LIVE NOW
Published : May 26, 2026, 07:50 AM ISTUpdated : May 26, 2026, 09:38 AM IST

India Latest News Live: PHOTOS - ಅನೇಕ ವರ್ಷಗಳ ಬಳಿಕ ನಟ ಉಪೇಂದ್ರ ಮನೆಯಲ್ಲಿ ಮದುವೆ; ಎಂಗೇಜ್‌ ಆದ ನಟ ನಿರಂಜನ್‌ ಸುಧೀಂದ್ರ!

ಸಾರಾಂಶ

ಅತ್ತ ಕರ್ನಾಟಕ ಸರ್ಕಾರ ಮೇಕೆದಾಟು ಅಣೆಕಟ್ಟು ಯೋಜನೆಗೆ ಜಾರಿಗೆ ಚುರುಕು ನೀಡಿರುವ ಹೊತ್ತಿನಲ್ಲೇ, ಇತ್ತ ಯೋಜನೆ ವಿರುದ್ಧ ಕಾನೂನು ಹೋರಾಟ ತೀವ್ರಗೊಳಿಸುವಂತೆ ತಮಿಳುನಾಡಿನ ಮುಖ್ಯಮಂತ್ರಿ ವಿಜಯ್‌, ತಮ್ಮ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮೇಕೆದಾಟು ಅಣೆಕಟ್ಟು ವಿಷಯದಲ್ಲಿ ತಮಿಳುನಾಡು ಸರ್ಕಾರ ಯಾವುದೇ ಆಕ್ಷೇಪ ಎತ್ತುವಂತಿಲ್ಲ ಎಂದು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಇತ್ತೀಚೆಗೆ ಹೇಳಿದ್ದರು. ಅದಕ್ಕೆ ಭಾನುವಾರ ಪ್ರತಿಕ್ರಿಯೆ ನೀಡಿದ್ದ ಡಿಎಂಕೆ ನಾಯಕ ಕೆ.ಎನ್. ನೆಹರು ‘ಡಿಕೆಶಿ ನೀಡಿರುವ ಹೇಳಿಕೆ ಅವರ ದುರಂಹಕಾರದ ಮನೋಭಾವ ತೋರಿಸುತ್ತದೆ. ತಮಿಳುನಾಡಿನಲ್ಲಿ ದುರ್ಬಲ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದೆ ಎಂದು ಭಾವಿಸಿ ಅವರು ಇಂತಹ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್‌ ಕೂಡ ಸಮ್ಮಿಶ್ರ ಸರ್ಕಾರದ ಭಾಗವಾಗಿರುವುದರಿಂದ ಯಾವುದೇ ವಿರೋಧ ಇರುವುದಿಲ್ಲ ಎಂದ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ’ ಎಂದು ಆರೋಪಿಸಿದ್ದರು.

actor niranjan sudhindra marriage

09:38 AM (IST) May 26

PHOTOS - ಅನೇಕ ವರ್ಷಗಳ ಬಳಿಕ ನಟ ಉಪೇಂದ್ರ ಮನೆಯಲ್ಲಿ ಮದುವೆ; ಎಂಗೇಜ್‌ ಆದ ನಟ ನಿರಂಜನ್‌ ಸುಧೀಂದ್ರ!

ನಟ ಉಪೇಂದ್ರ ಅವರ ಮನೆಯಲ್ಲಿ ಮದುವೆ ಸಂಭ್ರಮ ಶುರು ಆಗಿದೆ. ಇವರ ಅಣ್ಣನ ಮಗ, ನಟ ನಿರಂಜನ್‌ ಸುಧೀಂದ್ರ ಅವರು ಎಂಗೇಜ್‌ ಆಗಿದ್ದಾರೆ. ಕುಟುಂಬಸ್ಥರು, ಸ್ನೇಹಿತರ ಸಾಕ್ಷಿಯಾಗಿ ನಡೆದ ಈ ನಿಶ್ಚಿತಾರ್ಥದ ಫೋಟೋಗಳು ಇಲ್ಲಿವೆ.

 

Read Full Story

09:34 AM (IST) May 26

ಮತ್ತೆ ಫ್ರಾನ್ಸ್‌ನಿಂದ 114 ರಫೇಲ್ ಯುದ್ಧ ಖರೀದಿಗೆ ಭಾರತ ಸಜ್ಜು, ಭಾರತದಲ್ಲೇ 90 ವಿಮಾನ ನಿರ್ಮಾಣ

ಭಾರತೀಯ ವಾಯುಸೇನೆಯ ಬಲವರ್ಧನೆಗಾಗಿ, ಕೇಂದ್ರ ಸರ್ಕಾರವು ಫ್ರಾನ್ಸ್‌ನಿಂದ ಹೊಸದಾಗಿ 114 ರಫೇಲ್‌ ಯುದ್ಧವಿಮಾನಗಳನ್ನು ಖರೀದಿಸಲು ಮುಂದಾಗಿದೆ. ಈ ಪೈಕಿ ಹೆಚ್ಚಿನ ವಿಮಾನಗಳನ್ನು ಭಾರತದಲ್ಲೇ ಉತ್ಪಾದಿಸಲಾಗುವುದು ಮತ್ತು ಈ ವರ್ಷಾಂತ್ಯದೊಳಗೆ ಒಪ್ಪಂದ ಅಂತಿಮಗೊಳ್ಳುವ ನಿರೀಕ್ಷೆಯಿದೆ.
Read Full Story

09:28 AM (IST) May 26

West Asia conflict - ಭಾರತದ ಎಕಾನಮಿ ಉಳಿಸಲು 3F ಪ್ಲ್ಯಾನ್? ನಿರ್ಮಲಾ ಸೀತಾರಾಮನ್ ಹೇಳಿದ ಮಾತು ವೈರಲ್

ಪಶ್ಚಿಮ ಏಷ್ಯಾ ಸಂಘರ್ಷವು ಭಾರತದ ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರುತ್ತಿದ್ದು, ಈ ಸವಾಲನ್ನು ಎದುರಿಸಲು ಸರ್ಕಾರವು ಇಂಧನ, ರಸಗೊಬ್ಬರ ಮತ್ತು ವಿದೇಶಿ ವಿನಿಮಯ (3F) ಕ್ಷೇತ್ರಗಳ ಮೇಲೆ ಗಮನಹರಿಸಿದೆ. ನಾಗರಿಕರ ರಕ್ಷಿಸಲು ಮತ್ತು ಆರ್ಥಿಕ ಸ್ಥಿರತೆ ಕಾಪಾಡಲು 3F ಸೂತ್ರಗಳ ಬಗ್ಗೆ ಲೇಖನದಲ್ಲಿ ವಿವರಿಸಿದೆ.

Read Full Story

08:55 AM (IST) May 26

ವಿಜಯ್ 'ವಿಷಲ್‌' ಸದ್ದಿಗೆ ತಮಿಳುನಾಡು ರಾಜಕೀಯದಲ್ಲಿ ಕಂಪನ! ಅಣ್ಣಾಡಿಎಂಕೆ ಮತ್ತೊಂದು ಹೋಳು, 3 ಬಂಡಾಯ ಶಾಸಕರ ರಾಜೀನಾಮೆ

ತಮಿಳುನಾಡಿನಲ್ಲಿ ಮುಖ್ಯಮಂತ್ರಿ ವಿಜಯ್ ನೇತೃತ್ವದ ಟಿವಿಕೆ ಸರ್ಕಾರ 'ಆಪರೇಷನ್ ವಿಸಲ್' ಕಾರ್ಯಾಚರಣೆ ನಡೆಸಿ, ವಿರೋಧಿ ಬಣದ ಮೂವರು ಶಾಸಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಈ ಮೂವರು, ಟಿವಿಕೆ ಪಕ್ಷ ಸೇರಿ ಮರುಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆಯಿದೆ. ಈ ಬೆಳವಣಿಗೆಯು ವಿಜಯ್ ಸರ್ಕಾರದ ಬಲವರ್ಧನೆಗೆ ಮತ್ತು ಅಣ್ಣಾಡಿಎಂಕೆ ಪಕ್ಷದ ಮತ್ತೊಂದು ಹೋಳಾಗುವಿಕೆಗೆ ಕಾರಣವಾಗಿದೆ.
Read Full Story

08:50 AM (IST) May 26

ಇವರಿಬ್ಬರು ಕೊಹ್ಲಿ-ಗೇಲ್‌ಗಿಂತ ಬೆಸ್ಟ್‌ ಓಪನ್ನಿಂಗ್ ಜೋಡಿ..! ಐಪಿಎಲ್‌ ಪ್ಲೇ-ಆಫ್‌ಗೂ ಮುನ್ನ RCB ಎದುರಾಳಿಯನ್ನು ಕೊಂಡಾಡಿದ ಸುರೇಶ್ ರೈನಾ

ಮಾಜಿ ಕ್ರಿಕೆಟಿಗ ಸುರೇಶ್ ರೈನಾ, ಗುಜರಾತ್ ಟೈಟಾನ್ಸ್‌ನ ಆರಂಭಿಕರಾದ ಶುಭ್‌ಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಜೋಡಿಯನ್ನು ಐಪಿಎಲ್ ಇತಿಹಾಸದ ಅತ್ಯುತ್ತಮ ಆರಂಭಿಕ ಜೋಡಿ ಎಂದು ಹೊಗಳಿದ್ದಾರೆ. ಅವರ ಸ್ಥಿರತೆ ಮತ್ತು ವೇಗದ ಜೊತೆಯಾಟದ ಸಾಮರ್ಥ್ಯವನ್ನು ಅಂಕಿಅಂಶಗಳ ಸಮೇತ ವಿವರಿಸಿರುವ ಅವರು, ಈ ಜೋಡಿ ಕೊಹ್ಲಿ-ಗೇಲ್, ಕೊಹ್ಲಿ-ಡಿವಿಲಿಯರ್ಸ್ ಅವರನ್ನೂ ಮೀರಿಸಿದೆ ಎಂದಿದ್ದಾರೆ.
Read Full Story

08:38 AM (IST) May 26

ಮಹಾರಾಷ್ಟ್ರದ ಸಿಂಧುದುರ್ಗ ಸಮುದ್ರದಾಳ ಮುಳುಗಿದ ಗುಲ್ದಾರ್ ಯುದ್ಧನೌಕೆ, 22 ಅಡಿ ಆಳದಲ್ಲಿ ಮ್ಯೂಸಿಎಂ!

ಮಹಾರಾಷ್ಟ್ರದ ಸಿಂಧುದುರ್ಗ ತೀರದಲ್ಲಿ, ಭಾರತದ ಮೊದಲ ನೀರೊಳಗಿನ ವಸ್ತುಸಂಗ್ರಹಾಲಯ ನಿರ್ಮಾಣದ ಭಾಗವಾಗಿ ಐಎನ್‌ಎಸ್‌ ಗುಲ್ದಾರ್ ಯುದ್ಧನೌಕೆಯನ್ನು ಸಮುದ್ರದಲ್ಲಿ ಮುಳುಗಿಸಲಾಗಿದೆ.  ಜೊತೆಗೆ ಸ್ಕೂಬಾ ಡೈವಿಂಗ್ ಮತ್ತು ಸಬ್‌ಮರೀನ್‌ ಮೂಲಕ ಸಾಗರ ವೀಕ್ಷಣೆಯ ಅವಕಾಶವನ್ನು ಕಲ್ಪಿಸಲಿದೆ.

Read Full Story

08:37 AM (IST) May 26

ಪಾಕ್ ಪ್ರಜಾಪ್ರಭುತ್ವದ ಮುಖವಾಡ ಕಳಚಿದ ಸೈಫರ್‌; ಇಮ್ರಾನ್ ಖಾನ್ ಪದಚ್ಯುತಿಯ ಹಿಂದೆ ಅಮೆರಿಕದ ಕುತಂತ್ರ ಬಯಲು!

‘ಸೈಫರ್ ನಂ. ಐ-0678’ ಎಂಬ ರಹಸ್ಯ ವರದಿಯು, ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪದಚ್ಯುತಿಯ ಹಿಂದೆ ಅಮೆರಿಕದ ಕೈವಾಡವಿದೆ ಎಂಬ ಆರೋಪವನ್ನು ಸಾಬೀತುಪಡಿಸಿದೆ.  ಅಮೆರಿಕದ ಅಧಿಕಾರಿಗಳು ನೀಡಿದ ಆಮಿಷವನ್ನು ಈ ವರದಿ ಬಹಿರಂಗಪಡಿಸುತ್ತದೆ. 

Read Full Story

08:12 AM (IST) May 26

ಪಾಕ್‌ನಲ್ಲಿ ಕೂತು ದೇಶದಲ್ಲಿ ಡ್ರಗ್ಸ್, ಉಗ್ರ ಚಟುವಟಿಕೆ, ಭಾರತಕ್ಕೆ ಹೊಸ ತಲೆನೋವಾದ ಈ ಉಗ್ರ ಯಾರು?

Shahzad Bhatti ಪಾಕಿಸ್ತಾನದಿಂದಲ್ಲಿ ಕುಳಿತು ದೇಶದಲ್ಲಿ ಉಗ್ರ ಚಟುವಟಿಕೆ ನಡೆಸುತ್ತಿರುವ ಶಹಜಾದ್ ಭಟ್ಟಿಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ನೇರ ಎಚ್ಚರಿಕೆ ನೀಡಿದ್ದಾರೆ.ಭಾರತದಲ್ಲಿ ಭಯೋತ್ಪಾದನೆ, ಡ್ರಗ್ಸ್ ದಂಧೆ ಮತ್ತು ಯುವಕರನ್ನು ಬ್ರೇನ್‌ವಾಶ್ ಮಾಡುತ್ತಿರುವ ಭಟ್ಟಿ. ಅವನ ಶಾಕಿಂಗ್ ಕೃತ್ಯಗಳು ಏನು?

Read Full Story

07:50 AM (IST) May 26

ಮೇಕೆದಾಟು ಡ್ಯಾಂ ವಿರುದ್ಧ ಕಾನೂನು ಹೋರಾಟ ತೀವ್ರಕ್ಕೆ ಸಿಎಂ ವಿಜಯ್‌ ಸೂಚನೆ

ಮೇಕೆದಾಟು ಅಣೆಕಟ್ಟು ವಿಷಯದಲ್ಲಿ ತಮಿಳುನಾಡು ಸರ್ಕಾರ ಯಾವುದೇ ಆಕ್ಷೇಪ ಎತ್ತುವಂತಿಲ್ಲ ಎಂದು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಇತ್ತೀಚೆಗೆ ಹೇಳಿದ್ದರು. ಅದಕ್ಕೆ ಭಾನುವಾರ ಪ್ರತಿಕ್ರಿಯೆ ನೀಡಿದ್ದ ಡಿಎಂಕೆ ನಾಯಕ ಕೆ.ಎನ್. ನೆಹರು ‘ಡಿಕೆಶಿ ನೀಡಿರುವ ಹೇಳಿಕೆ ಅವರ ದುರಂಹಕಾರದ ಮನೋಭಾವ ತೋರಿಸುತ್ತದೆ. ತಮಿಳುನಾಡಿನಲ್ಲಿ ದುರ್ಬಲ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದೆ ಎಂದು ಭಾವಿಸಿ ಅವರು ಇಂತಹ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್‌ ಕೂಡ ಸಮ್ಮಿಶ್ರ ಸರ್ಕಾರದ ಭಾಗವಾಗಿರುವುದರಿಂದ ಯಾವುದೇ ವಿರೋಧ ಇರುವುದಿಲ್ಲ ಎಂದ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ’ ಎಂದು ಆರೋಪಿಸಿದ್ದರು.

Read Full Story

More Trending News