ರಜನಿಕಾಂತ್‌ಗೂ ಒಂದು ವಿಶೇಷ ನಂಟಿದೆ.
Read Full Story

01:09 PM (IST) Jan 16

ಬಿಗ್ ಬಾಸ್ ಬೆನ್ನಿಗೆ ಬಿದ್ದ ರಣಹದ್ದು; ಸರ್ಕಾರದಿಂದ ನೋಟೀಸ್ ಜಾರಿ, ಫಿನಾಲೆಯಲ್ಲಿ ಸ್ಪಷ್ಟನೆ ಕೊಡ್ತಾರಾ ಸುದೀಪ್!

'ಬಿಗ್ ಬಾಸ್ ಕನ್ನಡ ಸೀಸನ್ 12' ಕಾರ್ಯಕ್ರಮದಲ್ಲಿ ಅಳಿವಿನಂಚಿನಲ್ಲಿರುವ ರಣಹದ್ದುಗಳ ಬಗ್ಗೆ ತಪ್ಪು ಮಾಹಿತಿ ನೀಡಿದ್ದಕ್ಕಾಗಿ ಅರಣ್ಯ ಇಲಾಖೆ ನೋಟಿಸ್ ಜಾರಿ ಮಾಡಿದೆ. ನಿರೂಪಕ ಕಿಚ್ಚ ಸುದೀಪ್ ಅವರ ಹೇಳಿಕೆಯನ್ನು ವಿರೋಧಿಸಿ, ರಣಹದ್ದುಗಳ ನೈಜ ಸ್ವಭಾವದ ಬಗ್ಗೆ ವಾಹಿನಿಯಲ್ಲಿ ಸ್ಪಷ್ಟೀಕರಣ ನೀಡುವಂತೆ ಸೂಚಿಸಿದೆ.

Read Full Story

12:55 PM (IST) Jan 16

ರೋಹಿತ್ ಶರ್ಮಾ ಪದಚ್ಯುತಿ ರಹಸ್ಯ - ಗೌತಮ್ ಗಂಭೀರ್ ಕೈವಾಡದ ಶಂಕೆ ವ್ಯಕ್ತಪಡಿಸಿದ ಮಾಜಿ ಕ್ರಿಕೆಟರ್!

ಮಾಜಿ ಭಾರತೀಯ ಆಟಗಾರ ಮನೋಜ್ ತಿವಾರಿ, ರೋಹಿತ್ ಶರ್ಮಾ ಅವರನ್ನು ಏಕದಿನ ನಾಯಕತ್ವದಿಂದ ಕೆಳಗಿಳಿಸಿದ್ದರ ಹಿಂದೆ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಕೈವಾಡವಿದೆ ಎಂದು ಆರೋಪಿಸಿದ್ದಾರೆ. ಗಂಭೀರ್ ಅವರ ಒತ್ತಡದಿಂದಲೇ ಅಜಿತ್ ಅಗರ್ಕರ್ ಈ ನಿರ್ಧಾರ ತೆಗೆದುಕೊಂಡಿದ್ದರ ಬಗ್ಗೆ ತಿವಾರಿ ಆಕ್ಷೇಪ ಹೊರಹಾಕಿದ್ದಾರೆ.

Read Full Story

12:42 PM (IST) Jan 16

ಬಳ್ಳಾರಿಯಲ್ಲಿ ಎಣ್ಣೆ ಟ್ಯಾಂಕರ್ ಪಲ್ಟಿ - ಬಕೆಟ್, ಚೊಂಬು, ಬಿಂದಿಗೆ ಹಿಡಿದು ಓಡೋಡಿ ಬಂದ ಜನ!

ಕಂಪ್ಲಿ ತಾಲ್ಲೂಕಿನ ದೇವಲಾಪುರ ಬಳಿ ಪಾಮ್ ಆಯಿಲ್ ಸಾಗಿಸುತ್ತಿದ್ದ ಟ್ಯಾಂಕರ್ ಲಾರಿಯೊಂದು ಪಲ್ಟಿಯಾಗಿ, ರಸ್ತೆಯ ಮೇಲೆ ಎಣ್ಣೆ ಸೋರಿಕೆಯಾಗಿದೆ. ಈ ಎಣ್ಣೆಯನ್ನು ಸಂಗ್ರಹಿಸಲು ಸುತ್ತಮುತ್ತಲಿನ ಗ್ರಾಮಸ್ಥರು ಮುಗಿಬಿದ್ದಿದ್ದು, ಅದೃಷ್ಟವಶಾತ್ ಚಾಲಕ ಮತ್ತು ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Read Full Story

12:40 PM (IST) Jan 16

ಗಂಡನ ಮೇಲಿನ ಕೋಪಕ್ಕೆ 4 ವರ್ಷದ ಮಗಳನ್ನೇ ಸಜೀವ ದಹನ ಮಾಡಲು ಮುಂದಾದ ತಾಯಿ; ತಾನೂ ಬೆಂಕಿ ಹಚ್ಚಿಕೊಂಡು ಸಾವು!

ಬೆಂಗಳೂರಿನ ಸಂಜಯನಗರದಲ್ಲಿ ಪತಿಯೊಂದಿಗಿನ ಜಗಳದಿಂದ ಮನನೊಂದ ನೇಪಾಳ ಮೂಲದ ಮಹಿಳೆಯೊಬ್ಬರು, ತಮ್ಮ 4 ವರ್ಷದ ಮಗುವಿನೊಂದಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದಾರೆ. ಈ ದುರಂತದಲ್ಲಿ ತಾಯಿ ಸೀತಾ ಸ್ಥಳದಲ್ಲೇ ಮೃತಪಟ್ಟಿದ್ದು, ಮಗು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ.
Read Full Story

12:18 PM (IST) Jan 16

ಲಕ್ಕುಂಡಿ ಉತ್ಖನನದಲ್ಲಿ ಸಿಗೋದು ನಿಧಿಯಲ್ಲ, ಬೇರೆಯದೇ ಕುರುಹು ಬಿಚ್ಚಿಟ್ಟ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್!

ಗದಗದ ಲಕ್ಕುಂಡಿಯಲ್ಲಿ ಇತ್ತೀಚೆಗೆ ನಿಧಿ ಪತ್ತೆಯಾದ ಬೆನ್ನಲ್ಲೇ, ಪುರಾತತ್ವ ಇಲಾಖೆಯು ಅಧಿಕೃತ ಉತ್ಖನನ ಆರಂಭಿಸಿದೆ. ಇದು ಪೂರ್ವನಿಯೋಜಿತ ಕಾರ್ಯವಾಗಿದ್ದು, ಚಾಲುಕ್ಯರ ಕಾಲದ ಟಂಕಸಾಲೆ ಮತ್ತು ದೇಗುಲಗಳ ಕುರುಹುಗಳನ್ನು ಪತ್ತೆಹಚ್ಚುವುದು ಇದರ ಉದ್ದೇಶವಾಗಿದೆ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
Read Full Story

12:16 PM (IST) Jan 16

ಪ್ರೇಕ್ಷಕನಿಗೆ ಸಿನಿಮಾಗೆ ರೇಟಿಂಗ್ ಕೊಡುವ ಹಕ್ಕಿಲ್ಲವೇ!

ಮೊದಲು ದರ್ಶನ್‌ ನಟನೆಯ ‘ಡೆವಿಲ್‌’ ಚಿತ್ರಕ್ಕೆ ರೇಟಿಂಗ್‌ ಕೊಡುವುದನ್ನು ನಿರ್ಬಂಧಿಸಲಾಯಿತು. ಅದರ ಬೆನ್ನಲ್ಲೇ ಸುದೀಪ್‌ ನಟನೆಯ ‘ಮಾರ್ಕ್‌’, ಶಿವಣ್ಣ, ಉಪೇಂದ್ರ ಹಾಗೂ ರಾಜ್‌ ಬಿ.ಶೆಟ್ಟಿ ನಟನೆಯ ‘45’ ಚಿತ್ರ ವಿಮರ್ಶೆ ಮಾಡದಂತೆ ನಿರ್ಬಂಧ ಹೇರಲಾಯಿತು

Read Full Story

12:01 PM (IST) Jan 16

ಅಂಚೆ ಇಲಾಖೆಯ ಹೊಸ ಯುಗ ಆರಂಭ, ಲಾಜಿಸ್ಟಿಕ್ಸ್ ಸೇವೆಗೆ ಎಂಟ್ರಿ ಮೊದಲ ಡೆಲಿವರಿ ಯಶಸ್ವಿ

ಅಂಚೆ ಇಲಾಖೆಯು  ONDC  ಪ್ಲಾಟ್‌ಫಾರ್ಮ್‌ನಲ್ಲಿ ಲಾಜಿಸ್ಟಿಕ್ಸ್ ಸೇವಾ ಪೂರೈಕೆದಾರರಾಗಿ ಅಧಿಕೃತವಾಗಿ ಸೇವೆ ಆರಂಭಿಸಿದೆ. ತನ್ನ ಮೊದಲ ONDC ಪಾರ್ಸೆಲ್ ಅನ್ನು ಯಶಸ್ವಿಯಾಗಿ ವಿತರಿಸುವ ಮೂಲಕ, ಮಾರಾಟಗಾರರಿಗೆ 'ಕ್ಲಿಕ್ ಅಂಡ್ ಬುಕ್' ಮಾದರಿಯಲ್ಲಿ ಇಂಡಿಯಾ ಪೋಸ್ಟ್ ಅನ್ನು ಆಯ್ಕೆ ಮಾಡಲು ಈಗ ಅವಕಾಶ ನೀಡಿದೆ.

Read Full Story

11:55 AM (IST) Jan 16

ರಿಯಲ್‌ ಆಗಿ, ಜೊತೆಯಾಗಿ ಹೊಸ ಜರ್ನಿ ಆರಂಭಿಸಿದ Neenadhe Naa Serial ದಿಲೀಪ್‌ ಶೆಟ್ಟಿ, ರಮಿಕಾ ಶಿವು; ವೀಕ್ಷಕರಿಂದ ಶುಭಾಶಯ

Actor Dileep Shetty And Ramika Shivu: ಈಗಾಗಲೇ ಕನ್ನಡದ ಕಿರುತೆರೆ, ಹಿರಿತೆರೆ ಕಲಾವಿದರು ನಟನೆ ಜೊತೆಗೆ ಬೇರೆ ಬ್ಯುಸಿನೆಸ್‌ನಲ್ಲಿಯೂ ಬ್ಯುಸಿ ಆಗಿದ್ದಾರೆ. ಈಗ ‘ನೀನಾದೆ ನಾ’ ಧಾರಾವಾಹಿ ಖ್ಯಾತಿಯ ಜೋಡಿ ಹೊಸ ಜರ್ನಿ ಆರಂಭಿಸಿದೆ.

 

Read Full Story

11:34 AM (IST) Jan 16

ಚಿನ್ನದ ನಿಧಿ ಸಿಕ್ಕ ಲಕ್ಕುಂಡಿಯಲ್ಲಿ ಸರ್ಕಾರದಿಂದ ಉತ್ಖನನ; ಚಾಲುಕ್ಯರ ಚಿನ್ನದ ಕೊಪ್ಪರಿಗೆ ಸಿಗುವ ಕುತೂಹಲ!

ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ಪುರಾತತ್ವ ಇಲಾಖೆಯು ಉತ್ಖನನ ಕಾರ್ಯವನ್ನು ಆರಂಭಿಸಿದೆ. ಇತ್ತೀಚೆಗೆ ಸ್ಥಳೀಯ ಕುಟುಂಬವೊಂದಕ್ಕೆ ನಿಧಿ ಸಿಕ್ಕ ಹಿನ್ನೆಲೆಯಲ್ಲಿ, ಚಾಲುಕ್ಯರ ಕಾಲದ ಟಂಕಸಾಲೆ, ಸುರಂಗ ಮಾರ್ಗ ಹಾಗೂ ಇನ್ನಷ್ಟು ಐತಿಹಾಸಿಕ ನಿಕ್ಷೇಪಗಳು ಪತ್ತೆಯಾಗುವ ಕುತೂಹಲ ಹೆಚ್ಚಾಗಿದೆ.
Read Full Story

11:29 AM (IST) Jan 16

20 ವರ್ಷದ ಮಗನ ಮುಂದೆ 10 ವರ್ಷದ ಕಿರಿಯ ನಟಿಯನ್ನು ಮದುವೆ ಆಗೋಕೆ ರೆಡಿಯಾದ್ರಾ Actor Dhanush?

ನಟ ಧನುಷ್‌ ಅವರು ಒಂದಾದ ಮೇಲೆ ಒಂದರಂತೆ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಇದರ ಮಧ್ಯೆ ಅವರ ಮದುವೆ ಸುದ್ದಿ ಕೂಡ ಓಡಾಡುತ್ತಿರುತ್ತದೆ. ನಟ ಧನುಷ್‌ ಅವರಿಗೆ 20, 15 ವರ್ಷದ ಮಗ ಕೂಡ ಇದ್ದಾನೆ. ಈಗ ಅವರು ಮದುವೆ ಆಗಲಿದ್ದಾರೆ ಎನ್ನಲಾಗ್ತಿದೆ.

 

Read Full Story

11:14 AM (IST) Jan 16

ಜೈಲಿನ ಬ್ಯಾರಕ್‌ಗಳಿಗೆ ಸಿಸಿಟಿವಿ ಕ್ಯಾಮೆರಾ!

-ಕಾರಾಗೃಹ ಸುಧಾರಣೆಗೆ ಎಡಿಜಿಪಿ ಸಮಿತಿ ಶಿಫಾರಸು । ಜೈಲು ಸುಧಾರಣೆಗೆ ಸಮಿತಿಯಿಂದ 30 ಅಂಶದ ಸಲಹೆ-ಪರಂಗೆ ಹಿತೇಂದ್ರ ನೇತೃತ್ವ ಸಮಿತಿ ವರದಿ । ಉಗ್ರ, ವಿಕೃತಕಾಮಿ ಕೈಲಿ ಮೊಬೈಲ್‌ ಬಳಿಕ ರಚಿತವಾಗಿದ್ದ ಕಮಿಟಿ

Read Full Story

11:09 AM (IST) Jan 16

ಡಿಆರ್‌ಡಿಒ ಇಂಜಿನಿಯರ್‌ಗಳಿಗೆ ಅಚ್ಚರಿಯ ಕರೆ! ಬೆಂಗಳೂರಿನಲ್ಲಿರುವ CABS ವಿಭಾಗದ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರಿನ DRDO CABS ಸಂಸ್ಥೆಯು 10 ಜೂನಿಯರ್ ರಿಸರ್ಚ್ ಫೆಲೋ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಇಂಜಿನಿಯರಿಂಗ್ ಪದವೀಧರರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಆಯ್ಕೆಯಾದವರಿಗೆ ಮಾಸಿಕ ₹37,000 ಸಂಬಳ ನೀಡಲಾಗುತ್ತದೆ. ವಾಕ್-ಇನ್ ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
Read Full Story

10:48 AM (IST) Jan 16

ಮ್ಯಾಚ್‌ ಫಿಕ್ಸಿಂಗ್‌ ಇಲ್ಲ, BBK 12 ಅಶ್ವಿನಿ ಗೌಡರ ಈ ಆಸೆ ಈಡೇರಲ್ಲ - ನಾರಾಯಣಗೌಡ್ರು ಒಪನ್‌ ಹೇಳಿಕೆ

Bigg Boss Kannada Season 12: ಬಿಗ್‌ ಬಾಸ್‌ ಮನೆಯಲ್ಲಿರುವ ಅಶ್ವಿನಿ ಗೌಡ ಅವರ ಈ ಆಸೆ ಈಡೇರೋದಿಲ್ಲ ಎಂದು ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ್ರು ಹೇಳಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

 

Read Full Story

10:35 AM (IST) Jan 16

'ಬ್ಲಾಕ್‌ ಮಾಡ್ತಿನಿ..' ಎಂದು ಸ್ವೀಟ್‌ ವಾರ್ನಿಂಗ್‌ ಕೊಟ್ಟ ಕಾವ್ಯಾ, I Am Waiting.. ಎಂದ ಗಿಲ್ಲಿ!

BBK 12: Kavya Shaiva's Sweet Warning to Gilli Natraj Goes Viral ಬಿಗ್‌ಬಾಸ್ ಕನ್ನಡ ಸೀಸನ್ 12ರ ಫಿನಾಲೆ ಸನಿಹದಲ್ಲಿರುವಾಗ, ದೊಡ್ಮನೆಯಲ್ಲಿ ಭಾವುಕ ಕ್ಷಣಗಳು ಮರುಕಳಿಸಿವೆ. ಕಾವ್ಯಾ ಶೈವ ಮತ್ತು ಗಿಲ್ಲಿ ನಟರಾಜ್ ನಡುವಿನ ಕಿತ್ತಾಟ, ಮುನಿಸು ಈಗ 'ಕ್ಷಮೆ'ಯ ರೂಪ ಪಡೆದಿದೆ.

 

Read Full Story

10:08 AM (IST) Jan 16

BBK 12 ಗಿಲ್ಲಿ ನಟನಿಗೆ ರಾಜಯೋಗ; ಏಕಾಏಕಿ ಯಶಸ್ಸು ಬಂದಿರೋದ್ಯಾಕೆ? ಸತ್ಯ ರಿವೀಲ್‌ ಮಾಡಿದ ಕಂಪೆನಿ HR

Bigg Boss Kannada Season 12: ಗಿಲ್ಲಿ ನಟ ಅವರು ಬಿಗ್ ಬಾಸ್‌ ಶೋ ಗೆಲ್ಲಲಿ ಎಂದು ಅನೇಕರು ಹೇಳುತ್ತಿದ್ದಾರೆ. ಇಷ್ಟೆಲ್ಲ ಅಭಿಮಾನ, ಪ್ರೀತಿ ಸಿಕ್ಕಿರುವುದು ಯಾಕೆ? ಕಾರಣ ರಿವೀಲ್‌ ಮಾಡಿದ HR. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

 

Read Full Story

09:26 AM (IST) Jan 16

BBK 12 - ಫಿನಾಲೆಗೆ 2 ದಿನ ಇರುವಾಗಲೇ, ಗುಡ್‌ನ್ಯೂಸ್‌ ಕೊಟ್ಟ ಗಿಲ್ಲಿ ನಟ; ವೀಕ್ಷಕರು ಫುಲ್‌ ಖುಷ್!

Bigg Boss Kannada Season 12 Episode Update: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಫಿನಾಲೆಗೆ ದಿನಗಣನೆ ಶುರುವಾಗಿದೆ. ಹೀಗಿರುವಾಗ ಗಿಲ್ಲಿ ನಟ ಅವರು ಗುಡ್‌ನ್ಯೂಸ್‌ ನೀಡಿದ್ದಾರೆ.

 

Read Full Story

09:07 AM (IST) Jan 16

ಚಿನ್ನಾಭರಣ ಸಿಕ್ಕಿದ ಚಾಲುಕ್ಯರ ತಾಣ ಲಕ್ಕುಂಡಿಯಲ್ಲಿ ಇಂದಿನಿಂದ ಉತ್ಪನನ ಕಾರ್ಯ, ಇಡೀ ಗ್ರಾಮ ಸ್ಥಳಾಂತರ?

ಗದಗದ ಲಕ್ಕುಂಡಿಯಲ್ಲಿ ಇತ್ತೀಚೆಗೆ ಪತ್ತೆಯಾದ ಚಿನ್ನದ ನಿಧಿಯ ಹಿನ್ನೆಲೆಯಲ್ಲಿ, ಪುರಾತತ್ವ ಇಲಾಖೆಯು ಕೋಟೆ ವೀರಭದ್ರೇಶ್ವರ ದೇವಸ್ಥಾನದ ಬಳಿ ಉತ್ಖನನ ಕಾರ್ಯವನ್ನು ಆರಂಭಿಸಿದೆ. ಸರ್ಕಾರವು ಇಡೀ ಗ್ರಾಮವನ್ನೇ ಸ್ಥಳಾಂತರಿಸುವ ಗಂಭೀರ ಚಿಂತನೆ ನಡೆಸುತ್ತಿದೆ.

Read Full Story

More Trending News