MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಚಿನ್ನದ ನಿಧಿ ಸಿಕ್ಕ ಲಕ್ಕುಂಡಿಯಲ್ಲಿ ಸರ್ಕಾರದಿಂದ ಉತ್ಖನನ; ಚಾಲುಕ್ಯರ ಚಿನ್ನದ ಕೊಪ್ಪರಿಗೆ ಸಿಗುವ ಕುತೂಹಲ!

ಚಿನ್ನದ ನಿಧಿ ಸಿಕ್ಕ ಲಕ್ಕುಂಡಿಯಲ್ಲಿ ಸರ್ಕಾರದಿಂದ ಉತ್ಖನನ; ಚಾಲುಕ್ಯರ ಚಿನ್ನದ ಕೊಪ್ಪರಿಗೆ ಸಿಗುವ ಕುತೂಹಲ!

ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ಪುರಾತತ್ವ ಇಲಾಖೆಯು ಉತ್ಖನನ ಕಾರ್ಯವನ್ನು ಆರಂಭಿಸಿದೆ. ಇತ್ತೀಚೆಗೆ ಸ್ಥಳೀಯ ಕುಟುಂಬವೊಂದಕ್ಕೆ ನಿಧಿ ಸಿಕ್ಕ ಹಿನ್ನೆಲೆಯಲ್ಲಿ, ಚಾಲುಕ್ಯರ ಕಾಲದ ಟಂಕಸಾಲೆ, ಸುರಂಗ ಮಾರ್ಗ ಹಾಗೂ ಇನ್ನಷ್ಟು ಐತಿಹಾಸಿಕ ನಿಕ್ಷೇಪಗಳು ಪತ್ತೆಯಾಗುವ ಕುತೂಹಲ ಹೆಚ್ಚಾಗಿದೆ.

2 Min read
Author : Sathish Kumar KH
Published : Jan 16 2026, 11:34 AM IST
Share this Photo Gallery
  • FB
  • TW
  • Linkdin
  • Whatsapp
16
Image Credit : Asianet News

ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮ ಈ ಹಿಂದೆ ಕಲ್ಯಾಣಿ ಚಾಲುಕ್ಯರ ಪ್ರಸಿದ್ಧ ಪಟ್ಟಣವಾಗಿತ್ತು. ಇಲ್ಲಿನ ದೇವಸ್ಥಾನಗಳು ಅದಕ್ಕೆ ಸಾಕ್ಷಿಯಾಗಿವೆ. ಜೊತೆಗೆ, ಲಕ್ಕುಂಡಿಯಲ್ಲಿ ಚಾಲುಕ್ಯರ ಕಾಲದಲ್ಲಿ ಚಾಲ್ತಿಯಲ್ಲಿದ್ದ ನಾಣ್ಯಗಳ ಟಂಕಸಾಲೆಯೂ ಲಕ್ಕುಂಡಿಯಲ್ಲಿತ್ತು. ಆಗಿನ ಕಾಲದ ನಾಣ್ಯಗಳು ಚಿನ್ನ, ಬೆಳ್ಳಿ ಹಾಗೂ ತಾಮ್ರ ಅಥವಾ ಕಂಚಿನ ನಾಣ್ಯಗಳಾಗಿರುವ ಸಾಧ್ಯತೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಟಂಕಸಾಲೆಯಲ್ಲಿ ನಿರ್ಮಿಸಿ ಸಂಗ್ರಹಿಸಿದ ನಾಣ್ಯಗಳೇನಾದರೂ ಇಲ್ಲಿವೆಯೇ ಎಂಬ ಬಗ್ಗೆಯೂ ಹೆಚ್ಚು ಕುತೂಹಲವಿದೆ.

26
Image Credit : Asianet News

ಆದರೆ, ಲಕ್ಕುಂಡಿಯಲ್ಲಿ ಪುರಾತತ್ವ ಇಲಾಖೆಯಿಂದ ಉತ್ಖನನ ಮಾಡುವ ಉದ್ದೇಶವೇ ಬೇರೆಯಾಗಿದೆ. ಇಲ್ಲಿನ ದೇವಸ್ಥಾನಗಳಿಗೆ ಸುರಂಗ ಮಾರ್ಗವಿರುವುದು, ಗುಡಿ,ಗೋಪುರ ಇರುವುದು ಹಾಗೂ ಟಂಕಸಾಲೆಯ ಕುರುಹು ಏನಾದರೂ ಸಿಗಬಹುದೇ ಎಂದು ಉತ್ಖನನ ಮಾಡುವುದಕ್ಕೆ ಮುಂದಾಗಿದ್ದಾರೆ. ಚಾಲುಕ್ಯರ ಕಾಲದ ಶ್ರೀಮಂತ ಹಾಗೂ ಧಾರ್ಮಿಕ ಕ್ಷೇತ್ರವಾಗಿದ್ದ ಲಕ್ಕುಂಡಿಯಲ್ಲಿ ಇನ್ನೂ ಐತಿಹಾಸಿಕ ಕುರುಹು ಮಣ್ಣಿನಲ್ಲಿ ಹುದುಗಿರಬಹುದು ಎಂಬ ನಿರೀಕ್ಷೆ ಹೆಚ್ಚಾಗಿದೆ. ಆದ್ದರಿಂದ ಈ ಬಗ್ಗೆ ಉತ್ಖನನ ಮಾಡುವುದಕ್ಕೆ ರಾಜ್ಯ ಸರ್ಕಾರದಿಂದ ಕಳೆದ ವರ್ಷದ 2025ರ ಜೂ.25ರಂದೇ ಅನುಮೋದನೆ ಪಡೆದಿದ್ದರು.

Related Articles

Related image1
ಲಕ್ಕುಂಡಿ ನಿಧಿ: ರಿತ್ತಿ ಕುಟುಂಬಕ್ಕೆ ಸಿಕ್ತು ಸಂಪತ್ತು-ಗ್ರಾಮಸ್ಥರಿಗೆ ಬಂತು ಆಪತ್ತು! ಸರ್ಪಕ್ಕಿಂತಲೂ ದೊಡ್ಡ ಭಯ!
Related image2
ಲಕ್ಕುಂಡಿ ನಿಧಿಗೆ ಉಂಟು ವಿಜಯನಗರ ಸಾಮ್ರಾಜ್ಯದ ನಂಟು; ಚಿನ್ನಾಭರಣಕ್ಕಿರುವ 300 ವರ್ಷ ಇತಿಹಾಸ ಬಿಚ್ಚಿಟ್ಟ ಡಿಸಿ!
36
Image Credit : Asianet News

ಉತ್ಖನನ ಕಾರ್ಯವನ್ನು ಮಳೆಗಾಲದಲ್ಲಿ ಮಾಡಲು ಬರುಯವುದಿಲ್ಲ. ಜೊತೆಗೆ, ಒಂದು ಕಟ್ಟಡವನ್ನು ಸ್ಥಳಾಂತರ ಮಾಡುವ ಕಾರ್ಯದ ನಿಮಿತ್ತ ಉತ್ಖನನ ಕಾರ್ಯ ವಿಳಂಬವಾಗಿತ್ತು. ಆದರೆ, ಇದೀಗ ಮಳೆಗಾಲ ಮುfಕತಾಯವಾಗಿದ್ದು, ಉತ್ಖನನ ಕಾರ್ಯಾರಂಭ ಮಾಡಬೇಕು ಎನ್ನುವಷ್ಟರಲ್ಲಿ ರಿತ್ತಿ ಕುಟುಂಬದವರಿಗೆ ನಿಧಿ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದಿಂದ ಉತ್ಖನನ ಮಾಡುವ ಜಾಗದಲ್ಲಿಯೂ ನಿಧಿ, ಬಂಗಾರದ ನಾಣ್ಯಗಳು ಅಥವಾ ಬೇರಾವುದೇ ಚಿನ್ನದ ನಿಕ್ಷೇಪಗಳು ಸಿಗುತಗ್ತವೆ ಎಂಬ ನಿರೀಕ್ಷೆ ಜನರಲ್ಲಿ ಹೆಚ್ಚಾಗಿದೆ.

46
Image Credit : Asianet News

ಇದೀಗ ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಪುರಾತತ್ವ ಇಲಾಖೆ ಅಧಿಕಾರಿಯ ನೇತೃತ್ವದಲ್ಲಿ ಉತ್ಖನನ ಕಾರ್ಯ ನಡೆಯಲಿದೆ. ಇದಕ್ಕೆ ಪೂರ್ವವಾಗಿ ಕೈಗೊಳಗಳಬೇಕಾದ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ. ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನ ಮುಂದೆ ಉತ್ಖನನ ಕಾರ್ಯ ಆರಂಭವಾಗಲಿದೆ. 

56
Image Credit : Asianet News

ಕೋಟೆ ವೀರಭದ್ರೇಶ್ವರ ದೇವಸ್ಥಾನದ ಮುಂದೆ ಉತ್ಖನನಕ್ಕೆ ಗದ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು ಚಾಲನೆ ನೀಡಿದರು. ಇಲ್ಲಿನ ಗಾರೆಗೆ ಪೂಜೆ ಸಲ್ಲಿಸಿ, ಉತ್ಖನನಕ್ಕೆ ಚಾಲನೆ ನೀಡಿದ್ದು, ಸ್ಥಳೀಯ ಜನರಿಗೆ ಚಿನ್ನ, ನಿಕ್ಷೇಪ ಹಾಗೂ ನಾಣ್ಯಗಳು ಸಿಗುವ ಬಗ್ಗೆ ಕುತೂಹಲ ಹೆಚ್ಚಾಗಿದೆ. ಜೊತೆಗೆ, ಅಧಿಕಾರಿಗಳಿಗೂ ಕುತೂಹಲ ಹೆಚ್ಚಾಗಿದ್ದು, ಎಲ್ಲವನ್ನೂ ಪಾರದರ್ಶಕವಾಗಿ ನಡೆಸುವುದಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಜೊತೆಗೆ, ಸ್ಥಳೀಯ ಜನರೂ ಕೂಡ ಎಲ್ಲವೂ ಗ್ರಾಮಸ್ಥರ ಕಣ್ಣೆದುರಿಗೇ ನಡೆಯಬೇಕು ಎಂದು ಮನವಿ ಮಾಡಿದ್ದು, ಗ್ರಾಮದ ಜನರು ಅಲ್ಲಿ ಜಮಾಯಿಸಿದ್ದಾರೆ.

66
Image Credit : Asianet News

ಈ ಉತ್ಖನನ ಜಾಗವು ಕಳೆದೊಂದು ವಾರದಲ್ಲಿ ಮನೆ ಪಾಯ ಅಗೆಯುವಾಗ ರಿತ್ತಿ ಕುಟುಂಬಕ್ಕೆ ನಿಧಿ ಸಿಕ್ಕ ಸ್ಥಳದಿಂದ ಕೇವಲ 250 ಮೀ. ದೂರದಲ್ಲಿದೆ. ಹೀಗಾಗಿ, ಎಲ್ಲರ ಚಿತ್ತ ಲಕ್ಕುಂಡಿಯ ಉತ್ಖನನದತ್ತ ಮೂಡಿದೆ. ಇನ್ನು ಈ ಶೋಧ ಕಾರ್ಯದಲ್ಲಿ ಸುಮಾರು 50 ಹೆಚ್ಚು ಕೆಲಸಗಾರರು ಭಾಗಿಯಾಗಲಿದ್ದಾರೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಕರ್ನಾಟಕ ಸುದ್ದಿ
ಗದಗ
ಬಂಗಾರದ ನಿಧಿ

Latest Videos
Recommended Stories
Recommended image1
ಚಿನ್ನಾಭರಣ ಸಿಕ್ಕಿದ ಚಾಲುಕ್ಯರ ತಾಣ ಲಕ್ಕುಂಡಿಯಲ್ಲಿ ಇಂದಿನಿಂದ ಉತ್ಖನನ ಕಾರ್ಯ, ಇಡೀ ಗ್ರಾಮ ಸ್ಥಳಾಂತರ?
Recommended image2
70 ಸಾವಿರ ಬೆಲೆಯ ಕಾರಿಗೆ 1.11 ಲಕ್ಷ ರು. ದಂಡ ಕಟ್ಟಿದ ಮಾಲೀಕ
Recommended image3
ಶಿಡ್ಲಘಟ್ಟ ಪೌರಾಯುಕ್ತೆಗೆ ಬೆದರಿಕೆ ಪ್ರಕರಣ: ರಾಜೀವ್‌ಗೌಡ ವಿರುದ್ಧ 2 ಕೇಸ್‌, ಬೆನ್ನಲ್ಲೇ ನಾಪತ್ತೆ; 3 ತಂಡ ರಚಿಸಿ ಪೊಲೀಸರ ಶೋಧ ಕಾರ್ಯ!
Related Stories
Recommended image1
ಲಕ್ಕುಂಡಿ ನಿಧಿ: ರಿತ್ತಿ ಕುಟುಂಬಕ್ಕೆ ಸಿಕ್ತು ಸಂಪತ್ತು-ಗ್ರಾಮಸ್ಥರಿಗೆ ಬಂತು ಆಪತ್ತು! ಸರ್ಪಕ್ಕಿಂತಲೂ ದೊಡ್ಡ ಭಯ!
Recommended image2
ಲಕ್ಕುಂಡಿ ನಿಧಿಗೆ ಉಂಟು ವಿಜಯನಗರ ಸಾಮ್ರಾಜ್ಯದ ನಂಟು; ಚಿನ್ನಾಭರಣಕ್ಕಿರುವ 300 ವರ್ಷ ಇತಿಹಾಸ ಬಿಚ್ಚಿಟ್ಟ ಡಿಸಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved