Published : Jul 15, 2026, 07:18 AM ISTUpdated : Jul 15, 2026, 10:11 PM IST

Karnataka News Live: ಪ್ರೇಮ ವಿವಾಹಕ್ಕೆ ಬೆಂಬಲ ನೀಡಿದ ಆರೋಪ - ಯುವಕನ ಅಪಹರಿಸಿ ಹಲ್ಲೆ, ಬೇಲೂರಲ್ಲಿ ಭಾರೀ ಘರ್ಷಣೆ

ಸಾರಾಂಶ

ಮಂಡ್ಯ ಜಿಲ್ಲೆಯಲ್ಲಿ ಬೆಳೆದು ನಿಂತಿರುವ ಬೆಳೆಗಳಿಗೆ ಕೆಆರ್‌ಎಸ್ ಅಣೆಕಟ್ಟೆಯಿಂದ ನೀರು ಹರಿಸದ ರಾಜ್ಯ ಸರ್ಕಾರ ತಮಿಳುನಾಡಿಗೆ ಕದ್ದು ಮುಚ್ಚಿ ನೀರು ಬಿಡುವುದರ ಮೂಲಕ ಕಿವುಡುತನ ಪ್ರದರ್ಶಿಸುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.

ತಾಲೂಕಿನ ಚಿಕ್ಕಮುಲಗೂಡು ಗ್ರಾಮದಲ್ಲಿ ಜಮೀನುಗಳಲ್ಲಿ ಒಣಗುತ್ತಿರುವ ಕಬ್ಬು ಬೆಳೆಗಳನ್ನು ಮಂಗಳವಾರ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, 3 ದಿನದಲ್ಲಿ ಜಲಾಶಯದಿಂದ ನಾಲೆಗಳಿಗೆ ನೀರು ಬಿಡುಗಡೆ ಮಾಡದಿದ್ದರೆ ಬಿಜೆಪಿ ವತಿಯಿಂದ ಕೆಆರ್‌ಎಸ್‌ಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.

ನೀರಿಲ್ಲದ ಸಂದರ್ಭದಲ್ಲಿ ಕುಡಿಯುವ ನೀರನ್ನು ಯಾವ ರೀತಿ ಪೂರೈಕೆ ಮಾಡಬೇಕು. ತಮಿಳುನಾಡಿನವರು ನ್ಯಾಯಾಲಯಕ್ಕೆ ಹೋದರೆ ನ್ಯಾಯಾಲಯದಲ್ಲಿ ಅದನ್ನು ಸಮರ್ಥವಾಗಿ ಎದುರಿಸಲು ಏನು ಮಾಡಬೇಕೆಂದು ಚರ್ಚಿಸಲು ಕೂಡಲೇ ಸರ್ವಪಕ್ಷ ಸಭೆ ಕರೆಯಬೇಕು. ವಿಪಕ್ಷವನ್ನು ಬಿಟ್ಟು ನೀರಾವರಿ ಸಭೆ ನಡೆಸಬಾರದು. ಎಲ್ಲರನ್ನೂ ಆಹ್ವಾನ ಮಾಡಬೇಕೆಂದು ಅಶೋಕ್ ಆಗ್ರಹಿಸಿದರು.

10:11 PM (IST) Jul 15

ಪ್ರೇಮ ವಿವಾಹಕ್ಕೆ ಬೆಂಬಲ ನೀಡಿದ ಆರೋಪ - ಯುವಕನ ಅಪಹರಿಸಿ ಹಲ್ಲೆ, ಬೇಲೂರಲ್ಲಿ ಭಾರೀ ಘರ್ಷಣೆ

Hassan News: ಪ್ರೇಮ ವಿವಾಹಕ್ಕೆ ಬೆಂಬಲ ನೀಡಿದ ಆರೋಪದ ಹಿನ್ನೆಲೆ ಯುವಕನ ಮೇಲೆ ಹಲ್ಲೆ ನಡೆದಿದ್ದು, ಬಳಿಕ ಎರಡು ಗುಂಪುಗಳ ನಡುವೆ ಭಾರೀ ಮಾರಾಮಾರಿ ನಡೆದ ಘಟನೆ ಆತಂಕಕ್ಕೆ ಕಾರಣವಾಗಿದೆ.

Read Full Story

09:36 PM (IST) Jul 15

ಕಳಪೆ ಗುಣಮಟ್ಟದ ಕಾನೂನುಬಾಹಿರ ಸೊಳ್ಳೆ ಅಗರಬತ್ತಿ ಬಳಕೆ ಡೆಂಗ್ಯೂನಷ್ಟೇ ಅಪಾಯಕಾರಿ

ಮಾರುಕಟ್ಟೆ ಸಂಶೋಧನಾ ಸಂಸ್ಥೆ ಕಂಟಾರ ನಡೆಸಿದ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಶೇಕಡ 70ರಷ್ಟು ವೈದ್ಯರ ಎಚ್ಚರಿಕೆ

ಪ್ರತಿ ರಾತ್ರಿ ಹಚ್ಚುವ ಕಳಪೆ ಸೊಳ್ಳೆ ಅಗರಬತ್ತಿ, ಡೆಂಗ್ಯೂ ಉಂಟುಮಾಡುವ ಸೊಳ್ಳೆಗಿಂತ ಅಪಾಯಕಾರಿ

Read Full Story

08:51 PM (IST) Jul 15

'ರಣಬಲಿ' ಸೆಟ್‌ನಲ್ಲಿ ಏನೋ ಭಯಾನಕ ನಡೀತಿದೆ ಎಂದ ರಶ್ಮಿಕಾ - ಅದು ದೈವಿಕ ಎಂದ ವಿಜಯ್!

ರಶ್ಮಿಕಾ ಮಂದಣ್ಣ ತಮ್ಮ ಮುಂಬರುವ 'ರಣಬಲಿ' ಚಿತ್ರದ ಶೂಟಿಂಗ್‌ನಿಂದ ಒಂದು ಇಂಟರೆಸ್ಟಿಂಗ್ ಝಲಕ್ ಹಂಚಿಕೊಂಡಿದ್ದಾರೆ. ಇದರಲ್ಲಿ 'ತುಂಬಾ ಭಯಾನಕವಾದದ್ದು' ಏನೋ ನಡೆಯುತ್ತಿದೆ ಎಂದು ಕುತೂಹಲ ಕೆರಳಿಸಿದ್ದಾರೆ.

Read Full Story

08:36 PM (IST) Jul 15

ಬೆಂಗಳೂರಿನಿಂದಲೇ ಶುರು, ಇನ್ಮುಂದೆ ಇನ್ಸ್‌ಟಾಮಾರ್ಟ್‌ನಲ್ಲೇ ಬುಕ್‌ ಮಾಡಬಹುದು ಗ್ಯಾಸ್‌ ಸಿಲಿಂಡರ್‌!

ಇನ್‌ಸ್ಟಾಮಾರ್ಟ್, ಹೆಚ್‌ಪಿಸಿಎಲ್ ಸಹಯೋಗದೊಂದಿಗೆ ಎಲ್‌ಪಿಜಿ ಸಿಲಿಂಡರ್‌ಗಳ ಆನ್-ಡಿಮಾಂಡ್ ವಿತರಣೆಯನ್ನು ಆರಂಭಿಸಿದೆ. ಈ ಸೇವೆಯಡಿ, ಗ್ರಾಹಕರು 'ಹೆಚ್‌ಪಿ ನವ್ಯ' 10 ಕೆಜಿ ಕಾಂಪೋಸಿಟ್ ಸಿಲಿಂಡರ್‌ಗಳನ್ನು ಇನ್‌ಸ್ಟಾಮಾರ್ಟ್ ಆ್ಯಪ್ ಮೂಲಕ ಆರ್ಡರ್ ಮಾಡಬಹುದು.

Read Full Story

08:25 PM (IST) Jul 15

'ಕೆಟ್ಟ ಅಭ್ಯಾಸ ಬಿಟ್ಟುಬಿಡಿ, ಆಗ ನೀವೇ ರಾಜ' - ಚಾಣಕ್ಯ ನೀತಿ, ಶ್ರೀಕೃಷ್ಣನ ಸಂದೇಶ ಉಲ್ಲೇಖಿಸಿದ ಜಗ್ಗೇಶ್

ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ಹಾಗೂ ರಾಜಕಾರಣಿ ಜಗ್ಗೇಶ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಪ್ರೇರಣಾದಾಯಕ ಬರಹಗಳ ಮೂಲಕವೂ ಸಾಕಷ್ಟು ಗಮನ ಸೆಳೆಯುತ್ತಾರೆ.

Read Full Story

07:58 PM (IST) Jul 15

'ಹೆಣ್ಣಾಗಿ ಹುಟ್ಟಿದ್ದೇ ಶಾಪ ಅನಿಸುತ್ತಿದೆ' - ಟ್ರೋಲ್‌ಗಳಿಗೆ ಕೃಷಿ ತಾಪಂಡ ಖಡಕ್ ತಿರುಗೇಟು

Krishi Thapanda YouTube Vlog: ಮೊದಲೇ ಸಾಕಷ್ಟು ವೈಯಕ್ತಿಕ ಸಂಕಷ್ಟಗಳನ್ನು ಎದುರಿಸಿದ್ದ ಕನ್ನಡ ನಟಿ ಹಾಗೂ 'ಬಿಗ್ ಬಾಸ್' ಖ್ಯಾತಿಯ ಕೃಷಿ ತಾಪಂಡ ಇದೀಗ ಮೊದಲ ಬಾರಿಗೆ ತಮ್ಮ ಮೌನ ಮುರಿದಿದ್ದಾರೆ.

Read Full Story

07:53 PM (IST) Jul 15

₹36 ಸಾವಿರ ಸಂಬಳದಲ್ಲೂ ಸಮಾಜಸೇವೆ... ಸಂಬಳದ ಅರ್ಧದಷ್ಟು ಹಣವನ್ನು ದಾನ ಮಾಡುವ ಯುವ ಡೆಲಿವರಿ ಬಾಯ್‌!

ಸ್ವಂತ ಸೂರಿಲ್ಲದೆ ರಸ್ತೆಯಲ್ಲೇ ಬದುಕುತ್ತಿರುವ ದೆಹಲಿಯ ಡೆಲಿವರಿ ಬಾಯ್ ಆಕಾಶ್ ಸರೋಜ್, ತಮ್ಮ ದಿನದ ಗಳಿಕೆಯ ₹1200 ರಲ್ಲಿ ₹500 ರೂಪಾಯಿಯನ್ನು ಹಸಿದವರ ಹೊಟ್ಟೆ ತುಂಬಿಸಲು ಬಳಸುತ್ತಿದ್ದಾರೆ. ತೀರಿಕೊಂಡ ತಂದೆಯ ಮೌಲ್ಯಗಳನ್ನು ಗೌರವಿಸಲು ಅವರು ಈ ನಿಸ್ವಾರ್ಥ ಸೇವೆ ಮಾಡುತ್ತಿದ್ದಾರೆ. ಯಾವುದೇ ಹೊರಗಿನ ಹಣಕಾಸಿನ ನೆರವಿಲ್ಲದೆ, ಸ್ವಂತ ದುಡಿಮೆಯಿಂದಲೇ ಈ ಕಾರ್ಯ ಮಾಡುತ್ತಿರುವ ಅವರ ಕಥೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

Read Full Story

06:54 PM (IST) Jul 15

ಇನ್ನು ಪಾರಸಿಕ ಜೈನರುದ್ಯಾನ ಮಾತ್ರವಲ್ಲ, ಬೌದ್ಧರುದ್ಯಾನವೂ ಕೂಡಾ - ನಾಡಗೀತೆ ಬಗ್ಗೆ ಮಹದೇವಪ್ಪ ಹೇಳಿದ್ದೇನು?

ಕರ್ನಾಟಕ ನಾಡಗೀತೆಯಲ್ಲಿ 'ಬೌದ್ಧ' ಪದವನ್ನು ಮರು ಸೇರ್ಪಡೆ ಮಾಡುವ ಕುರಿತು ಮಹತ್ವದ ಬೆಳವಣಿಗೆ ನಡೆದಿದೆ. ಮಾಜಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಅವರು ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

Read Full Story

06:50 PM (IST) Jul 15

ಸಿಲಿಕಾನ್ ಸಿಟಿ ಟ್ರಾಫಿಕ್‌ಗೆ ಬಿಗ್ ಸರ್ಜರಿ!; ಹಗಲು ಹೊತ್ತಿನಲ್ಲಿ ಭಾರಿ ವಾಹನಗಳಿಗೆ ಬರೋಬ್ಬರಿ 14 ಗಂಟೆ ನೋ-ಎಂಟ್ರಿ!

ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಪರಿಹಾರವಾಗಿ, ಸಂಚಾರಿ ಪೊಲೀಸರು ಹೊಸ ಪ್ರಸ್ತಾವನೆ ಸಲ್ಲಿಸಿದ್ದಾರೆ. ಇದರ ಅಡಿಯಲ್ಲಿ, ಭಾರಿ ಮತ್ತು ಮಧ್ಯಮ ಗಾತ್ರದ ವಾಣಿಜ್ಯ ವಾಹನಗಳು ಹಾಗೂ ಖಾಸಗಿ ಬಸ್‌ಗಳಿಗೆ ಹಗಲಿನ ವೇಳೆ 14 ಗಂಟೆಗಳ ಕಾಲ ನಗರ ಪ್ರವೇಶವನ್ನು ನಿರ್ಬಂಧಿಸಲು ಯೋಜಿಸಲಾಗಿದೆ.

Read Full Story

06:12 PM (IST) Jul 15

ತಮಿಳುನಾಡಿಗೆ ಹರಿಯುತ್ತಿದ್ದ ನೀರು ತಡೆಯಲು ಗ್ರಾಮಸ್ಥರೇ ಮುಂದಾದರು - ಚಾಮರಾಜನಗರದಲ್ಲಿ ಅನನ್ಯ ಪ್ರಯತ್ನ

Water Crisis Karnataka: ಹಳೇ ಮೈಸೂರು ಭಾಗದಲ್ಲಿ ಮುಂಗಾರು ಕೈ ಕೊಟ್ಟಿದೆ. ಜಲಾಶಯಗಳು ಕೂಡ ಬದಿದಾಗಿವೆ. ಕುಡಿಯುವ ನೀರಿಗೂ ಕೂಡ ಹಾಹಾಕಾರ ಪರಿಸ್ಥಿತಿ ಎದುರಾಗಿದೆ. ಚೆಕ್ ಡ್ಯಾಂ ಹೂಳೆತ್ತಿ..

Read Full Story

06:04 PM (IST) Jul 15

Men-Women Relationship - ಮಹಿಳೆಯರ ಈ ಸಮಸ್ಯೆಗಳನ್ನು ಹೆಚ್ಚಿನ ಪುರುಷರು ಅರ್ಥಮಾಡಿಕೊಳ್ಳುವುದೇ ಇಲ್ಲ!

ಸಂಬಂಧದಲ್ಲಿ ಕೇವಲ ಪ್ರೀತಿ ಇದ್ದರೆ ಸಾಲದು, ಅಲ್ಲಿ ಪರಸ್ಪರರ ಮೌನವನ್ನು ಅರ್ಥಮಾಡಿಕೊಳ್ಳುವ ಸಹಾನುಭೂತಿ ಇರಬೇಕು. ಪುರುಷರು ಈ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಸಂಸಾರ ಎಂಬ ನೌಕೆ ಯಾವುದೇ ಅಡೆತಡೆಯಿಲ್ಲದೆ ಸುಗಮವಾಗಿ ಸಾಗುತ್ತದೆ. ಯಾವುದು ಅದು ನೋಡಿ..

Read Full Story

05:26 PM (IST) Jul 15

ರೈತರೇ ಭೂಮಿಯ ಕಳೆ ತೆಗೆಯಲು ಇನ್ನು ಬೇರೆ ಮಾರ್ಗ ಬಳಸಿ, ಪ್ರಖ್ಯಾತ Paraquat Dichloride ಶೀಘ್ರದಲ್ಲೇ ಬ್ಯಾನ್‌!

ತೀವ್ರ ವಿಷಕಾರಿ 'ಪ್ಯಾರಾಕ್ವಾಟ್ ಡೈಕ್ಲೋರೈಡ್' ಕಳೆನಾಶಕವನ್ನು ಕೇಂದ್ರ ಸರ್ಕಾರ ನಿಷೇಧಿಸಲು ಮುಂದಾಗಿದೆ. ಮಾನವ ಮತ್ತು ಪ್ರಾಣಿಗಳ ಆರೋಗ್ಯದ ಮೇಲಿನ ಗಂಭೀರ ಅಪಾಯಗಳನ್ನು ಪರಿಗಣಿಸಿ, ತಜ್ಞರ ಸಮಿತಿಯ ಶಿಫಾರಸಿನ ಮೇರೆಗೆ ಈ ಕರಡು ಆದೇಶ ಹೊರಡಿಸಲಾಗಿದೆ.

Read Full Story

05:24 PM (IST) Jul 15

ಅಪ್ಪನ ಆಸೆಯಂತೆ ಬಿಜಿನೆಸ್​ ಶುರು ಮಾಡಿದ ಅಪ್ಪು ಪುತ್ರಿ ವಂದಿತಾ - ಏನಿದು 'ನುಕಾಸ್​' ಕೆಫೆ

ನಟ ಪುನೀತ್ ರಾಜ್‌ಕುಮಾರ್ ಅವರ ಕಿರಿಯ ಪುತ್ರಿ ವಂದಿತಾ, ತಂದೆಯ ಆಸೆಯಂತೆ 'ನುಕಾಸ್ ಕೆಫೆ' ಹೋಮ್ ಬೇಕರಿ ಉದ್ಯಮವನ್ನು ಆರಂಭಿಸಿದ್ದಾರೆ. ಅಪ್ಪು ಪ್ರೀತಿಯಿಂದ ಕರೆಯುತ್ತಿದ್ದ 'ನುಕ್ಕಿ' ಎಂಬ ಅಡ್ಡ ಹೆಸರನ್ನೇ ತಮ್ಮ ಬ್ರ್ಯಾಂಡ್‌ಗೆ ಇಟ್ಟಿರುವ ಅವರು, ಮನೆಯಲ್ಲಿಯೇ ಬೇಕರಿ ತಿನಿಸುಗಳನ್ನು ತಯಾರಿಸುತ್ತಿದ್ದಾರೆ.

Read Full Story

04:56 PM (IST) Jul 15

ಗರ್ಭಿಣಿ ಸಮಂತಾರ ವೆಲ್‌ನೆಸ್ ವೆಕೇಷನ್ - ಪತಿ ರಾಜ್ ಜೊತೆಗಿನ ಕ್ಯೂಟ್ ಫೋಟೋಸ್ ವೈರಲ್

ನಟಿ ಸಮಂತಾ ಸದ್ಯದಲ್ಲೇ ತಾಯಿಯಾಗುತ್ತಿದ್ದು, ಪತಿ ರಾಜ್ ನಿಡಿಮೋರು ಜೊತೆ 'ವೆಲ್‌ನೆಸ್' ವೆಕೇಷನ್‌ಗೆ ತೆರಳಿದ್ದಾರೆ. ಈ ಭಾವಿ ಪೋಷಕರು ಒಟ್ಟಿಗೆ ಕಳೆದ ಸುಂದರ ಕ್ಷಣಗಳ ಫೋಟೋಗಳನ್ನು ಸಮಂತಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

Read Full Story

04:40 PM (IST) Jul 15

ಕಾಯುವಿಕೆಗೆ ಬ್ರೇಕ್, ದಳಪತಿ ವಿಜಯ್ ಅಭಿಮಾನಿಗಳಿಗೆ ಗುಡ್ ನ್ಯೂಸ್ - 'ಜನ ನಾಯಗನ್' ರಿಲೀಸ್ ಡೇಟ್ ಫಿಕ್ಸ್

ದಳಪತಿ ವಿಜಯ್ ಅವರ ವೃತ್ತಿಜೀವನದ ಕೊನೆಯ ಸಿನಿಮಾ 'ಜನ ನಾಯಗನ್' ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಎಚ್. ವಿನೋದ್ ನಿರ್ದೇಶನದ ಈ ಚಿತ್ರವು ಜುಲೈ 23 ರಂದು ವಿಶ್ವಾದ್ಯಂತ ತೆರೆಗೆ ಅಪ್ಪಳಿಸಲಿದೆ.

Read Full Story

04:39 PM (IST) Jul 15

ಸಿಲಿಕಾನ್ ಸಿಟಿ ಹವಾಮಾನ ಇತಿಹಾಸದಲ್ಲಿಯೇ 112 ವರ್ಷಗಳ ಹಳೆಯ ದಾಖಲೆ ಬ್ರೇಕ್, ಜುಲೈ ಬಿಸಿಲಿಗೆ ಬೆಂದ ಬೆಂಗಳೂರು!

ಬೆಂಗಳೂರಿನಲ್ಲಿ ಜುಲೈ   112 ವರ್ಷಗಳಲ್ಲೇ ಅತ್ಯಧಿಕ 33.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಾಣವಾಗಿದೆ. ದುರ್ಬಲಗೊಂಡ ನೈಋತ್ಯ ಮಾನ್ಸೂನ್ ಮತ್ತು ಎಲ್ ನಿನೊದಂತಹ ಜಾಗತಿಕ ಹವಾಮಾನ ವಿದ್ಯಮಾನಗಳು ಈ ಅಸಾಮಾನ್ಯ ತಾಪಮಾನ ಏರಿಕೆಗೆ ಕಾರಣವೆಂದು ತಜ್ಞರು ವಿಶ್ಲೇಷಿಸಿದ್ದಾರೆ.

Read Full Story

04:26 PM (IST) Jul 15

ಕಣ್ಣೀರಿನ ಲೆಕ್ಕ ಕೇಳಬೇಡಿ, ಅಜ್ಜಿ ಮೇಲಿನ ನನ್ನ ಪ್ರೀತಿ ಅಳೆಯಬೇಡಿ.. ಟ್ರೋಲ್‌ಗೆ ಬೇಸರಗೊಂಡ ಎಸ್‌ ಜಾನಕಿ ಮೊಮ್ಮಗಳು ಅಪ್ಸರಾ

ಅಪ್ಸರಾ ಅವರ ಪೋಸ್ಟ್‌ನಲ್ಲಿ ಅಡಗಿರುವ ಅತಿದೊಡ್ಡ ನೋವೆಂದರೆ ಅವರ ಅಕ್ಕ ವರ್ಷಾ ಅವರ ನೆನಪು. ಅಜ್ಜಿಗೆ ತನ್ನ ಮೊಮ್ಮಕ್ಕಳಲ್ಲಿ ಅತಿ ಹೆಚ್ಚು ಪ್ರಿಯವಾಗಿದ್ದವಳು ವರ್ಷಾ. ಅವರಿಬ್ಬರ ನಡುವಿನ ಸಂಬಂಧ ವರ್ಣನಾತೀತವಾಗಿತ್ತು. ಆದರೆ ವಿಧಿಯಾಟ ಬೇರೆಯೇ ಇತ್ತು...

Read Full Story

04:21 PM (IST) Jul 15

380 ಕೋಣಗಳು, 700 ವರ್ಷದ ಇತಿಹಾಸ... 'ಕರಾವಳಿ' ಬಗ್ಗೆ ಹೊಸ ಮಾಹಿತಿ ಹೊರಬಿತ್ತು!

ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ 'ಕರಾವಳಿ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಚಿತ್ರವು ಸೆನ್ಸಾರ್ ಮಂಡಳಿಯ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಉತ್ತೀರ್ಣಗೊಂಡು ಯು/ಎ (U/A) ಪ್ರಮಾಣಪತ್ರ ಪಡೆದಿದೆ.

Read Full Story

04:19 PM (IST) Jul 15

ರಾತ್ರಿ ಆಗ್ತಿದ್ದಂತೆ ಇಂದಿರಾನಗರ ಲೇಡಿಸ್‌ ಪಿಜಿಯಲ್ಲಿ ಒಳಉಡುಪುಗಳ ಕಳ್ಳತನ, ಯುವತಿಯರ ಕ್ಯಾಮೆರಾ ಕಾರ್ಯಾಚರಣೆಗೆ ಸಿಕ್ಕ ವಿಕೃತ ಕಾಮಿ!

ಇಂದಿರಾನಗರದ ಅಪಾರ್ಟ್‌ಮೆಂಟ್ ಒಂದರಲ್ಲಿ ಯುವತಿಯರ ಒಳ ಉಡುಪುಗಳನ್ನು ಕದ್ದು ವಿಕೃತಿ ಮೆರೆಯುತ್ತಿದ್ದ ಡೆಲಿವರಿ ಬಾಯ್‌ನನ್ನು ಇಬ್ಬರು ಯುವತಿಯರು ರಹಸ್ಯ ಕ್ಯಾಮೆರಾ ಅಳವಡಿಸಿ ಪತ್ತೆಹಚ್ಚಿದ್ದಾರೆ. ಆರೋಪಿ ಅಬ್ದುಲ್ ಹುಸೇನ್‌ನನ್ನು ಪೊಲೀಸರು ಬಂಧಿಸಿದ್ದು, ಈತ ಜಾಮೀನಿನ ಮೇಲೆ ಹೊರಬಂದಿದ್ದಾನೆ.
Read Full Story

03:42 PM (IST) Jul 15

ಬಟ್ಟೆ ಎಳೆದಾಡಿ "ಬೇಬಿ ಡಾರ್ಲಿಂಗ್ ನನ್ನ ಇಷ್ಟಪಡ್ತೀಯಾ?, ವಿದ್ಯಾರ್ಥಿನಿಯರಿಗೆ ದಾವಣಗೆರೆ ಉಪನ್ಯಾಸಕನ ಕಾಟ!

ದಾವಣಗೆರೆ ಜಿಲ್ಲೆಯ ಮಲೆಬೆನ್ನೂರು ಕಾಲೇಜಿನ ಉಪನ್ಯಾಸಕ ಮಲ್ಲಿಕಾರ್ಜುನ, ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸಂತ್ರಸ್ತೆಯ ತಾಯಿ ನೀಡಿದ ದೂರಿನ ಅನ್ವಯ, ಆರೋಪಿ ಉಪನ್ಯಾಸಕನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಜಿಲ್ಲಾಧಿಕಾರಿಗಳು ಆತನನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.
Read Full Story

03:42 PM (IST) Jul 15

ಗೃಹ ಜ್ಯೋತಿ ಸಮೀಕ್ಷೆಯಲ್ಲಿ ದಾಖಲೆ ನೀಡಲು ನಿರಾಕರಿಸಬಹುದು!; ಆದರೆ, ಫ್ರೀ ಕರೆಂಟ್‌ ಸಿಗೋದಿಲ್ಲ!

ರಾಜ್ಯ ಸರ್ಕಾರದ ಗೃಹಜ್ಯೋತಿ ಯೋಜನೆಯ ಪರಿಶೀಲನಾ ನಮೂನೆಯಲ್ಲಿ 'ಆಪ್ಟ್-ಔಟ್' ಆಯ್ಕೆಯನ್ನು ಸೇರಿಸಲಾಗಿದೆ. ಈ ಮೂಲಕ ಗ್ರಾಹಕರು ತಮ್ಮ ವೈಯಕ್ತಿಕ ದಾಖಲೆಗಳನ್ನು ನೀಡಲು ನಿರಾಕರಿಸಬಹುದು. ಆದರೆ, ಈ ಆಯ್ಕೆಯನ್ನು ಬಳಸಿಕೊಂಡರೆ, ಅವರಿಗೆ ಸಿಗುತ್ತಿರುವ ಉಚಿತ ವಿದ್ಯುತ್ ಸೌಲಭ್ಯ ತಕ್ಷಣವೇ ಸ್ಥಗಿತಗೊಳ್ಳಲಿದೆ.
Read Full Story

03:21 PM (IST) Jul 15

ಜೈಲಲ್ಲಿರೋ ಗಂಡನಿಗೆ ಮನೆಯಲ್ಲಿರೋ ಹೆಂಡತಿಯ ಎಮೋಶನಲ್ ಸಾಂಗ್.. ವಿಜಯಲಕ್ಷ್ಮೀ ಪೋಸ್ಟ್‌ಗೆ ಫ್ಯಾನ್ಸ್ ಕಣ್ಣೀರು!

ದರ್ಶನ್ ಮತ್ತು ವಿಜಯಲಕ್ಷ್ಮೀ ಅವರ ಬದುಕಿನಲ್ಲೂ ಈ ಹಾಡು ವಿಶೇಷ ಸ್ಥಾನ ಪಡೆದಿದೆ. ಈ ಹಿಂದೆ ದರ್ಶನ್ ಹಾಗೂ ವಿಜಯಲಕ್ಷ್ಮೀ ವೆಡ್ಡಿಂಗ್ ಆನಿವರ್ಸರಿ ಪಾರ್ಟಿ ನಡೆದಾಗ, ಪತ್ನಿಯ ಮೇಲಿನ ಪ್ರೀತಿಗಾಗಿ ದರ್ಶನ್ ಎಲ್ಲರ ಸಮ್ಮುಖದಲ್ಲಿ ಇದೇ ಹಾಡನ್ನ ಹಾಡಿ ರಂಜಿಸಿದ್ದರು. ಯಾವ್ ಹಾಡು ನೋಡಿ..!

Read Full Story

02:56 PM (IST) Jul 15

ಬಿಡದಿ ಟೌನ್‌ಶಿಪ್ ತಾತ್ಕಾಲಿಕ ಸ್ಥಗಿತ, 3 ತಿಂಗಳಲ್ಲಿ ಸಮಿತಿ ರಚನೆ - ಸಿಎಂ ಡಿಕೆಶಿ ಸುದೀರ್ಘ ಸುದ್ದಿಗೋಷ್ಠಿ ಸಾರಾಂಶ

ಬಿಡದಿ ಟೌನ್‌ಶಿಪ್ ಯೋಜನೆ ವಿವಾದದ ಕುರಿತು ಪತ್ರಿಕಾಗೋಷ್ಠಿ ನಡೆಸಿದ ಸಿಎಂ ಡಿ.ಕೆ. ಶಿವಕುಮಾರ್, ಈ ಯೋಜನೆಗೆ ಅಡಿಪಾಯ ಹಾಕಿದ್ದೇ ಕುಮಾರಸ್ವಾಮಿ ಸರ್ಕಾರ ಎಂದು ದಾಖಲೆ ಸಮೇತ ಆರೋಪಿಸಿದ್ದಾರೆ. ರೈತರ ಒಪ್ಪಿಗೆಯಿಲ್ಲದೆ ಭೂಸ್ವಾಧೀನ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿ, ಸದ್ಯಕ್ಕೆ ಯೋಜನೆ ಸ್ಥಗಿತಗೊಳಿಸಿ ಸಮಿತಿ ರಚಿಸುವುದಾಗಿ ಘೋಷಿಸಿದ್ದಾರೆ.
Read Full Story

02:17 PM (IST) Jul 15

BMTC ಕಂಡಕ್ಟರ್​ ಬ್ಯಾಗನ್ನೇ ಎಗರಿಸಿದ ಮಹಿಳೆ- ಇನ್ನೇನು ಇಳಿಯುವಾಗ ಸಿಕ್ಕಿಬಿದ್ಲು - ಶಾಕಿಂಗ್​ ವಿಡಿಯೋ ವೈರಲ್​

ಬೆಂಗಳೂರಿನಲ್ಲಿ ಜನದಟ್ಟಣೆಯಿದ್ದ ಬಿಎಂಟಿಸಿ ಬಸ್‌ನಲ್ಲಿ ಮಹಿಳೆಯೊಬ್ಬಳು ಕಂಡಕ್ಟರ್ ಬ್ಯಾಗ್‌ ಅನ್ನೇ ಕದ್ದಿದ್ದಾಳೆ. ಆದರೆ, ಕಂಡಕ್ಟರ್ ಸಮಯಪ್ರಜ್ಞೆಯಿಂದ ಬಸ್‌ನ ಬಾಗಿಲು ಮುಚ್ಚಿಸಿ, ಕಳ್ಳಿಯನ್ನು ಹಿಡಿದಿದ್ದಾರೆ. ತಮಿಳುನಾಡು ಮೂಲದ ಈ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಘಟನೆಯ ವಿಡಿಯೋ ವೈರಲ್ ಆಗಿದೆ.
Read Full Story

01:11 PM (IST) Jul 15

ಕಾರವಾರ ಕರಾವಳಿಯಲ್ಲಿ ಸಾಂಪ್ರದಾಯಿಕ ಬೇಟೆಗೆ ಬಿದ್ದ ಬಂಗಾರ! ರಾಶಿ ರಾಶಿ ಮೀನು ನೋಡಿ ಮೀನುಗಾರರು ಫುಲ್ ಖುಷ್!

ಕಾರವಾರದ ಕರಾವಳಿಯಲ್ಲಿ ಹೊಸ ಮೀನುಗಾರಿಕಾ ಹಂಗಾಮಿನ ಆರಂಭದಲ್ಲೇ ಸಾಂಪ್ರದಾಯಿಕ ಮೀನುಗಾರರಿಗೆ ಬಂಪರ್ ಮೀನು ಬೇಟೆಯಾಗಿದೆ. ಏಂಡಿ ಬಲೆಗೆ ಟನ್‌ಗಟ್ಟಲೆ ಮೀನುಗಳು ಬಿದ್ದಿದ್ದು, ಇದು ಹಿಂದಿನ ನಷ್ಟದಿಂದ ಕಂಗೆಟ್ಟಿದ್ದ ಮೀನುಗಾರರಲ್ಲಿ ಆರ್ಥಿಕ ಚೇತರಿಕೆಯ ಹೊಸ ಭರವಸೆ ಮೂಡಿಸಿದೆ.

Read Full Story

12:25 PM (IST) Jul 15

Samantha - 'ಸ್ವಲ್ಪ ಸಮಯದಿಂದ ಈ ಕ್ಷಣಕ್ಕಾಗಿ ಕಾಯುತ್ತಿದ್ದೇನೆ'.. ಸಮಂತಾ ನೇರ ನುಡಿಗೆ ನೆಟ್ಟಿಗರ ಮೆಚ್ಚುಗೆ!

ಸಮಂತಾ ಅವರ ವೈಯಕ್ತಿಕ ಜೀವನದ ಬಗ್ಗೆ ಹತ್ತಾರು ಸುದ್ದಿಗಳು ಹರಿದಾಡುತ್ತಿದ್ದವು. ಆದರೆ, ಎಲ್ಲದಕ್ಕೂ ಈಗ 'ಶುಭಂ' ಹಾಡಲಾಗಿದೆ. 2025ರ ಡಿಸೆಂಬರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿ, ಇತ್ತೀಚೆಗೆ ‘ನಾವು ಪೋಷಕರಾಗುತ್ತಿದ್ದೇವೆ’ ಎಂಬ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಈಗ ಹೊಸ ಸುದ್ದಿ!

Read Full Story

12:16 PM (IST) Jul 15

ತಾಯಿಯ ಜೀವ ಉಳಿಸಲು ಮಗನ ಹರಸಾಹಸ; ಗರೀಬ್ ರಥ್‌ ಎಕ್ಸ್‌ಪ್ರೆಸ್ ನಲ್ಲಿ ಹೃದಯವಿದ್ರಾವಕ ಘಟನೆ

ಮುಂಬೈ-ದೆಹಲಿ ಗರೀಬ್ ರಥ್ ರೈಲಿನಲ್ಲಿ ಉಸಿರಾಟದ ತೊಂದರೆಯಿಂದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಭರೂಚ್ ಬಳಿ ಸಂಜೆ 4:17 ಕ್ಕೆ ಮಹಿಳೆ ಅಸ್ವಸ್ಥರಾದಾಗ ರೈಲು ನಿಲ್ಲಿಸಲು ಇಲಾಖೆ 40 ನಿಮಿಷ ವಿಳಂಬ ಮಾಡಿದೆ ಎಂದು ಸಹಪ್ರಯಾಣಿಕ ಬ್ಲಾಗರ್ ಆರೋಪಿಸಿದ್ದಾರೆ. ಆದರೆ, ಮಾಹಿತಿ ಸಿಕ್ಕ ತಕ್ಷಣ ಇಟೋಲಾ ನಿಲ್ದಾಣದಲ್ಲಿ 10 ನಿಮಿಷಗಳಲ್ಲಿ ವೈದ್ಯಕೀಯ ನೆರವು ಒದಗಿಸಲಾಗಿತ್ತು ಎಂದು ವಡೋದರಾ ರೈಲ್ವೆ ವಿಭಾಗ ಸ್ಪಷ್ಟನೆ ನೀಡಿದೆ.

Read Full Story

12:07 PM (IST) Jul 15

Shocking-Cancer - 'ಕಲ್ಲರಳಿ ಹೂವಾಗಿ' ನಟಿಗೆ ಕ್ಯಾನ್ಸರ್; ಕಾಯಿಲೆ ವಿರುದ್ಧ ಹೋರಾಡುತ್ತಿರೋ ನಟಿಯ ಭಾವನಾತ್ಮಕ ಪೋಸ್ಟ್!

ನಟಿಯ ಈ ಹೋರಾಟದ ಸುದ್ದಿ ತಿಳಿದು ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಅತೀವ ನೋವು ವ್ಯಕ್ತಪಡಿಸಿದ್ದಾರೆ. "ನೀವು ಗೆದ್ದು ಬರುತ್ತೀರಿ, ಮತ್ತೆ ನಗುಮುಖದಿಂದ ಕಾಣಿಸಿಕೊಳ್ಳುತ್ತೀರಿ" ಎಂಬ ಹಾರೈಕೆಗಳು ಹರಿದುಬರುತ್ತಿವೆ. ಬಣ್ಣದ ಲೋಕದ ಈ ಪ್ರತಿಭಾವಂತ ನಟಿಗೆ ಈಗ ಜೀವನದ ಕಠಿಣ ಪರೀಕ್ಷೆ!

Read Full Story

11:57 AM (IST) Jul 15

Bengaluru ಬೀದಿ ಬದಿ ವ್ಯಾಪಾರಕ್ಕೆ ಸರ್ಕಾರದ ಮಾಸ್ಟರ್ ಪ್ಲಾನ್, ಕನ್ನಡಿಗರು ಓಕೆ! ಹಿಂದಿಗರು ಯಾಕೆ?

ಬೆಂಗಳೂರಿನಲ್ಲಿ ಬೀದಿ ಬದಿ ವ್ಯಾಪಾರವನ್ನು ನಿಯಂತ್ರಿಸಲು ಸರ್ಕಾರ ಹೊಸ ಮಾಸ್ಟರ್ ಪ್ಲಾನ್ ರೂಪಿಸುತ್ತಿದೆ. ಈ ಯೋಜನೆಯಡಿ, ಕರ್ನಾಟಕದ ಗುರುತಿನ ಚೀಟಿ ಹೊಂದಿರುವ ಸ್ಥಳೀಯ ಕನ್ನಡಿಗರಿಗೆ ಮಾತ್ರ ಆದ್ಯತೆ ನೀಡಿ, ಹೊರ ರಾಜ್ಯದ ವ್ಯಾಪಾರಿಗಳಿಗೆ ನಿರ್ಬಂಧ ಹೇರಲು ನಿರ್ಧರಿಸಲಾಗಿದೆ. ಅಲ್ಲದೆ, ಪಾದಚಾರಿ ಮಾರ್ಗಗಳನ್ನು ತೆರವುಗೊಳಿಸಿ, ವ್ಯಾಪಾರಿಗಳಿಗಾಗಿ ಪ್ರತ್ಯೇಕ 'ವೆಂಡಿಂಗ್ ಝೋನ್'ಗಳನ್ನು ಸ್ಥಾಪಿಸಲಾಗುವುದು.
Read Full Story

11:16 AM (IST) Jul 15

'No One Does Warmth Like Bangaloreans' – ಬೆಂಗಳೂರಿನ ಆಟೋ ಚಾಲಕನಿಗೆ ಫಿದಾ ಆದ ಅಮೆರಿಕನ್

ಬೆಂಗಳೂರಿನಲ್ಲಿ ಅಮೆರಿಕದ ವ್ಲಾಗರ್ ಕ್ರಿಸ್ ಹಾಗೂ ಆಟೋ ಚಾಲಕನ ನಡುವಿನ ಸಂಭಾಷಣೆಯ ವಿಡಿಯೋ ವೈರಲ್ ಆಗಿದೆ. ಮಕ್ಕಳನ್ನು ಶಾಲೆಯಿಂದ ಕರೆತರಬೇಕಿದ್ದರಿಂದ ಚಾಲಕ ಚಿಕ್ಕಪೇಟೆಗೆ ಸವಾರಿ ನಿರಾಕರಿಸಿದರೂ, ಬಟ್ಲರ್ ಇಂಗ್ಲಿಷ್‌ನಲ್ಲಿ ಕ್ಯಾಬ್ ಬುಕ್ ಮಾಡಲು ಸಹಾಯ ಮಾಡಿದ್ದಾನೆ. ಇಬ್ಬರ ನಡುವೆ ನಡೆದ 'ಕನ್ನಡ-ಕೆನಡಾ' ಭಾಷಾ ಗೊಂದಲದ ಮಾತುಕತೆ ಹಾಗೂ ಬೆಂಗಳೂರಿಗರ ಆತ್ಮೀಯತೆಗೆ ನೆಟ್ಟಿಗರು ಮನಸೋತಿದ್ದಾರೆ.

Read Full Story

11:13 AM (IST) Jul 15

ಆಂಧ್ರದಲ್ಲಿ 2 ಸಾವು ಬೆನ್ನಲ್ಲೇ ಕರ್ನಾಟಕದಲ್ಲಿ ಮತ್ತೆ ಕೊರೋನಾ ಸಕ್ರೀಯ, ಈ ತಿಂಗಳು 32 ಪ್ರಕರಣ ಪತ್ತೆ!

ಕರ್ನಾಟಕದಲ್ಲಿ ಕೋವಿಡ್ ಪ್ರಕರಣಗಳು ನಿಧಾನವಾಗಿ ಏರುತ್ತಿದ್ದು, ನೆರೆಯ ಆಂಧ್ರಪ್ರದೇಶದಲ್ಲಿ ಸಾವುಗಳು ವರದಿಯಾಗಿವೆ. ಈ ಹಿನ್ನೆಲೆಯಲ್ಲಿ, ರಾಜ್ಯ ಆರೋಗ್ಯ ಇಲಾಖೆಯು ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಿದ್ದು, ಸಾರ್ವಜನಿಕರಿಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಲು ಸೂಚಿಸಿದೆ.
Read Full Story

10:47 AM (IST) Jul 15

ಕರ್ನಾಟಕ ಅಪಾರ್ಟ್ಮೆಂಟ್‌ ವಿಧೇಯಕ 2026ಕ್ಕೆ ರಾಜ್ಯ ಸರ್ಕಾರ ನಿರ್ಧಾರ, ಮಹತ್ವದ ಸಭೆ, ಏನಿದು ಹೊಸ ಕಾಯ್ದೆ?

ರಾಜ್ಯದಲ್ಲಿ ಅಪಾರ್ಟ್‌ಮೆಂಟ್ ಮಾಲೀಕರು ಮತ್ತು ನಿವಾಸಿಗಳ ಹಿತರಕ್ಷಣೆಗಾಗಿ ಕರ್ನಾಟಕ ಸರ್ಕಾರವು 'ಕರ್ನಾಟಕ ಅಪಾರ್ಟ್ಮೆಂಟ್‌ (ಮಾಲಿಕತ್ವ ಹಾಗೂ ನಿರ್ವಹಣೆ) ವಿಧೇಯಕ 2026' ಎಂಬ ಹೊಸ ಕಾನೂನನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ. ಈ ಕರಡು ವಿಧೇಯಕವು ಮಾಲೀಕತ್ವಕ್ಕೆ ಕಾನೂನು ರಕ್ಷಣೆ, ನಿರ್ವಹಣಾ ಹಣಕಾಸಿನಲ್ಲಿ ಪಾರದರ್ಶಕತೆ, ಮತ್ತು ಬಿಲ್ಡರ್‌ಗಳಿಂದ ನಿವಾಸಿಗಳ ಸಂಘಕ್ಕೆ ಆಡಳಿತ ಹಸ್ತಾಂತರವನ್ನು ಕಡ್ಡಾಯಗೊಳಿಸುವ ಗುರಿ ಹೊಂದಿದೆ.
Read Full Story

10:29 AM (IST) Jul 15

ಆಂಧ್ರದಲ್ಲಿ ಕೋವಿಡ್‌ಗೆ ಇಬ್ಬರು ಬಲಿ! ತುಮಕೂರು ಗಡಿಭಾಗ ಪಾವಗಡದಲ್ಲಿ ತೀವ್ರ ನಿಗಾ, 5 ಕಡೆ ಚೆಕ್‌ಪೋಸ್ಟ್ ಸ್ಥಾಪನೆ

ನೆರೆರಾಜ್ಯ ಆಂಧ್ರಪ್ರದೇಶದಲ್ಲಿ ಕೋವಿಡ್-19 ಸಾವುಗಳು ವರದಿಯಾದ ಹಿನ್ನೆಲೆಯಲ್ಲಿ, ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಗಡಿಭಾಗದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಆಂಧ್ರದಿಂದ ಬರುವವರನ್ನು ತಪಾಸಣೆ ಮಾಡಲು ರಾಜವಂತಿ, ನಾಗಲಮಡಿಕೆ ಸೇರಿದಂತೆ ಐದು ಪ್ರಮುಖ ಸ್ಥಳಗಳಲ್ಲಿ ಕೋವಿಡ್ ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಿ, ಕಟ್ಟುನಿಟ್ಟಿನ ನಿಗಾ ವಹಿಸಲಾಗಿದೆ.
Read Full Story

09:13 AM (IST) Jul 15

ಚಿಕನ್, ಮೊಟ್ಟೆ ಪ್ರಿಯರಿಗೆ ಬಿಗ್ ಶಾಕ್ - ಇತಿಹಾಸದಲ್ಲೇ ಮೊದಲ ಬಾರಿಗೆ ದಾಖಲೆ ಮಟ್ಟಕ್ಕೆ ಏರಿದ ದರ!

ಬೆಂಗಳೂರಿನಲ್ಲಿ ಚಿಕನ್ ಮತ್ತು ಮೊಟ್ಟೆ ದರ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ. ಕೋಳಿಗಳ ಬೆಳವಣಿಗೆ ಕುಂಠಿತ ಮತ್ತು ಬೇರೆ ರಾಜ್ಯಗಳಿಗೆ ರಫ್ತು ಹೆಚ್ಚಾಗಿದ್ದರಿಂದ ಪೂರೈಕೆ ಕಡಿಮೆಯಾಗಿ, ಬೆಲೆ ಗಗನಕ್ಕೇರಿದ್ದು, ಇದು ಗ್ರಾಹಕರು ಮತ್ತು ವ್ಯಾಪಾರಿಗಳ ಮೇಲೆ ಪರಿಣಾಮ ಬೀರಿದೆ.
Read Full Story

08:40 AM (IST) Jul 15

ನಾಡಗೀತೆಗೆ ಬೌದ್ಧ ಪದ ಸೇರ್ಪಡೆಗೆ ತಜ್ಞರ ಸಮಿತಿಯಿಂದ ಶಿಫಾರಸು; ಮಹತ್ವದ ಬದಲಾವಣೆ ಸಾಧ್ಯತೆ

ರಾಷ್ಟ್ರಕವಿ ಕುವೆಂಪು ರಚಿತ ನಾಡಗೀತೆಯಲ್ಲಿ 'ಪಾರಸಿಕ ಜೈನರುದ್ಯಾನ' ಎಂಬ ಸಾಲಿಗೆ 'ಬೌದ್ಧ' ಪದವನ್ನು ಸೇರಿಸಲು ತಜ್ಞರ ಸಮಿತಿಯು ಸರ್ಕಾರಕ್ಕೆ ಸರ್ವಾನುಮತದಿಂದ ಶಿಫಾರಸು ಮಾಡಿದೆ. ಕುವೆಂಪು ಅವರ ಮೂಲ ಕರಡಿನಲ್ಲಿ ಈ ಪದವಿದ್ದು, ಈ ಸೇರ್ಪಡೆಯಿಂದ ಗೀತೆಯ ಲಯಕ್ಕೆ ಧಕ್ಕೆಯಾಗುವುದಿಲ್ಲ ಎಂದು ಸಮಿತಿ ಖಚಿತಪಡಿಸಿದೆ.
Read Full Story

08:35 AM (IST) Jul 15

ಫುಟ್ಪಾತ್ ಒತ್ತುವರಿ, ವಾಹನ ತೆರವು ಬಳಿಕ, ಈಗ ಮತ್ತೊಂದು ಮಹತ್ವದ ಅಭಿಯಾನ ಘೋಷಿಸಿದ ಸಚಿವ ಕೃಷ್ಣಬೈರೇಗೌಡ! ಆ.1ರಿಂದಲೇ ಶುರು!

ಕಸದಿಂದ ಸ್ವಾತಂತ್ರ್ಯ ಎಂಬ ಘೋಷವಾಕ್ಯದೊಂದಿಗೆ ನಗರದಲ್ಲಿ ಎಲ್ಲೆಂದರಲ್ಲಿ ಬಿದ್ದಿರುವ ಕಸವನ್ನು ತೆರವುಗೊಳಿಸಲು ‘ಕಸ ಮುಕ್ತ ಬೆಂಗಳೂರು’ ಹೆಸರಿನ ವಿಶೇಷ ಅಭಿಯಾನವನ್ನು ಆಗಸ್ಟ್‌ 1ರಿಂದ 1 ತಿಂಗಳು ಹಮ್ಮಿಕೊಳ್ಳಲಾಗುವುದು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

Read Full Story

07:57 AM (IST) Jul 15

ಮುಂಡಗೋಡ-ಸವದತ್ತಿ - ಭಕ್ತರ ಬಹುದಿನದ ಕನಸು ನನಸು, ನೂತನ ಬಸ್‌ಗೆ ಶಾಸಕ ಹೆಬ್ಬಾರ್ ಚಾಲನೆ

ಮಂಗಳವಾರ ಮುಂಡಗೋಡ ಬಸ್ ನಿಲ್ದಾಣದಲ್ಲಿ ಶಾಸಕ ಶಿವರಾಮ ಹೆಬ್ಬಾರ ಅವರು ಮುಂಡಗೋಡ-ಸವದತ್ತಿ ನೂತನ ಬಸ್ ಸೇವೆಗೆ ಹಸಿರು ನಿಶಾನೆ ತೋರಿದರು. ಈ ಹೊಸ ಬಸ್ ಸೇವೆಯು ಸವದತ್ತಿ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ತೆರಳುವ ಉತ್ತರ ಕನ್ನಡ ಜಿಲ್ಲೆಯ ಭಕ್ತರಿಗೆ ಮತ್ತು ಸಾರ್ವಜನಿಕರಿಗೆ ಹೆಚ್ಚು ಅನುಕೂಲಕರವಾಗಲಿದೆ.
Read Full Story

07:56 AM (IST) Jul 15

14 ವರ್ಷಗಳ ದ್ವೇಷ... ತಪ್ಪಿಸಿಕೊಂಡಿದ್ದ ಕುಟುಂಬದ ಮೇಲೆ ಒಂಟಿ ಸಲಗದ ದಾಳಿ... ನಾಲ್ವರು ಬಲಿ!

ನೇಪಾಳದ ಕುಖ್ಯಾತ "ಧುರ್ಬೆ" ಆನೆ 14 ವರ್ಷಗಳ ಅವಧಿಯಲ್ಲಿ ಶನಿಚಾರ ಬೋಟೆ ಎಂಬುವವರ ಒಂದೇ ಕುಟುಂಬದ ನಾಲ್ವರನ್ನು ಬಲಿಪಡೆದಿದೆ. 2012 ರಲ್ಲಿ ಹೆತ್ತವರನ್ನು ಕೊಂದ ಆನೆಗೆ ಹೆದರಿ 9 ಮೈಲು ದೂರ ವಲಸೆ ಹೋಗಿದ್ದ ಕುಟುಂಬವನ್ನು ಬೆನ್ನಟ್ಟಿದ ಆನೆ, ಜುಲೈ 2026 ರಲ್ಲಿ ಸೊಸೆ ಹಾಗೂ 4 ವರ್ಷದ ಮೊಮ್ಮಗನನ್ನು ಕೊಂದಿದೆ. 25 ಜನರನ್ನು ಬಲಿಪಡೆದಿರುವ ಈ ಆನೆ ನೇಪಾಳದ ಅತ್ಯಂತ ಅಪಾಯಕಾರಿ ವನ್ಯಜೀವಿಯಾಗಿದೆ.

Read Full Story

07:41 AM (IST) Jul 15

ಬೆಂಗಳೂರಿನಲ್ಲಿದ್ದ ಚುಂಚನಗಿರಿ ಮಠದ 100 ಕೋಟಿ ಮೌಲ್ಯದ 6 ಎಕರೆ ಭೂಮಿ ಕಬಳಿಕೆ ಯತ್ನ

ಆದಿಚುಂಚನಗಿರಿ ಮಠಕ್ಕೆ ಸೇರಿದ ಸುಮಾರು 100 ಕೋಟಿ ರೂ. ಮೌಲ್ಯದ 6 ಎಕರೆ ಭೂಮಿಯನ್ನು ನಕಲಿ ದಾಖಲೆಗಳ ಮೂಲಕ ಕಬಳಿಸಲು ಯತ್ನಿಸಿದ ಪ್ರಕರಣವನ್ನು ಕೆಂಗೇರಿ ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ಆರು ಸರ್ಕಾರಿ ಅಧಿಕಾರಿಗಳು ಸೇರಿದಂತೆ ಒಟ್ಟು 11 ಮಂದಿಯನ್ನು ಬಂಧಿಸಲಾಗಿದೆ.
Read Full Story

More Trending News