- Home
- Entertainment
- TV Talk
- BBK 12: ಮನೆಮಂದಿಗೆ ಚೆಲ್ಲಾಟ, ಗಿಲ್ಲಿ ನಟನಿಗೆ ಪ್ರಾಣಸಂಕಟ; ಈ ಎಪಿಸೋಡ್ ನನ್ನ ಮರೆತುಬಿಡಿ, ಪ್ಲೀಸ್..!
BBK 12: ಮನೆಮಂದಿಗೆ ಚೆಲ್ಲಾಟ, ಗಿಲ್ಲಿ ನಟನಿಗೆ ಪ್ರಾಣಸಂಕಟ; ಈ ಎಪಿಸೋಡ್ ನನ್ನ ಮರೆತುಬಿಡಿ, ಪ್ಲೀಸ್..!
Bigg Boss Kannada Season 12 Episode: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಕಾರಣ ಕೊಟ್ಟು, ನಿಮಗೆ ಯಾರಿಗೆ ಶಿಕ್ಷೆ ಕೊಡಬೇಕೋ ಅನಿಸತ್ತೋ, ಅವರಿಗೆ ಶಿಕ್ಷೆ ಕೊಡಿ ಎಂದು ಕಿಚ್ಚ ಸುದೀಪ್ ಅವರು ಹೇಳಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

ಗಿಲ್ಲಿ ನಟನಿಗೆ ಪ್ರಾಣ ಸಂಟಕ
ಹೌದು, ಕಲರ್ಸ್ ಕನ್ನಡ ವಾಹಿನಿಯು ಹೊಸ ಪ್ರೋಮೋ ರಿಲೀಸ್ ಮಾಡಿದೆ. ಬೆಕ್ಕಿಗೆ ಚೆಲ್ಲಾಟ, ಗಿಲ್ಲಿ ನಟನಿಗೆ ಪ್ರಾಣ ಸಂಟಕ ಎನ್ನುವಂತೆ ಗಿಲ್ಲಿ ಪರಿಸ್ಥಿತಿಯಾಗಿದೆ. ರಕ್ಷಿತಾ ಶೆಟ್ಟಿ ಅವರು ಧನುಷ್ ಗೌಡಗೆ ಕಹಿ ಕೊಟ್ಟರು. ಇದಕ್ಕೂ ಕಾರಣ ನೀಡಿದ್ದಾರೆ.
ಕಾವ್ಯ ಶೈವ waxing strip ಶಿಕ್ಷೆ
ನನಗೆ ಇರಿಟೇಟ್ ಮಾಡಿದರು ಎಂದು ಕಾವ್ಯ ಶೈವ ಅವರು ಗಿಲ್ಲಿ ನಟನಿಗೆ ಮೈಮೇಲೆ ಕೂದಲು ತೆಗೆಯುವ waxing strip ಬಳಸಿ ಕಾಲಿನ ಕೂದಲು ತೆಗೆದಿದ್ದಾರೆ. ಆ ನೋವಿಗೆ ಗಿಲ್ಲಿ ನಟ ಅವರು ಕೂಗಾಡಿದ್ದಾರೆ.
ನಿಂಬೆಹಣ್ಣು ಹಿಂಡಿದ ಗಿಲ್ಲಿ
ರಘು ಅವರು ನಿಂಬೆಹಣ್ಣು ನೀಡಿದ್ದಾರೆ. ನಿನ್ನ ಪ್ರೀತಿ ಸಾಕಣ್ಣಾ, ಒಂದೇ ಒಂದು ಕೊಡು ಸಾಕು ಎಂದು ಗಿಲ್ಲಿ ನಟ ಅವರು ಬಾತ್ರೂಮ್ಗೆ ಓಡಿದ್ದಾರೆ. ಪ್ರೀತಿಗೆ ಲಿಮಿಟ್ ಇಲ್ಲ, ಎಷ್ಟು ಬೇಕಿದ್ದರೂ ಕೊಡಬಹುದು ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ಸಾ*ಯಿಸಬೇಕು ಎಂದು ಡಿಸೈಡ್ ಆಗಿದ್ದಾರೆ
ರಾಶಿಕಾ ಶೆಟ್ಟಿ ಅವರು ಕೂಡ ಗಿಲ್ಲಿ ನಟನಿಗೆ ಶಿಕ್ಷೆ ನೀಡಲು ಮುಂದಾಗಿದ್ದಾರೆ. ವ್ಯಾಕ್ಸಿಂಗ್ ಓಕೆನಾ ಎಂದು ಕಿಚ್ಚ ಸುದೀಪ್ ಪ್ರಶ್ನೆ ಮಾಡಿದ್ದಾಗ, ಗಿಲ್ಲಿ ನಟ ಅವರು “ಹೇಗೆ ಸಾ*ಯಿಸಿದರೇನು? ಸಾ*ಯಿಸಬೇಕು ಎಂದು ಡಿಸೈಡ್ ಆಗಿದ್ದಾರೆ, ದಯವಿಟ್ಟು ಎಲ್ಲರೂ ಈ ಎಪಿಸೋಡ್ ನನ್ನ ಮರೆತುಬಿಡಿ” ಎಂದಿದ್ದಾರೆ.
ಗಿಲ್ಲಿ ನಟ ಸುಸ್ತಾದರು
ಅಶ್ವಿನಿ ಗೌಡ ಅವರು ಕೂಡ ಗಿಲ್ಲಿಗೆ ಶಿಕ್ಷೆ ನೀಡಲು ಮುಂದಾಗಿದ್ದಾರೆ. ನೀರು ಕುಡಿಯಲು ಬಿಟ್ಟಿಲ್ಲ, ಎಲ್ಲರೂ ನನಗೆ ಶಿಕ್ಷೆ ಕೊಡುತ್ತಿದ್ದಾರೆ ಎಂದು ಗಿಲ್ಲಿ ಸುಸ್ತಾದರೆ, ಕಿಚ್ಚ ಸುದೀಪ್ ಅವರು ಸಿಕ್ಕಾಪಟ್ಟೆ ನಕ್ಕಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

