Asianet Suvarna News Asianet Suvarna News

ಸೀತಾರಾಮ ಸೀರಿಯಲ್​ಗೆ ರವಿಚಂದ್ರನ್​ ಎಂಟ್ರಿ! ಪ್ರೇಕ್ಷಕರಲ್ಲಿ ಸಿಹಿಯಿಂದ ಒಂದು ಮನವಿ- ಏನದು ನೋಡಿ...

ಸೀತಾರಾಮ ಸೀರಿಯಲ್​ಗೆ ರವಿಚಂದ್ರನ್​ ಎಂಟ್ರಿ ಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಸಿಹಿಯೊಂದು ಮನವಿ ಮಾಡಿಕೊಂಡಿದ್ದಾಳೆ. ಏನದು ನೋಡಿ...
 

Ravichandran has given entry to Seetharama serial Sihis sweet request to audience suc
Author
First Published Jan 27, 2024, 3:39 PM IST

ಸಿಹಿ ಎಂದರೆ ಸಾಕು ಸೀರಿಯಲ್​ ಪ್ರಿಯರ ಕಣ್ಣ ಮುಂದೆ ಬರುವುದು ಸೀತಾರಾಮ ಧಾರಾವಾಹಿಯ ಪುಟಾಣಿ. ಮುದ್ದು ಮುದ್ದು ಮಾತುಗಳಿಂದ ಪಟಪಟ ಎನ್ನುತ್ತ ಎಲ್ಲರನ್ನೂ ಮರಳುಮಾಡುವ ಸೀತಾರಾಮ ಸೀರಿಯಲ್​ ಸಿಹಿ ನಿನ್ನೆ ಅಂದರೆ ಜನವರಿ 26ರಂದು  ಹುಟ್ಟುಹಬ್ಬ ಆಚರಸಿಕೊಂಡಿದ್ದಾರೆ.  ಈಕೆಯ ನಿಜವಾದ ಹೆಸರು ರಿತು ಸಿಂಗ್​. ಡ್ರಾಮಾ ಜ್ಯೂನಿಯರ್ಸ್ ಸೀಸನ್ 4 ಶೋ ಮೂಲಕ ಕಿರುತೆರೆ ಜನರಿಗೆ ಪರಿಚಿತರಾದ ರಿತು ಸಿಂಗ್ ಕ್ರೇಜಿಸ್ಟಾರ್​  ರವಿಚಂದ್ರನ್ ಅವರ ಫೇವರೆಟ್​ ನಟಿ. ಡ್ರಾಮಾ ಜ್ಯೂನಿಯರ್ಸ್ ಶೋನಲ್ಲಿ ಮುದ್ದು ಮುದ್ದಾಗಿ ಮಾತನಾಡುತ್ತ, ಸದಾ ರವಿಚಂದ್ರನ್ ಗರ್ಲ್‌ಫ್ರೆಂಡ್ ನಾನು ಎಂದು ಹೇಳುತ್ತಿದ್ದ ಈ ಪುಟ್ಟ ಪೋರಿ ಈಗ ಸೀರಿಯಲ್‌ನ ಕೇಂದ್ರ ಬಿಂದು ಆಗಿದ್ದಾಳೆ. ಐದು ವರ್ಷದ ಪೋರಿ ನಟನೆಗೆ, ಮುದ್ದು ಮುದ್ದಾದ ಮಾತಿಗೆ ವೀಕ್ಷಕರು ಮನ ಸೋತಿದ್ದಾರೆ.  ನೇಪಾಳ ಮೂಲದ ಪುಟಾಣಿ ಈಗ ಕನ್ನಡಿಗರ ಕಣ್ಮಣಿ. 

ಇದೀಗ ಈ ಪುಟಾಣಿ ಸೀತಾರಾಮ ಸೀರಿಯಲ್​ ಪ್ರಿಯರಲ್ಲಿ ಒಂದು ಮನವಿ ಮಾಡಿಕೊಂಡಿದ್ದಾಳೆ. ಅಷ್ಟಕ್ಕೂ ಅದೇನು ಆಕೆಯ ಪರ್ಸನಲ್​ ಲೈಫ್​ ಮನವಿಯಲ್ಲ. ಬದಲಿಗೆ ಸೀತಾರಾಮ ಸೀರಿಯಲ್​ ಮನವಿ. ಇದೀಗ ಅವಳ ಸ್ಕೂಲ್​ಡೇ ಫಂಕ್ಷನ್​ ಇದೆ. ಅದಕ್ಕೆ ಆಕೆ ತನ್ನ ಫ್ರೆಂಡ್​ ರಾಮ್​ ಬರುತ್ತಾನೆ ಎಂದು ಕಾಯುತ್ತಿದ್ದಾಳೆ. ಅದೇ ಇನ್ನೊಂದೆಡೆ ಸೀತಾ ಮತ್ತು ರಾಮರ ನಡುವೆ ಬಿರುಕು ಹೆಚ್ಚುತ್ತಲೇ ಸಾಗಿದೆ. ತಾನು ಶ್ರೀಮಂತ ಎಂದು ಹೇಳದೇ ಸತ್ಯ ಮುಚ್ಚಿಟ್ಟ ಬಗ್ಗೆ ಸೀತಾಳಿಗೆ ರಾಮನ ಮೇಲೆ ಕೋಪ. ಆದರೆ ರಾಮನಿಗೋ ಸೀತಾಳ ಮೇಲೆ ಲವ್​ ಶುರುವಾಗಿದೆ. ಅಮ್ಮ ರಾಮನ ಮೇಲೆ ಕೋಪ ಮಾಡಿಕೊಂಡರೂ ಪುಟಾಣಿ ಸಿಹಿಗೆ ರಾಮ್​ನನ್ನು ಬಿಟ್ಟು ಇರಲು ಆಗುತ್ತಿಲ್ಲ. ಆದರೆ ಅಮ್ಮನ ಕೋಪದ ಮುಂದೆ ಏನೂ ಮಾಡದ ಸ್ಥಿತಿ.

ಸಿಹಿಗಿಂದು ಹುಟ್ಟುಹಬ್ಬದ ಸಂಭ್ರಮ: ರಿಯಲ್​ ಲೈಫ್​ನಲ್ಲೂ ನೋವುಂಡ ಪುಟಾಣಿಯ ವಿಶೇಷ ವಿಡಿಯೋ ರಿಲೀಸ್​

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

ತನ್ನ ಸ್ಕೂಲ್​ ಡೇ ಫಂಕ್ಷನ್​ಗೆ ಬರುವಂತೆ ರಾಮ್​ಗೆ ಸೀಕ್ರೇಟ್​ ಆಗಿ ಸಿಹಿ ಪತ್ರ ಬರೆದಿದ್ದು, ಅದು ರಾಮ್​ಗೆ ತಲುಪಿದೆ. ಅದೇ ಇನ್ನೊಂದೆಡೆ ಕಾಕತಾಳೀಯ ಎನ್ನುವಂತೆ ರಾಮ್​ ಆ ಶಾಲೆಯ ಫಂಕ್ಷನ್​ಗೆ ಗೆಸ್ಟ್​ ಆಗಲು ಹೋಗುತ್ತಿದ್ದಾನೆ. ಸಿಹಿಗೆ ಇದರ ಅರಿವಿಲ್ಲ. ಆದರೆ ಇಲ್ಲೊಂದು ಟ್ವಿಸ್ಟ್​ ಎಂದರೆ ಸಿಹಿಯ ಸ್ಕೂಲ್​ ಡೇ ಫಂಕ್ಷನ್​ಗೆ ಕ್ರೇಜಿಸ್ಟಾರ್​ ರವಿಚಂದ್ರನ್​ ಬರುತ್ತಿದ್ದಾರೆ. ಆದ್ದರಿಂದ ವಿಶೇಷವಾಗಿ ಸಿಹಿ ಪ್ರೇಕ್ಷಕರಲ್ಲಿ ಒಂದು ಮನವಿ ಮಾಡಿಕೊಂಡಿದ್ದಾಳೆ. ನಿಮಗೆಲ್ಲಾ ಸರ್​ಪ್ರೈಸ್​ ಇದೆ. ರವಿಚಂದ್ರನ್​ ಸರ್​ ಅವರು ಶಾಲೆಯ ಫಂಕ್ಷನ್​ಗೆ ಗೆಸ್ಟ್​ ಆಗಿ ಬರುತ್ತಿದ್ದಾರೆ. ನನ್ನ ಫ್ರೆಂಡ್​ ರಾಮ್​ ಕೂಡ ಬಂದ್ರೆ ಚೆನ್ನಾಗಿತ್ತಲ್ವಾ ಎಂದಿರುವ ಸಿಹಿ, ನನ್ನ ಸ್ಕೂಲ್​ ಡೇ ಫಂಕ್ಷನ್​ ಅನ್ನು ತಪ್ಪದೇ ನೋಡಿ ಎಂದು ಹೇಳಿದ್ದಾಳೆ. 

ಅಂದಹಾಗೆ, ರೀತು ನೇಪಾಳದವಳು. ನೇಪಾಳ ಮೂಲದ ರಿತು ತಾಯಿ ಜೊತೆಗೆ ಬೆಂಗಳೂರಿನಲ್ಲಿ ನೆಲೆಸಿದ್ದಾಳೆ. ಸೀತಾರಾಮ ಸೀರಿಯಲ್​ಗೂ ಸಿಹಿ ಬಾಳಿಗೂ ಸಾಮ್ಯತೆ ಇದೆ. ಹೌದು. ಸೀತಾರಾಮ ಸೀರಿಯಲ್​ ರೀತಿಯಲ್ಲಿಯೇ ಈಕೆಯ ನಿಜ ಜೀವನದ ಕೂಡ ಇದೆ. ಸೀತಾರಾಮ ಸೀರಿಯಲ್​ನಲ್ಲಿ ಈಕೆಗೆ ಅಪ್ಪ ಇಲ್ಲ. ಅಮ್ಮನೇ ಸರ್ವಸ್ವ. ಅದೇ ರೀತಿ ರಿತು ರಿಯಲ್​ ಲೈಫ್​ ಸ್ಟೋರಿ ಕೂಡ. ಇದರ ಬಗ್ಗೆ ಖುದ್ದು ಅವರ ಅಮ್ಮನೇ ಹೇಳಿಕೊಂಡಿದ್ದರು. ಈಕೆಗೆ ವೇದಿಕೆಯ ಮೇಲೆ ರವಿಚಂದ್ರನ್​ ಅವರೇ ಧೈರ್ಯ ತುಂಬಿದ್ದರು, ಜೊತೆಗೆ ರಿತು ತಾಯಿಗೂ ಧೈರ್ಯ ಹೇಳಿದ್ದರು. 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

Latest Videos
Follow Us:
Download App:
  • android
  • ios