Bigg Boss Kannada Season 12: ಧ್ರುವಂತ್‌ ಹಾಗೂ ಅಶ್ವಿನಿ ಗೌಡ ಅವರಿಗೆ ಕಿಚ್ಚನ ಚಪ್ಪಾಳೆ ಸಿಕ್ಕಿದೆ. ಕಂಪೆನಿ HR ಸಂಕೇತ್‌ ರಾಮಕೃಷ್ಣಮೂರ್ತಿ ಅವರು ಧ್ರುವಂತ್‌ ಅವರ ಪ್ಲಸ್, ಮೈನಸ್‌ ವಿಷಯಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಬೇಸರವನ್ನು ಹೊರಹಾಕಿದ್ದಾರೆ.

ಇಡೀ ಸೀಸನ್‌ ಇಟ್ಟುಕೊಂಡು ಧ್ರುವಂತ್‌ ಅವರಿಗೆ ಕಿಚ್ಚನ ಚಪ್ಪಾಳೆ ಕೊಟ್ಟಿದ್ದಾರೆ ಎಂದು ವೀಕ್ಷಕರು ಸೋಶಿಯಲ್‌ ಮೀಡಿಯಾದಲ್ಲಿ ಬೇಸರವನ್ನು ಹೊರಹಾಕಿದ್ದಾರೆ. ಈ ಮಧ್ಯೆ ಖಾಸಗಿ ಕಂಪೆನಿ HR ಸಂಕೇತ್‌ ರಾಮಕೃಷ್ಣಮೂರ್ತಿ ಅವರು ಸೋಶಿಯಲ್‌ ಮೀಡಿಯಾದಲ್ಲಿ ಬೇಸರವನ್ನು ಹೊರಹಾಕಿದ್ದಾರೆ.

ಧ್ರುವಂತ್‌ಗೆ “ಕಿಚ್ಚನ ಚಪ್ಪಾಳೆ” ಯಾಕೆ ಯೋಗ್ಯವೆನಿಸಿತು… ಮತ್ತು ಯಾಕೆ ಕೆಲ ಅಂಶಗಳಲ್ಲಿ ಪೂರ್ಣವಾಗಿ ಯೋಗ್ಯವೆನಿಸಲಿಲ್ಲ ನನ್ನ HR ದೃಷ್ಟಿಯಿಂದ ಮೊದಲು ಒಂದನ್ನು ಸ್ಪಷ್ಟವಾಗಿ ಹೇಳಬೇಕು.

“ಸುದೀಪ್ ಸರ್ ಅವರ ನಿರ್ಧಾರಕ್ಕೆ ನನ್ನ ಸಂಪೂರ್ಣ ಗೌರವ ಇದೆ. ಅವರು ಕೇವಲ ನಿರೂಪಕರಲ್ಲ ಈ ವೇದಿಕೆಯ ನಾಡಿಯನ್ನೂ, ಸ್ಪರ್ಧಿಗಳ ಮನಸ್ಥಿತಿಯನ್ನೂ ಅರ್ಥಮಾಡಿಕೊಂಡಿರುವ ಅನುಭವಿ ಮಾರ್ಗದರ್ಶಿ. ಅವರ ದೃಷ್ಟಿಯಿಂದ ಧ್ರುವಂತ್ ಆ ಚಪ್ಪಾಳೆಗೆ ಯೋಗ್ಯನೆಂದು ಅವರಿಗೆ ಅನಿಸಿರಬಹುದು. ನಾನು ಇಲ್ಲಿ ಮಾಡುವದು ತೀರ್ಪಲ್ಲ; ನನ್ನ HR ದೃಷ್ಟಿಯಿಂದ ಮಾಡಿದ ಒಂದು ವಿಶ್ಲೇಷಣೆಯ ಹಂಚಿಕೆ ಮಾತ್ರ.”

ಈಗ ನನ್ನ HR ದೃಷ್ಟಿಯಿಂದ ನೇರವಾಗಿ. ಧ್ರುವಂತ್ ಯೋಗ್ಯವೆಂದು ನನಗೆ ಅನಿಸಿದ ಕಾರಣಗಳು. ಧ್ರುವಂತ್‌ನಲ್ಲಿ ನನಗೆ ಮೊದಲು ಕಾಣಿಸಿಕೊಂಡದ್ದು ಗಟ್ಟಿತನ.

1) ಒತ್ತಡದಲ್ಲೂ ಧೈರ್ಯದಿಂದ ನಿಂತದ್ದು

ಮನೆಯೊಳಗಿನ ಒತ್ತಡ, ಕಚ್ಚಟಾ, ಒಂಟಿತನ — ಇವೆಲ್ಲದರ ನಡುವೆಯೂ ಧ್ರುವಂತ್ ಹಿಂದೆ ಸರಿಯದೆ ನಿಂತಿರುವ ಹಲವಾರು ಕ್ಷಣಗಳು ಇದ್ದವು. ಕೆಲ ಸಂದರ್ಭಗಳಲ್ಲಿ ಅವರು ಪ್ರಚೋದಿತರಾಗಿದ್ದರೂ, “ನಾನು ಕುಸಿಯುವುದಿಲ್ಲ” ಎಂಬ ನಿರ್ಧಾರ ಸ್ಪಷ್ಟವಾಗಿ ಕಾಣಿಸಿತು. ಇಂತಹ ಸ್ಥಿತಿಯಲ್ಲಿ ತನ್ನ ಗುರಿಯನ್ನೇ ಕೇಂದ್ರವಾಗಿಟ್ಟುಕೊಳ್ಳುವುದನ್ನು HR ಭಾಷೆಯಲ್ಲಿ ನಾವು ಮಾನಸಿಕ ಸ್ಥೈರ್ಯ ಮತ್ತು ಲಕ್ಷ್ಯಪ್ರಜ್ಞೆ ಎಂದು ಕರೆಯುತ್ತೇವೆ.

2) “ಒಬ್ಬಂಟಿಯಾದರೂ ನಿಲ್ಲುತ್ತೇನೆ” ಎಂಬ ಧೈರ್ಯ 

ಧ್ರುವಂತ್ ಕೆಲ ಸಮಯದಲ್ಲಿ ಗುಂಪಿನಿಂದ ದೂರ ನಿಂತರೂ, ತನ್ನ ನಿಲುವನ್ನು ಬಿಡಲಿಲ್ಲ. “ನನ್ನ ಬಳಿ ಯಾರೂ ಇಲ್ಲದಿದ್ದರೂ ನಾನು ನಿಲ್ಲುತ್ತೇನೆ” ಎಂಬ ಮನಸ್ಥಿತಿ ಪ್ರೇಕ್ಷಕರಿಗೂ ತಾಕಿರಬಹುದು. ಇಂಥ ಧೈರ್ಯ ಒಂದು ಕ್ಷಣದ ಮೆಚ್ಚುಗೆಗೆ ಯೋಗ್ಯವೆಂದು ನನಗೆ ಅನಿಸುತ್ತದೆ.

3) “ನಿಲ್ಲದೆ ಮುನ್ನಡೆಯುವುದು” ಎಂಬ ಮನೋಬಲ 

ಧ್ರುವಂತ್ ಹಲವಾರು ಬಾರಿ ನಾಮನಿರ್ದೇಶನಕ್ಕೆ ಒಳಗಾಗಿ ಕೂಡ ಹಿಂತಿರುಗದೆ ಮುಂದುವರಿದದ್ದು ಅವರ ಹೋರಾಟ ಮನೋಭಾವವನ್ನು ತೋರಿಸಿತು. ನಿರಂತರ ಪರೀಕ್ಷೆಗಳ ನಡುವೆಯೂ ತನ್ನನ್ನು ತಾನು ಹಿಡಿದುಕೊಂಡು ನಿಲ್ಲುವ ಶಕ್ತಿ ಅದು ಒಂದು ದೊಡ್ಡ ಗುಣ.

ಧ್ರುವಂತ್‌ನ ಗಟ್ಟಿತನ, ಹೋರಾಟ ಮನೋಭಾವ, ಗುರಿಯತ್ತ ನಿಲ್ಲದೆ ಸಾಗುವ ಧೈರ್ಯ — ಇವೆಲ್ಲವು “ಕಿಚ್ಚನ ಚಪ್ಪಾಳೆ”ಗೆ ಯೋಗ್ಯವೆನಿಸಬಹುದಾದ ಅಂಶಗಳೇ.

ಧ್ರುವಂತ್ “ಪೂರ್ಣವಾಗಿ” ಯೋಗ್ಯನೆಂದು ನನಗೆ ಅನಿಸದ ವಿಷಯಗಳು. ಆದರೆ HR ದೃಷ್ಟಿಕೋಣದಲ್ಲಿ ಒಂದು ಕ್ಷಣ ಸಾಕಾಗುವುದಿಲ್ಲ. ನಾಯಕತ್ವ ಎಂದರೆ..

* ಇತರರ ಮಾತನ್ನೂ ಕೇಳುವ ಮನಸ್ಸು

* ಭಿನ್ನಾಭಿಪ್ರಾಯಗಳ ನಡುವೆಯೂ ಸಂಬಂಧ ಉಳಿಸುವ ಸಾಮರ್ಥ್ಯ

* ಒತ್ತಡದಲ್ಲೂ ಸಮತೋಲನ ಕಾಪಾಡುವ ಶಕ್ತಿ

* ತನ್ನ ನಡೆ ತಂಡದ ವಾತಾವರಣಕ್ಕೆ ಏನು ಪರಿಣಾಮ ಬೀರುತ್ತಿದೆ ಎಂಬ ಅರಿವು

* ಸ್ಥಿರವಾದ ನಡವಳಿಕೆ (ಒಂದೇ ದಿನ ಅಲ್ಲ — ಪ್ರತಿದಿನವೂ)

ಧ್ರುವಂತ್ ಕೆಲ ಸಂದರ್ಭಗಳಲ್ಲಿ ಬಲವಾಗಿ ನಿಂತದ್ದು ಸರಿ. ಆದರೆ ಕೆಲ ಸಂದರ್ಭಗಳಲ್ಲಿ ಅವರ ಪ್ರತಿಕ್ರಿಯೆಗಳು ನನಗೆ ಅತಿಯಾಗಿ ಭಾವನಾತ್ಮಕವಾಗಿವೆ ಎಂದು ಅನಿಸಿತು.