ಧಾರವಾಡ: ನಾನು ಸಚಿವನಾಗಿದ್ದಾಗ ನನ್ನ ಮೇಲೆಯೂ ಆಪಾದನೆ ಬಂದಾಗ ಡಿ.ಕೆ.ಶಿವಕುಮಾರ್ ಅವರು ನನ್ನ ರಾಜೀನಾಮೆಗೆ ಪ್ರತಿಭಟಿಸಿದ್ದರು. ಈ ಹಿಂದೆ ಕೆ.ಜೆ.ಜಾರ್ಜ್ ಸಹ ರಾಜೀನಾಮೆ ನೀಡಿದ್ದು, ಸಚಿವ ನಾಗೇಂದ್ರ ವಿಷಯದಲ್ಲಿ ಏತಕ್ಕೆ ದ್ವಂದ್ವ ನೀತಿ ಅನುಸರಿಸಲಾಗುತ್ತಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ಮೇಲೆ ಆಪಾದನೆ ಬಂದಾಗ ಸ್ವತಃ ರಾಜೀನಾಮೆ ನೀಡಿದ್ದು, ನಂತರ ನಿಷ್ಕಳಂಕ ಎಂದು ಹೊರಗಡೆ ಬಂದಿದ್ದೇನೆ. ವಾಲ್ಮೀಕಿ ಹಗರಣದಲ್ಲಿ ನಾಗೇಂದ್ರ ಶಾಮೀಲಾಗಿರುವುದು ತನಿಖೆಯಲ್ಲಿ ಹೊರಬಂದಿದ್ದರೂ ಸಿಎಂ ಅವರ ರಾಜೀನಾಮೆ ಪಡೆಯುತ್ತಿಲ್ಲ ಏಕೆ ಎಂದು ಪ್ರಶ್ನಿಸಿದರು.

11:42 PM (IST) Aug 27
ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಎರಡನೇ ದಿನವೂ ಬಾಕ್ಸ್ ಆಫೀಸ್ನಲ್ಲಿ ತನ್ನ ಓಟ ಮುಂದುವರಿಸಿದೆ. ಭಾರತದಲ್ಲಿ ಕಲೆಕ್ಷನ್ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದ್ದರೂ, ವಿದೇಶಿ ಮಾರುಕಟ್ಟೆಯಲ್ಲಿ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಬೆಂಗಳೂರಿನಲ್ಲಿ ಹೌಸ್ಫುಲ್ ಶೋಗಳು ಮುಂದುವರಿದಿದೆ.
10:59 PM (IST) Aug 27
10:53 PM (IST) Aug 27
‘ಟಾಕ್ಸಿಕ್’ ಸಿನಿಮಾ ಬಿಡುಗಡೆಯ ಬಳಿಕ ಕನ್ನಡ ಚಿತ್ರರಂಗದಲ್ಲಿ ಮತ್ತೊಮ್ಮೆ ದೊಡ್ಡ ಬಜೆಟ್, ಬಾಕ್ಸ್ ಆಫೀಸ್ ಹಾಗೂ ಪ್ಯಾನ್ ಇಂಡಿಯಾ ಮಾರುಕಟ್ಟೆಯ ಬಗ್ಗೆ ಚರ್ಚೆ ಶುರುವಾಗಿದೆ. KGF ಕನ್ನಡ ಸಿನಿಮಾಗೆ ಹೊಸ ಮಾರುಕಟ್ಟೆ ತೆರೆದರೂ, ಅದರ ಯಶಸ್ಸಿನ ಸೂತ್ರವನ್ನು ಹುಡುಕುವುದು ಸರಿಯೇ?
10:19 PM (IST) Aug 27
ಕಸ್ತೂರಿ ರಂಗನ್ ವರದಿಯನ್ನು ಸಾರಸಗಟಾಗಿ ತಿರಸ್ಕರಿಸುವ ಮೂಲಕ ಜನರ ದಿಕ್ಕು ತಪ್ಪಿಸುವ ಕೆಲಸವನ್ನು ಸರ್ಕಾರ ಮಾಡಬಾರದು ಎಂದು ಮೈಸೂರು ಕೊಡಗು ಸಂಸದ ಯದುವೀರ್ ಒಡೆಯರ್ ಅಸಮಾಧಾನ ಹೊರ ಹಾಕಿದ್ದಾರೆ.
10:18 PM (IST) Aug 27
10:09 PM (IST) Aug 27
ನಟಿ ನಭಾ ನಟೇಶ್ ಅವರ ಓಣಂ ಸ್ಪೆಷಲ್ ಲುಕ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾಂಪ್ರದಾಯಿಕ ಸೀರೆಯಲ್ಲಿ ಸಿಂಪಲ್ ಹಾಗೂ ಎಲಿಗಂಟ್ ಆಗಿ ಕಾಣಿಸಿಕೊಂಡಿರುವ ನಭಾ ನಟೇಶ್ ಅವರ ಫೋಟೋಗಳಿಗೆ ಅಭಿಮಾನಿಗಳು ಹಾಗೂ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
09:21 PM (IST) Aug 27
ವಿದೇಶದಲ್ಲಿ (ಉದಾ: ನೇಪಾಳ) ಭಾರತೀಯ ಪ್ರವಾಸಿಗರು ಮೃತಪಟ್ಟರೆ, ಅವರ ಟರ್ಮ್ ಇನ್ಶುರೆನ್ಸ್ ಹಣವನ್ನು ಕ್ಲೈಮ್ ಮಾಡಬಹುದು. ಮೃತದೇಹ ಸಿಗದಿದ್ದರೂ, ನೈಸರ್ಗಿಕ ವಿಕೋಪದಂತಹ ಸಂದರ್ಭಗಳಲ್ಲಿ ಸರ್ಕಾರದ ವಿಶೇಷ ಮಾರ್ಗಸೂಚಿಗಳ ಅಡಿಯಲ್ಲಿ ಕ್ಲೈಮ್ ಇತ್ಯರ್ಥಪಡಿಸಲು ಅವಕಾಶವಿದೆ.
08:47 PM (IST) Aug 27
08:37 PM (IST) Aug 27
08:36 PM (IST) Aug 27
ಯಶ್ ನಟನೆಯ 'ಟಾಕ್ಸಿಕ್' ಸಿನಿಮಾದ ಕೊನೆಯಲ್ಲಿ ಏನಾಯ್ತು? ಅಪ್ಪ-ಮಗನ ಪಾತ್ರದಲ್ಲಿರೋ ರಾಯ ಮತ್ತು ಟಿಕೆಟ್ ನಡುವೆ ದೊಡ್ಡ ಫೈಟ್ ನಡೆಯುತ್ತೆ. ತನ್ನನ್ನ ಬಿಟ್ಟು ಹೋದ ಅಪ್ಪನ ಮೇಲೆ ಸೇಡು ತೀರಿಸಿಕೊಳ್ಳೋಕೆ ಟಿಕೆಟ್ ಬರ್ತಾನೆ. ಕೊನೆಗೆ, ಆತ ತನ್ನ ಅಪ್ಪನನ್ನ ಕೊಂದನಾ? ಇಲ್ವಾ? ಇಲ್ಲಿದೆ ಉತ್ತರ.
07:58 PM (IST) Aug 27
ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಮೊದಲ ದಿನವೇ ಭಾರತದಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗಿದ್ದು, ಭರ್ಜರಿ ಓಪನಿಂಗ್ ಪಡೆದಿದೆ. KGF ಸರಣಿ ಮೂಲಕ ಪ್ಯಾನ್-ಇಂಡಿಯಾ ಸ್ಟಾರ್ ಆಗಿರುವ ಯಶ್ ಇದೀಗ ನಿತೇಶ್ ತಿವಾರಿ ನಿರ್ದೇಶನದ..
07:35 PM (IST) Aug 27
ಕುಡಿದ ಮತ್ತಿನಲ್ಲಿ ಬಂದು ಮಲಗಿದ್ದ ಪತ್ನಿಯ ಜೀವ ತೆಗೆದು ಹೃದಯಾಘಾತದ ನಾಟಕ ಕಟ್ಟಿದ್ದ ಪತಿ ಕೊನೆಗೂ ಅರೆಸ್ಟ್ ಆಗಿದ್ದಾನೆ. ನಂತರ ಪ್ರಕರಣ ಬಯಲಾಗಿದ್ದು ಹೇಗೆ? ಅನ್ನೋ ವಿವರ ಈ ಸ್ಟೋರಿಯಲ್ಲಿದೆ.
07:01 PM (IST) Aug 27
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಸಾವಿತ್ರಮ್ಮ ಅವರ ಮನೆ ಸ್ವಚ್ಛಗೊಳಿಸುವ ವೇಳೆ ₹3.5 ಲಕ್ಷ ನಗದು ಪತ್ತೆಯಾಗಿದೆ. ಚೀಲಗಳಲ್ಲಿ ತುಂಬಿದ್ದ ಚಿಲ್ಲರೆ ಹಾಗೂ ನೋಟುಗಳನ್ನು ಸ್ವಯಂಸೇವಕರು ಎಣಿಸಿದಾಗ ಲಕ್ಷಾಂತರ ಹಣ ಇರುವುದು ಬೆಳಕಿಗೆ ಬಂದಿದೆ.
06:42 PM (IST) Aug 27
ಹೆಬ್ಬಾಳ ಜಂಕ್ಷನ್ನಲ್ಲಿ ಉದ್ದೇಶಿತ ಚಿಕ್ಕ ಸುರಂಗ ರಸ್ತೆ ಯೋಜನೆಯು ಸಂಚಾರ ದಟ್ಟಣೆಗೆ ಕೇವಲ ತಾತ್ಕಾಲಿಕ ಪರಿಹಾರ ನೀಡಲಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ (IISc) ಅಧ್ಯಯನ ವರದಿಯು ತಿಳಿಸಿದೆ. ಈ ಯೋಜನೆಯು ಪ್ರತಿ ಪ್ರಯಾಣಿಕನಿಗೆ ಮೆಟ್ರೋಗಿಂತ 6 ಪಟ್ಟು ದುಬಾರಿಯಾಗಿದೆ.
06:35 PM (IST) Aug 27
‘ಉಪಾಧ್ಯಕ್ಷ’ ಚಿತ್ರದ ಯಶಸ್ಸಿನ ಬಳಿಕ ನಟ ಚಿಕ್ಕಣ್ಣ ನಾಯಕನಾಗಿ ನಟಿಸಿರುವ ‘ಲಕ್ಷ್ಮೀಪುತ್ರ’ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ನವೆಂಬರ್ 27ರಂದು ಸಿನಿಮಾ ರಾಜ್ಯಾದ್ಯಂತ ತೆರೆಕಾಣಲಿದೆ.
06:17 PM (IST) Aug 27
HAL ಮತ್ತು ಯುರೋಪಿನ ಸಾಫ್ರಾನ್ (Safran) ಭಾರತದಲ್ಲೇ 'ಅರಾವಳಿ' ಎಂಜಿನ್ಗಳನ್ನು ತಯಾರಿಸಲು ಜಂಟಿ ಉದ್ಯಮ ಸ್ಥಾಪಿಸಿವೆ. ಈ ಶಕ್ತಿಶಾಲಿ ಎಂಜಿನ್ಗಳು ಸೇನೆಯ ಮುಂದಿನ ಪೀಳಿಗೆಯ 13-ಟನ್ ತೂಕದ IMRH ಮತ್ತು ನೌಕಾಪಡೆಯ DBMRH ಹೆಲಿಕಾಪ್ಟರ್ಗಳಿಗೆ ಶಕ್ತಿ ತುಂಬಲಿವೆ.
06:06 PM (IST) Aug 27
ಗಂಗಾವತಿಯ ತೆಂಬಾ ಅರಣ್ಯದಲ್ಲಿ ಮತ್ತೆ ಹುಲಿ ಕಾಣಿಸಿಕೊಂಡಿದೆ. ಇದೀಗ ಅರಣ್ಯ ಇಲಾಖೆ ಬೋನು ಇಟ್ಟು ಕಾಯುತ್ತಿದೆ. ಆಕಳಿನ ಕಳೇಬರದ ಬಳಿ ಮತ್ತೆ ಹುಲಿ ಬರುವ ನಿರೀಕ್ಷೆಯಲ್ಲಿರುವ ಅಧಿಕಾರಿಗಳು, ಇನ್ನೆರಡು-ಮೂರು ದಿನಗಳಲ್ಲಿ ಹುಲಿ ಬೋನಿಗೆ ಬೀಳಬಹುದು ಎಂದು ಅಂದಾಜಿಸಿದ್ದಾರೆ. ಅಷ್ಟಕ್ಕೂ ಹುಲಿ ಸೆರೆಯಾಗುತ್ತಾ?
05:54 PM (IST) Aug 27
ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಭಾರೀ ನಿರೀಕ್ಷೆಗಳ ನಡುವೆ ಬಿಡುಗಡೆಯಾಗಿ ಪ್ರೇಕ್ಷಕರಿಂದ ಡಿವೈಡ್ಡ್ ಟಾಕ್ ಪಡೆದುಕೊಳ್ಳುತ್ತಿದೆ. ಈ ನಡುವೆ ನಿರ್ದೇಶಕಿ ಗೀತು ಮೋಹನ್ದಾಸ್ ಅವರ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗಿದೆ.
05:41 PM (IST) Aug 27
05:28 PM (IST) Aug 27
05:28 PM (IST) Aug 27
ನಿವೇಶನಕ್ಕಾಗಿ ಸರ್ಕಾರಿ ವ್ಯವಸ್ಥೆಯ ವಿರುದ್ಧ ಹೋರಾಡಿ ಗೆದ್ದಿದ್ದ ಶಿರಾ ಮೂಲದ ರುಬಿಯಾ, ತನ್ನ ಇಬ್ಬರು ಮಕ್ಕಳಿಗೆ ವಿಷವಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿ ಹಾಗೂ ಗೃಹ ಸಚಿವರನ್ನು ಭೇಟಿಯಾಗಿ ಸೂರು ಪಡೆದಿದ್ದರೂ, ಈ ದುರಂತ ಅಂತ್ಯ ಕಂಡಿದ್ದೇಕೆ?
05:20 PM (IST) Aug 27
ರಾಕಿಂಗ್ ಸ್ಟಾರ್ ಯಶ್ ಅವರ ಟಾಕ್ಸಿಕ್ ಸಿನಿಮಾ ಟೀಕಿಸೋರ ವಿರುದ್ಧ ಸೋನು ಶ್ರೀನಿವಾಸ್ ಗೌಡ ಕಿಡಿಕಾರಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಶೇರ್ ಮಾಡಿರೋ ಅವರು, ಟಾಕ್ಸಿಕ್ ಅರ್ಥ ಆಗಲ್ಲ ಅನ್ನೋರೆಲ್ಲ ಧಾರಾವಾಗಿ ನೋಡೋಕೆ ಲಾಯಕ್ ಎಂದು ಜರಿದಿದ್ದಾರೆ.
05:01 PM (IST) Aug 27
‘ಟಾಕ್ಸಿಕ್’ ರಿಲೀಸ್ ಬೆನ್ನಲ್ಲೇ ಆರ್ಯವರ್ಧನ್ ಗುರೂಜಿ ಅವರ ಹಳೆಯ ಭವಿಷ್ಯದ ವಿಡಿಯೋ ವೈರಲ್ ಆಗಿದೆ. ‘ಸಿನಿಮಾ ಆವರೇಜ್ ಆಗಿರಲಿದೆ’ ಎಂದಿದ್ದ ಅವರ ಮಾತನ್ನು ಇದೀಗ ಚಿತ್ರದ ಮಿಶ್ರ ಪ್ರತಿಕ್ರಿಯೆಯೊಂದಿಗೆ ನೆಟ್ಟಿಗರು ಹೋಲಿಕೆ ಮಾಡುತ್ತಿದ್ದಾರೆ.
04:45 PM (IST) Aug 27
ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬ ಆಚರಿಸುವ ಸಂಪ್ರದಾಯವೇ ಇಲ್ಲ. ಆದರೂ ‘ಆಸೆ’ ಧಾರಾವಾಹಿ ಖ್ಯಾತಿಯ ನಟಿ ಅಭಿಜ್ಞಾ ಭಟ್ ಈ ಬಾರಿ ಮೊದಲ ಬಾರಿಗೆ ಈ ಹಬ್ಬವನ್ನು ಆಚರಿಸಿದ್ದಾರೆ. ಅಷ್ಟಕ್ಕೂ ಪೂಜೆಯ ವಿಧಿವಿಧಾನಗಳನ್ನು ಹೇಗೆ ತಿಳಿದುಕೊಂಡರು?
04:35 PM (IST) Aug 27
04:22 PM (IST) Aug 27
ತಮ್ಮದಲ್ಲದ ಪ್ರಕರಣದಲ್ಲಿ ಮೂಗು ತೋರಿಸಿದ ಬೆಂಗಳೂರಿನ ವೈಟ್ಫೀಲ್ಡ್ ಪೊಲೀಸರ ವಿರುದ್ಧ ಹೈಕೋರ್ಟ್ ಗರಂ ಆಗಿದೆ. ಅಲ್ಲದೇ ಭಾರೀ ದಂಡವನ್ನು ಪೊಲೀಸರ ಜೇಬಿನಿಂದಲೇ ತೆತ್ತಬೇಕು ಎಂದು ಆದೇಶ ನೀಡಿದೆ. ಅಷ್ಟಕ್ಕೂ ಏನಿದು ಕೇಸ್ ಅನ್ನೋ ವಿವರ ಈ ಸ್ಟೋರಿಯಲ್ಲಿದ್ದೆ.
04:21 PM (IST) Aug 27
04:18 PM (IST) Aug 27
ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾಗೆ ನಿರ್ದೇಶಕ ಯೋಗರಾಜ್ ಭಟ್ ವಿಶೇಷ ಶುಭಹಾರೈಕೆ ತಿಳಿಸಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ‘ಜೈ ಟಾಕ್ಸಿಕ್, ಜೈ ಚಿತ್ರತಂಡ, ಜೈ ಯಶ್’ ಎಂದು ಬರೆದಿರುವ ಅವರು, ‘ಟಾಕ್ಸಿಕ್ ಹೊಸ ಇತಿಹಾಸ ಕೆತ್ತಲಿ’ ಎಂದು ಹಾರೈಸಿದ್ದಾರೆ.
04:07 PM (IST) Aug 27
ಗೆಳತಿಯೊಂದಿಗಿನ ಪ್ರೇಮ ಸಂಬಂಧ ಮುರಿದುಬಿದ್ದಿದ್ದರಿಂದ ಮನನೊಂದ ವ್ಯಕ್ತಿಯೊಬ್ಬ, ತಾನೇ ಆಕೆಗಾಗಿ ಸೋರಿಕೆ ಮಾಡಿದ್ದಇನ್ಸ್ಪೆಕ್ಟರ್ ಪರೀಕ್ಷೆಯ ಪ್ರಶ್ನೆಪತ್ರಿಕೆಯ ರಹಸ್ಯವನ್ನು ಬಯಲು ಮಾಡಿದ್ದಾನೆ. ಈ ಹಗರಣದ ತನಿಖೆ ನಡೆಸಿದ ಮುಂಬೈ ಕ್ರೈಂ ಬ್ರಾಂಚ್, ಅಧಿಕಾರಿಗಳು ಸೇರಿದಂತೆ ಆರು ಜನರನ್ನು ಬಂಧಿಸಿದ್ದು, ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸಲಾಗಿದೆ.
04:01 PM (IST) Aug 27
ಒಂದು ಪುಟ್ಟ ಬೆಲ್ಲದ ತುಂಡಿನಲ್ಲಿ ಎಷ್ಟೊಂದು ಶಕ್ತಿ ಇದೆ! ಇಂದೇ ಸಕ್ಕರೆ ಅಥವಾ ಆರ್ಟಿಫಿಶಿಯಲ್ ಸ್ವೀಟ್ಸ್ಗೆ ಬೈ-ಬೈ ಹೇಳಿ, ಈ ನೈಸರ್ಗಿಕ ಸಿಹಿಯನ್ನು ನಿಮ್ಮ ಊಟದ ಭಾಗವಾಗಿಸಿಕೊಳ್ಳಿ. ಆರೋಗ್ಯವೂ ಸಿಹಿ, ಜೀವನವೂ ಸಿಹಿ!
02:59 PM (IST) Aug 27
ನಟ ಕಿಚ್ಚ ಸುದೀಪ್ ತಮ್ಮ ಹುಟ್ಟುಹಬ್ಬದ ಆಚರಣೆ ಬಗ್ಗೆ ಮಾಹಿತಿ ನೀಡಿದ್ದು, ಅಭಿಮಾನಿಗಳೊಂದಿಗೆ ಇರುವುದಿಲ್ಲ ಎಂದು ತಿಳಿಸಿದ್ದಾರೆ. ಆದರೆ, 'ಸಿಂಹ ಮುಂದಿನ ಬೇಟೆಗೆ ರೆಡಿ ಆಗ್ತಿದೆ' ಎಂಬ ಅವರ ಸಾಲುಗಳು, ಹೊಸ ಬಿಗ್ ಬಜೆಟ್ ಸಿನಿಮಾದ ಸುಳಿವು ನೀಡಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
02:57 PM (IST) Aug 27
02:55 PM (IST) Aug 27
02:01 PM (IST) Aug 27
Gadag Railway Station: ಬೆಟಗೇರಿಯ ತಿಪ್ಪಮ್ಮ ಅಜ್ಜಿ ಕಳೆದ 30 ವರ್ಷಗಳಿಂದ ಗದಗ ರೈಲು ನಿಲ್ದಾಣದಲ್ಲಿ ಶೇಂಗಾ, ಹುರಿಗಡಲೆ ಮಾರಾಟ ಮಾಡುತ್ತಿದ್ದಾರೆ. ಪತಿಯ ನಿಧನದ ನಂತರ ಕುಟುಂಬದ ಜವಾಬ್ದಾರಿ ಹೊತ್ತು, ಇಂದಿಗೂ ಸ್ವಾಭಿಮಾನದಿಂದ ಕೆಲಸ ಮಾಡುತ್ತಾರೆ.
01:40 PM (IST) Aug 27
‘ನಿಮ್ಮ ನಿಮ್ಮ ಊರು, ಭಾಗಗಳಲ್ಲಿ ನೀವು ನೆಡೆಸುವ ಕಾರ್ಯಕ್ರಮಗಳೇ ಆಶೀರ್ವಾದ. ಅದು ಸದಾ ಮುಂದುವರೆಯಲಿ. ಮತ್ತೆ ಭೇಟಿ ಆಗೋಣ. ನನ್ನನ್ನು ನಿಮ್ಮನ್ನು ಎಂದಾದರೂ ಬೇರ್ಪಡಿಸಲು ಸಾಧ್ಯವೇ?’
ಕಿಚ್ಚ ಸುದೀಪ್ ತಮ್ಮ, ಹುಟ್ಟುಹಬ್ಬವನ್ನು ಫ್ಯಾನ್ ಜೊತೆ ಏಕೆ ಅಚರಿಸಿಕೊಳ್ಳುತ್ತಿಲ್ಲ? ಈ ಸ್ಟೋರಿ ನೋಡಿ..
01:26 PM (IST) Aug 27
12:16 PM (IST) Aug 27
"ಸಿನಿಮಾ ಎಂಬುದು ಕೇವಲ ಭಾಷೆಯಲ್ಲ, ಅದು ಸಂಸ್ಕೃತಿಯ ಪ್ರತಿಬಿಂಬ. 'ಕಾಂತಾರ' ಸಿನಿಮಾ ಗೆದ್ದಿದ್ದು ಅದರ ಮಣ್ಣಿನ ವಾಸನೆಯಿಂದ. ಶ್ರೀಮಂತ ಮತ್ತು ಬಡವನ ನಡುವಿನ ಸಂಘರ್ಷ ಜಗತ್ತಿನ ಯಾವುದೇ ಮೂಲೆಯ ಪ್ರೇಕ್ಷಕನಿಗೂ ಅರ್ಥವಾಗುತ್ತದೆ.
11:30 AM (IST) Aug 27
11:29 AM (IST) Aug 27
ಶಿವಮೊಗ್ಗ ಜಿಲ್ಲೆಯ ಕಾರ್ಗಲ್ ಬಳಿ ಪ್ರೇಮ ವೈಫಲ್ಯದಿಂದ ಮನನೊಂದು ಯುವತಿಯೊಬ್ಬಳು ನಾಲೆಗೆ ಹಾರಿ ಆತ್ಮ*ಹತ್ಯೆಗೆ ಯತ್ನಿಸಿದ್ದಾಳೆ. ಸ್ಥಳೀಯರ ಮಾಹಿತಿಯ ಮೇರೆಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು, ಯುವತಿಯನ್ನು ರಕ್ಷಿಸಿ ಸಾಂತ್ವನ ಕೇಂದ್ರಕ್ಕೆ ಸೇರಿಸಿದ್ದಾರೆ.
08:23 AM (IST) Aug 27
ಜೀ ಕನ್ನಡದ 'ಹಳ್ಳಿ ಪವರ್' ರಿಯಾಲಿಟಿ ಶೋ ಐಹೊಳೆಯಲ್ಲಿ ನಡೆಯುತ್ತಿದ್ದು, ಸಿಟಿ ಹುಡುಗಿಯರು ಹಳ್ಳಿ ಜೀವನಕ್ಕೆ ಹೊಂದಿಕೊಳ್ಳುತ್ತಿದ್ದಾರೆ. ಶೋನಲ್ಲಿ ಮೊಬೈಲ್ ಬಳಕೆಗೆ ಕಟ್ಟುನಿಟ್ಟಿನ ನಿಯಮಗಳಿದ್ದು, ಈ ಲೇಖನದಲ್ಲಿ ವಿವರಿಸಲಾಗಿದೆ.