10:49 PM (IST) Mar 09

Karnataka News Live 9 March 2026 Rani Serialನಲ್ಲಿ ಕಾಣದ ರಾಣಿಯ ಅಪ್ಪ ಇವರೇ - ಪ್ರೊಮೋದಲ್ಲಿ ಮಿಸ್​ ಆಗಿರೋ ವಿಲನ್​ ಬರೋದು ಯಾವಾಗ?

ಜೀ ಕನ್ನಡದಲ್ಲಿ ಆರಂಭವಾಗಿರುವ 'ರಾಣಿ' ಸೀರಿಯಲ್, ಜೈಲಿನಲ್ಲಿರುವ ಅಮ್ಮ ಮತ್ತು ಮಗಳ ಭಾವನಾತ್ಮಕ ಕಥೆಯನ್ನು ಹೊಂದಿದೆ. ಈ ಕಥೆಯಲ್ಲಿ ರಾಣಿಯ ಅಪ್ಪನ ಪಾತ್ರ ನಿಗೂಢವಾಗಿದ್ದು, ಈ ಪಾತ್ರವನ್ನು ನಟ ಆರವ್ ಸೂರ್ಯ ನಿರ್ವಹಿಸುತ್ತಿದ್ದು, ಇದೊಂದು ನೆಗೆಟಿವ್ ಶೇಡ್ ಪಾತ್ರವೆಂದು ಅವರೇ ತಿಳಿಸಿದ್ದಾರೆ.
Read Full Story
10:23 PM (IST) Mar 09

Karnataka News Live 9 March 2026 ಗೃಹಲಕ್ಷ್ಮಿ, ಶಕ್ತಿ ಯೋಜನೆಗಳಿಂದ ಮಹಿಳಾ ಸಬಲೀಕರಣ - ಸಚಿವ ಈಶ್ವರ್ ಖಂಡ್ರೆ

‘ತೊಟ್ಟಿಲು ತೂಗುವ ಕೈ ದೇಶವನ್ನೂ ಆಳಬಲ್ಲದು’ ಎಂಬ ಮಾತಿನಂತೆ ಮಹಿಳೆಯರು ಇಂದು ಸಮಾಜದ ಎಲ್ಲ ಕ್ಷೇತ್ರಗಳಲ್ಲಿಯೂ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದರು.

Read Full Story
10:15 PM (IST) Mar 09

Karnataka News Live 9 March 2026 ಹಾಸನ, ಮೈಸೂರು ಮಾರ್ಗದ ರೈಲು ಸಂಚಾರದಲ್ಲಿ ದಿಢೀರ್ ಬದಲಾವಣೆ! ಹಲವು ರೈಲುಗಳು ರದ್ದು!

ಹಾಸನ ಮತ್ತು ಮಾವಿನಕೆರೆ ನಿಲ್ದಾಣಗಳ ನಡುವೆ ಕೆಳಸೇತುವೆ ನಿರ್ಮಾಣ ಕಾಮಗಾರಿಯಿಂದಾಗಿ, ದಕ್ಷಿಣ ಪಶ್ಚಿಮ ರೈಲ್ವೆಯು ಮಾರ್ಚ್ 16 ರಂದು ಕೆಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಿದೆ. ಅರಸೀಕೆರೆ-ಮೈಸೂರು ಪ್ಯಾಸೆಂಜರ್ ಮತ್ತು ಮೈಸೂರು-ತಾಳಗುಪ್ಪ ಎಕ್ಸ್‌ಪ್ರೆಸ್ ಸೇರಿದಂತೆ ಪ್ರಮುಖ ರೈಲುಗಳು ಅಂದು ಸಂಚರಿಸುವುದಿಲ್ಲ.
Read Full Story
10:12 PM (IST) Mar 09

Karnataka News Live 9 March 2026 ಪಂಚ ಗ್ಯಾರಂಟಿ ಯೋಜನೆಗಳು ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಸಹಕಾರಿ - ಸಚಿವ ಎಚ್.ಕೆ.ಪಾಟೀಲ

ಗ್ಯಾರಂಟಿ ಯೋಜನೆಗಳಿಂದ ಬಡತನವನ್ನು ಬೇರುಸಮೇತ ಕಿತ್ತೊಗೆಯುವ ಕಾರ್ಯ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಪಂಚ ಗ್ಯಾರಂಟಿ ಯೋಜನೆಗಳು ಮಾನವ ಹಕ್ಕುಗಳಾಗಿ ಪರಿಗಣಿಸಲ್ಪಡುವ ಕಾನೂನು ರೂಪುಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ತಿಳಿಸಿದರು.

Read Full Story
09:57 PM (IST) Mar 09

Karnataka News Live 9 March 2026 ನಾನು ಎಚ್.ಎನ್.ವ್ಯಾಲಿ ಶುದ್ಧೀಕರಣ ಪರವಾಗಿರುವ ಶಾಸಕ - ಪ್ರದೀಪ್ ಈಶ್ವರ್ ಹೇಳಿದ್ದೇನು?

ಎಚ್.ಎನ್.ವ್ಯಾಲಿ ನೀರಿನ ಮೂರನೇ ಹಂತದ ಶುದ್ಧೀಕರಣದ ಪರವಾಗಿ ಶಾಸಕನಾಗುವ ಮೊದಲೂ ಇದ್ದೆ, ಈಗಲೂ ಇದ್ದೇನೆ. ನನ್ನ ಬದ್ಧತೆಯಲ್ಲಿ ಬದಲಾವಣೆಯಿಲ್ಲ ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು.

Read Full Story
09:45 PM (IST) Mar 09

Karnataka News Live 9 March 2026 ಕೇಂದ್ರ ಅಧೀನದಲ್ಲಿರುವ ಕಾಯಿರ್ ಬೋರ್ಡ್ ನೇಮಕಾತಿ - ಬೆಂಗಳೂರಿನಲ್ಲಿ ನಿಮಗೊಂದು ಉತ್ತಮ ಉದ್ಯೋಗ ಅವಕಾಶ

ಕೇಂದ್ರ ಸರ್ಕಾರದ ಅಧೀನದಲ್ಲಿರುವ ಕಾಯಿರ್ ಬೋರ್ಡ್, 2026ನೇ ಸಾಲಿನ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ಮೂಲಕ ಬೆಂಗಳೂರಿನಲ್ಲಿ ಪ್ರಾಜೆಕ್ಟ್ ಅಸಿಸ್ಟೆಂಟ್ ಮತ್ತು ಎಲೆಕ್ಟ್ರಿಷಿಯನ್ ಸೇರಿದಂತೆ 07 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
Read Full Story
09:37 PM (IST) Mar 09

Karnataka News Live 9 March 2026 400ಕ್ಕೂ ಹೆಚ್ಚು ಕೆರೆ ತುಂಬಿಸುವ ನೀರಾವರಿ ಗ್ಯಾರಂಟಿ ಯೋಜನೆ ಕೈಗೆತ್ತಿಕೊಂಡಿದ್ದೇವೆ - ಡಿ.ಕೆ.ಶಿವಕುಮಾರ್‌

ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ 400ಕ್ಕೂ ಹೆಚ್ಚಿನ ಕೆರೆಗಳು ತುಂಬಿಸುವ ನೀರಾವರಿ ಗ್ಯಾರಂಟಿ ಯೋಜನೆ ಕೈಗೆತ್ತಿಕೊಂಡಿದ್ದೇವೆ ಎಂದು ರಾಜ್ಯ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು.

Read Full Story
09:34 PM (IST) Mar 09

Karnataka News Live 9 March 2026 ಲವ್‌ ಮಾಕ್ಟೇಲ್‌ ಸಿನಿಮಾದಿಂದ ನನಗೆ ಫೇಮ್‌ ಅಲ್ಲ, ಶೇಮ್‌ ಸಿಕ್ಕಿತು - ಬ್ರಹ್ಮಗಂಟು ನಟಿ ಗೀತಾ ಭಾರತಿ ಭಟ್

ಬ್ರಹ್ಮಗಂಟು ಧಾರಾವಾಹಿಯಲ್ಲಿ ಗೀತಾ ಭಟ್‌ ಅವರು ನಟಿಸಿದ್ದರು. ಆ ಬಳಿಕ ಲವ್‌ ಮಾಕ್ಟೇಲ್‌ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಡೈಲಾಗ್‌ ಬಗ್ಗೆ ಗೀತಾ ಭಾರತಿ ಭಟ್‌ ಆರೋಪ ಮಾಡಿದ್ದು, ಡಾರ್ಲಿಂಗ್‌ ಕೃಷ್ಣ ದಂಪತಿ ಸ್ಪಷ್ಟನೆ ನೀಡಿದ್ದರು. ಈಗ ಗೀತಾ ಮತ್ತೆ ದನಿ ಎತ್ತಿದ್ದಾರೆ.

Read Full Story
09:29 PM (IST) Mar 09

Karnataka News Live 9 March 2026 ಬೆಲೆ ಏರಿಕೆ ನಡುವೆ ಗ್ಯಾಸ್ ಸರಬರಾಜು ಬಂದ್, ನಾಳೆಯಿಂದ ಎಲ್ಲಾ ಹೊಟೆಲ್ ಬಂದ್ ಆತಂಕ

ಬೆಲೆ ಏರಿಕೆ ನಡುವೆ ಗ್ಯಾಸ್ ಸರಬರಾಜು ಬಂದ್, ನಾಳೆಯಿಂದ ಎಲ್ಲಾ ಹೊಟೆಲ್ ಬಂದ್ ಆತಂಕ, ಏಕಾಏಕಿ ಗ್ಯಾಸ್ ಸರಬಾರದು ನಿಂತಿರುವುದೇ ಈ ಸಮಸ್ಯೆಗೆ ಕಾರಣವಾಗಿದೆ. ಅನಿವಾರ್ಯವಾಗಿ ಬಂದ್ ಮಾಡಬೇಕಾದ ಪರಿಸ್ಥಿತಿ ಎಂದು ಹೊಟೆಲ್ ಮಾಲೀಕರ ಸಂಘ ಎಚ್ಚಿರಿಸಿದೆ.

Read Full Story
08:59 PM (IST) Mar 09

Karnataka News Live 9 March 2026 ದಾವಣಗೆರೆ 'ದಕ್ಷಿಣ' ಸಮರದಲ್ಲಿ ಜಮೀರ್ ಮಾತಿಗೆ ಮಲ್ಲಿಕಾರ್ಜುನ ಕೌಂಟರ್ - 'ಅವನೊಬ್ಬನಿಂದ ಊರು ಹಾಳಾಗೋದು ಬೇಡ'!

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ವಿಚಾರವಾಗಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಹಸ್ತಕ್ಷೇಪಕ್ಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಮೀರ್ ಅವರ ಹೇಳಿಕೆಗಳು ಮತ್ತು ಎಂಎಲ್‌ಸಿ ಅಬ್ದುಲ್ ಜಬ್ಬಾರ್ ಅವರ ನಡೆಗಳಿಂದ ಗೊಂದಲ ಸೃಷ್ಟಿಯಾಗಿದೆ ಎಂದರು.

Read Full Story
08:56 PM (IST) Mar 09

Karnataka News Live 9 March 2026 ಅನೇಕಲ್ ಕಿಡ್ನಾಪ್ & ಹತ್ಯೆ ಕೇಸ್‌, ನಮ್ಮ ಕಮ್ಯೂನಿಟಿ ಕೊಲೆ ಮಾಡಿಲ್ಲ ಎಂದ ಪ್ರದೀಪ್ ಈಶ್ವರ್

ರಿಯಲ್ ಎಸ್ಟೇಟ್ ಎಜೆಂಟ್ ಕಿಡ್ನಾಪ್ & ಹತ್ಯೆ ಕೇಸ್‌, ನಮ್ಮ ಕಮ್ಯೂನಿಟಿ ಕೊಲೆ ಮಾಡಿಲ್ಲ ಎಂದ ಪ್ರದೀಪ್ ಈಶ್ವರ್, ಪ್ರಕರಣ ಸಂಬಂಧ ಇಬ್ಬರನ್ನು ಅರೆಸ್ಟ್ ಮಾಡಲಾಗಿದೆ. ಮತ್ತೊಬ್ಬಿರನ್ನು ಟ್ರೇಸ್ ಮಾಡಲಾಗಿದೆ ಎಂದಿದ್ದಾರೆ.

Read Full Story
08:56 PM (IST) Mar 09

Karnataka News Live 9 March 2026 ಅವಳಿ ಮಕ್ಕಳಿಗಾಗಿ Lakshmi Nivasa ನಟಿ ಟ್ವಿನ್​ ಬಾಳೆಹಣ್ಣು ತಿಂದ್ರಂತೆ! ಮಾನಸಾ ಮನೋಹರ ಏನ್​ ಹೇಳಿದ್ರು ಕೇಳಿ

'ಲಕ್ಷ್ಮೀ ನಿವಾಸ' ಸೀರಿಯಲ್‌ನಲ್ಲಿ ನೆಗೆಟಿವ್ ಪಾತ್ರದಲ್ಲಿ ನಟಿಸುತ್ತಿರುವ ಮಾನಸಾ ಮನೋಹರ್ ಗರ್ಭಿಣಿಯಾಗಿದ್ದು, ತಮಗೆ ಅವಳಿ ಮಕ್ಕಳಾಗಬೇಕೆಂಬ ಆಸೆಯಿಂದ ಅವಳಿ ಬಾಳೆಹಣ್ಣುಗಳನ್ನು ತಿಂದಿದ್ದಾಗಿ ಹೇಳಿಕೊಂಡಿದ್ದಾರೆ. 2024ರಲ್ಲಿ ಉದ್ಯಮಿ ಪ್ರೀತಂ ಚಂದ್ರ ಅವರನ್ನು ಎರಡನೇ ಮದುವೆಯಾಗಿದ್ದಾರೆ.

Read Full Story
08:34 PM (IST) Mar 09

Karnataka News Live 9 March 2026 ಮುಖದ ಮೇಲೆ ಬ್ಲ್ಯಾಕ್ ಹೆಡ್ಸ್ ಕಾಣಿಸ್ತಿದ್ರೆ ಪಾರ್ಲರ್ ಗೆ ಓಡ್ಬೇಕಾಗಿಲ್ಲ, ಮನೆಯಲ್ಲೇ ಇದೆ ಟ್ರೀಟ್ಮೆಂಟ್

ಮುಖದ ಮೇಲಿರುವ ಬ್ಲ್ಯಾಕ್ ಹೆಡ್ಸ್ ಸೌಂದರ್ಯ ಹಾಳು ಮಾಡುತ್ತೆ. ಪಾರ್ಲರ್ ನಲ್ಲಿ ಬ್ಲ್ಯಾಕ್ ಹೆಡ್ಸ್ ತೆಗೆಯೋ ಪ್ರೊಸೆಸ್ ನೋವಿನಿಂದ ಕೂಡಿರುತ್ತೆ. ಅಲ್ದೆ ಗಲ್ಲ ರೆಡ್ ಆಗುತ್ತೆ. ಮನೆಯಲ್ಲೇ ನೀವು ಬ್ಲ್ಯಾಕ್ ಹೆಡ್ಸ್ ತೆಗೆಯಬಹುದು. ಸುಲಭ ಮನೆ ಮದ್ದು ಇಲ್ಲಿದೆ.

Read Full Story
08:30 PM (IST) Mar 09

Karnataka News Live 9 March 2026 Krishna Rukku Serialಗಾಗಿ ಕುಡುಕ ಆಗ್ಬೇಕಾಯ್ತು, ನಾನು ಕುಡಿದವನೇ ಅಲ್ಲ- ನಟ ಅಕ್ಷಯ್ ಏನಂದ್ರು ನೋಡಿ

'ಕೃಷ್ಣ ರುಕ್ಕು' ಧಾರಾವಾಹಿ ಆರಂಭವಾಗಿದ್ದು, ಇದು ಅಣ್ಣನ ಸಾವಿನ ನಂತರ ಕುಟುಂಬದ ಜವಾಬ್ದಾರಿ ಹೊರುವ ರುಕ್ಕು ಮತ್ತು ಹಾದಿ ತಪ್ಪಿದ ಕುಡುಕ ಕೃಷ್ಣನ ನಡುವಿನ ಕಥೆಯಾಗಿದೆ. ಕುಡುಕನ ಪಾತ್ರದಲ್ಲಿ ನಟ ಅಕ್ಷಯ್ ನಾಯಕ್ ಕಾಣಿಸಿಕೊಂಡಿದ್ದು, ಈ ಪಾತ್ರಕ್ಕಾಗಿ ತಾವು ಪಟ್ಟ ಶ್ರಮದ ಕುರಿತು ಹೇಳಿದ್ದಾರೆ. 

Read Full Story
07:17 PM (IST) Mar 09

Karnataka News Live 9 March 2026 ಕಾರವಾರ - ಕಾರಿನ ಮೇಲೆ ಮಗುಚಿದ ಕಂಟೈನರ್ ಟ್ರಕ್ - ಕುಡುಕ ಚಾಲಕನ ಅವಾಂತರಕ್ಕೆ ಬಾಲಕ ಬಲಿ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಬಳಿ ಕುಡಿದ ಮತ್ತಿನಲ್ಲಿದ್ದ ಕಂಟೈನರ್ ಚಾಲಕನೋರ್ವ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ 8 ವರ್ಷದ ಬಾಲಕ ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. 

Read Full Story
06:45 PM (IST) Mar 09

Karnataka News Live 9 March 2026 ಮಂಡ್ಯ ಜಿಲ್ಲೆಯಲ್ಲಿ ದೌರ್ಜನ್ಯ ಪ್ರಕರಣಗಳು ಕಡಿಮೆ - ಸಚಿವ ಎನ್.ಚಲುವರಾಯಸ್ವಾಮಿ

ಬಹುತೇಕ ರಾಜೀ- ಸಂಧಾನದಲ್ಲೇ ಪ್ರಕರಣಗಳು ಬಗೆಹರಿದಿರುವುದರಿಂದ ಮಂಡ್ಯ ಜಿಲ್ಲೆಯನ್ನು ದೌರ್ಜನ್ಯ ಮುಕ್ತಗೊಳಿಸಬಹುದು ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

Read Full Story
06:25 PM (IST) Mar 09

Karnataka News Live 9 March 2026 ಹಾನಿಗೊಂಡ ಬ್ಯಾಗ್‌, ನಕಾರ ಮಾಡಿದ ಏರ್ ಇಂಡಿಯಾಗೆ ಪಾಠ ಕಲಿಸಿದ ಬೆಂಗಳೂರು ಯುವಕ! ಇದು ಪ್ರತಿಯೊಬ್ಬರು ತಿಳಿದಿರಬೇಕು

ಬೆಂಗಳೂರಿನ ಯುವಕನೊಬ್ಬನ ಟ್ರಾಲಿ ಬ್ಯಾಗ್ ಏರ್ ಇಂಡಿಯಾ ವಿಮಾನ ಪ್ರಯಾಣದಲ್ಲಿ ಹಾನಿಗೊಂಡಿತ್ತು. ವಿಮಾನಯಾನ ಸಂಸ್ಥೆ ದೂರು ಸ್ವೀಕರಿಸಲು ನಿರಾಕರಿಸಿದಾಗ, ಆತ ಗ್ರಾಹಕ ಆಯೋಗದ ಮೊರೆ ಹೋಗಿ ನ್ಯಾಯಕ್ಕಾಗಿ ಹೋರಾಟ ನಡೆಸಿದ. ಅಂತಿಮವಾಗಿ, ಆಯೋಗವು ಯುವಕನ ಪರವಾಗಿ ತೀರ್ಪು ನೀಡಿ, ಏರ್ ಇಂಡಿಯಾಗೆ ಪರಿಹಾರ ಪಾವತಿಸಲು ಆದೇಶಿಸಿದೆ.
Read Full Story
06:21 PM (IST) Mar 09

Karnataka News Live 9 March 2026 ಕಾಡಾನೆ ದಾಳಿಗೆ ಕೊಡಗಿನಲ್ಲಿ ಮಹಿಳೆ ಬಲಿ - ಚಿಕ್ಕಮಗಳೂರಿನಲ್ಲಿ ಹಾಲು ಕೊಡುವ ಹಸು ತುಳಿದು ಸಾಯಿಸಿದ ಆನೆ

ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ಕಾಡಾನೆ ದಾಳಿಗೆ ಮಹಿಳೆಯೊಬ್ಬರು ಮೃತಪಟ್ಟರೆ, ಚಿಕ್ಕಮಗಳೂರಿನಲ್ಲಿ ಹಸುವೊಂದು ಬಲಿಯಾಗಿದೆ. ಈ ಮಧ್ಯೆ, ಮತ್ತಿಗೋಡು ಸಾಕಾನೆ ಶಿಬಿರದಲ್ಲಿದ್ದ 'ಝೂ ಅಭಿ' ಎಂಬ ಆನೆಯೂ ಅನಾರೋಗ್ಯದಿಂದ ಸಾವನ್ನಪ್ಪಿದ್ದು, ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Read Full Story
06:13 PM (IST) Mar 09

Karnataka News Live 9 March 2026 ಹಿರಿಯ ನಟ ದ್ವಾರಕೀಶ್‌ ಸೊಸೆಯಿಂದ ಸರಣಿ ವಂಚನೆ, ರಸ್ತೆಯಲ್ಲೇ ಪೊರಕೆ ಹಿಡಿದು ವ್ಯಕ್ತಿ ಮೇಲೆ ಹಲ್ಲೆ!

ಹಿರಿಯ ನಟ ದ್ವಾರಕೀಶ್ ಅವರ ಸೊಸೆ ವರ್ಷಾ ರೈ ವಿರುದ್ಧ ಹಣಕಾಸು ವಂಚನೆಯ ಗಂಭೀರ ಆರೋಪ ಕೇಳಿಬಂದಿದೆ. ಚೀಟಿ ವ್ಯವಹಾರ, ಚಿನ್ನ ಹಾಗೂ ಹಣ ಪಡೆದು ಮೋಸ ಮಾಡಿರುವ ಬಗ್ಗೆ ಹತ್ತಕ್ಕೂ ಹೆಚ್ಚು ಜನರು ದೂರು ನೀಡಿದ್ದಾರೆ.

Read Full Story
05:50 PM (IST) Mar 09

Karnataka News Live 9 March 2026 ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಿಗೆ ಶೀಘ್ರ ಉಪನ್ಯಾಸಕರ ನೇಮಕ - ಸಚಿವ ಡಾ.ಎಂ.ಸಿ.ಸುಧಾಕರ್

ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಗಳಲ್ಲಿ ಉಪನ್ಯಾಸಕರ ಕೊರತೆಯಿಂದ ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಇಳಿಕೆ ಕಂಡು ಬರುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.

Read Full Story