Published : Mar 11, 2026, 07:05 AM ISTUpdated : Mar 11, 2026, 10:55 PM IST

India Latest News Live: ಗುಜರಾತ್‌ಗೆ ಬರುತ್ತಿದ್ದ ಹಡಗಿನ ಮೇಲೆ ಹಾರ್ಮುಜ್ ಜಲಸಂಧಿಯಲ್ಲಿ ದಾಳಿ; ಪ್ರಚೋದನಕಾರಿ ಕೃತ್ಯಕ್ಕೆ ಭಾರತ ತೀವ್ರ ಖಂಡನೆ!

ಸಾರಾಂಶ

ಚಂಡೀಗಢ: ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ಮಂಗಳವಾರ ಹರ್ಯಾಣದ ಸೋನಿಪತ್ ಜಿಲ್ಲೆಯಲ್ಲಿ ರೈತರೊಬ್ಬರ ಪುತ್ರಿ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಗಮನ ಸೆಳೆದರು.

2023ರಲ್ಲಿ ರಾಹುಲ್‌ ಗಾಂಧಿಯವರು ಮೊದಲ ಬಾರಿಗೆ ಮದಿನಾ ಗ್ರಾಮದಲ್ಲಿ ರೈತ ಸಂಜಯ್‌ ಮಲಿಕ್‌ ಎನ್ನುವವರನ್ನು ಭೇಟಿ ಮಾಡಿದ್ದರು. ಈ ವೇಳೆ ಅವರು ಎದುರಿಸಿರುವ ಕಷ್ಟಗಳ ಬಗ್ಗೆ ಆಲಿಸಿದ್ದರು. ಇದೇ ಬಾಂಧವ್ಯದಿಂದ ಅವರಿಗ ಆ ರೈತನ ಮಗಳ ಮದುವೆಗೆ ಸಾಕ್ಷಿಯಾಗಿದ್ದಾರೆ. ಈ ವೇಳೆ ಕಾಂಗ್ರೆಸ್‌ ನಾಯಕ ಸಾಂಪ್ರದಾಯಿಕ ಭಕ್ಷ್ಯಗಳನ್ನು ಸವಿದು, ರೈತನ ಕುಟುಂಬಸ್ಥರು, ಗ್ರಾಮಸ್ಥರ ಜತೆಗೆ ಕೆಲ ಕಾಲ ಮಾತುಕತೆ ನಡೆಸಿದರು.

 

10:55 PM (IST) Mar 11

ಗುಜರಾತ್‌ಗೆ ಬರುತ್ತಿದ್ದ ಹಡಗಿನ ಮೇಲೆ ಹಾರ್ಮುಜ್ ಜಲಸಂಧಿಯಲ್ಲಿ ದಾಳಿ; ಪ್ರಚೋದನಕಾರಿ ಕೃತ್ಯಕ್ಕೆ ಭಾರತ ತೀವ್ರ ಖಂಡನೆ!

ಹಾರ್ಮುಜ್ ಜಲಸಂಧಿಯಲ್ಲಿ, ಭಾರತದ ಕಾಂಡ್ಲಾ ಬಂದರಿಗೆ ಬರುತ್ತಿದ್ದ ಥೈಲ್ಯಾಂಡ್‌ನ 'ಮಯೂರಿ ನಾರಿ' ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸಿದೆ. ಈ ಘಟನೆಯು ಸಮುದ್ರಯಾನ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತದೆ ಮತ್ತು ಅಮಾಯಕ ಸಿಬ್ಬಂದಿಯ ಜೀವಕ್ಕೆ ಅಪಾಯವನ್ನುಂಟುಮಾಡುತ್ತದೆ ಎಂದಿದೆ.

Read Full Story

10:32 PM (IST) Mar 11

ANR Biopic - ಅಕ್ಕಿನೇನಿ ಬಯೋಪಿಕ್ ಯಾವಾಗ? ನಾಗಾರ್ಜುನ-ನಾಗಚೈತನ್ಯರಲ್ಲಿ ಯಾರು ಹೀರೋ?

ಹಿಂದಿನ ತಲೆಮಾರಿನ ಹಲವು ನಟರ ಬಯೋಪಿಕ್‌ಗಳು ಈಗಾಗಲೇ ತೆರೆಕಂಡು ಸದ್ದು ಮಾಡಿವೆ. ಇದೀಗ ಅಕ್ಕಿನೇನಿ ನಾಗೇಶ್ವರ ರಾವ್ (ANR) ಅವರ ಬಯೋಪಿಕ್‌ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ಸಿನಿಮಾ ಯಾವಾಗ ಬರಲಿದೆ? ಯಾರು ನಟಿಸಲಿದ್ದಾರೆ? ಇದರಲ್ಲಿ ನಿಜವೆಷ್ಟು?

Read Full Story

10:23 PM (IST) Mar 11

ಬ್ಯೂಟಿಯಲ್ಲಿ ಆಲಿಯಾ, ಕರೀನಾಗಿಂತ ಕಡಿಮೆಯೇನಲ್ಲ, ಐಪಿಎಸ್‌ ಅಧಿಕಾರಿಯನ್ನೇ ವರಿಸಲಿರುವ ದೇಶದ ಬ್ಯೂಟಿಫುಲ್‌ IPS ಅಧಿಕಾರಿ!

ಉತ್ತರ ಪ್ರದೇಶದ ಸಂಭಾಲ್ ಎಸ್‌ಪಿ ಕೃಷ್ಣ ಕುಮಾರ್ ಬಿಷ್ಣೋಯ್ ಮತ್ತು ಬರೇಲಿ ಎಸ್‌ಪಿ ಅನ್ಶಿಕಾ ವರ್ಮಾ ಅವರು ಮಾರ್ಚ್ 29 ರಂದು ವಿವಾಹವಾಗಲಿದ್ದಾರೆ. 2021ರಲ್ಲಿ ಗೋರಖ್‌ಪುರದಲ್ಲಿ ಭೇಟಿಯಾದ ಈ ಐಪಿಎಸ್ ಜೋಡಿಯ ವಿವಾಹವು ರಾಜಸ್ಥಾನದ ಜೋಧ್‌ಪುರದಲ್ಲಿ ಸಾಂಪ್ರದಾಯಿಕವಾಗಿ ನಡೆಯಲಿದೆ. 

Read Full Story

10:14 PM (IST) Mar 11

ಅಮೆರಿಕಾದಲ್ಲಿ ತೈಲ ಸಂಸ್ಕರಣಾಗಾರ ಸ್ಥಾಪಿಸಲಿರುವ ರಿಲಯನ್ಸ್ - ಇದು US ಇತಿಹಾಸದಲ್ಲೇ ಅತಿದೊಡ್ಡ ಒಪ್ಪಂದ ಎಂದ ಟ್ರಂಪ್

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ಅಮೆರಿಕಾದಲ್ಲಿ ಭಾರಿ ಮೊತ್ತದ ಹೂಡಿಕೆ ಮಾಡಿದೆ. ಟೆಕ್ಸಾಸ್‌ನಲ್ಲಿ $300 ಬಿಲಿಯನ್ ಮೌಲ್ಯದ ತೈಲ ಸಂಸ್ಕರಣಾಗಾರವನ್ನು ಸ್ಥಾಪಿಸುತ್ತಿದ್ದು,. ಕಳೆದ 50 ವರ್ಷಗಳಲ್ಲಿ ಅಮೆರಿಕಾದಲ್ಲಿ ನಿರ್ಮಾಣವಾಗುತ್ತಿರುವ ಮೊದಲ ಹೊಸ ಸಂಸ್ಕರಣಾಗಾರ ಇದಾಗಿದೆ.

Read Full Story

08:47 PM (IST) Mar 11

ನಾಳೆಯಿಂದ ಸನಾತನ ಪ್ರೀಮಿಯರ್‌ ಲೀಗ್‌, ಪ್ರತಿ ರನ್‌ ಬಂದಾಗಲೂ ಆಸಿಡ್‌ ದಾಳಿ ಸಂತ್ರಸ್ಥರಿಗೆ 500 ರೂಪಾಯಿ ದೇಣಿಗೆ!

ದೇವಕಿನಂದನ್ ಠಾಕೂರ್ ಅವರ ಮಾರ್ಗದರ್ಶನದಲ್ಲಿ 'ಸನಾತನ ಪ್ರೀಮಿಯರ್ ಲೀಗ್' (SPL) ಎಂಬ ರಾಷ್ಟ್ರೀಯ ಟಿ10 ಟೂರ್ನಿ ಆರಂಭವಾಗಿದೆ. ಐಪಿಎಲ್ ಮಾದರಿಯ ವೇದಿಕೆ ನೀಡುವುದು ಮತ್ತು ಪ್ರತಿ ರನ್‌ಗೆ ಆ್ಯಸಿಡ್ ದಾಳಿ ಸಂತ್ರಸ್ತರಿಗೆ ದೇಣಿಗೆ ನೀಡುವ ಮೂಲಕ ಸಾಮಾಜಿಕ ಕಳಕಳಿ ಮೆರೆಯುವುದು ಇದರ ಮುಖ್ಯ ಉದ್ದೇಶ.

Read Full Story

08:20 PM (IST) Mar 11

ICC Team of the Tournament - ವರ್ಲ್‌ಕಪ್‌ ಗೆದ್ದ ನಾಯಕ ಸೂರ್ಯಕುಮಾರ್‌ಗೆ ಟೀಮ್‌ ಆಫ್‌ ಟೂರ್ನಮೆಂಟ್‌ನಲ್ಲಿ ಸ್ಥಾನವಿಲ್ಲ!

ಭಾರತಕ್ಕೆ ಮೂರನೇ ಬಾರಿಗೆ ಟಿ20 ವಿಶ್ವಕಪ್ ಗೆದ್ದುಕೊಟ್ಟ ನಾಯಕ ಸೂರ್ಯಕುಮಾರ್ ಯಾದವ್‌ಗೆ ಐಸಿಸಿ ಟೂರ್ನಿಯ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ಹಾಗಿದ್ರೆ ಈ ತಂಡದ ನಾಯಕ ಯಾರು? ಇಲ್ಲಿದೆ ವಿವರ.
Read Full Story

07:52 PM (IST) Mar 11

ಲಕ್ಷ ಲಕ್ಷ ಹಿಂದೂಗಳ ಮಾರಣಹೋಮ ಮಾಡಿದವನ ಹೆಸರು ಮಗನಿಗ್ಯಾಕೆ? Kareena Kapoor Khan ಹೇಳಿದ್ದೇನು?

ಕರೀನಾ ಕಪೂರ್ ಪ್ರೀತಿಸಿ ಮದುವೆಯಾದ ಸೈಫ್ ಅಲಿ ಖಾನ್  ಲಕ್ಷಾಂತರ ಹಿಂದೂಗಳನ್ನು ಕೊಂದ ಐತಿಹಾಸಿಕ ವ್ಯಕ್ತಿ ತೈಮೂರ್ ಹೆಸರನ್ನು ತಮ್ಮ ಮಗನಿಗೆ ಇಟ್ಟು ವಿವಾದ ಸೃಷ್ಟಿಸಿದ ಬಗ್ಗೆ ಈ ಲೇಖನ ವಿವರಿಸುತ್ತದೆ. ಈ ಹೆಸರಿನ ಹಿಂದಿನ ಕಾರಣದ ಬಗ್ಗೆ ಕರೀನಾ ನೀಡಿದ ಹೇಳಿಕೆಗಳು ಚರ್ಚೆಗೆ ಗ್ರಾಸವಾಗಿವೆ.

Read Full Story

07:49 PM (IST) Mar 11

IPL 2026 ವೇಳಾಪಟ್ಟಿ ಪ್ರಕಟ - ಚಿನ್ನಸ್ವಾಮಿಯಲ್ಲಿ ಉದ್ಘಾಟನಾ ಪಂದ್ಯ, ಮಾ.28ಕ್ಕೆ ಹಾಲಿ ಚಾಂಪಿಯನ್‌ ಆರ್‌ಸಿಬಿಗೆ ಇವರೇ ಎದುರಾಳಿ!

ಬಿಸಿಸಿಐ 2026ರ ಐಪಿಎಲ್‌ನ ಮೊದಲ 20 ದಿನಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಉದ್ಘಾಟನಾ ಪಂದ್ಯವು ಮಾರ್ಚ್ 28 ರಂದು ಬೆಂಗಳೂರಿನಲ್ಲಿ ಹಾಲಿ ಚಾಂಪಿಯನ್ ಆರ್‌ಸಿಬಿ ಮತ್ತು ಎಸ್‌ಆರ್‌ಎಚ್ ನಡುವೆ ನಡೆಯಲಿದ್ದು, ವಿಧಾನಸಭಾ ಚುನಾವಣೆಗಳ ಕಾರಣದಿಂದಾಗಿ ಪೂರ್ಣ ವೇಳಾಪಟ್ಟಿಯನ್ನು ನಂತರ ಪ್ರಕಟಿಸಲಾಗುವುದು.
Read Full Story

07:37 PM (IST) Mar 11

ನಿರ್ದೇಶಕ ರಾಘವೇಂದ್ರ ರಾವ್ ಅವರ ಆ ದೊಡ್ಡ ಆಸೆ ಈಡೇರಲೇ ಇಲ್ಲ; ಮಾತು ಕೊಟ್ಟ ಸ್ಟಾರ್ ನಟಿ ಯಾರು?

ಖ್ಯಾತ ನಿರ್ದೇಶಕ ಕೆ. ರಾಘವೇಂದ್ರ ರಾವ್ ಅವರ ವೃತ್ತಿಜೀವನದಲ್ಲಿ ಒಂದು ಆಸೆ ಈಡೇರಲೇ ಇಲ್ಲ. ಆ ಆಸೆಯನ್ನು ಈಡೇರಿಸುವುದಾಗಿ ಒಬ್ಬ ಸ್ಟಾರ್ ನಟಿ ಮಾತು ಕೊಟ್ಟಿದ್ದರು. ಆದರೆ, ಆ ಮಾತನ್ನು ಉಳಿಸಿಕೊಳ್ಳುವ ಮೊದಲೇ ಅವರು ಇಹಲೋಕ ತ್ಯಜಿಸಿದರು. ಹಾಗಾದರೆ ಆ ನಟಿ ಯಾರು? ಆ ಕಥೆ ಏನು? ಇಲ್ಲಿದೆ ವಿವರ.

Read Full Story

07:33 PM (IST) Mar 11

ಟಿ20 ವಿಶ್ವಕಪ್‌ ಗೆದ್ದ ಪ್ಲೇಯರ್‌ಗೆ ಸಿಗದ ವಿಮಾನ ಟಿಕೆಟ್‌, ರೈಲಿನಲ್ಲಿ ರಹಸ್ಯವಾಗಿ ಪ್ರಯಾಣ ಬೆಳೆಸಿದ ಸ್ಟಾರ್‌ ಆಟಗಾರ!

2026ರ ಟಿ20 ವಿಶ್ವಕಪ್ ಗೆದ್ದ ನಂತರ, ವಿಮಾನ ಟಿಕೆಟ್ ಸಿಗದ ಕಾರಣ ಆಲ್ ರೌಂಡರ್ ಶಿವಂ ದುಬೆ ಅಹಮದಾಬಾದ್‌ನಿಂದ ಮುಂಬೈಗೆ 3ನೇ ಎಸಿ ರೈಲಿನಲ್ಲಿ ಪ್ರಯಾಣಿಸಿದರು. ಅಭಿಮಾನಿಗಳಿಂದ ತಪ್ಪಿಸಿಕೊಳ್ಳಲು ಮಾಸ್ಕ್, ಕ್ಯಾಪ್ ಧರಿಸಿ ಗುರುತು ಮರೆಮಾಚಿದ್ದರು.

Read Full Story

07:13 PM (IST) Mar 11

Trisha Krishnan - ತ್ರಿಷಾ ಜೊತೆ ನಟಿಸಿ ಸ್ಟಾರ್ ಆದ ಆ ಹೀರೋ ಯಾರು? ಈಗೇನ್ಮಾಡ್ತಿದ್ದಾರೆ?

ಕೆಲವೊಂದು ಜೋಡಿಗಳು ಬೆಳ್ಳಿತೆರೆ ಮೇಲೆ ಸಖತ್ ಹಿಟ್ ಆಗುತ್ತವೆ. ಹೀರೋಗಳಿಂದ ಹೀರೋಯಿನ್‌ಗಳು, ಹೀರೋಯಿನ್‌ಗಳಿಂದ ಹೀರೋಗಳು ಸ್ಟಾರ್‌ಡಮ್ ಪಡೆಯುವುದು ಸಾಮಾನ್ಯ. ಇದೇ ರೀತಿ, ಸ್ಟಾರ್ ನಟಿ ತ್ರಿಷಾ ಜೊತೆ ನಟಿಸಿದ್ದರಿಂದಲೇ ಒಬ್ಬ ನಟ ತೆಲುಗಿನಲ್ಲಿ ಸ್ಟಾರ್ ಪಟ್ಟಕ್ಕೇರಿದ್ದು ನಿಮಗೆ ಗೊತ್ತಾ?

Read Full Story

07:00 PM (IST) Mar 11

ಫರ್ಮಾನ್‌ ಖಾನ್‌ ಜೊತೆ ದಿಢೀರ್‌ ವಿವಾಹವಾದ ವೈರಲ್‌ ಗರ್ಲ್‌ ಮೋನಾಲಿಸಾ, ಅಂತರ್‌ಧರ್ಮೀಯ ಮದುವೆಗೆ ಕೇರಳ ಸಚಿವರ ಸಾಕ್ಷಿ!

ಕುಂಭಮೇಳದ ಮೂಲಕ ಖ್ಯಾತಿ ಗಳಿಸಿದ್ದ ಮೊನಾಲಿಸಾ, ತನ್ನ ಪ್ರಿಯಕರ ಫರ್ಮಾನ್ ಖಾನ್ ಜೊತೆ ಕೇರಳದಲ್ಲಿ ವಿವಾಹವಾಗಿದ್ದಾರೆ. ಕುಟುಂಬದ ವಿರೋಧದ ಹಿನ್ನೆಲೆಯಲ್ಲಿ ಪೊಲೀಸ್ ರಕ್ಷಣೆ ಕೋರಿದ್ದ ಈ ಜೋಡಿ, ತಿರುವನಂತಪುರಂನ ದೇವಸ್ಥಾನವೊಂದರಲ್ಲಿ ಗಣ್ಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
Read Full Story

06:50 PM (IST) Mar 11

Ustaad Bhagat Singh ಚಿತ್ರದಲ್ಲಿ ಪವನ್ ಕಲ್ಯಾಣ್‌ಗೆ ನಾಯಕಿ ಯಾರು? - ವಯಸ್ಸಿನ ಅಂತರ 30 ವರ್ಷವಂತೆ!

ಸೌತ್ ಸೂಪರ್‌ಸ್ಟಾರ್ ಪವನ್ ಕಲ್ಯಾಣ್ ತಮ್ಮ 'ಉಸ್ತಾದ್ ಭಗತ್ ಸಿಂಗ್' ಚಿತ್ರದಿಂದಾಗಿ ಸಖತ್ ಸುದ್ದಿಯಲ್ಲಿದ್ದಾರೆ. ಈ ಸಿನಿಮಾ ಮಾರ್ಚ್ 19 ರಂದು ವಿಶ್ವಾದ್ಯಂತ ತೆರೆ ಕಾಣಲಿದೆ. ಈ ಚಿತ್ರದಲ್ಲಿ ಪವನ್ ಕಲ್ಯಾಣ್ ಜೊತೆ ನಟಿಸಿರುವ ನಾಯಕಿ ಯಾರು ಮತ್ತು ಅವರಿಬ್ಬರ ವಯಸ್ಸಿನ ಅಂತರ ಎಷ್ಟು ಎಂಬ ಚರ್ಚೆ ಜೋರಾಗಿದೆ.

Read Full Story

06:36 PM (IST) Mar 11

20 ಕೋಟಿ ವೆಚ್ಚದಲ್ಲಿ ಮದುವೆ ಆಗಿ ನಾಲ್ಕೇ ವರ್ಷದಲ್ಲಿ ಡೈವೋರ್ಸ್‌, ಗಂಡನಿಂದ ಹನ್ಸಿಕಾ ಮೋಟ್ವಾನಿ ಪಡೆದ ಜೀವನಾಂಶ ಎಷ್ಟು?

ನಟಿ ಹನ್ಸಿಕಾ ಮೋಟ್ವಾನಿ ಮತ್ತು ಅವರ ಪತಿ ಸೊಹೈಲ್ ಕಟೂರಿಯಾ ತಮ್ಮ ನಾಲ್ಕು ವರ್ಷಗಳ ದಾಂಪತ್ಯವನ್ನು ಕೊನೆಗೊಳಿಸಿದ್ದಾರೆ. ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆದಿದ್ದು, ಹನ್ಸಿಕಾ ಯಾವುದೇ ಜೀವನಾಂಶವನ್ನು ಪಡೆದಿಲ್ಲ ಎಂಬುದು ವಿಶೇಷ. ಭಿನ್ನಾಭಿಪ್ರಾಯಗಳೇ ಡೈವೋರ್ಸ್‌ಗೆ ಕಾರಣ ಎನ್ನಲಾಗಿದೆ.

Read Full Story

06:36 PM (IST) Mar 11

ಈ ಬಾರಿ ಯುಗಾದಿ- ಅಮವಾಸ್ಯೆ ಒಂದೇ ದಿನ - ಪಿತೃ ತರ್ಪಣ, ಹಬ್ಬದ ಆಚರಣೆ ಮುಹೂರ್ತದ ಡಿಟೇಲ್ಸ್​ ಇಲ್ಲಿದೆ

2026ರ ಯುಗಾದಿ ಹಬ್ಬವು ಮಾರ್ಚ್ 19 ರಂದು ಅಮಾವಾಸ್ಯೆಯೊಂದಿಗೆ ಬಂದಿದೆ. ಈ ಅಪರೂಪದ ದಿನದಂದು, ಸೂರ್ಯೋದಯದ ತಿಥಿಯ ಆಧಾರದ ಮೇಲೆ ಆಚರಣೆಗಳನ್ನು ವಿಂಗಡಿಸಲಾಗಿದೆ. ಪಿತೃ ಕಾರ್ಯಗಳನ್ನು ಬೆಳಿಗ್ಗೆ ಮುಗಿಸಿ, ನಂತರ ಯುಗಾದಿ ಸಂಭ್ರಮವನ್ನು ಆಚರಿಸುವ ಬಗ್ಗೆ ಮಾಹಿತಿ ಇಲ್ಲಿದೆ.
Read Full Story

06:30 PM (IST) Mar 11

ಹರೀಶ್ ರಾಣಾಗೆ ದಯಾಮರಣ - ಈ ಕಾನೂನು ಹೋರಾಟಕ್ಕೆ ಮುನ್ನುಡಿ ಬರೆದಿದ್ದು 42 ವರ್ಷ ಕೋಮಾದಲ್ಲಿದ್ದ ದಾದಿ ಅರುಣಾಕಥೆ!

ಈ ಲೇಖನವು, 42 ವರ್ಷಗಳ ಕಾಲ ಕೋಮಾ ಸ್ಥಿತಿಯಲ್ಲಿದ್ದ ನರ್ಸ್ ಅರುಣಾ ಶಾನಬಾಗ್ ದುರಂತ ಕಥೆಯು ಭಾರತದಲ್ಲಿ ನಿಷ್ಕ್ರಿಯ ದಯಾಮರಣದ ಕಾನೂನು ಚರ್ಚೆಗೆ ಹೇಗೆ ಕಾರಣವಾಯಿತು?. ಇತ್ತೀಚೆಗೆ ಹರೀಶ್ ರಾಣಾ ಪ್ರಕರಣದಲ್ಲಿ ಸುಪ್ರೀಂ ನೀಡಿದ ತೀರ್ಪು, 'ಘನತೆಯಿಂದ ಸಾಯುವ ಹಕ್ಕಿನ' ಕುರಿತ ಈ ಚರ್ಚೆ ಮುನ್ನೆಲೆಗೆ ತಂದಿದೆ.

Read Full Story

06:08 PM (IST) Mar 11

ರೈಲು ಪ್ರಯಾಣಿಕರ ಗಮನಕ್ಕೆ - ಎಲ್‌ಪಿಜಿ ಸಿಲಿಂಡರ್ ಅಭಾವ; ರೈಲಿನಲ್ಲಿ ಊಟ ಸಿಗುವುದು ಅನುಮಾನ?

ಪಶ್ಚಿಮ ಏಷ್ಯಾದಲ್ಲಿನ ಯುದ್ಧದಿಂದಾಗಿ ಎಲ್‌ಪಿಜಿ ಸಿಲಿಂಡರ್‌ಗಳ ಅಭಾವ ಸೃಷ್ಟಿಯಾಗಿದ್ದು, ಭಾರತೀಯ ರೈಲ್ವೆಯ ಅಡುಗೆ ಸೇವೆಗಳ ಮೇಲೆ ಗಂಭೀರ ಪರಿಣಾಮ ಬೀರಿದೆ. ಈ ಹಿನ್ನೆಲೆಯಲ್ಲಿ, ಐಆರ್‌ಸಿಟಿಸಿ ತನ್ನ ಅಡುಗೆ ಗುತ್ತಿಗೆದಾರರಿಗೆ ಪರ್ಯಾಯ ವಿಧಾನಗಳನ್ನು ಬಳಸಲು ಸೂಚಿಸಿದೆ.

Read Full Story

06:06 PM (IST) Mar 11

Hansika Divorce - ಗಂಡನಿಂದ ದೂರವಾದ ಪುನೀತ್‌ ರಾಜ್‌ಕುಮಾರ್ ಹೀರೋಯಿನ್‌ - 4 ವರ್ಷದ ದಾಂಪತ್ಯ ಜೀವನ ಅಂತ್ಯ!

ನಟಿ ಹನ್ಸಿಕಾ ಮೋಟ್ವಾನಿ ಮತ್ತು ಅವರ ಪತಿ, ಉದ್ಯಮಿ ಸೊಹೇಲ್ ಖತೂರಿಯಾ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಇಬ್ಬರೂ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದು, ನ್ಯಾಯಾಲಯ ಇದಕ್ಕೆ ಅನುಮತಿ ನೀಡಿದೆ.

Read Full Story

05:45 PM (IST) Mar 11

ಎರಡು ತಿಂಗಳ ಬಳಿಕ ಬಂತು ಲಾಕ್‌ಡೌನ್ - ಇಲ್ಲಿದೆ ಅನುಪಮಾ ಪರಮೇಶ್ವರನ್ ಸಿನಿಮಾದ ಡೀಟೇಲ್ಸ್

ನಟಿ ಅನುಪಮಾ ಪರಮೇಶ್ವರನ್ ನಟನೆಯ 'ಲಾಕ್‌ಡೌನ್' ಸಿನಿಮಾ ಥಿಯೇಟರ್‌ಗೆ ಬಂದ ಎರಡು ತಿಂಗಳ ನಂತರ ಈಗ ಓಟಿಟಿಯಲ್ಲಿ ಬಿಡುಗಡೆಯಾಗಿದೆ. ಪ್ರೈಮ್ ವಿಡಿಯೋದಲ್ಲಿ ಈ ಚಿತ್ರ ಸ್ಟ್ರೀಮ್ ಆಗುತ್ತಿದೆ.

Read Full Story

05:36 PM (IST) Mar 11

ಖಾನ್​ ಸಾಹೇಬ್ರ ಫೋನ್​ ರಿಂಗ್​ಗೆ ವಿಮಾನ ಗಡಗಡ - ಫ್ಲೈಟ್ ದಿಕ್ಕೇ ಬದಲಾಯ್ತು​- ಜೀವ ಭಯದಲ್ಲಿ ಪ್ರಯಾಣಿಕರು ತತ್ತರ

ಫ್ಲೋರಿಡಾಗೆ ತೆರಳುತ್ತಿದ್ದ ಸೌತ್‌ವೆಸ್ಟ್ ವಿಮಾನದಲ್ಲಿ, ಮುಸ್ಲಿಂ ಪ್ರಯಾಣಿಕರೊಬ್ಬರ ಫೋನ್‌ ರಿಂಗ್​ ಆಗಿದ್ದರಿಂದ ಆತಂಕ ಸೃಷ್ಟಿಯಾಯಿತು. ಈ ಘಟನೆಯಿಂದಾಗಿ ವಿಮಾನವನ್ನು ಅಟ್ಲಾಂಟಾದಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು. ಭದ್ರತಾ ತಪಾಸಣೆಯ ನಂತರ ಸತ್ಯಾಂಶ ಬಯಲಾಯಿತು.

Read Full Story

05:27 PM (IST) Mar 11

ಗಂಡಸರೇ ನಿಜವಾದ ಅತಿದೊಡ್ಡ ಸಂತ್ರಸ್ತರು - ವಿಚ್ಛೇದನದ ಬಳಿಕ ನಟ ರವಿ ಮೋಹನ್ ಭಾವುಕ ಪ್ರತಿಕ್ರಿಯೆ

ಪತ್ನಿ ಆರತಿ ಜೊತೆಗಿನ ವಿಚ್ಛೇದನದ ನಂತರ ನಟ ರವಿ ಮೋಹನ್ ಮತ್ತೆ ಪ್ರತಿಕ್ರಿಯೆ ನೀಡಿದ್ದಾರೆ. 'ಸಮಾಜದಲ್ಲಿ ಗಂಡಸರೇ ನಿಜವಾದ ಸಂತ್ರಸ್ತರು, ನನ್ನ ಮನಸ್ಸಿನ ಶುದ್ಧತೆ ಒಂದು ದಿನ ಎಲ್ಲರಿಗೂ ಅರ್ಥವಾಗುತ್ತೆ' ಎಂದು ಅವರು ಹೇಳಿದ್ದಾರೆ.

Read Full Story

05:07 PM (IST) Mar 11

ಇದು ಭಾರತದ ಪವರ್‌, ಇರಾನ್‌ ಎಚ್ಚರಿಕೆಯ ನಡುವೆಯೂ ಹಾರ್ಮುಜ್‌ ಜಲಸಂಧಿ ದಾಟಿ ಮುಂಬೈಗೆ ಬಂದ ತೈಲ ಟ್ಯಾಂಕರ್‌!

ಪಶ್ಚಿಮ ಏಷ್ಯಾದ ಸಂಘರ್ಷದಿಂದಾಗಿ 'ಹಾರ್ಮುಜ್ ಜಲಸಂಧಿ' ಮಾರ್ಗದಲ್ಲಿ ಉದ್ವಿಗ್ನತೆ ಹೆಚ್ಚಾಗಿದ್ದರೂ, ಸೌದಿ ಅರೇಬಿಯಾದಿಂದ ಕಚ್ಚಾ ತೈಲ ಹೊತ್ತ 'ಶೆನ್‌ಲಾಂಗ್' ಟ್ಯಾಂಕರ್ ಯಶಸ್ವಿಯಾಗಿ ಮುಂಬೈ ತಲುಪಿದೆ. ಇರಾನ್ ಎಚ್ಚರಿಕೆಯ ನಡುವೆಯೂ, ಈ ನೌಕೆಯು ತನ್ನ ಗುರುತಿನ ವ್ಯವಸ್ಥೆಯನ್ನು ಆಫ್ ಮಾಡಿ ರಹಸ್ಯವಾಗಿ ಈ ಮಾರ್ಗವನ್ನು ದಾಟಿದೆ.

Read Full Story

05:02 PM (IST) Mar 11

Vijay Trisha Affair - 'ಅದು ಅವರ ಪರ್ಸನಲ್ ವಿಚಾರ' - ವಿಜಯ್-ತ್ರಿಷಾ ಸಂಬಂಧದ ಬಗ್ಗೆ ಖುಷ್ಬೂ ಖಡಕ್ ಮಾತು

ನಟ ವಿಜಯ್ ಪತ್ನಿ ಸಂಗೀತ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಬೆನ್ನಲ್ಲೇ, ತ್ರಿಷಾ ಜೊತೆ ಕಾಣಿಸಿಕೊಂಡಿದ್ದು ದೊಡ್ಡ ಸುದ್ದಿಯಾಗಿತ್ತು. ಈ ಬಗ್ಗೆ ನಟಿ ಖುಷ್ಬೂ ಪ್ರತಿಕ್ರಿಯಿಸಿದ್ದು, ಅವರ ವೈಯಕ್ತಿಕ ವಿಚಾರ ಎಂದಿದ್ದಾರೆ.

Read Full Story

04:47 PM (IST) Mar 11

ಧುರಂಧರ್‌ 2 ಪ್ರೀಮಿಯರ್‌ ಶೋಗೆ ಟಿಕೆಟ್‌ ದರ ರು.2900 - 16 ಕೋಟಿ ಗಳಿಕೆ ನಿರೀಕ್ಷೆ

ಧುರಂಧರ್‌ 2 ಟಿಕೆಟ್‌ ದರ ಕೂಡ ಏರಿಕೆಯಾಗಿದ್ದು, ಮುಂಬೈಯಲ್ಲಿ ಅತ್ಯಧಿಕ 3100 ರು. ಟಿಕೆಟ್‌ ದರ ನಿಗದಿಯಾಗಿದೆ. ಬೆಂಗಳೂರಿನಲ್ಲಿ 2900 ರು.ವರೆಗೂ ಟಿಕೆಟ್‌ ರೇಟ್‌ ಏರಿಕೆಯಾಗಿದೆ. ದೇಶದ ವಿವಿಧೆಡೆ ಟಿಕೆಟ್‌ ದರ 2000 ರು. ದಾಟಿದೆ.

Read Full Story

04:41 PM (IST) Mar 11

ಲ್ಯಾಂಬೋರ್ಘಿನಿ ಲವ್ - ಅಮ್ಮನ ಹಿಂದೆ ಕುಳಿತು ಫಾಲೋ ಮಾಡ್ಕೊಂಡ್ ಬಂದ ಬಾಲಕನ ಆಸೆ ಈಡೇರಿಸಿದ ಉದ್ಯಮಿ

ರಸ್ತೆಯಲ್ಲಿ ಸಾಗುತ್ತಿದ್ದ ಲ್ಯಾಂಬೋರ್ಘಿನಿ ಕಾರನ್ನು ನೋಡಿ ಸ್ಕೂಟಿಯಲ್ಲಿದ್ದ ಬಾಲಕನೊಬ್ಬ ಆಸೆಪಟ್ಟಾಗ, ಉದ್ಯಮಿಯೊಬ್ಬರು ಅವನ ಆಸೆ ಪೂರೈಸಿದ್ದಾರೆ.ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Read Full Story

04:31 PM (IST) Mar 11

ಫರ್ಮಾನ್‌ ಖಾನ್‌ ಜೊತೆ ಲವ್‌ಗೆ ಪೋಷಕರ ವಿರೋಧ, ಕೇರಳ ಪೊಲೀಸರ ಸಹಾಯ ಪಡೆದ ಕುಂಭಮೇಳದ ವೈರಲ್‌ ಗರ್ಲ್‌ ಮೋನಾಲಿಸಾ!

ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಾರಿ ವೈರಲ್ ಆಗಿದ್ದ ಮೋನಿ ಭೋಂಸ್ಲೆ, ತನ್ನ ಪ್ರಿಯಕರ ಫರ್ಮಾನ್‌ ಖಾನ್‌ ಜೊತೆಗಿರಲು ಕುಟುಂಬದ ವಿರೋಧದ ನಡುವೆ ಕೇರಳದಲ್ಲಿ ಪೊಲೀಸ್ ರಕ್ಷಣೆ ಕೋರಿದ್ದಾರೆ. ಪೊಲೀಸರ ಮಧ್ಯಸ್ಥಿಕೆಯ ನಂತರ ಮೋನಿ ತನ್ನ ಪ್ರಿಯಕರನೊಂದಿಗೆ ತೆರಳಲು ಅನುಮತಿ ಪಡೆದರು.

Read Full Story

04:11 PM (IST) Mar 11

ಜಲಪಾತದ ಕೆಳಗೆ ದೇಹ ಕಾಣುವಂಥ ಸೀರೆಯುಟ್ಟು ಬೋಲ್ಡ್‌ ದೃಶ್ಯದಲ್ಲಿ ಕಾಣಿಸಿಕೊಂಡಿದ್ದ ನಟಿಗೆ ಈಗಲೂ ಇದೆ ಪಶ್ಚಾತ್ತಾಪ!

'ಕಿಶನ್ ಕನ್ಹಯ್ಯಾ' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ನಟಿ ಶಿಲ್ಪಾ ಶಿರೋಡ್ಕರ್, ತಮ್ಮ ಚೊಚ್ಚಲ ಚಿತ್ರದಲ್ಲೇ ವಿವಾದಕ್ಕೆ ಸಿಲುಕಿದ್ದರು. ಜಲಪಾತದ ಕೆಳಗಿನ ಪಾರದರ್ಶಕ ಸೀರೆಯ ದೃಶ್ಯದಿಂದಾಗಿ ಮಂದಾಕಿನಿಗೆ ಹೋಲಿಸಲ್ಪಟ್ಟ ಅವರು, ಆ ದೃಶ್ಯದ ಬಗ್ಗೆ ಇಂದಿಗೂ ಪಶ್ಚಾತ್ತಾಪ ಪಡುತ್ತಾರೆ.

Read Full Story

03:19 PM (IST) Mar 11

ಎಂಗೇಜ್​ಮೆಂಟ್​ ಬಳಿಕ ತ್ರಿಷಾ ಕೃಷ್ಣನ್​ ಮದುವೆ ಮುರಿದದ್ದೇಕೆ? ನಟಿಯಿಂದ್ಲೇ ಕೊನೆಗೂ ಬಯಲಾಯ್ತು ಆ ಸತ್ಯ!

ದಳಪತಿ ವಿಜಯ್ ಮತ್ತು ಸಂಗೀತಾ ಅವರ ವಿಚ್ಛೇದನದ ಸುದ್ದಿಯ ನಡುವೆ ನಟಿ ತ್ರಿಷಾ ಕೃಷ್ಣನ್ ಹೆಸರು ಕೇಳಿಬರುತ್ತಿದೆ. ಈ ಸನ್ನಿವೇಶದಲ್ಲಿ, ತ್ರಿಷಾ ಅವರ ಹಳೆಯ ಸಂದರ್ಶನವೊಂದು ವೈರಲ್ ಆಗಿದ್ದು, ಅದರಲ್ಲಿ ಅವರು ವಿಚ್ಛೇದನ, ಮದುವೆ ಮತ್ತು ನಟನೆಯನ್ನು ಮುಂದುವರಿಸುವ ತಮ್ಮ ಬಲವಾದ ನಿಲುವಿನ ಬಗ್ಗೆ ಮಾತನಾಡಿದ್ದಾರೆ.
Read Full Story

02:55 PM (IST) Mar 11

9-5ರ ಮಿಲನ - ರಶ್ಮಿಕಾ- ವಿಜಯ್​ ವೈವಾಹಿಕ ಜೀವನ ಹೇಗಿರುತ್ತೆ? ಇಂಟರೆಸ್ಟಿಂಗ್​ ವಿಷ್ಯ ತಿಳಿಸಿದ ಜ್ಯೋತಿಷಿ

ಜ್ಯೋತಿಷಿ ಆಶಿಮಾ ಅವರು ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಜನ್ಮಸಂಖ್ಯೆಯ ಆಧಾರದ ಮೇಲೆ ಅವರ ದಾಂಪತ್ಯ ಜೀವನದ ಭವಿಷ್ಯ ನುಡಿದಿದ್ದಾರೆ. ಮಂಗಳ-ಬುಧರ ಈ ಜೋಡಿಯು ಆಕರ್ಷಕವಾಗಿದ್ದು ಅವರ ಜೀವನ ಹೇಗಿರಲಿದೆ ಎನ್ನುವುದು ಇಲ್ಲಿದೆ..

Read Full Story

02:35 PM (IST) Mar 11

ಹೈದರಾಬಾದ್‌ನಿಂದ ಥೈಲ್ಯಾಂಡ್‌ಗೆ ಹೊರಟಿದ್ದ ವಿಮಾನ ಭಾರಿ ದುರಂತದಿಂದ ಪಾರು

ಹೈದರಾಬಾದ್‌ನಿಂದ ಫುಕೆಟ್‌ಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಲ್ಯಾಂಡಿಂಗ್ ವೇಳೆ ನೋಸ್ ವೀಲ್ ತಾಂತ್ರಿಕ ದೋಷದಿಂದಾಗಿ ಅಪಾಯಕ್ಕೆ ಸಿಲುಕಿತ್ತು. ಆದಾಗ್ಯೂ, ಪೈಲಟ್‌ನ ಚಾಣಾಕ್ಷತನದಿಂದ ವಿಮಾನದಲ್ಲಿದ್ದ 133 ಪ್ರಯಾಣಿಕರು ಸುರಕ್ಷಿತವಾಗಿ ಪಾರಾಗಿದ್ದು, ದೊಡ್ಡ ದುರಂತವೊಂದು ತಪ್ಪಿದೆ.
Read Full Story

02:15 PM (IST) Mar 11

ಮಧ್ಯಪ್ರಾಚ್ಯ ಬಿಕ್ಕಟ್ಟು - ವಿಮಾನಗಳಿಗೆ ಬಳಸುವ ಇಂಧನ ದರದಲ್ಲೂ ಭಾರಿ ಹೆಚ್ಚಳ - ಗಗನಕ್ಕೇರಿದ ಇಂಟರ್‌ನ್ಯಾಷನಲ್ ಫ್ಲೈಟ್‌ ಬೆಲೆ

ಅಮೆರಿಕಾ-ಇಸ್ರೇಲ್-ಇರಾನ್ ಸಂಘರ್ಷದಿಂದಾಗಿ ಕಚ್ಚಾ ತೈಲ ಮತ್ತು ಜೆಟ್ ಇಂಧನದ ಬೆಲೆಗಳು ಗಗನಕ್ಕೇರಿವೆ. ಇದರ ನೇರ ಪರಿಣಾಮವಾಗಿ, ಭಾರತೀಯ ವಿಮಾನಯಾನ ಸಂಸ್ಥೆಗಳು ಸೇರಿದಂತೆ ವಿಶ್ವಾದ್ಯಂತದ ಏರ್‌ಲೈನ್‌ಗಳು ಅಂತರರಾಷ್ಟ್ರೀಯ ಪ್ರಯಾಣ ದರದಲ್ಲಿ ಭಾರಿ ಏರಿಕೆ ಮಾಡಿವೆ.

Read Full Story

01:10 PM (IST) Mar 11

ಕರ್ನಾಟಕ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಕಣಕ್ಕಿಳಿದರೆ ನಾವೂ ರೆಡಿ, ಕೇರಳ ಕಾಂಗ್ರೆಸ್‌ನ 5 ಸಂಸದರಿಂದ ಪಟ್ಟು!

ಕೆ. ಸುಧಾಕರನ್, ಅಡೂರ್ ಪ್ರಕಾಶ್ ಬೆನ್ನಲ್ಲೇ, ಎಂ.ಕೆ. ರಾಘವನ್, ಕೊಡಿಕುನ್ನಿಲ್ ಹಾಗೂ ಶಾಫಿ ಪರಂಬಿಲ್ ಕೂಡಾ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸೋಕೆ ಆಸಕ್ತಿ ತೋರಿಸಿದ್ದಾರೆ. ಇದರಿಂದ ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ತೀವ್ರ ಅಸಮಾಧಾನ ಭುಗಿಲೆದ್ದಿದೆ.
Read Full Story

12:41 PM (IST) Mar 11

13 ವರ್ಷಗಳ ಯಾತನೆಗೆ ಮುಕ್ತಿ - ಇದೇ ಮೊದಲ ಬಾರಿ ದಯಾಮರಣಕ್ಕೆ ಅನುಮತಿ ನೀಡಿದ ಸುಪ್ರೀಂಕೋರ್ಟ್‌

13 ವರ್ಷಗಳಿಂದ ವೆಂಟಿಲೇಟರ್ ಸಹಾಯದಿಂದ ಕೃತಕ ಜೀವಾಧಾರಕ ವ್ಯವಸ್ಥೆಯಲ್ಲಿದ್ದ ಹರೀಶ್ ರಾಣಾ ಅವರಿಗೆ ದಯಾಮರಣ ನೀಡಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ. 2018ರಲ್ಲಿ ದಯಾಮರಣ ಕಾನೂನುಬದ್ಧಗೊಂಡ ನಂತರ ದೇಶದಲ್ಲಿ ಅನುಮತಿ ಪಡೆದ ಮೊದಲ ಪ್ರಕರಣ ಇದಾಗಿದೆ.

Read Full Story

12:29 PM (IST) Mar 11

Russian Oil - ಮೋದಿ ಸರ್ಕಾರ ಅಮೆರಿಕಕ್ಕೆ ಶರಣಾಗಿದೆ - ಜೈರಾಂ ರಮೇಶ್ ಕಿಡಿ

ಮೋದಿ ಸರ್ಕಾರಕ್ಕೆ ಶ್ವೇತಭವನ 'ಶರಣಾಗತಿ ಪ್ರಮಾಣಪತ್ರ' ನೀಡಿದೆ ಎಂದು ಕಾಂಗ್ರೆಸ್ ಸಂಸದ ಜೈರಾಂ ರಮೇಶ್ ವಾಗ್ದಾಳಿ ನಡೆಸಿದ್ದಾರೆ. ಭಾರತ 'ಒಳ್ಳೆಯ ನಡತೆ' ತೋರಿದ್ದಕ್ಕೆ ರಷ್ಯಾದಿಂದ ತೈಲ ಖರೀದಿಸಲು 30 ದಿನಗಳ ವಿನಾಯಿತಿಯನ್ನು 'ಬಹುಮಾನ'ವಾಗಿ ನೀಡಲಾಗಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.
Read Full Story

11:48 AM (IST) Mar 11

ಕೇರಳ ಸಚಿವ ಗಣೇಶ್‌ 5 ಸಾವಿರ ಪ್ರೀತಿ ವಿವಾದ - ಬಗೆಹರಿಯಿತೇ ಗೊಂದಲ? ಪತ್ನಿ ಬಿಂದು ಹೇಳಿದ್ದೇನು?

ತಮ್ಮ 'ಐದು ಸಾವಿರ ಪ್ರೀತಿ' ಹೇಳಿಕೆಗೆ ಸಂಬಂಧಿಸಿದಂತೆ ಸಚಿವ ಗಣೇಶ್ ಕುಮಾರ್ ಪತ್ನಿ ಬಿಂದು ಮೆನನ್ ಅವರ ಕ್ಷಮೆ ಯಾಚಿಸಿದ್ದಾರೆ. ಇದು ನಮ್ಮ ವೈಯಕ್ತಿಕ ವಿಷಯವಾಗಿದ್ದು, ಸಮಸ್ಯೆ ಬಗೆಹರಿದಿದೆ ಎಂದು ಬಿಂದು ಹೇಳಿದ್ದಾರೆ, ಆದರೆ ಸಚಿವರ ರಾಜೀನಾಮೆಗೆ ಕಾಂಗ್ರೆಸ್ ಒತ್ತಾಯ ಮುಂದುವರೆಸಿದೆ.
Read Full Story

11:33 AM (IST) Mar 11

ಅಯ್ಯೋ ವಿಧಿಯೇ ಅಮ್ಮನಿಗೆ ಜೀವ ನೀಡಿ ಉಸಿರು ಚೆಲ್ಲಿದ ಮಗ ಲಿವರ್ ದಾನದ ಬಳಿಕ ಮಗ ಸಾವು ಬದುಕುಳಿದ ತಾಯಿ

ತಾಯಿಗೆ ಯಕೃತ್ತು ದಾನ ಮಾಡಿದ ಮಗ ಶಸ್ತ್ರಚಿಕಿತ್ಸೆಯ ನಂತರ ಸೋಂಕಿನಿಂದ ಮೃತಪಟ್ಟಿದ್ದಾನೆ. ಇತ್ತ ತಾಯಿ ಚೇತರಿಸಿಕೊಂಡಿದ್ದು, ಮಗನ ಸಾವು ತಿಳಿದು ಆಘಾತಕ್ಕೀಡಾಗಿದ್ದಾರೆ. ಇದೇ ರೀತಿಯ ಘಟನೆಯೊಂದು ಮಂಗಳೂರಿನಲ್ಲಿ ನಡೆದಿತ್ತು ಉಪನ್ಯಾಸಕಿಯೊಬ್ಬರು ಯಕೃತ್ತು ದಾನ ಮಾಡಿ ಪ್ರಾಣ ಕಳೆದುಕೊಂಡಿದ್ದರು..

Read Full Story

10:56 AM (IST) Mar 11

ನಾಚಿಕೆಯಾಗಬೇಕು...! ಟಿ20 ವಿಶ್ವಕಪ್ ಗೆಲ್ಲಿಸಿದ ಗೌತಮ್ ಗಂಭೀರ್ ಮೇಲೆ ಕಿಡಿಕಾರಿದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ!

ಟಿ20 ವಿಶ್ವಕಪ್ ಟ್ರೋಫಿಯನ್ನು ಸೂರ್ಯಕುಮಾರ್ ಯಾದವ್ ಮತ್ತು ಜಯ್ ಶಾ ಅವರು ಅಹಮದಾಬಾದ್‌ನ ದೇವಸ್ಥಾನಕ್ಕೆ ಕೊಂಡೊಯ್ದಿದ್ದನ್ನು ಮಾಜಿ ಕ್ರಿಕೆಟಿಗ ಕೀರ್ತಿ ಆಜಾದ್ ತೀವ್ರವಾಗಿ ಖಂಡಿಸಿದ್ದಾರೆ. ಈ ಗೆಲುವು 140 ಕೋಟಿ ಭಾರತೀಯರಿಗೆ ಸೇರಿದ್ದು, ಇದನ್ನು ಒಂದು ಧರ್ಮಕ್ಕೆ ಸೀಮಿತಗೊಳಿಸುವುದು ಸರಿಯಲ್ಲ ಎಂದಿದ್ದಾರೆ.

Read Full Story

08:52 AM (IST) Mar 11

ಇರಾನ್‌ನಲ್ಲಿ 1 ಲೀ. ಹಾಲಿನ ಬೆಲೆ 8.2 ಲಕ್ಷ ರಿಯಲ್‌ - ದಿನಬಳಕೆಯ ವಸ್ತುಗಳ ದರದಲ್ಲಿ ಭಾರಿ ಏರಿಕೆ

ಇಸ್ರೇಲ್-ಅಮೆರಿಕಾ ದಾಳಿಯಿಂದಾಗಿ ಇರಾನ್‌ನ ಆರ್ಥಿಕತೆ ಕುಸಿದಿದ್ದು, ಹಣದುಬ್ಬರ ತೀವ್ರಗೊಂಡಿದೆ. ಇದರಿಂದ ಹಾಲು, ಅಕ್ಕಿಯಂತಹ ಅಗತ್ಯ ವಸ್ತುಗಳ ಬೆಲೆ ಲಕ್ಷಗಳನ್ನು ತಲುಪಿದ್ದು, ಇರಾನಿನ ಕರೆನ್ಸಿ ರಿಯಾಲ್ ಮೌಲ್ಯ ಐತಿಹಾಸಿಕ ಕುಸಿತ ಕಂಡಿದೆ. ಇದು ಜನರ ದೈನಂದಿನ ಜೀವನವನ್ನು ಸಂಕಷ್ಟಕ್ಕೆ ದೂಡಿದೆ.
Read Full Story

More Trending News