Published : Nov 16, 2025, 07:09 AM ISTUpdated : Nov 16, 2025, 11:47 PM IST

Karnataka News Live: ಕೊಪ್ಪಳ - ಹೊಸಪೇಟೆಯಿಂದ ಬಂದಿದ್ದ ಮಹಿಳೆಗೆ ಮದ್ಯ ಕುಡಿಸಿ ಗ್ಯಾಂಗ್ ರೇ*ಪ್!

ಸಾರಾಂಶ

ಬೆಂಗಳೂರು: ದೇಶ ಹಾಗೂ ರಾಜ್ಯದಲ್ಲಿ ಬಹು ಚರ್ಚಿತವಾಗಿ ಜಿದ್ದಾ ಜಿದ್ದಿಗೆ ಕಾರಣವಾಗಿದ್ದ ಅರ್‌ಎಸ್‌ಎಸ್ ಪಥಸಂಚಲನವು ಹೈಕೋರ್ಟ್‌ ಅನುಮತಿಯೊಂದಿಗೆ ನ.16ರಂದು ಸಚಿವ ಪ್ರಿಯಾಂಕ್‌ ಖರ್ಗೆ ಅವರ ತವರು ಚಿತ್ತಾಪುರದಲ್ಲಿ ನಡೆಯಲಿದೆ. ಇದಕ್ಕಾಗಿ ತಾಲೂಕು ಆಡಳಿತ ಹಾಗೂ 1000 ಪೊಲೀಸರು ಭಾರೀ ಭದ್ರತೆ ಕಲ್ಪಿಸಲಿದ್ದಾರೆ. ಇದಕ್ಕಾಗಿ ಸಿದ್ಧತೆಯನ್ನೂ ಮಾಡಿಕೊಳ್ಳಲಾಗಿದೆ. ನಗರದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ಕಣ್ಗಾವಲು ಆಯೋಜಿಸಲಾಗಿದೆ.

Koppal Gang Rape by Four on 39 Year Old Woman

11:47 PM (IST) Nov 16

ಕೊಪ್ಪಳ - ಹೊಸಪೇಟೆಯಿಂದ ಬಂದಿದ್ದ ಮಹಿಳೆಗೆ ಮದ್ಯ ಕುಡಿಸಿ ಗ್ಯಾಂಗ್ ರೇ*ಪ್!

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನಲ್ಲಿ, ಹಣ ಪಡೆಯಲು ಬಂದಿದ್ದ ಮಹಿಳೆಗೆ ಮದ್ಯ ಕುಡಿಸಿ ನಾಲ್ವರು ಸಾಮೂಹಿಕ ಅತ್ಯಾ೧ಚಾರ ಎಸಗಿದ್ದಾರೆ. ಈ ಘೋರ ಕೃತ್ಯದಿಂದ ಗಂಭೀರವಾಗಿ ಅಸ್ವಸ್ಥಗೊಂಡಿರುವ ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಯಲಬುರ್ಗಾ ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

Read Full Story

11:08 PM (IST) Nov 16

ಕಾರು -ಸ್ಕೂಟರ್‌ಗೆ ಡಿಕ್ಕಿಯಾಗಿ ಉರುಳಿ ಬಿದ್ದ ಬಸ್, ಹಾಸನದ ಸರಣಿ ಅಪಘಾತದಲ್ಲಿ ಓರ್ವ ಸಾವು

ಕಾರು ಸ್ಕೂಟರ್‌ಗೆ ಡಿಕ್ಕಿಯಾಗಿ ಉರುಳಿ ಬಿದ್ದ ಬಸ್, ಹಾಸನದ ಸರಣಿ ಅಪಘಾತದಲ್ಲಿ ಓರ್ವ ಸಾವು, ಚನ್ನರಾಯಪಟ್ಣಣ ಬಳಿ ಈ ಅಪಘಾತ ಸಂಭವಿಸಿದೆ. ಬೈಕ್ ಸವಾರ ಸ್ಥಳಕ್ಕೆ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಸಂಚಾರಿ ಪೊಲೀಸರು ದೌಡಾಯಿಸಿದ್ದಾರೆ.

Read Full Story

11:03 PM (IST) Nov 16

ಸಿರುಗುಪ್ಪ - ದಾಂಪತ್ಯ ಕಲಹ, ಎರಡು ವರ್ಷದ ಹಿಂದೆ ಮದುವೆ ಆಗಿದ್ದ ದಂಪತಿ ನೇಣಿಗೆ ಶರಣು

ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನಲ್ಲಿ ದಾಂಪತ್ಯ ಕಲಹದಿಂದ ಬೇಸತ್ತು ಯುವ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದ ಅಂಬರೀಶ್ ಮತ್ತು ಶೃತಿ, ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾರೆ.
Read Full Story

10:33 PM (IST) Nov 16

ಬೆಳಗಾವಿ ಮೃಗಾಲಯದಲ್ಲಿ ಮತ್ತೊಂದು ಕೃಷ್ಣ ಮೃಗ ಸಾವು, ಸಾವಿನ ಸಂಖ್ಯೆ 30ಕ್ಕೆ ಏರಿಕೆ!

ಬೆಳಗಾವಿಯ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ ಕೃಷ್ಣ ಮೃಗಗಳ ನಿಗೂಢ ಸಾವಿನ ಸರಣಿ ಮುಂದುವರಿದಿದ್ದು, ಒಟ್ಟು 30 ಪ್ರಾಣಿಗಳು ಮೃತಪಟ್ಟಿವೆ. ಸಾರ್ವಜನಿಕರ ಆಕ್ರೋಶದ ಹಿನ್ನೆಲೆ  ಅರಣ್ಯ ಸಚಿವ ಈಶ್ವರ ಖಂಡ್ರೆ ತನಿಖೆಗೆ ಆದೇಶ, ಉಳಿದ 8 ಕೃಷ್ಣಮೃಗಗಳ ಮೇಲೆ ತಜ್ಞ ವೈದ್ಯರು ನಿಗಾ ಇರಿಸಿದ್ದಾರೆ.

Read Full Story

08:53 PM (IST) Nov 16

ರಾಜಾ ರಾಮ್ ಮೋಹನ್ ರಾಯ್ ಬ್ರಿಟಿಷ್ ಏಜೆಂಟ್ ಎಂದ ಬಿಜೆಪಿ ನಾಯಕ, ತೀವ್ರ ಆಕ್ರೋಶ ಬೆನ್ನಲ್ಲೇ ಕ್ಷಮೆಯಾಚನೆ

ಮಧ್ಯಪ್ರದೇಶದ ಉನ್ನತ ಶಿಕ್ಷಣ ಸಚಿವ ಇಂದರ್ ಸಿಂಗ್ ಪರ್ಮಾರ್, ಸಮಾಜ ಸುಧಾರಕ ರಾಜಾ ರಾಮ್ ಮೋಹನ್ ರಾಯ್ ಅವರನ್ನು 'ಬ್ರಿಟಿಷರ ಏಜೆಂಟ್' ಎಂದು ಕರೆದು ವಿವಾದ ಸೃಷ್ಟಿಸಿದ್ದಾರೆ. ಬಿರ್ಸಾ ಮುಂಡಾ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಈ ಹೇಳಿಕೆ ನೀಡಿದ್ದು, ತೀವ್ರ ಆಕ್ರೋಶದ ಬಳಿಕ ಕ್ಷಮೆಯಾಚಿಸಿದ್ದಾರೆ.

Read Full Story

08:14 PM (IST) Nov 16

ಬೆಂಗಳೂರು - ಸಂಗೀತ ಕಾರ್ಯಕ್ರಮದ ವೇಳೆ ಅಕಾನ್ ಪ್ಯಾಂಟ್ ಎಳೆದು ಫ್ಯಾನ್ಸ್ ಹುಚ್ಚಾಟ, ನೆಟಿಜೆನ್ಸ್ ಕಿಡಿ, ವಿಡಿಯೋ ವೈರಲ್!

Akon viral video Bengaluru: ಅಮೆರಿಕದ ಗಾಯಕ ಅಕಾನ್ ಬೆಂಗಳೂರಿನಲ್ಲಿ ಸಂಗೀತ ಕಾರ್ಯಕ್ರಮ ನೀಡುವಾಗ ಮುಜುಗರದ ಘಟನೆಯೊಂದು ನಡೆದಿದೆ. ವೇದಿಕೆಯಲ್ಲಿ ಹಾಡುತ್ತಿದ್ದ ಅಕಾನ್‌ರ ಪ್ಯಾಂಟ್ ಅನ್ನು ಅಭಿಮಾನಿಗಳು ಎಳೆದಿದ್ದು, ಈ ವಿಡಿಯೋ ವೈರಲ್ ಆಗಿ ಬೆಂಗಳೂರಿನ ಘಟನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Read Full Story

07:29 PM (IST) Nov 16

ಕಾರವಾರ - ರಾತ್ರೋರಾತ್ರಿ ಕೋಣ ಕಳ್ಳಸಾಗಾಟ, ನಾಲ್ವರು ಆರೋಪಿಗಳ ಬಂಧನ

ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ, ರಾತ್ರೋರಾತ್ರಿ ಕೋಣವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸ್ಥಳೀಯರು ವಾಹನವನ್ನು ತಡೆದು ಪೊಲೀಸರಿಗೆ ಮಾಹಿತಿ ನೀಡಿದ ನಂತರ, ಆರೋಪಿಗಳನ್ನು ಬಂಧಿಸಿ ವಾಹನ ಹಾಗೂ ಕೋಣವನ್ನು ವಶಪಡಿಸಿಕೊಳ್ಳಲಾಗಿದೆ.

Read Full Story

07:05 PM (IST) Nov 16

Karna- Annayya ರೋಚಕ ಮಹಾಸಂಗಮ - ಮಾರಿಗುಡಿಯ ಮುಂದೆ ಎಲ್ಲಾ ಸತ್ಯಗಳೂ ಬಯಲಾಗೋ ಸಮಯ!

ನಿಧಿ ಪ್ರೀತಿ ಮತ್ತು ನಿತ್ಯಾಳ ಮದುವೆಯ ಸಂಕಷ್ಟದಲ್ಲಿರುವ ಕರ್ಣನಿಗೆ 'ಅಣ್ಣಯ್ಯ' ಧಾರಾವಾಹಿಯ ಪಾರು ಸಹಾಯ ಮಾಡಲು ಮುಂದಾಗಿದ್ದಾಳೆ. ಈ ಮಹಾಸಂಗಮದ ವಿಶೇಷ ಸಂಚಿಕೆಯಲ್ಲಿ, ಮಾರಿಗುಡಿಯ ಮುಂದೆ ಕರ್ಣನ ಸಮಸ್ಯೆಗೆ ಪರಿಹಾರ ಸಿಗುವುದರ ಜೊತೆಗೆ ಹಲವು ಸತ್ಯಗಳು ಬಯಲಾಗಲಿವೆ.
Read Full Story

07:01 PM (IST) Nov 16

ಬೀದರ್ - ಜೈಲು ಸಿಬ್ಬಂದಿ ನಿರ್ಲಕ್ಷ್ಯ, ಕಿರುಕುಳ ಆರೋಪ - ಜೈಲಲ್ಲೇ ವಿಚಾರಣಾಧೀನ್ ಕೈದಿ ಸಾವು

ಬೀದರ್‌ನ ಹುಮನಾಬಾದ್ ಜೈಲಿನಲ್ಲಿ, ತಾಯಿಯ ಕೊಲೆ ಆರೋಪದ ಮೇಲೆ ವಿಚಾರಣಾಧೀನ ಖೈದಿಯಾಗಿದ್ದ ಖಂಡಪ್ಪ ಮೇತ್ರೆ ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಹ ಖೈದಿಗಳ ಕಿರುಕುಳ ಮತ್ತು ಜೈಲು ಸಿಬ್ಬಂದಿಯ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಮೃತನ ಕುಟುಂಬಸ್ಥರು ಆರೋಪಿಸಿದ್ದು, ತನಿಖೆಗೆ ಆಗ್ರಹಿಸಿದ್ದಾರೆ.
Read Full Story

06:10 PM (IST) Nov 16

'ಚಿತ್ತಾಪೂರು ಜನ ಉತ್ತರ ಕೊಟ್ಟಿದ್ದಾರೆ' ' - ಸಂಘ ಏನು ಮಾಡಿದೆ? ಎಂದವರಿಗೆ RSS ಪ್ರಮುಖ ಕೃಷ್ಣಾ ಜೋಷಿ ತಿರುಗೇಟು!

ಚಿತ್ತಾಪುರದಲ್ಲಿ ನಡೆದ ಆರ್‌ಎಸ್‌ಎಸ್ ಪಥಸಂಚಲನ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಮುಖರಾದ ಕೃಷ್ಣಾ ಜೋಷಿ, ಸಂಘದ ನೂರರ ಸಂಭ್ರಮದ ಹಿನ್ನೆಲೆಯಲ್ಲಿ ಅದರ ಸಾಧನೆ ವಿವರಿಸಿದರು. ಅಸಂಘಟಿತ ಹಿಂದೂಗಳನ್ನು ಒಗ್ಗೂಡಿಸುವುದು ದೇಶ ವಿರೋಧಿ ಶಕ್ತಿಗಳನ್ನು ವಿರೋಧಿಸುವುದೇ ಸಂಘದ ಗುರಿ ಎಂದು ಅವರು ಪ್ರತಿಪಾದಿಸಿದರು.

Read Full Story

06:03 PM (IST) Nov 16

Bigg Boss - ಜಾಹ್ನವಿ ಮುಚ್ಚಿಟ್ಟಿದ್ದ ಸೀಕ್ರೆಟ್​ ಎಲ್ಲರೆದುರೇ ರಟ್ಟು ಮಾಡಿದ ಸುದೀಪ್​- ಬೇಕಿತ್ತಾ ಹಳ್ಳ ತೋಡಿಕೊಳ್ಳೋ ಕೆಲ್ಸ?

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿ ಸ್ಪಂದನಾ ವಾಹಿನಿಯ protegee ಎಂದು ಆರೋಪಿಸಿದ್ದ ಜಾಹ್ನವಿಗೆ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ವೇಳೆ, ಜಾಹ್ನವಿ ಅವರೇ ಚಾನೆಲ್ ಬಳಿ ಅವಕಾಶಕ್ಕಾಗಿ ಅಂಗಲಾಚಿದ್ದ ಸತ್ಯವನ್ನು ಸುದೀಪ್ ಬಯಲು ಮಾಡಿದ್ದಾರೆ.
Read Full Story

05:31 PM (IST) Nov 16

Amruthadhaare - ಗೌತಮ್​ ವಿರುದ್ಧ ಹೀಗೆ ಮಾತನಾಡಿ ಅಂತ ವಠಾರದವ್ರಿಗೆ ಹೇಳ್ಕೊಟ್ಟಿದ್ದೇ ಭೂಮಿಕಾ! ಬಯಲಾಯ್ತು ಸತ್ಯ

ಅಮೃತಧಾರೆ ಧಾರಾವಾಹಿಯಲ್ಲಿ, ಅನಾರೋಗ್ಯದಿಂದ ಬಳಲುತ್ತಿದ್ದ ಪತಿ ಗೌತಮ್ ಪರವಾಗಿ ಭೂಮಿಕಾ ವಠಾರದವರ ವಿರುದ್ಧ ರೊಚ್ಚಿಗೆದ್ದಿದ್ದಳು. ಆದರೆ, ವೈರಲ್ ಆದ ವಿಡಿಯೋವೊಂದರಲ್ಲಿ, ಗೌತಮ್ ವಿರುದ್ಧ ಹೇಗೆ ಮಾತನಾಡಬೇಕೆಂದು ಭೂಮಿಕಾ ಅವರೇ ಹೇಳಿಕೊಡುತ್ತಿರುವ ದೃಶ್ಯವಿದೆ. ಇದೇನಿದು ಟ್ವಿಸ್ಟ್​?

Read Full Story

05:27 PM (IST) Nov 16

ಬೆಂಗಳೂರಲ್ಲಿ ಮುದ್ದೆ ಸ್ಪರ್ಧೆ - 45 ನಿಮಿಷದಲ್ಲಿ 10, 12 ಮುದ್ದೆ ತಿಂದ ಅಕ್ಕ-ತಮ್ಮ ಗೆಲುವು

ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ವಕೀಲರ ಒಕ್ಕೂಟವು ಗ್ರಾಮೀಣ ಸೊಗಡಿನ ರಾಗಿ ಮುದ್ದೆ ಮತ್ತು ನಾಟಿ ಕೋಳಿ ಸಾರು ತಿನ್ನುವ ಸ್ಪರ್ಧೆ ಆಯೋಜಿಸಿತ್ತು. ಪುರುಷರ ವಿಭಾಗದಲ್ಲಿ 12 ಮುದ್ದೆ ತಿಂದು ಅಜಯ್ ಕುಮಾರ್ ಟಗರು ಬಹುಮಾನ ಪಡೆದರೆ, ಮಹಿಳೆಯರ ವಿಭಾಗದಲ್ಲಿ 10 ಮುದ್ದೆ ಸೇವಿಸಿದ ಸೌಮ್ಯ ವಿಜೇತರಾದರು. 

Read Full Story

05:00 PM (IST) Nov 16

Bigg boss ಮನೆಯಲ್ಲಿ ಯಾರೂ ಗಂಡಸ್ರೇ ಅನ್ಸಲ್ಲ, ಗಿಲ್ಲಿಗೆ ಸೊಂಟನೇ ಇಲ್ಲ ಎಂದ ಜಾಹ್ನವಿ - ಸುದೀಪ್​ ಕಕ್ಕಾಬಿಕ್ಕಿ!

ಬಿಗ್ ಬಾಸ್ ಮನೆಯಿಂದ ಈ ವಾರ ಯಾರು ಹೊರಹೋಗಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ. ಇದರ ನಡುವೆ, ಮನೆಯಲ್ಲಿ ಪುರುಷ ಸ್ಪರ್ಧಿಗಳಿಗಿಂತ ಮಹಿಳೆಯರೇ ಸ್ಟ್ರಾಂಗ್ ಎಂಬ ಚರ್ಚೆಯ ವೇಳೆ ಜಾಹ್ನವಿ ನೀಡಿದ ಹೇಳಿಕೆಯೊಂದು ಸುದೀಪ್ ಅವರನ್ನೇ ಕಕ್ಕಾಬಿಕ್ಕಿಯಾಗಿಸಿದೆ.
Read Full Story

04:57 PM (IST) Nov 16

ಕಲಬುರಗಿ - ಚಿತ್ತಾಪೂರ ಆರೆಸ್ಸೆಸ್ ಪಥ ಸಂಚಲನ, ಭಾರೀ ಜನ ಬೆಂಬಲ, ಭಾರತ್ ಮಾತಾಕೀ ಜೈ ಘೋಷಣೆ!

ಚಿತ್ತಾಪೂರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಾರ್ಷಿಕ ಪಥ ಸಂಚಲನವು ಯಶಸ್ವಿಯಾಗಿ ಜರುಗಿತು. ಸುಮಾರು 300 ಗಣವೇಶಧಾರಿಗಳು ಹಾಗೂ ಘೋಷವಾದಕರ ಶಿಸ್ತುಬದ್ಧ ಸಂಚಲನಕ್ಕೆ, ಸಾವಿರಾರು ಸಾರ್ವಜನಿಕರು ಪುಷ್ಪಾರ್ಚನೆ ಮಾಡಿ, ಜೈಘೋಷಗಳೊಂದಿಗೆ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸಿದರು.
Read Full Story

04:21 PM (IST) Nov 16

'ಸುದೀಪ್​ ಸರ್​ ನಿಮ್ಮ ವರ್ತನೆ ತುಂಬಾ ಬೇಸರ ತರಿಸ್ತಿದೆ' ಎಂದ Bigg Boss ವೀಕ್ಷಕರು! ಈ ಪರಿ ಆಕ್ರೋಶ ಯಾಕೆ?

ಬಿಗ್‌ಬಾಸ್ ನಿರೂಪಕ ಕಿಚ್ಚ ಸುದೀಪ್ ಅವರ ವಿರುದ್ಧ ಇದೇ ಮೊದಲ ಬಾರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತವಾಗಿದೆ. ರಕ್ಷಿತಾ ಅವರಂತಹ ಸ್ಪರ್ಧಿಗಳ ಮೇಲೆ ಕಠಿಣವಾಗಿ ನಡೆದುಕೊಳ್ಳುವ ಸುದೀಪ್, ಅಶ್ವಿನಿ ಗೌಡ ಮತ್ತು ಜಾಹ್ನವಿ ಅವರ ವಿಷಯದಲ್ಲಿ ಮೃದು ಧೋರಣೆ ತೋರುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.

Read Full Story

03:32 PM (IST) Nov 16

BBK 12 - ಒಬ್ಬರಲ್ಲ, ಇಬ್ಬರಲ್ಲ ಬರೋಬ್ಬರಿ ನಾಲ್ವರು; ಇರೋವಾಗ ಕುತಂತ್ರ, ಹೋಗುವಾಗ ವೇದಾಂತ ಎಂದ ವೀಕ್ಷಕರು

ಬಿಗ್‌ಬಾಸ್ ಮನೆಯಲ್ಲಿ ಈ ವಾರ ನಾಲ್ವರು ಸ್ಪರ್ಧಿಗಳು ಎಲಿಮಿನೇಷನ್‌ಗೆ ನಾಮಿನೇಟ್ ಆಗಿದ್ದಾರೆ. ರಿಷಾ ಗೌಡ, ರಘು, ಕಾಕ್ರೋಚ್ ಸುಧಿ ಮತ್ತು ಜಾನ್ವಿ ಮುಖ್ಯದ್ವಾರದ ಬಳಿ ನಿಂತಿದ್ದು, ವಿಶೇಷ ಪ್ರಕ್ರಿಯೆಯ ಮೂಲಕ ಒಬ್ಬರು ಮನೆಯಿಂದ ಹೊರನಡೆಯಲಿದ್ದಾರೆ. 

Read Full Story

02:51 PM (IST) Nov 16

ಚಿತ್ತಾಪುರ ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಮತ್ತೆ ಅಡೆ ತಡೆ, ಸಂಘ ಸದಸ್ಯನ ತಡೆದ ಪೊಲೀಸ್

ಚಿತ್ತಾಪುರ ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಮತ್ತೆ ಅಡೆ ತಡೆ, ಸಂಘ ಸದಸ್ಯನ ತಡೆದ ಪೊಲೀಸ್ , ಬ್ಯಾಂಡ್ ವಾದಕನನ್ನು ಪೊಲೀಸರು ತಡೆದಿದ್ದಾರೆ. ವಾಹನದಿಂದ ಇಳಿಸಿದ್ದಾರೆ. ಆರ್‌ಎಸ್ಎಸ್ ಮನವರಿಕೆ ಮಾಡುವ ಪ್ರಯತ್ನ ಮಾಡಿದರೂ ಪೊಲೀಸರು ನಿರಾಕರಿಸಿದ್ದಾರೆ.

 

Read Full Story

02:38 PM (IST) Nov 16

Bengaluru - ನಾಳೆಯಿಂದ ಕಡಲೆಕಾಯಿ ಪರಿಷೆ ಆರಂಭ - 7 ದಿನ ಬೆಂಗಳೂರಿನ ಪ್ರಮುಖ ರಸ್ತೆ ಬಂದ್

ಐತಿಹಾಸಿಕ ಬಸವನಗುಡಿ ಕಡ್ಲೆಕಾಯಿ ಪರಿಷೆಯು ನವೆಂಬರ್ 17 ರಿಂದ 21 ರವರೆಗೆ ಐದು ದಿನಗಳ ಕಾಲ ನಡೆಯಲಿದೆ. ಈ ವರ್ಷ 5 ಲಕ್ಷಕ್ಕೂ ಅಧಿಕ ಜನರು ಸೇರುವ ನಿರೀಕ್ಷೆಯಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ರಸ್ತೆ ಬಂದ್, ಭದ್ರತೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಂತಹ ವ್ಯಾಪಕ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
Read Full Story

01:58 PM (IST) Nov 16

ಚಿರಂಜೀವಿ ಖತರ್ನಾಕ್ ಶೋ ಮುಂದೆ ಬಾಲಯ್ಯ-ವಿಜಯಶಾಂತಿ ಕಷ್ಟ ವ್ಯರ್ಥ.. ಕಾಣೆಯಾದ ಫ್ಲಾಪ್ ಸಿನಿಮಾ ಯಾವ್ದು?

ಮೆಗಾಸ್ಟಾರ್ ಚಿರಂಜೀವಿ ನಟನೆಯ 'ದೊಂಗ ಮೊಗುಡು' ಸಿನಿಮಾದ ವಿಶೇಷತೆಗಳನ್ನು ಈ ಲೇಖನದಲ್ಲಿ ತಿಳಿಯಿರಿ. ಈ ಚಿತ್ರಕ್ಕೆ ಸ್ಪರ್ಧಿಯಾಗಿ ಬಂದ ಬಾಲಯ್ಯ, ವಿಜಯಶಾಂತಿ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೋತಿತು.

Read Full Story

01:55 PM (IST) Nov 16

ಅರವಿಂದ್ ವೆಂಕಟೇಶ್ ರೆಡ್ಡಿಗೆ ಜಾಮೀನು ಸಿಕ್ಕ ಬೆನ್ನಲ್ಲೇ ನಟಿಯ ಹೊಸ ಇನ್‌ಸ್ಟಾ ಸ್ಟೋರಿ ಪೋಸ್ಟ್‌ ವೈರಲ್‌

Actress viral Instagram story: ನಟಿಗೆ ಕಿರುಕುಳ ನೀಡಿದ ಆರೋಪದಲ್ಲಿ ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿಯವರನ್ನು ಗೋವಿಂದರಾಜನಗರ ಪೊಲೀಸ್ ಇನ್ಸ್‌ಪೆಕ್ಟರ್ ನೇತೃತ್ವದ ತಂಡವು ಬಂಧಿಸಿತ್ತು. ಅವರಿಗೆ ಈಗ ನ್ಯಾಯಾಲಯದಲ್ಲಿ ಜಾಮೀನು ಸಿಕ್ಕಿದೆ. ಇದರ ಬೆನ್ನಲ್ಲೇ ನಟಿಯ ಇನ್‌ಸ್ಟಾ ಪೋಸ್ಟ್‌ ವೈರಲ್ ಆಗಿದೆ. 

Read Full Story

01:50 PM (IST) Nov 16

DK Brothers - ಸಂಪುಟ ಪುನಾರಚನೆ ಮತ್ತು ಪವರ್ ಶೇರಿಂಗ್ ಆಟ - ಡಿಕೆ ಬ್ರದರ್ಸ್ ರಹಸ್ಯ ನಡೆ?

ಸಚಿವ ಸಂಪುಟ ಪುನಾರಚನೆ ಚರ್ಚೆಯ ನಡುವೆ, ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ದೆಹಲಿಗೆ ತೆರಳಿದ್ದಾರೆ. ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದಿರುವ ಸುರೇಶ್, ನಾಯಕತ್ವ ಬದಲಾವಣೆ ಸಾಧ್ಯತೆಯ ಬಗ್ಗೆ ಸುಳಿವು ನೀಡಿದ್ದು, ತಮ್ಮ ಸಹೋದರ ಸಿಎಂ ಆಗಬೇಕೆಂಬ ಆಸೆಯನ್ನು ಪುನರುಚ್ಚರಿಸಿದ್ದಾರೆ.
Read Full Story

01:27 PM (IST) Nov 16

ಮತ್ತೆ ರಿಸ್ಕ್ ತಗೋತಿದ್ದಾರಾ ಪ್ರಭಾಸ್? ಒಳ್ಳೆ ಫಾರ್ಮ್‌ನಲ್ಲಿರುವಾಗ ಇದೆಲ್ಲ ಬೇಕಾ ಅಂತಿದ್ದಾರೆ ಫ್ಯಾನ್ಸ್!

ಬಾಹುಬಲಿ ನಂತರ ಸ್ವಲ್ಪ ಕಾಲ ಕಷ್ಟದ ಪರಿಸ್ಥಿತಿ ಎದುರಿಸಿದ್ದ ಪ್ರಭಾಸ್.. ಈಗೀಗ ಸತತ ಹಿಟ್‌ಗಳೊಂದಿಗೆ.. ಮತ್ತೆ ಒಳ್ಳೆ ಫಾರ್ಮ್‌ಗೆ ಬಂದಿದ್ದಾರೆ. ಈ ಸಮಯದಲ್ಲಿ ಯಂಗ್ ರೆಬೆಲ್ ಸ್ಟಾರ್ ಮತ್ತೆ ರಿಸ್ಕ್ ತೆಗೆದುಕೊಳ್ಳಲು ಸಿದ್ಧರಾಗುತ್ತಿದ್ದಾರಂತೆ.

Read Full Story

01:23 PM (IST) Nov 16

'ಕೋಟಿಗೊಬ್ಬ' ಹಾಡಿಗೆ ಚಿಟ್ಟೆಯಾಗಿ ಮಿಂಚಿದ ನಿಧಿ! ಎದ್ದು ಶಿವಣ್ಣ ಚಪ್ಪಾಳೆ, ಕುಳಿತಲ್ಲೇ ಜಿಗಿತ ರಚಿತಾ ರಾಮ್​

ಡಾನ್ಸ್​ ಕರ್ನಾಟಕ ಡಾನ್ಸ್​ನ ಹೊಸ ಸೀಸನ್​ನಲ್ಲಿ 'ಕರ್ಣ' ಧಾರಾವಾಹಿ ಖ್ಯಾತಿಯ ಭವ್ಯ ಗೌಡ ಭಾಗವಹಿಸಿದ್ದಾರೆ. 'ಸಾಲುತಿಲ್ಲವೇ' ಹಾಡಿಗೆ ಚಿಟ್ಟೆಯಂತೆ ನೃತ್ಯ ಮಾಡಿದ ಇವರ ಪ್ರದರ್ಶನಕ್ಕೆ ತೀರ್ಪುಗಾರರಾದ ಶಿವರಾಜ್​ ಕುಮಾರ್​ ಎದ್ದು ನಿಂತು ಚಪ್ಪಾಳೆ ತಟ್ಟಿ ಮೆಚ್ಚುಗೆ ಸೂಚಿಸಿದ್ದಾರೆ.  

Read Full Story

12:53 PM (IST) Nov 16

ಚುನಾವಣೆಗೆ ಮೊದಲೇ ₹10000 ನೀಡಿದ್ದಕ್ಕೆ ಏಕೆ ಕ್ರಮವಿಲ್ಲ - ಸಚಿವ ದಿನೇಶ್‌ ಗುಂಡೂರಾವ್‌

ಬಿಹಾರ ಚುನಾವಣೆಯಲ್ಲಿ ಬಿಜೆಪಿಯು ಸರ್ಕಾರದ ದುಡ್ಡಿನಲ್ಲಿ ಮತ ಖರೀದಿ ಮಾಡಿದೆ. ಚುನಾವಣೆ ಘೋಷಣೆಯಾಗಲು 4 ದಿನ ಇದ್ದಾಗ ತಲಾ 10 ಸಾವಿರ ರು. ಹಣವನ್ನು ಮಹಿಳೆಯರ‌ ಅಕೌಂಟ್‌ಗೆ ಹಾಕಿದ್ದಾರೆ.

Read Full Story

12:50 PM (IST) Nov 16

BBK 12 - ಅಪ್ಪಿತಪ್ಪಿ ಗಿಲ್ಲಿ ಹೇಳಿದ್ದು ನಿಜ ಆದ್ರೆ ಏನ್ ಕಥೆ? ಇದು ಸ್ಪರ್ಧಿಯ ಕನಸಿನ ಕಥೆ

ಬಿಗ್‌ಬಾಸ್ ಸ್ಪರ್ಧಿ ಗಿಲ್ಲಿ ನಟ ತಮ್ಮದೇ ಕಲ್ಪನಾ ಲೋಕದಲ್ಲಿ ವಿಹರಿಸುತ್ತಿದ್ದಾರೆ. ಕಾವ್ಯಾ ಜೊತೆ ಫಿನಾಲೆಯಲ್ಲಿ ತಾವೇ ವಿನ್ನರ್ ಆಗುವ ಕನಸು ಕಂಡಿದ್ದು, ನಿರೂಪಕ ಸುದೀಪ್ ಅವರನ್ನೂ ನಕಲು ಮಾಡಿ ಗಮನ ಸೆಳೆದಿದ್ದಾರೆ. ಅವರ ಆತ್ಮವಿಶ್ವಾಸವು ಮನೆಯಲ್ಲಿ ಮತ್ತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.

Read Full Story

12:32 PM (IST) Nov 16

ನಟಿ ಸಿಮ್ರಾನ್ ಮೊದಲ ಸಂಭಾವನೆ ಗೊತ್ತಾ? ಆ್ಯಂಕರ್ ಆಗಿದ್ದಾಗ ಜಯಾ ಬಚ್ಚನ್ ಕರೆದಿದ್ದು ಯಾಕೆ?

ನಟಿ ಸಿಮ್ರಾನ್ ಬಾಲಿವುಡ್ ಸಿನಿಮಾಗಳ ಮೂಲಕ ಹೀರೋಯಿನ್ ಆಗಿ ಎಂಟ್ರಿ ಕೊಟ್ಟು, ನಂತರ ಟಾಲಿವುಡ್‌ಗೆ ಕಾಲಿಟ್ಟರು. ಆದರೆ ಅವರು ಮೊದಲು ಮಾಡಿದ್ದು ಆಂಕರಿಂಗ್. ಆ ಸಮಯದಲ್ಲಿ ಸಿಮ್ರಾನ್ ಸಂಭಾವನೆ ಎಷ್ಟಿತ್ತು ಗೊತ್ತಾ?

Read Full Story

12:06 PM (IST) Nov 16

Bigg Boss - ವಿದಾಯ ಭಾಷಣಕ್ಕೂ ಮುನ್ನ ಸುದೀಪ್​ರ ನಕಲು ಮಾಡುವ ಸಾಹಸ ತೋರಿದ ಗಿಲ್ಲಿ ನಟ! ಆಗಿದ್ದೇನು ನೋಡಿ

ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ ನಟ ತಮ್ಮ ಹಾಸ್ಯ ಪ್ರವೃತ್ತಿಯಿಂದ ಗಮನ ಸೆಳೆಯುತ್ತಿದ್ದಾರೆ. ಇತ್ತೀಚೆಗೆ, ನಿರೂಪಕ ಸುದೀಪ್ ಅವರ ಕೋರಿಕೆಯ ಮೇರೆಗೆ, ಅವರ ಮುಂದೆಯೇ ಅವರನ್ನು ನಕಲು ಮಾಡಿ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದ್ದಾರೆ.  

Read Full Story

11:52 AM (IST) Nov 16

ಯಾರೋ ಬರೆದಿರೋ ಕೃತಿಗೆ ಡಿ.ಕೆ.ಶಿವಕುಮಾರ್ ಭಾವಚಿತ್ರ ಹಾಕಿ ಬಿಡುಗಡೆ - ಬಿ.ವೈ.ವಿಜಯೇಂದ್ರ

ಯಾರೋ ಬರೆದಿರುವ ಪುಸ್ತಕಕ್ಕೆ ತಮ್ಮ ಭಾವಚಿತ್ರ ಹಾಕಿಕೊಂಡು ಬಿಡುಗಡೆಗೊಳಿಸಿರುವುದೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಸಾಧನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ.

Read Full Story

11:38 AM (IST) Nov 16

ರಾಜಮೌಳಿ ಸಿನಿಮಾಗಿಂತ ಮೊದಲು, ಮಹೇಶ್ ಬಾಬು-ಪ್ರಿಯಾಂಕಾ ಚೋಪ್ರಾ ಕಾಂಬೋದಲ್ಲಿ ಮಿಸ್ ಆದ ಸಿನಿಮಾ ಯಾವುದು?

ಮಹೇಶ್ ಬಾಬು ಮತ್ತು ರಾಜಮೌಳಿ ಸಿನಿಮಾಗಾಗಿ ಫ್ಯಾನ್ಸ್ ಸಾವಿರ ಕಣ್ಣುಗಳಿಂದ ಕಾಯುತ್ತಿದ್ದಾರೆ. ಈ ಸಿನಿಮಾಗಿಂತ ಮೊದಲು ಮಹೇಶ್ ಬಾಬು - ಪ್ರಿಯಾಂಕಾ ಚೋಪ್ರಾ ಕಾಂಬಿನೇಷನ್‌ನಲ್ಲಿ ಮಿಸ್ ಆದ ಸಿನಿಮಾದ ಬಗ್ಗೆ ನಿಮಗೆ ಗೊತ್ತಾ?

Read Full Story

11:31 AM (IST) Nov 16

ದೇಶವೇ ಮೆಚ್ಚಿದೆ ರಾಯಚೂರಿನ ಕವಿತಾಳ ಪೊಲೀಸ್ ಠಾಣೆ - ಅತ್ಯುತ್ತಮ ಪೊಲೀಸ್ ಠಾಣಾ ಪ್ರಶಸ್ತಿ

ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳ ಪೊಲೀಸ್ ಠಾಣೆಯು ಕೇಂದ್ರ ಸಚಿವಾಲಯದ 'ಅತ್ಯುತ್ತಮ ಪೊಲೀಸ್ ಠಾಣಾ ಪ್ರಶಸ್ತಿ'ಗೆ ಆಯ್ಕೆಯಾಗಿದೆ. ದೇಶದ 78 ಠಾಣೆಗಳ ಪರಿಶೀಲನೆ ನಂತರ, ಜನಸ್ನೇಹಿ ಮತ್ತು ಸಿಬ್ಬಂದಿ ಸ್ನೇಹಿ ಗುಣಗಳಿಗಾಗಿ ಇದು ದೇಶದ ಮೂರು ಅತ್ಯುತ್ತಮ ಠಾಣೆಗಳಲ್ಲಿ ಒಂದಾಗಿ ಹೊರಹೊಮ್ಮಿದೆ. 

Read Full Story

11:06 AM (IST) Nov 16

ಬಿಜೆಪಿ ರಾಜ್ಯಾಧ್ಯಕ್ಷರಾಗಿ 2 ವರ್ಷ ಪೂರೈಸಿದ ಬಿ.ವೈ.ವಿಜಯೇಂದ್ರ - ಹಿರಿಯ ನಾಯಕರಿಂದ ಸನ್ಮಾನ

ಬಿ.ವೈ.ವಿಜಯೇಂದ್ರ ಅವರು ಪಕ್ಷದ ರಾಜ್ಯಾಧ್ಯಕ್ಷರಾಗಿ ಕಳೆದ ಎರಡು ವರ್ಷಗಳಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ತಳಮಟ್ಟದಿಂದ ಪಕ್ಷ ಸಂಘಟನೆ ಬಲಪಡಿಸಿದ್ದಾರೆ. ಈಗಾಗಲೇ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿದ್ದಾರೆ.

Read Full Story

10:47 AM (IST) Nov 16

Mysuru - ಹೆಚ್ಚು Marks ಕೊಡ್ತೀನಿ, ಪಬ್‌ಗೆ ಹೋಗಿ ಮಜಾ ಮಾಡೋಣ ಬಾ ಎಂದ ಉಪನ್ಯಾಸಕ

Mysuru lecturer harassment case: ಮೈಸೂರಿನ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳಿಗೆ ಹೆಚ್ಚು ಅಂಕ ಹಾಗೂ ಒಳ್ಳೆಯ ಕೆಲಸದ ಆಮಿಷವೊಡ್ಡಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಉಪನ್ಯಾಸಕ ಭರತ್ ಭಾರ್ಗವ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. 

Read Full Story

10:41 AM (IST) Nov 16

ನಾವು ಮನುಷ್ಯರು ಅನ್ನೋದನ್ನ ಮರೆತಬೇಡಿ.. ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳ ನೋವು ಕೇಳೋರ್ಯಾರು!

‘ನಾನು ಸೂರ್ಯೋದಯಕ್ಕೂ ಮುನ್ನವೇ ಪ್ರಾಣ ಬಿಡುತ್ತೇನೆ. ನೀವು ನನಗೆ ಕೇಳಿದ್ದು ಕೊಡಲಿಲ್ಲ. ಏನ್ಮಾಡ್ತೀನಿ ನೋಡಿ’ ಹೀಗೆ ಬೆದರಿಸಿ ಸೆಲ್‌ನಲ್ಲಿ ಕುಳಿತ ಕೈದಿಯನ್ನು ಇಡೀ ರಾತ್ರಿ ನಿದ್ದೆಯಿಲ್ಲದೆ ಮಹಿಳಾ ಅಧಿಕಾರಿ ಕಾದರು.

Read Full Story

10:28 AM (IST) Nov 16

ದೇಶದ ಪ್ರಧಾನಿ ಮೋದಿ ಚುನಾವಣಾ ಪ್ರಚಾರಕ್ಕೆ ಸೀಮಿತ - ಸಚಿವ ಚಲುವರಾಯಸ್ವಾಮಿ ಟೀಕೆ

ಈಗಿನ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ರಾಜ್ಯಗಳ ಚುನಾವಣಾ ಪ್ರಚಾರಕ್ಕೆ ಸೀಮಿತಗೊಂಡಿದ್ದಾರೆ ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಟೀಕಿಸಿದರು.

Read Full Story

10:12 AM (IST) Nov 16

ವೇದಿಕೆ ಮೇಲೆಯೇ ಆತ್ಮ*ಹತ್ಯೆ ಮಾಡಿಕೊಳ್ಳುವ ಮಾತನ್ನಾಡಿದ ಜೆಡಿಎಸ್ ಶಾಸಕ ಹೆಚ್.ಟಿ.ಮಂಜು

ಮಂಡ್ಯದ ಕೆ.ಆರ್.ಪೇಟೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಜೆಡಿಎಸ್ ಶಾಸಕ ಹೆಚ್.ಟಿ.ಮಂಜು ತಮ್ಮ ವಿರುದ್ಧ ಕೇಳಿಬಂದ 3 ಕೋಟಿ ರೂ. ಲಂಚದ ಆರೋಪದಿಂದ ಬೇಸತ್ತು ಆತ್ಮ*ಹತ್ಯೆ ಮಾಡಿಕೊಳ್ಳುವುದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Read Full Story

09:59 AM (IST) Nov 16

ಎಸ್ಸಿ ಎಂದೇಳಿ ಮದುವೆ ಬಹಿರಂಗಕ್ಕೆ ಒಪ್ಪದ ಪೇದೆಗೆ ಜಾಮೀನು ನಕಾರ

ಮನೆಯಲ್ಲಿದ್ದ ಸಾಯಿಬಾಬಾ ಫೋಟೋ ಮುಂದೆ ಮಹಿಳಾ ಪೇದೆಗೆ ತಾಳಿ ಕಟ್ಟಿ, ಲೈಂಗಿಕವಾಗಿ ಬಳಸಿಕೊಂಡ ನಂತರ ಆಕೆ ಪರಿಶಿಷ್ಟ ಜಾತಿಗೆ ಸೇರಿದ್ದಾರೆ ಎಂಬ ಕಾರಣಕ್ಕೆ ಪತ್ನಿಯೆಂದು ಸಾರ್ವಜನಿಕವಾಗಿ ಹೇಳಿಕೊಳ್ಳಲು ನಿರಾಕರಿಸಿದ ಹಾಗೂ ಮತ್ತೊಂದು ಹುಡುಗಿಯೊಂದಿಗೆ ವಿವಾಹ ನಿಶ್ಚಯಿಸಿಕೊಳ್ಳುವ ಮೂಲಕ ವಂಚನೆ

Read Full Story

09:54 AM (IST) Nov 16

ರಾಜಮೌಳಿ ಕಥೆ ಕೇಳಿ 5 ನಿಮಿಷದಲ್ಲೇ ಶಾಕ್ ಆದೆ - ವಿಲನ್ ಪಾತ್ರದ ಭಯಾನಕ ಅನುಭವ ಬಿಚ್ಚಿಟ್ಟ ಪೃಥ್ವಿರಾಜ್

ಗ್ಲೋಬ್‌ಟ್ರಾಟರ್ ಈವೆಂಟ್‌ನಲ್ಲಿ ಪೃಥ್ವಿರಾಜ್ ಸುಕುಮಾರನ್, ರಾಜಮೌಳಿಯವರ ವಾರಣಾಸಿ ಸಿನಿಮಾ ಕಥೆ ಕೇಳಿ ಆಶ್ಚರ್ಯವಾಯಿತು ಎಂದಿದ್ದಾರೆ. ಐದು ನಿಮಿಷದಲ್ಲೇ ಶಾಕ್ ಆದೆ ಎಂದೂ ಹೇಳಿದ್ದಾರೆ. ಸಿನಿಮಾದಲ್ಲಿನ ತಮ್ಮ ವಿಲನ್ ಪಾತ್ರದ ಬಗ್ಗೆ ವಿಶೇಷ ಅನುಭವ ಹಂಚಿಕೊಂಡಿದ್ದಾರೆ.

Read Full Story

09:39 AM (IST) Nov 16

ರಸ್ತೆ ಬದಿ ಪ್ಲಾಸ್ಟಿಕ್ ಸುಡುತ್ತಿದ್ದವನಿಗೆ ₹10 ಸಾವಿರ ದಂಡ

ಥಣಿಸಂದ್ರ ಮುಖ್ಯ ರಸ್ತೆಯಲ್ಲಿ ಪ್ಲಾಸ್ಟಿಕ್ ಸುಡುತ್ತಿದ್ದ ವ್ಯಕ್ತಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ 10 ಸಾವಿರ ರು. ದಂಡ ವಿಧಿಸಿದೆ. ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ನ.11ರ ರಾತ್ರಿ ಪರಿಶೀಲನೆ ವೇಳೆ, ಅಶ್ವತ್ಥ ನಗರದಲ್ಲಿ ರಸ್ತೆ ಬದಿ ಪ್ಲಾಸ್ಟಿಕ್ ಸುಡುತ್ತಿರುವುದನ್ನು ಗಮನಿಸಿದ್ದರು.

Read Full Story

09:26 AM (IST) Nov 16

ಪುರುಷ ಸ್ಪರ್ಧಿ ವ್ಯಕ್ತಿತ್ವಕ್ಕೆ ಧಕ್ಕೆಯುಂಟು ಮಾಡಿದ ಮಹಿಳಾ ಸ್ಪರ್ಧಿಗಳ ವಿರುದ್ಧ ಸುದೀಪ್ ಕೆಂಡಾಮಂಡಲ

ಬಿಗ್ ಬಾಸ್ ಮನೆಯಲ್ಲಿ ಧ್ರುವಂತ್ ಮತ್ತು ರಾಶಿಕಾ ನಡುವಿನ ಮನಸ್ತಾಪ ತಾರಕಕ್ಕೇರಿದೆ. ಪುರುಷ ಸ್ಪರ್ಧಿಗಳ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತೆ ನಡೆದುಕೊಂಡ ಮಹಿಳಾ ಸ್ಪರ್ಧಿಗಳ ವಿರುದ್ಧ ಸುದೀಪ್ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ತರಾಟೆಗೆ ತೆಗೆದುಕೊಂಡರು.

Read Full Story

More Trending News