LIVE NOW
Published : Jul 25, 2026, 06:58 AM ISTUpdated : Jul 25, 2026, 12:02 PM IST

India Latest News Live: ಕ್ಯಾರಾವ್ಯಾನ್ ಒಳಗೆ ನುಗ್ಗಿದ ಅಭಿಮಾನಿ ನೀಚ ಕೃತ್ಯ; ಕಹಿ ಘಟನೆ ಬಿಚ್ಚಿಟ್ಟ 'ಮಂಡೋದರಿ' ಕಾಜಲ್ ಅಗರ್ವಾಲ್

ಸಾರಾಂಶ

ಮುಂಬೈ: ಪ್ರತಿಭಟನೆಯಲ್ಲಿ ಭಾಗಿಯಾದರೆ ಬ್ಯಾಗ್‌ನಲ್ಲಿ ಡ್ರಗ್ಸ್‌ ಇಟ್ಟು ಜೀವನ ಹಾಳು ಮಾಡುವುದಾಗಿ ಪೊಲೀಸ್‌ ಒಬ್ಬರು ವಿದ್ಯಾರ್ಥಿಗಳಿಗೆ ಬೆದರಿಕೆ ಒಡ್ಡಿದ ಪ್ರಕರಣದ ಬೆನ್ನಲ್ಲೇ, ಮಫ್ತಿಯಲ್ಲಿದ್ದ ಪೊಲೀಸರೊಬ್ಬರು ನೀಟ್‌ ಸೋರಿಕೆ ವಿರುದ್ಧ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿನಿಯರನ್ನು ಅನುಚಿತವಾಗಿ ನಿಯಂತ್ರಿಸಲು ಯತ್ನಿಸುತ್ತಿದ್ದ ಘಟನೆ ಬೆಳಕಿಗೆ ಬಂದಿದೆ. ಇದು, ಮುಂಬೈ ಪೊಲೀಸರ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದೆ.

ದಾದರ್‌ನ ಶಿವಾಜಿ ಪಾರ್ಕ್‌ನಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಮಹಿಳೆಯರನ್ನೂ ನಿಯಂತ್ರಿಸಲು ಪೊಲೀಸರೊಬ್ಬರು ಯತ್ನಿಸಿದ ವಿಡಿಯೋವನ್ನು ಹಂಚಿಕೊಂಡ ವಿಪಕ್ಷ ನಾಯಕರು, ಆ ಪೊಲೀಸ್‌ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಅತ್ತ ವಿಡಿಯೋ ಬಗ್ಗೆ ಸ್ಪಷ್ಟನೆ ನೀಡಿರುವ ಮುಂಬೈ ಪೊಲೀಸರು, ‘ವಿಡಿಯೋವನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತಿದೆ. ಪುರುಷರನ್ನು ನಿಯಂತ್ರಿಸುತ್ತಿದ್ದ ವೇಳೆ ಮಹಿಳೆಯೊಬ್ಬರು ನಡುವೆ ಬಂದಿದ್ದರಷ್ಟೇ’ ಎಂದು ಸ್ಪಷ್ಟನೆ ನೀಡಲು ಯತ್ನಿಸಿದ್ದಾರೆ.

12:02 PM (IST) Jul 25

ಕ್ಯಾರಾವ್ಯಾನ್ ಒಳಗೆ ನುಗ್ಗಿದ ಅಭಿಮಾನಿ ನೀಚ ಕೃತ್ಯ; ಕಹಿ ಘಟನೆ ಬಿಚ್ಚಿಟ್ಟ 'ಮಂಡೋದರಿ' ಕಾಜಲ್ ಅಗರ್ವಾಲ್

ಶೂಟಿಂಗ್ ಸೆಟ್‌ಗಳಲ್ಲಿ ಮಹಿಳಾ ಕಲಾವಿದರ ಸುರಕ್ಷತೆಯ ಬಗ್ಗೆ ಕಾಜಲ್ ಧ್ವನಿ ಎತ್ತಿರುವುದು ಈಗ ಚಿತ್ರರಂಗದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಸಿನಿತಾರೆಯರಿಗೂ ಸಾಮಾನ್ಯರಂತೆ ಗೌರವ ಮತ್ತು ಸುರಕ್ಷತೆ ಅತ್ಯಗತ್ಯ ಎಂಬುದು ಈ ಘಟನೆಯಿಂದ ಮತ್ತೊಮ್ಮೆ ಸಾಬೀತಾಗಿದೆ. ಈ ಸ್ಟೋರಿ ನೋಡಿ ಶಾಕ್ ಆಗ್ಬೇಡಿ..!

Read Full Story

11:56 AM (IST) Jul 25

ಐಟಿ ಲೋಕದಲ್ಲಿ ಸಂಚಲನ - 142.57 ಶತಕೋಟಿ ರೂ. ವೆಚ್ಚದಲ್ಲಿ HCLTech ಬೃಹತ್ AI ಡೇಟಾ ಸೆಂಟರ್! ಎಲ್ಲಿ?

ಪ್ರಮುಖ ಐಟಿ ಸಂಸ್ಥೆ HCLTech, 'ಸರ್ವಮ್ AI' ಜೊತೆಗೂಡಿ ಒಡಿಶಾದಲ್ಲಿ ತನ್ನ ಮೊದಲ ಅತ್ಯಾಧುನಿಕ AI ಡೇಟಾ ಸೆಂಟರ್ ಸ್ಥಾಪಿಸಲು ಮುಂದಾಗಿದೆ. ಈ ಯೋಜನೆಗಾಗಿ ₹142.57 ಶತಕೋಟಿ ಹೂಡಿಕೆ ಮಾಡುತ್ತಿದ್ದು, ಇದು 2028ರ ವೇಳೆಗೆ 5,000ಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಿದೆ. ಈ ಮೂಲಕ ಭಾರತವನ್ನು ಜಾಗತಿಕ AI ಭೂಪಟದಲ್ಲಿ ಮುಂಚೂಣಿಗೆ ತರಲು ಕಂಪನಿ ಸಜ್ಜಾಗಿದೆ.
Read Full Story

11:03 AM (IST) Jul 25

ಕಾರ್ಪೊರೇಟ್ ಜೀವನ, ಸುಖಭೋಗದ ಬದುಕು ತ್ಯಜಿಸಿ ಭಾರತದ ಸೇವೆಯಲ್ಲಿ ಮುಳುಗಿದ ಸ್ವಿಟ್ಜರ್ಲೆಂಡ್‌ನ ಯುವತಿ ಲಾವಿ ಕಥೆ!

ಸ್ವಿಟ್ಜರ್‌ಲ್ಯಾಂಡ್ ಮೂಲದ ಸಾಂಡ್ರಾ ಲಾವಿ ಗೊಜ್ಕೋವಿಕ್, ತಮ್ಮ ಯಶಸ್ವಿ ಕಾರ್ಪೊರೇಟ್ ಜೀವನವನ್ನು ತ್ಯಜಿಸಿ, ಭಾರತದ ಬಡ ಜನರ ಸೇವೆಗಾಗಿ ತಮ್ಮನ್ನು ಮುಡುಪಾಗಿಟ್ಟಿದ್ದಾರೆ. ಕಳೆದ 15 ವರ್ಷಗಳಿಂದ, ಅವರು ಮಕ್ಕಳ ಶಿಕ್ಷಣ, ಮಹಿಳಾ ಸಬಲೀಕರಣ ಮತ್ತು ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಡುತ್ತಾ, ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ದುಡಿದ ಹಣವನ್ನು ಭಾರತದ ಸೇವಾ ಯೋಜನೆಗಳಿಗೆ ವಿನಿಯೋಗಿಸುತ್ತಿದ್ದಾರೆ.
Read Full Story

10:59 AM (IST) Jul 25

ಕೆನಡಾದಲ್ಲಿ ಮತ್ತೊಬ್ಬ ಭಾರತದ ವಿದ್ಯಾರ್ಥಿನಿಯ ಬರ್ಬರ ಕೊಲೆ.. ಓರ್ವ ಅರೆಸ್ಟ್, ಆಗಿದ್ದೇನು?

ಕೆನಡಾದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದ ಪಂಜಾಬ್ ಮೂಲದ 23 ವರ್ಷದ ದಮನ್‌ಪ್ರೀತ್ ಕೌರ್ ಅವರನ್ನು ಅವರ ಲಿವ್-ಇನ್ ಪಾರ್ಟ್‌ನರ್ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಈ ಸಂಬಂಧ ಆರೋಪಿಯನ್ನು ಬಂಧಿಸಲಾಗಿದ್ದು, ಮಗಳ ವಿದ್ಯಾಭ್ಯಾಸಕ್ಕಾಗಿ ಸಾಲ ಮಾಡಿದ್ದ ಪೋಷಕರು ಆಘಾತಕ್ಕೊಳಗಾಗಿದ್ದಾರೆ. ಮೃತದೇಹವನ್ನು ಭಾರತಕ್ಕೆ ತರಲು ಆರ್ಥಿಕ ನೆರವು ಸಂಗ್ರಹಿಸಲಾಗುತ್ತಿದೆ.
Read Full Story

10:30 AM (IST) Jul 25

ಭಾರತ vs ಜಿಂಬಾಬ್ವೆ 2ನೇ ಟಿ20 - ಸಮಯ ಬದಲಾವಣೆ! ನೇರ ಪ್ರಸಾರ, ಸಂಭಾವ್ಯ ತಂಡದ ವಿವರ ಇಲ್ಲಿದೆ

ನಾಯಕ ಶ್ರೇಯಸ್‌ ಅಯ್ಯರ್‌ ನೇತೃತ್ವದ ಭಾರತ ತಂಡವು ಜಿಂಬಾಬ್ವೆ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಜಯದ ಲಯ ಮುಂದುವರಿಸುವ ಗುರಿ ಹೊಂದಿದೆ. ಮೊದಲ ಪಂದ್ಯದ ಹೀರೋಗಳಾದ ವೈಭವ್‌ ಸೂರ್ಯವಂಶಿ ಮತ್ತು ಮಯಾಂಕ್‌ ಅಗರ್‌ವಾಲ್‌ ಮೇಲೆ ನಿರೀಕ್ಷೆ ಹೆಚ್ಚಿದ್ದು, ಪಂದ್ಯದ ಸಮಯ ಹಾಗೂ ನೇರ ಪ್ರಸಾರದ ವಿವರಗಳನ್ನು ಇಲ್ಲಿ ನೀಡಲಾಗಿದೆ.
Read Full Story

10:30 AM (IST) Jul 25

Jyotika - ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡಲೇಬೇಕು! ವಿದ್ಯಾರ್ಥಿಗಳ ಹೋರಾಟಕ್ಕೆ ನಟಿ ಜ್ಯೋತಿಕಾ ಬೆಂಬಲ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಗೆ ನಟಿ ಜ್ಯೋತಿಕಾ ಬೆಂಬಲ ಸೂಚಿಸಿದ್ದಾರೆ. ಸಚಿವರನ್ನು ಬದಲಿಸಲ್ಲ ಎಂದು ಸರ್ಕಾರ ಪಟ್ಟು ಹಿಡಿದಿದೆ. ಆದರೆ, ರಾಜೀನಾಮೆ ಪಡೆಯದಿದ್ದರೆ ದೇಶಾದ್ಯಂತ ಪ್ರತಿಭಟನೆ ನಡೆಸುವುದಾಗಿ ಸಿಜೆಪಿ ಎಚ್ಚರಿಕೆ

Read Full Story

10:27 AM (IST) Jul 25

ಕಾಕ್ರೋಚ್ ಪಕ್ಷದ ಅಭಿಜಿತ್ ದೀಪ್ಕೆ ಇಷ್ಟ ಪಡುವ ಆಟ ಯಾವುದು? ಪ್ರತಿಭಟನೆ ವೇಳೆ ಕ್ರಿಕೆಟ್ ಆಡಿದ್ದೇಕೆ?

'ಕಾಕ್ರೋಚ್ ಜನತಾ ಪಾರ್ಟಿ' ಸಂಸ್ಥಾಪಕ ಅಭಿಜಿತ್ ದೀಪ್ಕೆ, ನೀಟ್ ಪೇಪರ್ ಸೋರಿಕೆ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ವಿಭಿನ್ನವಾಗಿ ಪ್ರತಿಭಟಿಸುತ್ತಿದ್ದಾರೆ. ಪ್ರತಿಭಟನೆಯ ನಡುವೆ ಕ್ರಿಕೆಟ್ ಆಡುವ ಮೂಲಕ ಗಮನ ಸೆಳೆದಿದ್ದಾರೆ.

Read Full Story

10:13 AM (IST) Jul 25

ಗ್ಲಾಸ್ಗೋ ಕೂಟ - ಚಿಕ್ಕದಾದರೂ ಚೊಕ್ಕವಾಗಿದ್ದ ಕಾಮನ್‌ವೆಲ್ತ್ ಗೇಮ್ಸ್ ಉದ್ಘಾಟನೆ

ಆಸ್ಟ್ರೇಲಿಯಾ ಹಿಂದೆ ಸರಿದ ನಂತರ ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೆ ಚಾಲನೆ ದೊರೆತಿದೆ. ಭಾರತ ತಂಡವನ್ನು ಮೀರಾಬಾಯಿ ಚಾನು ಮತ್ತು ಲವ್ಲೀನಾ ಮುನ್ನಡೆಸಿದರೆ, ಜುಡೋ ಪಟು ತುಲಿಕಾ ಮಾನ್‌ ಡೋಪಿಂಗ್‌ನಿಂದ ಹೊರಬಿದ್ದಿದ್ದು ಭಾರತಕ್ಕೆ ಆರಂಭಿಕ ಆಘಾತ ನೀಡಿದೆ. ಈಜುಪಟು ಶ್ರೀಹರಿ ನಟರಾಜ್ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.

Read Full Story

09:43 AM (IST) Jul 25

ಚೀನಾದಿಂದ ಮತ್ತೊಂದು ಆಘಾತಕಾರಿ ಆರೋಗ್ಯ ಸಮಸ್ಯೆ.. ಪ್ರಾಣಕ್ಕೆ ಸಂಚಕಾರ ತರುತ್ತಿದೆ ಈ ಹೊಸ ಟ್ರೆಂಡ್..!

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಪ್ರತಿಯೊಂದು ವಿಷಯವನ್ನೂ ಕಣ್ಣು ಮುಚ್ಚಿ ನಂಬಿದರೆ ಏನಾಗುತ್ತದೆ ಎಂಬುದಕ್ಕೆ ಚೀನಾದಲ್ಲಿ ನಡೆಯುತ್ತಿರುವ ಈ ಘಟನೆಗಳೇ ಸಾಕ್ಷಿ. ಕೇವಲ ಎರಡೇ ದಿನಗಳಲ್ಲಿ 4 ಕೆಜಿ ತೂಕ ಇಳಿಸಬಹುದು ಎಂಬ ಸುಳ್ಳು ಭರವಸೆಗೆ ಮರುಳಾಗಿ ಜನರು ಈಗ ಆಸ್ಪತ್ರೆ ಪಾಲಾಗುತ್ತಿದ್ದಾರೆ!

Read Full Story

09:04 AM (IST) Jul 25

ಜಿಂಬಾಬ್ವೆ ವಿರುದ್ಧ ಸೂರ್ಯವಂಶಿ ಅರ್ಧ ಶತಕ ಬಾರಿಸಿದ್ರೂ ಟೀಕೆಗೆ ಒಳಗಾದ ಗಂಭೀರ್.. ಕಾರಣ ಬೇರೆಯದ್ದೇ ಇದೆ!

ವೈಭವ್ ಅವರ ಈ ಅದ್ಭುತ ಬ್ಯಾಟಿಂಗ್ ನೋಡಿದ ಮಾಜಿ ಕ್ರಿಕೆಟಿಗ ಮತ್ತು 1983ರ ವಿಶ್ವಕಪ್ ವಿಜೇತ ಕೆ.ಶ್ರೀಕಾಂತ್, ಗೌತಮ್ ಗಂಭೀರ್ ವಿರುದ್ಧ ಕಿಡಿಕಾರಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಕೇವಲ ಮೂರು ಪಂದ್ಯಗಳಲ್ಲಿ ವೈಫಲ್ಯ ಕಂಡಿದ್ದಕ್ಕೆ ವೈಭವ್ ಅವರನ್ನು ತಂಡದಿಂದ ಕೈಬಿಟ್ಟಿದ್ದನ್ನು ಶ್ರೀಕಾಂತ್ ಪ್ರಶ್ನಿಸಿದ್ದಾರೆ.

Read Full Story

08:59 AM (IST) Jul 25

ಮೋದಿ ಸರ್ಕಾರ ವಿದ್ಯಾರ್ಥಿಗಳನ್ನ ದೇಶದ ಶತ್ರುಗಳಂತೆ ಕಾಣುತ್ತೆ - ಸೋನಿಯಾ ಗಾಂಧಿ ವಾಗ್ದಾಳಿ

ಜಂತರ್‌ ಮಂತರ್‌ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ವಿಚಾರ ಕಾಂಗ್ರೆಸ್‌ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ವಿರುದ್ಧ ಶುಕ್ರವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.

Read Full Story

07:14 AM (IST) Jul 25

ಪ್ರಧಾನ್‌ ರಾಜೀನಾಮೆಯೇ ಪ್ರಧಾನ? ನೀಟ್‌ ಗದ್ದಲಕ್ಕೆ ಸತತ 5ನೇ ದಿನವೂ ಕಲಾಪಗಳು ಬಲಿ

ನೀಟ್‌ ವಿವಾದದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಪ್ರತಿಪಕ್ಷಗಳು ಬಿಗಿಪಟ್ಟು ಹಿಡಿದಿವೆ. ಆದರೆ, ಜವಾಬ್ದಾರಿಯಿಂದ ಓಡಿಹೋಗುವುದಿಲ್ಲ ಎಂದು ಹೇಳಿರುವ ಕೇಂದ್ರ ಸರ್ಕಾರವು ರಾಜೀನಾಮೆ ಬೇಡಿಕೆಯನ್ನು ತಿರಸ್ಕರಿಸಿದ್ದು, ಈ ಜಟಾಪಟಿಯಿಂದ ಸಂಸತ್ ಕಲಾಪಗಳು ನಿರಂತರವಾಗಿ ಬಲಿಯಾಗುತ್ತಿವೆ.
Read Full Story

More Trending News