MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಇಲ್ಲಿ ಜಾತ್ರೆ ನಡೆಯುತ್ತಿಲ್ಲ, ಸೆಲೆಬ್ರಿಟಿ ಬರುತ್ತಿಲ್ಲ: ಆದ್ರೆ ಓಂ-112 ಹೋರಿ ಅಂತಿಮ ದರ್ಶನಕ್ಕೆ ಹರಿದುಬಂದ ಜನಸಾಗರ

ಇಲ್ಲಿ ಜಾತ್ರೆ ನಡೆಯುತ್ತಿಲ್ಲ, ಸೆಲೆಬ್ರಿಟಿ ಬರುತ್ತಿಲ್ಲ: ಆದ್ರೆ ಓಂ-112 ಹೋರಿ ಅಂತಿಮ ದರ್ಶನಕ್ಕೆ ಹರಿದುಬಂದ ಜನಸಾಗರ

ಹಾವೇರಿ ಜಿಲ್ಲೆಯ ಕರ್ಜಗಿ ಗ್ರಾಮದ ಪ್ರಸಿದ್ಧ 'ಓಂ-112' ಹೋರಿ ಅನಾರೋಗ್ಯದಿಂದ ನಿಧನವಾಗಿದೆ. ಹೋರಿ ಬೆದರಿಸುವ ಸ್ಪರ್ಧೆಗಳ ಅಪ್ರತಿಮ ವೀರನಾಗಿದ್ದ ಈ ಹೋರಿಯ ಅಂತಿಮ ದರ್ಶನಕ್ಕಾಗಿ ಸಾವಿರಾರು ಅಭಿಮಾನಿಗಳು ಸೇರಿ, ಹೂವಿನಿಂದ ಅಲಂಕರಿಸಿದ ವಾಹನದಲ್ಲಿ ಭವ್ಯ ಮೆರವಣಿಗೆ ನಡೆಸಿದರು.

1 Min read
Author : Sathish Kumar KH
Published : Jan 16 2026, 04:06 PM IST
Share this Photo Gallery
  • FB
  • TW
  • Linkdin
  • Whatsapp
16
ಹೋರಿಯ ಅಂತಿಮ ದರ್ಶನ
Image Credit : Asianet News

ಹೋರಿಯ ಅಂತಿಮ ದರ್ಶನ

ಹಾವೇರಿ (ಜ.16): ಸಾಮಾನ್ಯವಾಗಿ ಸಿನಿಮಾ ತಾರೆಗಳು ಅಥವಾ ಜನನಾಯಕರು ನಿಧನರಾದಾಗ ಸಾವಿರಾರು ಜನ ಸೇರುವುದು ಸಹಜ. ಆದರೆ, ಹಾವೇರಿ ಜಿಲ್ಲೆಯ ಕರ್ಜಗಿ ಗ್ರಾಮದಲ್ಲಿ ಕಂಡುಬಂದ ದೃಶ್ಯ ಮಾತ್ರ ಇಡೀ ರಾಜ್ಯದ ಗಮನ ಸೆಳೆದಿದೆ. ಇಲ್ಲಿ ಜನ ಸೇರಿದ್ದು ಯಾವುದೇ ಸ್ಟಾರ್ ನಟನಿಗಲ್ಲ, ಬದಲಾಗಿ ನಾಡಿನ ಹೆಮ್ಮೆಯ ಕಲಿ, ಸಾವಿರಾರು ಅಭಿಮಾನಿಗಳ ಪ್ರೀತಿಯ 'ಓಂ-112' (Om-112) ಎಂಬ ಹೋರಿಯ ಅಂತಿಮ ದರ್ಶನಕ್ಕಾಗಿ!

26
ಹೋರಿ ಬೆದರಿಸುವ ಸ್ಪರ್ಧೆಯ ಅಪ್ರತಿಮ ವೀರ
Image Credit : Asianet News

ಹೋರಿ ಬೆದರಿಸುವ ಸ್ಪರ್ಧೆಯ ಅಪ್ರತಿಮ ವೀರ

ಕರ್ಜಗಿ ಗ್ರಾಮದ ಜಗದೀಶ್ ಮಾಣೆಗರ ಅವರಿಗೆ ಸೇರಿದ ಈ ಹೋರಿ, ರಾಜ್ಯಮಟ್ಟದ ಹೋರಿ ಬೆದರಿಸುವ ಸ್ಪರ್ಧೆಗಳಲ್ಲಿ ತನ್ನದೇ ಆದ ಛಾಪು ಮೂಡಿಸಿತ್ತು. ಅಖಾಡಕ್ಕೆ ಇಳಿದರೆ ಸಾಕು, ಸಿಡಿಲ ಮರಿಯಂತೆ ನುಗ್ಗಿ ಎದುರಾಳಿಗಳನ್ನು ಬೆಚ್ಚಿಬೀಳಿಸುತ್ತಿದ್ದ ಈ ಹೋರಿಯನ್ನು ಅಭಿಮಾನಿಗಳು ಪ್ರೀತಿಯಿಂದ 'ಪೈಲ್ವಾನ್' ಎಂದೇ ಕರೆಯುತ್ತಿದ್ದರು. ಹಲವು ವರ್ಷಗಳಿಂದ ನಡೆದ ನೂರಾರು ಸ್ಪರ್ಧೆಗಳಲ್ಲಿ ಚಿನ್ನದ ಸರ, ಬೈಕ್ ಸೇರಿದಂತೆ ಹತ್ತಾರು ದೊಡ್ಡ ಬಹುಮಾನಗಳನ್ನು ಗೆದ್ದು ಮಾಲೀಕನಿಗೆ ಕೀರ್ತಿ ತಂದಿತ್ತು.

Related Articles

Related image1
ಹೋರಿ ಬೆದರಿಸುವ ಸ್ಪರ್ಧೆಯ ವೇಳೆ ಅನಾಹುತ: ಶಿಕಾರಿಪುರ ಮಾಜಿ ಶಾಸಕನ ತಿವಿದು ಕೆಳಕ್ಕೆ ಬೀಳಿಸಿದ ಹೋರಿ
Related image2
Now Playing
ಮಾರ್ಕೆಟ್​​ನಲ್ಲಿ ಮದವೇರಿದ ಗೂಳಿ ಅಟ್ಟಹಾಸ: ಸುಮ್ಮನೆ ನಿಂತವನಿಗೆ ಹಿಂದಿನಿಂದ ಗುಮ್ಮಿದ ಗೂಳಿ
36
ಸಾವಿರಾರು ಜನರ ಸಮ್ಮುಖದಲ್ಲಿ ಅಂತಿಮ ಯಾತ್ರೆ
Image Credit : Asianet News

ಸಾವಿರಾರು ಜನರ ಸಮ್ಮುಖದಲ್ಲಿ ಅಂತಿಮ ಯಾತ್ರೆ

ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ 'ಓಂ-112' ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸುತ್ತಮುತ್ತಲ ಹತ್ತಾರು ಹಳ್ಳಿಗಳ ಜನರು ಕರ್ಜಗಿ ಗ್ರಾಮಕ್ಕೆ ಧಾವಿಸಿ ಬಂದರು. 

46
ಹೋರಿಯ ಮೆರವಣಿಗೆ
Image Credit : Asianet News

ಹೋರಿಯ ಮೆರವಣಿಗೆ

ಹೋರಿಯ ಅಂತಿಮ ಯಾತ್ರೆಯನ್ನು ಎಷ್ಟು ಭವ್ಯವಾಗಿ ಮಾಡಲಾಯಿತೆಂದರೆ, ಡ್ರೋಣ್ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಗಳು ಇತಿಹಾಸಕ್ಕೆ ಸಾಕ್ಷಿಯಾಗುವಂತಿದ್ದವು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಹೂವಿನಿಂದ ಅಲಂಕರಿಸಿದ ವಾಹನದಲ್ಲಿ ಹೋರಿಯ ಮೆರವಣಿಗೆ ನಡೆಸಲಾಯಿತು.

56
ಜಮೀನಿನಲ್ಲೇ ಅಂತ್ಯಕ್ರಿಯೆ
Image Credit : Asianet News

ಜಮೀನಿನಲ್ಲೇ ಅಂತ್ಯಕ್ರಿಯೆ

ಮೆರವಣಿಗೆಯ ಉದ್ದಕ್ಕೂ ಅಭಿಮಾನಿಗಳು ಕಣ್ಣೀರು ಹಾಕುತ್ತಾ ತಮ್ಮ ನೆಚ್ಚಿನ 'ಪೈಲ್ವಾನ್'ಗೆ ವಿದಾಯ ಹೇಳಿದರು. ಮಾಲೀಕ ಜಗದೀಶ್ ಮಾಣೆಗರ ಅವರು ತಮ್ಮ ಸ್ವಂತ ಮಗನನ್ನು ಕಳೆದುಕೊಂಡಂತೆ ದುಃಖಿತರಾಗಿದ್ದರು.

66
ಪ್ರಾಣಿ ಪ್ರೇಮ
Image Credit : Asianet News

ಪ್ರಾಣಿ ಪ್ರೇಮ

ಅಂತಿಮವಾಗಿ ಮಾಲೀಕನ ಜಮೀನಿನಲ್ಲಿಯೇ ಸಕಲ ವಿಧಿವಿಧಾನಗಳೊಂದಿಗೆ ಹೋರಿಯ ಅಂತ್ಯಕ್ರಿಯೆ ನೆರವೇರಿಸಲಾಯಿತು. ಮೂಕಪ್ರಾಣಿಯೊಂದರ ಮೇಲೆ ಮನುಷ್ಯರಿಟ್ಟಿರುವ ಈ ಅಪಾರ ಪ್ರೀತಿ ಮತ್ತು ಅಭಿಮಾನ, ಮನುಷ್ಯತ್ವ ಮತ್ತು ಪ್ರಾಣಿ ಪ್ರೇಮಕ್ಕೆ ಹಿಡಿದ ಕೈಗನ್ನಡಿಯಾಗಿದೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಕರ್ನಾಟಕ ಸುದ್ದಿ
ಹಾವೇರಿ

Latest Videos
Recommended Stories
Recommended image1
ಆಸ್ತಿ ದಾಹಕ್ಕೆ ತಮ್ಮನ ನೆತ್ತರು ಹರಿಸಿದ ಅಣ್ಣ: ಹಸೆಮಣೆ ಏರಬೇಕಿದ್ದ ತಮ್ಮನಿಗೆ ಚಟ್ಟ ಕಟ್ಟಿದ ಕಟುಕ ಸಹೋದರ!
Recommended image2
ಕೇರಳದಿಂದ ಓದಲು ಬಂದು ಇಲ್ಲಿ ಬೇರೆಯದೇ ಕಾರುಬಾರು: ಕಾರಿನ ಬೆಲೆಗಿಂತಲೂ ದುಬಾರಿ ದಂಡ ವಿಧಿಸಿದ ಪೊಲೀಸರು
Recommended image3
ಲಕ್ಕುಂಡಿಗೆ ಶ್ರೀರಾಮನ ಕಾಲದ ಇತಿಹಾಸವಿದೆ, ಆತ ಭೇಟಿ ಕೊಟ್ಟ ಪುಣ್ಯ ಭೂಮಿ: ಇತಿಹಾಸ ತಜ್ಞ ಅಬ್ದುಲ್ ಕಟ್ಟಿಮನಿ
Related Stories
Recommended image1
ಹೋರಿ ಬೆದರಿಸುವ ಸ್ಪರ್ಧೆಯ ವೇಳೆ ಅನಾಹುತ: ಶಿಕಾರಿಪುರ ಮಾಜಿ ಶಾಸಕನ ತಿವಿದು ಕೆಳಕ್ಕೆ ಬೀಳಿಸಿದ ಹೋರಿ
Recommended image2
Now Playing
ಮಾರ್ಕೆಟ್​​ನಲ್ಲಿ ಮದವೇರಿದ ಗೂಳಿ ಅಟ್ಟಹಾಸ: ಸುಮ್ಮನೆ ನಿಂತವನಿಗೆ ಹಿಂದಿನಿಂದ ಗುಮ್ಮಿದ ಗೂಳಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved