Asianet Suvarna News Asianet Suvarna News

ಮೈಸೂರು ಜಯದೇವ ಶಾಖೆಯ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದ ಡಾ.ಸಿ.ಎನ್‌ ಮಂಜುನಾಥ್‌

ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆ ರಾಜ್ಯಾದ್ಯಂತ ಫೇಮಸ್ ಆಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಮಾತ್ರವಲ್ಲ ಜನರು ಇಲ್ಲಿಗೆ ಚಿಕಿತ್ಸೆ ಪಡೆಯಲು ಬರುತ್ತಾರೆ. ಕೇವಲ ಬೆಂಗಳೂರಿನಲ್ಲಿ ಮಾತ್ರವಲ್ಲ ಮೈಸೂರಿನಲ್ಲಿಯೂ ಜಯದೇವ ಆಸ್ಪತ್ರೆಯ ಶಾಖೆಯಿದೆ. ಮೈಸೂರು ಜಯದೇವ ಶಾಖೆಯ ಸೌಲಭ್ಯಗಳ ಬಗ್ಗೆ ಡಾ.ಸಿ.ಎನ್ ಮಂಜುನಾಥ್‌ ಮಾಹಿತಿ ನೀಡಿದ್ದಾರೆ.

ಬೆಂಗಳೂರು ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಯಾವೆಲ್ಲಾ ರೀತಿಯ ಚಿಕಿತ್ಸಾ ವಿಧಾನ ಲಭ್ಯವಿದೆಯೋ, ಯಾವೆಲ್ಲಾ ಆಪರೇಷನ್‌, ಪ್ರೊಸೀಜರ್ ಆಗುತ್ತೋ ಅದೆಲ್ಲಾ ಮೈಸೂರು ಜಯದೇವ ಆಸ್ಪತ್ರೆಯಲ್ಲೂ ಲಭ್ಯವಿದೆ. ಮೈಸೂರಿನಿಂದ ಬೆಂಗಳೂರಿಗೆ ಬರುವ ಅಗತ್ಯವಿಲ್ಲ ಎಂದು ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಹೇಳಿದ್ದಾರೆ. ಕಲಬುರಗಿಯಲ್ಲೂ ಅಲ್ಲೇ ಎಲ್ಲಾ ವ್ಯವಸ್ಥೆಯಿದೆ. ಎಲ್ಲೂ ತಜ್ಞ ವೈದ್ಯರ ಕೊರತೆಯಿಲ್ಲ ಎಂದಿದ್ದಾರೆ. ಹೆಚ್ಚುವರಿಯಾಗಿ ಮೈಸೂರು ಜಯದೇವ ಶಾಖೆಯ ಸೌಲಭ್ಯಗಳ ಬಗ್ಗೆ ಡಾ.ಸಿ.ಎನ್ ಮಂಜುನಾಥ್‌ ಮಾಹಿತಿ ನೀಡಿದ್ದಾರೆ.

ಎಲ್ಲಾ ಜಿಲ್ಲೆಗಳಿಗೂ ಜಯದೇವ ಆಸ್ಪತ್ರೆ ? ಡಾ. ಸಿ.ಎನ್‌. ಮಂಜುನಾಥ್ ಐಡಿಯಾ ಇದು!