11:29 PM (IST) May 03

ಆರ್‌ಸಿಬಿಗೆ ರೋಚಕ ಗೆಲುವು, ಚೆನ್ನೈಗೆ ಸೋಲು

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಆರ್‌ಸಿಬಿ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಎರಡು ರನ್‌ಗಳಿಂದ ಗೆಲುವು ಸಾಧಿಸಿದೆ. ಯಶ್ ದಯಾಳ್ ಅವರ ಅಮೋಘ ಬೌಲಿಂಗ್‌ನಿಂದಾಗಿ ಚೆನ್ನೈ ತಂಡ ಕೊನೆಯ ಓವರ್‌ನಲ್ಲಿ 15 ರನ್‌ಗಳ ಗುರಿ ತಲುಪಲು ವಿಫಲವಾಯಿತು.

ಪೂರ್ತಿ ಓದಿ
11:29 PM (IST) May 03

ಆ ಪ್ರಸಾದ ತಿನ್ನುತ್ತಿದ್ದಂತೆ ಲೈಫ್‌ನಲ್ಲಿ ನಡೆದ ಪವಾಡ ಬಿಚ್ಚಿಟ್ಟ ಕನ್ನಡದ ಖ್ಯಾತ ಕಿರುತೆರೆ ನಟಿ ಇಳಾ ವಿಟ್ಲ

ನಟಿ ಇಳಾ ವಿಟ್ಲ ಅವರು ಕೊರಗಜ್ಜನ ಪ್ರಸಾದ ಸೇವಿಸಿ ಕಾಲು ನೋವಿನಿಂದ ಪರಿಹಾರ ಪಡೆದ ಬಗ್ಗೆ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಶಿವರಾಜ್‌ಕುಮಾರ್ ಅವರ ಆರೋಗ್ಯಕ್ಕಾಗಿ ಹರಕೆ ಹೊತ್ತಿದ್ದ ಗೆಳೆಯನ ಮೂಲಕ ಕೊರಗಜ್ಜನ ಪ್ರಸಾದ ಇಳಾ ವಿಟ್ಲ ಅವರಿಗೆ ತಲುಪಿತು. ಪ್ರಸಾದ ಸೇವಿಸಿದ ನಂತರ ಅವರ ಕಾಲು ನೋವು ಮಾಯವಾಯಿತು ಎಂದು ಅವರು ಹೇಳಿದ್ದಾರೆ.

ಪೂರ್ತಿ ಓದಿ
11:18 PM (IST) May 03

ಸಂತಾರ ಪಾಲಿಸಿದ ಕಿರಿಯ ವ್ಯಕ್ತಿ ಎನಿಸಿದ 3 ವರ್ಷದ ಬಾಲಕಿ, ಸಂಪ್ರದಾಯ ಪಾಲಿಸಿದ ಕೆಲವೇ ಕ್ಷಣದಲ್ಲಿ ಸಾವು!

ಮೂರು ವರ್ಷದ ಬಾಲಕಿಗೆ ಮೆದುಳಿನ ಗೆಡ್ಡೆ ಇರುವುದು ಪತ್ತೆಯಾದ ನಂತರ, ಜೈನ ಮುನಿಗಳ ಸಲಹೆಯ ಮೇರೆಗೆ ಪೋಷಕರು ಸಂತಾರ ನೀಡಿದ್ದಾರೆ. ಧಾರ್ಮಿಕ ವಿಧಿ ಮುಗಿದ ಕೆಲವೇ ನಿಮಿಷಗಳಲ್ಲಿ ಬಾಲಕಿ ಸಾವನ್ನಪ್ಪಿದ್ದು, ಈ ಘಟನೆ ವಿವಾದಕ್ಕೆ ಕಾರಣವಾಗಿದೆ.

ಪೂರ್ತಿ ಓದಿ
11:14 PM (IST) May 03

ಸುಹಾಸ್ ಶೆಟ್ಟಿ ಕುಟುಂಬಸ್ಥರಿಗೆ ಧೈರ್ಯ ತುಂಬಿದ ಶಿವಮೊಗ್ಗ ಶಾಸಕ ಚನ್ನಬಸಪ್ಪ

ಶಿವಮೊಗ್ಗದ ಬಿಜೆಪಿ ಶಾಸಕ ಚನ್ನಬಸಪ್ಪ ಹಾಗೂ ಬಿಜೆಪಿ ಮುಖಂಡರು ದುಷ್ಕರ್ಮಿಗಳಿಂದ ಬಲಿಯಾದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರ ಕಾರಿಂಜದಲ್ಲಿರುವ ಮನೆಗೆ ಭೇಟಿ ನೀಡಿ ಮಗನನ್ನು ಕಳೆದುಕೊಂಡು ದುಃಖದಲ್ಲಿರುವ ಕುಟುಂಬಸ್ಥರಿಗೆ ಸಾಂತ್ವನ ಹೇಳುವ ಜತೆಗೆ ಧೈರ್ಯ ತುಂಬಿದರು. 

ಪೂರ್ತಿ ಓದಿ
10:45 PM (IST) May 03

ವಿದೇಶಿ ಹಣ ತೋರಿಸಲು ಭಿಕ್ಷೆ ಬೇಡುತ್ತಿದೆ ಪಾಕಿಸ್ತಾನ; ಭಾರತಕ್ಕೆ ಸರ್ವಕಾಲಿಕ ಶ್ರೇಷ್ಠ ಸ್ಥಾನ!

ಸ್ವಾತಂತ್ರ್ಯದ ನಂತರ ಭಾರತ ಮತ್ತು ಪಾಕಿಸ್ತಾನ ಬೇರೆ ಬೇರೆ ಆರ್ಥಿಕ ಹಾದಿಗಳನ್ನು ಹಿಡಿದವು. ಇಂದು ಭಾರತದ ವಿದೇಶಿ ವಿನಿಮಯ ಸಂಗ್ರಹ $688 ಶತಕೋಟಿಗಿಂತ ಹೆಚ್ಚಿದ್ದರೆ, ಪಾಕಿಸ್ತಾನದ್ದು ಕೇವಲ $15 ಶತಕೋಟಿ. ಈ ಆರ್ಥಿಕ ಅಂತರಕ್ಕೆ ಕಾರಣವೇನು?

ಪೂರ್ತಿ ಓದಿ
10:36 PM (IST) May 03

Breaking: ಪಾಕಿಸ್ತಾನಿ ರೇಂಜರ್ಸ್‌ ಯೋಧನ ವಶಕ್ಕೆ ಪಡೆದ ಬಿಎಸ್‌ಎಫ್‌!

ಭಾರತದ ಗಡಿಯಲ್ಲಿ ಬೇಹುಗಾರಿಕೆ ನಡೆಸುತ್ತಿದ್ದ ಪಾಕಿಸ್ತಾನಿ ರೇಂಜರ್ಸ್‌ ಯೋಧನನ್ನು ಭಾರತದ ಗಡಿ ಭದ್ರತಾ ಪಡೆ ವಶಕ್ಕೆ ಪಡೆದಿದೆ. ಇದು ಪಾಕಿಸ್ತಾನದ ವಶದಲ್ಲಿರುವ ಭಾರತೀಯ ಯೋಧನ ಬಿಡುಗಡೆ ವಿಳಂಬದ ಹಿನ್ನೆಲೆಯಲ್ಲಿ ನಡೆದಿದೆ.

ಪೂರ್ತಿ ಓದಿ
10:26 PM (IST) May 03

ರಸ್ತೆಯಲ್ಲಿ ನಿಲ್ಲಿಸಿದ್ದ ಬೈಕ್​ ಎಳೆದು ಕದ್ದೊಯ್ದ ಗೂಳಿ! ಕಣ್ಣುಗಳನ್ನೇ ನಂಬಲಾಗದ ವಿಡಿಯೋ ವೈರಲ್​

ರಸ್ತೆಯಲ್ಲಿ ನಿಲ್ಲಿಸಿದ್ದ ಬೈಕ್​ ಓಡಿಸಿಕೊಂಡು ಕದ್ದೊಯ್ದ ಗೂಳಿ! ಕಣ್ಣುಗಳನ್ನೇ ನಂಬಲಾಗದ ವಿಡಿಯೋ ಒಂದು ವೈರಲ್​ ಆಗಿದ್ದು, ಇದಕ್ಕೆ ಥಹರೇವಾರಿ ಕಮೆಂಟ್ಸ್​ ಸುರಿಮಳೆಯಾಗು್ತಿದೆ. 

ಪೂರ್ತಿ ಓದಿ
10:07 PM (IST) May 03

ಸರ್ಕಾರದ ರಕ್ಷಣೆಯ ನಂಬಿಕೆಯಿಂದಲೇ ಸುಹಾಸ್‌ ಹತ್ಯೆ: ಸಂಸದ ರಾಘವೇಂದ್ರ ಆರೋಪ

ಮಂಗಳೂರಿನಲ್ಲಿ ನಡೆದ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ಆರೋಪಿಗಳು ತಮಗೆ ಕಾಂಗ್ರೆಸ್‌ ಸರ್ಕಾರದಲ್ಲಿ ರಕ್ಷಣೆ ಇದೆ ಎಂಬ ಕಾರಣದಿಂದಲೇ ಕೃತ್ಯ ನಡೆಸಿದ್ದಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ ಆರೋಪಿಸಿದರು.

ಪೂರ್ತಿ ಓದಿ
10:05 PM (IST) May 03

ಸಿನಿಮಾಗೆ ಬರೋದಕ್ಕೂ ಮುನ್ನ ಪ್ಯಾದೆಯಂಗಿದ್ದ ಶಾರುಖ್ ಖಾನ್; ಫೋಟೋ ವೈರಲ್

ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಅವರ ಬಾಲಿವುಡ್‌ಗೆ ಮುನ್ನದ ಅಪರೂಪದ ಛಾಯಾಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಚಿತ್ರಗಳನ್ನು ಅವರ ಸ್ನೇಹಿತ ಅಮರ್ ತಲ್ವಾರ್ ಹಂಚಿಕೊಂಡಿದ್ದು, 1990ರ ದಶಕದಲ್ಲಿ ಮುಂಬೈಗೆ ಹೋಗುವ ಮೊದಲು ತೆಗೆದವುಗಳಾಗಿವೆ.

ಪೂರ್ತಿ ಓದಿ
10:05 PM (IST) May 03

ಸ್ಟೂಲ್‌ನಲ್ಲಿ ಸಿಕ್ಕಿಹಾಕಿಕೊಂಡ ಬಾಲಕನ ವೃಷಣ ಬೀಜ: ಆಸ್ಪತ್ರೆಗೆ ದಾಖಲು

ಸ್ಟೂಲ್‌ನಲ್ಲಿ ಕುಳಿತ ಬಾಲಕನ ವೃಷಣ ಬೀಜ ತೂತಿನಲ್ಲಿ ಸಿಕ್ಕಿಹಾಕಿಕೊಂಡಿದೆ. ಮನೆಯವರ ಪ್ರಯತ್ನ ವಿಫಲವಾದ ನಂತರ, ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪೂರ್ತಿ ಓದಿ
09:07 PM (IST) May 03

OYO; ಹೋಟೆಲ್‌ನಲ್ಲಿ ಬೆಡ್‌ ರೂಮಿಗೆ ಸೀಮಿತವಾಗಿದ್ದ ಓಯೋ, ಈಗ ಅಡುಗೆ ಮನೆಗೂ ಎಂಟ್ರಿ!

ಭಾರತದಲ್ಲಿ ಆರಂಭವಾಗಿ ಜಾಗತಿಕ ಮಟ್ಟದಲ್ಲಿ ವಿಸ್ತರಣೆಗೊಂಡ ಪ್ರಸಿದ್ಧ ಹಾಸ್ಪಿಟಾಲಿಟಿ ಕಂಪನಿ ಓಯೋ (OYO Company) ಹೊಸದಾಗಿ ಫುಡ್ ಮತ್ತು ಬೆವರೇಜ್ ಕ್ಷೇತ್ರಕ್ಕೆ ಕಾಲಿಟ್ಟಿದೆ. ತಮ್ಮ ಹೋಟೆಲ್‌ಗಳಲ್ಲಿ ಅಡುಗೆ ಮನೆ ಮತ್ತು ಕ್ವಿಕ್ ಸರ್ವಿಸ್ ರೆಸ್ಟೋರೆಂಟ್‌ಗಳನ್ನು ತೆರೆಯಲಿದೆ. 'ಕಿಚನ್ ಸರ್ವೀಸಸ್' ಮೂಲಕ ಓಯೋ ಆ್ಯಪ್ ಮತ್ತು ವೆಬ್‌ಸೈಟ್‌ನಲ್ಲಿ ಆಹಾರ ಆರ್ಡರ್ ಮಾಡಬಹುದು.

ಪೂರ್ತಿ ಓದಿ
09:06 PM (IST) May 03

ಕಳ್ಳರ ಹೊಸ ಟಾರ್ಗೆಟ್‌ ಆದ ರಸಗಲ್ಲಾ, ಮೇಕೆ, ಉಪ್ಪಿನ ಚೀಲ; ಪೊಲೀಸ್‌ ಕೇಸ್‌ ಕೂಡ ಆಗೋದಿಲ್ಲ!

ಮಧ್ಯಪ್ರದೇಶದ ಜಬಲ್ಪುರದಲ್ಲಿ ರಸಗುಲ್ಲಾ, ಉಪ್ಪು ಮತ್ತು ಮೇಕೆಗಳನ್ನು ಕದಿಯುವ ವಿಚಿತ್ರ ಕಳ್ಳತನಗಳು ನಡೆಯುತ್ತಿವೆ. 5000 ರೂ.ಗಿಂತ ಕಡಿಮೆ ಮೌಲ್ಯದ ಕಳ್ಳತನಗಳನ್ನು ಈಗ ಸಣ್ಣ ಅಪರಾಧಗಳೆಂದು ಪರಿಗಣಿಸಲಾಗುತ್ತದೆ, ಇದು ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಪೂರ್ತಿ ಓದಿ
08:44 PM (IST) May 03

ಜೆಸಿಬಿ ಮೂಲಕ ಘರ್ಜಿಸಿದ ಬೆಂಗಳೂರು ಡಿಸಿ ಜಗದೀಶ; ₹ 32 ಕೋಟಿ ಮೌಲ್ಯದ 10 ಎಕರೆ ಒತ್ತುವರಿ ಜಮೀನು ತೆರವು

ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಒತ್ತುವರಿಯಾಗಿದ್ದ ರೂ. 32.72 ಕೋಟಿ ಮೌಲ್ಯದ 10 ಎಕರೆ ಸರ್ಕಾರಿ ಜಮೀನನ್ನು ತೆರವುಗೊಳಿಸಲಾಗಿದೆ. ವಿವಿಧ ತಾಲ್ಲೂಕುಗಳಲ್ಲಿ ಗೋಮಾಳ, ಸ್ಮಶಾನ, ಕೆರೆ, ಮತ್ತು ಇತರ ಸರ್ಕಾರಿ ಜಾಗಗಳನ್ನು ಒತ್ತುವರಿಯಿಂದ ಮುಕ್ತಗೊಳಿಸಲಾಗಿದೆ.

ಪೂರ್ತಿ ಓದಿ
08:13 PM (IST) May 03

ಅದೊಂದು ಪದ ಬಳಸಿ ವಿಶ್ವಕರ್ಮಸಮಾಜದ ಸಿಟ್ಟಿಗೆ ಕಾರಣರಾದ Lakshmi Nivasa Serial; ಕ್ಷಮೆ ಕೇಳಿದ ನಿರ್ಮಾಪಕರು!

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಬಳಕೆಯಾದ ಪದ ವಿವಾದಕ್ಕೆ ಕಾರಣವಾಗಿದ್ದು, ವಿಶ್ವಕರ್ಮ ಸಮಾಜದ ಭಾವನೆಗೆ ಧಕ್ಕೆಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಧಾರಾವಾಹಿ ನಿರ್ಮಾಪಕರು ಕ್ಷಮೆ ಯಾಚಿಸಿದ್ದಾರೆ.

ಪೂರ್ತಿ ಓದಿ
08:09 PM (IST) May 03

ಬಿಬಿಎಂಪಿ ಗುತ್ತಿಗೆದಾರರಿಗೆ ಭಾರಿ ದಂಡ; ಕಾಮಗಾರಿ ಬಾಕಿ ಹಣ, ದಂಡದ ಮೂಲಕ ವಜಾ ಮಾಡುವ ಚಿಂತನೆಯೇ?

ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾಮಗಾರಿಗಳನ್ನು ಸರಿಯಾಗಿ ನಿರ್ವಹಿಸದ ಗುತ್ತಿಗೆದಾರರಿಗೆ 50 ಸಾವಿರದಿಂದ 5 ಲಕ್ಷ ರೂ.ವರೆಗೆ ದಂಡ ವಿಧಿಸಲಾಗುತ್ತಿದೆ. ಕೆಲವು ಗುತ್ತಿಗೆದಾರರು ಕಾಮಗಾರಿ ಮಾಡಿದ ಹಣವನ್ನು ದಂಡದಲ್ಲಿಯೇ ವಜಾ ಮಾಡಿಕೊಳ್ಳುವುದಕ್ಕೆ ಬಿಬಿಎಂಪಿ ಕುತಂತ್ರ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೈಟ್ ಟಾಪಿಂಗ್ ಕಾಮಗಾರಿ ವಿಳಂಬ ಮಾಡಿದ್ದಕ್ಕಾಗಿ ಎರಡು ಗುತ್ತಿಗೆದಾರರಿಗೆ 10 ಲಕ್ಷ ರೂ. ದಂಡ ವಿಧಿಸಲಾಗಿದೆ.

ಪೂರ್ತಿ ಓದಿ
07:56 PM (IST) May 03

ಕಾಂಗ್ರೆಸ್‌ನಿಂದ ತಾಲಿಬಾನ್‌ ಸರ್ಕಾರ ಬರುತ್ತೆ ಎಂಬ ಮಾತು ಸತ್ಯ: ಪ್ರತಾಪ ಸಿಂಹ

ಇತ್ತೀಚಿಗೆ ನಮ್ಮ ಕೊಡಗಿನ ವಿನಯ್ ಸೋಮಯ್ಯ. ಕಾಂಗ್ರೆಸ್ ಶಾಸಕರ ಹೆಸರು ಬರೆದು ಆತ್ಮಹತ್ಯೆ ಮಾಡಿಕೊಂಡರು. ಈಗ ಮಂಗಳೂರಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆಯಾಗಿದೆ. 

ಪೂರ್ತಿ ಓದಿ
07:54 PM (IST) May 03

ಲಷ್ಕರ್ ಭಯೋತ್ಪಾದಕರು ಇರುವ ಅನುಮಾನ, ಶ್ರೀಲಂಕಾದಲ್ಲಿ ಚೆನ್ನೈ-ಕೊಲಂಬೊ ವಿಮಾನದಲ್ಲಿ ಶೋಧ!

ಚೆನ್ನೈನಿಂದ ಬಂದ ಶ್ರೀಲಂಕಾ ಏರ್‌ಲೈನ್ಸ್ ವಿಮಾನದಲ್ಲಿ ಐದು ಶಂಕಿತ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರು ಇದ್ದಾರೆ ಎಂಬ ಮಾಹಿತಿ ಬಂದ ನಂತರ ಕೊಲಂಬೊ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆ ನಡೆಸಲಾಯಿತು. ವಚನೆಯ ಈಮೇಲ್ ಎಂದು ನಂತರ ತಿಳಿದುಬಂದಿದೆ.

ಪೂರ್ತಿ ಓದಿ
07:43 PM (IST) May 03

ನೀರು, ವಿದ್ಯುತ್ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸಿ: ಸಚಿವ ಬೋಸರಾಜು

ಕಾನೂನಾತ್ಮಕವಾಗಿ ಸರ್ಕಾರದ ವತಿಯಿಂದ ಪಡೆದ ಬಡ ಸಾರ್ವಜನಿಕರ ನಿವೇಶನಗಳಿಗೆ ಹಕ್ಕು ಪತ್ರ ಹಸ್ತಾಂತರಿಸಬೇಕೆಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವ ಎನ್.ಎಸ್. ಬೋಸರಾಜು ತಿಳಿಸಿದರು. 

ಪೂರ್ತಿ ಓದಿ
07:33 PM (IST) May 03

ಪಾಕಿಸ್ತಾನದ ಯಾವುದೇ ಮೂಲೆ ಉಡೀಸ್ ಮಾಡೋ ಸಾಮರ್ಥ್ಯ ಹೊಂದಿರುವ ಭಾರತದ 5 ಕ್ಷಿಪಣಿಗಳು

ಪಹಲ್ಗಾಮ್ ದಾಳಿ: ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ಪಾಕಿಸ್ತಾನ ಯುದ್ಧಕ್ಕೆ ಬೆದರಿಕೆ ಹಾಕುತ್ತಿದೆ. ಭಾರತದ ಬಳಿ ಇಡೀ ಪಾಕಿಸ್ತಾನದ ಯಾವುದೇ ಮೂಲೆಯನ್ನು ತಲುಪುವ ಶಕ್ತಿಯುಳ್ಳ ಕ್ಷಿಪಣಿಗಳ ಬಗ್ಗೆ ತಿಳಿದುಕೊಳ್ಳೋಣ.

ಪೂರ್ತಿ ಓದಿ
07:31 PM (IST) May 03

ಆನ್‌ಲೈನ್‌ನಲ್ಲಿ ಪಾಕಿಸ್ತಾನಿ ಯುವತಿ ಜೊತೆ ವಿವಾಹ, ಸಿಆರ್‌ಪಿಎಫ್‌ ಸೇವೆಯಿಂದಲೇ ಯೋಧ ಮುನೀರ್‌ ಅಹ್ಮದ್‌ ವಜಾ!

ಪಾಕಿಸ್ತಾನಿ ಮಹಿಳೆಯೊಂದಿಗಿನ ಮದುವೆಯನ್ನು ಮರೆಮಾಚಿದ್ದಕ್ಕಾಗಿ ಮತ್ತು ವೀಸಾ ಮುಗಿದ ನಂತರವೂ ಆಕೆಗೆ ಆಶ್ರಯ ನೀಡಿದ್ದಕ್ಕಾಗಿ ಸಿಆರ್‌ಪಿಎಫ್‌ನ 41 ಬೆಟಾಲಿಯನ್‌ನ ಸಿಟಿ/ಜಿಡಿ ಮುನೀರ್ ಅಹ್ಮದ್ ಅವರನ್ನು ವಜಾಗೊಳಿಸಲಾಗಿದೆ. ಅವರ ಕ್ರಮಗಳು ಸೇವಾ ನಡವಳಿಕೆಯ ಉಲ್ಲಂಘನೆ ಮತ್ತು ರಾಷ್ಟ್ರೀಯ ಭದ್ರತೆಗೆ ಹಾನಿಕಾರಕವೆಂದು ಪರಿಗಣಿಸಲಾಗಿದೆ.

ಪೂರ್ತಿ ಓದಿ