Published : Aug 19, 2026, 05:30 AM ISTUpdated : Aug 19, 2026, 10:57 PM IST

India Latest News Live: ಪಾತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡಿದ್ದ ನಟಿ ಈಗ ಸಖತ್ ಸ್ಲಿಮ್ - ಅಷ್ಟಕ್ಕೂ ಯಾರು ಗೊತ್ತಾ?

ಸಾರಾಂಶ

ನವದೆಹಲಿ: ಕೋವಿಡ್‌ ವೇಳೆ ಸೃಷ್ಟಿಸಲಾಗಿದ್ದ ಹಾಗೂ ವಿಪಕ್ಷಗಳ ಟೀಕೆಗೆ ಗುರಿಯಾಗಿದ್ದ ಪಿಎಂ ಕೇರ್ಸ್‌ ನಿಧಿಗೆ 2023-24 ಮತ್ತು 2024-25ರಲ್ಲಿ ದೇಶ-ವಿದೇಶಗಳಲ್ಲಿ 1,162.92 ಕೋಟಿ ರು. ದೇಣಿಗೆ ಸಂಗ್ರಹಿಸಲಾಗಿದೆ. ಆದರೆ ಈ ಅವಧಿಯಲ್ಲಿ ಕೇವಲ 16.47 ಕೋಟಿ ರು. ಖರ್ಚು ಮಾಡಿದೆ ಎಂದು ಆಡಿಟ್ ವರದಿಗಳು ತಿಳಿಸಿವೆ. 2024-25ರಲ್ಲಿ ಈ ನಿಧಿಯು 479.97 ಕೋಟಿ ರು. ದೇಣಿಗೆ ಸಂಗ್ರಹಿಸಿತ್ತು, ಆದರೆ ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಕೇವಲ 87.85 ಲಕ್ಷ ರು. ಖರ್ಚು ಮಾಡಿದೆ. 2023-24ರಲ್ಲಿ 682.94 ಕೋಟಿ ರು. ಸಂಗ್ರಹಿಸಿ 15.59 ಕೋಟಿ ರು. ಖರ್ಚು ಮಾಡಿತ್ತು.

ಮಾರ್ಚ್ 31, 2025ಕ್ಕೆ ಮುಗಿದ ವಿತ್ತ ವರ್ಷದಲ್ಲಿ, ನಿಧಿಯ ಖಾತೆಗಳಲ್ಲಿ 8,452.06 ಕೋಟಿ ರು. ಇದೆ. ಇದರಲ್ಲಿ 7,846.65 ಕೋಟಿ ಸ್ಥಿರ ಠೇವಣಿಗಳಲ್ಲಿದೆ. ಒಟ್ಟಾರೆ, ಈ ನಿಧಿಯು 2020ರ ಮಾರ್ಚ್‌ನಲ್ಲಿ ಆರಂಭವಾದಾಗಿನಿಂದ 14,766.95 ಕೋಟಿ ರು. ದೇಣಿಗೆ ಸಂಗ್ರಹಿಸಿದೆ ಮತ್ತು 2024-25 ರವರೆಗೆ 8,133.29 ಕೋಟಿ ರು. ಖರ್ಚು ಮಾಡಿದೆ.

10:57 PM (IST) Aug 19

ಪಾತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡಿದ್ದ ನಟಿ ಈಗ ಸಖತ್ ಸ್ಲಿಮ್ - ಅಷ್ಟಕ್ಕೂ ಯಾರು ಗೊತ್ತಾ?

ನಟಿ ನಿವೇತಾ ಥಾಮಸ್‌ ಇತ್ತೀಚೆಗೆ ತಮ್ಮ ಹೊಸ ಲುಕ್‌ನ ಫೋಟೋವೊಂದನ್ನು ಹಂಚಿಕೊಂಡಿದ್ದು, ಅಭಿಮಾನಿಗಳ ಗಮನ ಸೆಳೆಯುತ್ತಿದೆ. ವಿಶೇಷವೆಂದರೆ, ನಟಿ ಸಾಕಷ್ಟು ತೂಕ ಇಳಿಸಿಕೊಂಡಿರುವುದು ಈ ಫೋಟೋದಲ್ಲಿ ಎದ್ದು ಕಾಣುತ್ತಿದೆ.

Read Full Story

10:13 PM (IST) Aug 19

ಪುಟ್ನಂಜ ನಟಿ ಮೀನಾ ಪತಿಯನ್ನು ಉಳಿಸಲು ಮಾಡಿದ್ದ ಪ್ರಯತ್ನಗಳೆಷ್ಟು? ಇಷ್ಟು ದಿನದ ಬಳಿಕ ಬಯಲಾಯ್ತು ಸತ್ಯ

ನಟಿ ಮೀನಾ ಅವರ ವೈಯಕ್ತಿಕ ಜೀವನದಲ್ಲಿ 2022ರ ವರ್ಷ ಮರೆಯಲಾಗದ ನೋವನ್ನು ತಂದಿತ್ತು. ಇತ್ತೀಚಿನ ಸಂದರ್ಶನವೊಂದರಲ್ಲಿ ಮೀನಾ, ಪತಿಯನ್ನು ಉಳಿಸಿಕೊಳ್ಳಲು ನಡೆಸಿದ ಹೋರಾಟದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

Read Full Story

10:05 PM (IST) Aug 19

SBI ಗ್ರಾಹಕರ ಗಮನಕ್ಕೆ - ಇನ್ಮುಂದೆ ಎಟಿಎಂನಿಂದ ಲಿಮಿಟ್‌ಗಿಂತ ಹೆಚ್ಚು ಹಣ ತೆಗೆದರೆ ಭಾರಿ ಚಾರ್ಜ್‌; ಹೊಸ ನಿಯಮ ಜಾರಿ!

SBI ತನ್ನ 'ಬೇಸಿಕ್ ಸೇವಿಂಗ್ಸ್‌ ಬ್ಯಾಂಕ್ ಡಿಪಾಸಿಟ್' (BSBD) ಖಾತೆದಾರರಿಗೆ ನಗದು ಹಿಂಪಡೆಯುವಿಕೆಯ ಹೊಸ ನಿಯಮಗಳನ್ನು ಘೋಷಿಸಿದೆ. ಅಕ್ಟೋಬರ್ 1, 2026 ರಿಂದ, ತಿಂಗಳಿಗೆ 4 ಉಚಿತ ವಹಿವಾಟುಗಳ ನಂತರ ಪ್ರತಿ ನಗದು ಹಿಂಪಡೆಯುವಿಕೆಗೆ ₹15 ಮತ್ತು ಜಿಎಸ್‌ಟಿ ಶುಲ್ಕ ವಿಧಿಸಲಾಗುತ್ತದೆ.

Read Full Story

09:48 PM (IST) Aug 19

‘ಭಯ ಹುಟ್ಟಿಸುವ ಸಂಗತಿಗಳಿಗೂ ಯೆಸ್ ಹೇಳಿ’ - ಯಶ್ ‘ಟಾಕ್ಸಿಕ್’ ಅನುಭವ ಬಿಚ್ಚಿಟ್ಟ ಕಿಯಾರಾ

Kiara Advani: ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಪಯಣದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಭಾವುಕ ಬರಹವೊಂದನ್ನು ಹಂಚಿಕೊಂಡಿದ್ದಾರೆ.

Read Full Story

09:39 PM (IST) Aug 19

RS 10 ಲಕ್ಷ ಲಂಚ ಸ್ವೀಕಾರದ ವೇಳೆ ರೆಡ್‌ಹ್ಯಾಂಡ್ ಸಿಕ್ಕಿಬಿದ್ದ ಕೇಂದ್ರ ಸಚಿವಾಲಯದ ಅಧಿಕಾರಿ

ಖಾಸಗಿ ಕಂಪನಿಯ ಕಡತ ವಿಲೇವಾರಿ ಮಾಡಲು ಪತ್ನಿಯ ಮೂಲಕ 10 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧಿಕಾರಿಯನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. 15 ಲಕ್ಷಕ್ಕೆ ಬೇಡಿಕೆಯಿಟ್ಟು 10 ಲಕ್ಷಕ್ಕೆ ಡೀಲ್ ಕುದುರಿಸಿದ್ದ 2020ರ ಬ್ಯಾಚ್‌ನ ಐಸಿಎಎಸ್ ಅಧಿಕಾರಿ ಸಂದೀಪ್ ಸದ್ಯ ಸಿಬಿಐ ಬಲೆಗೆ ಬಿದ್ದಿದ್ದಾನೆ.

Read Full Story

08:44 PM (IST) Aug 19

200 ರೂಪಾಯಿ ಇದ್ರೆ ಸಾಕು, ಭಾರತದ ಈ ಪ್ರದೇಶದಲ್ಲಿ ವಜ್ರದ ಗಣಿ ಲೀಸ್‌ಗೆ ಪಡೆಯಬಹುದು!

ಮಧ್ಯಪ್ರದೇಶದ 'ವಜ್ರಗಳ ನಗರಿ' ಪನ್ನಾದಲ್ಲಿ, ಕೇವಲ 200 ರೂಪಾಯಿ ಪಾವತಿಸಿ ಸಣ್ಣ ಭೂಪ್ರದೇಶವನ್ನು ಗುತ್ತಿಗೆ ಪಡೆದು ವಜ್ರಕ್ಕಾಗಿ ಗಣಿಗಾರಿಕೆ ನಡೆಸಬಹುದು. ಈ ಅವಕಾಶವು ಅನೇಕ ಬಡ ಕಾರ್ಮಿಕರ ಜೀವನವನ್ನು ಬದಲಾಯಿಸಿದ್ದು, ಅವರು ರಾತ್ರೋರಾತ್ರಿ ಕೋಟ್ಯಧಿಪತಿಗಳಾದ ರೋಚಕ ನೈಜ ಕಥೆಗಳಿವೆ.
Read Full Story

08:35 PM (IST) Aug 19

ರೈಲು ಪ್ರಯಾಣಿಕರ ಗಮನಕ್ಕೆ - ಮೈಸೂರು-ಶಿವಮೊಗ್ಗ ನಡುವಿನ ವಿವಿಧ ರೈಲುಗಳು ರದ್ದು - ಡಿಟೇಲ್ಸ್​ ಇಲ್ಲಿದೆ

ಹಾಸನ ಮತ್ತು ಹೊಳೆ ನರಸೀಪುರ ಯಾರ್ಡ್‌ಗಳಲ್ಲಿನ ನಿರ್ವಹಣಾ ಕಾರ್ಯದಿಂದಾಗಿ, ದಕ್ಷಿಣ ಪಶ್ಚಿಮ ರೈಲ್ವೆಯು ಹಲವು ರೈಲು ಸೇವೆಗಳನ್ನು ರದ್ದುಗೊಳಿಸಿದೆ ಮತ್ತು ಭಾಗಶಃ ರದ್ದುಪಡಿಸಿದೆ. ಮೈಸೂರು, ಅರಸೀಕೆರೆ, ಶಿವಮೊಗ್ಗ, ಮತ್ತು ಬೆಂಗಳೂರು ಮಾರ್ಗದ ಅನೇಕ ರೈಲುಗಳ ಸಂಚಾರದಲ್ಲಿ ಆಗಸ್ಟ್ ತಿಂಗಳ ನಿಗದಿತ ದಿನಾಂಕಗಳಂದು ಬದಲಾವಣೆಗಳಾಗಲಿವೆ.
Read Full Story

07:57 PM (IST) Aug 19

ಭೂಮಿಗೆ ಬೀಳಲ್ಲ, ಗಾಳಿಯಲ್ಲೇ ತೇಲುತ್ತೆ ನೀರು! ದೇಶದ ಉಲ್ಟಾ ಜಲಪಾತ ಎಲ್ಲಿದೆ? ಇದಕ್ಕಿದೆ ಶಾತವಾಹನರ ಕಾಲದ ಇತಿಹಾಸ!

ಮಹಾರಾಷ್ಟ್ರದ ನಾನೇಘಾಟ್‌ನಲ್ಲಿ ಮಳೆಗಾಲದಲ್ಲಿ ಒಂದು ಅಪರೂಪದ ದೃಶ್ಯ ಕಂಡುಬರುತ್ತದೆ, ಇಲ್ಲಿ ಜಲಪಾತದ ನೀರು ಕೆಳಗೆ ಬೀಳುವ ಬದಲು ಮೇಲಕ್ಕೆ ಚಿಮ್ಮುತ್ತದೆ. ಇದು ಯಾವುದೇ ಮ್ಯಾಜಿಕ್ ಅಲ್ಲ, ಬದಲಿಗೆ ತೀವ್ರವಾದ ಗಾಳಿಯ ಒತ್ತಡದಿಂದ ಉಂಟಾಗುವ ನೈಸರ್ಗಿಕ ವಿದ್ಯಮಾನವಾಗಿದೆ. ಈ ತಾಣವು ಕೇವಲ ಪ್ರಕೃತಿ ಸೌಂದರ್ಯಕ್ಕಷ್ಟೇ ಅಲ್ಲ, 2000 ವರ್ಷಗಳಷ್ಟು ಹಳೆಯ ಐತಿಹಾಸಿಕ ವ್ಯಾಪಾರ ಮಾರ್ಗವಾಗಿಯೂ ಪ್ರಸಿದ್ಧವಾಗಿದೆ.
Read Full Story

06:53 PM (IST) Aug 19

PM CARES ಅಡಿಟ್‌ ವರದಿ ರಿಲೀಸ್‌ - ಅಕೌಂಟ್‌ನಲ್ಲಿ 8452 ಕೋಟಿ ರೂಪಾಯಿ ಹಣ!

ಪಿಎಂ ಕೇರ್ಸ್ ಫಂಡ್‌ನ ಇತ್ತೀಚಿನ ಆಡಿಟ್ ವರದಿಯ ಪ್ರಕಾರ, ನಿಧಿಯ ಒಟ್ಟು ಬಾಕಿ ಮೊತ್ತ 8,452 ಕೋಟಿ ರೂ.ಗೆ ಏರಿಕೆಯಾಗಿದೆ. ಕಳೆದ ಎರಡು ಹಣಕಾಸು ವರ್ಷಗಳಲ್ಲಿ 1,162 ಕೋಟಿ ರೂ. ದೇಣಿಗೆ ಸಂಗ್ರಹವಾಗಿದ್ದರೂ, ಕೇವಲ 16.47 ಕೋಟಿ ರೂ. ಮಾತ್ರ ವೆಚ್ಚ ಮಾಡಿರುವುದು ವರದಿಯಿಂದ ಬಹಿರಂಗವಾಗಿದೆ.

Read Full Story

06:22 PM (IST) Aug 19

Tata Nexon 2027 - ಮಾರುಕಟ್ಟೆಗೆ ಲಗ್ಗೆ ಇಡಲಿದೆ ಹೊಸ ಟಾಟಾ ನೆಕ್ಸಾನ್! ಫೀಚರ್ಸ್ ಹೇಗಿರಲಿದೆ?

ಭಾರತದ ಜನಪ್ರಿಯ ಕಾಂಪ್ಯಾಕ್ಟ್ ಎಸ್‌ಯುವಿ ಟಾಟಾ ನೆಕ್ಸಾನ್‌ನ ಹೊಸ ತಲೆಮಾರಿನ ಮಾಡೆಲ್ ರಸ್ತೆಯಲ್ಲಿ ಪರೀಕ್ಷಾರ್ಥವಾಗಿ ಕಾಣಿಸಿಕೊಂಡಿದೆ. 2027ರ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆಯಿರುವ ಈ ಕಾರು, ಸಂಪೂರ್ಣ ಹೊಸ ವಿನ್ಯಾಸ, ಪ್ರೀಮಿಯಂ ಕ್ಯಾಬಿನ್, ಮತ್ತು ಲೆವೆಲ್ 2 ADAS ನಂತಹ ಸುಧಾರಿತ ಫೀಚರ್‌ಗಳೊಂದಿಗೆ ಬರಲಿದೆ.
Read Full Story

05:59 PM (IST) Aug 19

'ಬಂದೂಕು ಹಿಡಿದಿದ್ದ ಕೈಯಲ್ಲಿ ಶೇರು ಸರ್ಟಿಫಿಕೇಟ್..' 25,000 ಮಾಜಿ ನಕ್ಸಲರ ಜೀವನ ಬದಲಿಸಿದ ಲಾಯ್ಡ್ಸ್ ಮೆಟಲ್ಸ್

ಒಂದು ಕಾಲದಲ್ಲಿ ಹಿಂಸಾಚಾರದಿಂದ ಗುರುತಿಸಲ್ಪಡುತ್ತಿದ್ದ ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ, 'ಲಾಯ್ಡ್ಸ್ ಮೆಟಲ್ಸ್' ಕಂಪನಿಯು ಕ್ರಾಂತಿಕಾರಿ ಯೋಜನೆ ಜಾರಿಗೊಳಿಸಿದೆ. ಈ ಮೂಲಕ, 25,000ಕ್ಕೂ ಹೆಚ್ಚು ಮಾಜಿ ಮಾವೋವಾದಿಗಳು ಮತ್ತು ಸ್ಥಳೀಯ ಬುಡಕಟ್ಟು ಜನರು ಕಂಪನಿಯ ಶೇರುದಾರರಾಗಿ ಮುಖ್ಯವಾಹಿನಿಗೆ ಮರಳಿದ್ದಾರೆ.

Read Full Story

05:51 PM (IST) Aug 19

IND vs SL 1st Test - ಮಾನವ್ ಸುತಾರ್ ಅಲ್ಲ, ಈತನಿಂದಲೇ ಗೆಲುವು ಸಿಕ್ತು; ಸ್ವಲ್ಪ ಗಲಿಬಿಲಿ ಆಯ್ತು ಎಂದ ಕ್ಯಾಪ್ಟನ್ ಗಿಲ್

ಗಾಲೆ ಟೆಸ್ಟ್‌ನಲ್ಲಿ ಶ್ರೀಲಂಕಾ ವಿರುದ್ಧ ಭಾರತ 165 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ದೇವದತ್ ಪಡಿಕ್ಕಲ್ ಅವರ ಅಮೋಘ ಬ್ಯಾಟಿಂಗ್ ಪಂದ್ಯದ ದಿಕ್ಕನ್ನೇ ಬದಲಿಸಿತು ಎಂದು ನಾಯಕ ಶುಭ್‌ಮನ್ ಗಿಲ್ ಶ್ಲಾಘಿಸಿದ್ದಾರೆ. ಈ ಗೆಲುವಿನೊಂದಿಗೆ ಭಾರತ ಎರಡು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ.
Read Full Story

05:48 PM (IST) Aug 19

ಭಾರತದಲ್ಲೇ ಮೊದಲು ಸೂರ್ಯೋದಯವಾಗುವ ತಾಣ, ಬೆರಗುಗೊಳಿಸುತ್ತೆ ಈ ಕಣಿವೆಯ ರೋಮಾಂಚಕ ಪಯಣ!

ಅರುಣಾಚಲ ಪ್ರದೇಶದ ಡಾಂಗ್ ಕಣಿವೆಯು ಭಾರತದಲ್ಲಿ ಮೊದಲು ಸೂರ್ಯೋದಯವಾಗುವ ಸ್ಥಳವಾಗಿದೆ. ಈ ಅದ್ಭುತ ದೃಶ್ಯವನ್ನು ಕಣ್ತುಂಬಿಕೊಳ್ಳಲು ಮುಂಜಾನೆ ಚಾರಣ ಮಾಡಬೇಕಿದ್ದು, ಈ ಲೇಖನವು ಡಾಂಗ್‌ನ ಪ್ರವಾಸಿ ಆಕರ್ಷಣೆಗಳು, ಸ್ಥಳೀಯ ಸಂಸ್ಕೃತಿ ಮತ್ತು ಪ್ರಯಾಣದ ವಿವರಗಳನ್ನು ನೀಡುತ್ತದೆ.
Read Full Story

05:20 PM (IST) Aug 19

ಪ್ರತಿ ಆರು ತಿಂಗಳಿಗೊಮ್ಮೆ ದೇಶ ಬದಲಾಯಿಸುವ ಜಗತ್ತಿನ ಏಕೈಕ ವಿಚಿತ್ರ ದ್ವೀಪ! 350 ವರ್ಷಗಳಿಂದ ನಡೆಯುತ್ತಿದೆ ಈ ಸಂಗತಿ!

ಫ್ರಾನ್ಸ್ ಮತ್ತು ಸ್ಪೇನ್ ಗಡಿಯಲ್ಲಿರುವ ಫೆಸೆಂಟ್ ದ್ವೀಪವು ಒಂದು ವಿಶಿಷ್ಟ ಆಡಳಿತ ವ್ಯವಸ್ಥೆಯನ್ನು ಹೊಂದಿದೆ. ಈ ದ್ವೀಪವು ವರ್ಷದ ಆರು ತಿಂಗಳು ಸ್ಪೇನ್‌ನ ನಿಯಂತ್ರಣದಲ್ಲಿದ್ದರೆ, ಉಳಿದ ಆರು ತಿಂಗಳು ಫ್ರಾನ್ಸ್‌ನ ಆಡಳಿತಕ್ಕೆ ಒಳಪಟ್ಟಿರುತ್ತದೆ. 350 ವರ್ಷಗಳಿಗೂ ಹಳೆಯದಾದ ಈ ವ್ಯವಸ್ಥೆಯು ಎರಡು ದೇಶಗಳ ನಡುವಿನ ಶಾಂತಿಯುತ ಸಹಕಾರದ ಸಂಕೇತವಾಗಿದೆ.
Read Full Story

04:43 PM (IST) Aug 19

ಹೊಸ ಸಿಮ್‌ ಕಾರ್ಡ್‌ಗೆ ರಿಯಲ್‌ ಟೈಮ್‌ ವೆರಿಫಿಕೇಶನ್‌ ಕಡ್ಡಾಯ - ಕೇಂದ್ರದ ಮತ್ತೊಂದು ಕಠಿಣ ನಿಯಮ

'ಡಿಜಿಟಲ್ ಅರೆಸ್ಟ್'ನಂತಹ ಅಕ್ರಮಗಳನ್ನು ತಡೆಯಲು ಕೇಂದ್ರ ಸರ್ಕಾರವು ಹೊಸ ಸಿಮ್ ಕಾರ್ಡ್ ಪಡೆಯುವ ನಿಯಮಗಳನ್ನು ಕಟ್ಟುನಿಟ್ಟುಗೊಳಿಸಿದೆ. ಹೊಸ ಸಿಮ್ ಸಕ್ರಿಯಗೊಳಿಸುವ ಮುನ್ನ ಗ್ರಾಹಕರ ಮಾಹಿತಿಯನ್ನು 'ರಿಯಲ್-ಟೈಮ್ ಡಿಜಿಟಲ್ ಇಂಟೆಲಿಜೆನ್ಸ್ ಪೋರ್ಟಲ್' ಮೂಲಕ ಪರಿಶೀಲಿಸುವುದು ಕಡ್ಡಾಯವಾಗಲಿದೆ.

Read Full Story

04:20 PM (IST) Aug 19

ವೈರಲ್ ವಿಡಿಯೋ ನೋಡಿ ದಾರಿತಪ್ಪಿದ ಗ್ಯಾಂಗ್ - 16 ವರ್ಷದ ಬಾಲಕನ ವೃಷಣ ಕತ್ತರಿಸಿ ಕೆರೆಗೆ ಎಸೆದ ಪಾಪಿಗಳು!

ಸಾಮಾಜಿಕ ಜಾಲತಾಣದ ವದಂತಿಯನ್ನು ನಂಬಿ, ಭೋಪಾಲ್‌ನಲ್ಲಿ ಗ್ಯಾಂಗ್ ಒಂದು 16 ವರ್ಷದ ಬಾಲಕನನ್ನು ಕೊಂದು ಆತನ ವೃಷಣವನ್ನು ಕತ್ತರಿಸಿದೆ. ಖರೀದಿದಾರರು ಸಿಗದಿದ್ದಾಗ ಸಾಕ್ಷ್ಯ ನಾಶಪಡಿಸಲು ಕೆರೆಗೆ ಎಸೆದಿದ್ದು, ಪೊಲೀಸರು ಈಗ ಆ ಅಂಗಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
Read Full Story

04:00 PM (IST) Aug 19

Mekedatu Dam - ಒಂದೇ ಒಂದು ಕಲ್ಲು ಇಡೋಕೂ ಬಿಡಲ್ಲ, ಕರ್ನಾಟಕಕ್ಕೆ ತಮಿಳುನಾಡು ಸಚಿವರ ಖಡಕ್ ಎಚ್ಚರಿಕೆ

ಕಾವೇರಿ ನೀರು ಹಂಚಿಕೆ ವಿವಾದದ ನಡುವೆಯೇ, ತಮಿಳುನಾಡು ಸರ್ಕಾರ ಮೇಕೆದಾಟು ಅಣೆಕಟ್ಟು ಯೋಜನೆಗೆ ತನ್ನ ವಿರೋಧವನ್ನು ಸ್ಪಷ್ಟಪಡಿಸಿದೆ. ಈ ವಿವಾದಿತ ಯೋಜನೆಗೆ ಕರ್ನಾಟಕ ಒಂದೇ ಒಂದು ಕಲ್ಲು ಹಾಕಲು ಬಿಡುವುದಿಲ್ಲ ಎಂದು ತಮಿಳುನಾಡು ಸಚಿವ ಎನ್. ಆನಂದ್ ಘೋಷಿಸಿದ್ದಾರೆ.
Read Full Story

03:45 PM (IST) Aug 19

ಟಾಕ್ಸಿಕ್ ಅಡ್ವಾನ್ಸ್ ಬುಕಿಂಗ್ ಶುರುವಾಗೋ ಡೇಟ್ 'ಇದು'.. 12 ಸಾವಿರ ಸ್ಕ್ರೀನ್‌ಗಳಲ್ಲಿ ʻರಾಕಿ ಭಾಯ್‌ʼ ಯಶ್ ಅಬ್ಬರ!

'ಟಾಕ್ಸಿಕ್' ಸಿನಿಮಾವನ್ನು ಬರೋಬ್ಬರಿ 12,000ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ತೆರೆಗೆ ತರಲು ಚಿತ್ರತಂಡ ಸಕಲ ಸಿದ್ಧತೆ ಮಾಡಿಕೊಂಡಿದೆ. ಭಾರತದ ಸಿನಿಮಾವೊಂದು ಈ ಮಟ್ಟಕ್ಕೆ ಜಾಗತಿಕವಾಗಿ ಅಬ್ಬರಿಸುತ್ತಿರೋದು ನಿಜಕ್ಕೂ ಹೆಮ್ಮೆಯ ವಿಷಯ. ಡಿಮ್ಯಾಂಡ್ ಹೆಚ್ಚಾದಂತೆ ಈ ಪರದೆಗಳ ಸಂಖ್ಯೆ ಇನ್ನೂ ಏರಿಕೆಯಾಗೋದು ಗ್ಯಾರಂಟಿ.

Read Full Story

03:27 PM (IST) Aug 19

Health Tips - ಅಪ್ಪಿತಪ್ಪಿಯೂ 'ಇವರು' ಡ್ರ್ಯಾಗನ್ ಹಣ್ಣು ತಿನ್ನುವಂತೆ ಇಲ್ಲ, ಎಷ್ಟು ದೂರವಿದ್ದರೆ ಅಷ್ಟು ಒಳ್ಳೆದು!

ಡ್ರಾಗನ್ ಫ್ರೂಟ್ ಪೋಷಕಾಂಶಗಳಿಂದ ಕೂಡಿದ್ದರೂ, ಕೆಲವರು ಇದನ್ನು ಸೇವಿಸುವಾಗ ಎಚ್ಚರಿಕೆ ವಹಿಸಬೇಕು. ವಿಶೇಷವಾಗಿ ಅಲರ್ಜಿ, ಮಧುಮೇಹ, ಮತ್ತು ಕಿಡ್ನಿ ಸಮಸ್ಯೆ ಇರುವವರು ವೈದ್ಯರ ಸಲಹೆ ಪಡೆದು ಇದನ್ನು ಸೇವಿಸುವುದು ಉತ್ತಮ. ಆರೋಗ್ಯವಂತರು ಇದನ್ನು ಮಿತವಾಗಿ ಸೇವಿಸಬಹುದು.
Read Full Story

03:23 PM (IST) Aug 19

ಕೇವಲ 46 ಪೈಸೆ ಕಮ್ಮಿ ಕಟ್ಟಿದ್ದಕ್ಕೆ ₹1,200 ದಂಡ! HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ಗ್ರಾಹಕನ ಪೋಸ್ಟ್ ವೈರಲ್

ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಯಲ್ಲಿ ಕೇವಲ 46 ಪೈಸೆ ಬಾಕಿ ಉಳಿಸಿದ್ದಕ್ಕೆ ಗ್ರಾಹಕರೊಬ್ಬರಿಗೆ ಬ್ಯಾಂಕ್ ₹1,200ಕ್ಕೂ ಅಧಿಕ ದಂಡ ವಿಧಿಸಿದೆ. ಈ ಅನ್ಯಾಯದ ವಿರುದ್ಧ ಗ್ರಾಹಕರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು, ಇದು ಬ್ಯಾಂಕಿಂಗ್ ನಿಯಮಗಳು ಮತ್ತು ಆರ್‌ಬಿಐ ಮಾರ್ಗಸೂಚಿಗಳ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.
Read Full Story

03:20 PM (IST) Aug 19

IPL ಆಸೆ ತೋರಿಸಿ ಲಂಕಾ ಬ್ಯಾಟರ್ ಬಲಿ ಪಡೆದ ಯಶಸ್ವಿ ಜೈಸ್ವಾಲ್..! ಹಿಂಗೆಲ್ಲಾ ಸ್ಲೆಡ್ಜಿಂಗ್ ಮಾಡ್ತಾರಾ?

ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ, ಯಶಸ್ವಿ ಜೈಸ್ವಾಲ್ ಅವರು ಐಪಿಎಲ್ ಆಸೆ ತೋರಿಸಿ ನಿರ್ಶೊನ್ ಡಿಕ್ವೆಲ್ಲಾ ಅವರನ್ನು ಸ್ಲೆಡ್ಜ್ ಮಾಡಿದರು. ಈ ಮಾತುಕತೆಯ ನಂತರದ ಎಸೆತದಲ್ಲೇ ಡಿಕ್ವೆಲ್ಲಾ ಔಟಾದರು, ಇದು ಭಾರತದ 165 ರನ್‌ಗಳ ಭರ್ಜರಿ ಗೆಲುವಿಗೆ ಸಾಕ್ಷಿಯಾಯಿತು.
Read Full Story

02:53 PM (IST) Aug 19

12 ಶತಕೋಟಿ ವರ್ಷಗಳ ಹಿಂದಿನ ಕಾಸ್ಮಿಕ್ ರಹಸ್ಯ ಭೇದಿಸಿದ ನಾಸಾ - ಕ್ಷೀರಪಥದ ಇತಿಹಾಸವೇ ಬದಲು!

ನಾಸಾದ ಹಬಲ್ ದೂರದರ್ಶಕವನ್ನು ಬಳಸಿದ ಖಗೋಳಶಾಸ್ತ್ರಜ್ಞರು, ಸುಮಾರು 12 ಶತಕೋಟಿ ವರ್ಷಗಳ ಹಿಂದೆ ನಡೆದ ಬೃಹತ್ ಗ್ಯಾಲಕ್ಸಿ ಘರ್ಷಣೆಯ ಪುರಾವೆಗಳನ್ನು ಪತ್ತೆಹಚ್ಚಿದ್ದಾರೆ. ಈ ಸಂಶೋಧನೆಯು, ಯುವ ಕ್ಷೀರಪಥವು LKH ಎಂಬ ಕುಬ್ಜ ನಕ್ಷತ್ರಪುಂಜವನ್ನು ವಿಲೀನಗೊಳಿಸಿಕೊಂಡು ತನ್ನ ಬೆಳವಣಿಗೆಗೆ ಅಡಿಪಾಯ ಹಾಕಿಕೊಂಡಿದ್ದನ್ನು ಬಹಿರಂಗಪಡಿಸಿದೆ.

Read Full Story

02:43 PM (IST) Aug 19

'ಬ್ರೇಕಪ್‌ ಸತ್ಯ' ಎಂದ ಅನುಪಮಾ ಆರೋಪಕ್ಕೆ ಎಕ್ಸ್‌-ಬಾಯ್‌ಫ್ರೆಂಡ್‌ ನಟ ಧ್ರುವ ವಿಕ್ರಮ್ ಹೇಳಿರೋ 'LOVE' ಸೀಕ್ರೆಟ್ ಇದು..!

'ಬೈಸನ್ ಕಾಳಮಾದನ್' ಸಿನಿಮಾದ ಸೆಟ್‌ನಲ್ಲಿ ಚಿಗುರಿದ ಈ ಸ್ನೇಹ ಪ್ರೀತಿಯಾಗಿ ಅರಳಿತ್ತು ಎನ್ನಲಾಗಿದೆ. ಈಗ ಇಬ್ಬರ ನಡುವೆ ಬಿರುಕು ಮೂಡಿದ್ದು'ತನ್ನ ಆತ್ಮಾಭಿಮಾನಕ್ಕಾಗಿ ಸಂಬಂಧದಿಂದ ಹೊರಬಂದೆ' ಎಂದು ನಟಿ ಅನುಪಮಾ ಹೇಳುತ್ತಿದ್ದರೆ, ಅತ್ತ ಧ್ರುವ ವಿಕ್ರಮ್ ಈ ಆರೋಪಗಳಿಂದ ಕಂಗೆಟ್ಟಿದ್ದಾರೆ. ಆ ಸೀಕ್ರೆಟ್ ಬಗ್ಗೆ ಏನ್ ಹೇಳಿದಾರೆ ಧ್ರುವ ನೋಡಿ..

Read Full Story

02:14 PM (IST) Aug 19

15 ವರ್ಷಗಳ ಸುದೀರ್ಘ ಕಾಯುವಿಕೆಗೆ ತೆರೆ - ಚೆನ್ನೈ ಮೆಟ್ರೋ ಜೊತೆ MRTS ವಿಲೀನಕ್ಕೆ ರೈಲ್ವೆ ಮಂಡಳಿ ಅನುಮೋದನೆ

ಕೇಂದ್ರ ರೈಲ್ವೆ ಸಚಿವಾಲಯವು ಚೆನ್ನೈನ MRTS ಉಪನಗರ ರೈಲು ಸೇವೆಯನ್ನು ಚೆನ್ನೈ ಮೆಟ್ರೋ ರೈಲು ಲಿಮಿಟೆಡ್ (CMRL) ನೊಂದಿಗೆ ವಿಲೀನಗೊಳಿಸಲು ಅಂತಿಮ ಅನುಮೋದನೆ ನೀಡಿದೆ. ಈ ಒಪ್ಪಂದದ ಅಡಿಯಲ್ಲಿ, MRTS ಜಾಲವನ್ನು ನಗರದ ಮೆಟ್ರೋ ಮತ್ತು ಬಸ್ ಸೇವೆಗಳೊಂದಿಗೆ ಸಂಯೋಜಿಸಿ, ಪ್ರಯಾಣಿಕರಿಗೆ ಸುಧಾರಿತ ಸಂಪರ್ಕ ಮತ್ತು ತಡೆರಹಿತ ಬಹುಮಾದರಿ ಪ್ರಯಾಣದ ಅನುಭವವನ್ನು ಒದಗಿಸಲಾಗುವುದು.
Read Full Story

01:41 PM (IST) Aug 19

ಗಾಲೆಯಲ್ಲಿ ಲಂಕಾ ದಹನ; ಮಾನವ್ ಸ್ಪಿನ್ ಮೋಡಿಗೆ ಶ್ರೀಲಂಕಾ ಧೂಳೀಪಟ, ಗೆದ್ದು ಬೀಗಿದ ಭಾರತ

ಗಾಲೆ ಟೆಸ್ಟ್‌ನಲ್ಲಿ ಭಾರತ ತಂಡವು ಶ್ರೀಲಂಕಾ ವಿರುದ್ಧ 165 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಯುವ ಸ್ಪಿನ್ನರ್ ಮಾನವ್ ಸುತಾರ್ ಎರಡನೇ ಇನ್ನಿಂಗ್ಸ್‌ನಲ್ಲಿ 6 ವಿಕೆಟ್ ಪಡೆದು ಗೆಲುವಿನ ರೂವಾರಿಯಾದರು. ಈ ಗೆಲುವಿನೊಂದಿಗೆ ಭಾರತ ಎರಡು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ.
Read Full Story

01:41 PM (IST) Aug 19

ನಕ್ಸಲರ ಮಗುವಿಗೆ ಎದೆಹಾಲುಣಿಸಿ ಅಮ್ಮನಾದ ಮಕ್ಕಳ ಕಲ್ಯಾಣ ಸಚಿವೆ - ಭಾವುಕ ವಿಡಿಯೋ ವೈರಲ್​

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸೀತಾ ಬಾಡಿ, ಶಿಥಿಲಾವಸ್ಥೆಯಲ್ಲಿದ್ದ ಮಕ್ಕಳ ಕೇಂದ್ರದಿಂದ ರಕ್ಷಿಸಲ್ಪಟ್ಟ ನವಜಾತ ಶಿಶುವಿಗೆ ಎದೆಹಾಲುಣಿಸಿ ಮಾನವೀಯತೆ ಮೆರೆದಿದ್ದಾರೆ. ನಿರಂತರವಾಗಿ ಅಳುತ್ತಿದ್ದ 17 ದಿನದ ಮಗುವನ್ನು ಸಮಾಧಾನಪಡಿಸಲು ಬೇರೆ ದಾರಿ ಇಲ್ಲದಿದ್ದಾಗ, ಸಚಿವರು ಸ್ವತಃ ಹಾಲುಣಿಸಿ ತಾಯಿ ಪ್ರೀತಿ ತೋರಿದ್ದಾರೆ.

Read Full Story

01:28 PM (IST) Aug 19

3ನೇ ಮಗು ಹುಟ್ಟಿದರೆ ಒಂದು ವರ್ಷದ ಹೆರಿಗೆ ರಜೆ - ಮಹತ್ವದ ಘೋಷಣೆ ಮಾಡಿದ ಮುಖ್ಯಮಂತ್ರಿ

ತಮಿಳುನಾಡು ಸರ್ಕಾರವು ಮಹಿಳಾ ಉದ್ಯೋಗಿಗಳಿಗೆ ಮೂರನೇ ಮಗುವಿನ ಜನನಕ್ಕೂ ಹೆರಿಗೆ ರಜೆಯನ್ನು 12 ವಾರಗಳಿಂದ 365 ದಿನಗಳಿಗೆ (ಒಂದು ವರ್ಷ) ವಿಸ್ತರಿಸಿದೆ. ಈ ಹಿಂದೆ ಮೊದಲ ಎರಡು ಮಕ್ಕಳಿಗೆ ಮಾತ್ರ ಈ ಸೌಲಭ್ಯ ಲಭ್ಯವಿತ್ತು, ಆದರೆ ಈಗ ಮೂರನೇ ಮಗುವಿಗೂ ಪೂರ್ಣ ವೇತನ ಸಹಿತ ಒಂದು ವರ್ಷದ ರಜೆ ಅನ್ವಯವಾಗಲಿದೆ ಎಂದು ಸಚಿವ ಡಿ. ಶರತ್‌ಕುಮಾರ್ ವಿಧಾನಸಭೆಯಲ್ಲಿ ಘೋಷಿಸಿದ್ದಾರೆ.
Read Full Story

01:11 PM (IST) Aug 19

ರಿವಾಲ್ವರ್ ಸುತ್ತ ಸಾಗುವ ಕ್ರೈಂ-ಸಸ್ಪೆನ್ಸ್-ಥ್ರಿಲ್ಲರ್ ಸೌಥ್ ಸಿನಿಮಾ! ಈ ವೀಕೆಂಡ್‌ಗೆ ನೋಡಿ

ಈ ವೀಕೆಂಡ್ ನೋಡಲು ಒಂದು ಅತ್ಯುತ್ತಮ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಪ್ರಾಮಾಣಿಕ ಪೊಲೀಸ್ ಅಧಿಕಾರಿಯೊಬ್ಬನ ರಿವಾಲ್ವರ್ ಕಳೆದುಹೋಗಿ, ಅದು ಬ್ಯಾಂಕ್ ದರೋಡೆಗೆ ಬಳಕೆಯಾದಾಗ ನಡೆಯುವ ರೋಚಕ ತನಿಖೆಯು ಈ ಸಿನಿಮಾದ ಕಥಾವಸ್ತುವಾಗಿದೆ.

Read Full Story

12:53 PM (IST) Aug 19

4ನೇ ದಿನದಾಟದಲ್ಲಿ ತಾನು ಮಾಡಿದ ತಪ್ಪನ್ನು ಐದನೇ ದಿನದಾಟದಲ್ಲಿ ತಿದ್ದಿಕೊಂಡ ಜಡೇಜಾ! ಕೊನೆಗೂ ತಣ್ಣಗಾದ ಗೌತಮ್ ಗಂಭೀರ್ ಕೋಪ

ಭಾರತ-ಶ್ರೀಲಂಕಾ ಟೆಸ್ಟ್ ಪಂದ್ಯದ ನಾಲ್ಕನೇ ದಿನ ರವೀಂದ್ರ ಜಡೇಜಾ ನೋ ಬಾಲ್ ಎಸೆದು ವಿಕೆಟ್ ಕೈಚೆಲ್ಲಿದ್ದು ಕೋಚ್ ಗೌತಮ್ ಗಂಭೀರ್ ಕೋಪಕ್ಕೆ ಕಾರಣವಾಗಿತ್ತು. ಆದರೆ, ಕೊನೆಯ ದಿನದಾಟದಲ್ಲಿ ಅದೇ ಜಡೇಜಾ ಅಪಾಯಕಾರಿಯಾಗಿದ್ದ ಧನಂಜಯ ಡಿ ಸಿಲ್ವಾ ವಿಕೆಟ್ ಪಡೆಯುವ ಮೂಲಕ ತಮ್ಮ ತಪ್ಪನ್ನು ತಿದ್ದಿಕೊಂಡರು.
Read Full Story

12:10 PM (IST) Aug 19

Ravi Teja Investment - 12 ಲಕ್ಷ ಹೂಡಿಕೆ ಮಾಡಿದರೆ 100 ಕೋಟಿ ರೂ. ಲಾಭ; ನಟ ರವಿತೇಜ ಆಸ್ತಿ ಕುರಿತ ಶಾಕಿಂಗ್ ಸೀಕ್ರೆಟ್ ರಿವೀಲ್!

ನಟ ರವಿತೇಜ ಅವರು ವರ್ಷಗಳ ಹಿಂದೆ ಹೈದರಾಬಾದ್ ಬಳಿ ಕೇವಲ 12 ಲಕ್ಷಕ್ಕೆ 26 ಎಕರೆ ಭೂಮಿ ಖರೀದಿಸಿದ್ದರು. ನಟ ಅಜಯ್ ಘೋಷ್ ಈ ವಿಚಾರವನ್ನು ಬಹಿರಂಗಪಡಿಸಿದ್ದು, ಪ್ರಸ್ತುತ ಆ ಭೂಮಿಯ ಮೌಲ್ಯ ಕೋಟಿಗಟ್ಟಲೆ ಆಗಿದೆ. ಇಷ್ಟೆಲ್ಲಾ ಆಸ್ತಿ ಇದ್ದರೂ, ತಮ್ಮ ಸರಳ ವ್ಯಕ್ತಿತ್ವದಿಂದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Read Full Story

11:40 AM (IST) Aug 19

ಗಾಲೆ ಟೆಸ್ಟ್‌ - ಶುಭ್‌ಮನ್ ಗಿಲ್ ದಾಖಲೆ ನುಚ್ಚುನೂರು, WTC ಯಲ್ಲಿ ಯಾವ ಭಾರತೀಯನೂ ಮಾಡಿರದ ಅಪರೂಪದ ದಾಖಲೆ ನಿರ್ಮಿಸಿದ ರಿಷಭ್ ಪಂತ್!

ಶ್ರೀಲಂಕಾ ವಿರುದ್ಧದ ಗಾಲೆ ಟೆಸ್ಟ್‌ನಲ್ಲಿ ರಿಷಭ್ ಪಂತ್, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ (WTC) ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಶುಭಮನ್ ಗಿಲ್ ಅವರ ದಾಖಲೆಯನ್ನು ಮುರಿದಿರುವ ಪಂತ್, ಟೆಸ್ಟ್ ಕ್ರಿಕೆಟ್‌ನಲ್ಲಿ 100 ಸಿಕ್ಸರ್‌ಗಳನ್ನು ಪೂರೈಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
Read Full Story

11:19 AM (IST) Aug 19

ಇಂಟರ್ನೆಟ್‌ ಹೃದಯ ಗೆದ್ದ ಲಸ್ಸಿ ಹುಡುಗನ ಕಥೆ, 11ನೇ ವಯಸ್ಸಿಗೆ ತಂದೆ ಸಾವು, 250 ರೂ ದಿನಗೂಲಿ ಈಗ ತಿಂಗಳಿಗೆ 90,000 ಆದಾಯ!

ಡಿಜಿಟಲ್ ಕ್ರಿಯೇಟರ್ ಉಪೇನ್ ವರ್ಮಾ ಹಂಚಿಕೊಂಡ ವೀಡಿಯೊದಲ್ಲಿ, ದೆಹಲಿಯ ಲಸ್ಸಿ ಮಾರಾಟಗಾರನೊಬ್ಬನ ಸ್ಪೂರ್ತಿದಾಯಕ ಕಥೆ ಅನಾವರಣಗೊಂಡಿದೆ. ಚಿಕ್ಕ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡು, ದಿನಕ್ಕೆ ₹250 ಗಳಿಸುತ್ತಿದ್ದ ಅವರು, ದಶಕಗಳ ಪರಿಶ್ರಮದಿಂದ ಇಂದು ತಿಂಗಳಿಗೆ ₹90,000 ಸಂಪಾದಿಸಿ, ಸ್ವಂತ ಮನೆ ಕಟ್ಟಿದ್ದಾರೆ. ಈ ಕಥೆಯು ಕಠಿಣ ಪರಿಶ್ರಮಕ್ಕೆ ಸಿಕ್ಕ ಜಯವನ್ನು ಸಾರುತ್ತದೆ.
Read Full Story

11:07 AM (IST) Aug 19

AI Windfall - ದೇಶದ ಪ್ರತಿ ಪ್ರಜೆಗೂ 30 ಸಾವಿರ ನಗದು, ಎಐಗೆ ಧನ್ಯವಾದ ಹೇಳುತ್ತಿರುವ ತೈವಾನ್ ಜನರು!

ತೈವಾನ್ ಅಧ್ಯಕ್ಷ ಲೈ ಚಿಂಗ್ ಟೆ ಮುಂದಿನ ವರ್ಷ ತನ್ನ ದೇಶದ ಅರ್ಹ ನಾಗರಿಕರಿಗೆ 30 ಸಾವಿರ ರೂಪಾಯಿ ನಗದು ನೀಡುವ ಯೋಜನೆಯನ್ನು ಪ್ರಕಟಿಸಿದ್ದಾರೆ. ಇದಕ್ಕೆ ಕೃತಕ ಬುದ್ಧಿಮತ್ತೆ ನೇತೃತ್ವದ ಪ್ರಗತಿಯೇ ಕಾರಣ ಎಂದು ಅವರು ಹೇಳಿದ್ದಾರೆ.

Read Full Story

10:41 AM (IST) Aug 19

ಹಾರ್ವರ್ಡ್‌ ಪದವೀಧರೆ ನಯ್ಯ ಸಗ್ಗಿ ನಿರ್ಧಾರಕ್ಕೆ ಅಜ್ಜನ ಬೈಗುಳ - ಅಮೆರಿಕ ತೊರೆದು ಭಾರತದಲ್ಲಿ ಯಶಸ್ವಿ ಉದ್ಯಮಿಯಾದ ಕಥೆ!

ಹಾರ್ವರ್ಡ್‌ನಲ್ಲಿ ಓದಿ ಅಮೆರಿಕದಲ್ಲಿ ನೆಲೆಸುವ ಅವಕಾಶವನ್ನು ತೊರೆದು ಭಾರತಕ್ಕೆ ಮರಳಿದ ಉದ್ಯಮಿ ನಯ್ಯ ಸಗ್ಗಿ ಅವರ ನಿರ್ಧಾರಕ್ಕೆ ಅವರ ಅಜ್ಜ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ, ಇಂದು ಅವರು 'ಬೇಬಿಚಕ್ರ' ಮತ್ತು 'ದಿ ಗುಡ್ ಗ್ಲಾಮ್ ಗ್ರೂಪ್' ನಂತಹ ಯಶಸ್ವಿ ಕಂಪನಿಗಳನ್ನು ಕಟ್ಟಿ, $1 ಬಿಲಿಯನ್‌ಗೂ ಅಧಿಕ ಮೌಲ್ಯದ ಸಾಮ್ರಾಜ್ಯವನ್ನು ನಿರ್ಮಿಸಿದ್ದಾರೆ.
Read Full Story

06:20 AM (IST) Aug 19

ಅಯೋಧ್ಯೆ ರಾಮಮಂದಿರ ದೇಣಿಗೆ ಕಳವು - ಚಂಪತ್‌ ರಾಯ್, ಅನಿಲ್ ಮಿಶ್ರಾಗೆ ಕ್ಲೀನ್‌ಚಿಟ್?

ಅಯೋಧ್ಯೆ ರಾಮಮಂದಿರದ ಕಾಣಿಕೆ ಕಳವು ಪ್ರಕರಣದಲ್ಲಿ, ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌ ಮತ್ತು ಮಾಜಿ ಸದಸ್ಯ ಅನಿಲ್‌ ಮಿಶ್ರಾಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಕ್ಲೀನ್‌ಚಿಟ್ ನೀಡಿದೆ. ತನಿಖಾ ವರದಿಯನ್ನು ಟ್ರಸ್ಟ್‌ಗೆ ಹಸ್ತಾಂತರಿಸಲಾಗಿದ್ದು, ಶೀಘ್ರ ತನಿಖೆ ಪೂರ್ಣಗೊಳಿಸಲು ಸುಪ್ರೀಂ ಕೋರ್ಟ್‌ ಕೂಡ ಸೂಚಿಸಿದೆ.

Read Full Story

06:00 AM (IST) Aug 19

ಸಿಎಂ ವಿಜಯ್ ನಿತ್ಯ 20 ಗಂಟೆ ಹೇಗೆ ಕೆಲಸ ಮಾಡ್ತಾರೆ? ಗುಟ್ಟು ಬಿಚ್ಚಿಟ್ಟ ಸಚಿವ ಆಧವ್

ತಮಿಳುನಾಡು ಸಿಎಂ ವಿಜಯ್ ನಿತ್ಯ 20 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ ಎಂದು ಸಚಿವ ಆಧವ್ ಅರ್ಜುನ್ ಅವರ ಕಾರ್ಯವೈಖರಿಯ ಬಗ್ಗೆ ತಿಳಿಸಿದ್ದಾರೆ. ಇದೇ ವೇಳೆ, ವಿಜಯ್ ಅವರ ಹೊಸ ಕಚೇರಿ ನಿರ್ಮಾಣದ ಟೆಂಡರ್‌ನಲ್ಲಿ ಅಕ್ರಮ ನಡೆದಿದೆ ಎಂಬ ಬಿಜೆಪಿ ಆರೋಪ ಮತ್ತು ಅದಕ್ಕೆ ಟಿವಿಕೆ ನೀಡಿರುವ ಸ್ಪಷ್ಟನೆಯನ್ನು ಈ ಲೇಖನ ಒಳಗೊಂಡಿದೆ.
Read Full Story

05:41 AM (IST) Aug 19

ಜಾರ್ಖಂಡ್‌ ಪರೀಕ್ಷಾ ರದ್ದತಿ ಬೆನ್ನಲ್ಲೇ 2000 ನೌಕರರಿಗೆ ಸಂಕಷ್ಟ; ಸಚಿವಾಲಯದ ಎದುರು ತೀವ್ರ ಪ್ರತಿಭಟನೆ

ಜಾರ್ಖಂಡ್ ಸಿಬ್ಬಂದಿ ನೇಮಕಾತಿ ಆಯೋಗದ (ಜೆಎಸ್‌ಎಸ್‌ಸಿ-ಸಿಜಿಎಲ್) ಪರೀಕ್ಷೆಯಲ್ಲಿನ ಅಕ್ರಮದ ಆರೋಪದಿಂದಾಗಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ಸರ್ಕಾರದ ಈ ನಿರ್ಧಾರದಿಂದಾಗಿ, ಈಗಾಗಲೇ ಉದ್ಯೋಗದಲ್ಲಿದ್ದ ಸುಮಾರು 2,000 ಅಭ್ಯರ್ಥಿಗಳು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದು, ಸಚಿವಾಲಯದ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.
Read Full Story

05:36 AM (IST) Aug 19

NTA ಸುಧಾರಣೆಗೆ ಕ್ರಮ - 600 ತಜ್ಞರಿಗೆ ಕೊಕ್‌, 4 ಸ್ತರದ ಪ್ರಶ್ನೆಪತ್ರಿಕೆ ಪರಿಶೀಲನೆ ಜಾರಿ

ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯಲ್ಲಿ (ಎನ್‌ಟಿಎ) ಪಾರದರ್ಶಕತೆ ತರಲು ಕೇಂದ್ರ ಸರ್ಕಾರ ಮಹತ್ವದ ಸುಧಾರಣೆಗಳನ್ನು ಜಾರಿಗೆ ತಂದಿದೆ. ಪ್ರಶ್ನೆಪತ್ರಿಕೆ ಪರಿಶೀಲನೆಗೆ 4 ಹಂತದ ವ್ಯವಸ್ಥೆ, 600 ಹಳೆಯ ತಜ್ಞರ ಬದಲಾವಣೆ ಮತ್ತು ಎನ್‌ಟಿಎ ಕಚೇರಿಗಳಿಗೆ ಸಿಐಎಸ್‌ಎಫ್ ಭದ್ರತೆ ಒದಗಿಸುವಂತಹ ಪ್ರಮುಖ ನಿರ್ಧಾರಗಳನ್ನು ಪ್ರಕಟಿಸಲಾಗಿದೆ.
Read Full Story

More Trending News