userpic
user icon

ಲೇಡಿ ಪಿಎಸ್ಐ ಕಿರುಕುಳ: ಯುವಕನ ಆತ್ಮ*ಹತ್ಯೆ ಯತ್ನ!

Chamarajanagar lady PSI harassment allegations youth attempt to self death  gow
chamarajanagara

Synopsis

ಚಾಮರಾಜನಗರದಲ್ಲಿ ಲೇಡಿ ಪಿಎಸ್ಐ ವರ್ಷಾ ಅವರ ಕಿರುಕುಳದಿಂದಾಗಿ ಯುವಕ ದುಷ್ಯಂತ್ ಆತ್ಮ*ಹತ್ಯೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ದುಷ್ಯಂತ್ ಮೇಲೆ ಹಲ್ಲೆ ಪ್ರಕರಣ ದಾಖಲಾಗಿದ್ದು, ಪಿಎಸ್ಐ ವರ್ಷಾ ಪದೇ ಪದೇ ಮನೆಗೆ ಬಂದು ಕಿರುಕುಳ ನೀಡುತ್ತಿದ್ದರು ಎಂದು ದುಷ್ಯಂತ್ ಪೋಷಕರು ಆರೋಪಿಸಿದ್ದಾರೆ. ದುಷ್ಯಂತ್ ಈಗ ಚಾಮರಾಜನಗರದ ಸಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವರದಿ: ಪುಟ್ಟರಾಜು  ಆರ್.ಸಿ ಏಷ್ಯಾನೆಟ್  ಸುವರ್ಣ ನ್ಯೂಸ್ ,  ಚಾಮರಾಜನಗರ 

ಚಾಮರಾಜನಗರ: ಮೈ ಮೇಲೆ ಖಾಕಿ ಬಿದ್ರೆ ಸಾಕು ನಮ್ಮನ್ನ ಹೇಳೋರು ಯಾರು ಇಲ್ಲ ಅನ್ನೋ ರೀತಿ ಕೆಲ ಅಧಿಕಾರಿಗಳು ವರ್ತನೆ ಮಾಡ್ತಾರೆ. ಲಾ ಎಂಡ್ ಆರ್ಡರ್ ಕಾಪಾಡೊ ಖಾಕಿಕೆ ಕ್ರಿಮಿನಲ್ ಆಗಿ ಬದಲಾದ್ರೆ ಜನರ ಪರಿಸ್ಥಿತಿ ಏನಾಗಬೇಡ.. ಯುವನೊರ್ವನಿಗೆ ಲೇಡಿ ಪಿಎಸ್ಐ ಟಾರ್ಚರ್ ಮಾಡಿದಕ್ಕೆ ಯುವನೊರ್ವ ಮನನೊಂದು ಆತ್ಮ*ಹತ್ಯೆಗೆ ಯತ್ನಿಸಿದ ಕಥೆ ನಿಮ್ಮ ಮುಂದೆ. 

ಪೊಲೀಸ್ ಅನ್ನೊ ಪದಕ್ಕೆ ಒಂದು ಪವರ್ ಇದೆ. ಸಮಾಜದ ಸ್ವಾಸ್ಥ್ಯ ಕಾಪಾಡೋದು ನೊಂದರವರಿಗೆ ನೆರವಾಗೋದು.. ಲಾ ಎಂಡ್ ಆರ್ಡರ್ ಗೆ ತೊಂದರೆಯಾಗದಂತೆ ಕಾಪೋಡು ಖಾಕಿ ಕೆಲ್ಸ. ಮದುಕರ್ ಶೆಟ್ಟಿಯಂತಹ ಅನೇಕ ಒಳ್ಳೆಯ ಕೆಲಸ ಮಾಡಿದಂತ ಅದೆಷ್ಟೊ ಪೊಲೀಸ್ ಅಧಿಕಾರಿಗಳು ಸಾಕಷ್ಟು ಜನಕ್ಕೆ ರೋಲ್ ಮಾಡೆಲ್ ಆಗಿದ್ದಾರೆ ಆದ್ರೆ, ಇಗಿನ್ನು ಪ್ರೊಭೆಷನರಿ ಪಿರಿಯಡ್ ಮುಗಿಸಿಕೊಂಡು ಬಂದ ಲೇಡಿ ಪಿಎಸ್ಐ ವರ್ಷವೀಗ ವಿವಾದದ ಕೇಂದ್ರ ಬಿಂದುವಾಗಿದ್ದಾರೆ.

ಕೊಡಗು ಪೊಲೀಸ್ ಶ್ವಾನ ಪೃಥ್ವಿ ಇನ್ನಿಲ್ಲ, ಕರ್ತವ್ಯ ಮುಗಿಸಿದ ಶಿಸ್ತಿನ ಸಿಪಾಯಿ

ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದ ಮಾಜಿ ನಗರಸಭಾ ಸದಸ್ಯ ಕೆ ಕೆ.ಮೂರ್ತಿ ಎಂಬುವರ ಪುತ್ರ ದುಶ್ಯಂತ್ ಕೆಲ ದಿನಗಳ ಹಿಂದೆ ಬಾರ್ವೊಂದರಲ್ಲಿ ಕಿರಿಕ್ ಮಾಡಿಕೊಂಡು ಮಾಲೀಕನ ಮೇಲೆ ಹಲ್ಲೆ ನಡೆಸಿದ್ದ. ಈ ಸಂಬಂಧ ಬಾರ್ ಮಾಲೀಕ ಇಲ್ಲಿನ ಪಟ್ಟಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದ. ಈ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಗೆ ಬರುವಂತೆ ದುಶ್ಯಂತ್ಗೆ    ಕರೆ ಮಾಡಲಾಗಿತ್ತು. ಪೋಷಕರ ಜೊತೆ  ಠಾಣೆಗೆ ಎರಡು ಮೂರು ಬಾರಿ ಬಂದರು ಠಾಣೆಯ ಪಿಎಸ್ಐ ವರ್ಷಾ ಸ್ಪಂದಿಸಿರಲಿಲ್ಲವಂತೆ. ಹಾಗಾಗಿ ದುಷ್ಯಂತ್ ಪೋಷಕರು ವಾಪಸ್ ತೆರಳಿದ್ದರು. ಆದರೆ ಇಷ್ಟಕ್ಕೆ ಸುಮ್ಮನಾಗದ ಪಿಎಸ್ಐ ವರ್ಷಾ ಅವರು ದುಷ್ಯಂತ್ ಮನೆಯ ಬಳಿಗೆ ಹೋಗಿ ಆತನ ಪೋಷಕ ರನ್ನು ಅವಾಚ್ಯ ಶಬ್ದಗಳಿಂದ  ಹೀನಾಮಾನವಾಗಿ ನಿಂದಿಸಿ ಧಮ್ಕಿ ಹಾಕಿದ್ದರಂತೆ ದುಷ್ಯಂತ್ಗೆ  ಗುಂಡು ಹೊಡೆದು ಸಾಯಿಸುವುದಾಗಿ ಬೆದರಿಕೆ ಹಾಕಿದ್ದರಂತೆ. ಮನೆಯ ಬಳಿ ಪದೇಪದೇ ಬಂದು ಅವಮಾನ ಮಾಡುವುದಾಗಿ ಕಿರುಕುಳ ನೀಡಿದ್ದರಂತೆ ಇದರಿಂದ ತಮ್ಮ ಕುಟುಂಬಕ್ಕೆ ಅವಮಾನ ಆಯ್ತ ಎಂದು ಯುವಕ ದುಷ್ಯಂತ್ ಕ್ರಿಮಿನಾಶಕ ಸೇವಿಸಿ ಆತ್ಮ*ಹತ್ಯೆಗೆ ಯತ್ನಿಸಿದ್ದಾನೆ ಎಂದು ಪೋಷಕರು ಆರೋಪಿಸುತ್ತಿದ್ದಾರೆ.

ಮದುವೆಯಾಗುವಂತೆ ಪೀಡಿಸುತ್ತಿದ್ದ ಮಂಗಳಮುಖಿ ಕೊಲೆ ಮಾಡಿದ್ದ ಮೂವರ ಬಂಧನ

ದುಷ್ಯಂತ್ ಎಂಬ ಯುವಕನಿಗೆ ಟಾರ್ಚರ್ ಕೊಟ್ಟ ಪರಿಣಾಮ ಆ ಯುವಕ ಸೂಸೈಡ್ ಅಟೆಮ್ಟ್ ಮಾಡಿದ್ದು ಈಗ ಚಾಮರಾಜನಗರ ಸಿಮ್ಸ್ ಮೆಡಿಕಲ್ ಕಾಲೇಜ್ ನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಿಎಸ್ಐ ವರ್ಷಾ ತಮ್ಮ ಕುಟುಂಬಕ್ಕೆ ನಿರಂತರ ಕಿರುಕುಳ ನೀಡುತ್ತಿದ್ದಾರೆ ತಮ್ಮ ಮಗ ಆತ್ಮ*ಹತ್ಯೆ  ಯತ್ನಿಸಲು ಅವರೇ ಕಾರಣ ಎಂದು ದುಷ್ಯಂತ್ ಪೋಷಕರು ಪೊಲೀಸ್ ಇನ್ಸ್ಪೆಕ್ಟರ್ ಗೆ ದೂರು ನೀಡಿದ್ದಾರೆ. ಆದರೆ ತಮ್ಮ ದೂರಿಗೆ ಪೊಲೀಸರ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು  ಆರೋಪಿಸಿರುವ ಪೋಷಕರು, ಪಿಎಸ್ಐ ವರ್ಷಾ ವಿರುದ್ದ ಎಫ್ಐಆರ್ ದಾಖಲಿಸಬೇಕೆಂದು ಪಟ್ಟು ಹಿಡಿದಿದ್ದಾರೆ.

23 ವರ್ಷದ ಪ್ರೇಯಸಿ ಮನೆಯಲ್ಲಿ ಮಧ್ಯರಾತ್ರಿ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ 16 ವರ್ಷದ ಯುವಕ!

ಆತ್ಮ*ಹತ್ಯೆಗೆ ಯತ್ನಿಸಿದ ಎಂದು ಹೇಳಲಾದ ದುಷ್ಯಂತನನ್ನು ಚಾಮರಾಜನಗರ ಸಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ದುಷ್ಯಂತ್  ಮೇಲೆ ಹಿಂದೆ ಎರಡು ಕ್ರಿಮಿನಲ್ ಪ್ರಕರಣಗಳಿದ್ದು ಆತನ ಮೇಲೆ ರೌಡಿಶೀಟರ್ ಓಪನ್ ಮಾಡಲು ಪೊಲೀಸರು ಮುಂದಾಗಿದ್ದು  ಈ ಮಾಹಿತಿ ಅರಿತ  ಯುವಕ ದುಷ್ಯಂತ್ ಆತ್ಮ*ಹತ್ಯೆಗೆ ಯತ್ನಿಸಿದ್ದಾನೆಂದು ಹೇಳಲಾಗುತ್ತಿದೆ. ಒಟ್ಟಾರೆ ಹೆಚ್ಚಿನ ತನಿಖೆಯಿಂದಷ್ಟೇ ಸತ್ಯಾಂಶ ಹೊರಬರಬೇಕಿದೆ. 

Latest Videos