ಚೆನ್ನೈ: ತಮಿಳುನಾಡು ಸಿಎಂ ವಿಜಯ್ ಗೆದ್ದಿದ್ದ ಎರಡು ಕ್ಷೇತ್ರಗಳ ಪೈಕಿ ಅವರು ರಾಜೀನಾಮೆ ನೀಡಿದ್ದ ತಿರುಚ್ಚಿ ಪೂರ್ವದಿಂದ ಜನಪ್ರಿಯ ನಟ ರಾಘವ ಲಾರೆನ್ಸ್ ಕಣಕ್ಕಿಳಿಯಬಹುದು ಎನ್ನುವ ಗುಸುಗುಸು ರಾಜಕೀಯ ವಲಯದಲ್ಲಿ ಜೋರಾಗಿದೆ. ಹೀಗಾಗಿ ಈ ಬಗ್ಗೆ ನಟ ಎಕ್ಸ್ನಲ್ಲಿ ಪ್ರತಿಕ್ರಿಯಿಸಿದ್ದು, ಜೂ.11ಕ್ಕೆ ಮಹತ್ವದ ನಿರ್ಧಾರ ಪ್ರಕಟಿಸಿವುದಾಗಿ ಹೇಳಿಕೊಂಡಿದ್ದಾರೆ.
‘ಮಾಧ್ಯಮ ಮಿತ್ರರು ನನ್ನನ್ನು ಸಂಪರ್ಕಿಸಿ ಈ ಬಗ್ಗೆ ಸ್ಪಷ್ಟನೆ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಊಹಾಪೋಹಗಳನ್ನು ಪರಿಹರಿಸಬೇಕೆಂದು ನಾನು ನಿರ್ಧರಿಸಿದ್ದೇನೆ. ಜೂ.10ರ ತನಕ ಬೆಂಜ್ ಸಿನಿಮಾದ ಚಿತ್ರೀಕರಣವಿದೆ. ಅದಾದ ಬಳಿಕ ಜೂ.11ರ 9.30ಕ್ಕೆ ಸುದ್ದಿಗೋಷ್ಠಿ ನಡೆಸಿ ಮಹತ್ವದ ನಿರ್ಧಾರ ಪ್ರಕಟಿಸುತ್ತೇನೆ’ ಎಂದಿದ್ದಾರೆ.
ಚುನಾವಣೆಯಲ್ಲಿ ತಿರುಚ್ಚಿ ಪೂರ್ವ ಮತ್ತು ಪೆರಂಬೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಟಿವಿಕೆ ಮುಖ್ಯಸ್ಥ ವಿಜಯ್ ಎರಡರಲ್ಲಿಯೂ ಗೆದ್ದಿದ್ದರು. ಆ ಬಳಿಕ ನಿಯಮಗಳ ಪ್ರಕಾರ ತಿರುಚ್ಚಿಗೆ ರಾಜೀನಾಮೆ ನೀಡಿ ಪೆರಂಬೂರು ಉಳಿಸಿಕೊಂಡಿದ್ದರು.
ಕೆಲ ದಿನಗಳ ಹಿಂದೆ ನಟಿ ತ್ರಿಶಾ ಕೃಷ್ಣನ್ ಈ ಕ್ಷೇತ್ರದಿಂದ ಸ್ಪರ್ಧಿಸಬಹುದು ಅಂತಲೂ ವದಂತಿ ಹಬ್ಬಿತ್ತು.
10:56 PM (IST) Jun 08
ಬಿರಿಯಾನಿಯಲ್ಲಿ ಸತ್ತ ಕೀಟ ಸಿಕ್ಕಿತ್ತು. ರೊಚ್ಚಿಗೆದ್ದ ಗ್ರಾಹಕ ಕೋರ್ಟ್ ಮೆಟ್ಟಿಲೇರಿದ್ದ. ಪರಿಣಾಮ ಗ್ರಾಹಕನಿಗೆ ಐದು ಭಾನುವಾರ ಒಟ್ಟು 10 ಹೈದರಾಬಾದಿ ಚಿಕನ್ ಬಿರಿಯಾನಿ ಉಚಿತವಾಗಿ ನೀಡಲು ಕೋರ್ಟ್ ಆದೇಶಿಸಿದೆ.
10:04 PM (IST) Jun 08
ಜೊಮ್ಯಾಟೊದ ಪ್ಲಾಟ್ಫಾರ್ಮ್ ಶುಲ್ಕ ಮತ್ತು ಕಮಿಷನ್ ತಪ್ಪಿಸಲು ಗ್ರಾಹಕರು ಹಾಗೂ ರೆಸ್ಟೋರೆಂಟ್ಗಳು '1 ರೋಟಿ ಟ್ರಿಕ್' ಎಂಬ ಹೊಸ ಉಪಾಯವನ್ನು ಬಳಸುತ್ತಿದ್ದಾರೆ. ಆ್ಯಪ್ನಲ್ಲಿ ಸಣ್ಣ ಆರ್ಡರ್ ಮಾಡಿ, ನೇರವಾಗಿ ರೆಸ್ಟೋರೆಂಟ್ಗೆ ಕರೆ ಮಾಡಿ ದೊಡ್ಡ ಆರ್ಡರ್ ನೀಡುವ ಟ್ರಿಕ್ ಮಾಡುತ್ತಿದ್ದಾರೆ.
09:49 PM (IST) Jun 08
09:49 PM (IST) Jun 08
09:42 PM (IST) Jun 08
ರಾಮ್ ಚರಣ್ ನಟನೆಯ 'ಪೆದ್ದಿ' ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ 'ಥ್ಯಾಂಕ್ ಯು ಮೀಟ್' ಆಯೋಜಿಸಿತ್ತು. ಈ ವೇಳೆ 'ಪೆದ್ದಿ' ಯಶಸ್ಸಿನ ಬಗ್ಗೆ ರಾಮ್ ಚರಣ್ ಆಡಿದ ಮಾತುಗಳು ವೈರಲ್ ಆಗಿವೆ.
09:14 PM (IST) Jun 08
ಕಳೆದ 20 ದಿನಗಳಿಂದ ಅಮೇರಿಕಾದಲೇ ಬೀಡು ಬಿಟ್ಟಿರುವ ಯಶ್ ಹಾಲಿವುಡ್ ನಲ್ಲಿ ಟಾಕ್ಸಿಕ್ ರಿಲೀಸ್ ಮಾಡೊಕೆ ನಿರಂತರವಾಗಿ ಹಾಲಿವುಡ್ ನಿರ್ಮಾಪಕರು, ವಿತರಕರ ಜೊತೆ ಸಾಲು ಸಾಲು ಮೀಟಿಂಗ್ ಮಾಡುತ್ತಿದ್ದಾರೆ. ಹೋಗಿರುವ ಕೆಲಸವನ್ನು ಸಕ್ಸಸ್ ಮಾಡಿಕೊಂಡು ಬರಲೇ ಬೇಕು ಅಂತ ಯಶ್ ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.
09:07 PM (IST) Jun 08
ಏರ್ಟೆಲ್ ತನ್ನ ಗ್ರಾಹಕರಿಗಾಗಿ ₹1,849 ಕ್ಕೆ ಹೊಸ ವಾರ್ಷಿಕ ಪ್ರಿಪೇಯ್ಡ್ ಪ್ಲಾನ್ ಅನ್ನು ಪರಿಚಯಿಸಿದೆ. ಈ ಪ್ಲಾನ್ 365 ದಿನಗಳ ವ್ಯಾಲಿಡಿಟಿಯೊಂದಿಗೆ ಯಾವುದೇ ನೆಟ್ವರ್ಕ್ಗೆ ಅನ್ಲಿಮಿಟೆಡ್ ಕಾಲಿಂಗ್ ಪ್ರಯೋಜನವನ್ನು ನೀಡುತ್ತದೆ, ಆದರೆ ಇದರಲ್ಲಿ ಯಾವುದೇ ಡೇಟಾ ಸೌಲಭ್ಯ ಇರುವುದಿಲ್ಲ.
08:55 PM (IST) Jun 08
ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಲೈಫ್ಸ್ಟೈಲ್ ಕಂಟೆಂಟ್ ಪೋಸ್ಟ್ ಮಾಡುವ ನಟಿ ಸಮೀರಾ, ಇತ್ತೀಚೆಗೆ ಬಾಳೆದಿಂಡಿನ ಜ್ಯೂಸ್ ಮಾಡುವ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಹೌದು, ನೀವು ಓದಿದ್ದು ಸರಿ.
08:54 PM (IST) Jun 08
08:30 PM (IST) Jun 08
ವಿವಾದ ಎದ್ದು ಪರಿಸ್ತಿತಿ ಕೈಮೀರುತ್ತಿದ್ದಂತೆ ಎಚ್ಚೆತ್ತುಕೊಂಡ ಪೆದ್ದಿ ಸಿನಿಮಾ ನಿರ್ದೇಶಕ ಬುಚ್ಚಿಬಾಬು ಸನಾ ಈಗ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ. ಕಥೆಯ ಡಿಮ್ಯಾಂಡ್ ಹಾಗೂ ಹಳ್ಳಿಯ ನೇಟಿವಿಟಿಗೆ ತಕ್ಕಂತೆ ಆ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ ವಿನಃ ಯಾವುದೇ ಕೆಟ್ಟ ಉದ್ದೇಶದಿಂದಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
07:39 PM (IST) Jun 08
ಖ್ಯಾತ ನಿರೂಪಕಿ ರಂಜಿನಿ ಹರಿದಾಸ್ ತಮ್ಮ ವೃತ್ತಿ ಬದುಕಿನಲ್ಲಿ ಎದುರಾದ ಕಹಿ ಘಟನೆಗಳನ್ನು ಹಂಚಿಕೊಂಡಿದ್ದಾರೆ. ಒಂಟಿಯಾಗಿ ಬದುಕುತ್ತಿರುವುದಕ್ಕೆ ಸಾಕಷ್ಟು ನಿಂದನೆಗಳನ್ನು ಎದುರಿಸಿದ್ದೇನೆ, ಕಷ್ಟಪಟ್ಟು ದುಡಿದು ಈ ಮಟ್ಟಕ್ಕೆ ಬಂದಿದ್ದೇನೆ ಎಂದು ರಂಜಿನಿ ಹೇಳಿದ್ದಾರೆ.
07:33 PM (IST) Jun 08
07:16 PM (IST) Jun 08
ಹೊಸ ಸಿನಿಮಾ 'ಪೆದ್ದಿ'ಯಲ್ಲಿ ಜಾನ್ವಿ ಕಪೂರ್ ಅವರನ್ನು ಕೇವಲ ಒಂದು ವಸ್ತುವಿನಂತೆ ತೋರಿಸಲಾಗಿದೆ ಎಂಬ ಟೀಕೆಗಳು ಜೋರಾಗಿವೆ. ಇದರ ಬೆನ್ನಲ್ಲೇ, ಮಹಿಳೆಯರ ದೇಹವನ್ನು ಅವರ ಅನುಮತಿಯಿಲ್ಲದೆ ಚಿತ್ರೀಕರಿಸುವುದರ ವಿರುದ್ಧ ಅವರು ಹಿಂದೆ ನೀಡಿದ್ದ ಹೇಳಿಕೆಗಳು ಮತ್ತೆ ಚರ್ಚೆಗೆ ಬಂದಿವೆ.
07:04 PM (IST) Jun 08
ಮಂಗಳೂರಿನಿಂದ ಹೊರಟ ಈ ಪ್ರತಿಭೆ ಇಂದು ದೇಶದ ಅತ್ಯಂತ ಶ್ರೀಮಂತ ನಟಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಕಠಿಣ ಪರಿಶ್ರಮ ಮತ್ತು ವ್ಯವಹಾರ ಜ್ಞಾನದಿಂದ ಶಿಲ್ಪಾ ಶೆಟ್ಟಿ ಇಂದು 'ಸಕ್ಸಸ್' ಎಂಬ ಪದಕ್ಕೆ ಪರ್ಯಾಯವಾಗಿದ್ದಾರೆ. ಇವರಿಗೆ ಜನ್ಮದಿನದ ಶುಭಾಶಯಗಳ ಸುರಿಮಳೆ ಆಗುತ್ತಿದೆ.
06:15 PM (IST) Jun 08
ಶಿಲ್ಪಾ ಶೆಟ್ಟಿ ಇತ್ತೀಚೆಗೆ ಜೋಗಿ ಪ್ರೇಮ್ ನಿರ್ದೇಶನದ ಮತ್ತು ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ 'ಕೇಡಿ: ದಿ ಡೆವಿಲ್' ಚಿತ್ರದಲ್ಲಿ ಸತ್ಯವತಿ ಎಂಬ ಪವರ್ಫುಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ ವೆಬ್ ಸರಣಿ ಹಾಗೂ 'ಮಾ ಹೈ ನಾ' ಎಂಬ ಅಡುಗೆ ಶೋ ಮೂಲಕವೂ ಸಕ್ರಿಯರಾಗಿದ್ದಾರೆ. ಈಗ ಅವರ ಆಸೆ ಏನು ನೋಡಿ..!
05:18 PM (IST) Jun 08
05:10 PM (IST) Jun 08
ಯಶ್ ನಟನೆಯ 'ಟಾಕ್ಸಿಕ್' ಚಿತ್ರದ ನಿರ್ದೇಶಕಿ ಗೀತು ಮೋಹನ್ದಾಸ್ ಅವರ ಹುಟ್ಟುಹಬ್ಬದ ಪ್ರಯುಕ್ತ, ಚಿತ್ರತಂಡ ತೆರೆಮರೆಯ ದೃಶ್ಯಗಳ ವಿಡಿಯೋವೊಂದನ್ನು ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಗೀತು ಅವರ ಖಡಕ್ ನಿರ್ದೇಶನದ ಶೈಲಿ ಮತ್ತು ಸೃಜನಶೀಲತೆ ಎದ್ದು ಕಾಣುತ್ತಿದೆ.
04:53 PM (IST) Jun 08
ಆರ್ಸಿಬಿ ತಂಡ ಸೇರಿಕೊಳ್ಳುವುದು ನನಗೆ ಇಷ್ಟವಿರಲಿಲ್ಲ ಎಂದು ನಾಯಕ ರಜತ್ ಪಾಟಿದಾರ್ ಹೇಳಿದ್ದಾರೆ. ತಂಡಕ್ಕೆ 2 ಟ್ರೋಫಿ ಗೆಲ್ಲಿಸಿಕೊಟ್ಟ ಯಶಸ್ವಿ ನಾಯಕ ಎಂದೇ ಗುರುತಿಸಿಕೊಂಡಿರುವ ರಜತ್ ಪಾಟಿದಾರ್ ಯಾವ ತಂಡ ಸೇರಿಕೊಳ್ಳಲು ಬಯಸಿದ್ದರು.
04:43 PM (IST) Jun 08
ಪತ್ನಿ ಶಿಲ್ಪಾ ಶೆಟ್ಟಿ ಅವರ ಹುಟ್ಟುಹಬ್ಬಕ್ಕೆ ಉದ್ಯಮಿ ರಾಜ್ ಕುಂದ್ರಾ ಹೃದಯಸ್ಪರ್ಶಿ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. ಶಿಲ್ಪಾ ನನ್ನ ಜೀವನದ ಶಕ್ತಿ, ನಂಬಿಕೆ ಮತ್ತು ಸ್ಥಿರತೆ ಎಂದು ಹೇಳಿರುವ ಅವರು, ಕಷ್ಟದ ಸಮಯದಲ್ಲಿ ದೇವತೆಯಂತೆ ಜೊತೆಗಿದ್ದವಳು ಎಂದು ಹೊಗಳಿದ್ದಾರೆ.
04:40 PM (IST) Jun 08
ಬೆಂಗಳೂರು: 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹೀನಾಯ ಪ್ರದರ್ಶನ ತೋರಿತ್ತು. ಇದೀಗ ಮುಂಬೈ ಇಂಡಿಯನ್ಸ್ ತಂಡದಲ್ಲಿ ಮಹಾ ಸಂಚಲನ ಶುರುವಾಗಿದ್ದು, ಸ್ಟಾರ್ ಕ್ರಿಕೆಟಿಗ ತಂಡ ತೊರೆಯಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ.
04:36 PM (IST) Jun 08
ಮಮತಾ ಬ್ಯಾನರ್ಜಿ ಇಂಡಿ ಒಕ್ಕೂಟ ಸಭೆಯಲ್ಲಿ ಪಾಲಿಗೊಂಡ ಬೆನ್ನಲ್ಲೇ ಇತ್ತ ಟಿಎಂಸಿಯ 10 ಬಂಡಾಯ ಸಂಸದರು ನೇರವಾಗಿ ಬಿಜೆಪಿ ನಾಯಕರ ಭೇಟಿಯಾಗಿ ಚರ್ಚಿಸಿದ್ದಾರೆ. ಶೀಘ್ರದಲ್ಲೇ ಟಿಎಂಸಿಯ 10 ವಿಕೆಟ್ ಪತನವಾಗುವ ಸಾಧ್ಯತೆ ಇದೆ.
04:31 PM (IST) Jun 08
27 ವರ್ಷಗಳಿಂದ ದಾಂಪತ್ಯ ಜೀವನದಲ್ಲಿರುವ ನಟ ಆರ್.ಮಾಧವನ್, ತಾವೇಕೆ ಪತ್ನಿ ಸರಿತಾಗೆ ಎಂದಿಗೂ ಮೋಸ ಮಾಡಿಲ್ಲ ಎಂಬುದರ ಬಗ್ಗೆ ಮಾತನಾಡಿದ್ದಾರೆ. 'ನಾನೊಬ್ಬ ಹೆದರುಪುಕ್ಲ ಮದ್ರಾಸಿ' ಎಂದು ಹೇಳಿಕೊಂಡಿರುವ ಅವರು, ತಮ್ಮ ನಿಷ್ಠೆಗೆ ಕಾರಣ ಏನು ಎಂಬುದನ್ನು ವಿವರಿಸಿದ್ದಾರೆ.
03:33 PM (IST) Jun 08
01:41 PM (IST) Jun 08
ಬೆಂಗಳೂರು: ಮುಂಬರುವ ಐರ್ಲೆಂಡ್ ಹಾಗೂ ಇಂಗ್ಲೆಂಡ್ ಎದುರಿನ ಟಿ20 ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಮತ್ತೊಮ್ಮೆ ಆರ್ಸಿಬಿ ನಾಯಕ ರಜತ್ ಪಾಟೀದಾರ್ ಅವರನ್ನು ಕಡೆಗಣಿಸಲಾಗಿದೆ. ಇದರ ಬೆನ್ನಲ್ಲೇ ಆಯ್ಕೆ ಸಮಿತಿಗೆ ರಜತ್ ಪಾಟೀದಾರ್ ಟಾಂಗ್ ಕೊಟ್ಟಿದ್ದಾರೆ.
01:03 PM (IST) Jun 08
ಭಾರತೀಯ ರೈಲ್ವೆಯು ತನ್ನ 40 ವರ್ಷ ಹಳೆಯ ಪ್ರಯಾಣಿಕರ ಮೀಸಲಾತಿ ವ್ಯವಸ್ಥೆಯನ್ನು (PRS) ಆಗಸ್ಟ್ನಿಂದ ಸಂಪೂರ್ಣವಾಗಿ ನವೀಕರಿಸುತ್ತಿದೆ. ಈ ಹೊಸ ವ್ಯವಸ್ಥೆಯು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯನ್ನು ಬಳಸಿ ಟಿಕೆಟ್ ಬುಕಿಂಗ್ ಅನ್ನು ವೇಗವಾಗಿ ಮತ್ತು ಸುಲಭವಾಗಿಸಲಿದೆ.
12:48 PM (IST) Jun 08
'ಮಾ ಇಂಟಿ ಬಂಗಾರಂ' ಚಿತ್ರಕ್ಕೆ ಸಹ-ನಿರ್ಮಾಪಕಿಯಾಗಿದ್ದು, ರಾಜ್ ನಿಡಿಮೋರು ಮತ್ತು ಹಿಮಾಂಕ್ ರೆಡ್ಡಿ ಅವರೊಂದಿಗೆ ಸೇರಿ ತಮ್ಮದೇ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಿಸುತ್ತಿದ್ದಾರೆ. ಈ ಬಹುನಿರೀಕ್ಷಿತ ಚಿತ್ರವು 2026 ರ ಜೂನ್ 19 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
12:03 PM (IST) Jun 08
ಒಂದೆಡೆ ವಿವಾದಗಳು ನಡೆಯುತ್ತಿದ್ದರೂ, 'ಪೆದ್ದಿ' ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಜೂನ್ 4 ರಂದು ಬಿಡುಗಡೆಯಾದ ಈ ಚಿತ್ರ ಈಗಾಗಲೇ ಜಾಗತಿಕವಾಗಿ 200 ಕೋಟಿ ರೂಪಾಯಿಗಳಿಗೂ ಅಧಿಕ ಗಳಿಕೆ ಕಂಡಿದೆ. ಜಾನ್ವಿ ಕಪೂರ್ ಈ ವಿವಾದದ ಬಗ್ಗೆ ಈವರೆಗೂ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
11:23 AM (IST) Jun 08
Gold Rate Today in Bengaluru: ಆಭರಣ ಖರೀದಿಸುವವರಿಗೆ ವಾರದ ಮೊದಲ ದಿನವಾದ ಸೋಮವಾರವೂ ಗುಡ್ ನ್ಯೂಸ್ ಸಿಕ್ಕಿದೆ. ಜೂನ್ ತಿಂಗಳಿನಲ್ಲಿ ನಿರಂತವಾಗಿ ಇಳಿಕೆಯಾಗುತ್ತಿರುವ ಚಿನ್ನದ ಬೆಲೆ ಆಭರಣ ಪ್ರಿಯರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. ಜೂನ್ 8ರಂದು ಚಿನ್ನದ ಬೆಲೆ ಎಷ್ಟಿದೆ ನೋಡೋಣ ಬನ್ನಿ.
10:40 AM (IST) Jun 08
ಬೆಂಗಳೂರು: ಭಾರತ ಟಿ20 ತಂಡದ ನೂತನ ನಾಯಕರಾಗಿ ಮುಂಬೈ ಮೂಲದ ಶ್ರೇಯಸ್ ಅಯ್ಯರ್ ನೇಮಕವಾಗಿದ್ದಾರೆ. ಇದರ ಬೆನ್ನಲ್ಲೇ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ನಾನು ನನ್ನ ಆಟದ ಶೈಲಿಯನ್ನು ಬದಲಿಸಿಕೊಳ್ಳುವುದು ಇಲ್ಲ ಹಾಗೆಯೇ ಯಾರ ನೆರಳಿನಲ್ಲಿಯೂ ಇರಲ್ಲ ಎಂದು ಖಡಕ್ ಸಂದೇಶ ರವಾನಿಸಿದ್ದಾರೆ.
09:52 AM (IST) Jun 08
09:26 AM (IST) Jun 08
09:21 AM (IST) Jun 08
09:01 AM (IST) Jun 08
08:13 AM (IST) Jun 08
07:50 AM (IST) Jun 08
07:24 AM (IST) Jun 08
07:09 AM (IST) Jun 08
07:00 AM (IST) Jun 08
06:49 AM (IST) Jun 08
ಇರಾನ್ನ ನಾಯಕರು ಬಲಿಷ್ಠರು ಮತ್ತು ಹೆಮ್ಮೆಯುಳ್ಳವರು, ಆದರೆ ಅಂತಿಮವಾಗಿ ಅಮೆರಿಕದೊಂದಿಗೆ ಒಪ್ಪಂದಕ್ಕೆ ಬರಲೇಬೇಕಾಗುತ್ತದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಈ ಸತ್ಯವನ್ನು ಒಪ್ಪಿಕೊಳ್ಳಲು ಅವರಿಗೆ ಸಮಯ ಬೇಕಾಗುತ್ತದೆ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
06:21 AM (IST) Jun 08
ಜಮ್ಮು-ಕಾಶ್ಮೀರ ಮತ್ತು ಲಡಾಖ್ ನಡುವೆ ವರ್ಷಪೂರ್ತಿ ಸಂಪರ್ಕ ಕಲ್ಪಿಸುವ ಮಹತ್ವಾಕಾಂಕ್ಷಿ ಜೋಜಿಲಾ ರಸ್ತೆ ಸುರಂಗ ಯೋಜನೆ ಅಂತಿಮ ಹಂತದಲ್ಲಿದೆ. ಸಮುದ್ರ ಮಟ್ಟದಿಂದ 11,578 ಅಡಿ ಎತ್ತರದಲ್ಲಿ ನಿರ್ಮಿಸಲಾದ ಈ ಸುರಂಗವು, ವಿಶ್ವದ ಅತಿ ಉದ್ದದ ಏಕ-ಟ್ಯೂಬ್ ದ್ವಿಮುಖ ರಸ್ತೆ ಸುರಂಗವಾಗಿದೆ.