ಆಗ್ರಾದಲ್ಲಿ ಯೋಗಿ ಆದಿತ್ಯನಾಥ್ ಅಭಿವೃದ್ಧಿ ಉತ್ಸವದಲ್ಲಿ ಭಾಗವಹಿಸಿದರು. 635 ಕೋಟಿ ರೂ.ಗಳ ಯೋಜನೆಗಳನ್ನು ಉದ್ಘಾಟಿಸಿದರು ಮತ್ತು ಹಿಂದಿನ ಸರ್ಕಾರಗಳ ಮೇಲೆ ತೀವ್ರ ವಾಗ್ದಾಳಿ ನಡೆಸಿದರು.
ಪೂರ್ತಿ ಓದಿ- Home
- News
- State
- Karnataka News Live 26th March: ಆಗ್ರಾ ಮೊಘಲರಿಗೆ ಹೆಸರುವಾಸಿಯಲ್ಲ,ಛತ್ರಪತಿ ಶಿವಾಜಿ ಮಹಾರಾಜರಿಗೆ: ಸಿಎಂ ಯೋಗಿ
Karnataka News Live 26th March: ಆಗ್ರಾ ಮೊಘಲರಿಗೆ ಹೆಸರುವಾಸಿಯಲ್ಲ,ಛತ್ರಪತಿ ಶಿವಾಜಿ ಮಹಾರಾಜರಿಗೆ: ಸಿಎಂ ಯೋಗಿ

ಢಾಕಾ:ಬಾಂಗ್ಲಾದೇಶದಲ್ಲೀಗ ಸೇನಾ ದಂಗೆಯ ವದಂತಿಗಳು ದಟ್ಟವಾಗಿವೆ. ಹಿಂದಿನ ಪ್ರಧಾನಿ ಶೇಖ್ ಹಸೀನಾ ಸರ್ಕಾರ ಪದಚ್ಯುತಿ ಬಳಿಕ ಅಧಿಕಾರಕ್ಕೆ ಬಂದ ಮೊಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರ್ಕಾರ ದೇಶ ಮುನ್ನಡೆಸಲು ಹಾಗೂ ಹಿಂಸಾಚಾರ ನಿಯಂತ್ರಿಸಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಸೇನೆಯೇ ದೇಶವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಸೇನಾ ಮುಖ್ಯಸ್ಥ ವಾಕರ್-ಉಜ್ - ಜಮಾನ್ ಸೋಮವಾರ ತುರ್ತು ಸಭೆ ನಡೆಸಿದ್ದಾರೆ.
ಸೇನಾದಂಗೆ ಏಕೆ?
• ಮಾಜಿ ಪ್ರಧಾನಿ ಹಸೀನಾ ವದಚ್ಯುತಿ ಬಳಿಕ ದೇಶ ಮುನ್ನಡೆಸಲು, ಹಿಂಸಾ ಚಾರ ನಿಯಂತ್ರಿಸಲು ಯೂನುಸ್ ವಿಫಲ ಎಂಬ ಆರೋಪ
• ಯೂನುಸ್ ನೇತೃತ್ವದ ಮಧ್ಯಂತರ ಸರ್ಕಾರದ ವೈಫಲ್ಯ ವಿರುದ್ಧ ದೇಶದ ಹಲವು ಭಾಗಗಳಲ್ಲಿ ಪದೇ ಪದೇ ವಿದ್ಯಾರ್ಥಿಗಳ ಪ್ರತಿಭಟನೆ
• ಈ ಹಿನ್ನೆಲೆಯಲ್ಲಿ ಹಿರಿಯ ಸೇನಾ ಅಧಿಕಾರಿಗಳ ಜತೆ ಸೇನಾ ಮುಖ್ಯಸ್ಥ ವಾಕರ್-ಉಜ್-ಜಮಾನ್ ಅವರು ಸೋಮವಾರ ತುರ್ತು ಸಭೆ
ಆಗ್ರಾ ಮೊಘಲರಿಗೆ ಹೆಸರುವಾಸಿಯಲ್ಲ,ಛತ್ರಪತಿ ಶಿವಾಜಿ ಮಹಾರಾಜರಿಗೆ: ಸಿಎಂ ಯೋಗಿ
ಓಲಾ, ಉಬರ್ ರೀತಿಯಲ್ಲಿ ದೇಶದಲ್ಲಿ ಕೇಂದ್ರ ಸರ್ಕಾರದಿಂದಲೇ ಸಹಕಾರಿ ಟ್ಯಾಕ್ಸಿ ಸೇವೆ: ಅಮಿತ್ ಶಾ ಘೋಷಣೆ!
ಕೇಂದ್ರ ಸಚಿವ ಅಮಿತ್ ಶಾ ಅವರು ಶೀಘ್ರದಲ್ಲಿಯೇ ದೇಶದಲ್ಲಿ ಸಹಕಾರ ಟ್ಯಾಕ್ಸಿ ಸೇವೆ ಆರಂಭವಾಗಲಿದೆ ಎಂದು ಘೋಷಿಸಿದ್ದಾರೆ. ಓಲಾ, ಊಬರ್ ಮಾದರಿಯಲ್ಲಿ ಕಾರ್ಯನಿರ್ವಹಿಸುವ ಈ ಸೇವೆಯ ಲಾಭ ನೇರವಾಗಿ ಚಾಲಕರಿಗೆ ಸಿಗಲಿದೆ. ಅಲ್ಲದೆ, ಟ್ಯಾಕ್ಸಿ ಚಾಲಕರಿಗಾಗಿ ರಾಷ್ಟ್ರೀಯ ಮಟ್ಟದ ಸಹಕಾರಿ ಸಂಘಟನೆಯನ್ನು ಸ್ಥಾಪಿಸಲಾಗುವುದು.
ಪೂರ್ತಿ ಓದಿಶರತ್ ತಾಯಿ ಅಲ್ಲವಾ ಮಾಳವಿಕಾ: ಯಾರು ಈ ದಾಕ್ಷಾಯಿಣಿ? ಸೀರಿಯಲ್ನಲ್ಲಿ ಬಿಗ್ ಟ್ವಿಸ್ಟ್
ನಾ ನಿನ್ನ ಬಿಡಲಾರೆ ಸೀರಿಯಲ್ನಲ್ಲಿ ಮಾಳವಿಕಾ ಶರತ್ನ ಸ್ವಂತ ತಾಯಿಯಲ್ಲ ಎಂಬ ಟ್ವಿಸ್ಟ್ ಸಿಕ್ಕಿದೆ. ದೇವರ ಪ್ರಸಾದ ತಿಂದ ಶರತ್ ತಂದೆ ದಾಕ್ಷಾಯಿಣಿ ಎಂದು ಹೇಳಿದ್ದು, ಮಾಳವಿಕಾಳನ್ನು ಗೊಂದಲಕ್ಕೀಡು ಮಾಡಿದೆ. ಹಾಗಾದರೆ ದಾಕ್ಷಾಯಿಣಿಯೇ ಶರತ್ ತಾಯಿನಾ?
ಪೂರ್ತಿ ಓದಿ'ಕನ್ನಡಿಗರು ನಾಲಾಯಕ್' ಎಂದು ಜೈಲು ಸೇರಿದ್ದ ಎಂಇಎಸ್ ಪುಂಡ ಹಿಂಡಲಗಾ ಜೈಲಿನಿಂದ ಬಿಡುಗಡೆ!
ಕನ್ನಡಿಗರನ್ನು ನಿಂದಿಸಿ ಜೈಲು ಸೇರಿದ್ದ MES ಮುಖಂಡ ಶುಭಂ ಶಳಕೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಈ ಘಟನೆಗೆ ಕನ್ನಡಿಗರಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ, ಕೆಲವರು ಅಸಮಾಧಾನ ವ್ಯಕ್ತಪಡಿಸಿದರೆ, ಇನ್ನು ಕೆಲವರು ಕಾನೂನು ಪ್ರಕ್ರಿಯೆಯನ್ನು ಗೌರವಿಸುವುದಾಗಿ ತಿಳಿಸಿದ್ದಾರೆ.
ಪೂರ್ತಿ ಓದಿಆಶಾ ಕಾರ್ಯಕರ್ತೆಯರ ಗೌರವಧನ 18 ಸಾವಿರಕ್ಕೆ ಏರಿಸಿದ ಸರ್ಕಾರ, ಮುಖ್ಯಮಂತ್ರಿಗೆ ಹೂವಿನ ಮಳೆ ಸುರಿಸಿ ಸನ್ಮಾನ!
ಪುದುಚೇರಿಯ ಎನ್ಡಿಎ ಸರ್ಕಾರವು ಆಶಾ ಕಾರ್ಯಕರ್ತೆಯರ ಗೌರವಧನವನ್ನು 18000 ರೂಪಾಯಿಗೆ ಹೆಚ್ಚಿಸಿದೆ.
ಪೂರ್ತಿ ಓದಿಯತ್ನಾಳ್ ಉಚ್ಚಾಟನೆ ಬೆನ್ನಲ್ಲೆ ಸಾಲು ಸಾಲು ರಾಜೀನಾಮೆ, ವಿಜಯಪುರ ನಗರ ಮಂಡಲವೇ ಖಾಲಿ ಖಾಲಿ!
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಉಚ್ಚಾಟನೆಯನ್ನು ಖಂಡಿಸಿ ವಿಜಯಪುರ ಜಿಲ್ಲಾ ಬಿಜೆಪಿಯಲ್ಲಿ ಸಾಮೂಹಿಕ ರಾಜೀನಾಮೆ ಪರ್ವ ಆರಂಭವಾಗಿದೆ. ನಗರ ಮಂಡಲದ ಪ್ರಮುಖ ಮುಖಂಡರು ರಾಜೀನಾಮೆ ನೀಡಲು ಮುಂದಾಗಿದ್ದು, ಪಕ್ಷದ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿದೆ.
ಪೂರ್ತಿ ಓದಿದೇಶಾದ್ಯಂತ UPI ಸೇವೆ ವ್ಯತ್ಯಯ; ಗೂಗಲ್ ಪೇ, ಪೇಟಿಎಂ, ಫೋನ್ಪೇ ಯಾವುದೂ ವರ್ಕ್ ಆಗ್ತಿಲ್ಲ!
ಭಾರತದಲ್ಲಿ UPI ಸೇವೆಗಳು ಸ್ಥಗಿತಗೊಂಡಿದ್ದು, Google Pay, Paytm ಬಳಕೆದಾರರು ಪೇಮೆಂಟ್ ಫೇಲ್ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ವಹಿವಾಟುಗಳು, ನಿಧಿ ವರ್ಗಾವಣೆ ಮತ್ತು ಲಾಗಿನ್ ಮೇಲೆ ಪರಿಣಾಮ ಬೀರಿದ್ದು, ಕಾರಣ ತಿಳಿದುಬಂದಿಲ್ಲ.
ಪೂರ್ತಿ ಓದಿಅಮೆಜಾನ್ ಕಾಡಲ್ಲಿ ನಿತ್ಯಾನಂದ ಭೂ ಕಬಳಿಕೆ: ದೆಹಲಿಗಿಂತ 2.6, ಮುಂಬೈಗಿಂತ 6.5, ಬೆಂಗಳೂರಿಗಿಂತ 5.3 ಪಟ್ಟು ದೊಡ್ಡದು!
ಈ ಹಿಂದೆ ಪ್ರತ್ಯೇಕ ಕೈಲಾಸ ದೇಶವನ್ನು ಸೃಷ್ಟಿಸಿ ಜಗತ್ತನ್ನು ವಂಚಿಸಲು ಯತ್ನಿಸಿದ ಕರ್ನಾಟಕದ ರಾಮನಗರ ಜಿಲ್ಲೆಯ ಬಿಡದಿಯ ವಿವಾದಿತ ಸ್ವಯಂ ಘೋಷಿತ ನಿತ್ಯಾನಂದ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ಪೂರ್ತಿ ಓದಿಯತ್ನಾಳ್ರನ್ನು ಹಿಂದೆ ನಾನೇ ಉಚ್ಚಾಟಿಸಿದ್ದೆ, ಈಗ ಎಲ್ಲವೂ ಸರಿಯಾಗಿಲ್ಲ; ಸದಾನಂದ ಗೌಡ ಟಾಂಗ್
ಬಿಜೆಪಿ ಅಶಿಸ್ತನ್ನು ಸಹಿಸಲ್ಲ ಎಂದು ಯತ್ನಾಳ್ ಉಚ್ಚಾಟನೆಯನ್ನು ಹಿರಿಯ ನಾಯಕ ಸದಾನಂದ ಗೌಡ ಸಮರ್ಥಿಸಿದ್ದಾರೆ. ಇದೇ ವೇಳೆ ವಿಜಯೇಂದ್ರ ಬಣಕ್ಕೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ಒಂದೇ ಮಾತಿನಲ್ಲಿ ಎರಡೂ ಬಣಕ್ಕೂ ಗೌಡರು ಕೊಟ್ಟ ಟಾಂಗ್ ಏನು?
ಪೂರ್ತಿ ಓದಿಏರ್ಪೋರ್ಟ್ ಶೌಚಾಲಯದ ಡಸ್ಟ್ಬಿನ್ನಲ್ಲಿ ನವಜಾತ ಶಿಶು ಮೃತದೇಹ ಪತ್ತೆ, ಪ್ರಯಾಣಿಕರ ಹುಡುಕಾಟಕ್ಕೆ ಮುಂದಾದ ಪೊಲೀಸ್!
ಏರ್ಪೋರ್ಟ್ ಭದ್ರತಾ ವಿಭಾಗವು ತಕ್ಷಣವೇ ಸಹಾರ್ ರಸ್ತೆ ಪೊಲೀಸರಿಗೆ ಮಾಹಿತಿ ನೀಡಿದೆ. ಅವರು ಸ್ಥಳಕ್ಕೆ ಬಂದು ಮಗುವನ್ನು ಹೊರತೆಗೆದು ಹತ್ತಿರದ ಖಾಸಗಿ ಆಸ್ಪತ್ರೆಗೆ ಸಾಗಿಸಿದರೂ, ಮಗು ಮೃತಪಟ್ಟಿತ್ತು.
ಪೂರ್ತಿ ಓದಿಇಪಿಎಫ್ಓ ಅಲ್ಲಿ ಬ್ಯಾಂಕ್ ಅಕೌಂಟ್ಗಳನ್ನು ಸೇರಿಸೋದು, ಬದಲಾಯಿಸೋದು ಹೇಗೆ?
ಯುಎಎನ್ ಅನ್ನು ಖಾತೆಗೆ ಲಿಂಕ್ ಮಾಡುವುದು ಹೇಗೆ? ಪಿಎಫ್ ಬ್ಯಾಲೆನ್ಸ್ ಮೊತ್ತವನ್ನು ಬೇಗನೆ ತಿಳಿಯಲು ಮತ್ತು ಹಣವನ್ನು ಸುಲಭವಾಗಿ ಹಿಂಪಡೆಯಲು ಯುಎಎನ್ ಅನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಬಹುದು.
ಪೂರ್ತಿ ಓದಿಮೊದಲ ಬಾರಿ ಕನ್ನಡಿ ಇಟ್ಟಾಗ ಪ್ರಾಣಿಗಳು ಮಾಡಿದ್ದೇನು? ಕನ್ನಡಿ ತೆಗೆದಾಗ ಆಗಿದ್ದೇ ಬೇರೆ! ಕುತೂಹಲದ ವಿಡಿಯೊ ವೈರಲ್
ಪ್ರಸಿದ್ಧ ಛಾಯಾಚಿತ್ರಕಾರರೊಬ್ಬರು ಕಾಡಿನಲ್ಲಿ ಕನ್ನಡಿಯನ್ನು ಅಳವಡಿಸಿ ವಿವಿಧ ವನ್ಯಮೃಗಗಳ ರಿಯಾಕ್ಷನ್ ಸೆರೆ ಹಿಡಿದಿದ್ದಾರೆ. ಮೊದಲ ಬಾರಿ ಕನ್ನಡಿ ನೋಡಿದಾಗ ಪ್ರಾಣಿಗಳು ಮಾಡಿದ್ದೇನು? ಕನ್ನಡಿ ತೆಗೆದಾಗ ಆಗಿದ್ದೇನು?
'ಬಿಜೆಪಿ ಆ ಮುತ್ತುರತ್ನಗಳನ್ನ..' ಯತ್ನಾಳ್ ಉಚ್ಚಾಟನೆ ಬಗ್ಗೆ ಡಿಕೆ ಶಿವಕುಮಾರ ಫಸ್ಟ್ ರಿಯಾಕ್ಷನ್!
ಯತ್ನಾಳ್ ಅವರ ಉಚ್ಚಾಟನೆಯ ಬಗ್ಗೆ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಇದು ಬಿಜೆಪಿಯ ಆಂತರಿಕ ವಿಚಾರ ಎಂದಿದ್ದಾರೆ. ಈ ಘಟನೆಯು ಕರ್ನಾಟಕ ಬಿಜೆಪಿಯಲ್ಲಿ ಬಿಕ್ಕಟ್ಟನ್ನು ತಂದಿದೆ.
ಪೂರ್ತಿ ಓದಿಈದ್ ಅಲ್ ಫಿತ್ರ್ಗಾಗಿ 300 ಉತ್ಪನ್ನಗಳ ಬೆಲೆ ಇಳಿಸಿದ ಯೂನಿಯನ್ ಕೋಪ್!
ಯೂನಿಯನ್ ಕೋಪ್ ಹೈಪರ್ಮಾರ್ಕೆಟ್ 3000 ಉತ್ಪನ್ನಗಳಿಗೆ 60% ವರೆಗೆ ರಿಯಾಯಿತಿ ಘೋಷಿಸಿದೆ.
ಪೂರ್ತಿ ಓದಿಲೋಕಸಭೆಯಲ್ಲಿ ಸೋದರಿ ಪ್ರಿಯಾಂಕಾ ಕೆನ್ನೆ ಗಿಂಡಿದ ರಾಹುಲ್ ಗಾಂಧಿ, ಶಿಸ್ತಿನ ಪಾಠ ಮಾಡಿದ ಸ್ಪೀಕರ್ ಓಂ ಬಿರ್ಲಾ!
ರಾಹುಲ್ ಗಾಂಧಿ ಅವರ ಹಳೆಯ ವಿಡಿಯೋವೊಂದು ವಿವಾದಕ್ಕೆ ಕಾರಣವಾಗಿದೆ. ಸದನದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಕೆನ್ನೆ ಗಿಂಡಿದ್ದಕ್ಕೆ ಓಂ ಬಿರ್ಲಾ ಅವರು ರಾಹುಲ್ ಗಾಂಧಿಗೆ ಶಿಸ್ತಿನ ಪಾಠ ಮಾಡಿದ್ದಾರೆ.
ಪೂರ್ತಿ ಓದಿಬೇಸಿಗೆಯಲ್ಲಿ ಹಾವು ಕಡಿತ ಹೆಚ್ಚಳ; ಹಾವು ಕಚ್ಚಿದಾಗ ಕೈಗೊಳ್ಳುವ ಮುಂಜಾಗ್ರತೆ ಮಾರ್ಗಸೂಚಿ ಬಿಡುಗಡೆ!
ಬೇಸಿಗೆಯಲ್ಲಿ ಹಾವು ಕಚ್ಚುವ ಸಾಧ್ಯತೆ ಹೆಚ್ಚಿದ್ದು, ಭಾರತ್ ಸೀರಮ್ ಸಂಸ್ಥೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಹಾವು ಕಡಿತದಿಂದ ಆಗುವ ಅಪಾಯಗಳು ಹಾಗೂ ತಕ್ಷಣ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಗಿದೆ.
ಪೂರ್ತಿ ಓದಿಬಿಜೆಪಿಯಿಂದ ಯತ್ನಾಳ್ ಉಚ್ಚಾಟನೆ ಬೆನ್ನಲ್ಲೆ ಬೆಂಬಲಿಗರ ರಾಜೀನಾಮೆ ಪರ್ವ!
BJP expels MLA Basanagouda Patil Yatnal: ಕರ್ನಾಟಕ ಬಿಜೆಪಿ ನಾಯಕರಿಗೆ ಹೈಕಮಾಂಡ್ ಬಿಗ್ ಶಾಕ್ ನೀಡಿದ್ದು, ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಛಾಟಿಸಿದೆ. ಇದರ ಬೆನ್ನಲ್ಲೇ ವಿಜಯಪುರದಲ್ಲಿ ಬೆಂಬಲಿಗರು ರಾಜೀನಾಮೆ ನೀಡುತ್ತಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೂರ್ತಿ ಓದಿಸಿಎಂ ಯೋಗಿ ವಿಮಾನದಲ್ಲಿ ತಾಂತ್ರಿಕ ದೋಷದಿಂದ ಎದುರಾದ ಆತಂಕ, ಖೇರಿಯಾದಲ್ಲಿ ತುರ್ತು ಭೂಸ್ಪರ್ಶ
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಎದುರಾಗಿದೆ. ಆಗ್ರಾದಿಂದ ಟೇಕ್ ಆಫ್ ಆದ ಸಿಎಂ ಯೋಗಿ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ.
ಪೂರ್ತಿ ಓದಿ'ಸತ್ಯವಂತರಿಗಿದು ಕಾಲವಲ್ಲ..' ಉಚ್ಛಾಟನೆ ಬೆನ್ನಲ್ಲೇ ಪುರಂದರದಾಸರ ಕೀರ್ತನೆ ಬರೆದು ಕುಟುಕಿದ ಯತ್ನಾಳ್!
ಬಿಜೆಪಿಯಿಂದ ಉಚ್ಛಾಟನೆಯಾದ ಬಳಿಕ ಬಸನಗೌಡ ಪಾಟೀಲ್ ಯತ್ನಾಳ್ ಟ್ವೀಟ್ ಮೂಲಕ ಬಿಜೆಪಿ ನಾಯಕರನ್ನು ಕುಟುಕಿದ್ದಾರೆ. ಕುಟುಂಬ ರಾಜಕಾರಣ, ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಕ್ಕೆ ನನ್ನನ್ನು ಉಚ್ಛಾಟಿಸಿದ್ದಾರೆ ಎಂದು ಹೇಳಿದ್ದಾರೆ.
ಪೂರ್ತಿ ಓದಿಛೇ..ಛೇ... ಗೋಣಿಚೀಲನ ಕಾಲು ಒರೆಸಲು ಬಳಸ್ತಿದ್ದೀರಾ? ಈ ವಿಡಿಯೋ ನೋಡಿದ್ರೆ ಹೊಟ್ಟೆ ಉರಿದುಕೊಳ್ತೀರಾ!
ಗೋಣಿಚೀಲವನ್ನು ಬಳಸಿ ಬೀಸಾಕುವುದು, ಕಾಲು ಒರೆಸಲು ಬಳಸಿಕೊಳ್ಳುವುದು ಸಾಮಾನ್ಯ. ಆದರೆ ಇಲ್ಲೊಂದು ವೈರಲ್ ವಿಡಿಯೋ ನೋಡಿದ್ರೆ ನೀವು ಹೊಟ್ಟೆ ಉರಿದುಕೊಳ್ಳುವುದು ಗ್ಯಾರೆಂಟಿ. ಅಂಥದ್ದೇನಿದೆ ನೋಡಿ