ಕರ್ನಾಟಕದಲ್ಲಿ ಹುಲಿ ಉಗುರು ಕೇಸ್ ತಣ್ಣಗಾಯ್ತು, ಕೇರಳದಲ್ಲಿ ಹುಲಿ ಹಲ್ಲು ಲಾಕೆಟ್ ಕೇಸ್ ಸದ್ದು ಜೋರಾಯ್ತು!

Synopsis
ರ್ಯಾಪರ್ ವೇಡನ್ ಬಳಸುತ್ತಿದ್ದ ಹುಲಿ ಹಲ್ಲು ಲಾಕೆಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜ್ಯುವೆಲ್ಲರಿ ಮಾಲೀಕರು ಹಾಗೂ ವೇಡನ್ ಹೇಳಿಕೆ ನೀಡಿದ್ದಾರೆ. ವೇಡನ್ಗೆ ವಿದೇಶಿ ಪ್ರಜೆಯೊಬ್ಬ ಉಡುಗೊರೆಯಾಗಿ ಹುಲಿ ಹಲ್ಲು ನೀಡಿದ್ದಾಗಿ ಹೇಳಿದ್ದಾರೆ.
ಕೊಚ್ಚಿ (ಏ.29): ವೇಡನ್ ಅಲಿಯಾಸ್ ಹಿರಣ್ ದಾಸ್ ಮುರಳಿ ಬೆಳ್ಳಿ ಲಾಕೆಟ್ ಮಾಡಲು ತಂದಿದ್ದು ಹುಲಿ ಹಲ್ಲು ಅಂತ ಗೊತ್ತಿರ್ಲಿಲ್ಲ ಅಂತ ಜ್ಯುವೆಲ್ಲರಿ ಓನರ್ ಹೇಳಿದ್ದಾರೆ. ವಿಯ್ಯೂರ್ ಸರಸ ಜ್ಯುವೆಲ್ಲರಿಯಲ್ಲಿ ಲಾಕೆಟ್ ತಯಾರಿಸಲಾಗಿತ್ತು. ಹುಲಿ ಹಲ್ಲಿಗೆ ಬೆಳ್ಳಿ ಹೊದಿಸಿ ಕೊಟ್ಟಿದ್ದು ಅಂತ ಗೊತ್ತಿರಲಿಲ್ಲವೆಂದು ಸರಸ ಜ್ಯುವೆಲ್ಲರಿ ಓನರ್ ಸಂತೋಷ್ ಕುಮಾರ್ ಹೇಳಿದ್ದಾರೆ. ಹುಲಿ ಹಲ್ಲಿಗೆ ಬೆಳ್ಳಿ ಹೊದಿಸಲು ತಂದಿದ್ದು ವೇಡನ್ ಅಲ್ಲ, 8 ತಿಂಗಳ ಹಿಂದೆ ಲಾಕೆಟ್ ಮಾಡಿಕೊಟ್ಟಿದ್ದು ಎಂದು ಸಂತೋಷ್ ಕುಮಾರ್ ಹೇಳಿದ್ದಾರೆ.
ಕಳೆದ ಎಂಟು ತಿಂಗಳ ಹಿಂದೆ ಹುಲಿ ಹಲ್ಲನ್ನು ಕೊಟ್ಟು ಲಾಕೆಟ್ ಮಾಡಲು ಕೊಟ್ಟಿದ್ದು ವೇಡನ್ ಅಲ್ಲ. ಆದರೆ ಬೆಳ್ಳಿ ಹೊದಿಸಿದ ಹುಲಿ ಹಲ್ಲು ಲಾಕೆಟ್ ಖರೀದಿಸಲು ವೇಡನ್ ಜ್ಯುವೆಲ್ಲರಿಗೆ ಬಂದಿದ್ದನು. ಬೆಳ್ಳಿ ಲಾಕೆಟ್ ಮಾಡಲು 1,000 ರೂಪಾಯಿ ಕೂಲಿ ಕೊಟ್ಟಿದ್ದರೆಂದು ಜ್ಯುವೆಲ್ಲರಿ ಮಾಲೀಕ ಸಂತೋಷ್ ಹೇಳಿದ್ದಾರೆ.
ತನ್ನ ಮಾಲೆಯಲ್ಲಿ ಲಾಕೆಟ್ ಆಗಿ ಬಳಸಿರುವ ಹುಲಿ ಹಲ್ಲು ನಿಜವಾದ ಹುಲಿ ಹಲ್ಲೋ ಅಥವಾ ಬೇರೆ ಯಾವುದರದ್ದೋ ಎಂಬುದು ನನಗೆ ಗೊತ್ತಿಲ್ಲವೆಂದು ರ್ಯಾಪರ್ ವೇಡನ್ ಹೇಳಿದ್ದಾರೆ. ನಾನು ಯಾವುದೇ ಡ್ರಗ್ಸ್ ಬಳಸಿಲ್ಲ, ಆದರೆ ನಾನು ಮದ್ಯಪಾನ ಸೇವನೆ ಮಾಡುತ್ತೇನೆ. ಸಿಗರೇಟ್ ಸೇದ್ತೀನಿ ಅಂತ ಎಲ್ಲರಿಗೂ ಗೊತ್ತು ಅಂತ ವೇಡನ್ ಹೇಳಿದ್ದಾರೆ. ಮೃಗ ಬೇಟೆ ಸೇರಿದಂತೆ ಜಾಮೀನು ರಹಿತ ಅಪರಾಧಗಳಿಗೆ ವೇಡನ್ ವಿರುದ್ಧ ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಮೃಗ ಬೇಟೆ ಸೇರಿದಂತೆ 7 ಸೆಕ್ಷನ್ಗಳ ಅಡಿ ವೇಡನ್ ವಿರುದ್ಧ ಅರಣ್ಯ ಇಲಾಖೆ ಕೇಸ್ ಹಾಕಿದೆ. 3 ರಿಂದ 7 ವರ್ಷ ಜೈಲು ಶಿಕ್ಷೆ ಆಗಬಹುದಾದ ಅಪರಾಧಗಳಿವು. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಸತ್ಯಾಂಶ ಹೊರಬರಬೇಕಿದೆ.
ಇದನ್ನೂ ಓದಿ: ಉಗ್ರರ ವಿರುದ್ಧ ಕ್ರಮ ಕೈಗೊಳ್ಳಲು ಸೇನೆಗೆ ಫ್ರೀ ಹ್ಯಾಂಡ್ ನೀಡಿದ ಪ್ರಧಾನಿ ಮೋದಿ!
ಶ್ರೀಲಂಕಾ ಮೂಲದ ರಂಜಿತ್ ಕುಂಬಿಡಿ ಎಂಬ ವಿದೇಶಿ ಪ್ರಜೆ ತನಗೆ ಉಡುಗೊರೆ ಕೊಟ್ಟಿದ್ದು ಹುಲಿ ಹಲ್ಲು ಅಂತ ವೇಡನ್ ಹೇಳಿಕೆ ನೀಡಿದ್ದಾರೆ. ಇದು ನಿಜವಾದ ಹುಲಿ ಹಲ್ಲು ಅಂತ ಗೊತ್ತಿರಲಿಲ್ಲ, ತ್ರಿಶೂರಿನ ಜ್ಯುವೆಲ್ಲರಿಯಲ್ಲಿ ಇದನ್ನು ಮಾರ್ಪಾಡು ಮಾಡಿ ಮಾಲೆಗೆ ಸೇರಿಸಲಾಗಿದೆ ಅಂತ ವೇಡನ್ ಅರಣ್ಯ ಇಲಾಖೆಗೆ ತಿಳಿಸಿದ್ದಾರೆ. ರಂಜಿತ್ ಕುಂಬಿಡಿಯ ಜೊತೆ ಇನ್ಸ್ಟಾಗ್ರಾಮ್ ಮೂಲಕ ವೇಡನ್ ಸ್ನೇಹ ಬೆಳೆಸಿದ್ದ ಅಂತ ಅರಣ್ಯ ಇಲಾಖೆ ಖಚಿತಪಡಿಸಿದೆ. ವೇಡನ್ ತಾಯಿ ಕೂಡ ಶ್ರೀಲಂಕಾ ಮೂಲದವರಾಗಿದ್ದರಿಂದ ಆ ನೆಲೆಯಲ್ಲಿ ಇಬ್ಬರ ನಡುವೆ ಸ್ನೇಹವಿತ್ತು ಅಂತ ಅರಣ್ಯ ಇಲಾಖೆ ಕಂಡುಹಿಡಿದಿದೆ.
ಗಾಂಜಾ ಪುಡಿ ಮಾಡಲು ಬಳಸುವ ಕ್ರಷರ್ ಮತ್ತು ತೂಕ ಮಾಡುವ ತಕ್ಕಡಿ ಸೇರಿದಂತೆ ವೇಡನ್ ಫ್ಲ್ಯಾಟ್ನಲ್ಲಿ ಪತ್ತೆಯಾಗಿದೆ ಅಂತ ಪೊಲೀಸರು ಖಚಿತಪಡಿಸಿದ್ದಾರೆ. ವೇಡನ್ ಮತ್ತು ಇನ್ನೊಬ್ಬ ರ್ಯಾಪರ್ ಗ್ಯಾಬ್ರಿ ಅಲಿಯಾಸ್ ಕೆ.ಡಬ್ಲ್ಯೂ.ವಿಷ್ಣು ಸೇರಿದಂತೆ 9 ಜನರನ್ನು ನಿನ್ನೆ ಗಾಂಜಾ ಜೊತೆ ಪೊಲೀಸರು ಬಂಧಿಸಿದ್ದಾರೆ. ಈ ನಡುವೆ ವೇಡನ್ ಪರ ಪೋಸ್ಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಸ್ವಲ್ಪ ಪ್ರಮಾಣದ ಗಾಂಜಾ ಸಿಕ್ಕಿದ್ದಕ್ಕೆ ವೇದಿಕೆಗಳಲ್ಲಿ ವೇಡನ್ ಹೇಳಿದ್ದ ರಾಜಕೀಯ ಘೋಷಣೆಗಳನ್ನು ಮುಚ್ಚಿಹಾಕಲು ಯೋಜಿತ ಪ್ರಯತ್ನ ನಡೆಯುತ್ತಿದೆ ಅಂತ ವೇಡನ್ ಬೆಂಬಲಿಗರು ವಾದಿಸುತ್ತಿದ್ದಾರೆ.
ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇಗೆ ಹೊಸ ಎಂಟ್ರಿ-ಎಕ್ಸಿಟ್; ಸಂಸದ ಡಾ.ಸಿ.ಎನ್. ಮಂಜುನಾಥ್