userpic
user icon
LIVE NOW

Karnataka News Live: ನ್ಯಾ. ಗವಾಯಿ ಭಾರತದ ಮುಂದಿನ ಸಿಜೆಐ

Karnataka News Live 29th April 2025 BMRCL chief Maheshwar rao appointed as BBMP new commissioner

ರಾಜ್ಯ ಸರ್ಕಾರ ತನ್ನ ಆಡಳಿತ ವಿಭಾಗದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಇಬ್ಬರು ಐಎಎಸ್ ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆಗೊಳಿಸಿದೆ. ಪ್ರಮುಖವಾಗಿ ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ಅವರನ್ನು ಸರ್ಕಾರ ವರ್ಗಾವಣೆ ಗೊಳಿಸಿದೆ. ನಗರಾಭಿವೃದ್ಧಿ ಇಲಾಖೆಯ ಹಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ತುಷಾರ್ ಗಿರಿನಾಥ್ ಅವರನ್ನು ವರ್ಗಾವಣೆ ಗೊಳಿಸಲಾಗಿದೆ. ಇತ್ತ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ ರಾವ್ ಅವರನ್ನು ಇದೀಗ ಬಿಬಿಎಂಪಿ ಮುಖ್ಯ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ. 

12:00 AM IST

ನ್ಯಾ. ಗವಾಯಿ ಭಾರತದ ಮುಂದಿನ ಸಿಜೆಐ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನ್ಯಾಯಮೂರ್ತಿ ಭೂಷಣ್ ರಾಮಕೃಷ್ಣ ಗವಾಯಿ ಅವರನ್ನು ಭಾರತದ ಮುಂದಿನ ಮುಖ್ಯ ನ್ಯಾಯಾಧೀಶರನ್ನಾಗಿ ನೇಮಿಸಿದ್ದಾರೆ. ನ್ಯಾಯಮೂರ್ತಿ ಗವಾಯಿ ಮೇ 14, 2025 ರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ, ಹಾಲಿ ಸಿಜೆಐ ಖನ್ನಾ ಅವರ ನಿವೃತ್ತಿಯ ನಂತರ.

ಪೂರ್ತಿ ಓದಿ
11:41 PM IST

ಐಪಿಎಲ್ 2025ರ ವಿರಾಟ್ ಕೊಹ್ಲಿಯ ಟಾಪ್ 3 ಅಗ್ರೆಸಿವ್ ವಿಡಿಯೋ ವೈರಲ್!

ಐಪಿಎಲ್ 2025ರಲ್ಲಿ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಮತ್ತು ಆಕ್ರಮಣಕಾರಿ ಧೋರಣೆ ಸುದ್ದಿ ಮಾಡಿದೆ. ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ ಮತ್ತು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಗಳಲ್ಲಿ ಕೊಹ್ಲಿ ಅವರ ಆಕ್ರಮಣಕಾರಿ ಪ್ರತಿಕ್ರಿಯೆಗಳು ವೈರಲ್ ಆಗಿವೆ.

ಪೂರ್ತಿ ಓದಿ
11:06 PM IST

ಜಮೀರ್, ಖಾದರ್ ಜೊತೆ ಪೆಹಲ್ಗಾಮ್‌ಗೆ ಹೋಗಿ ಮೇ ಸಿದ್ದರಾಮಯ್ಯ ಹೂಂ ಅಂದಿದ್ರೆ 10 ಗುಂಡು ಹೊಡಿತಿದ್ರು; ಮುತಾಲಿಕ್

ಪ್ರಮೋದ್ ಮುತಾಲಿಕ್ ಅವರು ಸಿದ್ದರಾಮಯ್ಯ, ಭಯೋತ್ಪಾದನೆ ಮತ್ತು ಹಿಂದೂಗಳ ಸ್ಥಿತಿಗತಿಗಳ ಬಗ್ಗೆ ತೀಕ್ಷ್ಣವಾದ ಹೇಳಿಕೆಗಳನ್ನು ನೀಡಿದ್ದಾರೆ. ಪೆಹಲ್ಗಾಮ್ ಘಟನೆಯನ್ನು ಉಲ್ಲೇಖಿಸಿ, ಭಯೋತ್ಪಾದನೆಗೆ ಧರ್ಮ, ದೇಶ ಇಲ್ಲ ಎನ್ನುವ ರಾಜಕಾರಣಿಗಳನ್ನು ಟೀಕಿಸಿದ್ದಾರೆ.

ಪೂರ್ತಿ ಓದಿ
11:02 PM IST

ಅಮೆರಿಕದಲ್ಲಿ ಹೆಂಡತಿ, ಮಗನಿಗೆ ಗುಂಡಿಟ್ಟು ತಾನೂ ಆತ್ಮಹತ್ಯೆ ಮಾಡಿಕೊಂಡ ಮೈಸೂರಿನ ಟೆಕ್‌ ಕಂಪನಿ ಸಿಇಒ!

ಮೈಸೂರು ಮೂಲದ ಉದ್ಯಮಿ ಹರ್ಷವರ್ಧನ್, ಅಮೆರಿಕದಲ್ಲಿ ಪತ್ನಿ ಮತ್ತು ಮಗನನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಏಳು ವರ್ಷದ ಕಿರಿಯ ಮಗ ಬದುಕುಳಿದಿದ್ದಾನೆ. ಘಟನೆಯ ಕಾರಣ ಇನ್ನೂ ತಿಳಿದುಬಂದಿಲ್ಲ.

ಪೂರ್ತಿ ಓದಿ
10:31 PM IST

ಪಾಕಿಸ್ತಾನ್‌ ಜಿಂದಾಬಾದ್‌ ಎಂದವನ್ನು ಗುಂಪು ಹತ್ಯೆ ಮಾಡಲಾಗಿದೆ: ಡಾ.ಜಿ ಪರಮೇಶ್ವರ್‌

ಮಂಗಳೂರಿನಲ್ಲಿ ಕ್ರಿಕೆಟ್ ಪಂದ್ಯದ ವೇಳೆ 'ಪಾಕಿಸ್ತಾನ ಜಿಂದಾಬಾದ್' ಎಂದು ಘೋಷಣೆ ಕೂಗಿದ ವ್ಯಕ್ತಿಯನ್ನು ಗುಂಪೊಂದು ಹತ್ಯೆಗೈದಿದೆ. ಈ ಘಟನೆ ಏಪ್ರಿಲ್ 27 ರಂದು ಕುಡುಪು ಪ್ರದೇಶದಲ್ಲಿ ನಡೆದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಮತ್ತು ಹಲವಾರು ಶಂಕಿತರನ್ನು ಬಂಧಿಸಲಾಗಿದೆ.

ಪೂರ್ತಿ ಓದಿ
10:17 PM IST

ಓಲಾ, ಉಬರ್, ರ‍್ಯಾಪಿಡೊಗೆ ಮತ್ತೆ ಜೀವ: ಹೈಕೋರ್ಟ್​ನಿಂದ ಬಂದ ಹೊಸ ಆದೇಶವೇನು?

ಬೈಕ್ ಟ್ಯಾಕ್ಸಿ ಸೇವೆಗಳನ್ನು ಸ್ಥಗಿತಗೊಳಿಸುವಂತೆ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಉಬರ್, ಓಲಾ ಮತ್ತು ರ‍್ಯಾಪಿಡೋ ಸಲ್ಲಿಸಿದ್ದ ಅರ್ಜಿಗಳನ್ನು ಪುರಸ್ಕರಿಸಲಾಗಿದೆ. ಜೂನ್ 15 ರವರೆಗೆ ಸೇವೆಗಳನ್ನು ಮುಂದುವರಿಸಲು ನ್ಯಾಯಾಲಯ ಅವಕಾಶ ನೀಡಿದೆ.

ಪೂರ್ತಿ ಓದಿ
10:10 PM IST

ಕರ್ನಾಟಕ ಮೋಸ್ಟ್ ವಾಂಟೆಡ್ ಕ್ರಿಮಿನಲ್‌ ಮೌಸೀನ್ ಅರೆಸ್ಟ್; 6 ವರ್ಷ ತಲೆಮರೆಸಿಕೊಂಡು 5 ಮಕ್ಕಳ ಅಪ್ಪನಾದ!

ಬೆಂಗಳೂರಿನ ಕೆಜಿ ಹಳ್ಳಿ- ಡಿಜೆ ಹಳ್ಳಿ ಗಲಭೆ ಪ್ರಕರಣದ A-16 ಆರೋಪಿ ಹಾಗೂ ನಿಷೇಧಿತ ಪಿಎಫ್‌ಐ ಸಂಘಟನೆಯ ಕಾರ್ಯಕರ್ತ ಮೌಸೀನ್ ಅಲಿಯಾಸ್ ಇಮ್ತಿಯಾಝ್ ಶುಕುರ್‌ನನ್ನು ಉತ್ತರಕನ್ನಡ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಪ್ರಮುಖ ಆರೋಪಿಯ ಜತೆ ಆತ್ಮೀಯನಾಗಿದ್ದ ಈತ ಕಳೆದ 6 ವರ್ಷಗಳಿಂದ ತಲೆಮರೆಸಿಕೊಂಡಿದ್ದ.

ಪೂರ್ತಿ ಓದಿ
9:57 PM IST

ಪ್ಲೀಸ್​ ನಂಬಿ... ಪಾಕ್​ಗೆ ಸಹಾಯ ಮಾಡಲ್ಲ ಎಂದ ಟರ್ಕಿ! ಭಾರತ ಕೊಟ್ಟ ಶಾಕ್​ಗೆ ಮುಸ್ಲಿಂ ದೇಶ ಶೇಕ್​...

ಪಾಕಿಸ್ತಾನಕ್ಕೆ ಮಿಲಿಟರಿ ನೆರವು ನೀಡಿದ ಟರ್ಕಿ ವಿರುದ್ಧ ಭಾರತೀಯರು ಆಕ್ರೋಶ ವ್ಯಕ್ತಪಡಿಸಿ ಬೈಕಾಟ್ ಅಭಿಯಾನ ಆರಂಭಿಸಿದ್ದಾರೆ. ಇದರಿಂದಾಗಿ ಟರ್ಕಿ ಪಾಕ್​ಗೆ ನೆರವು ನೀಡಿಲ್ಲ ಎಂದು ಸಮಜಾಯಿಷಿ ನೀಡಿದೆ. ಭಾರತದಿಂದ ನೆರವು ಪಡೆದಿದ್ದ ಟರ್ಕಿ ಈಗ ಪಾಕ್​ ಪರ ನಿಂತಿದ್ದು ಚರ್ಚೆಗೆ ಗ್ರಾಸವಾಗಿತ್ತು.  

ಪೂರ್ತಿ ಓದಿ
9:37 PM IST

ಮೇ.29ಕ್ಕೆ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣ


ಅವರು ಎಎಕ್ಸ್‌-4 ಕಾರ್ಯಾಚರಣೆಯಲ್ಲಿ ಪೈಲಟ್ ಆಗಿ ಸೇವೆ ಸಲ್ಲಿಸಲಿದ್ದು, ನಾಸಾದ ಅನುಭವಿ ಗಗನಯಾತ್ರಿ ಪೆಗ್ಗಿ ವಿಟ್ಸನ್ ನೇತೃತ್ವದ ಅಂತರರಾಷ್ಟ್ರೀಯ ತಂಡವನ್ನು ಪೋಲೆಂಡ್ ಮತ್ತು ಹಂಗೇರಿಯ ಗಗನಯಾತ್ರಿಗಳೊಂದಿಗೆ ಸೇರಿಕೊಳ್ಳಲಿದ್ದಾರೆ.

ಪೂರ್ತಿ ಓದಿ
9:21 PM IST

ಈ 6 ನಕ್ಷತ್ರಗಳ ಯುವತಿಯರ ಮದ್ವೆಯಾದ್ರೆ ಯಶಸ್ಸು, ಸಂಪತ್ತು ವೃದ್ಧಿ ಕಟ್ಟಿಟ್ಟದ್ದೇ!

ಆರು ನಕ್ಷತ್ರಗಳ ಬಗ್ಗೆ ಇಲ್ಲಿ ಉಲ್ಲೇಖಿಸಲಾಗಿದ್ದು, ಅವರನ್ನು ಮದುವೆಯಾಗುವ ಪುರುಷರಿಗೆ ಸಮೃದ್ಧಿ, ಐಶ್ವರ್ಯ ಕಟ್ಟಿಟ್ಟದ್ದೇ. ಯಾವುದೀ ನಕ್ಷತ್ರಗಳು? 

ಪೂರ್ತಿ ಓದಿ
9:17 PM IST

ಬಿಬಿಎಂಪಿ ಆಸ್ತಿ ತೆರಿಗೆ ಶೇ.5 ರಿಯಾಯಿತಿ ಅವಧಿ ಮೇ 31ರವರೆಗೆ ವಿಸ್ತರಣೆ

2025-26ನೇ ಸಾಲಿನ ಆಸ್ತಿ ತೆರಿಗೆಯನ್ನು ಪೂರ್ಣವಾಗಿ ಪಾವತಿಸಲು ರಿಯಾಯಿತಿ ಅವಧಿಯನ್ನು ಮೇ 31ರವರೆಗೆ ವಿಸ್ತರಿಸಲಾಗಿದೆ. ತೆರಿಗೆದಾರರು ಈ ಅವಕಾಶವನ್ನು ಬಳಸಿಕೊಂಡು ಶೇ.5ರಷ್ಟು ರಿಯಾಯಿತಿ ಪಡೆಯಬಹುದು.

ಪೂರ್ತಿ ಓದಿ
9:01 PM IST

ಶೌರ್ಯ ಚಕ್ರ ಪುರಸ್ಕೃತ ಹುತಾತ್ಮ ಮುದಾಸಿರ್‌ ತಾಯಿಯೂ ಪಾಕಿಸ್ತಾನಕ್ಕೆ ಗಡೀಪಾರು!

ಕಾಶ್ಮೀರದಲ್ಲಿ ವಾಸಿಸುತ್ತಿರುವ 60 ಪಾಕಿಸ್ತಾನಿ ನಾಗರಿಕರನ್ನು ಗಡೀಪಾರು ಮಾಡಲಾಗುತ್ತಿದೆ. ಇವರಲ್ಲಿ ಶೌರ್ಯ ಚಕ್ರ ವಿಜೇತ ಹುತಾತ್ಮ ಯೋಧನ ತಾಯಿ ಮತ್ತು ಸಿಆರ್‌ಪಿಎಫ್ ಜವಾನನ ಪತ್ನಿ ಸೇರಿದ್ದಾರೆ.

ಪೂರ್ತಿ ಓದಿ
8:39 PM IST

ವಿಜಯಪುರದಲ್ಲಿ ಶೀಘ್ರವೇ ಸಚಿವ ಸಂಪುಟ ಸಭೆ: ಎಂ.ಬಿ. ಪಾಟೀಲ್

ಮುಂದಿನ ದಿನಗಳಲ್ಲಿ ವಿಜಯಪುರ ನಗರದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ. ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಅವಳಿ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ನಿರ್ಣಯಗಳನ್ನು ಕೈಗೊಳ್ಳಲಾಗುವುದು.

ಪೂರ್ತಿ ಓದಿ
8:19 PM IST

ಕರ್ನಾಟಕದಲ್ಲಿ ಹುಲಿ ಉಗುರು ಕೇಸ್ ತಣ್ಣಗಾಯ್ತು, ಕೇರಳದಲ್ಲಿ ಹುಲಿ ಹಲ್ಲು ಲಾಕೆಟ್ ಕೇಸ್ ಸದ್ದು ಜೋರಾಯ್ತು!

ರ‍್ಯಾಪರ್ ವೇಡನ್ ಬಳಸುತ್ತಿದ್ದ ಹುಲಿ ಹಲ್ಲು ಲಾಕೆಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜ್ಯುವೆಲ್ಲರಿ ಮಾಲೀಕರು ಹಾಗೂ ವೇಡನ್ ಹೇಳಿಕೆ ನೀಡಿದ್ದಾರೆ. ವೇಡನ್‌ಗೆ ವಿದೇಶಿ ಪ್ರಜೆಯೊಬ್ಬ ಉಡುಗೊರೆಯಾಗಿ ಹುಲಿ ಹಲ್ಲು ನೀಡಿದ್ದಾಗಿ ಹೇಳಿದ್ದಾರೆ.

ಪೂರ್ತಿ ಓದಿ
8:17 PM IST

ಬೆಳಗ್ಗೆ 6 ಗಂಟೆಗೆ ಯುದ್ದ ಸ್ಟಾರ್ಟ್‌ ಮಾಡಿ ಸಂಜೆ 6 ಗಂಟೆಗೆ ಮುಗಿಸಲಿ: ಸಚಿವ ಸತೀಶ್‌ ಜಾರಕಿಹೊಳಿ

ಜಮ್ಮು ಕಾಶ್ಮೀರದ ಪಹಲ್ಗಾಮ್ ದಾಳಿಯ ಬಗ್ಗೆ ಮಾತನಾಡುತ್ತಾ, ಸಚಿವ ಸತೀಶ್ ಜಾರಕಿಹೊಳಿ ಸೇನೆಯನ್ನು ಲೇವಡಿ ಮಾಡುವ ಹೇಳಿಕೆ ನೀಡಿದ್ದಾರೆ. ಯುದ್ಧವನ್ನು ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ನಡೆಸಬಹುದು ಎಂದು ಹೇಳಿದ್ದಾರೆ.

ಪೂರ್ತಿ ಓದಿ
8:09 PM IST

ಲೇಡಿ ಪಿಎಸ್ಐ ಕಿರುಕುಳ: ಯುವಕನ ಆತ್ಮ*ಹತ್ಯೆ ಯತ್ನ!

ಚಾಮರಾಜನಗರದಲ್ಲಿ ಲೇಡಿ ಪಿಎಸ್ಐ ವರ್ಷಾ ಅವರ ಕಿರುಕುಳದಿಂದಾಗಿ ಯುವಕ ದುಷ್ಯಂತ್ ಆತ್ಮ*ಹತ್ಯೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ದುಷ್ಯಂತ್ ಮೇಲೆ ಹಲ್ಲೆ ಪ್ರಕರಣ ದಾಖಲಾಗಿದ್ದು, ಪಿಎಸ್ಐ ವರ್ಷಾ ಪದೇ ಪದೇ ಮನೆಗೆ ಬಂದು ಕಿರುಕುಳ ನೀಡುತ್ತಿದ್ದರು ಎಂದು ದುಷ್ಯಂತ್ ಪೋಷಕರು ಆರೋಪಿಸಿದ್ದಾರೆ. ದುಷ್ಯಂತ್ ಈಗ ಚಾಮರಾಜನಗರದ ಸಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪೂರ್ತಿ ಓದಿ
7:42 PM IST

ಕೊಡಗು ಪೊಲೀಸ್ ಶ್ವಾನ ಪೃಥ್ವಿ ಇನ್ನಿಲ್ಲ, ಕರ್ತವ್ಯ ಮುಗಿಸಿದ ಶಿಸ್ತಿನ ಸಿಪಾಯಿ

ಕೊಡಗು ಜಿಲ್ಲಾ ಪೊಲೀಸ್ ಇಲಾಖೆಯ ಸ್ಫೋಟಕ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ 9 ವರ್ಷದ ಲ್ಯಾಬ್ರಡಾಲ್ ರಿಟ್ರಿವರ್ ತಳಿಯ ಶ್ವಾನ ಪೃಥ್ವಿ ಹೃದಯಾಘಾತದಿಂದ ಮೃತಪಟ್ಟಿದೆ. ಹಲವಾರು ವಿಐಪಿಗಳ ಭದ್ರತಾ ಕೆಲಸ ನಿರ್ವಹಿಸಿದ್ದ ಪೃಥ್ವಿಗೆ ಪೊಲೀಸ್ ಇಲಾಖೆ ಅಂತಿಮ ನಮನ ಸಲ್ಲಿಸಿದೆ.

ಪೂರ್ತಿ ಓದಿ
7:40 PM IST

ಪಹಲ್ಗಾಮ್ ಉಗ್ರರ ದಾಳಿಯಿಂದ ಜೀವ ಉಳಿಸಿದ ದೇವರಿಲ್ಲದ ದೇವಸ್ಥಾನ!

ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ಉಗ್ರರ ದಾಳಿಯಿಂದ ಕಾಫಿನಾಡ ಕುಟುಂಬವೊಂದು ಪವಾಡ ಸದೃಶ ಪಾರಾಗಿದೆ. ದೇವರಿಲ್ಲದ ದೇವಾಲಯಕ್ಕೆ ಭೇಟಿ ನೀಡಿದ್ದರಿಂದ ಉಗ್ರರ ದಾಳಿಯಿಂದ ಪಾರಾಗಿದ್ದಾರೆ. ಸ್ಥಳೀಯರ ಸಹಾಯದಿಂದ ಸುರಕ್ಷಿತವಾಗಿ ಹಿಂದಿರುಗಿದ್ದಾರೆ.

ಪೂರ್ತಿ ಓದಿ
7:38 PM IST

ಪಹಲ್ಗಾಮ್ ದಾಳಿ: ಭಯೋತ್ಪಾದನೆಗೆ ಪ್ರತ್ಯುತ್ತರ ನೀಡಲು ಸೇನೆಗೆ ಮುಕ್ತ ಅವಕಾಶ

ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪ್ರಧಾನಿ ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು. ಭಯೋತ್ಪಾದನೆ ವಿರುದ್ಧ ಕ್ರಮ ಕೈಗೊಳ್ಳಲು ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ದಾಳಿಯ ಮಾಸ್ಟರ್ ಮೈಂಡ್ ಪಾಕಿಸ್ತಾನದ ಮಾಜಿ ಎಸ್‌ಎಸ್‌ಜಿ ಕಮಾಂಡರ್ ಹಾಶಿಂ ಮೂಸಾ ಎಂದು ಗುಪ್ತಚರ ಸಂಸ್ಥೆಗಳು ತಿಳಿಸಿವೆ.

ಪೂರ್ತಿ ಓದಿ
6:40 PM IST

ನಮ್ಮ ಮೆಟ್ರೋ ಸೌಂದರ್ಯ ಗಬ್ಬೆಬ್ಬಿಸಲು ಬಿಎಂಆರ್‌ಸಿಎಲ್ ಜಾಹೀರಾತು ಒಪ್ಪಂದ

ಬೆಂಗಳೂರು ಮೆಟ್ರೋ ರೈಲು ನಿಲ್ದಾಣಗಳು, ಆವರಣಗಳು ಮತ್ತು ರೈಲುಗಳ ಒಳಭಾಗದಲ್ಲಿ ಜಾಹೀರಾತು ಪ್ರದರ್ಶನಕ್ಕೆ ಬಿಎಂಆರ್‌ಸಿಎಲ್ ಎರಡು ಸಂಸ್ಥೆಗಳೊಂದಿಗೆ ವಾರ್ಷಿಕ 3.5 ಕೋಟಿ ರೂ.ಗೆ ಒಪ್ಪಂದ ಮಾಡಿಕೊಂಡಿದೆ.  ಈ ಮೂಲಕ ಸುಂದರ ಮತ್ತು ಸ್ವಚ್ಛವಾಗಿರುವ ನಮ್ಮ ಮೆಟ್ರೋವನ್ನು ಗಬ್ಬೆಬ್ಬಿಸಲು ಮುಂದಾಗಿದೆ.

ಪೂರ್ತಿ ಓದಿ
6:27 PM IST

ಪ್ರಧಾನಿ ಮೋದಿ ನೇತೃತ್ವದಲ್ಲಿ ಪ್ರಮುಖ ಭದ್ರತಾ ಸಭೆ, ರಕ್ಷಣಾ ಸಚಿವ, NSA, ಸೇನಾ ಮುಖ್ಯಸ್ಥರು ಭಾಗಿ!

ಪ್ರಧಾನಿ ಮೋದಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೋವಲ್ ಮತ್ತು ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಅನಿಲ್ ಚೌಹಾಣ್ ಸೇರಿದಂತೆ ಪ್ರಮುಖ ಅಧಿಕಾರಿಗಳೊಂದಿಗೆ ರಕ್ಷಣಾ ಸಭೆ ನಡೆಸಿದರು.

ಪೂರ್ತಿ ಓದಿ
6:06 PM IST

ಪಹಲ್ಗಾಮ್‌ ದಾಳಿ: ಮಹಾರಾಷ್ಟ್ರದ ಸಂತ್ರಸ್ಥ ಕುಟುಂಬಕ್ಕೆ 50 ಲಕ್ಷ ಪರಿಹಾರ, ಉದ್ಯೋಗ ಭರವಸೆ ನೀಡಿದ ಫಡ್ನವಿಸ್‌!

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ಮಹಾರಾಷ್ಟ್ರದ ಪ್ರವಾಸಿಗರ ಕುಟುಂಬಗಳಿಗೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ₹50 ಲಕ್ಷ ಪರಿಹಾರ ಘೋಷಿಸಿದ್ದಾರೆ. ಸರ್ಕಾರವು ಶಿಕ್ಷಣ ಮತ್ತು ಉದ್ಯೋಗದಲ್ಲೂ ಸಹಾಯ ಮಾಡಲಿದೆ.

ಪೂರ್ತಿ ಓದಿ
5:30 PM IST

ಬೆಂಗಳೂರು-ಮೈಸೂರು ಹೆದ್ದಾರಿಗೆ ಹೊಸ ಎಂಟ್ರಿ-ಎಕ್ಸಿಟ್; ಸಂಸದ ಡಾ.ಸಿ.ಎನ್. ಮಂಜುನಾಥ್

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೇಗೆ ಚನ್ನಪಟ್ಟಣ ತಾಲ್ಲೂಕಿನಿಂದ ಪ್ರವೇಶ ಮತ್ತು ನಿರ್ಗಮನ ಕಲ್ಪಿಸಲು ಹೊಸ ವ್ಯವಸ್ಥೆ. ರಾಂಪುರ ಬದಲಿಗೆ ಕಣ್ವ ಜಂಕ್ಷನ್ ಬಳಿ ಪ್ರವೇಶ ಮತ್ತು ನಿರ್ಗಮನ ಒದಗಿಸಲು ಚಿಂತನೆ.

ಪೂರ್ತಿ ಓದಿ
4:59 PM IST

ಪಹಲ್ಗಾಮ್‌ ದಾಳಿ: ಗೃಹ ಸಚಿವಾಲಯದ ಜೊತೆ NSG, BSF, CRPF, SSB ಸಭೆ

ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಗೃಹ ಸಚಿವಾಲಯದಲ್ಲಿ ಉನ್ನತ ಮಟ್ಟದ ಸಭೆ ನಡೆದಿದ್ದು, ಪ್ರತೀಕಾರದ ಕ್ರಮಗಳ ಕುರಿತು ಚರ್ಚಿಸಲಾಗಿದೆ. ಕಾಶ್ಮೀರದಲ್ಲಿ ಸೇನಾ ಕಾರ್ಯಾಚರಣೆ ನಡೆಯುತ್ತಿದ್ದು, ದಾಳಿಯ ಮಾಸ್ಟರ್ ಮೈಂಡ್ ಪಾಕಿಸ್ತಾನದ ಮಾಜಿ ಎಸ್‌ಎಸ್‌ಜಿ ಕಮಾಂಡರ್ ಹಾಶಿಂ ಮೂಸಾ ಎಂದು ಗುರುತಿಸಲಾಗಿದೆ.

ಪೂರ್ತಿ ಓದಿ
4:56 PM IST

ಬೆಂಗಳೂರು ಕಂಟೋನ್ಮೆಂಟ್‌ನ 368 ಮರಗಳ ಮಾರಣಹೋಮಕ್ಕೆ ಕೊಡಲಿ ಹಿಡಿದು ನಿಂತ ಬಿಬಿಎಂಪಿ!

ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೆ ಕಾಲೋನಿಯಲ್ಲಿ 368 ಮರಗಳನ್ನು ಕಡಿಯುವ ಪಗ್ರಸ್ತಾಪವನ್ನು ಬಿಬಿಎಂಪಿ ಸಾರ್ವಜನಿಕರ ಮುಂದಿಟ್ಟಿದೆ. ಆದರೆ, ಪರಿಸರಕ್ಕಾಗಿ ನಾವು ಸಂಘಟನೆಯು ಮರಗಳನ್ನು ಉಳಿಸುವಂತೆ ಸಚಿವ ಈಶ್ವರ ಖಂಡ್ರೆ ಅವರಿಗೆ ಮನವಿ ಮಾಡಿದೆ.

ಪೂರ್ತಿ ಓದಿ
4:37 PM IST

ಪಹಲ್ಗಾಮ್‌ನ ಕಣ್ಣೀರ ಕಥೆ, ಎಕ್ಸಿಟ್‌ ಗೇಟ್‌ನಲ್ಲಿ ಗನ್‌ಶಾಟ್‌, ಎಂಟ್ರಿ ಗೇಟ್‌ ಬಳಿ ಓಡಿದ್ದ ಟೂರಿಸ್ಟ್‌ಗಳು!

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಬದುಕುಳಿದವರು ಮತ್ತು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳು ಭಯಾನಕ ಘಟನೆಗಳನ್ನು ಬಹಿರಂಗಪಡಿಸಿವೆ. ಭಯೋತ್ಪಾದಕರು ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ನಿರ್ಬಂಧಿಸಿದ್ದರಿಂದ ಪ್ರವಾಸಿಗರಿಗೆ ತಪ್ಪಿಸಿಕೊಳ್ಳಲು ಯಾವುದೇ ಮಾರ್ಗವಿರಲಿಲ್ಲ.

ಪೂರ್ತಿ ಓದಿ
4:37 PM IST

ಅಕ್ಷಯ ತೃತೀಯಾ 2025: ಚಿನ್ನ ಖರೀದಿಗೆ ಶುಭ ದಿನ

: ಈ ಬಾರಿ ಅಕ್ಷಯ ತೃತೀಯಾ ಏಪ್ರಿಲ್ 30, ಬುಧವಾರದಂದು ಆಚರಿಸಲಾಗುತ್ತದೆ. ಈ ದಿನ ಚಿನ್ನ ಖರೀದಿಸುವುದು ಬಹಳ ಶುಭ ಎಂದು ನಂಬಲಾಗಿದೆ.

 

ಪೂರ್ತಿ ಓದಿ
4:31 PM IST

15 ಸ್ಥಳೀಯ ಕಾಶ್ಮೀರಿಗಳ ಹಿಡಿದು ರುಬ್ಬಿದ NIA: ಬಯಲಾಯ್ತು ಹಲವು ಸ್ಫೋಟಕ ಸಂಗತಿ

ಪಹಲ್ಗಾಮ್ ದಾಳಿಗೆ ಸಂಬಂಧಿಸಿದಂತೆ 15 ಕಾಶ್ಮೀರಿಗಳನ್ನು ಎನ್‌ಐಕೆ ವಶಕ್ಕೆ ಪಡೆದು ವಿಚಾರಣೆ ನಡೆಸಿದು ಹಲವು ಸ್ಫೋಟಕ ವಿಚಾರಗಳು ಬೆಳಕಿಗೆ ಬಂದಿವೆ.

ಪೂರ್ತಿ ಓದಿ
4:03 PM IST

ಗ್ರಾಹಕರಿಂದ ಪಡೆದ ಸೇವಾ ಶುಲ್ಕ ವಾಪಸಾತಿಗೆ ರೆಸ್ಟೋರೆಂಟ್‌ಗಳಿಗೆ ಆದೇಶ!

ದೆಹಲಿ ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿ ಸೇವಾ ಶುಲ್ಕ ವಿಧಿಸಿದ 5 ರೆಸ್ಟೋರೆಂಟ್‌ಗಳ ವಿರುದ್ಧ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA) ಕ್ರಮ ಕೈಗೊಂಡಿದೆ. ಕಡ್ಡಾಯ ಸೇವಾ ಶುಲ್ಕದ ಮೊತ್ತವನ್ನು ಮರುಪಾವತಿಸುವಂತೆ ರೆಸ್ಟೋರೆಂಟ್‌ಗಳಿಗೆ ನಿರ್ದೇಶನ ನೀಡಲಾಗಿದೆ.

ಪೂರ್ತಿ ಓದಿ
3:58 PM IST

ಕ್ಲೈಂಟ್‌ಗೆ ಬಾಯ್ತಪ್ಪಿ ಲವ್ ಯು ಎಂದ ಉದ್ಯೋಗಿ, ಮರು ದಿನ ಇಮೇಲ್ ನೋಡಿ ನಾಚಿ ನೀರಾದ

ಸಂಜೆಯಾಗಿದೆ, ಕೆಲಸ ಮುಗಿಯುತ್ತಾ ಬಂದಿದೆ. ಕ್ಲೈಂಟ್ ಜೊತೆ ಮಾತನಾಡುತ್ತಾ ಇನ್ನೇನು ಕರೆ ಕಟ್ ಮಾಡಬೇಕು ಅನ್ನುವಷ್ಟರಲ್ಲಿ ಉದ್ಯೋಗಿ ಒಕೆ, ಒಕೆ ಲವ್ ಯು ಎಂದಿದ್ದಾನೆ. ಅಚಾನಕ್ಕಾಗಿ ಈ ಮಾತುಗಳು ಬಂದಿದೆ. ಆದರೆ ಮರುದಿನ ಅದೇ ಕ್ಲೈಂಟ್‌ನಿಂದ ಬಂದ ಇಮೇಲ್ ನೋಡಿ ಉದ್ಯೋಗಿ ಅಚ್ಚರಿಗೊಂಡಿದ್ದಾನೆ.

ಪೂರ್ತಿ ಓದಿ
3:33 PM IST

RCB ಆಟಗಾರನ ಫ್ಯಾನಾ ಅಲ್ಲ ಗರ್ಲ್‌ಫ್ರೆಂಡಾ: ನಟಿ ಧನ್ಯ ರಾಮ್‌ಕುಮಾರ್‌ ಫೋಟೋ ಸಖತ್ ವೈರಲ್

ಆರ್‌ಸಿಬಿ ಕ್ರಿಕೆಟಿಗ ದೇವದತ್ ಪಡಿಕ್ಕಲ್ ಮತ್ತು ನಟಿ ಧನ್ಯಾ ರಾಮ್‌ಕುಮಾರ್ ನಡುವಿನ ಸಂಬಂಧದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ನಡೆಯುತ್ತಿವೆ. ಧನ್ಯಾ, ದೇವದತ್ ಅವರ ಜೆರ್ಸಿ ಧರಿಸಿ ಫೋಟೋ ತೆಗೆಸಿಕೊಂಡಿದ್ದು ಈ ವದಂತಿಗಳಿಗೆ ಕಾರಣವಾಗಿದೆ. ಆದರೆ, ಇದು ಕೇವಲ ಗಾಸಿಪ್ ಎಂಬ ಮಾತುಗಳು ಕೇಳಿಬಂದಿವೆ.

ಪೂರ್ತಿ ಓದಿ
3:24 PM IST

ತಿಂಗಳಿಗೆ 200 ರೂ ಕೊಡಿ, ಮ ನೆ ಮನೆಗೆ 100 Mbps ಇಂಟರ್‌ನೆಟ್‌ ತಗೊಳ್ಳಿ ಎಂದ ಸರ್ಕಾರ!

200 ರೂಪಾಯಿಗೆ 100mbps ಸ್ಪೀಡ್‌ನಲ್ಲಿ ಇಂಟರ್‌ನೆಟ್‌ ಸಿಗತ್ತೆ ಎನ್ನೋದು ಸದ್ಯ ಕರ್ನಾಟಕದಲ್ಲಿ ಕನಸು ಎನ್ನಬಹುದು. ಆದರೆ ತಮಿಳುನಾಡು ಸರ್ಕಾರವು ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲಿದೆಯಂತೆ. 
 

ಪೂರ್ತಿ ಓದಿ
2:56 PM IST

ಪಾಕಿಸ್ತಾನದ ಮೇಲೆ ಮತ್ತೊಂದು ಕ್ರಮ ಜರುಗಿಸಿದ ಭಾರತ, ಪಾಕ್ ರಕ್ಷಣಾ ಸಚಿವರ ಎಕ್ಸ್ ಖಾತೆ ಬ್ಲಾಕ್

ಪೆಹಲ್ಗಾಮ್ ದಾಳಿ ಬಳಿಕ ಜಮ್ಮು ಮತ್ತು ಕಾಶ್ಮೀರ ವಿರುದ್ಧ ಸುಳ್ಳು ಸುದ್ದಿ, ನಕಲಿ ಮಾಹಿತಿ ಹರಡುತ್ತಿದ್ದ ಪಾಕಿಸ್ತಾನ ರಕ್ಷಣಾ ಸಚಿವನ ಎಕ್ಸ್ ಖಾತೆಯನ್ನು ಕೇಂದ್ರ ಸರ್ಕಾರ ಭಾರತದಲ್ಲಿ ಬ್ಲಾಕ್ ಮಾಡಿದೆ.

ಪೂರ್ತಿ ಓದಿ
2:49 PM IST

ಗಾಂಜಾ ಕೇಸಲ್ಲಿ ಸಿಕ್ಕಿಬಿದ್ದ ಕೇರಳ ರಾಪರ್‌ಗೆ ಹುಲಿ ಹಲ್ಲು ಸಂಕಷ್ಟ!

ಗಾಂಜಾ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಬಂದ ರಾಪರ್ ವೇದನ್, ಈಗ ಹುಲಿಯ ಹಲ್ಲು ಪೆಂಡೆಂಟ್ ಧರಿಸಿದ್ದಕ್ಕಾಗಿ ಮತ್ತೊಂದು ಪ್ರಕರಣವನ್ನು ಎದುರಿಸುತ್ತಿದ್ದಾರೆ. ಅಭಿಮಾನಿಯೊಬ್ಬ ಈ ಹಲ್ಲನ್ನು ಉಡುಗೊರೆಯಾಗಿ ನೀಡಿದ್ದಾಗಿ ಹೇಳಲಾಗಿದ್ದು, ಅರಣ್ಯ ಇಲಾಖೆ ತನಿಖೆ ನಡೆಸುತ್ತಿದೆ.

ಪೂರ್ತಿ ಓದಿ
2:18 PM IST

ಗುಡ್ ನ್ಯೂಸ್ ಕೊಡುವ ಮೊದಲು ತಿಳಿದಿರಲಿ, ಈಗಿನ ಕಾಲದಲ್ಲಿ ಅಪ್ಪನಾಗಲು ಸೂಕ್ತ ವಯಸ್ಸೆಷ್ಟು?

ನ್ಯೂ ಜನರೇಶನ್, ಹೊಸ ಹೊಸ ರಿಲೇಶನ್‌ಶಿಪ್ ಟ್ರೆಂಡ್, ಆರೋಗ್ಯ ಸವಾಲುಗಳು ನಡುವೆ ಅಪ್ಪನಾಗಲು ಸೂಕ್ತ ವಯಸ್ಸು ಇದೆಯಾ? ಮದುವೆ ಬಳಿಕ ಯಾವಾಗ ತಂದೆಯಾಗಬಹುದು?  ಯಾವೆಲ್ಲಾ ಅಂಶ ಪರಿಗಣಿಸಬೇಕಾಗುತ್ತೆ?
 

ಪೂರ್ತಿ ಓದಿ
2:17 PM IST

ಮಾಫಿಯಾದವರು ಓಡಿ ಹೋಗಿ, ಹೂಡಿಕೆದಾರರು ಬಂದ್ರು: ಸಿಎಂ ಯೋಗಿ ಆದಿತ್ಯನಾಥ್

ಯೋಗಿ ಆದಿತ್ಯನಾಥ್ ಯುಪಿ 7ನೇ ಸ್ಥಾನದಿಂದ 2ನೇ ಅತಿದೊಡ್ಡ ಆರ್ಥಿಕತೆಯಾಗಿ ಹೇಗೆ ಬೆಳೆಯಿತು ಎಂದು ವಿವರಿಸಿದ್ದಾರೆ. ಸುರಕ್ಷತೆ, ಮೂಲಸೌಕರ್ಯ ಮತ್ತು ಹೂಡಿಕೆಗೆ ಒತ್ತು ನೀಡಲಾಗಿದೆ. 

ಪೂರ್ತಿ ಓದಿ
2:15 PM IST

ಇಂದಿನಿಂದ 3 ರಾಶಿಗೆ ಅದೃಷ್ಟ, ವೃಷಭ ರಾಶಿಯಲ್ಲಿ ಚಂದ್ರನ ಸಂಚಾರ

ಚಂದ್ರನು ಶುಕ್ರನ ರಾಶಿಚಕ್ರಕ್ಕೆ ಪ್ರವೇಶಿಸಲಿದ್ದು, ಇದು 3 ರಾಶಿಚಕ್ರ ಚಿಹ್ನೆಗಳ ಜನರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಬಹುದು. 
 

ಪೂರ್ತಿ ಓದಿ
1:46 PM IST

ಬಿಜೆಪಿಯಿಂದ ದೇಶಭಕ್ತಿ ಕಲಿಬೇಕಿಲ್ಲ; ಕಾಂಗ್ರೆಸ್ ಪಕ್ಷಕ್ಕೆ ಬಹಳ ಸ್ಪಷ್ಟ ನಿಲುವಿದೆ: ಬಿಕೆ ಹರಿಪ್ರಸಾದ್

ಬಿಜೆಪಿಯ 'ಕಾಂಗ್ರೆಸ್ ಕೆ ಹಾಥ್ - ಪಾಕಿಸ್ತಾನ್ ಕೆ ಸಾಥ್' ಎಂಬ ಟೀಕೆಯನ್ನು ಬಿಕೆ ಹರಿಪ್ರಸಾದ್ ಖಂಡಿಸಿದ್ದಾರೆ. ತಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎಂದು ಆರೋಪಿಸಿ, ಬಿಜೆಪಿ ಸೋಷಿಯಲ್ ಮೀಡಿಯಾ ರಾಜಕಾರಣ ಮತ್ತು ಸ್ಲೋಗನ್‌ಗಳ ಮೂಲಕ ವಾತಾವರಣ ಹಾಳುಗೆಡವುತ್ತಿದೆ ಎಂದಿದ್ದಾರೆ. ಕೇಂದ್ರ ಸರ್ಕಾರ ಉಗ್ರ ದಾಳಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

ಪೂರ್ತಿ ಓದಿ
1:38 PM IST

ಪ್ರಧಾನಿಗೆ ಸರ್‌ ತನ್‌ ಸೇ ಜುಧಾ ಎಂದಿತಾ ಕಾಂಗ್ರೆಸ್‌: ಕೈ ಟ್ವಿಟ್‌ಗೆ ಬಿಜೆಪಿ ತೀವ್ರ ಆಕ್ರೋಶ

ಪ್ರಧಾನಿ ಮೋದಿಯವರನ್ನು ಟಾರ್ಗೆಟ್ ಮಾಡಿ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಡಿದ ಪೋಸ್ಟ್‌ಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಪೂರ್ತಿ ಓದಿ
1:13 PM IST

ನನ್ನ ಪತಿಗೆ ಧರ್ಮ ಕೇಳಿ ಶೂಟ್ ಮಾಡಿಲ್ಲ, ಮಿಕ್ಕವರಿಗೆ ಕೇಳಿದ್ದು ಹೌದು: ಪಲ್ಲವಿ

ಪಹಲ್ಗಾಂನಲ್ಲಿ ಭಯೋತ್ಪಾದಕರು ತನ್ನ ಪತಿಯನ್ನು ಕೊಂದಾಗ, "ನಮ್ಮನ್ನು ಸಾಯಿಸಿ" ಎಂದು ತಾನು ಮತ್ತು ತನ್ನ ಮಗ ಕೂಗಿದ್ದಾಗಿ ಮಂಜುನಾಥ್ ರಾವ್ ಪತ್ನಿ ಪಲ್ಲವಿ ಹೇಳಿದ್ದಾರೆ. ಈ ಹೇಳಿಕೆಗೆ ನೆಗೆಟಿವ್ ಕಾಮೆಂಟ್ಸ್ ಬರುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಘಟನೆಯನ್ನು ವಿವರಿಸಲು ಮನಸ್ಸಿಲ್ಲ ಎಂದು ಮನವಿ ಮಾಡಿದ್ದಾರೆ.

ಪೂರ್ತಿ ಓದಿ
1:12 PM IST

ಕೆನಡಾ ನೂತನ ಪ್ರಧಾನಿಯಾಗಿ ಮಾರ್ಕ್ ಕಾರ್ನೆ ಆಯ್ಕೆ ಬಹುತೇಕ ಖಚಿತ, ಭಾರತಕ್ಕೇನು ಲಾಭ?

ಕೆನಡಾ ಚುನಾವಣೆಯಲ್ಲಿ ಲಿಬರಲ್ ಪಾರ್ಟಿ ಅಭೂತಪೂರ್ವ ಗೆಲುವು ಸಾಧಿಸಿದೆ. ಇದೀಗ ಲಿಬರಲ್ ಪಾರ್ಟಿ ನಾಯಕ ಮಾರ್ಕ್ ಕಾರ್ನೆ ಕೆನಡಾ ನೂತನ ಪ್ರಧಾನಿಯಾಗಿ ಮರಳುವುದು ಬಹುತೇಕ ಖಚಿತವಾಗಿದೆ.

ಪೂರ್ತಿ ಓದಿ
1:09 PM IST

ಮಗನನ್ನು ಕ್ರಿಕೆಟರ್ ಮಾಡಲು ಇದ್ದ ಜಮೀನು ಮಾರಿದ ವೈಭವ್ ತಂದೆ! ಅವರ ತ್ಯಾಗಕ್ಕೆ ಸೆಲ್ಯೂಟ್

14 ವರ್ಷದ ವೈಭವ್ ಸೂರ್ಯವಂಶಿ ಐಪಿಎಲ್‌ನಲ್ಲಿ ಶತಕ ಸಿಡಿಸಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ರಾಜಸ್ಥಾನ ರಾಯಲ್ಸ್ ಪರ ಆಡುತ್ತಿರುವ ಈ ಬಿಹಾರದ ಹುಡುಗ, ಗುಜರಾತ್ ಟೈಟಾನ್ಸ್ ವಿರುದ್ಧ ಈ ಸಾಧನೆ ಮಾಡಿದ್ದಾರೆ. ವೈಭವ್‌ರ ಈ ಸಾಧನೆಯ ಹಿಂದೆ ಅವರ ಪರಿಶ್ರಮ ಮತ್ತು ಪೋಷಕರ ತ್ಯಾಗ ಅಡಗಿದೆ.

ಪೂರ್ತಿ ಓದಿ
12:53 PM IST

ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಹೋರಾಟ ಮುಂದುವರಿಯುತ್ತೆ: ಕೇಂದ್ರದ ವಿರುದ್ಧ ಸುರ್ಜೇವಾಲಾ ವಾಗ್ದಾಳಿ!

ರಾಜ್ಯ ಸರ್ಕಾರ ಜನರ ಮೇಲೆ ತೆರಿಗೆ ಹೊರೆ ಹೇರಿದೆ ಎಂದು ಆರೋಪಿಸುವ ಬಿಜೆಪಿ ನಾಯಕರು ಕೇಂದ್ರ ಸರ್ಕಾರದ ಬೆಲೆ ಏರಿಕೆಯನ್ನು ಟೀಕಿಸಬೇಕು ಎಂದು ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ. ಪಂಚ ಗ್ಯಾರಂಟಿ ಯೋಜನೆಗಳಿಂದ ಕುಟುಂಬಗಳ ಆರ್ಥಿಕ ಸ್ಥಿತಿ ಸುಧಾರಿಸಿದೆ ಎಂದು ಅವರು ಹೇಳಿದರು.

ಪೂರ್ತಿ ಓದಿ
12:46 PM IST

ದುಡ್ಡು ಕೊಟ್ಟರೆ ಸರಿ, ಇಲ್ಲದಿದ್ರೆ ಅಶ್ಲೀಲ ಫೋಟೋ ವೈರಲ್‌ ಆಗತ್ತೆ: ಅಂತರಪಟ ನಟಿ ಶರ್ಮಿಳಾ ಚಂದ್ರಶೇಖರ್‌ಗೆ ಬೆದರಿಕೆ

threatening call to antarapata serial actress sharmila chandrashekar: ಕನ್ನಡ ಸೇರಿದಂತೆ ಬೇರೆ ಭಾಷೆಯ ಧಾರಾವಾಹಿಗಳಲ್ಲಿ ನಟಿಸಿರುವ ಶರ್ಮಿಳಾ ಚಂದ್ರಶೇಖರ್‌ ಅವರಿಗೆ ಬೆದರಿಕೆ ಕರೆಯೊಂದು ಬಂದಿದೆ. ಕಿಡಿಗೇಡಿಗಳು ಈಗ ಶರ್ಮಿಳಾರನ್ನು ಟಾರ್ಗೆಟ್‌ ಮಾಡಿದ್ದಾರೆ. ಹಾಗಾದರೆ ಅಸಲಿ ವಿಷಯ ಏನು?
 

ಪೂರ್ತಿ ಓದಿ
12:42 PM IST

ಕೆನಡಾ ಚುನಾವಣೆಯಲ್ಲಿ ಖಲಿಸ್ತಾನಿ ಪರ ನಾಯಕನಿಗೆ ಸೋಲು

ಕೆನಡಾ ಚುನಾವಣೆಯಲ್ಲಿ ಖಲಿಸ್ತಾನಿ ಪರ ನಾಯಕ ಜಗ್ಮಿತ್ ಸಿಂಗ್ ಸೋಲು ಕಂಡಿದ್ದು, ಪಕ್ಷದ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 

ಪೂರ್ತಿ ಓದಿ
12:38 PM IST

ಕಾಶ್ಮೀರದಲ್ಲಿ ಹೈ ಅಲರ್ಟ್,ಪೆಹಲ್ಗಾಂ ರೀತಿಯಲ್ಲಿ ದಾಳಿಗೆ ಸಂಚು, ಕಾಶ್ಮೀರದ 48 ಪ್ರವಾಸಿ ತಾಣ ಬಂದ್

ಪೆಹಲ್ಗಾಂ ದಾಳಿಯ ಒಂದು ವಾರದಲ್ಲಿ ಕಾಶ್ಮೀರದ ಬಹುತೇಕ ಕಡೆ ಹೈ ಅಲರ್ಟ್ ಘೋಷಿಸಲಾಗಿದೆ. ಕಾಶ್ಮೀರದ 87 ಪ್ರವಾಸಿ ತಾಣಗಳ ಪೈಕಿ 48 ತಾಣಗಳ ಮೇಲೆ ದಾಳಿ ಸಾಧ್ಯತೆ ಕಾರಣ ಬಂದ್ ಮಾಡಲಾಗಿದೆ.

ಪೂರ್ತಿ ಓದಿ
12:33 PM IST

ಪೋಲಿಸ್ ಅಧಿಕಾರಿ ಮೇಲೆಯೇ ಕೈ ಮಾಡಲು ಹೋಗುವ ಸಿಎಂ ಸಿದ್ದರಾಮಯ್ಯ ಗೂಂಡಾ.. ಈಶ್ವರಪ್ಪ ಕಿಡಿ

ಮಾಜಿ ಸಚಿವ ಕೆಎಸ್ ಈಶ್ವರಪ್ಪ, ಸಿಎಂ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕರನ್ನು ದೇಶವಿರೋಧಿ ಎಂದು ಕರೆದಿದ್ದಾರೆ ಮತ್ತು ಸಿದ್ದರಾಮಯ್ಯನವರ ನಡವಳಿಕೆಯನ್ನು ಟೀಕಿಸಿದ್ದಾರೆ.

ಪೂರ್ತಿ ಓದಿ
12:20 PM IST

ರೈಲ್ವೆ ನೇಮಕಾತಿಗೆ 1 ಕೋಟಿಗೂ ಹೆಚ್ಚು ಅರ್ಜಿಗಳು! ಮುಂಬೈ ಟಾಪ್, ಬೆಂಗಳೂರು ಎಷ್ಟನೇ ಸ್ಥಾನ?

ಭಾರತೀಯ ರೈಲ್ವೆ ನೇಮಕಾತಿ ಮಂಡಳಿ (RRB) 2024ರ ಗ್ರೂಪ್ ಡಿ ನೇಮಕಾತಿಗೆ 1.08 ಕೋಟಿ ಅರ್ಜಿಗಳು ಬಂದಿವೆ. ಈ ನೇಮಕಾತಿಯು ಟ್ರ್ಯಾಕ್ ಮೆಂಟೇನರ್, ಅಸಿಸ್ಟೆಂಟ್ ಪಾಯಿಂಟ್ಸ್‌ಮನ್ ಮತ್ತು ತಾಂತ್ರಿಕ ಹುದ್ದೆಗಳನ್ನು ಒಳಗೊಂಡಿದೆ.

ಪೂರ್ತಿ ಓದಿ
12:17 PM IST

ಈ ದಿನಾಂಕಗಳಲ್ಲಿ ಜನಿಸಿದ ಗಂಡಸರು ಶುದ್ಧ ಮೋಸಗಾರರು, ಮದುವೆಯಾದರೆ ಅಷ್ಟೇ

ಸಂಖ್ಯಾಶಾಸ್ತ್ರದ ಪ್ರಕಾರ, ಯಾವ ದಿನಾಂಕದಂದು ಜನಿಸಿದ ಜನರು ತಮ್ಮ ಸಂಗಾತಿಗೆ ಹೆಚ್ಚು ನಿಷ್ಠರಾಗಿರುತ್ತಾರೆ ಮತ್ತು ಯಾರಿಗೆ ಮೋಸ ಮಾಡುವ ಅಪಾಯ ಹೆಚ್ಚು ಎಂದು ನೋಡಿ.
 

ಪೂರ್ತಿ ಓದಿ
12:03 PM IST

ಬಿರು ಬೇಸಿಗೆಗೆ ಕೆರೆ, ಜಲಾಶಯ ಖಾಲಿ ಖಾಲಿ : ರಾಜ್ಯದ 17,000 ಕೆರೆಗಳಲ್ಲಿ ಶೇ.30ಕ್ಕಿಂತ ಕಡಿಮೆ ನೀರು!

ಕರ್ನಾಟಕದಲ್ಲಿ ಬೇಸಿಗೆ ಮುಗಿಯಲು ಇನ್ನೂ ಒಂದರಿಂದ ಒಂದೂವರೆ ತಿಂಗಳು ಬಾಕಿ ಇದ್ದರೂ, ರಾಜ್ಯದ ಜಲಮೂಲಗಳಲ್ಲಿ ನೀರಿನ ಕೊರತೆ ಕಾಣಿಸಿಕೊಂಡಿದೆ. 42 ಸಾವಿರ ಕೆರೆಗಳ ಪೈಕಿ 17 ಸಾವಿರ ಕೆರೆಗಳಲ್ಲಿ ಶೇ.30ಕ್ಕಿಂತ ಕಡಿಮೆ ನೀರು ಶೇಖರಣೆಯಾಗಿದ್ದು, ಗ್ರಾಮೀಣ ಭಾಗದಲ್ಲಿ ನೀರಿನ ಸಮಸ್ಯೆ ಎದುರಾಗುವ ಲಕ್ಷಣಗಳಿವೆ. ಜಲಾಶಯಗಳಲ್ಲೂ ನೀರಿನ ಕೊರತೆ ಕಾಣಿಸಿಕೊಂಡಿದೆ.

ಪೂರ್ತಿ ಓದಿ
11:40 AM IST

ಕೆನಡಾದಲ್ಲಿ ಎಎಪಿ ನಾಯಕ ಪುತ್ರಿಯ ನಿಗೂಢ ಸಾವು

ಕೆನಡಾದಲ್ಲಿ ಈಗ ಪಂಜಾಬ್ ಮೂಲದ ಎಎಪಿ ನಾಯಕನ ಪುತ್ರಿಯೊಬ್ಬಳು ನಿಗೂಢವಾಗಿ ಸಾವನ್ನಪ್ಪಿದ್ದು, ಈ ಸಾವಿನ ಬಗ್ಗೆ ಹಲವು ಅನುಮಾನ ಮೂಡಿದೆ.

ಪೂರ್ತಿ ಓದಿ
11:17 AM IST

ಶ್ರೀರಾಮಸೇನೆ, ಬಜರಂಗದಳದಿಂದ ದೇಶದ ಸೈನಿಕರ ಯಶಸ್ಸಿಗಾಗಿ ಮಹಾಯಾಗ!

ಭಾರತ-ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಬೆಂಗಳೂರಿನಲ್ಲಿ ಶ್ರೀರಾಮ ಸೇನೆಯು ಭಾರತೀಯ ಸೈನಿಕರ ಯಶಸ್ಸಿಗಾಗಿ ವಿಶೇಷ ಮಹಾಯಾಗ ಮತ್ತು ಶೋಭಾಯಾತ್ರೆ ನಡೆಸಿತು. ಪೇಜಾವರ ಶ್ರೀಗಳು, ಪ್ರಮೋದ್ ಮುತಾಲಿಕ್ ಸೇರಿದಂತೆ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಪೂರ್ತಿ ಓದಿ
11:14 AM IST

ಗಂಡ ಹೆಂಡತಿ ಮಲಗೋ ಬೆಡ್​​ರೂಮ್‌ನಲ್ಲಿ ಇದು ಇದ್ದರೆ ಸ್ವರ್ಗಕ್ಕೆ ಮೂರೇ ಗೇಣು

ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ಬಿರುಕು ಇದ್ದರೆ ಅಥವಾ ನಿಮ್ಮ ಸಂಬಂಧದಲ್ಲಿ ಮಾಧುರ್ಯವನ್ನು ತರಲು ಬಯಸಿದರೆ, ನೀವು ಈ ಅದೃಷ್ಟದ ವಸ್ತುಗಳನ್ನು ಮಲಗುವ ಕೋಣೆಯಲ್ಲಿ ಇಡಬಹುದು.
 

ಪೂರ್ತಿ ಓದಿ
11:11 AM IST

ಚೀನಾಗೆ ಕಾಶ್ಮೀರ ಜಾಗದ ಆಫರ್, ಪ್ರತಿಯಾಗಿ ಭಾರತಕ್ಕೆ ಬ್ರಹ್ಮಪುತ್ರ ನದಿ ನೀರು ನಿಲ್ಲಿಸಲು ಪಾಕ್ ಮನವಿ

ಚೀನಾದ ಎಕಾನಾಮಿಕ್ ಕಾರಿಡಾರ್ ಯೋಜನೆಗೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಮತ್ತಷ್ಟು ಅನುಕೂಲತೆ ಕಲ್ಪಿಸಲು ಆಫರ್ ಮುಂದಿಟ್ಟು ವಿಶೇಷ ಬೇಡಿಕೆಯನ್ನು ಚೀನಾ ಮುಂದಿಟ್ಟಿದೆ. ಭಾರತಕ್ಕೆ ಹರಿಯುವ ಬ್ರಹ್ಮಪುತ್ರ ನದಿ ನೀರು ನಿಲ್ಲಿಸಲು ಪಾಕಿಸ್ತಾನ ಚೀನಾ ಬಳಿ ಮನವಿ ಮಾಡಿದೆ.

ಪೂರ್ತಿ ಓದಿ
11:03 AM IST

'ನಾನು ಭೂಮಿಗೆ ಭಾರ, ಕೂಳಿಗೆ ದಂಡ'; ಕಣ್ಣೀರು ಹಾಕಿದ Aamir Khan ಪುತ್ರಿ ಇರಾ ಖಾನ್

Actor aamir khan daughter ira khan: ಬಾಲಿವುಡ್‌ ನಟ ಆಮಿರ್‌ ಖಾನ್‌ ಅವರ ಮಗಳು ಇರಾ ಖಾನ್‌ಗೆ ತಮ್ಮ ಮೇಲೆ ಬೇಸರ ಆಗಿದೆಯಂತೆ. ನಾನು ಹಣ ಮಾಡ್ತಿಲ್ಲ, ನಿಷ್ಪ್ರಯೋಜಕ ಎಂದು ಅವರು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. 
 

ಪೂರ್ತಿ ಓದಿ
10:54 AM IST

ಹವಾನಿಯಂತ್ರಿತ ಪಾಲಿಕೆ ಬಜಾರ್‌ಗೆ ಗ್ರಹಣ : 8 ತಿಂಗಳಾದರೂ ಬಳಕೆಯಾಗದ ಮಾರುಕಟ್ಟೆ!

ವಿಜಯನಗರದಲ್ಲಿ ಬಿಬಿಎಂಪಿ ನಿರ್ಮಿಸಿದ ದಕ್ಷಿಣ ಭಾರತದ ಮೊದಲ ಅಂಡರ್‌ಗ್ರೌಂಡ್‌ ಹವಾನಿಯಂತ್ರಿತ ಮಾರುಕಟ್ಟೆ ಉದ್ಘಾಟನೆಯಾಗಿ 8 ತಿಂಗಳು ಕಳೆದರೂ ಸಾರ್ವಜನಿಕ ಬಳಕೆಗೆ ಲಭ್ಯವಿಲ್ಲ. 13 ಕೋಟಿ ವೆಚ್ಚದ ಈ ಮಾರುಕಟ್ಟೆ ಧೂಳು ಹಿಡಿದಿದ್ದು, ಅನಧಿಕೃತ ಬಳಕೆದಾರರ ಪಾಲಾಗಿದೆ.

ಪೂರ್ತಿ ಓದಿ
10:48 AM IST

ಕಂದನ ಮೇಲೆ ಮುಗಿಬೀಳುತ್ತಿದ್ದ ಸಿಂಹಗಳನ್ನು ಏಕಾಂಗಿಯಾಗಿ ದೂರ ಓಡಿಸಿದ ಕಾಡೆಮ್ಮ

ಕೀನ್ಯಾದಲ್ಲಿ ಕಾಡೆಮ್ಮೆಯೊಂದು ತನ್ನ ಕರುವಿನ ಮೇಲೆ ದಾಳಿ ಮಾಡಲು ಬಂದ ಸಿಂಹಗಳ ಹಿಂಡನ್ನು ಏಕಾಂಗಿಯಾಗಿ ಹೋರಾಡಿ ಓಡಿಸಿ ಕರುವನ್ನು ರಕ್ಷಿಸಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪೂರ್ತಿ ಓದಿ
10:29 AM IST

ದೇಹದ ಈ ಭಾಗಗಳಲ್ಲಿ ಮಚ್ಚೆ ಇದ್ದರೆ ತುಂಬಾ ಅಶುಭ, ಈ ಸಮಸ್ಯೆ ಬರುತ್ತೆ

ಸಮುದ್ರಿಕಾ ಶಾಸ್ತ್ರದ ಪ್ರಕಾರ, ದೇಹದ ವಿವಿಧ ಭಾಗಗಳಲ್ಲಿರುವ ಮಚ್ಚೆಗಳು ನಮಗೆ ಅನೇಕ ಶುಭ ಮತ್ತು ಅಶುಭ ಫಲಿತಾಂಶಗಳನ್ನು ನೀಡುತ್ತವೆ.
 

ಪೂರ್ತಿ ಓದಿ
10:28 AM IST

ಫ್ಯಾಮಿಲಿಮ್ಯಾನ್ ನಟ ರೋಹಿತ್ ಮೃತದೇಹ ಅಸ್ಸಾಂ ಕಾಡಿನಲ್ಲಿ ಪತ್ತೆ, ಅನುಮಾನ ಹೆಚ್ಚಿಸಿದ ಘಟನೆ

ಫ್ಯಾಮಿಲಿ ಮ್ಯಾನ್ 3 ಸೂಪರ್ ಹಿಟ್ ವೆಬ್‌ಸೀರಿಸ್ ಮೂಲಕ ಭಾರಿ ಜನಪ್ರಿಯವಾಗಿರುವ ನಟ ರೋಹಿತ್ ಬಸ್‌ಫೊರೆ ಶವವಾಗಿ ಪತ್ತೆಯಾಗಿದ್ದಾರೆ. ಜಲಪಾತದ ಬಳಿಕ ಮೃತದೇಹ ಪತ್ತೆಯಾಗಿದ್ದು, ಹಲವು ಅನುಮಾನ ಮೂಡಿಸಿದೆ.

ಪೂರ್ತಿ ಓದಿ
10:19 AM IST

ಸಾಕುನಾಯಿ ಕರೆದೊಯ್ಯುತ್ತಿದ್ದ ದ್ವಿಚಕ್ರ ವಾಹನ ಬಿದ್ದು ಸವಾರ ಸಾವು

ಬೆಂಗಳೂರಿನಲ್ಲಿ ಸಾಕುನಾಯಿ ಕೂರಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಯುವಕನೊಬ್ಬ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ನಿಯಂತ್ರಣ ತಪ್ಪಿದ ವಾಹನ ಮತ್ತೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ಪೂರ್ತಿ ಓದಿ
10:02 AM IST

ಅಕ್ಷಯ ತೃತೀಯದಂದು ಅಪರೂಪದ ಅಕ್ಷಯ ಯೋಗ, ಮೇಷ ಜೊತೆ ಈ 5 ರಾಶಿಗೆ ಧನ ಸಂಪತ್ತಿನ ಸುಯೋಗ

ಈ ಬಾರಿ ಅಕ್ಷಯ ತೃತೀಯದಂದು, 24 ವರ್ಷಗಳ ನಂತರ, ಅಪರೂಪದ ಯೋಗವೆಂದು ಪರಿಗಣಿಸಲಾದ ಅಕ್ಷಯ ಯೋಗ ರೂಪುಗೊಳ್ಳಲಿದೆ. 
 

ಪೂರ್ತಿ ಓದಿ
10:02 AM IST

ಕಡೇಚೂರು ವಿಷಗಾಳಿ: ಲೇಬರ್ ಕ್ಲಾಸ್ ಯಾದಗಿರಿಯಲ್ಲಿ, ಆಫೀಸರ್‌ಗಳೆಲ್ಲ ಮಕ್ತಲ್ ನಗರದಲ್ಲಿ!

ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದ ಕೆಮಿಕಲ್ ಕಾರ್ಖಾನೆಗಳ ದುರ್ನಾತ ಮತ್ತು ತ್ಯಾಜ್ಯದಿಂದಾಗಿ ಕಾರ್ಮಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಉಸಿರಾಟದ ತೊಂದರೆ, ಚರ್ಮದ ಸಮಸ್ಯೆಗಳಿಂದ ಬಳಲುತ್ತಿರುವ ಕಾರ್ಮಿಕರು ತೆಲಂಗಾಣದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರ್ಖಾನೆಗಳ ಉನ್ನತ ಅಧಿಕಾರಿಗಳು ಮಾತ್ರ ದೂರದಲ್ಲಿ ವಾಸಿಸುತ್ತಿದ್ದಾರೆ.

ಪೂರ್ತಿ ಓದಿ
9:56 AM IST

ಆಟೋ ಚಾಲಕನ ಬಳಿ ಕನ್ನಡದಲ್ಲಿ ದರ ಚೌಕಾಸಿಗೆ ಚಾಟ್‌ಜಿಪಿ ಬಳಸಿದ ವಿದ್ಯಾರ್ಥಿ, ವೈರಲ್ ವಿಡಿಯೋ

ಆಟೋ ಚಾಲಕನ ಬಳಿ ಕನ್ನಡದಲ್ಲಿ ಬೆಲೆ ಮಾತುಕತೆ ನಡೆಸಬೇಕು. ಆದರೆ ಕನ್ನಡ ಗೊತ್ತಿಲ್ಲದ ವಿದ್ಯಾರ್ಥಿ ಚಾಟ್‌ಜಿಪಿಟಿ ಬಳಸಿ ಚೌಕಾಸಿ 200 ರೂಪಾಯಿ ಆಟೋ ದರವನ್ನು 120 ರೂಪಾಯಿಗೆ ಮಾಡಿದ ವಿಡಿಯೋ ಒಂದು ವೈರಲ್ ಆಗುತ್ತಿದೆ. 
 

ಪೂರ್ತಿ ಓದಿ
9:52 AM IST

ಡಿಜೆ ಹಾಡಿಗೆ ನೆನಪಾದ ಹಳೇ ಗೆಳತಿ: ಮದುವೆ ಮಂಟಪದಿಂದ ಹೊರ ನಡೆದ ವರ

ದೆಹಲಿಯಲ್ಲಿ ನಡೆದ ಮದುವೆಯೊಂದರಲ್ಲಿ 'ಚನಾ ಮೇರಿಯಾ' ಹಾಡು ಕೇಳಿ ಭಾವುಕನಾದ ವರನು ಮದುವೆ ಮಂಟಪದಿಂದ ಹೊರನಡೆದಿದ್ದಾನೆ. ಇದರಿಂದ ಮದುವೆ ಮುರಿದು ಬಿದ್ದಿದೆ. 

ಪೂರ್ತಿ ಓದಿ
9:06 AM IST

ವಿಶ್ವದ ಮೊದಲ 10ಜಿ ಬ್ರಾಡ್‌ಬ್ಯಾಂಡ್ ಸೇವೆ ಆರಂಭಿಸಿದ ಚೀನಾ, ಡೌನ್ಲೋಡ್ ಸ್ಪೀಡ್ 9834 Mbps

ಭಾರತ ಸೇರಿದಂತೆ ಹಲವು ರಾಷ್ಟ್ರಗಳು 5ಜಿ ಸೇವೆ ಸಂಭ್ರಮಿಸುತ್ತಿದೆ. ಆದರೆ ಚೀನಾ ಎಲ್ಲಾ ದೇಶದ ನೆಟ್‌ವರ್ಕ್ ಕಸದ ಬುಟ್ಟಿಗೆ ಹಾಕಿದೆ. ಕಾರಣ ಚೀನಾ ವಿಶ್ವದ ಮೊದಲ 10ಜಿ ಬ್ರಾಡ್‌ಬ್ಯಾಂಡ್ ಸೇವೆ ಆರಂಭಿಸಿದೆ.

ಪೂರ್ತಿ ಓದಿ
8:52 AM IST

ಐಐಎಸ್‌ಸಿ ಪ್ರಕರಣ: ಕ್ರಿಸ್ ಗೋಪಾಲಕೃಷ್ಣನ್ ವಿರುದ್ಧದ ಎಫ್‌ಐಆರ್ ರದ್ದು

ಐಐಎಸ್‌ಸಿ ನಿವೃತ್ತ ಪ್ರಾಧ್ಯಾಪಕ ಡಿ.ಸಣ್ಣ ದುರ್ಗಪ್ಪ ಅವರಿಗೆ ಜಾತಿ ತಾರತಮ್ಯ ಮಾಡಿದ ಆರೋಪದ ಮೇಲೆ ಕ್ರಿಸ್ ಗೋಪಾಲಕೃಷ್ಣನ್ ಸೇರಿದಂತೆ ಇತರರ ವಿರುದ್ಧದ ಎಫ್‌ಐಆರ್ ಅನ್ನು ಹೈಕೋರ್ಟ್ ರದ್ದುಗೊಳಿಸಿದೆ. ದೂರು ಕಾನೂನು ಪ್ರಕ್ರಿಯೆಯ ದುರ್ಬಳಕೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಪೂರ್ತಿ ಓದಿ
8:31 AM IST

ಕಳೆದ 10 ವರ್ಷದಲ್ಲಿ 17 ಕೋಟಿ ಭಾರತೀಯರು ಕಡುಬಡತನದಿಂದ ಹೊರಕ್ಕೆ, ವಿಶ್ವ ಬ್ಯಾಂಕ್

ಭಾರತ ಕಳೆದ 10 ವರ್ಷದಲ್ಲಿ ಬರೋಬ್ಬರಿ 17.1 ಕೋಟಿ ಮಂದಿಯನ್ನು ಕಡುಬಡತನದಿಂದ ಮೇಲಕ್ಕೆತ್ತಿದೆ ಎಂದು ವಿಶ್ವ ಬ್ಯಾಂಕ್ ವರದಿ ಮಾಡಿದೆ. ವಿಶ್ವ ಬ್ಯಾಂಕ್ ನೀಡಿದ ವರದಿಯಲ್ಲಿ ಏನಿದೆ? 

ಪೂರ್ತಿ ಓದಿ
8:17 AM IST

ಕರ್ನಾಟಕ ಡಿಜಿಪಿ ಆಯ್ಕೆ: ಅಲೋಕ್ ಮೋಹನ್ ಗೆ ಮುಂದುವರಿಕೆ ಸಿಗುತ್ತಾ?

ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರ ಅಧಿಕಾರದ ಅವಧಿ ವಿಸ್ತರಣೆಯಾಗುತ್ತದೆಯೇ ಅಥವಾ ಹೊಸ ಡಿಜಿಪಿ ಆಯ್ಕೆಯಾಗುತ್ತದೆಯೇ ಎಂಬ ಕುತೂಹಲ ಮಂಗಳವಾರ ಬಗೆಹರಿಯಲಿದೆ. ಸಿಐಡಿ ಡಿಜಿಪಿ ಡಾ.ಎಂ.ಎ.ಸಲೀಂ ಮತ್ತು ಅಗ್ನಿಶಾಮಕ ದಳದ ಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್ ಹೆಸರುಗಳು ಡಿಜಿಪಿ ರೇಸ್‌ನಲ್ಲಿವೆ.

ಪೂರ್ತಿ ಓದಿ
8:10 AM IST

ಪೆಹಲ್ಗಾಂ ದಾಳಿ: ಜಿಪ್‌ಲೈನ್ ಸವಾರಿ ವಿಡಿಯೋದಲ್ಲಿ ಅನುಮಾನ ಮೂಡಿಸಿದ ಆಪರೇಟರ್ ಘೋಷಣೆ

ಪೆಹಲ್ಗಾಂ ದಾಳಿಗೆ ಸ್ಥಳೀಯರ ಕುಮ್ಮಕ್ಕು ಕುರಿತು ತನಿಖೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಪ್ರವಾಸಿಗನೊಬ್ಬರ ಜಿಪ್‌ಲೈನ್ ಸವಾರಿ ವಿಡಿಯೋ ಕೆಲ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದೆ. ಉಗ್ರರ ದಾಳಿ ನಡುವೆ ಪ್ರವಾಸಿಗನ ಜಿಪ್‌ಲೈನ್ ಸವಾರಿಗೆ ಕಳುಹಿಸಿದ ಆಪರೇಟರ್, ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ್ದಾನೆ. ಇದು ಅನುಮಾನಕ್ಕೆ ಕಾರಣವಾಗಿದೆ.

ಪೂರ್ತಿ ಓದಿ
8:00 AM IST

ತುಷಾರ್ ಗಿರಿನಾಥ್ ವರ್ಗಾವಣೆ, ಬಿಬಿಎಂಪಿಗೆ ಹೊಸ ಮುಖ್ಯ ಆಯುಕ್ತರು ಯಾರು?

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರನ್ನು ವರ್ಗಾವಣೆ ಮಾಡಲಾಗಿದ್ದು, ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಬಿಎಂಆರ್‌ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಎಂ.ಮಹೇಶ್ವರ್ ರಾವ್ ಅವರಿಗೆ ಬಿಬಿಎಂಪಿ ಮುಖ್ಯ ಆಯುಕ್ತರ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ.

ಪೂರ್ತಿ ಓದಿ
7:42 AM IST

ಮದುವೆಯಾಗುವಂತೆ ಪೀಡಿಸುತ್ತಿದ್ದ ಮಂಗಳಮುಖಿ ಕೊಲೆ ಮಾಡಿದ್ದ ಮೂವರ ಬಂಧನ

ಮಂಗಳಮುಖಿ ತನುಶ್ರೀ (45) ಕೊಲೆ ಪ್ರಕರಣದಲ್ಲಿ ಆಕೆಯ ಸ್ನೇಹಿತ ಸೇರಿ ಮೂವರನ್ನು ಕೆ.ಆರ್‌.ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮದುವೆಯಾಗುವಂತೆ ಒತ್ತಾಯಿಸಿದ್ದಕ್ಕೆ ಜಗದೀಶ್‌ ಎಂಬಾತ ತನ್ನ ಇಬ್ಬರು ಸ್ನೇಹಿತರೊಂದಿಗೆ ಸೇರಿ ಕೊಲೆ ಮಾಡಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ.

ಪೂರ್ತಿ ಓದಿ
7:11 AM IST

ಬಿಬಿಎಂಪಿ ಕಮಿಷನರ್ ಎತ್ತಂಗಡಿ ಮಾಡಿದ ರಾಜ್ಯ ಸರ್ಕಾರ

ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ವರ್ಗಾವಣೆ ಮಾಡಿರುವ ರಾಜ್ಯ ಸರ್ಕಾರ ಈ ಜಾಗಕ್ಕೆ ಬಿಎಂಆರ್‌ಸಿಎಲ್ ನಿರ್ದೇಶಕ ಮಹೇಶ್ವರ ರಾವ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.

12:00 AM IST:

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನ್ಯಾಯಮೂರ್ತಿ ಭೂಷಣ್ ರಾಮಕೃಷ್ಣ ಗವಾಯಿ ಅವರನ್ನು ಭಾರತದ ಮುಂದಿನ ಮುಖ್ಯ ನ್ಯಾಯಾಧೀಶರನ್ನಾಗಿ ನೇಮಿಸಿದ್ದಾರೆ. ನ್ಯಾಯಮೂರ್ತಿ ಗವಾಯಿ ಮೇ 14, 2025 ರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ, ಹಾಲಿ ಸಿಜೆಐ ಖನ್ನಾ ಅವರ ನಿವೃತ್ತಿಯ ನಂತರ.

ಪೂರ್ತಿ ಓದಿ

11:41 PM IST:

ಐಪಿಎಲ್ 2025ರಲ್ಲಿ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಮತ್ತು ಆಕ್ರಮಣಕಾರಿ ಧೋರಣೆ ಸುದ್ದಿ ಮಾಡಿದೆ. ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ ಮತ್ತು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಗಳಲ್ಲಿ ಕೊಹ್ಲಿ ಅವರ ಆಕ್ರಮಣಕಾರಿ ಪ್ರತಿಕ್ರಿಯೆಗಳು ವೈರಲ್ ಆಗಿವೆ.

ಪೂರ್ತಿ ಓದಿ

11:06 PM IST:

ಪ್ರಮೋದ್ ಮುತಾಲಿಕ್ ಅವರು ಸಿದ್ದರಾಮಯ್ಯ, ಭಯೋತ್ಪಾದನೆ ಮತ್ತು ಹಿಂದೂಗಳ ಸ್ಥಿತಿಗತಿಗಳ ಬಗ್ಗೆ ತೀಕ್ಷ್ಣವಾದ ಹೇಳಿಕೆಗಳನ್ನು ನೀಡಿದ್ದಾರೆ. ಪೆಹಲ್ಗಾಮ್ ಘಟನೆಯನ್ನು ಉಲ್ಲೇಖಿಸಿ, ಭಯೋತ್ಪಾದನೆಗೆ ಧರ್ಮ, ದೇಶ ಇಲ್ಲ ಎನ್ನುವ ರಾಜಕಾರಣಿಗಳನ್ನು ಟೀಕಿಸಿದ್ದಾರೆ.

ಪೂರ್ತಿ ಓದಿ

11:02 PM IST:

ಮೈಸೂರು ಮೂಲದ ಉದ್ಯಮಿ ಹರ್ಷವರ್ಧನ್, ಅಮೆರಿಕದಲ್ಲಿ ಪತ್ನಿ ಮತ್ತು ಮಗನನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಏಳು ವರ್ಷದ ಕಿರಿಯ ಮಗ ಬದುಕುಳಿದಿದ್ದಾನೆ. ಘಟನೆಯ ಕಾರಣ ಇನ್ನೂ ತಿಳಿದುಬಂದಿಲ್ಲ.

ಪೂರ್ತಿ ಓದಿ

10:31 PM IST:

ಮಂಗಳೂರಿನಲ್ಲಿ ಕ್ರಿಕೆಟ್ ಪಂದ್ಯದ ವೇಳೆ 'ಪಾಕಿಸ್ತಾನ ಜಿಂದಾಬಾದ್' ಎಂದು ಘೋಷಣೆ ಕೂಗಿದ ವ್ಯಕ್ತಿಯನ್ನು ಗುಂಪೊಂದು ಹತ್ಯೆಗೈದಿದೆ. ಈ ಘಟನೆ ಏಪ್ರಿಲ್ 27 ರಂದು ಕುಡುಪು ಪ್ರದೇಶದಲ್ಲಿ ನಡೆದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಮತ್ತು ಹಲವಾರು ಶಂಕಿತರನ್ನು ಬಂಧಿಸಲಾಗಿದೆ.

ಪೂರ್ತಿ ಓದಿ

10:17 PM IST:

ಬೈಕ್ ಟ್ಯಾಕ್ಸಿ ಸೇವೆಗಳನ್ನು ಸ್ಥಗಿತಗೊಳಿಸುವಂತೆ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಉಬರ್, ಓಲಾ ಮತ್ತು ರ‍್ಯಾಪಿಡೋ ಸಲ್ಲಿಸಿದ್ದ ಅರ್ಜಿಗಳನ್ನು ಪುರಸ್ಕರಿಸಲಾಗಿದೆ. ಜೂನ್ 15 ರವರೆಗೆ ಸೇವೆಗಳನ್ನು ಮುಂದುವರಿಸಲು ನ್ಯಾಯಾಲಯ ಅವಕಾಶ ನೀಡಿದೆ.

ಪೂರ್ತಿ ಓದಿ

10:10 PM IST:

ಬೆಂಗಳೂರಿನ ಕೆಜಿ ಹಳ್ಳಿ- ಡಿಜೆ ಹಳ್ಳಿ ಗಲಭೆ ಪ್ರಕರಣದ A-16 ಆರೋಪಿ ಹಾಗೂ ನಿಷೇಧಿತ ಪಿಎಫ್‌ಐ ಸಂಘಟನೆಯ ಕಾರ್ಯಕರ್ತ ಮೌಸೀನ್ ಅಲಿಯಾಸ್ ಇಮ್ತಿಯಾಝ್ ಶುಕುರ್‌ನನ್ನು ಉತ್ತರಕನ್ನಡ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಪ್ರಮುಖ ಆರೋಪಿಯ ಜತೆ ಆತ್ಮೀಯನಾಗಿದ್ದ ಈತ ಕಳೆದ 6 ವರ್ಷಗಳಿಂದ ತಲೆಮರೆಸಿಕೊಂಡಿದ್ದ.

ಪೂರ್ತಿ ಓದಿ

9:57 PM IST:

ಪಾಕಿಸ್ತಾನಕ್ಕೆ ಮಿಲಿಟರಿ ನೆರವು ನೀಡಿದ ಟರ್ಕಿ ವಿರುದ್ಧ ಭಾರತೀಯರು ಆಕ್ರೋಶ ವ್ಯಕ್ತಪಡಿಸಿ ಬೈಕಾಟ್ ಅಭಿಯಾನ ಆರಂಭಿಸಿದ್ದಾರೆ. ಇದರಿಂದಾಗಿ ಟರ್ಕಿ ಪಾಕ್​ಗೆ ನೆರವು ನೀಡಿಲ್ಲ ಎಂದು ಸಮಜಾಯಿಷಿ ನೀಡಿದೆ. ಭಾರತದಿಂದ ನೆರವು ಪಡೆದಿದ್ದ ಟರ್ಕಿ ಈಗ ಪಾಕ್​ ಪರ ನಿಂತಿದ್ದು ಚರ್ಚೆಗೆ ಗ್ರಾಸವಾಗಿತ್ತು.  

ಪೂರ್ತಿ ಓದಿ

9:37 PM IST:


ಅವರು ಎಎಕ್ಸ್‌-4 ಕಾರ್ಯಾಚರಣೆಯಲ್ಲಿ ಪೈಲಟ್ ಆಗಿ ಸೇವೆ ಸಲ್ಲಿಸಲಿದ್ದು, ನಾಸಾದ ಅನುಭವಿ ಗಗನಯಾತ್ರಿ ಪೆಗ್ಗಿ ವಿಟ್ಸನ್ ನೇತೃತ್ವದ ಅಂತರರಾಷ್ಟ್ರೀಯ ತಂಡವನ್ನು ಪೋಲೆಂಡ್ ಮತ್ತು ಹಂಗೇರಿಯ ಗಗನಯಾತ್ರಿಗಳೊಂದಿಗೆ ಸೇರಿಕೊಳ್ಳಲಿದ್ದಾರೆ.

ಪೂರ್ತಿ ಓದಿ

9:21 PM IST:

ಆರು ನಕ್ಷತ್ರಗಳ ಬಗ್ಗೆ ಇಲ್ಲಿ ಉಲ್ಲೇಖಿಸಲಾಗಿದ್ದು, ಅವರನ್ನು ಮದುವೆಯಾಗುವ ಪುರುಷರಿಗೆ ಸಮೃದ್ಧಿ, ಐಶ್ವರ್ಯ ಕಟ್ಟಿಟ್ಟದ್ದೇ. ಯಾವುದೀ ನಕ್ಷತ್ರಗಳು? 

ಪೂರ್ತಿ ಓದಿ

9:17 PM IST:

2025-26ನೇ ಸಾಲಿನ ಆಸ್ತಿ ತೆರಿಗೆಯನ್ನು ಪೂರ್ಣವಾಗಿ ಪಾವತಿಸಲು ರಿಯಾಯಿತಿ ಅವಧಿಯನ್ನು ಮೇ 31ರವರೆಗೆ ವಿಸ್ತರಿಸಲಾಗಿದೆ. ತೆರಿಗೆದಾರರು ಈ ಅವಕಾಶವನ್ನು ಬಳಸಿಕೊಂಡು ಶೇ.5ರಷ್ಟು ರಿಯಾಯಿತಿ ಪಡೆಯಬಹುದು.

ಪೂರ್ತಿ ಓದಿ

9:01 PM IST:

ಕಾಶ್ಮೀರದಲ್ಲಿ ವಾಸಿಸುತ್ತಿರುವ 60 ಪಾಕಿಸ್ತಾನಿ ನಾಗರಿಕರನ್ನು ಗಡೀಪಾರು ಮಾಡಲಾಗುತ್ತಿದೆ. ಇವರಲ್ಲಿ ಶೌರ್ಯ ಚಕ್ರ ವಿಜೇತ ಹುತಾತ್ಮ ಯೋಧನ ತಾಯಿ ಮತ್ತು ಸಿಆರ್‌ಪಿಎಫ್ ಜವಾನನ ಪತ್ನಿ ಸೇರಿದ್ದಾರೆ.

ಪೂರ್ತಿ ಓದಿ

8:39 PM IST:

ಮುಂದಿನ ದಿನಗಳಲ್ಲಿ ವಿಜಯಪುರ ನಗರದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ. ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಅವಳಿ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ನಿರ್ಣಯಗಳನ್ನು ಕೈಗೊಳ್ಳಲಾಗುವುದು.

ಪೂರ್ತಿ ಓದಿ

8:19 PM IST:

ರ‍್ಯಾಪರ್ ವೇಡನ್ ಬಳಸುತ್ತಿದ್ದ ಹುಲಿ ಹಲ್ಲು ಲಾಕೆಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜ್ಯುವೆಲ್ಲರಿ ಮಾಲೀಕರು ಹಾಗೂ ವೇಡನ್ ಹೇಳಿಕೆ ನೀಡಿದ್ದಾರೆ. ವೇಡನ್‌ಗೆ ವಿದೇಶಿ ಪ್ರಜೆಯೊಬ್ಬ ಉಡುಗೊರೆಯಾಗಿ ಹುಲಿ ಹಲ್ಲು ನೀಡಿದ್ದಾಗಿ ಹೇಳಿದ್ದಾರೆ.

ಪೂರ್ತಿ ಓದಿ

8:17 PM IST:

ಜಮ್ಮು ಕಾಶ್ಮೀರದ ಪಹಲ್ಗಾಮ್ ದಾಳಿಯ ಬಗ್ಗೆ ಮಾತನಾಡುತ್ತಾ, ಸಚಿವ ಸತೀಶ್ ಜಾರಕಿಹೊಳಿ ಸೇನೆಯನ್ನು ಲೇವಡಿ ಮಾಡುವ ಹೇಳಿಕೆ ನೀಡಿದ್ದಾರೆ. ಯುದ್ಧವನ್ನು ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ನಡೆಸಬಹುದು ಎಂದು ಹೇಳಿದ್ದಾರೆ.

ಪೂರ್ತಿ ಓದಿ

8:09 PM IST:

ಚಾಮರಾಜನಗರದಲ್ಲಿ ಲೇಡಿ ಪಿಎಸ್ಐ ವರ್ಷಾ ಅವರ ಕಿರುಕುಳದಿಂದಾಗಿ ಯುವಕ ದುಷ್ಯಂತ್ ಆತ್ಮ*ಹತ್ಯೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ದುಷ್ಯಂತ್ ಮೇಲೆ ಹಲ್ಲೆ ಪ್ರಕರಣ ದಾಖಲಾಗಿದ್ದು, ಪಿಎಸ್ಐ ವರ್ಷಾ ಪದೇ ಪದೇ ಮನೆಗೆ ಬಂದು ಕಿರುಕುಳ ನೀಡುತ್ತಿದ್ದರು ಎಂದು ದುಷ್ಯಂತ್ ಪೋಷಕರು ಆರೋಪಿಸಿದ್ದಾರೆ. ದುಷ್ಯಂತ್ ಈಗ ಚಾಮರಾಜನಗರದ ಸಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪೂರ್ತಿ ಓದಿ

7:42 PM IST:

ಕೊಡಗು ಜಿಲ್ಲಾ ಪೊಲೀಸ್ ಇಲಾಖೆಯ ಸ್ಫೋಟಕ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ 9 ವರ್ಷದ ಲ್ಯಾಬ್ರಡಾಲ್ ರಿಟ್ರಿವರ್ ತಳಿಯ ಶ್ವಾನ ಪೃಥ್ವಿ ಹೃದಯಾಘಾತದಿಂದ ಮೃತಪಟ್ಟಿದೆ. ಹಲವಾರು ವಿಐಪಿಗಳ ಭದ್ರತಾ ಕೆಲಸ ನಿರ್ವಹಿಸಿದ್ದ ಪೃಥ್ವಿಗೆ ಪೊಲೀಸ್ ಇಲಾಖೆ ಅಂತಿಮ ನಮನ ಸಲ್ಲಿಸಿದೆ.

ಪೂರ್ತಿ ಓದಿ

7:40 PM IST:

ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ಉಗ್ರರ ದಾಳಿಯಿಂದ ಕಾಫಿನಾಡ ಕುಟುಂಬವೊಂದು ಪವಾಡ ಸದೃಶ ಪಾರಾಗಿದೆ. ದೇವರಿಲ್ಲದ ದೇವಾಲಯಕ್ಕೆ ಭೇಟಿ ನೀಡಿದ್ದರಿಂದ ಉಗ್ರರ ದಾಳಿಯಿಂದ ಪಾರಾಗಿದ್ದಾರೆ. ಸ್ಥಳೀಯರ ಸಹಾಯದಿಂದ ಸುರಕ್ಷಿತವಾಗಿ ಹಿಂದಿರುಗಿದ್ದಾರೆ.

ಪೂರ್ತಿ ಓದಿ

7:38 PM IST:

ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪ್ರಧಾನಿ ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು. ಭಯೋತ್ಪಾದನೆ ವಿರುದ್ಧ ಕ್ರಮ ಕೈಗೊಳ್ಳಲು ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ದಾಳಿಯ ಮಾಸ್ಟರ್ ಮೈಂಡ್ ಪಾಕಿಸ್ತಾನದ ಮಾಜಿ ಎಸ್‌ಎಸ್‌ಜಿ ಕಮಾಂಡರ್ ಹಾಶಿಂ ಮೂಸಾ ಎಂದು ಗುಪ್ತಚರ ಸಂಸ್ಥೆಗಳು ತಿಳಿಸಿವೆ.

ಪೂರ್ತಿ ಓದಿ

6:40 PM IST:

ಬೆಂಗಳೂರು ಮೆಟ್ರೋ ರೈಲು ನಿಲ್ದಾಣಗಳು, ಆವರಣಗಳು ಮತ್ತು ರೈಲುಗಳ ಒಳಭಾಗದಲ್ಲಿ ಜಾಹೀರಾತು ಪ್ರದರ್ಶನಕ್ಕೆ ಬಿಎಂಆರ್‌ಸಿಎಲ್ ಎರಡು ಸಂಸ್ಥೆಗಳೊಂದಿಗೆ ವಾರ್ಷಿಕ 3.5 ಕೋಟಿ ರೂ.ಗೆ ಒಪ್ಪಂದ ಮಾಡಿಕೊಂಡಿದೆ.  ಈ ಮೂಲಕ ಸುಂದರ ಮತ್ತು ಸ್ವಚ್ಛವಾಗಿರುವ ನಮ್ಮ ಮೆಟ್ರೋವನ್ನು ಗಬ್ಬೆಬ್ಬಿಸಲು ಮುಂದಾಗಿದೆ.

ಪೂರ್ತಿ ಓದಿ

6:27 PM IST:

ಪ್ರಧಾನಿ ಮೋದಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೋವಲ್ ಮತ್ತು ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಅನಿಲ್ ಚೌಹಾಣ್ ಸೇರಿದಂತೆ ಪ್ರಮುಖ ಅಧಿಕಾರಿಗಳೊಂದಿಗೆ ರಕ್ಷಣಾ ಸಭೆ ನಡೆಸಿದರು.

ಪೂರ್ತಿ ಓದಿ

6:06 PM IST:

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ಮಹಾರಾಷ್ಟ್ರದ ಪ್ರವಾಸಿಗರ ಕುಟುಂಬಗಳಿಗೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ₹50 ಲಕ್ಷ ಪರಿಹಾರ ಘೋಷಿಸಿದ್ದಾರೆ. ಸರ್ಕಾರವು ಶಿಕ್ಷಣ ಮತ್ತು ಉದ್ಯೋಗದಲ್ಲೂ ಸಹಾಯ ಮಾಡಲಿದೆ.

ಪೂರ್ತಿ ಓದಿ

5:30 PM IST:

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೇಗೆ ಚನ್ನಪಟ್ಟಣ ತಾಲ್ಲೂಕಿನಿಂದ ಪ್ರವೇಶ ಮತ್ತು ನಿರ್ಗಮನ ಕಲ್ಪಿಸಲು ಹೊಸ ವ್ಯವಸ್ಥೆ. ರಾಂಪುರ ಬದಲಿಗೆ ಕಣ್ವ ಜಂಕ್ಷನ್ ಬಳಿ ಪ್ರವೇಶ ಮತ್ತು ನಿರ್ಗಮನ ಒದಗಿಸಲು ಚಿಂತನೆ.

ಪೂರ್ತಿ ಓದಿ

4:59 PM IST:

ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಗೃಹ ಸಚಿವಾಲಯದಲ್ಲಿ ಉನ್ನತ ಮಟ್ಟದ ಸಭೆ ನಡೆದಿದ್ದು, ಪ್ರತೀಕಾರದ ಕ್ರಮಗಳ ಕುರಿತು ಚರ್ಚಿಸಲಾಗಿದೆ. ಕಾಶ್ಮೀರದಲ್ಲಿ ಸೇನಾ ಕಾರ್ಯಾಚರಣೆ ನಡೆಯುತ್ತಿದ್ದು, ದಾಳಿಯ ಮಾಸ್ಟರ್ ಮೈಂಡ್ ಪಾಕಿಸ್ತಾನದ ಮಾಜಿ ಎಸ್‌ಎಸ್‌ಜಿ ಕಮಾಂಡರ್ ಹಾಶಿಂ ಮೂಸಾ ಎಂದು ಗುರುತಿಸಲಾಗಿದೆ.

ಪೂರ್ತಿ ಓದಿ

4:56 PM IST:

ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೆ ಕಾಲೋನಿಯಲ್ಲಿ 368 ಮರಗಳನ್ನು ಕಡಿಯುವ ಪಗ್ರಸ್ತಾಪವನ್ನು ಬಿಬಿಎಂಪಿ ಸಾರ್ವಜನಿಕರ ಮುಂದಿಟ್ಟಿದೆ. ಆದರೆ, ಪರಿಸರಕ್ಕಾಗಿ ನಾವು ಸಂಘಟನೆಯು ಮರಗಳನ್ನು ಉಳಿಸುವಂತೆ ಸಚಿವ ಈಶ್ವರ ಖಂಡ್ರೆ ಅವರಿಗೆ ಮನವಿ ಮಾಡಿದೆ.

ಪೂರ್ತಿ ಓದಿ

4:37 PM IST:

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಬದುಕುಳಿದವರು ಮತ್ತು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳು ಭಯಾನಕ ಘಟನೆಗಳನ್ನು ಬಹಿರಂಗಪಡಿಸಿವೆ. ಭಯೋತ್ಪಾದಕರು ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ನಿರ್ಬಂಧಿಸಿದ್ದರಿಂದ ಪ್ರವಾಸಿಗರಿಗೆ ತಪ್ಪಿಸಿಕೊಳ್ಳಲು ಯಾವುದೇ ಮಾರ್ಗವಿರಲಿಲ್ಲ.

ಪೂರ್ತಿ ಓದಿ

4:37 PM IST:

: ಈ ಬಾರಿ ಅಕ್ಷಯ ತೃತೀಯಾ ಏಪ್ರಿಲ್ 30, ಬುಧವಾರದಂದು ಆಚರಿಸಲಾಗುತ್ತದೆ. ಈ ದಿನ ಚಿನ್ನ ಖರೀದಿಸುವುದು ಬಹಳ ಶುಭ ಎಂದು ನಂಬಲಾಗಿದೆ.

 

ಪೂರ್ತಿ ಓದಿ

4:31 PM IST:

ಪಹಲ್ಗಾಮ್ ದಾಳಿಗೆ ಸಂಬಂಧಿಸಿದಂತೆ 15 ಕಾಶ್ಮೀರಿಗಳನ್ನು ಎನ್‌ಐಕೆ ವಶಕ್ಕೆ ಪಡೆದು ವಿಚಾರಣೆ ನಡೆಸಿದು ಹಲವು ಸ್ಫೋಟಕ ವಿಚಾರಗಳು ಬೆಳಕಿಗೆ ಬಂದಿವೆ.

ಪೂರ್ತಿ ಓದಿ

4:02 PM IST:

ದೆಹಲಿ ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿ ಸೇವಾ ಶುಲ್ಕ ವಿಧಿಸಿದ 5 ರೆಸ್ಟೋರೆಂಟ್‌ಗಳ ವಿರುದ್ಧ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA) ಕ್ರಮ ಕೈಗೊಂಡಿದೆ. ಕಡ್ಡಾಯ ಸೇವಾ ಶುಲ್ಕದ ಮೊತ್ತವನ್ನು ಮರುಪಾವತಿಸುವಂತೆ ರೆಸ್ಟೋರೆಂಟ್‌ಗಳಿಗೆ ನಿರ್ದೇಶನ ನೀಡಲಾಗಿದೆ.

ಪೂರ್ತಿ ಓದಿ

3:58 PM IST:

ಸಂಜೆಯಾಗಿದೆ, ಕೆಲಸ ಮುಗಿಯುತ್ತಾ ಬಂದಿದೆ. ಕ್ಲೈಂಟ್ ಜೊತೆ ಮಾತನಾಡುತ್ತಾ ಇನ್ನೇನು ಕರೆ ಕಟ್ ಮಾಡಬೇಕು ಅನ್ನುವಷ್ಟರಲ್ಲಿ ಉದ್ಯೋಗಿ ಒಕೆ, ಒಕೆ ಲವ್ ಯು ಎಂದಿದ್ದಾನೆ. ಅಚಾನಕ್ಕಾಗಿ ಈ ಮಾತುಗಳು ಬಂದಿದೆ. ಆದರೆ ಮರುದಿನ ಅದೇ ಕ್ಲೈಂಟ್‌ನಿಂದ ಬಂದ ಇಮೇಲ್ ನೋಡಿ ಉದ್ಯೋಗಿ ಅಚ್ಚರಿಗೊಂಡಿದ್ದಾನೆ.

ಪೂರ್ತಿ ಓದಿ

3:33 PM IST:

ಆರ್‌ಸಿಬಿ ಕ್ರಿಕೆಟಿಗ ದೇವದತ್ ಪಡಿಕ್ಕಲ್ ಮತ್ತು ನಟಿ ಧನ್ಯಾ ರಾಮ್‌ಕುಮಾರ್ ನಡುವಿನ ಸಂಬಂಧದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ನಡೆಯುತ್ತಿವೆ. ಧನ್ಯಾ, ದೇವದತ್ ಅವರ ಜೆರ್ಸಿ ಧರಿಸಿ ಫೋಟೋ ತೆಗೆಸಿಕೊಂಡಿದ್ದು ಈ ವದಂತಿಗಳಿಗೆ ಕಾರಣವಾಗಿದೆ. ಆದರೆ, ಇದು ಕೇವಲ ಗಾಸಿಪ್ ಎಂಬ ಮಾತುಗಳು ಕೇಳಿಬಂದಿವೆ.

ಪೂರ್ತಿ ಓದಿ

3:23 PM IST:

200 ರೂಪಾಯಿಗೆ 100mbps ಸ್ಪೀಡ್‌ನಲ್ಲಿ ಇಂಟರ್‌ನೆಟ್‌ ಸಿಗತ್ತೆ ಎನ್ನೋದು ಸದ್ಯ ಕರ್ನಾಟಕದಲ್ಲಿ ಕನಸು ಎನ್ನಬಹುದು. ಆದರೆ ತಮಿಳುನಾಡು ಸರ್ಕಾರವು ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲಿದೆಯಂತೆ. 
 

ಪೂರ್ತಿ ಓದಿ

2:56 PM IST:

ಪೆಹಲ್ಗಾಮ್ ದಾಳಿ ಬಳಿಕ ಜಮ್ಮು ಮತ್ತು ಕಾಶ್ಮೀರ ವಿರುದ್ಧ ಸುಳ್ಳು ಸುದ್ದಿ, ನಕಲಿ ಮಾಹಿತಿ ಹರಡುತ್ತಿದ್ದ ಪಾಕಿಸ್ತಾನ ರಕ್ಷಣಾ ಸಚಿವನ ಎಕ್ಸ್ ಖಾತೆಯನ್ನು ಕೇಂದ್ರ ಸರ್ಕಾರ ಭಾರತದಲ್ಲಿ ಬ್ಲಾಕ್ ಮಾಡಿದೆ.

ಪೂರ್ತಿ ಓದಿ

2:49 PM IST:

ಗಾಂಜಾ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಬಂದ ರಾಪರ್ ವೇದನ್, ಈಗ ಹುಲಿಯ ಹಲ್ಲು ಪೆಂಡೆಂಟ್ ಧರಿಸಿದ್ದಕ್ಕಾಗಿ ಮತ್ತೊಂದು ಪ್ರಕರಣವನ್ನು ಎದುರಿಸುತ್ತಿದ್ದಾರೆ. ಅಭಿಮಾನಿಯೊಬ್ಬ ಈ ಹಲ್ಲನ್ನು ಉಡುಗೊರೆಯಾಗಿ ನೀಡಿದ್ದಾಗಿ ಹೇಳಲಾಗಿದ್ದು, ಅರಣ್ಯ ಇಲಾಖೆ ತನಿಖೆ ನಡೆಸುತ್ತಿದೆ.

ಪೂರ್ತಿ ಓದಿ

2:18 PM IST:

ನ್ಯೂ ಜನರೇಶನ್, ಹೊಸ ಹೊಸ ರಿಲೇಶನ್‌ಶಿಪ್ ಟ್ರೆಂಡ್, ಆರೋಗ್ಯ ಸವಾಲುಗಳು ನಡುವೆ ಅಪ್ಪನಾಗಲು ಸೂಕ್ತ ವಯಸ್ಸು ಇದೆಯಾ? ಮದುವೆ ಬಳಿಕ ಯಾವಾಗ ತಂದೆಯಾಗಬಹುದು?  ಯಾವೆಲ್ಲಾ ಅಂಶ ಪರಿಗಣಿಸಬೇಕಾಗುತ್ತೆ?
 

ಪೂರ್ತಿ ಓದಿ

2:17 PM IST:

ಯೋಗಿ ಆದಿತ್ಯನಾಥ್ ಯುಪಿ 7ನೇ ಸ್ಥಾನದಿಂದ 2ನೇ ಅತಿದೊಡ್ಡ ಆರ್ಥಿಕತೆಯಾಗಿ ಹೇಗೆ ಬೆಳೆಯಿತು ಎಂದು ವಿವರಿಸಿದ್ದಾರೆ. ಸುರಕ್ಷತೆ, ಮೂಲಸೌಕರ್ಯ ಮತ್ತು ಹೂಡಿಕೆಗೆ ಒತ್ತು ನೀಡಲಾಗಿದೆ. 

ಪೂರ್ತಿ ಓದಿ

2:15 PM IST:

ಚಂದ್ರನು ಶುಕ್ರನ ರಾಶಿಚಕ್ರಕ್ಕೆ ಪ್ರವೇಶಿಸಲಿದ್ದು, ಇದು 3 ರಾಶಿಚಕ್ರ ಚಿಹ್ನೆಗಳ ಜನರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಬಹುದು. 
 

ಪೂರ್ತಿ ಓದಿ

1:46 PM IST:

ಬಿಜೆಪಿಯ 'ಕಾಂಗ್ರೆಸ್ ಕೆ ಹಾಥ್ - ಪಾಕಿಸ್ತಾನ್ ಕೆ ಸಾಥ್' ಎಂಬ ಟೀಕೆಯನ್ನು ಬಿಕೆ ಹರಿಪ್ರಸಾದ್ ಖಂಡಿಸಿದ್ದಾರೆ. ತಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎಂದು ಆರೋಪಿಸಿ, ಬಿಜೆಪಿ ಸೋಷಿಯಲ್ ಮೀಡಿಯಾ ರಾಜಕಾರಣ ಮತ್ತು ಸ್ಲೋಗನ್‌ಗಳ ಮೂಲಕ ವಾತಾವರಣ ಹಾಳುಗೆಡವುತ್ತಿದೆ ಎಂದಿದ್ದಾರೆ. ಕೇಂದ್ರ ಸರ್ಕಾರ ಉಗ್ರ ದಾಳಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

ಪೂರ್ತಿ ಓದಿ

1:38 PM IST:

ಪ್ರಧಾನಿ ಮೋದಿಯವರನ್ನು ಟಾರ್ಗೆಟ್ ಮಾಡಿ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಡಿದ ಪೋಸ್ಟ್‌ಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಪೂರ್ತಿ ಓದಿ

1:13 PM IST:

ಪಹಲ್ಗಾಂನಲ್ಲಿ ಭಯೋತ್ಪಾದಕರು ತನ್ನ ಪತಿಯನ್ನು ಕೊಂದಾಗ, "ನಮ್ಮನ್ನು ಸಾಯಿಸಿ" ಎಂದು ತಾನು ಮತ್ತು ತನ್ನ ಮಗ ಕೂಗಿದ್ದಾಗಿ ಮಂಜುನಾಥ್ ರಾವ್ ಪತ್ನಿ ಪಲ್ಲವಿ ಹೇಳಿದ್ದಾರೆ. ಈ ಹೇಳಿಕೆಗೆ ನೆಗೆಟಿವ್ ಕಾಮೆಂಟ್ಸ್ ಬರುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಘಟನೆಯನ್ನು ವಿವರಿಸಲು ಮನಸ್ಸಿಲ್ಲ ಎಂದು ಮನವಿ ಮಾಡಿದ್ದಾರೆ.

ಪೂರ್ತಿ ಓದಿ

1:12 PM IST:

ಕೆನಡಾ ಚುನಾವಣೆಯಲ್ಲಿ ಲಿಬರಲ್ ಪಾರ್ಟಿ ಅಭೂತಪೂರ್ವ ಗೆಲುವು ಸಾಧಿಸಿದೆ. ಇದೀಗ ಲಿಬರಲ್ ಪಾರ್ಟಿ ನಾಯಕ ಮಾರ್ಕ್ ಕಾರ್ನೆ ಕೆನಡಾ ನೂತನ ಪ್ರಧಾನಿಯಾಗಿ ಮರಳುವುದು ಬಹುತೇಕ ಖಚಿತವಾಗಿದೆ.

ಪೂರ್ತಿ ಓದಿ

1:09 PM IST:

14 ವರ್ಷದ ವೈಭವ್ ಸೂರ್ಯವಂಶಿ ಐಪಿಎಲ್‌ನಲ್ಲಿ ಶತಕ ಸಿಡಿಸಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ರಾಜಸ್ಥಾನ ರಾಯಲ್ಸ್ ಪರ ಆಡುತ್ತಿರುವ ಈ ಬಿಹಾರದ ಹುಡುಗ, ಗುಜರಾತ್ ಟೈಟಾನ್ಸ್ ವಿರುದ್ಧ ಈ ಸಾಧನೆ ಮಾಡಿದ್ದಾರೆ. ವೈಭವ್‌ರ ಈ ಸಾಧನೆಯ ಹಿಂದೆ ಅವರ ಪರಿಶ್ರಮ ಮತ್ತು ಪೋಷಕರ ತ್ಯಾಗ ಅಡಗಿದೆ.

ಪೂರ್ತಿ ಓದಿ

12:53 PM IST:

ರಾಜ್ಯ ಸರ್ಕಾರ ಜನರ ಮೇಲೆ ತೆರಿಗೆ ಹೊರೆ ಹೇರಿದೆ ಎಂದು ಆರೋಪಿಸುವ ಬಿಜೆಪಿ ನಾಯಕರು ಕೇಂದ್ರ ಸರ್ಕಾರದ ಬೆಲೆ ಏರಿಕೆಯನ್ನು ಟೀಕಿಸಬೇಕು ಎಂದು ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ. ಪಂಚ ಗ್ಯಾರಂಟಿ ಯೋಜನೆಗಳಿಂದ ಕುಟುಂಬಗಳ ಆರ್ಥಿಕ ಸ್ಥಿತಿ ಸುಧಾರಿಸಿದೆ ಎಂದು ಅವರು ಹೇಳಿದರು.

ಪೂರ್ತಿ ಓದಿ

12:45 PM IST:

threatening call to antarapata serial actress sharmila chandrashekar: ಕನ್ನಡ ಸೇರಿದಂತೆ ಬೇರೆ ಭಾಷೆಯ ಧಾರಾವಾಹಿಗಳಲ್ಲಿ ನಟಿಸಿರುವ ಶರ್ಮಿಳಾ ಚಂದ್ರಶೇಖರ್‌ ಅವರಿಗೆ ಬೆದರಿಕೆ ಕರೆಯೊಂದು ಬಂದಿದೆ. ಕಿಡಿಗೇಡಿಗಳು ಈಗ ಶರ್ಮಿಳಾರನ್ನು ಟಾರ್ಗೆಟ್‌ ಮಾಡಿದ್ದಾರೆ. ಹಾಗಾದರೆ ಅಸಲಿ ವಿಷಯ ಏನು?
 

ಪೂರ್ತಿ ಓದಿ

12:42 PM IST:

ಕೆನಡಾ ಚುನಾವಣೆಯಲ್ಲಿ ಖಲಿಸ್ತಾನಿ ಪರ ನಾಯಕ ಜಗ್ಮಿತ್ ಸಿಂಗ್ ಸೋಲು ಕಂಡಿದ್ದು, ಪಕ್ಷದ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 

ಪೂರ್ತಿ ಓದಿ

12:38 PM IST:

ಪೆಹಲ್ಗಾಂ ದಾಳಿಯ ಒಂದು ವಾರದಲ್ಲಿ ಕಾಶ್ಮೀರದ ಬಹುತೇಕ ಕಡೆ ಹೈ ಅಲರ್ಟ್ ಘೋಷಿಸಲಾಗಿದೆ. ಕಾಶ್ಮೀರದ 87 ಪ್ರವಾಸಿ ತಾಣಗಳ ಪೈಕಿ 48 ತಾಣಗಳ ಮೇಲೆ ದಾಳಿ ಸಾಧ್ಯತೆ ಕಾರಣ ಬಂದ್ ಮಾಡಲಾಗಿದೆ.

ಪೂರ್ತಿ ಓದಿ

12:33 PM IST:

ಮಾಜಿ ಸಚಿವ ಕೆಎಸ್ ಈಶ್ವರಪ್ಪ, ಸಿಎಂ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕರನ್ನು ದೇಶವಿರೋಧಿ ಎಂದು ಕರೆದಿದ್ದಾರೆ ಮತ್ತು ಸಿದ್ದರಾಮಯ್ಯನವರ ನಡವಳಿಕೆಯನ್ನು ಟೀಕಿಸಿದ್ದಾರೆ.

ಪೂರ್ತಿ ಓದಿ

12:20 PM IST:

ಭಾರತೀಯ ರೈಲ್ವೆ ನೇಮಕಾತಿ ಮಂಡಳಿ (RRB) 2024ರ ಗ್ರೂಪ್ ಡಿ ನೇಮಕಾತಿಗೆ 1.08 ಕೋಟಿ ಅರ್ಜಿಗಳು ಬಂದಿವೆ. ಈ ನೇಮಕಾತಿಯು ಟ್ರ್ಯಾಕ್ ಮೆಂಟೇನರ್, ಅಸಿಸ್ಟೆಂಟ್ ಪಾಯಿಂಟ್ಸ್‌ಮನ್ ಮತ್ತು ತಾಂತ್ರಿಕ ಹುದ್ದೆಗಳನ್ನು ಒಳಗೊಂಡಿದೆ.

ಪೂರ್ತಿ ಓದಿ

12:17 PM IST:

ಸಂಖ್ಯಾಶಾಸ್ತ್ರದ ಪ್ರಕಾರ, ಯಾವ ದಿನಾಂಕದಂದು ಜನಿಸಿದ ಜನರು ತಮ್ಮ ಸಂಗಾತಿಗೆ ಹೆಚ್ಚು ನಿಷ್ಠರಾಗಿರುತ್ತಾರೆ ಮತ್ತು ಯಾರಿಗೆ ಮೋಸ ಮಾಡುವ ಅಪಾಯ ಹೆಚ್ಚು ಎಂದು ನೋಡಿ.
 

ಪೂರ್ತಿ ಓದಿ

12:02 PM IST:

ಕರ್ನಾಟಕದಲ್ಲಿ ಬೇಸಿಗೆ ಮುಗಿಯಲು ಇನ್ನೂ ಒಂದರಿಂದ ಒಂದೂವರೆ ತಿಂಗಳು ಬಾಕಿ ಇದ್ದರೂ, ರಾಜ್ಯದ ಜಲಮೂಲಗಳಲ್ಲಿ ನೀರಿನ ಕೊರತೆ ಕಾಣಿಸಿಕೊಂಡಿದೆ. 42 ಸಾವಿರ ಕೆರೆಗಳ ಪೈಕಿ 17 ಸಾವಿರ ಕೆರೆಗಳಲ್ಲಿ ಶೇ.30ಕ್ಕಿಂತ ಕಡಿಮೆ ನೀರು ಶೇಖರಣೆಯಾಗಿದ್ದು, ಗ್ರಾಮೀಣ ಭಾಗದಲ್ಲಿ ನೀರಿನ ಸಮಸ್ಯೆ ಎದುರಾಗುವ ಲಕ್ಷಣಗಳಿವೆ. ಜಲಾಶಯಗಳಲ್ಲೂ ನೀರಿನ ಕೊರತೆ ಕಾಣಿಸಿಕೊಂಡಿದೆ.

ಪೂರ್ತಿ ಓದಿ

11:40 AM IST:

ಕೆನಡಾದಲ್ಲಿ ಈಗ ಪಂಜಾಬ್ ಮೂಲದ ಎಎಪಿ ನಾಯಕನ ಪುತ್ರಿಯೊಬ್ಬಳು ನಿಗೂಢವಾಗಿ ಸಾವನ್ನಪ್ಪಿದ್ದು, ಈ ಸಾವಿನ ಬಗ್ಗೆ ಹಲವು ಅನುಮಾನ ಮೂಡಿದೆ.

ಪೂರ್ತಿ ಓದಿ

11:17 AM IST:

ಭಾರತ-ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಬೆಂಗಳೂರಿನಲ್ಲಿ ಶ್ರೀರಾಮ ಸೇನೆಯು ಭಾರತೀಯ ಸೈನಿಕರ ಯಶಸ್ಸಿಗಾಗಿ ವಿಶೇಷ ಮಹಾಯಾಗ ಮತ್ತು ಶೋಭಾಯಾತ್ರೆ ನಡೆಸಿತು. ಪೇಜಾವರ ಶ್ರೀಗಳು, ಪ್ರಮೋದ್ ಮುತಾಲಿಕ್ ಸೇರಿದಂತೆ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಪೂರ್ತಿ ಓದಿ

11:14 AM IST:

ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ಬಿರುಕು ಇದ್ದರೆ ಅಥವಾ ನಿಮ್ಮ ಸಂಬಂಧದಲ್ಲಿ ಮಾಧುರ್ಯವನ್ನು ತರಲು ಬಯಸಿದರೆ, ನೀವು ಈ ಅದೃಷ್ಟದ ವಸ್ತುಗಳನ್ನು ಮಲಗುವ ಕೋಣೆಯಲ್ಲಿ ಇಡಬಹುದು.
 

ಪೂರ್ತಿ ಓದಿ

11:11 AM IST:

ಚೀನಾದ ಎಕಾನಾಮಿಕ್ ಕಾರಿಡಾರ್ ಯೋಜನೆಗೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಮತ್ತಷ್ಟು ಅನುಕೂಲತೆ ಕಲ್ಪಿಸಲು ಆಫರ್ ಮುಂದಿಟ್ಟು ವಿಶೇಷ ಬೇಡಿಕೆಯನ್ನು ಚೀನಾ ಮುಂದಿಟ್ಟಿದೆ. ಭಾರತಕ್ಕೆ ಹರಿಯುವ ಬ್ರಹ್ಮಪುತ್ರ ನದಿ ನೀರು ನಿಲ್ಲಿಸಲು ಪಾಕಿಸ್ತಾನ ಚೀನಾ ಬಳಿ ಮನವಿ ಮಾಡಿದೆ.

ಪೂರ್ತಿ ಓದಿ

11:03 AM IST:

Actor aamir khan daughter ira khan: ಬಾಲಿವುಡ್‌ ನಟ ಆಮಿರ್‌ ಖಾನ್‌ ಅವರ ಮಗಳು ಇರಾ ಖಾನ್‌ಗೆ ತಮ್ಮ ಮೇಲೆ ಬೇಸರ ಆಗಿದೆಯಂತೆ. ನಾನು ಹಣ ಮಾಡ್ತಿಲ್ಲ, ನಿಷ್ಪ್ರಯೋಜಕ ಎಂದು ಅವರು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. 
 

ಪೂರ್ತಿ ಓದಿ

10:54 AM IST:

ವಿಜಯನಗರದಲ್ಲಿ ಬಿಬಿಎಂಪಿ ನಿರ್ಮಿಸಿದ ದಕ್ಷಿಣ ಭಾರತದ ಮೊದಲ ಅಂಡರ್‌ಗ್ರೌಂಡ್‌ ಹವಾನಿಯಂತ್ರಿತ ಮಾರುಕಟ್ಟೆ ಉದ್ಘಾಟನೆಯಾಗಿ 8 ತಿಂಗಳು ಕಳೆದರೂ ಸಾರ್ವಜನಿಕ ಬಳಕೆಗೆ ಲಭ್ಯವಿಲ್ಲ. 13 ಕೋಟಿ ವೆಚ್ಚದ ಈ ಮಾರುಕಟ್ಟೆ ಧೂಳು ಹಿಡಿದಿದ್ದು, ಅನಧಿಕೃತ ಬಳಕೆದಾರರ ಪಾಲಾಗಿದೆ.

ಪೂರ್ತಿ ಓದಿ

10:48 AM IST:

ಕೀನ್ಯಾದಲ್ಲಿ ಕಾಡೆಮ್ಮೆಯೊಂದು ತನ್ನ ಕರುವಿನ ಮೇಲೆ ದಾಳಿ ಮಾಡಲು ಬಂದ ಸಿಂಹಗಳ ಹಿಂಡನ್ನು ಏಕಾಂಗಿಯಾಗಿ ಹೋರಾಡಿ ಓಡಿಸಿ ಕರುವನ್ನು ರಕ್ಷಿಸಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪೂರ್ತಿ ಓದಿ

10:29 AM IST:

ಸಮುದ್ರಿಕಾ ಶಾಸ್ತ್ರದ ಪ್ರಕಾರ, ದೇಹದ ವಿವಿಧ ಭಾಗಗಳಲ್ಲಿರುವ ಮಚ್ಚೆಗಳು ನಮಗೆ ಅನೇಕ ಶುಭ ಮತ್ತು ಅಶುಭ ಫಲಿತಾಂಶಗಳನ್ನು ನೀಡುತ್ತವೆ.
 

ಪೂರ್ತಿ ಓದಿ

10:28 AM IST:

ಫ್ಯಾಮಿಲಿ ಮ್ಯಾನ್ 3 ಸೂಪರ್ ಹಿಟ್ ವೆಬ್‌ಸೀರಿಸ್ ಮೂಲಕ ಭಾರಿ ಜನಪ್ರಿಯವಾಗಿರುವ ನಟ ರೋಹಿತ್ ಬಸ್‌ಫೊರೆ ಶವವಾಗಿ ಪತ್ತೆಯಾಗಿದ್ದಾರೆ. ಜಲಪಾತದ ಬಳಿಕ ಮೃತದೇಹ ಪತ್ತೆಯಾಗಿದ್ದು, ಹಲವು ಅನುಮಾನ ಮೂಡಿಸಿದೆ.

ಪೂರ್ತಿ ಓದಿ

10:18 AM IST:

ಬೆಂಗಳೂರಿನಲ್ಲಿ ಸಾಕುನಾಯಿ ಕೂರಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಯುವಕನೊಬ್ಬ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ನಿಯಂತ್ರಣ ತಪ್ಪಿದ ವಾಹನ ಮತ್ತೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ಪೂರ್ತಿ ಓದಿ

10:02 AM IST:

ಈ ಬಾರಿ ಅಕ್ಷಯ ತೃತೀಯದಂದು, 24 ವರ್ಷಗಳ ನಂತರ, ಅಪರೂಪದ ಯೋಗವೆಂದು ಪರಿಗಣಿಸಲಾದ ಅಕ್ಷಯ ಯೋಗ ರೂಪುಗೊಳ್ಳಲಿದೆ. 
 

ಪೂರ್ತಿ ಓದಿ

10:02 AM IST:

ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದ ಕೆಮಿಕಲ್ ಕಾರ್ಖಾನೆಗಳ ದುರ್ನಾತ ಮತ್ತು ತ್ಯಾಜ್ಯದಿಂದಾಗಿ ಕಾರ್ಮಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಉಸಿರಾಟದ ತೊಂದರೆ, ಚರ್ಮದ ಸಮಸ್ಯೆಗಳಿಂದ ಬಳಲುತ್ತಿರುವ ಕಾರ್ಮಿಕರು ತೆಲಂಗಾಣದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರ್ಖಾನೆಗಳ ಉನ್ನತ ಅಧಿಕಾರಿಗಳು ಮಾತ್ರ ದೂರದಲ್ಲಿ ವಾಸಿಸುತ್ತಿದ್ದಾರೆ.

ಪೂರ್ತಿ ಓದಿ

9:56 AM IST:

ಆಟೋ ಚಾಲಕನ ಬಳಿ ಕನ್ನಡದಲ್ಲಿ ಬೆಲೆ ಮಾತುಕತೆ ನಡೆಸಬೇಕು. ಆದರೆ ಕನ್ನಡ ಗೊತ್ತಿಲ್ಲದ ವಿದ್ಯಾರ್ಥಿ ಚಾಟ್‌ಜಿಪಿಟಿ ಬಳಸಿ ಚೌಕಾಸಿ 200 ರೂಪಾಯಿ ಆಟೋ ದರವನ್ನು 120 ರೂಪಾಯಿಗೆ ಮಾಡಿದ ವಿಡಿಯೋ ಒಂದು ವೈರಲ್ ಆಗುತ್ತಿದೆ. 
 

ಪೂರ್ತಿ ಓದಿ

9:52 AM IST:

ದೆಹಲಿಯಲ್ಲಿ ನಡೆದ ಮದುವೆಯೊಂದರಲ್ಲಿ 'ಚನಾ ಮೇರಿಯಾ' ಹಾಡು ಕೇಳಿ ಭಾವುಕನಾದ ವರನು ಮದುವೆ ಮಂಟಪದಿಂದ ಹೊರನಡೆದಿದ್ದಾನೆ. ಇದರಿಂದ ಮದುವೆ ಮುರಿದು ಬಿದ್ದಿದೆ. 

ಪೂರ್ತಿ ಓದಿ

9:06 AM IST:

ಭಾರತ ಸೇರಿದಂತೆ ಹಲವು ರಾಷ್ಟ್ರಗಳು 5ಜಿ ಸೇವೆ ಸಂಭ್ರಮಿಸುತ್ತಿದೆ. ಆದರೆ ಚೀನಾ ಎಲ್ಲಾ ದೇಶದ ನೆಟ್‌ವರ್ಕ್ ಕಸದ ಬುಟ್ಟಿಗೆ ಹಾಕಿದೆ. ಕಾರಣ ಚೀನಾ ವಿಶ್ವದ ಮೊದಲ 10ಜಿ ಬ್ರಾಡ್‌ಬ್ಯಾಂಡ್ ಸೇವೆ ಆರಂಭಿಸಿದೆ.

ಪೂರ್ತಿ ಓದಿ

8:52 AM IST:

ಐಐಎಸ್‌ಸಿ ನಿವೃತ್ತ ಪ್ರಾಧ್ಯಾಪಕ ಡಿ.ಸಣ್ಣ ದುರ್ಗಪ್ಪ ಅವರಿಗೆ ಜಾತಿ ತಾರತಮ್ಯ ಮಾಡಿದ ಆರೋಪದ ಮೇಲೆ ಕ್ರಿಸ್ ಗೋಪಾಲಕೃಷ್ಣನ್ ಸೇರಿದಂತೆ ಇತರರ ವಿರುದ್ಧದ ಎಫ್‌ಐಆರ್ ಅನ್ನು ಹೈಕೋರ್ಟ್ ರದ್ದುಗೊಳಿಸಿದೆ. ದೂರು ಕಾನೂನು ಪ್ರಕ್ರಿಯೆಯ ದುರ್ಬಳಕೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಪೂರ್ತಿ ಓದಿ

8:31 AM IST:

ಭಾರತ ಕಳೆದ 10 ವರ್ಷದಲ್ಲಿ ಬರೋಬ್ಬರಿ 17.1 ಕೋಟಿ ಮಂದಿಯನ್ನು ಕಡುಬಡತನದಿಂದ ಮೇಲಕ್ಕೆತ್ತಿದೆ ಎಂದು ವಿಶ್ವ ಬ್ಯಾಂಕ್ ವರದಿ ಮಾಡಿದೆ. ವಿಶ್ವ ಬ್ಯಾಂಕ್ ನೀಡಿದ ವರದಿಯಲ್ಲಿ ಏನಿದೆ? 

ಪೂರ್ತಿ ಓದಿ

8:17 AM IST:

ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರ ಅಧಿಕಾರದ ಅವಧಿ ವಿಸ್ತರಣೆಯಾಗುತ್ತದೆಯೇ ಅಥವಾ ಹೊಸ ಡಿಜಿಪಿ ಆಯ್ಕೆಯಾಗುತ್ತದೆಯೇ ಎಂಬ ಕುತೂಹಲ ಮಂಗಳವಾರ ಬಗೆಹರಿಯಲಿದೆ. ಸಿಐಡಿ ಡಿಜಿಪಿ ಡಾ.ಎಂ.ಎ.ಸಲೀಂ ಮತ್ತು ಅಗ್ನಿಶಾಮಕ ದಳದ ಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್ ಹೆಸರುಗಳು ಡಿಜಿಪಿ ರೇಸ್‌ನಲ್ಲಿವೆ.

ಪೂರ್ತಿ ಓದಿ

8:10 AM IST:

ಪೆಹಲ್ಗಾಂ ದಾಳಿಗೆ ಸ್ಥಳೀಯರ ಕುಮ್ಮಕ್ಕು ಕುರಿತು ತನಿಖೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಪ್ರವಾಸಿಗನೊಬ್ಬರ ಜಿಪ್‌ಲೈನ್ ಸವಾರಿ ವಿಡಿಯೋ ಕೆಲ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದೆ. ಉಗ್ರರ ದಾಳಿ ನಡುವೆ ಪ್ರವಾಸಿಗನ ಜಿಪ್‌ಲೈನ್ ಸವಾರಿಗೆ ಕಳುಹಿಸಿದ ಆಪರೇಟರ್, ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ್ದಾನೆ. ಇದು ಅನುಮಾನಕ್ಕೆ ಕಾರಣವಾಗಿದೆ.

ಪೂರ್ತಿ ಓದಿ

8:00 AM IST:

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರನ್ನು ವರ್ಗಾವಣೆ ಮಾಡಲಾಗಿದ್ದು, ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಬಿಎಂಆರ್‌ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಎಂ.ಮಹೇಶ್ವರ್ ರಾವ್ ಅವರಿಗೆ ಬಿಬಿಎಂಪಿ ಮುಖ್ಯ ಆಯುಕ್ತರ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ.

ಪೂರ್ತಿ ಓದಿ

7:42 AM IST:

ಮಂಗಳಮುಖಿ ತನುಶ್ರೀ (45) ಕೊಲೆ ಪ್ರಕರಣದಲ್ಲಿ ಆಕೆಯ ಸ್ನೇಹಿತ ಸೇರಿ ಮೂವರನ್ನು ಕೆ.ಆರ್‌.ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮದುವೆಯಾಗುವಂತೆ ಒತ್ತಾಯಿಸಿದ್ದಕ್ಕೆ ಜಗದೀಶ್‌ ಎಂಬಾತ ತನ್ನ ಇಬ್ಬರು ಸ್ನೇಹಿತರೊಂದಿಗೆ ಸೇರಿ ಕೊಲೆ ಮಾಡಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ.

ಪೂರ್ತಿ ಓದಿ

7:11 AM IST:

ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ವರ್ಗಾವಣೆ ಮಾಡಿರುವ ರಾಜ್ಯ ಸರ್ಕಾರ ಈ ಜಾಗಕ್ಕೆ ಬಿಎಂಆರ್‌ಸಿಎಲ್ ನಿರ್ದೇಶಕ ಮಹೇಶ್ವರ ರಾವ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.