ಶೀಲ ಶಂಕಿಸಿ ಪತ್ನಿಯ ಹತ್ಯೆ: ಬೆಂಗಳೂರಿನಲ್ಲಿ ಬಾಂಗ್ಲಾ ವ್ಯಕ್ತಿಯಿಂದ ಕೃತ್ಯ
ಬೆಂಗಳೂರಿನಲ್ಲಿ ಪತಿಯೇ ಪತ್ನಿಯನ್ನು ಕೊಲೆ ಮಾಡಿದ್ದು, ಪ್ರಕರಣರ ತನಿಖೆ ವೇಳೆ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ.
ಬೆಂಗಳೂರಿನ ಸುದ್ದಗುಂಟೆಯಲ್ಲಿ ಪತಿಯಿಂದಲೇ ಪತ್ನಿಯ ಹತ್ಯೆ ನಡೆದಿದ್ದು, ನಾಝ್ ಎಂಬ ಮಹಿಳೆಯನ್ನು ಜನವರಿ 16ರಂದು ಆಕೆಯ ಪತಿ ನಾಸಿರ್ ಕೊಲೆ ಮಾಡಿದ್ದ. ತನಿಖೆಯ ವೇಳೆ ಬೆಚ್ಚಿಬೀಳಿಸುವ ಮಾಹಿತಿ ಬಹಿರಂಗವಾಗಿದೆ. ಆರೋಪಿ ನಾಸಿರ್ ಬಾಂಗ್ಲಾ ಮೂಲದವನಾಗಿದ್ದು, ಅಕ್ರಮವಾಗಿ ಬೆಂಗಳೂರಿನಲ್ಲಿ ವಾಸಿಸುತ್ತಿದ್ದ. ಆರೋಪಿ ಭಾರತದ ಆಧಾರ್ ಕಾರ್ಡ್ ಹಾಗೂ ವೋಟರ್ ಐಡಿ ಹೊಂದಿದ್ದು, ಯಾವುದೇ ಮಾಹಿತಿ ನೀಡದೇ ನಾಝ್ ವಿವಾಹವಾಗಿದ್ದ ಎಂದು ತಿಳಿದು ಬಂದಿದೆ. ಆರು ತಿಂಗಳ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿತ್ತು. ಪತ್ನಿಯ ಶೀಲ ಶಂಕಿಸಿ ಕೊಲೆ ಮಾಡಿ ಆರೋಪಿ ಪರಾರಿಯಾಗಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ಪಾಕಿಸ್ತಾನದಲ್ಲಿ 'ಬಾಬಾ ಬಾಗೇಶ್ವರ್' ಸುನಾಮಿ: ಶತ್ರು ರಾಷ್ಟ್ರದಲ್ಲಿ ' ...