LIVE NOW
Published : Aug 27, 2026, 05:44 AM ISTUpdated : Aug 27, 2026, 07:26 AM IST

Karnataka Latest News Live: ಬೆಂಗಳೂರಲ್ಲಿ ಪತ್ತೆಯಾದ ಚಿನ್ನದ ಮಾತ್ರೆ ಉಗುಳುವ ವ್ಯಕ್ತಿ; ಈತ ಬಾಯಿ ತೆರೆದಾಗ ಬಂಗಾರ ಉದುರಿಬಿತ್ತು!

ಸಾರಾಂಶ

ಧಾರವಾಡ: ನಾನು ಸಚಿವನಾಗಿದ್ದಾಗ ನನ್ನ ಮೇಲೆಯೂ ಆಪಾದನೆ ಬಂದಾಗ ಡಿ.ಕೆ.ಶಿವಕುಮಾರ್‌ ಅವರು ನನ್ನ ರಾಜೀನಾಮೆಗೆ ಪ್ರತಿಭಟಿಸಿದ್ದರು. ಈ ಹಿಂದೆ ಕೆ.ಜೆ.ಜಾರ್ಜ್‌ ಸಹ ರಾಜೀನಾಮೆ ನೀಡಿದ್ದು, ಸಚಿವ ನಾಗೇಂದ್ರ ವಿಷಯದಲ್ಲಿ ಏತಕ್ಕೆ ದ್ವಂದ್ವ ನೀತಿ ಅನುಸರಿಸಲಾಗುತ್ತಿದೆ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಪ್ರಶ್ನಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ಮೇಲೆ ಆಪಾದನೆ ಬಂದಾಗ ಸ್ವತಃ ರಾಜೀನಾಮೆ ನೀಡಿದ್ದು, ನಂತರ ನಿಷ್ಕಳಂಕ ಎಂದು ಹೊರಗಡೆ ಬಂದಿದ್ದೇನೆ. ವಾಲ್ಮೀಕಿ ಹಗರಣದಲ್ಲಿ ನಾಗೇಂದ್ರ ಶಾಮೀಲಾಗಿರುವುದು ತನಿಖೆಯಲ್ಲಿ ಹೊರಬಂದಿದ್ದರೂ ಸಿಎಂ ಅವರ ರಾಜೀನಾಮೆ ಪಡೆಯುತ್ತಿಲ್ಲ ಏಕೆ ಎಂದು ಪ್ರಶ್ನಿಸಿದರು.

Bengaluru Airport Gold

07:27 AM (IST) Aug 27

ಬೆಂಗಳೂರಲ್ಲಿ ಪತ್ತೆಯಾದ ಚಿನ್ನದ ಮಾತ್ರೆ ಉಗುಳುವ ವ್ಯಕ್ತಿ; ಈತ ಬಾಯಿ ತೆರೆದಾಗ ಬಂಗಾರ ಉದುರಿಬಿತ್ತು!

ದುಬೈನಿಂದ ಬೆಂಗಳೂರಿಗೆ ಬಂದಿದ್ದ ಪ್ರಯಾಣಿಕನೊಬ್ಬ ಬಾಯಿಯೊಳಗೆ ಚಿನ್ನದ ಕ್ಯಾಪ್ಸೂಲ್‌ಗಳನ್ನು ಬಚ್ಚಿಟ್ಟು ಸಾಗಿಸಲು ಯತ್ನಿಸಿದ್ದಾನೆ. ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಆತನ ಅನುಮಾನಾಸ್ಪದ ವರ್ತನೆಯಿಂದಾಗಿ ಸಿಐಎಸ್‌ಎಫ್ ಸಿಬ್ಬಂದಿ ತಪಾಸಣೆ ನಡೆಸಿದಾಗ, 82 ಗ್ರಾಂ ತೂಕದ ಚಿನ್ನ ಪತ್ತೆಯಾಗಿದೆ. ಬಾಡಿ ಸ್ಕ್ಯಾನರ್‌ಗಳಿಂದ ತಪ್ಪಿಸಿಕೊಳ್ಳಲು ಈತ ಈ ಹೊಸ ತಂತ್ರ ಬಳಸಿದ್ದ.
Read Full Story

07:04 AM (IST) Aug 27

Yash's Toxic Movie Review - ರಣರಣ ರಣರಂಗದ ನಡುವೆ ಪ್ರೇಮ, ಕಾಮ, ನಿರ್ನಾಮ

ಗೀತು ಮೋಹನ್‌ದಾಸ್ ನಿರ್ದೇಶನದ 'ಟಾಕ್ಸಿಕ್' ಚಿತ್ರವು, ಕೇವಲ ಗ್ಯಾಂಗ್‌ಸ್ಟರ್‌ನ ಹೊರಜಗತ್ತನ್ನು ತೋರಿಸದೆ, ಅವನ ಅಂತರಂಗದ ತಲ್ಲಣಗಳು, ಪ್ರೀತಿ, ನೆನಪು ಮತ್ತು ಭ್ರಮೆಗಳ ನಡುವಿನ ಹೋರಾಟವನ್ನು ವಿಶಿಷ್ಟವಾಗಿ ಚಿತ್ರಿಸುತ್ತದೆ. ತನ್ನ ಮನಸ್ಸಿನಲ್ಲೇ ಸಿಕ್ಕಿಹಾಕಿಕೊಂಡ ಸಂಕೀರ್ಣ ಪಾತ್ರಕ್ಕೆ ಯಶ್ ಅದ್ಭುತವಾಗಿ ಜೀವ ತುಂಬಿದ್ದು, ಚಿತ್ರದ ವಿಶಿಷ್ಟ ಚಿತ್ರಭಾಷೆ ಮತ್ತು ನಿರೂಪಣೆ ಇದನ್ನು ಒಂದು ವಿಭಿನ್ನ ಅನುಭವವನ್ನಾಗಿಸುತ್ತದೆ.
Read Full Story

06:53 AM (IST) Aug 27

ಹೆಲ್ಮೆಟ್‌ ಧರಿಸದೇ ಬೈಕ್‌ ರೈಡ್‌, ರಾಣೆಬೆನ್ನೂರು ಶಾಸಕ ಪ್ರಕಾಶ್ ಕೋಳಿವಾಡಗೆ ದಂಡ!

ರಾಣೆಬೆನ್ನೂರು ಶಾಸಕ ಪ್ರಕಾಶ ಕೋಳಿವಾಡ ಅವರು ಬೈಕ್ ರ್‍ಯಾಲಿಯಲ್ಲಿ ಹೆಲ್ಮೆಟ್‌ ಧರಿಸದೆ ದ್ವಿಚಕ್ರ ವಾಹನ ಚಲಾಯಿಸಿದ್ದಕ್ಕಾಗಿ ಸಂಚಾರಿ ಪೊಲೀಸರು ₹500 ದಂಡ ವಿಧಿಸಿದ್ದಾರೆ. ತಮ್ಮ ತಪ್ಪನ್ನು ಒಪ್ಪಿಕೊಂಡ ಶಾಸಕರು, ದಂಡ ಪಾವತಿಸಿ, 'ಶಾಸಕ ಸೇವಕನೇ ಹೊರತು ರಾಜನಲ್ಲ' ಎಂದು ಹೇಳುವ ಮೂಲಕ ಪೊಲೀಸರ ಕರ್ತವ್ಯವನ್ನು ಶ್ಲಾಘಿಸಿದ್ದಾರೆ.

Read Full Story

06:33 AM (IST) Aug 27

ಬಿಡಿಎ ನಿರ್ಧಾರದ ವಿರುದ್ಧ ಶಿವರಾಮ ಕಾರಂತ್ ಬಡಾವಣೆ ರೈತರ ಬೇಸರ; ಅಡಿಗೆ 50 ರೂ.ಆಡಳಿತಾತ್ಮಕ ವೆಚ್ಚ

ಡಾ.ಶಿವರಾಮ ಕಾರಂತ ಬಡಾವಣೆ ಯೋಜನೆಯಲ್ಲಿ, ಸುಪ್ರೀಂ ಕೋರ್ಟ್‌ ಆದೇಶವನ್ನು ಕಡೆಗಣಿಸಿ ಬಿಡಿಎ ರೈತರನ್ನು ಶೇ.40ರ ಪಾಲುದಾರರಂತೆ ಪರಿಗಣಿಸದೆ ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ತಮಗಿಷ್ಟದಂತೆ ನಿವೇಶನ ಹಂಚಿಕೆ ಹಾಗೂ ಆಡಳಿತಾತ್ಮಕ ವೆಚ್ಚ ವಿಧಿಸುತ್ತಿರುವುದನ್ನು ವಿರೋಧಿಸಿರುವ ಸಂತ್ರಸ್ತರ ಸಂಘ, ಈ ವೆಚ್ಚವನ್ನು ರದ್ದುಗೊಳಿಸಿ ವಾಣಿಜ್ಯ ನಿವೇಶನಗಳಲ್ಲಿ ಶೇ.50:50ರ ಅನುಪಾತದಲ್ಲಿ ಪಾಲು ನೀಡಬೇಕೆಂದು ಆಗ್ರಹಿಸಿದೆ.
Read Full Story

06:20 AM (IST) Aug 27

Exclusive - CJ ರಾಯ್ ಸಾವಿಗೆ ಎರಡು ಕಾರಣ; ಮ್ಯಾಜಿಸ್ಟ್ರೇಟ್‌ಗೆ ಅಂತಿಮ ವರದಿ ಸಲ್ಲಿಸಲು ಸಿದ್ಧತೆ

ಖ್ಯಾತ ಉದ್ಯಮಿ ಸಿ.ಜೆ. ರಾಯ್ ಅವರ ಆತ್ಮ*ಹತ್ಯೆಗೆ ಪ್ರಮುಖ ಕಾರಣ ಏನೆಂದು ಎಸ್‌ಐಟಿ ತನಿಖೆಯಲ್ಲಿ ತಿಳಿದುಬಂದಿದೆ. ಈ ಕುರಿತು ತನಿಖಾ ತಂಡವು ಶೀಘ್ರದಲ್ಲೇ ಮ್ಯಾಜಿಸ್ಟ್ರೇಟ್‌ಗೆ ಅಂತಿಮ ವರದಿ ಸಲ್ಲಿಸಲಿದೆ. ಇನ್ನೆರಡು ದಿನದಲ್ಲಿ ಮ್ಯಾಜಿಸ್ಟ್ರೇಟ್‌ಗೆ ವರದಿ ಸಲ್ಲಿಕೆಯಾಗಲಿದೆ ಎಂದು ತಿಳಿದು ಬಂದಿದೆ.

Read Full Story

More Trending News