LIVE NOW
Published : Aug 19, 2026, 05:30 AM ISTUpdated : Aug 19, 2026, 06:20 AM IST

India Latest News Live: ಅಯೋಧ್ಯೆ ರಾಮಮಂದಿರ ದೇಣಿಗೆ ಕಳವು - ಚಂಪತ್‌ ರಾಯ್, ಅನಿಲ್ ಮಿಶ್ರಾಗೆ ಕ್ಲೀನ್‌ಚಿಟ್?

ಸಾರಾಂಶ

ನವದೆಹಲಿ: ಕೋವಿಡ್‌ ವೇಳೆ ಸೃಷ್ಟಿಸಲಾಗಿದ್ದ ಹಾಗೂ ವಿಪಕ್ಷಗಳ ಟೀಕೆಗೆ ಗುರಿಯಾಗಿದ್ದ ಪಿಎಂ ಕೇರ್ಸ್‌ ನಿಧಿಗೆ 2023-24 ಮತ್ತು 2024-25ರಲ್ಲಿ ದೇಶ-ವಿದೇಶಗಳಲ್ಲಿ 1,162.92 ಕೋಟಿ ರು. ದೇಣಿಗೆ ಸಂಗ್ರಹಿಸಲಾಗಿದೆ. ಆದರೆ ಈ ಅವಧಿಯಲ್ಲಿ ಕೇವಲ 16.47 ಕೋಟಿ ರು. ಖರ್ಚು ಮಾಡಿದೆ ಎಂದು ಆಡಿಟ್ ವರದಿಗಳು ತಿಳಿಸಿವೆ. 2024-25ರಲ್ಲಿ ಈ ನಿಧಿಯು 479.97 ಕೋಟಿ ರು. ದೇಣಿಗೆ ಸಂಗ್ರಹಿಸಿತ್ತು, ಆದರೆ ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಕೇವಲ 87.85 ಲಕ್ಷ ರು. ಖರ್ಚು ಮಾಡಿದೆ. 2023-24ರಲ್ಲಿ 682.94 ಕೋಟಿ ರು. ಸಂಗ್ರಹಿಸಿ 15.59 ಕೋಟಿ ರು. ಖರ್ಚು ಮಾಡಿತ್ತು.

ಮಾರ್ಚ್ 31, 2025ಕ್ಕೆ ಮುಗಿದ ವಿತ್ತ ವರ್ಷದಲ್ಲಿ, ನಿಧಿಯ ಖಾತೆಗಳಲ್ಲಿ 8,452.06 ಕೋಟಿ ರು. ಇದೆ. ಇದರಲ್ಲಿ 7,846.65 ಕೋಟಿ ಸ್ಥಿರ ಠೇವಣಿಗಳಲ್ಲಿದೆ. ಒಟ್ಟಾರೆ, ಈ ನಿಧಿಯು 2020ರ ಮಾರ್ಚ್‌ನಲ್ಲಿ ಆರಂಭವಾದಾಗಿನಿಂದ 14,766.95 ಕೋಟಿ ರು. ದೇಣಿಗೆ ಸಂಗ್ರಹಿಸಿದೆ ಮತ್ತು 2024-25 ರವರೆಗೆ 8,133.29 ಕೋಟಿ ರು. ಖರ್ಚು ಮಾಡಿದೆ.

06:20 AM (IST) Aug 19

ಅಯೋಧ್ಯೆ ರಾಮಮಂದಿರ ದೇಣಿಗೆ ಕಳವು - ಚಂಪತ್‌ ರಾಯ್, ಅನಿಲ್ ಮಿಶ್ರಾಗೆ ಕ್ಲೀನ್‌ಚಿಟ್?

ಅಯೋಧ್ಯೆ ರಾಮಮಂದಿರದ ಕಾಣಿಕೆ ಕಳವು ಪ್ರಕರಣದಲ್ಲಿ, ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌ ಮತ್ತು ಮಾಜಿ ಸದಸ್ಯ ಅನಿಲ್‌ ಮಿಶ್ರಾಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಕ್ಲೀನ್‌ಚಿಟ್ ನೀಡಿದೆ. ತನಿಖಾ ವರದಿಯನ್ನು ಟ್ರಸ್ಟ್‌ಗೆ ಹಸ್ತಾಂತರಿಸಲಾಗಿದ್ದು, ಶೀಘ್ರ ತನಿಖೆ ಪೂರ್ಣಗೊಳಿಸಲು ಸುಪ್ರೀಂ ಕೋರ್ಟ್‌ ಕೂಡ ಸೂಚಿಸಿದೆ.

Read Full Story

06:00 AM (IST) Aug 19

ಸಿಎಂ ವಿಜಯ್ ನಿತ್ಯ 20 ಗಂಟೆ ಹೇಗೆ ಕೆಲಸ ಮಾಡ್ತಾರೆ? ಗುಟ್ಟು ಬಿಚ್ಚಿಟ್ಟ ಸಚಿವ ಆಧವ್

ತಮಿಳುನಾಡು ಸಿಎಂ ವಿಜಯ್ ನಿತ್ಯ 20 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ ಎಂದು ಸಚಿವ ಆಧವ್ ಅರ್ಜುನ್ ಅವರ ಕಾರ್ಯವೈಖರಿಯ ಬಗ್ಗೆ ತಿಳಿಸಿದ್ದಾರೆ. ಇದೇ ವೇಳೆ, ವಿಜಯ್ ಅವರ ಹೊಸ ಕಚೇರಿ ನಿರ್ಮಾಣದ ಟೆಂಡರ್‌ನಲ್ಲಿ ಅಕ್ರಮ ನಡೆದಿದೆ ಎಂಬ ಬಿಜೆಪಿ ಆರೋಪ ಮತ್ತು ಅದಕ್ಕೆ ಟಿವಿಕೆ ನೀಡಿರುವ ಸ್ಪಷ್ಟನೆಯನ್ನು ಈ ಲೇಖನ ಒಳಗೊಂಡಿದೆ.
Read Full Story

05:41 AM (IST) Aug 19

ಜಾರ್ಖಂಡ್‌ ಪರೀಕ್ಷಾ ರದ್ದತಿ ಬೆನ್ನಲ್ಲೇ 2000 ನೌಕರರಿಗೆ ಸಂಕಷ್ಟ; ಸಚಿವಾಲಯದ ಎದುರು ತೀವ್ರ ಪ್ರತಿಭಟನೆ

ಜಾರ್ಖಂಡ್ ಸಿಬ್ಬಂದಿ ನೇಮಕಾತಿ ಆಯೋಗದ (ಜೆಎಸ್‌ಎಸ್‌ಸಿ-ಸಿಜಿಎಲ್) ಪರೀಕ್ಷೆಯಲ್ಲಿನ ಅಕ್ರಮದ ಆರೋಪದಿಂದಾಗಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ಸರ್ಕಾರದ ಈ ನಿರ್ಧಾರದಿಂದಾಗಿ, ಈಗಾಗಲೇ ಉದ್ಯೋಗದಲ್ಲಿದ್ದ ಸುಮಾರು 2,000 ಅಭ್ಯರ್ಥಿಗಳು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದು, ಸಚಿವಾಲಯದ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.
Read Full Story

05:36 AM (IST) Aug 19

NTA ಸುಧಾರಣೆಗೆ ಕ್ರಮ - 600 ತಜ್ಞರಿಗೆ ಕೊಕ್‌, 4 ಸ್ತರದ ಪ್ರಶ್ನೆಪತ್ರಿಕೆ ಪರಿಶೀಲನೆ ಜಾರಿ

ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯಲ್ಲಿ (ಎನ್‌ಟಿಎ) ಪಾರದರ್ಶಕತೆ ತರಲು ಕೇಂದ್ರ ಸರ್ಕಾರ ಮಹತ್ವದ ಸುಧಾರಣೆಗಳನ್ನು ಜಾರಿಗೆ ತಂದಿದೆ. ಪ್ರಶ್ನೆಪತ್ರಿಕೆ ಪರಿಶೀಲನೆಗೆ 4 ಹಂತದ ವ್ಯವಸ್ಥೆ, 600 ಹಳೆಯ ತಜ್ಞರ ಬದಲಾವಣೆ ಮತ್ತು ಎನ್‌ಟಿಎ ಕಚೇರಿಗಳಿಗೆ ಸಿಐಎಸ್‌ಎಫ್ ಭದ್ರತೆ ಒದಗಿಸುವಂತಹ ಪ್ರಮುಖ ನಿರ್ಧಾರಗಳನ್ನು ಪ್ರಕಟಿಸಲಾಗಿದೆ.
Read Full Story

More Trending News