- Home
- News
- State
- Karnataka news live: Bigg Boss ರಕ್ಷಿತಾ ಶೆಟ್ಟಿ- ರಘು Fish Fry ಮಾಡುವಾಗಿ ಧಗ್ಗನೆ ಬಂದ ಬೆಂಕಿ - ಶಾಕಿಂಗ್ ವಿಡಿಯೋ ವೈರಲ್
Karnataka news live: Bigg Boss ರಕ್ಷಿತಾ ಶೆಟ್ಟಿ- ರಘು Fish Fry ಮಾಡುವಾಗಿ ಧಗ್ಗನೆ ಬಂದ ಬೆಂಕಿ - ಶಾಕಿಂಗ್ ವಿಡಿಯೋ ವೈರಲ್

ಬೆಂಗಳೂರು: ಉಪ ಚುನಾವಣೆ ಮುಕ್ತಾಯಗೊಂಡ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ನಲ್ಲಿ ಸಚಿವ ಸಂಪುಟ ಪುನಾರಚನೆ ವಿಚಾರ ಪುನಃ ಮುನ್ನೆಲೆಗೆ ಬಂದಿದ್ದು, ಸದ್ಯದಲ್ಲೇ ಸರ್ಕಾರ ಮೂರು ವರ್ಷ ಪೂರ್ಣಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಶೀಘ್ರವಾಗಿ ಸಂಪುಟ ಪುನಾರಚನೆ ನಡೆಸುವಂತೆ ರಾಜ್ಯ ನಾಯಕತ್ವಕ್ಕೆ ಸೂಚನೆ ನೀಡಬೇಕು ಎಂದು ಹೈಕಮಾಂಡ್ಗೆ ಒತ್ತಾಯಿಸಲು ಸುಮಾರು 25 ಶಾಸಕರ ತಂಡ ಇಂದು ಭಾನುವಾರ ದೆಹಲಿಗೆ ತೆರಳಲಿದೆ. ಸಂಪುಟ ಪುನಾರಚನೆ ಮಾಡುವಂತೆ ಪಕ್ಷದಲ್ಲಿ ತೀವ್ರ ಒತ್ತಡವಿದ್ದು, ಹಿರಿಯ ಸದಸ್ಯರು ಸೇರಿ ವಿಧಾನ ಪರಿಷತ್ ಸದಸ್ಯರು, ಹೊಸದಾಗಿ ಆಯ್ಕೆಯಾದ ಶಾಸಕರು ಪ್ರತ್ಯೇಕ ಸಭೆ ಮಾಡಿ ಸಂಪುಟ ಪುನಾರಚನೆ ಮಾಡಿ ತಮಗೆ ಸ್ಥಾನ ನೀಡಬೇಕೆಂದು ಹಲವು ಬಾರಿ ಮನವಿ ಮಾಡುತ್ತಾ ಬಂದಿದ್ದರು. ಆದರೆ ಬೇರೆ ಬೇರೆ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ಎದುರಾಗಿದ್ದು ಸೇರಿ ವಿವಿಧ ಕಾರಣಗಳಿಂದ ಸಂಪುಟ ಪುನಾರಚನೆ ಪ್ರಕ್ರಿಯೆಯನ್ನು ಹೈಕಮಾಂಡ್ ಮುಂದೂಡುತ್ತಾ ಬಂದಿದೆ.
Karnataka news live: Bigg Boss ರಕ್ಷಿತಾ ಶೆಟ್ಟಿ- ರಘು Fish Fry ಮಾಡುವಾಗಿ ಧಗ್ಗನೆ ಬಂದ ಬೆಂಕಿ - ಶಾಕಿಂಗ್ ವಿಡಿಯೋ ವೈರಲ್
Karnataka news live: ವೈದ್ಯೆ ಮೇಲೆ ದಾಳಿ ಮಾಡಿ ಕೊಂದಿದ್ದ ತ್ಯಾವರೆಕೊಪ್ಪ ಸಫಾರಿ ನೀರಾನೆ ಹಂಸಿನಿಯ ಗರ್ಭದೊಳಗೆ ಮರಿ ಸಾವನ್ನಪ್ಪಿರುವ ಶಂಕೆ!
Karnataka news live: ಮಂಗಳೂರು - ಗಿಫ್ಟ್ ಪಡೆದು ಕೈಕೊಟ್ಟ ಕಿಲಾಡಿ ಲವರ್ - ಆಶಿಕ್ ಸಾವಿನ ಕೇಸ್ನಲ್ಲಿ ಪ್ರೇಯಸಿ ಸೇರಿ ಮೂವರ ವಿರುದ್ಧ FIR
ಮಂಗಳೂರಿನಲ್ಲಿ ಯುವಕನೊಬ್ಬ ಆತ್ಮ*ಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಪ್ರೇಮ ಪ್ರಕರಣದ ತಿರುವು ಸಿಕ್ಕಿದೆ. ಮೃತ ಯುವಕನ ಮೊಬೈಲ್ನಲ್ಲಿದ್ದ ವಾಟ್ಸಾಪ್ ಚಾಟ್ ಆಧಾರದ ಮೇಲೆ, ಆತ ಪ್ರೀತಿಸುತ್ತಿದ್ದ ಯುವತಿ ಮತ್ತು ಆಕೆಯ ತಾಯಿಯ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಎಫ್ಐಆರ್ ದಾಖಲಾಗಿದೆ.
Karnataka news live: ಪ್ರಾಣವೇ ಹೋಗುವಂತಿದ್ದ ಆ ದಿನಗಳಲ್ಲಿ ಅನುಭವಿಸಿದ ನರಕಯಾತನೆ ಬಗ್ಗೆ ನಟಿ ಐಶ್ವರ್ಯಾ ಭಾಸ್ಕರನ್ ಬಿಚ್ಚಿಟ್ಟ ಸತ್ಯಗಳು!
"ಯೋಗ ಆರಂಭಿಸಿದ ಮೇಲೆ ಹಂತ ಹಂತವಾಗಿ ನನ್ನ ದೇಹದ ಎಲ್ಲಾ ಸಮಸ್ಯೆಗಳು ಮಾಯವಾದವು. ವಿಪರೀತ ಬೆವರುವಿಕೆ, ದೇಹದ ಉಷ್ಣತೆ ಮತ್ತು ಮಾನಸಿಕ ಕಿರಿಕಿರಿ ಎಲ್ಲವೂ ನಿಂತುಹೋಯಿತು. ಈಗ ನನ್ನ ಮನಸ್ಸು ಮತ್ತು ದೇಹ ಎರಡೂ ನನ್ನ ನಿಯಂತ್ರಣದಲ್ಲಿದೆ. ಇದಕ್ಕೆ ‘ಸದ್ಗುರು’ ಅವರ ಯೋಗ ತರಗತಿಗಳಿಗೆ ನಾನು ಚಿರಋಣಿ' ಎಂದ ನಟಿ ಐಶ್ವರ್ಯಾ ಭಾಸ್ಕರನ್..
Karnataka news live: ಅಪ್ಪನಿಂದ ದೂರಾದ ಜಿಟಿ ದೇವೇಗೌಡ ಮಗನಿಗೆ ಎಚ್ಡಿಕೆ ಫುಲ್ ಹತ್ತಿರ, ಮನೆಗೆ ಕುಮಾರಸ್ವಾಮಿ ದಂಪತಿ ಭೇಟಿ!
Karnataka news live: ಇಂಡಿಯಾದಲ್ಲೇ 'ಹೈ' ಸಂಭಾವನೆ ಪಡೆದ ದೀಪಿಕಾ ಪಡುಕೋಣೆ; ಆದ್ರೆ, ಪ್ರಿಯಾಂಕಾ ಚೋಪ್ರಾಗಿಂತ ಎಷ್ಟು ಕಡಿಮೆ?
ದೀಪಿಕಾ ಪಡುಕೋಣೆ ಅವರ ಕ್ರೇಜ್ ಬಾಲಿವುಡ್ನಲ್ಲಿ ಕಡಿಮೆಯಾಗಿದೆ ಎಂದು ಯಾರಾದರೂ ಅಂದುಕೊಂಡಿದ್ದರೆ, ಅವರಿಗೆ ಈ ಸುದ್ದಿ ಒಂದು ಶಾಕ್ ನೀಡಲಿದೆ. ‘ರಾಕಾ’ ಸಿನಿಮಾದಲ್ಲಿ ನಟಿಸಲು ದೀಪಿಕಾ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ? ಬರೋಬ್ಬರಿ 'ಇಷ್ಟು' ಕೋಟಿ ರೂಪಾಯಿ! ಹೀಗಂತ ಸುದ್ದಿ ಸುತ್ತುತ್ತಿದೆ!
Karnataka news live: ಶ್ರೀರಾಮನ ಬಂಟ ಹನುಮಂತನ ಸಮರ್ಪಣಾ ಭಾವ ಬದುಕಿಗೆ ಪ್ರೇರಣೆ - ಗೆಹಲೋತ್
ಪುತ್ತೂರಿನ ಹನುಮಗಿರಿ ಕ್ಷೇತ್ರದ ಬ್ರಹ್ಮಕಲಶೋತ್ಸವದಲ್ಲಿ ರಾಜ್ಯಪಾಲ ಥಾವರ್ಚಂದ್ ಗೆಹಲೋತ್ ಅವರು ನೂತನ ಗೋಪುರವನ್ನು ಲೋಕಾರ್ಪಣೆ ಮಾಡಿದರು. ಹನುಮಂತನ ಸೇವೆ ಮತ್ತು ಶ್ರೀರಾಮನ ಧರ್ಮಪಾಲನೆಯನ್ನು ಸ್ಮರಿಸಿದ ಅವರು, ಧರ್ಮ-ಸಂಸ್ಕೃತಿ ಬಲಪಡಿಸಲು ಸಂಘಟಿತರಾಗಲು ಕರೆ ನೀಡಿದರು.
Karnataka news live: ರಕ್ತ ಕುದಿಯುತ್ತಿದೆ, ಹೃದಯ ಮಿಡಿಯುತ್ತಿದೆ - ಬೀದಿ ನಾಯಿಗಳಿಗಾಗಿ ನಟಿ ರಮ್ಯಾ ಕಣ್ಣೀರು; ಆಗಿದ್ದೇನು?
ಬೆಂಗಳೂರಿನಲ್ಲಿ ಬೀದಿ ನಾಯಿಗಳನ್ನು ಅಮಾನವೀಯವಾಗಿ ಸೆರೆ ಹಿಡಿದಿದ್ದನ್ನು ಖಂಡಿಸಿ ನಟಿ ರಮ್ಯಾ ಪ್ರತಿಭಟನೆಯಲ್ಲಿ ಭಾಗವಹಿಸಿ ಕಣ್ಣೀರಿಟ್ಟಿದ್ದಾರೆ. ಈ ಕೃತ್ಯಕ್ಕೆ ಕಾರಣರಾದವರನ್ನು ಶಿಕ್ಷಿಸಬೇಕೆಂದು ಆಗ್ರಹಿಸಿದ್ದು, ಪ್ರಾಣಿಪ್ರಿಯರು ನಾಪತ್ತೆಯಾದ ನಾಯಿಗಳ ಬಗ್ಗೆ ಮಾಹಿತಿ ಕೇಳುತ್ತಿದ್ದಾರೆ.
Karnataka news live: 'ಲೈಫ್ ವಿತೌಟ್ ವೈಫ್' ಕ್ಲಾರಿಟಿ ಕೊಟ್ಟ 'ರಾಪರ್ ಕಿಂಗ್'.. ಮತ್ತೆ ಮದುವೆಗೆ ರೆಡಿನಾ ಚಂದನ್ ಶೆಟ್ಟಿ? ಹುಡ್ಗಿ ಯಾರು?
ಚಂದನ್ ಶೆಟ್ಟಿ ಈಗ ಕೇವಲ ಗಾಯಕನಾಗಿ ಉಳಿದಿಲ್ಲ, ಸ್ಯಾಂಡಲ್ವುಡ್ನ ಭರವಸೆಯ ನಟನಾಗಿಯೂ ಮಿಂಚಲು ಸಜ್ಜಾಗಿದ್ದಾರೆ. ಅವರು ನಾಯಕನಾಗಿ ನಟಿಸಿರುವ 'ಎಲ್ರ ಕಾಲೆಳಿಯತ್ತೆ ಕಾಲ' ಚಿತ್ರದ ಟ್ರೇಲರ್ ಈಗ ಎಲ್ಲೆಡೆ ಸೌಂಡ್ ಮಾಡುತ್ತಿದೆ. ಸುಜಯ್ ಶಾಸ್ತ್ರಿ ನಿರ್ದೇಶನದ ಈ ಸಿನಿಮಾ ನಮ್ಮನ್ನು 90ರ ದಶಕದ ರೆಟ್ರೋ ಕಾಲಕ್ಕೆ ಕರೆದುಕೊಂಡು ಹೋಗಲಿದೆ. ಇದೀಗ ಮ್ಯಾರೇಜ್ ಸುದ್ದಿ ಸೌಂಡ್ ಮಾಡ್ತಿದೆ.
Karnataka news live: Kodagu - ಮಡಿಕೇರಿಯ ಕಾಫಿ ತೋಟದಲ್ಲಿ ಅನಾಥವಾದ ಹೆಣ್ಣು ಶಿಶು ಪತ್ತೆ!
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕಾಫಿ ತೋಟವೊಂದರಲ್ಲಿ ಅಡಕೆ ಹಾಳೆಯಲ್ಲಿ ಸುತ್ತಿಟ್ಟಿದ್ದ ನವಜಾತ ಹೆಣ್ಣು ಶಿಶುವೊಂದು ಪತ್ತೆಯಾಗಿದೆ. ಸ್ಥಳೀಯರು ಮತ್ತು ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಮಗುವನ್ನು ರಕ್ಷಿಸಿ, ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
Karnataka news live: ಕೊಡಗು ಭೀಕರ ಅಪಘಾತದಲ್ಲಿ ಚಿತ್ರನಟ ಸಾವು ಬೆನ್ನಲ್ಲೇ ಬೆಂಗಳೂರಲ್ಲೂ ದುರಂತ ಘಟನೆ!
Karnataka news live: ಕೊಡಗಿನಲ್ಲಿ ಭೀಕರ ರಸ್ತೆ ಅಪಘಾತ; ಚಿತ್ರನಟ ಹರೀಶ್ ಸ್ಥಳದಲ್ಲೇ ಸಾವು!
Karnataka news live: 50 ವರ್ಷಗಳ ಬಳಿಕ ನಾಸಾದ ಯಶಸ್ವಿ ಚಂದ್ರಯಾನ ದಿಗ್ವಿಜಯದ ಹಿಂದೆ ಭಾರತೀಯ ಅಮಿತ್ ಕ್ಷತ್ರಿಯ
ನಾಸಾದ ಆರ್ಟೆಮಿಸ್-2 ಮಿಷನ್ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ನಾಲ್ವರು ಗಗನಯಾನಿಗಳು ಚಂದ್ರನ ಪ್ರದಕ್ಷಿಣೆ ಹಾಕಿ ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ. ಈ ಐತಿಹಾಸಿಕ ಸಾಧನೆಯ ಹಿಂದೆ ಭಾರತೀಯ ಮೂಲದ ವಿಜ್ಞಾನಿ ಅಮಿತ್ ಕ್ಷತ್ರಿಯ ಅವರ ಪ್ರಮುಖ ಪಾತ್ರವಿದೆ.
Karnataka news live: ಆರೋಪಿಗಳಿಗೆ ಎಫ್ಐಆರ್ ಪ್ರತಿ ನೀಡದ ಪೊಲೀಸರ ವರ್ತನೆಗೆ ಹೈಕೋರ್ಟ್ ಗರಂ
ಆರೋಪಿತರಿಗೆ ಎಫ್ಐಆರ್ ಪ್ರತಿ ನೀಡಲು ನಿರಾಕರಿಸುವ ಪೊಲೀಸ್ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಬೇಕಾಗುತ್ತದೆ ಎಂದು ಹೈಕೋರ್ಟ್ ಕಟು ಎಚ್ಚರಿಕೆ ನೀಡಿದೆ. ಡ್ರೋನ್ ಪತನ ಪ್ರಕರಣದಲ್ಲಿ ಆರೋಪಿತರಿಗೆ ಎಫ್ಐಆರ್ ಪ್ರತಿ ಪಡೆಯುವ ಹಕ್ಕಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
Karnataka news live: ಉಡುಪಿ - ಪತಿ ಸುದೀಪ್ ರೈ ಆತ್ಮ*ಹತ್ಯೆ ಪ್ರಕರಣ - ನಟಿ ಸೌಮ್ಯ ಶೆಟ್ಟಿ ಬಂಧನ
ಮದುವೆಯಾದ ಒಂದೇ ತಿಂಗಳಿಗೆ ಪತಿ ಸುದೀಪ್ ರೈ ಆತ್ಮ*ಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಕರಾವಳಿಯ ನಟಿ ಸೌಮ್ಯ ಶೆಟ್ಟಿಯನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ. ಸುದೀಪ್ ರೈ ಅವರ ತಂದೆ ನೀಡಿದ ದೂರಿನ ಅನ್ವಯ ಈ ಬಂಧನ ನಡೆದಿದೆ.
Karnataka news live: Pocso case - ಶಾಲಾ ಬಾಲಕಿ ಮೇಲೆ ಬಲತ್ಕಾರ ಪ್ರಕರಣ, ಕಾಮುಕ ಶಿಕ್ಷಕ ರಾಜಣ್ಣ ಅರೆಸ್ಟ್, ಗರ್ಭಪಾತ ಮಾಡಿದ್ದ ವೈದ್ಯೆ ನಾಪತ್ತೆ
ಚಿತ್ರದುರ್ಗದಲ್ಲಿ ಶಾಲಾ ಬಾಲಕಿಯ ಮೇಲೆ ನಿರಂತರ ಅತ್ಯಾ೧ಚಾರ ಎಸಗಿ, ಗರ್ಭಪಾತ ಮಾಡಿಸಿದ ಆರೋಪದ ಮೇಲೆ ಶಿಕ್ಷಕ ಎಚ್.ಒ. ರಾಜಣ್ಣನನ್ನು ಬಂಧಿಸಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಆತ್ಮಹತ್ಯೆಗೆ ಯತ್ನಿಸಿದ್ದ ಈತನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದ್ದು, ಕೃತ್ಯಕ್ಕೆ ಸಹಕರಿಸಿದ ವೈದ್ಯೆ ನಾಪತ್ತೆ