Asianet Suvarna News Asianet Suvarna News

ಪಬ್ಲಿಕ್‌ನಲ್ಲೇ ಅಪ್ಪಿಗೆ ಕಿಸ್‌ ಕೊಟ್ಟ ಪಾರ್ಥ! ಲವ್‌ ಸ್ಟೋರಿ ನೋಡಿ ಭೂಮಿ ಶಾಕ್‌: ಮದ್ವೆಯಾದ್ರೆ ಗತಿಯೇನು?

ಅಪ್ಪಿ ಮತ್ತು ಪಾರ್ಥನ ಲವ್‌ ಸ್ಟೋರಿ ಭೂಮಿಕಾಗೆ ತಿಳಿಯಿತು. ಆದರೆ ಅಪ್ಪಿ ಮದುವೆಯಾಗಿ ಬಂದರೆ ರಾಕ್ಷಸ ಜೈದೇವನ ಕೈಯಿಂದ ಬಚಾವ್‌ ಮಾಡಲು ಸಾಧ್ಯನಾ? 
 

Bhumika comes to know about Appi and Partha's love story in amrutadhare serial suc
Author
First Published Mar 5, 2024, 1:42 PM IST | Last Updated Mar 5, 2024, 1:42 PM IST

ಭೂಮಿಕಾ ತಂಗಿ ಅಪ್ಪಿ ಮತ್ತು ಮೈದುನ ಪಾರ್ಥನ ಲವ್‌ಸ್ಟೋರಿ ಭೂಮಿಕಾಗೆ ತಿಳಿದಿದೆ. ಗೌತಮ್‌ ತಮ್ಮನ ಜೊತೆ ಮದ್ವೆ ಎಂದಾಗ ಪಾರ್ಥ ಎಂದೇ ತಿಳಿದುಕೊಂಡಿದ್ದ ಅಪ್ಪಿ, ಮದುವೆಗೆ ಓಕೆ ಅಂದುಬಿಟ್ಟಿದ್ದಳು. ನಂತರ ಸತ್ಯ ಗೊತ್ತಾದಾಗ ತುಂಬಾ ತಡವಾಗಿ ಹೋಗಿತ್ತು. ಅನಿವಾರ್ಯವಾಗಿ ಜೈದೇವನ ಜೊತೆ ಮದ್ವೆಗೆ ಒಪ್ಪಿಕೊಂಡಿದ್ದಳು. ಆದರೆ ಕುತಂತ್ರಿ ಜೈದೇವ ಇದಾಗಲೇ ಕೆಲಸದಾಕೆ ಮಲ್ಲಿಯನ್ನು ಗರ್ಭಿಣಿ ಮಾಡಿರುವ ವಿಷಯ ತಿಳಿಯುತ್ತಲೇ ಭೂಮಿಕಾ ಅವರಿಬ್ಬರ ಮದ್ವೆ ಮಾಡಿಸುವಲ್ಲಿ ಶಕ್ಯಳಾಗಿದ್ದಳು. ಇದೀಗ ಕುತಂತ್ರಿಯಾಗಿರುವ ಜೈದೇವ ಹಾಗೂ ವಿಲನ್‌ ಆಗಿರುವ ಅತ್ತೆ ಶಕುಂತಲಾದೇವಿಯ ವೈರತ್ವ ಕಟ್ಟಿಕೊಂಡಿದ್ದಾಳೆ. ಇದರ ನಡುವೆಯೇ ಈಗ ತಂಗಿ ಮತ್ತು ಪಾರ್ಥನ ಲವ್‌ ಸ್ಟೋರಿ ವಿಷಯ ತಿಳಿದಿದೆ.

ಪಾರ್ಥ ಮತ್ತು ಅಪ್ಪಿ ಹೊರಗಡೆ ಐಸ್‌ಕ್ರೀಂ ತಿನ್ನುವ ಸಂದರ್ಭದಲ್ಲಿ ಸಾರ್ವಜನಿಕವಾಗಿಯೇ ಪಾರ್ಥ ಅಪ್ಪಿಗೆ ಕಿಸ್‌ ಮಾಡಿದ್ದಾನೆ. ಇದನ್ನು ಆಟೋದಲ್ಲಿದ್ದ ಭೂಮಿಕಾ ನೋಡಿದ್ದಾಳೆ. ಮುಂದೇನು ಆಗುತ್ತದೆ ಎನ್ನುವುದು ಕುತೂಹಲ. ಭೂಮಿಕಾ ನೋಡಿದ ಮೇಲೆ ತಂಗಿಯ ಮದ್ವೆ ಮಾಡಿಸಿಯೇ ತೀರುತ್ತಾಳೆ ಎನ್ನುತ್ತಾರೆ ಫ್ಯಾನ್ಸ್‌. ಆದರೆ ಅದು ಅಂದುಕೊಂಡಷ್ಟು ಸುಲಭವಲ್ಲ ಎನ್ನುವುದು ನಿಜ. ಒಂದು ವೇಳೆ ಮದ್ವೆಯಾದರೂ ಜೈದೇವನಿಂದ ಅಪ್ಪಿಯನ್ನು ಕಾಪಾಡುವುದು ಭೂಮಿಕಾಗೆ ಸವಾಲಾಗಿ ಹೋಗಬಹುದು. 

ಚಾಂದನಿ ಜೊತೆ ಸೀತಾ ಚೈಯಾ ಚೈಯಾ... ಅವ್ಳು ಒಳ್ಳೆಯವಳಲ್ಲ ಕಣೇ ಹುಷಾರ್ ಎಂದ ಫ್ಯಾನ್ಸ್​...

ಜೈದೇವ ಪತ್ನಿಯ ಮೇಲೆ ಕೈಮಾಡಿದ್ದಾಗಿ ಭೂಮಿಕಾ ಜೈದೇವನ ವಿರುದ್ಧ ತಿರುಗಿ ಬಿದ್ದಿದ್ದಳು. ಭೂಮಿಕಾ ಹೆಸರನ್ನು ಕೆಡಿಸಲು ಆಕೆಯ ಹೆಸರು ಹೇಳಿ ಖುದ್ದು ಜೈದೇವನೇ ತನ್ನ ಮೇಲೆ ಕೇಸು ದಾಖಲು ಮಾಡಿಕೊಂಡು ಭೂಮಿಕಾ ವಿರುದ್ಧ ಎಲ್ಲರ ದೃಷ್ಟಿಯಲ್ಲಿ ಆರೋಪಿ  ಮಾಡಿದ್ದಾನೆ.  ಇದು ಭೂಮಿಕಾಗೆ ತಿಳಿದಿದೆ. ಜೈದೇವನಿಗೆ ಚಾಲೆಂಜ್‌ ಹಾಕಿದ್ದಾಳೆ. ತನ್ನ ಮದುವೆ ಸಿಂಧುವೇ ಅಲ್ಲ ಎಂದಿದ್ದ ಜೈದೇವ. ಅಷ್ಟಕ್ಕೆ ಸುಮ್ಮನಾಗದ ಭೂಮಿಕಾ ಇಬ್ಬರ ಮದುವೆಯನ್ನು ನೋಂದಣಿ ಮಾಡಿಸಿಬಿಟ್ಟಿದ್ದಾಳೆ. ಇನ್ನು ತನ್ನ ಆಟ ಶುರು ಮಾಡಿಕೊಂಡಿದ್ದಾಳೆ. 

ಇದೀಗ ಭೂಮಿಕಾ ವಿರುದ್ಧ ಜೈದೇವ ಕೊತಕೊತ ಕುದಿಯುತ್ತಿದ್ದಾನೆ. ಇನ್ನು ಅಪ್ಪಿ ಮದುವೆಯಾಗಿ ಅದೇ ಮನೆಗೆ ಬಂದರೆ ಮುಗಿಯಿತು ಕಥೆ. ಜೈದೇವನ ವಿರುದ್ಧ ಯಾರೂ ಮಾತನ್ನು ಕೇಳಲು ಇಷ್ಟಪಡುವುದಿಲ್ಲ, ಒಂದೆಡೆ ಮಲ್ಲಿಯ ಜವಾಬ್ದಾರಿ ವಹಿಸಿಕೊಂಡಿರುವ ಭೂಮಿಕಾ, ಈಗ ಅಪ್ಪಿಯ ಜವಾಬ್ದಾರಿಯನ್ನೂ ತೆಗೆದುಕೊಳ್ಳಬೇಕಾಗುತ್ತದೆ. ಇನ್ನು ಏನೇನು ಆಗುತ್ತದೆಯೋ ನೋಡಬೇಕು. 

ಗರ್ಭಿಣಿ ಅಲ್ಲದಿದ್ರೂ ಸೀಮಂತಕ್ಕೆ ರೆಡಿ! ಮಗಳ ದುರಾಸೆಗೆ ಮುಗ್ಧ ಅಮ್ಮನಿಗೆ ಇದೆಂಥ ಶಿಕ್ಷೆ!

 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

Latest Videos
Follow Us:
Download App:
  • android
  • ios