- Home
- Entertainment
- Ravi Teja Investment: 12 ಲಕ್ಷ ಹೂಡಿಕೆ ಮಾಡಿದರೆ 100 ಕೋಟಿ ರೂ. ಲಾಭ; ನಟ ರವಿತೇಜ ಆಸ್ತಿ ಕುರಿತ ಶಾಕಿಂಗ್ ಸೀಕ್ರೆಟ್ ರಿವೀಲ್!
Ravi Teja Investment: 12 ಲಕ್ಷ ಹೂಡಿಕೆ ಮಾಡಿದರೆ 100 ಕೋಟಿ ರೂ. ಲಾಭ; ನಟ ರವಿತೇಜ ಆಸ್ತಿ ಕುರಿತ ಶಾಕಿಂಗ್ ಸೀಕ್ರೆಟ್ ರಿವೀಲ್!
ನಟ ರವಿತೇಜ ಅವರು ವರ್ಷಗಳ ಹಿಂದೆ ಹೈದರಾಬಾದ್ ಬಳಿ ಕೇವಲ 12 ಲಕ್ಷಕ್ಕೆ 26 ಎಕರೆ ಭೂಮಿ ಖರೀದಿಸಿದ್ದರು. ನಟ ಅಜಯ್ ಘೋಷ್ ಈ ವಿಚಾರವನ್ನು ಬಹಿರಂಗಪಡಿಸಿದ್ದು, ಪ್ರಸ್ತುತ ಆ ಭೂಮಿಯ ಮೌಲ್ಯ ಕೋಟಿಗಟ್ಟಲೆ ಆಗಿದೆ. ಇಷ್ಟೆಲ್ಲಾ ಆಸ್ತಿ ಇದ್ದರೂ, ತಮ್ಮ ಸರಳ ವ್ಯಕ್ತಿತ್ವದಿಂದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಭೂಮಿಯ ಮೇಲೆ ಹೀರೋಗಳ ಹೂಡಿಕೆ
ಟಾಲಿವುಡ್ ಸಿನಿಮಾ ರಂಗದಲ್ಲಿ ಹಲವರು ಕಲಾವಿದರು ತಾವು ದುಡಿದ ಹಣವನ್ನು ಭೂಮಿ ಸೇರಿದಂತೆ ಸ್ಥಿರಾಸ್ತಿಗಳಲ್ಲಿ ಹೆಚ್ಚು ಹೂಡಿಕೆ ಮಾಡಿದ್ದಾರೆ. ದಶಕಗಳ ಹಿಂದೆಯಿಂದಲೂ ಈ ರೀತಿ ಹಲವು ನಟ-ನಟಿಯರು ಹೂಡಿಕೆ ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದಾರೆ. ಈ ರೀತಿ ವರ್ಷಗಳ ಹಿಂದೆ ಕಡಿಮೆ ಹಣಕ್ಕೆ ಖರೀದಿ ಮಾಡಿದ ಆಸ್ತಿಗಳು ಈಗ ಕೋಟಿ ಕೋಟಿ ಮೌಲ್ಯವನ್ನು ಹೊಂದಿದೆ.
ರವಿತೇಜ ಸಿನಿಮಾ ಬಿಡುಗಡೆಗೆ ಸಿದ್ಧತೆ
ಇದೇ ಸಾಲಿಗೆ ಸದ್ಯ ಟಾಲಿವುಡ್ ನಟ ರವಿತೇಜ ಸೇರ್ಪಡೆಯಾಗಿದ್ದಾರೆ. ಅವರ ಆಸ್ತಿಗೆ ಸಂಬಂಧಿಸಿದ ಸುದ್ದಿಯೊಂದು ಸಿನಿಮಾ ರಂಗದಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಇತ್ತೀಚೆಗೆ ರವಿತೇಜ ಅವರ ಸಿನಿಮಾ ಕಾರ್ಯಕ್ರಮವೊಂದರ ಸಂದರ್ಭದಲ್ಲಿ ಈ ಸಂಗತಿ ರಿವೀಲ್ ಆಗಿದೆ.
26 ಎಕರೆ ವಿಶಾಲ ಫಾರ್ಮ್ಹೌಸ್
ನಟ ಅಜಯ್ ಘೋಷ್ ಅವರು ಇತ್ತೀಚೆಗೆ ನಡೆದ 'ಇರುಮುಡಿ' ಸಿನಿಮಾ ಪ್ರೀ-ರಿಲೀಜ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ರವಿತೇಜ ಅವರ ಆಸ್ತಿಯ ಬಗ್ಗೆ ಆಸಕ್ತಿಯುತ ವಿಚಾರಗಳನ್ನು ರಿವೀಲ್ ಮಾಡಿದ್ದರು. ರವಿತೇಜ, ಅಜಯ್ ಘೋಷ್ ಇಬ್ಬರ ಕಾಂಬಿನೇಷನ್ನಲ್ಲಿ ಬಂದಿದ್ದ 'ಮಾಸ್ ಜಾತರ' ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ಎದುರಾದ ಕೆಲವು ಘಟನೆಗಳನ್ನು ಅಜಯ್ ಘೋಷ್ ರಿವೀಲ್ ಮಾಡಿದ್ದರು. ಹೈದರಾಬಾದ್ ಸಮೀಪದ ಶಂಕರ್ಪಲ್ಲಿ ಸಮೀಪ ರವಿತೇಜ ಸುಮಾರು 26 ಎಕರೆ ವಿಶಾಲವಾದ ಫಾರ್ಮ್ ಹೌಸ್ (ತೋಟ)ವನ್ನು ಖರೀದಿ ಮಾಡಿದ್ದರಂತೆ. 'ಮಾಸ್ ಜಾತ' ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಈ ತೋಟದಲ್ಲಿಯೇ ಕೆಲವು ಸಿನಿಮಾ ಸೆಟ್ಗಳನ್ನು ನಿರ್ಮಿಸಿ ಶೂಟಿಂಗ್ ಮಾಡಿದ್ದರಂತೆ.
12 ಲಕ್ಷಕ್ಕೆ ಖರೀದಿಗೆ ಮಾಡಿದರೆ ಈಗ ಕೋಟಿ ಕೋಟಿ ಮೌಲ್ಯ!
ಇದೇ ಸಂದರ್ಭದಲ್ಲಿ ಅಜಯ್ ಘೋಷ್ ಆಸಕ್ತಿಕರ ವಿಚಾರ ಹೇಳಿದ್ದು, ರವಿತೇಜ 26 ಎಕರೆ ಭೂಮಿಯನ್ನು ವರ್ಷಗಳ ಹಿಂದೆ ಕೇವಲ 12 ಲಕ್ಷ ರೂಪಾಯಿಗೆ ಖರೀದಿ ಮಾಡಿದ್ದರಂತೆ. ಆದರೆ ಹೈದರಾಬಾದ್ ನಗರ ಬೆಳೆಯುತ್ತಿದ್ದಂತೆ ಅದರ ಸುತ್ತಮುತ್ತ ಇರುವ ಭೂಮಿಯ ಬೆಲೆ ಕೂಡ ಡಬಲ್ ಆಗಿದ್ದು, ರಿಯಲ್ ಎಸ್ಟೇಟ್ ರಂಗಕ್ಕೆ ಡಿಮ್ಯಾಂಡ್ ಸೃಷ್ಟಿಯಾಗಿತ್ತಂತೆ. ಇದರಿಂದ ಲಕ್ಷಗಳಲ್ಲಿ ಖರೀದಿಸಿದ ಭೂಮಿ ಈಗ ಕೋಟಿ ಕೋಟಿ ಮೌಲ್ಯವನ್ನು ಹೊಂದಿದೆ ಎಂದು ಘೋಷ್ ಹೇಳಿದ್ದಾರೆ. ಈ ಹೇಳಿಕೆಯಲ್ಲಿ ಅಧಿಕೃತವಾಗಿ ಎಷ್ಟು ಕೋಟಿ ಮೌಲ್ಯವನ್ನು ಹೊಂದಿದೆ ಎಂದು ಹೇಳದಿದ್ದರು, ಶಂಕರ್ಪಲ್ಲಿ ಪ್ರದೇಶದಲ್ಲಿ ಭೂಮಿಯ ಬೆಲೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಅನ್ನೋದು ಮಾತ್ರ ಖಚಿತವಾಗಿದೆ.
ಎಲ್ಲವೂ ಇಲ್ಲೇ ಇರುತ್ತೆ, ನಾವು ಹೋಗ್ತೀವಿ!
ಕೋಟಿ ಕೋಟಿ ಆಸ್ತಿ ಹೊಂದಿದ್ದರು ರವಿತೇಜ ಅವರ ವ್ಯಕ್ತಿತ್ವದಲ್ಲಿ ಬದಲಾವಣೆಯಾಗಿಲ್ಲ ಎಂದು ಅಜಯ್ ಘೋಷ್ ಹೇಳಿದ್ದಾರೆ. ಶೂಟಿಂಗ್ ಸಮಯದಲ್ಲಿ ವ್ಯಕ್ತಿಯೊಬ್ಬರು ತೋಟದ ಮೌಲ್ಯದ ಕುರಿತು ಅಚ್ಚರಿ ವ್ಯಕ್ತಪಡಿಸಿ ಪ್ರಶ್ನಿಸಿದ ಸಂದರ್ಭದಲ್ಲಿ, ರವಿತೇಜ ಹೇಳಿದ ಮಾತು ಭಾರೀ ಕುತೂಹಲ ಮೂಡಿಸಿತ್ತಂತೆ. 'ಈ ತೋಟ, ಭೂಮಿ ಎಲ್ಲವೂ ಇಲ್ಲೇ ಇರುತ್ತದೆ. ಆದರೆ ನಾವು ಹೋಗ್ತೀವಿ. ಇವು ಈಗ ನಮ್ಮೊಂದಿಗೆ ಇದೆ ಅಂತ ಖುಷಿಪಡುತ್ತಾ ನಮ್ಮ ಕೆಲಸವನ್ನು ನಾವು ಮಾಡಿಕೊಂಡು ಹೋಗುವುದು ಮುಖ್ಯ. ನಾವು ಇಲ್ಲಿ ಬಂದಿರೋದು ಇರುವಷ್ಟು ದಿನ ಕೆಲಸ ಮಾಡಲು ಆದ್ದರಿಂದ ನಿಮ್ಮ ಕೆಲಸ ಮಾಡಿ' ಎಂದು ರವಿತೇಜ ಹೇಳಿದ್ದರಂತೆ. ಈ ಮಾತುಗಳು ವೈರಲ್ ಆಗುತ್ತಿಂತೆ, ಆಸ್ತಿ-ಹಣ-ಅಂತಸ್ತಿನ ಬಗ್ಗೆ ರವಿತೇಜ ಅವರಿಗೆ ಇರುವ ಭಾವನೆ ಬಗ್ಗೆ ಅಭಿಮಾನಿಗಳ ಸಂತಸ ವ್ಯಕ್ತಪಡಿಸಿ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಆಗಸ್ಟ್ 21ಕ್ಕೆ 'ಇರುಮುಡಿ' ಸಿನಿಮಾ ಬಿಡುಗಡೆ
ರವಿತೇಜ ಅವರು ನಟಿಸುರವ 'ಇರುಮುಡಿ' ಸಿನಿಮಾ ಆಗಸ್ಟ್ 21ಕ್ಕೆ ಬಿಡುಗಡೆಯಾಗಲಿದ್ದು, ಸಾಲು ಸಾಲು ಸಿನಿಮಾಗಳ ಸೋಲಿನ ಬಳಿಕ ಹಿಟ್ ಸಿನಿಮಾ ಸಿಗುವ ನಿರೀಕ್ಷೆಯಲ್ಲಿ ಅವರ ಅಭಿಮಾನಿಗಳಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಸಿನಿಮಾ ಟ್ರೈಲರ್ ಹಾಗೂ ಹಾಡುಗಳಿಗೆ ಸಿನಿಮಾ ಪ್ರೇಕ್ಷಕರು ಉತ್ತಮ ಪ್ರತಿಕ್ರಿಯೆ ನೀಡಿದ್ದು, ಈ ಸಿನಿಮಾವನ್ನು ಶಿವ ನಿರ್ವಾಣ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಸಾಯಿಕುಮಾರ್, ಪ್ರಿಯಾ ಭವಾನಿ ಶಂಕರ್, ಬೇಬಿ ನಕ್ಷತ್ರ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ರವಿತೇಜ ಅವರ ವಿಭಿನ್ನ ಪಾತ್ರ, ಕೌಟುಂಬಿಕ ಭಕ್ತಿಪ್ರಧಾನ ಕಥೆಯನ್ನು ಸಿನಿಮಾ ಹೊಂದಿದ್ದು, ಭಾರೀ ನಿರೀಕ್ಷೆ ಮೂಡಿಸಿದೆ.
ಟಾಲಿವುಡ್ ನಟ ಶೋಭನ್ ಬಾಬು ಆದರ್ಶ
ಟಾಲಿವುಡ್ ಸಿನಿಮಾ ಇಂಡಸ್ಟ್ರೀಯಲ್ಲಿ ಹೀರೋಗಳು ಹಿರಿಯ ನಟ ಶೋಭನ್ ಬಾಬು ಅವರನ್ನೇ ಆದರ್ಶವಾಗಿ ನೋಡುತ್ತಾರೆ. ಅದರಂತೆ ಭೂಮಿಯ ಮೇಲೆಯೇ ಹೂಡಿಕೆ ಮಾಡುತ್ತಿದ್ದಾರೆ. ಇದರೊಂದಿಗೆ ಕೋಟಿ ಕೋಟಿ ಆದಾಯ ಮಾಡುತ್ತಿದ್ದಾರೆ. ನಟ ರವಿತೇಜ ಕೂಡ 12 ಲಕ್ಷ ರೂಪಾಯಿ ಹೂಡಿಕೆ ಮಾಡಿ, 100 ಕೋಟಿಗೂ ಅಧಿಕ ಮೊತ್ತ ಲಾಭ ಗಳಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

