Operation Sindoor: ಪಾಕ್ ಮೇಲೆ ಮಹಾ ದಾಳಿಗೆ ಟ್ರಂಪ್ ಕಾರ್ಡ್ ಆಗಿದ್ದು LMS!

Synopsis
What is LMS Technology: ಭಾರತೀಯ ಸೇನಾ ಪಡೆಗಳು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕ ಉಡಾವಣಾ ಪ್ಯಾಡ್ಗಳನ್ನು ನಿಖರವಾದ ದಾಳಿಗಳ ಮೂಲಕ ನಾಶಪಡಿಸಿವೆ. ಈ ನಿರ್ದಿಷ್ಟ ದಾಳಿಗಾಗಿ, ಭಾರತವು 'ಲೋಯರಿಂಗ್ ಮುನಿಷನ್ ಸಿಸ್ಟಮ್' ಅಥವಾ ಸಂಕ್ಷಿಪ್ತವಾಗಿ LMS ಅನ್ನು ಬಳಸಿತ್ತು.
ನವದೆಹಲಿ (ಮೇ.7): ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಭಯೋತ್ಪಾದಕ ದಾಳಿ ನಡೆದು ಸುಮಾರು ಎರಡು ವಾರಗಳು ಕಳೆದಿವೆ. ಭಾರತ ಇನ್ನೇನು ಮೌನವಾಗಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಆಪರೇಷನ್ ಸಿಂಧೂರ್ ಈ ಎಲ್ಲಾ ನಿರೀಕ್ಷೆಗಳನ್ನು ಸುಳ್ಳು ಮಾಡಿದೆ. ಭಾರತ ಬುಧವಾರ ತಡರಾತ್ರಿ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತಿ ಕಾಶ್ಮೀರದಲ್ಲಿನ ಭಯೋತ್ಪಾದಕ ಟಾರ್ಗೆಟ್ಗಳ ಮೇಲೆ ದಾಳಿ ಮಾಡಿದೆ.
ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಸುಮಾರು ಎರಡು ವಾರಗಳಲ್ಲಿ, ಭಾರತ ಭಯೋತ್ಪಾದಕರನ್ನು ಹೆಚ್ಚೂ ಕಡಿಮೆ ಸಂಪೂರ್ಣವಾಗಿ ಮಟ್ಟಹಾಕಿದೆ. ಭಾರತೀಯ ಸಶಸ್ತ್ರ ಪಡೆಗಳು ನಿಖರವಾದ ದಾಳಿಗಳ ಮೂಲಕ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಿದವು. ಈ ನಿರ್ದಿಷ್ಟ ದಾಳಿಗಾಗಿ, ಭಾರತವು 'ಲೋಯರಿಂಗ್ ಮ್ಯುನಿಷನ್ ಸಿಸ್ಟಮ್' ಅಥವಾ ಸಂಕ್ಷಿಪ್ತವಾಗಿ LMS ಎಂದು ಕರೆಯಲಾಗುವ ಅಸ್ತ್ರವನ್ನು ಬಳಸಿತ್ತು. ಈ ತಂತ್ರಜ್ಞಾನದ ಸಹಾಯದಿಂದ ಮಾತ್ರ ಭಾರತದ ಆಪರೇಷನ್ ಸಿಂಧೂರ್ ಯಶಸ್ವಿಯಾಯಿತು.
ಪಹಲ್ಗಾಮ್ ದಾಳಿಗೆ ಕಾರಣವಾದ ಭಯೋತ್ಪಾದಕ ನೆಲೆಯನ್ನು ನಾಶಮಾಡಲು ಭಾರತದಿಂದ ಬಂದ ರಿಯಲ್ಟೈಮ್ ಗುಪ್ತಚರ ಮಾಹಿತಿಯನ್ನು ಬಳಸಿಕೊಂಡು ಈ ಕಾರ್ಯಾಚರಣೆಯನ್ನು ನಡೆಸಲಾಯಿತು. ಪಹಲ್ಗಾಮ್ನಲ್ಲಿ 26 ಭಾರತೀಯ ಪ್ರವಾಸಿಗರು ಪ್ರಾಣ ಕಳೆದುಕೊಂಡರು. ಪ್ರತೀಕಾರವಾಗಿ, ಭಾರತವು ಭಯೋತ್ಪಾದಕರು ಅಡಗಿಕೊಂಡಿದ್ದ ನಿರ್ದಿಷ್ಟ ಕಟ್ಟಡಗಳ ಮೇಲೆ ದಾಳಿ ಮಾಡಿತು. LMS ತಂತ್ರಜ್ಞಾನದಿಂದ ಇದು ಹೇಗೆ ಸಾಧ್ಯವಾಯಿತು ಎಂಬುದನ್ನು ಕಂಡುಹಿಡಿಯೋಣ.
LMS ತಂತ್ರಜ್ಞಾನ ಎಂದರೇನು?:
ಇದರ ಪೂರ್ಣ ಹೆಸರು ಲೊಯಟರಿಂಗ್ ಮ್ಯುನಿಷನ್ ಸಿಸ್ಟಮ್, ಇದನ್ನು ಸಾಮಾನ್ಯವಾಗಿ 'ಕಾಮಿಕೇಜ್ ಡ್ರೋನ್ಗಳು' ಎಂದು ಕರೆಯಲಾಗುತ್ತದೆ. ಇವುಗಳು ಸ್ಮಾರ್ಟ್ ಆಯುಧಗಳಾಗಿದ್ದು, ನಿರ್ದಿಷ್ಟ ಗುರಿಯ ಮೇಲೆ ಹಾರಾಡುತ್ತಾ ಇರುತ್ತದೆ ಮತ್ತು ಗುರಿ ಪತ್ತೆಯಾಗುವವರೆಗೂ ಕಾಯುತ್ತಲೇ ಇರುತ್ತದೆ. ಗುರಿ ಪತ್ತೆಯಾದ ನಂತರ, ಆ ಗುರಿಗಳನ್ನು ತನ್ನಿಂದ ತಾನೇ ನಾಶಮಾಡುತ್ತವೆ. ಅದಲ್ಲದೆ, ಮಾನವ ಹಸ್ತಕ್ಷೇಪದ ಮೂಲಕ ಈ ಎಲ್ಎಂಎಸ್ಅನ್ನು ಕಾರ್ಯನಿರ್ವಹಿಸಬಹುದು. ಹಾಗೇನಾದರೂ ಟಾರ್ಗೆಟ್ ಪತ್ತೆಯಾಗಿಲ್ಲ ಎಂದಾದಲ್ಲಿ, ತನ್ನಿಂದ ತಾನೇ ಮಿಷನ್ಅನ್ನು ರದ್ದು ಮಾಡುವ ವ್ಯವಸ್ಥೆಯೂ ಇದರಲ್ಲಿದೆ. ಈ ತಂತ್ರಜ್ಞಾನದ ದೊಡ್ಡ ಪ್ರಯೋಜನವೆಂದರೆ ಅದು ಯಾವುದೇ ಇತರ ಮನೆಗಳು ಅಥವಾ ಪ್ರದೇಶಗಳಿಗೆ ಹಾನಿಯಾಗದಂತೆ ಗುರಿಯನ್ನು ಮಾತ್ರ ನಾಶಪಡಿಸುತ್ತದೆ. ಈ ತಂತ್ರಜ್ಞಾನವು ಸೈನಿಕರ ಜೀವಕ್ಕೆ ಅಪಾಯವನ್ನುಂಟುಮಾಡದೆ ಕಾರ್ಯನಿರ್ವಹಿಸುತ್ತದೆ.
LMS ತಂತ್ರಜ್ಞಾನವು ಅತ್ಯಾಧುನಿಕ ಕ್ಷಿಪಣಿ ವ್ಯವಸ್ಥೆಯಾಗಿದ್ದು, ಇದು ದೀರ್ಘ ವ್ಯಾಪ್ತಿಯ ಗುರಿಗಳನ್ನು ನಿಖರವಾಗಿ ಹೊಡೆಯುವ ಸಾಮರ್ಥ್ಯವನ್ನು ಹೊಂದಿದೆ. ಈ ತಂತ್ರಜ್ಞಾನದ ಸಹಾಯದಿಂದ, ಭಾರತವು ಯಾವುದೇ ಸೈನಿಕರನ್ನು ಅಪಾಯಕ್ಕೆ ಸಿಲುಕಿಸದೆ ದೇಶದೊಳಗಿನ ಶತ್ರು ನೆಲೆಗಳನ್ನು ನಾಶಪಡಿಸಿದೆ. LMS ತಂತ್ರಜ್ಞಾನದ ಸಹಾಯದಿಂದ, ಭಾರತವು ತನ್ನ ಭದ್ರತಾ ವ್ಯವಸ್ಥೆ ಎಷ್ಟು ಬಲಿಷ್ಠ ಮತ್ತು ಮುಂದುವರಿದಿದೆ ಎಂಬುದನ್ನು ಸಾಬೀತುಪಡಿಸಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸೇಡು ತೀರಿಸಿಕೊಳ್ಳಲು ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮೊದಲ ಹೇಳಿಕೆ ನೀಡಿದ್ದಾರೆ. ಸಂಪುಟ ಸಭೆಯಲ್ಲಿ, ಸೇನೆ ಅದ್ಭುತ ಕೆಲಸ ಮಾಡಿದೆ ಎಂದು ಅವರು ಹೇಳಿದ್ದಾರೆ. ಇದು ಇಡೀ ದೇಶಕ್ಕೆ ಹೆಮ್ಮೆಯ ಕ್ಷಣ. ನಿನ್ನೆ ರಾತ್ರಿ, ಭಾರತೀಯ ಸೇನೆಯು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಒಂಬತ್ತು ಸ್ಥಳಗಳಲ್ಲಿ ಬಾಂಬ್ ದಾಳಿ ನಡೆಸಿತು. ಈ ದಾಳಿಯಲ್ಲಿ ಹೆಚ್ಚಿನ ಸಂಖ್ಯೆಯ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಈ ದಾಳಿಯಲ್ಲಿ ಭಯಾನಕ ಭಯೋತ್ಪಾದಕ ಮಸೂದ್ ಅಜರ್ ಅವರ ಇಡೀ ಕುಟುಂಬ ಸಾವನ್ನಪ್ಪಿದೆ. ಅವರ ಕುಟುಂಬದ 14 ಸದಸ್ಯರು ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಆಪರೇಷನ್ ಸಿಂಧೂರ್ ನಂತರ ನಡೆದ ಸಚಿವ ಸಂಪುಟ ಸಭೆಯಲ್ಲಿ ಪ್ರಧಾನಿ ಮೋದಿ ಈ ವಿಷಯ ತಿಳಿಸಿದರು. ಭಾರತದ ಮೂರು ಸೇನೆಗಳನ್ನು ಅಭಿನಂದಿಸುತ್ತಾ, ಅವರು ಅದ್ಭುತ ಕೆಲಸ ಮಾಡಿದ್ದಾರೆ ಎಂದು ಹೇಳಿದರು. ಇಡೀ ದೇಶವೇ ಅವರ ಬಗ್ಗೆ ಹೆಮ್ಮೆಪಡುತ್ತದೆ. ಆಪರೇಷನ್ ಸಿಂಧೂರ್ ಎಂಬ ಹೆಸರನ್ನು ಪ್ರಧಾನಿ ಮೋದಿ ಅವರೇ ಅನುಮೋದಿಸಿದ್ದಾರೆ ಎನ್ನುವುದನ್ನು ಇಲ್ಲಿ ಗಮನಿಸಬೇಕಾಗಿದೆ.