ಬೆಂಗಳೂರು: ರಾಜಕೀಯ ನಾಯಕರಿಗೆ ನಾಲಿಗೆ ಹಿಡಿತದಲ್ಲಿರಬೇಕು. ರಾಜಕಾರಣಿಗಳು ಜನಪರ ನೀತಿಗಳ ಮತ್ತು ಪ್ರಮುಖ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿಲ್ಲ. ರಾಜಕೀಯ ನಾಯಕರ ಪರಸ್ಪರ ಆರೋಪಗಳನ್ನು ಕೇಳುವುದಕ್ಕೆ ಜನ ಆಸಕ್ತರಾಗಿಲ್ಲ ಎಂದು ಹೈಕೋರ್ಟ್ ಬೇಸರ ವ್ಯಕ್ತಪಡಿಸಿದೆ. ಕಲಬುರಗಿಯ ಜಿಲ್ಲಾಧಿಕಾರಿ ‘ಫೌಝಿಯಾ ತರನ್ನುಮ್ ಪಾಕಿಸ್ತಾನದವರೋ ಅಥವಾ ಭಾರತದವರೋ ಎಂಬ ಬಗ್ಗೆ ನನಗೆ ಖಚಿತವಿಲ್ಲ’ ಎಂದು ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ಕಲಬುರಗಿಯ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ರದ್ದುಪಡಿಸಬೇಕು ಎಂದು ಕೋರಿ ಬಿಜೆಪಿ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು.
ಜನ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಮಾತನಾಡದ ರಾಜಕಾರಣಿಗಳು, ಪರಸ್ಪರ ನಿಂದನೆ ಮತ್ತು ಕೀಳು ಮಾತು ಆಡಿ ಪ್ರಕರಣಗಳ ದಾಖಲೆಗೆ ಅವಕಾಶ ಮಾಡಿಕೊಡುತ್ತಿದ್ದಾರೆ. ಇದರಿಂದ ಅಧೀನ ನ್ಯಾಯಾಲಯಗಳಲ್ಲಿ 10 ವರ್ಷಗಳಿಂದ ಕೊಲೆ, ಸುಲಿಗೆಯಂಥ ಅಪರಾಧ ಪ್ರಕರಣಗಳ ವಿಚಾರಣೆ ಬಾಕಿ ಹೆಚ್ಚಾಗುತ್ತಿದೆ ನ್ಯಾಯಪೀಠ ತಿಳಿಸಿತು.
11:24 PM (IST) Aug 08
ಎತ್ತರದ ಗೋಡೆಯೊಂದರ ಸಣ್ಣ ರಂಧ್ರ ಅಥವಾ ಸಂದಿಯಲ್ಲಿ ಬೆಕ್ಕಿನ ಮರಿಗಳು ಸಿಲುಕಿಕೊಂಡಿರುವುದು ಕಾಣಿಸುತ್ತದೆ. ಕೆಳಗೆ ಇಳಿಯಲೂ ಸಾಧ್ಯವಾಗದೆ, ಮೇಲಕ್ಕೂ ಹೋಗಲಾಗದೆ ಅವು ಅಸಹಾಯಕವಾಗಿ ಕೂಗುತ್ತಿರುತ್ತವೆ.
10:42 PM (IST) Aug 08
Sreeleela Arunachalam: ಗೆಲುವು-ಸೋಲಿನ ಲೆಕ್ಕಾಚಾರವನ್ನು ಬದಿಗಿಟ್ಟು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಶ್ರೀಲೀಲಾ, ಇದೀಗ ಅರುಣಾಚಲೇಶ್ವರನ ಸನ್ನಿಧಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
10:29 PM (IST) Aug 08
10:23 PM (IST) Aug 08
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ನಾಲ್ಕು ನಿಮಿಷಕ್ಕೂ ಹೆಚ್ಚು ಅವಧಿಯ ಈ ಟ್ರೇಲರ್ನಲ್ಲಿ ಯಶ್ ಹಲವು ವಿಭಿನ್ನ ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ.
09:33 PM (IST) Aug 08
ಟೀಮ್ ಇಂಡಿಯಾದ ಉದಯೋನ್ಮುಖ ಕ್ರಿಕೆಟಿಗ ಮತ್ತು ಕಿರುತೆರೆ ನಟಿಯೊಬ್ಬರು 8 ವರ್ಷಗಳ ಕಾಲ ತಮ್ಮ ಪ್ರೀತಿಯನ್ನು ರಹಸ್ಯವಾಗಿಟ್ಟು ಈಗ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಅವರಿಬ್ಬರ ನಡುವೆ 7 ವರ್ಷಗಳ ವಯಸ್ಸಿನ ಅಂತರವಿದ್ದರೂ, ಈ ಜೋಡಿ ಈಗ ಒಂದಾಗಿದ್ದು, ಕ್ರಿಕೆಟ್ ಮತ್ತು ಸಿನಿಮಾ ಲೋಕದಲ್ಲಿ ಹೊಸ ಸಂಚಲನ ಮೂಡಿಸಿದೆ.
09:03 PM (IST) Aug 08
ನಾಲ್ಕು ವರ್ಷಗಳ ಬಳಿಕ ದೊಡ್ಡ ಪರದೆಯಲ್ಲಿ ಯಶ್ ಕಾಣಿಸಿಕೊಳ್ಳುತ್ತಿದ್ದಾರೆ. ‘ಕೆಜಿಎಫ್’ ಬಳಿಕ ಯಶ್ ನಟನೆಯ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ಅಪ್ಸ್’ ಸಿನಿಮಾ ಇದೀಗ ಬಿಡುಗಡೆ ಹೊಸ್ತಿಲಲ್ಲಿದೆ.
08:50 PM (IST) Aug 08
ಯುಪಿಐ ಪಾವತಿಗಳಿಗೆ ಶುಲ್ಕ ವಿಧಿಸಲಾಗುತ್ತದೆ ಎಂಬ ಗೊಂದಲಕ್ಕೆ ಕೇಂದ್ರ ಸರ್ಕಾರ ತೆರೆ ಎಳೆದಿದೆ. ಸಾಮಾನ್ಯ ಬಳಕೆದಾರರು ಮತ್ತು ಸಣ್ಣ ವ್ಯಾಪಾರಿಗಳಿಗೆ ಯುಪಿಐ ವಹಿವಾಟುಗಳು ಸಂಪೂರ್ಣವಾಗಿ ಉಚಿತವಾಗಿ ಮುಂದುವರಿಯಲಿವೆ ಎಂದು ಸ್ಪಷ್ಟಪಡಿಸಿದೆ.
08:28 PM (IST) Aug 08
ಕನ್ನಡದ ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಟ್ರೇಲರ್ ಬಿಡುಗಡೆ ಆಗಿದೆ. ಕನ್ನಡದ ಹಿರಿಯ ನಟ, ಕರುನಾಡ ಚಕ್ರವರ್ತಿ ಖ್ಯಾತಿಯ ಶಿವರಾಜ್ಕುಮಾರ್ ಅವರು ಟಾಕ್ಸಿಕ್ ಟ್ರೇಲರ್ ಬಿಡುಗಡೆ ಮಾಡಿ ‘ಯಶ್ ನನ್ನ ತಮ್ಮ.. ನಾನು ಈ ಸಿನಿಮಾ ಮಾಡಿದಷ್ಟೇ ಖುಷಿ ಆಗಿದೆ..’ ಎಂದರು. ಇನ್ನೂ ಏನಂದ್ರು? ಈ ಸ್ಟೋರಿ ನೋಡಿ..
08:26 PM (IST) Aug 08
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ಟ್ರೇಲರ್ ಕೊನೆಗೂ ಬಿಡುಗಡೆಯಾಗಿದೆ. ಬಹುಕಾಲದಿಂದ ಸಿನಿಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದ ಈ ಟ್ರೇಲರ್, ಸಿನಿಮಾದ ಕರಾಳ ಜಗತ್ತಿನ ಒಂದು ಝಲಕ್ ತೋರಿಸಿದೆ.
08:07 PM (IST) Aug 08
ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್ಅಪ್ಸ್’ ಸಿನಿಮಾದ ಟ್ರೇಲರ್ ಕೊನೆಗೂ ಬಿಡುಗಡೆಯಾಗಿದೆ. ಯಶ್ ಅಭಿಮಾನಿಗಳಲ್ಲಿ ಮಾತ್ರವಲ್ಲದೆ ಸಿನಿಪ್ರಿಯರಲ್ಲೂ ಟ್ರೇಲರ್ ಭಾರೀ ಕುತೂಹಲ ಮೂಡಿಸಿದೆ.
07:52 PM (IST) Aug 08
ಬಹುನಿರೀಕ್ಷಿತ ಟಾಕ್ಸಿಕ್ ಟ್ರೇಲರ್ ಇಂದು, 8 ಆಗಸ್ಟ್ 2026ರಂದು ಇದೀಗ ಬಿಡುಗಡೆ ಆಗಿದೆ. ಇದು ಜಗತ್ತಿನಾದ್ಯಂತ ಸಖತ್ ಸೌಂಡ್ ಮಾಡುತ್ತಿದ್ದು, ಈ ಟ್ರೇಲರ್ ಹೊಸ ದಾಖಲೆ ಬರೆದರೂ ಅಚ್ಚರಿಯಲ್ಲ! ಅಂದಹಾಗೆ, ಇದೇ ತಿಂಗಳು ಅಂದರೆ 26 ಆಗಷ್ಟ್ 2026ರಂದು ಯಶ್ ನಟನೆಯ ಈ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾ ಬಿಡುಗಡೆ ಆಗಲಿದೆ.
07:49 PM (IST) Aug 08
ದಕ್ಷಿಣ ಕಾಶಿ ಎಂದೇ ಗುರುತಿಸಿಕೊಂಡಿರುವ ಶಿವಗಂಗೆ ಬೆಟ್ಟಕ್ಕೆ ಟ್ರಕ್ಕಿಂಗ್ ಬಂದಿದ್ದ ಉದ್ಯಮಿಯ ಪುತ್ರ ನಾಪತ್ತೆಯಾದ ಘಟನೆ ನಡೆದಿದೆ. ಬೆಟ್ಟದ ಶಾಂತಾಲಾ ಡ್ರಾಪ್ ಅತ್ಯಂತ ಅಪಾಯಕಾರಿ ಸ್ಥಳವಾಗಿದ್ದು, ಇಲ್ಲಿ ಶೋಧ ಕಾರ್ಯ ನಡೆಯುತ್ತಿದೆ.
07:48 PM (IST) Aug 08
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್ಅಪ್ಸ್’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿ ಚರ್ಚೆ ಹುಟ್ಟುಹಾಕಿದೆ.
07:47 PM (IST) Aug 08
07:15 PM (IST) Aug 08
07:10 PM (IST) Aug 08
ಇಂದು ಬೆಂಗಳೂರಿನಲ್ಲಿ ನಡೆದ ಟಾಕ್ಸಿಕ್ ಈವೆಂಟ್ನ ಕೇಂದ್ರಬಿಂದುವಾಗಿ ರಾಕಿಂಗ್ ಸ್ಟಾರ್ ಯಶ್ 'ಕಿಂಗ್' ಆಗಿ ಮಿಂಚಿದ್ದಾರೆ. ಇಡೀ ಟಾಕ್ಸಿಕ್ ಟೀಮ್ ಅವರಿಗೆ ಸಾಥ್ ಕೊಟ್ಟಿದೆ. ಟ್ರೇಲರ್ ರಿಲೀಸ್ ಬಳಿಕ 'ಟಾಕ್ಸಿಕ್' ಸಿನಿಮಾ ಮತ್ತಷ್ಟು ಅಪಾರ ನಿರೀಕ್ಷೆ ಸೃಷ್ಟಿಸಿದೆ. ಟಾಕ್ಸಿಕ್ ಚಿತ್ರವು 08 ಆಗಸ್ಟ್ 2026ರಂದು ಇಡೀ ಜಗತ್ತಿನಾದ್ಯಂತ ಬಿಡುಗಡೆ ಆಗಲಿದೆ.
06:53 PM (IST) Aug 08
ಟಾಕ್ಸಿಕ್ ಸಿನಿಮಾ ಜಗತ್ತಿನಾದ್ಯಂತ ಭಾರೀ ನಿರೀಕ್ಷೆ ಹುಟ್ಟಿಸಿದೆ. ಈಗಾಗಲೇ ರಿಲೀಸ್ ಆಗಿರುವ ಟಾಕ್ಸಿಕ್ ಚಿತ್ರದ ಟೀಸರ್ ಹಾಗೂ ಹಾಡುಗಳು ಚಿತ್ರದ ಬಗೆಗಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿವೆ. ಜೊತೆಗೆ, ಇವತ್ತು ಬಿಡುಗಡೆ ಆಗಲಿರುವ ಟ್ರೇಲರ್ ಬಗ್ಗೆಯೂ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿದೆ. ಈ ಈವೆಂಟ್ಗೆ ನಟಿ ನಯನತಾರಾ ಆಗಮಿಸಿದ್ದಾರೆ.
06:35 PM (IST) Aug 08
ಅಂಟಾರ್ಕ್ಟಿಕಾ ಎಂದರೆ ನೆನಪಾಗುವುದೇ ಹಿಮ, ಕೊರೆಯುವ ಚಳಿ ಮತ್ತು ಗಡ್ಡೆಗಟ್ಟಿಸುವ ಗಾಳಿ. ಇದು ವಿಶ್ವದ ಅತ್ಯಂತ ಶೀತ ಪ್ರದೇಶಗಳಲ್ಲಿ ಒಂದಾಗಿದ್ದು, ಚಳಿಗಾಲದಲ್ಲಿ ಇಲ್ಲಿನ ತಾಪಮಾನ ಮೈನಸ್ 50 ಡಿಗ್ರಿ..
06:16 PM (IST) Aug 08
ನಟಿ ಪ್ರೇಮಾ ಕನ್ನಡ ಹಾಗೂ ತೆಲುಗು ಚಿತ್ರರಂಗದ ಪ್ರೇಕ್ಷಕರಿಗೆ ಚಿರಪರಿಚಿತ ಹೆಸರು. ಒಂದು ಕಾಲದಲ್ಲಿ ನಾಯಕಿಯಾಗಿ ಬಹುಬೇಡಿಕೆಯಲ್ಲಿದ್ದ ಅವರು, ಸದ್ಯ ಸಿನಿಮಾಗಳ ಸಂಖ್ಯೆಯನ್ನು ಕೊಂಚ ಕಡಿಮೆ ಮಾಡಿದ್ದಾರೆ.
05:57 PM (IST) Aug 08
ಗಣೇಶ ಹಬ್ಬದ ತಯಾರಿಗಳು ನಡೆಯುತ್ತಿದೆ. ಇದರ ಬೆನ್ನಲ್ಲೇ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಗಣೇಶ ಹಬ್ಬ ಆಚರಣೆಗೆ ಆರಂಭದಲ್ಲಿ ಖಡಕ್ ಮಾರ್ಗಸೂಚಿ ಪ್ರಕಟಿಸಿದೆ. ಕೆಲ ಪ್ರಮುಖ ನಿರ್ಬಂಧನೆ, ನಿಷೇಧಗಳನ್ನು ಹೇರಲಾಗಿದೆ.
05:51 PM (IST) Aug 08
‘ಟಾಕ್ಸಿಕ್’ ಟ್ರೇಲರ್ ಲಾಂಚ್ ಅನ್ನು ಸಾರ್ವಜನಿಕ ಕಾರ್ಯಕ್ರಮವಾಗಿ ಆಯೋಜಿಸಿಲ್ಲ. ಇದು ಸಂಪೂರ್ಣ ಖಾಸಗಿ ಕಾರ್ಯಕ್ರಮವಾಗಿದ್ದು, ಆಯ್ದ ಅತಿಥಿಗಳು ಮತ್ತು ಮಾಧ್ಯಮ ಪ್ರತಿನಿಧಿಗಳಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ.
05:30 PM (IST) Aug 08
Detective Teekshana: ‘ಇಲ್ಲಿ ಲಾಜಿಕ್ ವರ್ಕೌಟ್ ಆಗಲ್ಲ, ಮ್ಯಾಜಿಕ್ ನಡೆಯಬೇಕು’. ಕುಖ್ಯಾತ ಕೇಸೊಂದನ್ನು ಬಗೆಹರಿಸಲು ತಿಣುಕಾಡುವಾಗ ಡಿಟೆಕ್ಟಿವ್ ತೀಕ್ಷ್ಣ ಹೇಳುವ ಡೈಲಾಗ್ ಇದು. ಲೈಫಲ್ಲೂ ಎಷ್ಟೋ ಸಲ ಹೀಗಾಗುತ್ತದೆ.
05:15 PM (IST) Aug 08
Life Today Review: ಮೊದಲಾರ್ಧ ಪ್ರೇಮದಲ್ಲಿ ಕಳೆಯುತ್ತದೆ. ಆಮೇಲೆ ಕೊಂಚ ವಿಷಾದ. ನಂತರದ್ದು ಹಾವು ಏಣಿಯಾಟ. ಬದುಕು ಏರುಪೇರಿನ ಹಾದಿ. ಘರ್ಷಣೆಯಲ್ಲಿಯೇ ಬಹುತೇಕ ದ್ವಿತೀಯಾರ್ಧ ಮುಗಿಯುತ್ತದೆ.
05:07 PM (IST) Aug 08
ಕನ್ನಡದ ರಾಕಿಂಗ್ ಸ್ಟಾರ್ ಯಶ್ ಈಗ ಪ್ಯಾನ್ ಇಂಡಿಯಾ ಸ್ಟಾರ್ ಹಾಗೂ ಜಗತ್ತೇ ಕೊಂಡಾಡುವ ನಟ. ಆದರೆ, ಕೆಜಿಎಫ್ ಸಿನಿಮಾ ಬಿಡುಗಡೆ ವೇಳೆ ನಡೆದ ಹೈಡ್ರಾಮಾ ನಡೆದಿತ್ತು. ಕಾರಣ, ಅಂದು ನಟ ಯಶ್ ಅವರು ಕನ್ನಡ ಸಿನಿಜಗತ್ತಿನ 'ರಾಜಾಹುಲಿ' ಮಾತ್ರ ಆಗಿ ಮಿಂಚುತ್ತಿದ್ದರು. ಅದೇನು ಆಗಿತ್ತು ನೋಡಿ..!
05:05 PM (IST) Aug 08
Pichchar Review: ಎಲ್ಲಾ ಸಂಬಂಧಗಳು ಇರುವ ದೊಡ್ಡ ಕುಟುಂಬ ಬೇಕು ಎನ್ನುವ ನಾಯಕಿ, ಎಲ್ಲರಿಂದಲೂ ದೂರವಾಗಿರುವ ನಾಯಕ. ಈ ಇಬ್ಬರು ಪ್ರೀತಿಯಲ್ಲಿ ಗೆಲ್ಲುವುದಕ್ಕೆ ಏನೆಲ್ಲ ಸಾಹಸಗಳನ್ನು ಮಾಡುತ್ತಾರೆ ಎಂಬುದೇ ಚಿತ್ರದ ಕತೆ.
04:54 PM (IST) Aug 08
Boss Movie Review: ಬೆಂಗಳೂರಿನ ಮೋರಿ ಪಕ್ಕದಲ್ಲಿ ಮೃತ ದೇಹವೊಂದನ್ನು ನಾಯಿಗಳು ಕಚ್ಚಿಸುತ್ತಿರುವುದನ್ನು ಮೋರಿ ಪಕ್ಕದಲ್ಲೇ ಇದ್ದ ಅಪಾರ್ಟ್ಮೆಂಟ್ನ ಭದ್ರಾ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡುತ್ತಾರೆ.
04:50 PM (IST) Aug 08
ಯಶ್ ಬರುತ್ತಿರೋ ಹಿನ್ನೆಲೆ ಮಾಲ್ ಹೊರಗಡೆ ಸೇರಿರೋ ಅಭಿಮಾನಿಗಳು 'ಯಶ್.. ಯಶ್ ಎಂದು ಕನವರಿಸುತ್ತಿದ್ದಾರೆ. ಇನ್ನೇನು ಕೆಲವೇ ನಿಮಿಷದಲ್ಲಿ ಕಾರ್ಯಕ್ರಮ ಶುರುವಾಗಲಿದೆ. ಕನ್ನಡದ ಸ್ಟಾರ್ ನಟ, ಕನ್ನಡ ಭಾಷೆಯ ಪ್ಯಾನ್ ವರ್ಲ್ಡ್ ಸಿನಿಮಾ ಟಾಕ್ಸಿಕ್ನ ಟ್ರೇಲರ್ ಲಾಂಚ್ಗೆ ಬೆಂಗಳೂರಿನ ಮೆಜೆಸ್ಟಿಕ್ ಬಳಿಯ ಎಎಂಬಿ ಮಾಲ್ ಸಾಕ್ಷಿಯಾಗಲಿದೆ.
04:42 PM (IST) Aug 08
04:41 PM (IST) Aug 08
Ayogya 2 Movie Review: ಅಯೋಗ್ಯ 1 ಚಿತ್ರದ ಮುಂದುವರಿದ ಭಾಗ ಇದು. ಆರಂಭದಲ್ಲಿಯೇ ಭಾಗ 1ರ ಕತೆಯನ್ನು ಹೇಳುತ್ತಾರಾದ್ದರಿಂದ ನೇರವಾಗಿ ಭಾಗ 2 ನೋಡುವವರಿಗೆ ಕತೆ ಮಿಸ್ ಆಗುವ ಚಾನ್ಸ್ ಇಲ್ಲ.
04:23 PM (IST) Aug 08
ಬೆಂಗಳೂರಿನ 29 ಕಡೆ ನೆಲೆಸಿದ್ದ ಅಕ್ರಮ ಬಾಂಗ್ಲಾದೇಶಿಗಳ ವಿರುದ್ದ ಪೊಲೀಸರು ದಾಳಿ ಮಾಡಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಬಳಿ ಈ ದಾಳಿ ನಡೆದಿದ್ದು ಬರೋಬ್ಬರಿ 1909 ಅಕ್ರಮ ಬಾಂಗ್ಲಾ ವಲಸಿಗರನ್ನು ವಶಕ್ಕೆ ಪಡೆಯಲಾಗಿದೆ.
04:13 PM (IST) Aug 08
ತನಿಖೆ ಸಂದರ್ಭದಲ್ಲಿ ಆರೋಪಿ ಕೊಲೆಯ ಹಿಂದಿನ ಕಾರಣ ರಿವೀಲ್ ಮಾಡಿದ್ದು, 10 ತಿಂಗಳ ಹಿಂದಷ್ಟೇ ಮದುವೆಯಾಗಿದ್ದನಂತೆ. ಆದರೆ ಕೆಲಸಕ್ಕಾಗಿ ಬೆಂಗಳೂರಿಗೆ ಬಂದ ಬಳಿಕ ಆಕೆ ಗಂಡನ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದಳು ಅಂತ ಹೇಳಿದ್ದನಂತೆ.
02:23 PM (IST) Aug 08
02:02 PM (IST) Aug 08
ಕನ್ನಡದ ನಟ ಯಶ್ ಅವರು ಕೆಜೆಎಫ್ ಬಳಿಕ ಇಡೀ ಜಗತ್ತು ಕನ್ನಡ ಸಿನಿಮಾ ಬಗ್ಗೆ ಮಾತನ್ನಾಡುವಂತೆ ಮಾಡಿದ್ದಾರೆ. ಜೊತೆಗೆ, ಇದೀಗ ‘ಟಾಕ್ಸಿಕ್’ ಪ್ಯಾನ್ ವರ್ಲ್ಡ್ ಸಿನಿಮಾ ಮೂಲಕ ಕನ್ನಡನಾಡಿನ ಕೀರ್ತಿಯನ್ನು ಜಾಗತಿಕ ಮಟ್ಟದಲ್ಲಿ ಮೆರೆಸುತ್ತಿದ್ದಾರೆ. ಇಂದಿನ ಟ್ರೇಲರ್ ಲಾಂಚ್ ಮುಖ್ಯ ಅತಿಥಿ ಕನ್ನಡದ ಹಿರಿಯ ನಟ ಶಿವರಾಜ್ಕುಮಾರ್.
01:25 PM (IST) Aug 08
ಬೆಂಗಳೂರಿನ ಕೆ.ಆರ್.ಮಾರುಕಟ್ಟೆ ಮತ್ತು ವಿಕ್ಟೋರಿಯಾ ಆಸ್ಪತ್ರೆ ಸುತ್ತಮುತ್ತಲಿನ ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮುಕ್ತಗೊಳಿಸಿದ ರಾಜ್ಯ ಸರ್ಕಾರದ ಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಬೃಹತ್ ಕಾರ್ಯಾಚರಣೆಯನ್ನು ಕಂಡು ಮಾಜಿ ಕ್ರಿಕೆಟಿಗ ಸುನಿಲ್ ಜೋಶಿ ಸಂತಸ ವ್ಯಕ್ತಪಡಿಸಿದ್ದಾರೆ. ಏನಂದ್ರು ಜೋಶಿ?
01:05 PM (IST) Aug 08
ಇಂದು ಕನ್ನಡದ ನಟ, ಪ್ಯಾನ್ ಇಂಡಿಯಾ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಟ್ರೇಲರ್ ಲಾಂಚ್ ಈವೆಂಟ್ ಸಾಕಷ್ಟು ಕುತೂಹಲದ ಜೊತೆಜೊತೆಗೆ ಬಹಳಷ್ಟು ನಿರೀಕ್ಷೆಯನ್ನೂ ಜಗತ್ತಿನಾದ್ಯಂತ ಹುಟ್ಟುಹಾಕಿದೆ. ಜೊತೆಗೆ, ಟೈಮಿಂಗ್ಸ್- 7:01 ಸೀಕ್ರೆಟ್ ಇಲ್ಲಿದೆ ನೋಡಿ..
12:58 PM (IST) Aug 08
ಬೆಂಗಳೂರಿನ ಬಾಗಲಕುಂಟೆಯಲ್ಲಿ, ಒಂಟಿಯಾಗಿ ವಾಸಿಸುತ್ತಿದ್ದ 57 ವರ್ಷದ ಮಹಿಳೆಯ ಅಸ್ಥಿಪಂಜರ ಅವರ ಮನೆಯಲ್ಲಿ ಪತ್ತೆಯಾಗಿದೆ. ಸುಮಾರು ಒಂದು ವರ್ಷದ ಹಿಂದೆ ಅವರು ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.
12:52 PM (IST) Aug 08
ವ್ಯಕ್ತಿಯೊಬ್ಬ, 25 ಬಾಂಗ್ಲಾದೇಶಿಯರನ್ನು ಬೆಂಗಳೂರಿಗೆ ಕಳುಹಿಸಿದ್ದು, ಅವರು ಪೊಲೀಸರು ಮತ್ತು ರಾಜಕಾರಣಿಗಳನ್ನು ಟಾರ್ಗೆಟ್ ಮಾಡುತ್ತಾರೆ ಎಂದು ವಿಡಿಯೋ ಮೂಲಕ ಪೊಲೀಸರಿಗೆ ಸವಾಲು ಹಾಕಿದ್ದಾನೆ. ವಿಡಿಯೋ ವೈರಲ್ ಆಗುತ್ತಿದ್ದಂತೆ, ಸಿಸಿಬಿ ಪೊಲೀಸರು ಆತನನ್ನು ಮಂಡ್ಯದ ಸಂತೋಷ್ ಕುಮಾರ್ ಎಂದು ಗುರುತಿಸಿದ್ದು, ಆತ ನಂತರ ಕ್ಷಮೆಯಾಚಿಸಿದ್ದಾನೆ.
12:29 PM (IST) Aug 08
12:23 PM (IST) Aug 08
ಮಾಜಿ ಸಚಿವ ಸತೀಶ್ ಜಾರಕಿಹೊಳಿ ತಮ್ಮ ದೆಹಲಿ ಭೇಟಿ ಸಹಜ ಎಂದಿದ್ದು, ಸೋಮವಾರದೊಳಗೆ ಸಚಿವರಿಗೆ ಖಾತೆ ಹಂಚಿಕೆಯಾಗುವ ನಿರೀಕ್ಷೆಯಿದೆ ಎಂದಿದ್ದಾರೆ. ಸಚಿವ ಸಂಪುಟದಲ್ಲಿ ಮಹಿಳೆಗೆ ಪ್ರಾತಿನಿಧ್ಯಗೆ ಒತ್ತಾಯಿಸಿದರು. ಸಭಾಪತಿ ಹೊರಟ್ಟಿಯವರಿಗೆ ಬೆದರಿಕೆ ಆರೋಪ ತಳ್ಳಿಹಾಕಿದರು.
12:03 PM (IST) Aug 08
ನಮ್ಮ ಮೆಟ್ರೋದ ನೀಲಿ ಮಾರ್ಗವೂ ದಕ್ಷಿಣ ಬೆಂಗಳೂರಿನ ಸಿಲ್ಕ್ ಬೋರ್ಡ್ ನಿಂದ ಉತ್ತರದಲ್ಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನೇರ ಸಂಪರ್ಕ ಕಲ್ಪಿಸಲಿದೆ. ಹೆಚ್ಚು ಟ್ರಾಫಿಕ್ ಸಮಸ್ಯೆ ಎದುರಿಸುತ್ತಿರುವ ಕೆಆರ್ ಪುರ, ಹೆಬ್ಬಾಳ ಮತ್ತು ಯಲಹಂಕ ಮಾರ್ಗದಲ್ಲಿ ಮೆಟ್ರೋ ಸಾಗುತ್ತದೆ.