Asianet Suvarna News Asianet Suvarna News

SARIGAMAPA: ಕುರಿಗಾಹಿಯ ನಾಲಿಗೆ ಮೇಲೆ ಕಲಾಸರಸ್ವತಿ- ಕಂಠ ಮಾಧುರ್ಯಕ್ಕೆ ಕಣ್ಣೀರಾದ ಹಂಸಲೇಖ

ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಸರಿಗಮಪ ಸಂಗೀತ ಕಾರ್ಯಕ್ರಮದಲ್ಲಿ ಕುರಿ ಕಾಯುವ ರಮೇಶ್​ ಲಮಾಣಿ ಅವರ ಕಂಠ ಮಾಧುರ್ಯಕ್ಕೆ ಖುದ್ದು ಹಂಸಲೇಖ ಅವರೇ ಕಣ್ಣೀರಾದರು.
 

Hamsalekha moved to tears by melodious voice of shepherd Ramesh Lamani suc
Author
First Published Oct 15, 2023, 4:48 PM IST

ಕಲಾ ಸರಸ್ವತಿ ಯಾರ ಕೈ ಹಿಡಿಯುತ್ತಾಳೆಯೋ ಹೇಳುವುದು ಅಸಾಧ್ಯವೇ. ಕೋಟ್ಯಧೀಶ್ವರ ಎಷ್ಟೇ ಪ್ರಯತ್ನ ಪಟ್ಟರೂ ಕಲೆ ಆತನಿಗೆ ಒಲಿಯದೇ ಇರಬಹುದು, ಆದರೆ ಯಾವುದೇ ಹಳ್ಳಿಮೂಲೆಯಲ್ಲಿ ಯಾವುದೋ ಚಿಕ್ಕಪುಟ್ಟ ಕಾಯಕ ಮಾಡಿಕೊಂಡಿರುವವನೊಬ್ಬನಿಗೆ ಇದು ಸಹಜವಾಗಿಯೇ ಒಲಿದು ಬರುತ್ತದೆ. ಲಕ್ಷಗಟ್ಟಲೆ ಫೀಸ್​ ಕೊಟ್ಟು ಕಲಿಯುವ ಆಗರ್ಭ ಶ್ರೀಮಂತನಿಗೆ ಒಲಿಯದ ಕಲೆ, ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿಯಲ್ಲಿರುವವನಿಗೆ ಒಲಿದು ಬಿಡಬಹುದು. ಅದಕ್ಕೆ ಸಾಕ್ಷಿಯಾಗಿರುವುದು ಜೀ ಕನ್ನಡ ವಾಹಿನಿಯ ಸರಿಗಮಪ ವೇದಿಕೆ. ಹಿಂದೊಮ್ಮೆ ಕುರಿಕಾಯುವ ಹನುಮಂತ ರಾತ್ರೋರಾತ್ರಿ ಸಕತ್​ ಫೇಮಸ್​ ಆಗಿರುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಈಗ ಅಂಥದ್ದೇ ಇನ್ನೋರ್ವ ಸಂಗೀತ ಕಲಾವಿದನನ್ನು ಪರಿಚಯಿಸುತ್ತಿದೆ ಸರಿಗಮಪ ವೇದಿಕೆ. 

ಇವರ ಹೆಸರು ರಮೇಶ್​ ಲಮಾಣಿ. ಊರು ಗದಗ. ಕೆಲಸ ಕುರಿ ಕಾಯುವುದು. ಕೆಲಸ ಯಾವುದಾದರೇನು, ಇವರಿಗೆ ಆ ಸಂಗೀತ ಕಲೆ ಒಲಿದುಬಿಟ್ಟಿದೆ. ಇವರ ಸುಶ್ರಾವ್ಯ ಕಂಠನಾದಕ್ಕೆ ಸರಿಗಮಪದ ತೀರ್ಪುಗಾರರಾಗಿರುವ ನಾದಬ್ರಹ್ಮ ಹಂಸಲೇಖ ಅವರೇ ಕಣ್ಣೀರಾಗಿಬಿಟ್ಟರು. ಡಾ. ರಾಜ್​ಕುಮಾರ್​ ಅಭಿನಯದ ಆಕಸ್ಮಿಕ ಚಿತ್ರದ ಬಾಳುವಂಥ ಹೂವೇ ಬಾಳುವಾಸೆ ಏಕೆ ಎಂಬ ಹಾಡಿಗೆ ದನಿಯಾದರು ರಮೇಶ್​. ಇವರ ಅದ್ಭುತ ಕಂಠಸಿರಿ ಎಲ್ಲರನ್ನೂ ಮಂತ್ರಮುಗ್ಧಗೊಳಿಸಿದೆ. ಅತ್ತ ಇವರು ಹಾಡುವುದನ್ನೇ ಇವರ ಪತ್ನಿ ಮತ್ತು ಚಿಕ್ಕಪಾಪು ನೋಡುತ್ತಿದ್ದ ದೃಶ್ಯ ಎಲ್ಲರ ಮನವನ್ನು ಕದಡಿತು. 

ಅಮ್ಮನಿಗೆ ಕೊಟ್ಟ ಮಾತು ನೆರವೇರಿಸಿದ ಪುತ್ರ: ಸರಿಗಮಪ ಆಡಿಷನ್​ನಲ್ಲಿ ಭಾವುಕ ಕ್ಷಣ

ಆ್ಯಂಕರ್​ ಅನುಶ್ರೀ ನೀವೇನು ಮಾಡಿಕೊಂಡಿರುವುದು ಎಂದು ಹೇಳಿದಾಗ ರಮೇಶ್​ ಅವರು ತುಂಬಾ ಸಂಕೋಚದಿಂದ ಹೇಳಲೋ ಬೇಡವೋ ಎಂದುಕೊಂಡು ಕಣ್ಣೀರು ತಂದುಕೊಂಡು ಕುರಿ ಕಾಯುವ ಕೆಲಸ ಎಂದರು. ಅದಕ್ಕೆ ಅನುಶ್ರೀ ಅವರು, ಇದ್ಯಾಕೆ ಹೀಗೆ ಹೇಳ್ತೀರಾ, ಮಾಡುವ ಕೆಲಸ ಯಾವುದಾದರೇನು, ಅದರ ಮೇಲೆ ಹೆಮ್ಮೆ ಇರಬೇಕು, ಈ ರೀತಿ ಸಂಕೋಚ ಪಡಬೇಡಿ ಎಂದರು. ಅದಕ್ಕೆ ಹಂಸಲೇಖ ಅವರೂ ಹೌದು. ನಿನ್ನ ಕಂಠಮಾಧುರ್ಯ ಅದ್ಭುತವಾದದ್ದು. ಮಾಡುವ ಕೆಲಸದ ಬಗ್ಗೆ ಸಂಕೋಚವಿಲ್ಲದೇ ಹೇಳಬೇಕು ಎಂದರು. ಕಾಳಿದಾಸನ ವಿಷಯವೂ ಗೊತ್ತಲವೇ ಎಂದು ಪ್ರಶ್ನಿಸಿದರು. ನಂತರ ಸರಿಗಮಪಕ್ಕೆ ಆಯ್ಕೆಯಾಗಿರುವುದಾಗಿ ಹೇಳುತ್ತಲೇ ರಮೇಶ್​ ಅವರಿಗೆ ಅಳು ತಡೆದುಕೊಳ್ಳಲು ಆಗಲೇ ಇಲ್ಲ. 

ನಿನಗೆ ಯಾರು ಸಂಗೀತ ಹೇಳಿಕೊಟ್ಟರು ಎಂದು ಹಂಸಲೇಖ ಅವರು ಕೇಳಿದಾಗ, ಡಾ.ರಾಜ್​ಕುಮಾರ್​ ಅಪ್ಪಾಜಿ ಅವರಿಂದ ಕಲಿತೆ ಎಂದರು ರಮೇಶ್​. ನೀನು ಏಕಲವ್ಯ ಕಣೋ ಎಂದು ಆನಂದಬಾಷ್ಪ ಹರಿಸಿದರು ಹಂಸಲೇಖ. 

ಬಿಗ್​ಬಾಸ್​ ನಡೆಸಿಕೊಡಲು ಸುದೀಪ್​ ಹಾಗೂ ಬೇರೆ ಭಾಷೆ ನಟರು ಪಡೆಯುವುದೆಷ್ಟು? ಅತಿ ಹೆಚ್ಚು ಯಾರಿಗೆ, ಇಲ್ಲಿದೆ ವಿವರ

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

Follow Us:
Download App:
  • android
  • ios