08:17 AM (IST) Feb 18

Karnataka News Live 18 February 2026 ರಣಜಿ ಟ್ರೋಫಿ - ಕರ್ನಾಟಕ 736 ರನ್, ಮೂರನೇ ಗರಿಷ್ಠ ಸ್ಕೋರ್! ಫೈನಲ್ ಹೊಸ್ತಿಲಲ್ಲಿ ರಾಜ್ಯ ತಂಡ

ರಣಜಿ ಟ್ರೋಫಿ ಸೆಮಿಫೈನಲ್‌ನಲ್ಲಿ ಉತ್ತರಾಖಂಡ ವಿರುದ್ಧ ಕರ್ನಾಟಕವು 736 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದ್ದು, ಇದು ರಣಜಿ ಇತಿಹಾಸದಲ್ಲಿ ತಂಡದ 3ನೇ ಗರಿಷ್ಠ ಸ್ಕೋರ್ ಆಗಿದೆ. ಕರ್ನಾಟಕವು ಮೊದಲ ಇನ್ನಿಂಗ್ಸ್ ಮುನ್ನಡೆಯೊಂದಿಗೆ ಫೈನಲ್‌ಗೆ ಪ್ರವೇಶಿಸುವ ಸನಿಹದಲ್ಲಿದೆ.

Read Full Story
08:07 AM (IST) Feb 18

Karnataka News Live 18 February 2026 Bengaluru - ಜಂಟಿಯಾಗಿ ಎಐ ಸೇವೆಗಾಗಿ ಮೈತ್ರಿ ಮಾಡಿಕೊಂಡ ಆ್ಯಂಥ್ರೋಪಿಕ್‌-ಇನ್ಫೋಸಿಸ್‌

ಐಟಿ ದೈತ್ಯ ಇನ್ಫೋಸಿಸ್ ಮತ್ತು ಎಐ ಕಂಪನಿ ಆ್ಯಂಥ್ರೋಪಿಕ್‌ ಜಂಟಿಯಾಗಿ ಎಐ ಸೇವೆಗಳನ್ನು ಒದಗಿಸಲು ಮೈತ್ರಿ ಮಾಡಿಕೊಂಡಿವೆ. ಈ ಒಪ್ಪಂದದ ಭಾಗವಾಗಿ, ಆ್ಯಂಥ್ರೋಪಿಕ್‌ ತನ್ನ ಮೊದಲ ಭಾರತೀಯ ಕಚೇರಿಯನ್ನು ಬೆಂಗಳೂರಿನಲ್ಲಿ ತೆರೆದಿದೆ .

Read Full Story
08:00 AM (IST) Feb 18

Karnataka News Live 18 February 2026 ಆಡಳಿತದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ರಾಂತಿ - ಇನ್ನು ಸರ್ಕಾರಕ್ಕೆ ದೂರು ನೀಡಿದರೆ ಕ್ಷಣಾರ್ಧದಲ್ಲಿ ಪ್ರತಿಕ್ರಿಯೆ!

ಕರ್ನಾಟಕ ಸರ್ಕಾರವು ಸಾರ್ವಜನಿಕರ ಕುಂದುಕೊರತೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಕೃತಕ ಬುದ್ಧಿಮತ್ತೆ (AI) ಆಧಾರಿತ 'ಐಪಿಜಿಆರ್‌ಎಸ್‌ 2.0' ತಂತ್ರಾಂಶವನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ.

Read Full Story
07:46 AM (IST) Feb 18

Karnataka News Live 18 February 2026 Santosh Lad Intervie - ಸಂತೋಷ್‌ ಲಾಡ್‌ ಸಂದರ್ಶನ - ಶ್ರಮಯೋಗಿಗಳ ಕಲ್ಯಾಣಕ್ಕೆ ಸರ್ಕಾರದ ಆದ್ಯತೆ

ರಾಜ್ಯ ಸರ್ಕಾರದ 1000 ದಿನಗಳ ಆಡಳಿತ ಪೂರ್ಣಗೊಂಡಿದ್ದು, ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಅವರು ಕಾರ್ಮಿಕ ಇಲಾಖೆಯ ಸಾಧನೆಗಳನ್ನು ಹಂಚಿಕೊಂಡಿದ್ದಾರೆ. ಗಿಗ್ ಕಾರ್ಮಿಕರು, ಮಹಿಳೆಯರು ಸೇರಿದಂತೆ ಎಲ್ಲಾ ವರ್ಗದ ಶ್ರಮಿಕರಿಗಾಗಿ ಜಾರಿಗೆ ತಂದಿರುವ ಯೋಜನೆಗಳು ಮತ್ತು ಭವಿಷ್ಯದ ಗುರಿಗಳ ಬಗ್ಗೆ ವಿವರಿಸಿದ್ದಾರೆ.

Read Full Story
07:45 AM (IST) Feb 18

Karnataka News Live 18 February 2026 ಉದ್ಯಮಿ ಸಿ.ಜೆ.ರಾಯ್ ಕೇಸ್; ಕಾರಣ ಮಾತ್ರ ಇನ್ನೂ ನಿಗೂಢ - ಹಿರಿಯ ಅಧಿಕಾರಿಗಳು ಹೇಳಿದ್ದೇನು?

ಉದ್ಯಮಿ ಸಿ.ಜೆ.ರಾಯ್ ಆತ್ಮ*ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಶೀಘ್ರದಲ್ಲೇ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಲಿದೆ. ಆರ್ಥಿಕ, ಕೌಟುಂಬಿಕ ಸೇರಿದಂತೆ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಿದರೂ, ಆತ್ಮ*ಹತ್ಯೆಗೆ ನಿಖರ ಕಾರಣ ಇನ್ನೂ ನಿಗೂಢವಾಗಿಯೇ ಉಳಿದಿದೆ.

Read Full Story
07:27 AM (IST) Feb 18

Karnataka News Live 18 February 2026 ಗೋಡೆ ಮೇಲೆ ಮೂತ್ರ ವಿಸರ್ಜನೆ ಪ್ರಶ್ನಿಸಿದ ವಕೀಲನ ಮೇಲೆ ಹಲ್ಲೆ - ಪೊಲೀಸ್‌ ವಶಕ್ಕೆ

ಬೆಂಗಳೂರಿನಲ್ಲಿ ಗೋಡೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ವಕೀಲರೊಬ್ಬರ ಮೇಲೆ ಹೆಡ್‌ ಕಾನ್‌ಸ್ಟೇಬಲ್‌ ಸೇರಿದಂತೆ ಮೂವರು ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಕಬ್ಬನ್‌ ಪಾರ್ಕ್‌ ಪೊಲೀಸರು ಕೋರಮಂಗಲ ಠಾಣೆಯ ಹೆಡ್‌ ಕಾನ್‌ಸ್ಟೇಬಲ್‌ ಸತೀಶ್‌ನನ್ನು ವಶಕ್ಕೆ ಪಡೆದಿದ್ದಾರೆ.

Read Full Story
07:09 AM (IST) Feb 18

Karnataka News Live 18 February 2026 ಮನೆ ಕಟ್ಟಲು ಪರವಾನಗಿ ನೀಡದ ಪಿಡಿಒ; ಪೆಟ್ರೋಲ್ ಸುರಿದುಕೊಂಡು ಸಾಯಲು ಯತ್ನ!

ಹರಪನಹಳ್ಳಿ ತಾಲೂಕಿನ ಕಡಬಗೆರೆ ಗ್ರಾಮ ಪಂಚಾಯಿತಿಯಲ್ಲಿ, ಮನೆ ನಿರ್ಮಾಣಕ್ಕೆ ಇ-ಸ್ವತ್ತು ಹಾಗೂ ಪರವಾನಗಿ ನೀಡದ ಪಿಡಿಒ ಕ್ರಮಕ್ಕೆ ಬೇಸತ್ತು ವ್ಯಕ್ತಿಯೊಬ್ಬರು ಕಚೇರಿಯಲ್ಲೇ ಪೆಟ್ರೋಲ್ ಸುರಿದುಕೊಂಡು ಆತ್ಮ೧ಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. 

Read Full Story
07:06 AM (IST) Feb 18

Karnataka News Live 18 February 2026 ಹಾಸನ ಸೈಟ್ ವಿವಾದ - ಕಾನೂನು ಹೋರಾಟ ಮುಂದುವರಿಸಿದ ನಿರ್ಮಾಪಕಿ ಪುಷ್ಪಾ ಅರುಣ್‌ಕುಮಾರ್

ನಿರ್ಮಾಪಕಿ ಪುಷ್ಪ ಮತ್ತು ದೇವರಾಜ್ ನಡುವಿನ ವಿವಾದ ತೀವ್ರಗೊಂಡಿದೆ. ಕೋರ್ಟ್ ಆದೇಶದ ಮೇಲೆ ಕಾಂಪೌಂಡ್ ತೆರವುಗೊಳಿಸಲಾಗಿದೆ ಎನ್ನಲಾಗಿದ್ದು, ಅದೇ ಆದೇಶಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ಪಡೆದಿರುವುದಾಗಿ ಪುಷ್ಪ ಅವರು ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿ ಕಾನೂನು ಹೋರಾಟ ಮುಂದುವರೆಸಿದ್ದಾರೆ.

Read Full Story