ನವದೆಹಲಿ: ಕೋವಿಡ್ ವೇಳೆ ಸೃಷ್ಟಿಸಲಾಗಿದ್ದ ಹಾಗೂ ವಿಪಕ್ಷಗಳ ಟೀಕೆಗೆ ಗುರಿಯಾಗಿದ್ದ ಪಿಎಂ ಕೇರ್ಸ್ ನಿಧಿಗೆ 2023-24 ಮತ್ತು 2024-25ರಲ್ಲಿ ದೇಶ-ವಿದೇಶಗಳಲ್ಲಿ 1,162.92 ಕೋಟಿ ರು. ದೇಣಿಗೆ ಸಂಗ್ರಹಿಸಲಾಗಿದೆ. ಆದರೆ ಈ ಅವಧಿಯಲ್ಲಿ ಕೇವಲ 16.47 ಕೋಟಿ ರು. ಖರ್ಚು ಮಾಡಿದೆ ಎಂದು ಆಡಿಟ್ ವರದಿಗಳು ತಿಳಿಸಿವೆ. 2024-25ರಲ್ಲಿ ಈ ನಿಧಿಯು 479.97 ಕೋಟಿ ರು. ದೇಣಿಗೆ ಸಂಗ್ರಹಿಸಿತ್ತು, ಆದರೆ ಕೋವಿಡ್ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಕೇವಲ 87.85 ಲಕ್ಷ ರು. ಖರ್ಚು ಮಾಡಿದೆ. 2023-24ರಲ್ಲಿ 682.94 ಕೋಟಿ ರು. ಸಂಗ್ರಹಿಸಿ 15.59 ಕೋಟಿ ರು. ಖರ್ಚು ಮಾಡಿತ್ತು.
ಮಾರ್ಚ್ 31, 2025ಕ್ಕೆ ಮುಗಿದ ವಿತ್ತ ವರ್ಷದಲ್ಲಿ, ನಿಧಿಯ ಖಾತೆಗಳಲ್ಲಿ 8,452.06 ಕೋಟಿ ರು. ಇದೆ. ಇದರಲ್ಲಿ 7,846.65 ಕೋಟಿ ಸ್ಥಿರ ಠೇವಣಿಗಳಲ್ಲಿದೆ. ಒಟ್ಟಾರೆ, ಈ ನಿಧಿಯು 2020ರ ಮಾರ್ಚ್ನಲ್ಲಿ ಆರಂಭವಾದಾಗಿನಿಂದ 14,766.95 ಕೋಟಿ ರು. ದೇಣಿಗೆ ಸಂಗ್ರಹಿಸಿದೆ ಮತ್ತು 2024-25 ರವರೆಗೆ 8,133.29 ಕೋಟಿ ರು. ಖರ್ಚು ಮಾಡಿದೆ.
06:20 AM (IST) Aug 19
ಅಯೋಧ್ಯೆ ರಾಮಮಂದಿರದ ಕಾಣಿಕೆ ಕಳವು ಪ್ರಕರಣದಲ್ಲಿ, ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಮಾಜಿ ಸದಸ್ಯ ಅನಿಲ್ ಮಿಶ್ರಾಗೆ ವಿಶೇಷ ತನಿಖಾ ತಂಡ (ಎಸ್ಐಟಿ) ಕ್ಲೀನ್ಚಿಟ್ ನೀಡಿದೆ. ತನಿಖಾ ವರದಿಯನ್ನು ಟ್ರಸ್ಟ್ಗೆ ಹಸ್ತಾಂತರಿಸಲಾಗಿದ್ದು, ಶೀಘ್ರ ತನಿಖೆ ಪೂರ್ಣಗೊಳಿಸಲು ಸುಪ್ರೀಂ ಕೋರ್ಟ್ ಕೂಡ ಸೂಚಿಸಿದೆ.
06:00 AM (IST) Aug 19
05:41 AM (IST) Aug 19
05:36 AM (IST) Aug 19