Asianet Suvarna News Asianet Suvarna News

BBK9; ಅನ್ನ ಹಾಕೋಕೆ ಯೋಗ್ಯತೆ ಇಲ್ಲ, ಪುರಾಣ ಮಾತಾಡ್ತಾರೆ, ಸ್ಪರ್ಧಿಗಳ ವಿರುದ್ಧ ಸಿಡಿದೆದ್ದ ಆರ್ಯವರ್ಧನ್

ಸ್ಪರ್ಧಿಗಳ ಮೇಲಿನ ಸಿಟ್ಟನ್ನು ಆರ್ಯವರ್ಧನ್ ಊದ ಮೇಲೆ ತೋರಿಸುತ್ತಿದ್ದಾರೆ. ಇಲ್ಲಿ ಯಾರಿಗೂ ಅಡುಗೆ ಮಾಡುವ ಯೋಗ್ಯತೆ ಇಲ್ಲ ಪುರಾಣ ಮಾಡ್ತಾರೆ ಎಂದು ಕೂಗಾಡಿದ್ದಾರೆ. 

Aryavardhan guruji fighting with other contestants for food in Bigg Boss Kannada 9 sgk
Author
First Published Oct 4, 2022, 2:34 PM IST

ಬಿಗ್ ಬಾಸ್ ಕನ್ನಡ ಸೀಸನ್ 9 ಎರಡನೇ ವಾರಕ್ಕೆ ಕಾಲಿಟ್ಟಿದೆ. ಈ ಬಾರಿ ಒಟ್ಟು 18 ಮಂದಿ ಬಿಗ್ ಮನೆಗೆ ಎಂಟ್ರಿ ಕೊಟ್ಟಿದ್ದು ಈಗಾಗಲೇ ಒಬ್ಬರು ಎಲಿಮಿನೇಟ್ ಆಗಿ ಮನೆಯಿಂದ ಹೊರನಡೆದಿದ್ದಾರೆ. ಪ್ರತಿಯೊಬ್ಬರು ಈಗಾಗಲೇ ತಮ್ಮ ತಮ್ಮ ಅಸಲಿ ಆಟ ಪ್ರಾರಂಭ ಮಾಡದ್ದಾರೆ. ಟಾಸ್ಕ್ ಜೊತೆ  ಅಳು, ನಗು, ಕಿತ್ತಾಟ, ವಾಗ್ವಾದ ಬಿಗ್ ಮನೆಯಲ್ಲಿ ಜೋರಾಗಿದೆ. ಬಿಗ್ ಮನೆ ಎಂದ್ಮೇಲೆ ಸ್ಪರ್ಧಿಗಳ ನಡುವೆ ಕಿತ್ತಾಟ, ಮುನಿಸು, ಜಗಳ ಜೋರಾಗೆ ಇರುತ್ತದೆ. ಈ ಬಾರಿ ಬಿಗ್ ಬಾಸ್ ಕೂಡ ಇದಕ್ಕೆಲ್ಲ ಹೊರತಾಗಿಲ್ಲ. ಬಿಗ್ ಬಾಸ್ ಮನೆಯಲ್ಲಿ ಒಬ್ಬರಲ್ಲೊಬ್ಬರು ಕಿತ್ತಾಡಿಕೊಳ್ಳುತ್ತಲೆ ಇರುತ್ತಾರೆ. ಇದೀಗ ಆರ್ಯವರ್ಧನ್ ಗುರೂಜಿ ಸ್ಪರ್ಧಿಗಳ ವಿರುದ್ಧ ಸಿಡಿದೆದಿದ್ದಾರೆ. 

ಸ್ಪರ್ಧಿಗಳ ಮೇಲಿನ ಸಿಟ್ಟನ್ನು ಆರ್ಯವರ್ಧನ್ ಊಟದ ಮೇಲೆ ತೋರಿಸುತ್ತಿದ್ದಾರೆ. ಕೋಪಿಸಿಕೊಂಡಿರುವ ಆರ್ಯವರ್ಧನ್ ಊಟ ಮಾಡದೆ ಉಪವಾಸ ಇದ್ದರು. ಉಳಿದ ಸ್ಪರ್ಧಿಗಳ ಜೊತೆ ಕುಳಿತಿದ್ದ ಆರ್ಯವರ್ಧನ್ ಹಸಿವಾಗುತ್ತಿದೆ ಊಟ ತಂದುಕೊಡಿ ಎಂದು ಕೇಳಿದರು. ಊಟ ತಂದುಕೊಡುವ ಮೊದಲೇ ಆರ್ಯವರ್ಧನ್ ಬಾತ್‌ ರೂಮ್ ಸೇರಿದ್ದರು. ಅನುಪಮಾ ಬಂದು ಹಸಿವು ಅಂದರಲ್ಲಾ ಎಂದು ಕೇಳಿದರು. ಇದಕ್ಕೆ ಸಿಡಿದೆದ್ದ ಆರ್ಯವರ್ಧನ್ ನಿಮ್ಮನ್ನ ಕೇಳಿದ್ನಾ, ಯಾಕೆ ಒಬ್ಬರಾದಮೇಲೆ ಒಬ್ಬರು ಬರ್ತೀರಾ, ಚಾಡಿ ಯಾಕೆ ಹೇಳುತ್ತಿದ್ದೀರಾ? ಎಂದು ಅನುಪಮಾ ಮೇಲೆ ಕೂಗಾಡಿದರು. 

ಅಷ್ಟೊತ್ತಿಗೆ ಉಳಿದ ಸ್ಪರ್ಧಿಗಳು ಎಂಟ್ರಿ ಕೊಟ್ಟರು. ರಾಕೇಶ್ ಮಾತನಾಡಿ ಇದು ಚಾಡಿ ಅಲ್ಲ ಇದು ಹೇಳಿ, ಅನ್ ಹಾಕಿಕೊಂಡು ಬರ್ತೀನಿ ಆರಾಮಾಗಿ ಊಟ ಮಾಡೋಣ ಎಂದರು. ಆದರೆ ಗರಂ ಆದ ಆರ್ಯವರ್ಧನ್ ಇಷ್ಟು ದಿನ ಅನ್ನ ಮಾಡಿದ್ದೀನಿ, ಒಬ್ಬರಾದ್ರು ಇರಿ ಗರೂಜಿ ಅಡುಗೆ ಮಾಡ್ತೀನಿ ಅಂತ ಒಬ್ಬರಾದ್ರು ಹೇಳಿದ್ರಾ? ಅನ್ನ ಹಾಕೋಕೆ ಒಬ್ಬರಿಗೂ ಯೋಗ್ಯತೆ ಇಲ್ಲ, ಪುರಾಣ ಮಾಡ್ತಾರೆ ಎಂದು ಆರ್ಯವರ್ಧನ್ ಕೋಪದಲ್ಲಿ ಯೋಗ್ಯತೆ ಬಾಣ ಬಿಟ್ಟರು. ಗುರೂಜಿ ಮಾತು ಕೇಳಿ ಆಕ್ರೋಶಗೊಂಡ ರಾಕೇಶ್ ಅಡಿಗ ಇಲ್ಲಿ ಯಾರು ಸಹ ಮನೆಯಿಂದ ತಂದು ಹಾಕುತ್ತಿಲ್ಲ, ಯೋಗ್ಯತೆ ಮಾತೆಲ್ಲ ಬೇಡ ಎಂದು ಗುರೂಜಿ ವಿರುದ್ಧ ಏರು ಧ್ವನಿಯಲ್ಲಿ ಮಾತನಾಡಿದರು. ಆದರೆ ಗುರೂಜಿ ಇದಕ್ಕೆ ನಾನೇನು ಮಾಡಲಿ ಎಂದು ತಿರುಗೇಟು ನೀಡಿದರು. ಸದ್ಯ ಸಂಚಿಕೆಯ ಪ್ರೋಮೋ ರಿಲೀಸ್ ಆಗಿದೆ. 

ಆರ್ಯರ್ಧನ್ ನಡೆಗೆ ನೆಟ್ಟಿಗರು ಆಕ್ರೋಶಗೊಂಡಿದ್ದಾರೆ. ಊಟದ ವಿಚಾರದಲ್ಲಿ ಈ ರೀತಿ ಹೇಳುವುದು ಸರಿಯಲ್ಲ ಎಂದು ಹೇಳುತ್ತಿದ್ದಾರೆ. ಆರ್ಯವರ್ಧನ್ ಮಾತು ಸರಿಯಿಲ್ಲ ಎಂದು ನೆಟ್ಟಿಗರು ರಾಕೇಶ್‌ಗೆ ಬೆಂಬಲ ನೀಡುತ್ತಿದ್ದಾರೆ. ರಾಕೇಶ್ ಸರಯಾಗಿ ಮಾತನಾಡಿದ್ರು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಆರ್ಯವರ್ಧನ್ ಕೋಪಗೊಂಡಿದ್ದೇಕೆ?  ಊಟ ಮಾಡುತ್ತಾರಾ ಎಂದು ಸಂಪೂರ್ಣ ಸಂಚಿಕೆ ನೋಡಲು ಇಂದು (ಅಕ್ಟೋಬರ್ 4) ರಾತ್ರಿ ವರೆಗೂ ಕಾಯಬೇಕು.

BBK9; ಅವನ ಮನೆ ಆಳಾ, ಕಪಿ, ಬಿಗ್ ಮನೆಯಲ್ಲಿ ತಾರಕಕ್ಕೇರಿದ ಮರ್ಯಾದೆ ಜಗಳ, ಕಣ್ಣೀರಿಟ್ಟ ಕಾವ್ಯಶ್ರೀ

ಬಿಗ್ ಬಾಸ್ 9 ಮನೆ ಸೇರಿದ ಸ್ಪರ್ಧಿಗಳು

ಅಂದಹಾಗೆ ಬಿಗ್‌ಬಾಸ್ 9 ಸೆಪ್ಟೆಂಬರ್ 24ರಿಂದ ಆರಂಭವಾಗಿದೆ. ಈ ಬಾರಿಯ ಬಿಗ್ ಬಾಸ್‌ನಲ್ಲಿ ಅರುಣ್ ಸಾಗರ್, ಅಶ್ವಿನ ನಕ್ಷತ್ರದ ಮೂಲಕ ಮನೆ ಮಾತಾಗಿದ್ದ ನಟಿ ಮಯೂರಿ, ದೀಪಿಕಾ ದಾಸ್, ನವಾಜ್,  ದಿವ್ಯಾ ಉರುಡುಗ, ದರ್ಶ್ ಚಂದ್ರಪ್ಪ, ಪ್ರಶಾಂತ್ ಸಂಬರಗಿ, ಅಮೂಲ್ಯ ಗೌಡ, ಸನ್ಯಾ ಅಯ್ಯರ್, ರೂಪೇಶ್ ಶೆಟ್ಟಿ, ವಿನೋದ್ ಗೊಬ್ರಗಾಲ (ಕಾಮಿಡಿ ಕಿಲಾಡಿಗಳು), ಲಕ್ಷ್ಮಿ ಬಾರಮ್ಮ ಸೀರಿಯಲ್ ಖ್ಯಾತಿಯ ನೇಹಾ ಗೌಡ,  ನಾನು ಅಂದ್ರೆ ನಂಬರ್, ನಂಬರ್ ಅಂದ್ರೆ ನಾನು ಎನ್ನುವ ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ, ಐಶ್ವರ್ಯಾ(ಬೈಕ್ ರೈಡರ್), ರೂಪೇಶ್ ರಾಜಣ್ಣ, ಮಂಗಳ ಗೌರಿಯ ಕಾವ್ಯಶ್ರೀ, ನಿರೂಪಕಿ ಅನುಪಮಾ ಗೌಡ ಸ್ಪರ್ಧಿಗಳಾಗಿ ಭಾಗಿಯಾಗಿದ್ದರು. 

BBK9: ಎರಡನೇ ವಾರ ಮನೆಯಿಂದ ಹೊರಹೋಗಲು 9 ಮಂದಿ ನಾಮಿನೇಟ್

ಈ ಬಿಗ್ ಬಾಸ್ ಆವೃತ್ತಿಯಲ್ಲಿ ಈಗಾಗಲೇ ಒಮ್ಮೆ ಪಾಲ್ಗೊಂಡಿದ್ದ ಸ್ಪರ್ಧಿಗಳು ಹಾಗೂ ಇತ್ತೀಚೆಗೆ ಒಟಿಟಿ ಬಿಗ್ ಬಾಸ್‌ನಲ್ಲಿ ಗೆದ್ದ ನಾಲ್ಕು ಸ್ಪರ್ಧಿಗಳು ಹಾಗೂ ಕೆಲವು ಹೊಸ ಮುಖಗಳು ಸೇರಿರುವುದು ವಿಶೇಷ. ಎಂದಿನಂತೆ ಸ್ಯಾಂಡಲ್‌ವುಡ್ ಚಕ್ರವರ್ತಿ ಕಿಚ್ಚ ಸುದೀಪ್ ನಿರೂಪಣೆ ಮಾಡುತ್ತಿದ್ದು, ಅಭಿಮಾನಿಗಳು ವಾರದ ಕಥೆ ಕಿಚ್ಚನ ಜೊತೆ ನೋಡಲು ಕಾತುರರಾಗಿರುತ್ತಾರೆ. ಮೊದಲ ವಾರ ಐಶ್ವರ್ಯಾ ಪಿಸೆ ಮನೆಯಿಂದ ಹೊರಹೋಗಿದ್ದು ಸದ್ಯ 17 ಮಂದಿ ಬಿಗ್ ಬಾಸ್ ಮನೆಯಲ್ಲಿದ್ದಾರೆ. ಎರಡನೇ ವಾರ ಯಾರು ಹೊರಹೋಗುತ್ತಾರೆ ಎಂದು ಕಾದುನೋಡಬೇಕಿದೆ.

Follow Us:
Download App:
  • android
  • ios